ಬೆಂಗಳೂರು: ರಾಹುಲ್ ದ್ರಾವಿಡ್ ಎಂದರೆ ಶಾಂತಮೂರ್ತಿ ಎಂದೇ ಪರಿಚಿತರು. ಅವರು ಮೈದಾನದಲ್ಲೂ ಅಷ್ಟೇ, ಹೊರಗಡೆಯೂ ಅಷ್ಟೇ, ಯಾವುದಕ್ಕೂ ಅತಿರೇಕವಾಗಿ ಪ್ರತಿಕ್ರಿಯಿಸಿದವರಲ್ಲ. ಹಾಗೆಯೇ ಆಟದಲ್ಲೂ ಅವರ ಶಾಂತ ಸ್ವಭಾವ ಎದ್ದು ಕಾಣುತ್ತಿತ್ತು.