ಖಾಸಗಿ ಕಾರ್ಯಕ್ರಮದಲ್ಲಿ ದೆಹಲಿಗೆ ತೆರಳಬೇಕಾಗಿದ್ದ ಅಮಿತ್ ಶಾ ಮತ್ತೆ ಖಾಸಗಿ ಹೋಟೆಲ್ ಗೆ ಹಿಂತುರುಗಿ ಸಿಂ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದು ಭಾರಿ ಕುತುಹಲ ಮೂಡಿಸಿತ್ತು. ಅಮಿತ್ ಶಾ ಜೊತೆ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೆಂದ್ರ ಪ್ರಧಾನ್ ಮತ್ತೆ ದೆಹಲಿ ಪ್ರಯಾಣ ಮೊಟುಕುಗೊಳಿಸಿ ಸಿಎಂ ಬೊಮ್ಮಾಯಿ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ನಾಲ್ಕು ಹಂತದಲ್ಲಿ ಪ್ರವಾಸ ಮಾಡಲಿರೋ ಸಿಎಂ ಬಳಿ ಪ್ರವಾಸ ವಿವರ ಪಡೆದು,ರ್ಯಾಲಿಗಿಂತ ಹೆಚ್ಚು ರೋಡ್ ಶೋ ನಡೆಸುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರಂತೆ.