ಬಿಜೆಪಿಗೆ ಇದೀಗ ಕಮಲ ಪಾಳೆಯದ ಕೆಲವು ಶಾಸಕರೇ ಬಂಡಾಯದ ಹಾದಿ ತುಳಿದಿರುವುದು ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. ಒಂದೆಡೆ ಕೊರೊನಾ ವೈರಸ್ ತಡೆ ವಿರುದ್ಧ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಕಾರ್ಯಾಚರಣೆ ಮುಂದುವರಿಸಿದ್ದರೆ, ಇನ್ನೊಂದೆಡೆ ಸ್ವಪಕ್ಷದಲ್ಲೇ ಒಂದಷ್ಟು ಶಾಸಕರು ಗುಪ್ತ ಸಭೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ.ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಬಹುತೇಕ ಶಾಸಕರು ಸಭೆಯಲ್ಲಿ ಇದ್ದರು. ಕ್ಷೇತ್ರದ ಸಮಸ್ಯೆ, ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಮನ್ನಣೆ ನೀಡುತ್ತಿಲ್ಲ ಎಂದು