ಜೈಪುರ|
pavithra|
Last Modified ಬುಧವಾರ, 13 ಜನವರಿ 2021 (09:59 IST)
ಜೈಪುರ : ನಾಯಿಯ ವಿಚಾರಕ್ಕೆ ಜಗಳವಾಡಿದ ವಿಧವೆಯಾದ ಸರ್ಕಾರಿ ಶಾಲಾ ಶಿಕ್ಷಕಿಯನ್ನು ನೆರೆಮನೆಯಾತ ಕೊಲೆ ಮಾಡಿದ ಘಟನೆ ಜೈಪುರದಲ್ಲಿ ನಡೆದಿದೆ.
ನೆರೆಮನೆಯಾತ ತನ್ನ ಮನೆಯ ಮುಂದೆ ನಾಯಿಯನ್ನು ಕರೆದುಕೊಂಡು ಹೋಗುತ್ತಿದದ್ದಕ್ಕೆ ಶಿಕ್ಷಕಿ ಆತನ ಬಳಿ ಜಗಳವಾಡಿದ್ದಳು. ಇದರಿಂದ ಕೋಪಗೊಂಡಿದ್ದ ಆತ ಮನೆಯಲ್ಲಿ ಒಬ್ಬಂಟಿಯಾಗಿದ್ದ ಶಿಕ್ಷಕಿಯ ಕತ್ತು ಹಿಸುಕಿ ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ Aರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.