ಅಯೋಧ್ಯೆ :ಇಸ್ಕಾನ್, ಮಹಾವೀರ್ ಟೆಂಪಲ್ ಟ್ರಸ್ಟ್ ಹಾಗೂ ನಿಹಾಂಗ್ ಸಿಖ್ಸ್ ಸಂಸ್ಥೆಗಳ ಸಹಯೋಗದಲ್ಲಿ ಈ ಉಚಿತ ಭೋಜನ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದು ದಿನದ 24 ತಾಸು ಎಡೆಬಿಡದೇ ಕಾರ್ಯ ನಿರ್ವಹಿಸಲಿದೆ. ರಾಮಮಂದಿರ ಉದ್ಘಾಟನೆಗೊಂಡ ದಿನದಿಂದ ದಿನೇದಿನೇ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಸಾಗಿದೆ. ಅಯೋಧ್ಯೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿಂಡಿ ತೀರ್ಥಗಳ ಬೆಲೆ ಗಗನಕ್ಕೆ ಮುಟ್ಟಿದೆ.