<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ದಸರಾ ಲೇಖನಗಳು]]></title>
    <link>https://kannada.webdunia.com/dasara-article</link>
    <description><![CDATA[ವೆಬ್‌ದುನಿಯಾ ದಸರಾ-ನವರಾತ್ರಿ ವಿಶೇಷ, Dasara Special, ಮೈಸೂರು ದಸರಾ, Mysore Dasara, Karnataka Dasara, ನಾಡ ಹಬ್ಬ, ಜಂಬೂ ಸವಾರಿ, ಚಾಮುಂಡೇಶ್ವರಿ, ಭುವನೇಶ್ವರಿ]]></description>
    <copyright>Copyright webdunia.com</copyright>
    <lastBuildDate>Sun, 14 Jun 2026 15:57:42 +0530</lastBuildDate>
    <language>en-us</language>
    <image>
      <title>ದಸರಾ ಲೇಖನಗಳು</title>
      <url>https://kannada.webdunia.com/dasara-article</url>
      <link>https://kannada.webdunia.com/dasara-article</link>
    </image>
    <atom:link href="https://kannada.webdunia.com/rss/dasara-article-1073701.rss" rel="self" type="application/rss+xml"/>
    <item>
      <title><![CDATA[ನೀವು ದೀಪಾವಳಿ ಆಚರಣೆಗೆ ಸಿದ್ಧರಾದಿರಾ?]]></title>
      <link>https://kannada.webdunia.com/article/dasara-article/do-you-ready-for-deepavali-festival-116092900026_1.html</link>
      <guid>https://kannada.webdunia.com/article/dasara-article/do-you-ready-for-deepavali-festival-116092900026_1.html</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1413776616-9494.jpg</image>
      <description><![CDATA[ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ಸಾಲಂಕೃತವಾಗಿ ಬೆಳಗುವ ದೀಪಗಳು ಆಬಾಲ ವೃದ್ಧರಿಗೂ ಮುದ ನೀಡುವ ದೀಪಾವಳಿ ಹಬ್ಬಗಳಲ್ಲೆಲ್ಲಾ ಅತ್ಯಂತ ಜನಪ್ರಿಯ ಮತ್ತು ಎಲ್ಲರೂ ಆಚರಿಸುವ ದೊಡ್ಡ ಹಬ್ಬ. ಭವಿಷ್ಯೋತ್ತರ ಪುರಾಣ ಕಾಲದಲ್ಲಿ ಈ ಹಬ್ಬ ಪ್ರಸಿದ್ಧವಾಗಿತ್ತು.]]></description>
      <content:encoded><![CDATA[<p>
	<strong>ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ಸಾಲಂಕೃತವಾಗಿ ಬೆಳಗುವ ದೀಪಗಳು ಆಬಾಲ ವೃದ್ಧರಿಗೂ ಮುದ ನೀಡುವ ದೀಪಾವಳಿ ಹಬ್ಬಗಳಲ್ಲೆಲ್ಲಾ ಅತ್ಯಂತ ಜನಪ್ರಿಯ ಮತ್ತು ಎಲ್ಲರೂ ಆಚರಿಸುವ ದೊಡ್ಡ ಹಬ್ಬ. ಭವಿಷ್ಯೋತ್ತರ ಪುರಾಣ ಕಾಲದಲ್ಲಿ ಈ ಹಬ್ಬ ಪ್ರಸಿದ್ಧವಾಗಿತ್ತು.</strong></p>
<p>
	<p style="float: left;width:100%;text-align:center;">
		<img align="center" alt="" class="imgCont" height="227" src="http://media.webdunia.com/_media/hi/img/hp/home-page/2014-10/20/full/1413776616-9494.jpg" style="border: 1px solid #DDD; margin-right: 0px; float: none; z-index: 0;" title="" width="621" /></p>
</p>
<p>
	<strong>ನರಕ ಚತುರ್ದಶಿ </strong></p>
<p>
	 </p>
<p>
	ದೀಪಾವಳಿ ಮೂರು ದಿನಗಳ ಹಬ್ಬವಾದರೂ, ದ್ವಿತೀಯ ತಿಥಿಯೂ ಸೇರಿದಂತೆ ಅದರ ಅವಧಿ ನಾಲ್ಕು ದಿನ ಆಗುತ್ತದೆ. ಇದೇ ಅಕ್ಟೋಬರ್ 25 ರಂದು ಹಬ್ಬದ ಪ್ರಾರಂಭ. ನರಕ ಚತುರ್ದಶಿ ಎನಿಸಿರುವ ಆಶ್ವಯುಜ ಕೃಷ್ಣ ಚತುರ್ದಶಿ ಈ ಹಬ್ಬದ ಮೊದಲನೆಯ ದಿನ.</p>
<p>
	 </p>
<p>
	ಆ ದಿನ ಸ್ವಾತಿ ನಕ್ಷತ್ರವಿದ್ದರೆ ಶುಭ. ಮೂಲತಃ ಮೃತ್ಯು ದೇವತೆಯೂ, ನರಕಾಧಿಪತಿಯೂ ಆದ ಯಮನನ್ನು ಪೂಜಿಸಿ, ನರಕದ ಶಿಕ್ಷೆಯಿಂದ ಪಾರುಮಾಡು ಎಂದು ಬೇಡುವ ದಿನವಾಗಿತ್ತು. ಆನಂತರ ಅದು ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ್ದರಿಂದ ವಿಜಯೋತ್ಸವದ ದಿನವಾಯಿತು. ಆ ದಿನ ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನ ಮಾಡಿ ವ್ರತಿಯು ತನ್ನ ಪಾಪಗಳ ನಾಶಕ್ಕಾಗಿ ಪ್ರಾರ್ಥಿಸಿ ಯಮದೇವನಿಗೆ ತರ್ಪಣವನ್ನರ್ಪಿಸಿ, ನರಕಾಸುರನಿಗೆ ಒಂದು ದೀಪವನ್ನು ಹಚ್ಚಬೇಕು. ಸಂಜೆ ಮನೆಯ ಎಲ್ಲಾ ಭಾಗಗಳಿಗೂ ಬೆಳಕಾಗುವಂತೆ ಸಾಲು ದೀಪಗಳಿಂದ ಅಲಂಕರಿಸಬೇಕು.</p>
<p>
	 </p>
<p>
	<strong>ಲಕ್ಷ್ಮೀ ಪೂಜೆ </strong></p>
<p>
	 </p>
<p>
	ಮಾರನೆ ದಿನ ಅಮಾವಾಸ್ಯೆಯನ್ನು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲಾಗಿದೆ. ಅಭ್ಯಂಜನ, ಪಿತೃಗಳಿಗೆ ತರ್ಪಣ, ಅನ್ನಸಂತರ್ಪಣೆ, ಹಗಲು ಉಪವಾಸ ಇವು ಮುಖ್ಯ ಕಾರ್ಯಗಳು. ಹಿಂದಿನ ರಾತ್ರಿಯಂತೆಯೇ ಈ ದಿನದ ರಾತ್ರಿಯಲ್ಲೂ ದೀಪಾಲಂಕರಣ ಮಾಡಬೇಕು. ವಿಶೇಷವಾಗಿ ಲಕ್ಷ್ಮೀ ಪೂಜೆ ಮಾಡುವ ದಿನ ಇದು. ವರ್ತಕರಿಗೆ ಪವಿತ್ರವಾದ ದಿನ. ತಮ್ಮ ಲೆಕ್ಕ - ಪುಸ್ತಕಗಳನ್ನು ಪೂಜಿಸಿ, ಹೊಸ ಲೆಕ್ಕಗಳನ್ನು ಪ್ರಾರಂಭಿಸುವರು. ಲಕ್ಷ್ಮೀ ಪೂಜೆ ಮಾಡಲು ಪ್ರದೋಷ ಕಾಲ ಅತ್ಯಂತ ಶುಭ, ಅಂದರೆ ಸೂರ್ಯಾಸ್ತವಾಗಿ 1 ಗಂಟೆ 36 ನಿಮಿಷಗಳವರೆಗೂ ಅಮಾವಾಸ್ಯೆ ಮುಂದುವರಿದಿರಬೇಕು. ಈ ವೇಳೆ ಲಕ್ಷ್ಮೀ ಪೂಜೆಗೆ ಅತ್ಯಂತ ಶುಭ.</p>
<p>
	 </p>
<p>
	<strong>ಬಲೀಂದ್ರ, ಗೋ ಪೂಜೆ </strong></p>
<p>
	 </p>
<p>
	ಮರುದಿನ ಬಲಿಪಾಡ್ಯಮಿ ಎಂದು ಕರೆಯಲ್ಪಡುವ ಕಾರ್ತಿಕ ಶುಕ್ಲ ಪಾಡ್ಯಮಿ. ಹಿಂದೂ ಪಂಚಾಂಗಗಳಲ್ಲಿ ಅತ್ಯಂತ ಪವಿತ್ರವೆನಿಸಿರುವ ಮೂರೂವರೆ ಮುಹೂರ್ತಗಳಲ್ಲಿ ಅರ್ಧ ದಿವಸದ ಮುಹೂರ್ತ. ಪ್ರಬಲನಾದ ಅಸುರ ಚಕ್ರವರ್ತಿ ಬಲಿಯನ್ನು, ವಿಷ್ಣುವು ವಾಮನಾವತಾರವನ್ನೆತ್ತಿ ಪಾತಾಳಕ್ಕೆ ತುಳಿದದ್ದು ಈ ದಿನದ ಕಥೆ.</p>
<p>
	 </p>
<p>
	ತ್ರೇತಾಯುಗದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಿದ್ದು ಇದೇ ದಿನ. ದ್ವಾಪರಾಯುಗದಲ್ಲಿ ಪಾಂಡವರು ಅಜ್ಞಾತವಾಸ ಮುಗಿಸಿ, ಕೌರವರ ಕಣ್ಣಿಗೆ ಕಾಣಿಸಿಕೊಂಡಿದ್ದು ಈ ದಿನವೇ. ಈ ದಿನ ನೀಡುವ ದಾನ ಅಕ್ಷಯ ಫಲಪ್ರದ ಎನಿಸಿದೆ. ಈ ದಿನವೇ ಪಾರ್ವತಿಯು, ಶಿವನೊಂದಿಗೆ ಪಗಡೆಯಾಟವಾಡಿ, ಶಿವನನ್ನು ಸೋಲಿಸಿದ ದಿನವಾಗಿದೆ.</p>
<p>
	 </p>
<p>
	ಬಲಿಪಾಡ್ಯಮಿ ದಿನ ಹಸು, ಎತ್ತುಗಳ ಪೂಜೆ, ಗೋವರ್ಧನ ಬೆಟ್ಟದ ಪೂಜೆ, ಕುಟುಂಬದ ಗಂಡಸರಿಗೆ, ಹೆಂಗಸರು ಮಾರ್ಗ ಪಾಲೀಕಂಕಣ ಕಟ್ಟಿ ಆರತಿ ಮಾಡುವುದು ಈ ದಿವಸದ ಮುಖ್ಯ ಕಾರ್ಯಗಳು. ಈ ದಿವಸ ವಿಕ್ರಮ ಸಂವತ್ಸರದ ಶಕ 2068 ರ ಪ್ರಾರಂಭ ದಿನ. ವಿಕ್ರಮ ಶಕೆಗೂ, ಕ್ರಿಸ್ತ ಶಕಕ್ಕೂ 57 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನ ಶಕೆಗೆ 135 ವರ್ಷಗಳ ವ್ಯತ್ಯಾಸವಿರುತ್ತದೆ.</p>
<p>
	 </p>
<p>
	ಈ ದಿವಸ ವ್ಯಾಪಾರ, ಉದ್ಯೋಗ, ಅಭ್ಯಾಸ, ಗೃಹ ಪ್ರವೇಶ, ಶುಭ ಕಾರ್ಯಗಳನ್ನು ಮಾಡಬಹುದು.</p>
<p>
	 </p>
<p>
	<strong>ಯಮದ್ವಿತೀಯ ಅಥವಾ ಭ್ರಾತೃ ದ್ವಿತೀಯ </strong></p>
<p>
	 </p>
<p>
	ನಂತರದ ಹಬ್ಬ ಕಾರ್ತಿಕ ಶುಕ್ಲ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಅಥವಾ ಯಮ ದ್ವಿತೀಯ. ಪುರಾಣ ಕಥೆಯ ಪ್ರಕಾರ ಮೃತ್ಯುವಿನ ಹಾಗೂ ನರಕದ ದೇವತೆ ಯಮ ಮತ್ತು ಯಮುನಾದೇವಿ (ಯಮಿ) ಇಬ್ಬರೂ ಸೋದರ-ಸೋದರಿಯರು. ಈ ದಿವಸದಂದು ಯಮುನಾದೇವಿ ಸೋದರ ಯಮನನ್ನು ತನ್ನ ಮನೆಗೆ ಕರೆದು ಹಬ್ಬದೂಟ ಉಣಿಸಿ, ಸತ್ಕರಿಸಿದ್ದರಿಂದ, ಸೋದರ-ಸೋದರಿಯವರ ಪುನರ್ಮಿಲನಕ್ಕೆ ಶ್ರೇಷ್ಠವಾದ ದಿನವೆನಿಸಿದೆ. ಇದು ಉತ್ತರ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಆದ್ದರಿಂದ ಕಾರ್ತಿಕ ಶುಕ್ಲ ದ್ವಿತೀಯ ತಿಥಿಗೆ ಯಮದ್ವಿತೀಯವೆಂದು ಕರೆಯುತ್ತಾರೆ. ಇದೂ ದೀಪಾವಳಿ ಹಬ್ಬಕ್ಕೆ ಸೇರಿ ಒಟ್ಟು ನಾಲ್ಕು ದಿವಸ ಹಬ್ಬವನ್ನು ಆಚರಿಸುತ್ತಾರೆ.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 13:45:00 +0530</pubDate>
      <updatedDate>Thu, 29 Sep 2016 19:00:08 +0530</updatedDate>
      <category><![CDATA[Dasara Article]]></category>
      <authorname>Rajesh patil</authorname>
    </item>
    <item>
      <title><![CDATA[ಮೈಸೂರು ದಸರಾ ಉತ್ಸವ : ನಿಮಗೆ ತಿಳಿದ ಮತ್ತು ತಿಳಿಯದ ಸಂಗತಿಗಳು]]></title>
      <link>https://kannada.webdunia.com/article/dasara-article/ಮೈಸೂರು-ದಸರಾ-ಉತ್ಸವ-ನಿಮಗೆ-ತಿಳಿದ-ಮತ್ತು-ತಿಳಿಯದ-ಸಂಗತಿಗಳು-113092700035_1.htm</link>
      <guid>https://kannada.webdunia.com/article/dasara-article/ಮೈಸೂರು-ದಸರಾ-ಉತ್ಸವ-ನಿಮಗೆ-ತಿಳಿದ-ಮತ್ತು-ತಿಳಿಯದ-ಸಂಗತಿಗಳು-113092700035_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1413776616-9494.jpg</image>
      <description><![CDATA[ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ಮೈಸೂರು ದಸರಾ ಸಂಭ್ರಮದ ಸುದ್ದಿ ಸ್ವಾರಸ್ಯಗಳನ್ನು ತಿಳಿಯಿರಿ ತಿಂಗಳ ಪೂರ್ತಿ.. ನಿಮ್ಮ ವೆಬ್‌ ದುನಿಯಾದಲ್ಲಿ..]]></description>
      <content:encoded><![CDATA[<font  style='font-size:11pt; color:#000000'>೧. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗಾ ಮಾತೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. </font><font style='font-size:12pt;'></font><br/><!--Image--><p class="wdp_articleLImg"><p><img src='/kn/articles/1309/27/images/img1130927035_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left">PR</p>PR</p></p><!--endImage--> </font><font  style='font-size:11pt; color:#000000'>೨. ಲಂಕಾದುಷ್ಟ ರಾವಣನ ಮೇಲೆ ಶ್ರೀ ರಾಮನು ಯುದ್ಧ ಮಾಡಿ ಅಂತಿಮವಾಗಿ ಜಯವನ್ನು ಸಾಧಿಸುತ್ತಾನೆ. ಹೀಗಾಗಿ ದುರ್ಗಾಮಾತೆಯ ಕೃಪೆಯಿಂದಲೇ ಶ್ರೀ ರಾಮನು ಜಯ ಸಾಧಿಸಿದ್ದಾನೆ ಎಂಬುದರ ಸಂಕೇತವಾಗಿ ಉತ್ತರ ಭಾರತದಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಒಂಭತ್ತು ದಿನಗಳ ಕಾಲ ನವರಾತ್ರಿಯನ್ನು ಆಚರಿಸಿ ಕೊನೆಯ ದಿನ ವಿಜಯದ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.</font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/1309/27/images/img1130927035_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left">PR</p>PR</p></p><!--endImage--> </font><font  style='font-size:11pt; color:#000000'>೩. ವಿಜಯನಗರ ಸಂಸ್ಥಾನದಲ್ಲಿಯೂ ಕೂಡ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ನಂತರದಲ್ಲಿ ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಈ ದಸರಾ ಉತ್ಸವ ಮನೆ ಮನೆಗಳಲ್ಲೂ ಪ್ರಚಲಿತವಾಯಿತು. ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.</font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/1309/27/images/img1130927035_3_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left">PR</p>PR</p></p><!--endImage--> </font><font  style='font-size:11pt; color:#000000'>೪. ಮೈಸೂರು ದಸರಾ ಸಮಯದಲ್ಲಿ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು. ಹಳೆಯ ಮೈಸೂರು ಪ್ರಾಂತ್ಯದ ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಪಟ್ಟದ ಗೊಂಬೆಗಳನ್ನು ನೀಡುತ್ತಾರೆ.</font><font style='font-size:12pt;'></font><br/><!--Image--><p class="wdp_articleLImg"><p><img src='/kn/articles/1309/27/images/img1130927035_4_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left">PR</p>PR</p></p><!--endImage--> </font><font  style='font-size:11pt; color:#000000'>೫. ವಿಜಯದಶಮಿ ದಿನದಂದು ಲಲಿತಾದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ ಮಾಡಲಾಗುತ್ತದೆ. ಜೊತೆಗೆ ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿಯಾಗಿದೆ.</font><font style='font-size:12pt;'></font><br/><!--Image--><p class="wdp_articleLImg"><p><img src='/kn/articles/1309/27/images/img1130927035_5_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left">PR</p>PR</p></p><!--endImage--> </font>]]></content:encoded>
      <pubDate>Fri, 27 Sep 2013 17:29:18 +0530</pubDate>
      <updatedDate>Tue, 15 Apr 2014 10:04:52 +0530</updatedDate>
      <category><![CDATA[Dasara Article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಮೈಸೂರು ದಸರಾ ಎಷ್ಟೊಂದು ಸುಂದರ; ಜಂಬೂ ಸವಾರಿಗೆ ತೆರೆ]]></title>
      <link>https://kannada.webdunia.com/article/dasara-article/ಮೈಸೂರು-ದಸರಾ-ಎಷ್ಟೊಂದು-ಸುಂದರ-ಜಂಬೂ-ಸವಾರಿಗೆ-ತೆರೆ-111100600041_1.htm</link>
      <guid>https://kannada.webdunia.com/article/dasara-article/ಮೈಸೂರು-ದಸರಾ-ಎಷ್ಟೊಂದು-ಸುಂದರ-ಜಂಬೂ-ಸವಾರಿಗೆ-ತೆರೆ-111100600041_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1413776616-9494.jpg</image>
      <description><![CDATA[ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿ ಅರಮನೆ ಆವರಣದಿಂದ ಹೊರಟ ಮೆರವಣಿಗೆ ಬನ್ನಿಮಂಟಪವನ್ನು ತಲುಪುವುದರೊಂದಿಗೆ ದಸರಾ ಜಂಬೂಸವಾರಿಗೆ ಗುರುವಾರ ತೆರೆಬಿದ್ದಿದೆ.]]></description>
      <content:encoded><![CDATA[<font  style='font-size:11pt; color:#000000'>ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿ ಅರಮನೆ ಆವರಣದಿಂದ ಹೊರಟ ಮೆರವಣಿಗೆ ಬನ್ನಿಮಂಟಪವನ್ನು ತಲುಪುವುದರೊಂದಿಗೆ ದಸರಾ ಜಂಬೂಸವಾರಿಗೆ ಗುರುವಾರ ತೆರೆಬಿದ್ದಿದೆ.</font><br/><font  style='font-size:11pt; color:#000000'></font><br/><a href='http://kannada.webdunia.com' target=_blank> <b>ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ</b></a><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'>ಗಜರಾಜ ಬಲರಾಮ 750 ಕೆಜಿ ತೂಕದ ರತ್ನಖಚಿತ ಚಿನ್ನದ ಅಂಬಾರಿಯನ್ನು ಹೊತ್ತು ಸುಮಾರು ಎಂಟು ಕಿಲೋ ಮೀಟರ್ ಅನ್ನು ಕ್ರಮಿಸಿ ಬನ್ನಿಮಂಟಪ ತಲುಪಿತ್ತು. ಈ ಸಂದರ್ಭದಲ್ಲಿ ಬಲರಾಮನಿಗೆ ಶ್ರೀರಾಮ, ಅರ್ಜುನ, ಅಭಿಮನ್ಯು, ಕೋಕಿಲಾ, ಮೇರಿ ಸೇರಿದಂತೆ 12 ಆನೆಗಳು ಸಾಥ್ ನೀಡಿದ್ದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸತತ 13ನೇ ಬಾರಿಗೆ ಚಿನ್ನದ ಅಂಬಾರಿಯಲ್ಲಿ ದೇವಿ ಚಾಮುಂಡಿಯನ್ನು ಹೊತ್ತ ಬಲರಾಮ ಘನ ಗಾಂಭೀರ್ಯದಿಂದ ಹೆಜ್ಜೆ ಹಾಕಿ ನಡೆಯುತ್ತಿದ್ದರೆ ದೇಶ-ವಿದೇಶಗಳಿಂದ ಆಗಮಿಸಿದ ಲಕ್ಷಾಂತರ ಮಂದಿ ವೈಭವವನ್ನು ವೀಕ್ಷಿಸಿ ಆನಂದಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಂಬೂ ಸವಾರಿಯಲ್ಲಿ ಕುದುರೆಗಳು, ಪೊಲೀಸ್ ತುಕಡಿಗಳು, 34 ಸ್ತಬ್ಧಚಿತ್ರಗಳು, ನೂರಾರು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬಂತೆ ನಾಡಹಬ್ಬದ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದಸರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಧ್ಯಾಹ್ನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಾಂಪ್ರದಾಯಿಕವಾಗಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ ನೀಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಮೈನವಿರೇಳಿಸುವ ಬೈಕ್ ಕಸರತ್ತು;</b></font><br/><font  style='font-size:11pt; color:#000000'>ಬನ್ನಿ ಮಂಟಪದ ಕವಾಯತು ಮೈದಾನದಲ್ಲಿ ಬೆಂಗಳೂರು ಮಿಲ್ಟ್ರಿ ಪೊಲೀಸರು ಪ್ರದರ್ಶಿಸಿದ ಮೈನವಿರೇಳಿಸುವ ಬೈಕ್ ಸ್ಟಂಟ್‌ಗಳು ಜನರನ್ನು ಮತ್ತಷ್ಟು ರಂಜಿಸಿದವು. ಅದೇ ರೀತಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ನಡೆದ ಜಟ್ಟಿ ಕಾಳಗವನ್ನೂ ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.</font>]]></content:encoded>
      <pubDate>Thu, 06 Oct 2011 20:37:31 +0530</pubDate>
      <updatedDate>Tue, 15 Apr 2014 17:25:37 +0530</updatedDate>
      <category><![CDATA[Dasara Article]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಮೈಸೂರು; ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ]]></title>
      <link>https://kannada.webdunia.com/article/dasara-article/ಮೈಸೂರು-ವಿಶ್ವವಿಖ್ಯಾತ-ಜಂಬೂ-ಸವಾರಿಗೆ-ಚಾಲನೆ-111100600007_1.htm</link>
      <guid>https://kannada.webdunia.com/article/dasara-article/ಮೈಸೂರು-ವಿಶ್ವವಿಖ್ಯಾತ-ಜಂಬೂ-ಸವಾರಿಗೆ-ಚಾಲನೆ-111100600007_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1413776616-9494.jpg</image>
      <description><![CDATA[ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರು ದಸರಾ ಪ್ರಯುಕ್ತ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ಒಡೆಯರ್ ಶ್ರೀಕಂಠದತ್ತ ಒಡೆಯರ್ ಬನ್ನಿ ಪೂಜೆ ನೆರವೇರಿಸಿದರು.]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1110/06/images/img1111006007_1_1.jpg' alt='Mysore jamboo savari'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಸಾಂಸ್ಕೃತಿಕ ನಗರಿ ಮೈಸೂರು ದಸರಾ ಪ್ರಯುಕ್ತ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿಗೆ 12-54 ಧನುರ್ ಲಗ್ನ ಶುಭ ಮಹೂರ್ತದಲ್ಲಿ ಚಾಲನೆ ನೀಡಲಾಯಿತು, ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬನ್ನಿ ಪೂಜೆ ನೆರವೇರಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೆಳಗ್ಗೆ ಬೆಳ್ಳಿರಥದ ಮೂಲಕ ಆಗಮಿಸಿದ ಒಡೆಯರ್ ಸಂಪ್ರಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಈ ಪೂಜೆಯ ನಂತರ ಇಂದು ಮೈಸೂರು ಒಡೆಯರ್ ಅವರ ಅಂಬಾವಿಲಾಸ ಅರಮನೆಯಲ್ಲಿನ ಖಾಸಗಿ ದರ್ಬಾರ್ ಅಂತ್ಯಗೊಳ್ಳಲಿದೆ.</font><br/><font  style='font-size:11pt; color:#000000'></font><br/>13<font  style='font-size:11pt; color:#000000'>ನೇ ಬಾರಿ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಗಜರಾಜ ಬಲರಾಮ. ಈ ಸಂದರ್ಭದಲ್ಲಿ ಬಲರಾಮನಿಗೆ ಶ್ರೀರಾಮ, ಅರ್ಜುನ,  ಅಭಿಮನ್ಯ, ಹರ್ಷ, ಗೋಪಿ, ವಿಕ್ರಮ್, ಕೋಕಿಲಾ, ಕಾಂತಿ, ಕಾವೇರಿ ಸೇರಿದಂತೆ 12 ಆನೆಗಳು ಸಾಥ್ ನೀಡಿದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಶ್ವವಿಖ್ಯಾತ ಜಂಬೂ ಸವಾರಿಗೆ 12-54ಕ್ಕೆ ಚಾಲನೆ ನೀಡಲಾಯಿತು. ಜಂಬೂ ಸವಾರಿಯ ವಿಶೇಷ ಆಕರ್ಷಣೆ ಎಂದರೆ ಅಂಬಾರಿ ಮತ್ತು ಸ್ತಬ್ದ ಚಿತ್ರಗಳು. 750 ಕೆ.ಜಿ ರತ್ನ ಖಚಿತ ಚಿನ್ನದ ಅಂಬಾರಿ ಹೊತ್ತು ಅದರಲ್ಲಿ ಚಾಮುಂಡೇಶ್ವರಿ ದೇವಿಯನ್ನು ಕೂರಿಸಿ ಗಜರಾಜ ಬಲರಾಮ ಸಾಗುತ್ತಿದ್ದಂತೆಯೇ ಸೇರಿದ್ದ ಜನರು ಹರ್ಷೋದ್ಘಾರದೊಂದಿಗೆ ವೀಕ್ಷಿಸಿ ಪುಳಕಿತರಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಒಟ್ಟು 34 ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಮೈಸೂರು ಪೇಟ ತೊಟ್ಟಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಡಾಟಿ, ಮೈಸೂರು ಮೇಯರ್ ಪುಷ್ಪಲತಾ, ಉಸ್ತುವಾರಿ ಸಚಿವ ರಾಮದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಬಿಗಿ ಬಂದೋಬಸ್ತ್:</b></font><br/><font  style='font-size:11pt; color:#000000'>ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತಿದ್ದು, ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ದೇಶದ ಜನತೆಗೆ ಇಂದು ಶುಭ ದಿನ. ದೇಶದ ಜನತೆಗೆ ಶುಭಾಶಯ ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ ರಾಜ್ಯದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ತಿಳಿಸಿದರು.</font>]]></content:encoded>
      <pubDate>Thu, 06 Oct 2011 13:25:06 +0530</pubDate>
      <updatedDate>Tue, 15 Apr 2014 17:25:37 +0530</updatedDate>
      <category><![CDATA[Dasara Article]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಮೈಸೂರು ದಸರಾ; ವಾಟರ್‌ ಜೆಟ್‌ನಿಂದ ಕೆರೆಗೆ ಬಿದ್ದ ಸಚಿವ!]]></title>
      <link>https://kannada.webdunia.com/article/dasara-article/ಮೈಸೂರು-ದಸರಾ-ವಾಟರ್‌-ಜೆಟ್‌ನಿಂದ-ಕೆರೆಗೆ-ಬಿದ್ದ-ಸಚಿವ-111092900036_1.htm</link>
      <guid>https://kannada.webdunia.com/article/dasara-article/ಮೈಸೂರು-ದಸರಾ-ವಾಟರ್‌-ಜೆಟ್‌ನಿಂದ-ಕೆರೆಗೆ-ಬಿದ್ದ-ಸಚಿವ-111092900036_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1413776616-9494.jpg</image>
      <description><![CDATA[ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಇಲ್ಲಿನ ವರುಣಾ ಕೆರೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ ಅವರು ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ ವಾಟರ್ ಜೆಟ್‌ನಿಂದ ನೀರಿಗೆ ಬಿದ್ದ ಪ್ರಸಂಗ ಗುರುವಾರ ನಡೆಯಿತು.]]></description>
      <content:encoded><![CDATA[<font  style='font-size:11pt; color:#000000'>ನಾಡಹಬ್ಬ ದಸರಾ ಅಂಗವಾಗಿ ಇಲ್ಲಿನ ವರುಣಾ ಕೆರೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ ಅವರು ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ ವಾಟರ್ ಜೆಟ್‌ನಿಂದ ನೀರಿಗೆ ಬಿದ್ದ ಪ್ರಸಂಗ ಗುರುವಾರ ನಡೆಯಿತು.</font><br/><font  style='font-size:11pt; color:#000000'></font><br/><a href='http://kannada.webdunia.com' target=_blank> <b>ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ</b></a><font  style='font-size:11pt; color:#000000'></font><br/><font  style='font-size:11pt; color:#000000'></font><br/>401<font  style='font-size:11pt; color:#000000'>ನೇ ದಸರಾ ಮಹೋತ್ಸವದ ಎರಡನೇ ದಿನವಾದ ಇಂದು ವರುಣಾ ಕೆರೆಯಲ್ಲಿ ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ಕೊಡುವಂತೆ ಸಚಿವ ರಾಜೂ ಗೌಡ ಅವರಿಗೆ ಆಹ್ವಾನ ನೀಡಲಾಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರಂತೆ ಸಚಿವರಾದ ರಾಮದಾಸ್, ರಾಜೂ ಗೌಡ ವರುಣಾ ಕೆರೆಯಲ್ಲಿ ವಾಟರ್ ಜೆಟ್‌ನಲ್ಲಿ ಭರ್ಜರಿಯಾಗಿ ಪೋಸ್ ನೀಡಿ ಸವಾರಿ ನಡೆಸಿದರು. ರಾಜೂ ಗೌಡ ಅವರ ಬೆನ್ನಹಿಂದೆ ವಾಟರ್ ಜೆಟ್‌ನ ತರಬೇತುಗಾರ್ತಿ ಯುವತಿ ಕೂಡ ಇದ್ದಿದ್ದಳು. ಈ ಜೋಶ್‌ನಲ್ಲಿ ಸಚಿವರು ವಾಟರ್ ಜೆಟ್ ಅನ್ನು ಜೋರಾಗಿಯೇ ಓಡಿಸಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನೇನು ದಡ ಸೇರುತ್ತಾರೆ ಎಂಬಷ್ಟರಲ್ಲಿ ಮಧ್ಯ ಕೆರೆಯಲ್ಲಿಯೇ ವಾಟರ್ ಜೆಟ್ ಪಲ್ಟಿ ಹೊಡೆದ ಪರಿಣಾಮ ಸಚಿವ ರಾಜೂ ಗೌಡ, ತರಬೇತುಗಾರ್ತಿ ಕೆರೆಗೆ ಬಿದ್ದು ಬಿಟ್ಟರು. ಆದರೆ ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯವಾಗಿರಲಿಲ್ಲ. ಅಷ್ಟರಲ್ಲಿಯೇ ರಾಜೂ ಗೌಡ ಈಜಿ ಸುರಕ್ಷಿತವಾಗಿ ದಡ ಸೇರಿದರು.</font>]]></content:encoded>
      <pubDate>Thu, 29 Sep 2011 16:55:36 +0530</pubDate>
      <updatedDate>Tue, 15 Apr 2014 17:20:49 +0530</updatedDate>
      <category><![CDATA[Dasara Article]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ನಾಡಹಬ್ಬ ದಸರಾದಲ್ಲಿ ಶೋಭಾ ಕರಂದ್ಲಾಜೆ-ರಾಮದಾಸ್ ಜಟಾಪಟಿ]]></title>
      <link>https://kannada.webdunia.com/article/dasara-article/ನಾಡಹಬ್ಬ-ದಸರಾದಲ್ಲಿ-ಶೋಭಾ-ಕರಂದ್ಲಾಜೆ-ರಾಮದಾಸ್-ಜಟಾಪಟಿ-111092900018_1.htm</link>
      <guid>https://kannada.webdunia.com/article/dasara-article/ನಾಡಹಬ್ಬ-ದಸರಾದಲ್ಲಿ-ಶೋಭಾ-ಕರಂದ್ಲಾಜೆ-ರಾಮದಾಸ್-ಜಟಾಪಟಿ-111092900018_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಮೈಸೂರು: ಅರಮನೆ ನಗರಿಯಲ್ಲಿನ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಯ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಎ.ಎಸ್.ರಾಮದಾಸ್ ಮತ್ತು ಇಂಧನ ಸಚಿವೆ ಶೋಭಾ ಕರಂದ್ಲಾಜೆ ನಡುವೆ ಜಟಾಪಟಿ ನಡೆದ ಪ್ರಸಂಗ ಬುಧವಾರ ನಡೆಯಿತು.]]></description>
      <content:encoded><![CDATA[<font  style='font-size:11pt; color:#000000'>ಅರಮನೆ ನಗರಿಯಲ್ಲಿನ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಯ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಎ.ಎಸ್.ರಾಮದಾಸ್ ಮತ್ತು ಇಂಧನ ಸಚಿವೆ ಶೋಭಾ ಕರಂದ್ಲಾಜೆ ನಡುವೆ ಜಟಾಪಟಿ ನಡೆದ ಪ್ರಸಂಗ ಬುಧವಾರ ನಡೆಯಿತು.</font><br/><font  style='font-size:11pt; color:#000000'></font><br/><a href='http://kannada.webdunia.com' target=_blank> <b>ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ</b></a><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'>ದಸರಾ ವಸ್ತು ಪ್ರದರ್ಶನ ಮತ್ತು ಆಹಾರ ಮೇಳದ ಉದ್ಘಾಟನೆಯ ವೇಳೆ ಈ ಘಟನೆ ನಡೆಯಿತು. ಆಹಾರ ಮೇಳೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವ ರಾಮದಾಸ್ 15 ನಿಮಿಷ ತಡವಾಗಿ ಆಗಮಿಸಿದರು. ಅಷ್ಟರಲ್ಲಿ ಸಚಿವೆ ಶೋಭಾ ಕರಂದ್ಲಾಜೆ ದೋಸೆ ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿದರು. ಇದರಿಂದ ಮುನಿಸಿಕೊಂಡ ರಾಮದಾಸ್, ವೇದಿಕೆ ಏರಿ ಒಬ್ಬರೇ ಕುಳಿತುಕೊಂಡರು!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಳಿಕ ಜಿಲ್ಲಾ ಪಂಚಾಯ್ತಿ ಸಿಇಓ ಸತ್ಯವತಿ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದ ಗಿರೀಶ್ ಸಚಿವರಲ್ಲಿ ವಿನಂತಿ ಮಾಡಿಕೊಂಡಾಗ ರಾಮದಾಸ್ ಕೂಡ ದೋಸೆ ಹಾಕುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ವಸ್ತು ಪ್ರದರ್ಶನ ಉದ್ಘಾಟನಾ ಸಂದರ್ಭದಲ್ಲಿ ಇದು ವಿಕೋಪಕ್ಕೆ ಹೋಯಿತು. ರಾಮದಾಸ್ ಉದ್ಘಾಟನೆಗೆ ಕರೆಯದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಸ್ತು ಪ್ರದರ್ಶನ ಆವರಣದಲ್ಲಿ ಸಂಜೆ 4ಗಂಟೆಗೆ ಕಾರ್ಯಕ್ರಮ ಏರ್ಪಾಡಾಗಿತ್ತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಅವರು ವಿದೇಶದಲ್ಲಿ ಇರುವುದರಿಂದ ಅವರು ಬರಲು ಸಾಧ್ಯವಾಗಲಿಲ್ಲ. ಇಂಧನ ಸಚಿವೆ ಶೋಭಾ ಕಾರ್ಯಕ್ರಮ ಉದ್ಘಾಟಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಮೀಪದ ದಸರಾ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿದರು. ಅವರನ್ನು ಯಾರೂ ಕರೆಯಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆರಂಭದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶೋಭಾ ಅವರಿಗೆ ಘೇರಾವ್ ಮಾಡಲು ವಸ್ತು ಪ್ರದರ್ಶನ ಆವರಣದ ಗೇಟಿನ ಮುಂಭಾಗದಲ್ಲಿ ಕಾದು ಕುಳಿತಿದ್ದರು. ಇದನ್ನು ಅರಿತ ಶೋಭಾ ವಸ್ತು ಪ್ರದರ್ಶನ ಆವರಣದ ಮತ್ತೊಂದು ಗೇಟಿನಲ್ಲಿ ಹೊರಟು ಹೋದರು. ಇದರಿಂದ ಕೋಪಗೊಂಡ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. </font>]]></content:encoded>
      <pubDate>Thu, 29 Sep 2011 12:35:24 +0530</pubDate>
      <updatedDate>Tue, 15 Apr 2014 17:20:49 +0530</updatedDate>
      <category><![CDATA[Dasara Article]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ನಾಡಹಬ್ಬಕ್ಕೆ ಚಾಲನೆ-ಸರ್ಕಾರ ದುಃಶ್ಯಾಸನ ಆಗ್ಬಾರ್ದು, ಶ್ರೀಕೃಷ್ಣನಾಗ್ಬೇಕು: ಪೇಜಾವರಶ್ರೀ]]></title>
      <link>https://kannada.webdunia.com/article/dasara-article/ನಾಡಹಬ್ಬಕ್ಕೆ-ಚಾಲನೆ-ಸರ್ಕಾರ-ದುಃಶ್ಯಾಸನ-ಆಗ್ಬಾರ್ದು-ಶ್ರೀಕೃಷ್ಣನಾಗ್ಬೇಕು-ಪೇಜಾವರಶ್ರೀ-111092800046_1.htm</link>
      <guid>https://kannada.webdunia.com/article/dasara-article/ನಾಡಹಬ್ಬಕ್ಕೆ-ಚಾಲನೆ-ಸರ್ಕಾರ-ದುಃಶ್ಯಾಸನ-ಆಗ್ಬಾರ್ದು-ಶ್ರೀಕೃಷ್ಣನಾಗ್ಬೇಕು-ಪೇಜಾವರಶ್ರೀ-111092800046_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿರುವ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದರು, ಸರ್ಕಾರ ಹಸಿರುಡುಗೆ ತೊಟ್ಟ ಕನ್ನಡಾಂಬೆಯ ಸೀರೆಯನ್ನು ಎಳೆಯುವ ದುಃಶ್ಯಾಸನ ಆಗಬಾರದು, ರಕ್ಷಣೆ ನೀಡಿದ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1109/28/images/img1110928046_1_1.jpg' alt='pejavara shree'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'>ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿರುವ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದರು, ಸರ್ಕಾರ ಹಸಿರುಡುಗೆ ತೊಟ್ಟ ಕನ್ನಡಾಂಬೆಯ ಸೀರೆಯನ್ನು ಎಳೆಯುವ ದುಃಶ್ಯಾಸನ ಆಗಬಾರದು, ರಕ್ಷಣೆ ನೀಡಿದ ಕೃಷ್ಣನಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವರು ಬುಧವಾರ ಅರಮನೆ ನಗರ ಮೈಸೂರಿನಲ್ಲಿ 401ನೇ ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದ ನಂತರ ಮಾತನಾಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತಾಯಿ ಚಾಮುಂಡೇಶ್ವರಿ ಸಮಸ್ತ ಜನರಿಗೆ ಒಳಿತನ್ನು ಮಾಡಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ಅದೇ ರೀತಿ ಸಮಾಜದಲ್ಲಿನ ದಬ್ಬಾಳಿಕೆ, ಶೋಷಣೆ ವಿರುದ್ಧ ಮತ್ತಷ್ಟು ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದರು. ಸರ್ಕಾರ ದುಃಶ್ಯಾಸನಂತಾಗದೇ ದ್ರೌಪದಿಗೆ ಅಕ್ಷಯಾಂಬರ ನೀಡಿದ ಕೃಷ್ಣನಾಗಬೇಕು ಎಂದು ಸಲಹೆ ನೀಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮೈಸೂರು, ಮಡಿಕೇರಿಗಳಲ್ಲಿ ನಡೆಯುವ ದಸರಾ ಹಬ್ಬ ಉಳಿದ ಜಿಲ್ಲೆಗಳಲ್ಲೂ ನಡೆಯಬೇಕು. ಅದಕ್ಕೆ ಅಗತ್ಯ ನೆರವು ಸರ್ಕಾರ ನೀಡಲು ಸಿದ್ದವಿದೆ ಎಂದು ಭರವಸೆ ನೀಡಿದರು. ದಸರಾ ಹಬ್ಬ ವಿಶ್ವವಿಖ್ಯಾತವಾಗಿದೆ ಅಷ್ಟೇ ಅಲ್ಲ ಸರ್ವಧರ್ಮ ಸಮನ್ವಯದೊಂದಿಗೆ ಆಚರಿಸುವ ಮೂಲಕ ಮಾದರಿಯಾಗಿರುವುದಾಗಿಯೂ ಹೇಳಿದರು.</font>]]></content:encoded>
      <pubDate>Wed, 28 Sep 2011 20:24:37 +0530</pubDate>
      <updatedDate>Tue, 15 Apr 2014 17:20:49 +0530</updatedDate>
      <category><![CDATA[Dasara Article]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಶಕ್ತಿದೇವತೆಯಿಂದ ಶಕ್ತಿ ಬೇಡುವ ಹಬ್ಬ]]></title>
      <link>https://kannada.webdunia.com/article/dasara-article/ಶಕ್ತಿದೇವತೆಯಿಂದ-ಶಕ್ತಿ-ಬೇಡುವ-ಹಬ್ಬ-108092900057_1.htm</link>
      <guid>https://kannada.webdunia.com/article/dasara-article/ಶಕ್ತಿದೇವತೆಯಿಂದ-ಶಕ್ತಿ-ಬೇಡುವ-ಹಬ್ಬ-108092900057_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ಪಡೆಯುತ್ತದೆ. ಶಕ್ತಿಯ ಆರಾಧನೆಯ ಈ ಒಂಬತ್ತು ದಿನಗಳು ಮಹತ್ವಪೂರ್ಣವಾಗಿವೆ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿತವಾಗಿದೆ. ನವರಾತ್ರಿಯ ...]]></description>
      <content:encoded><![CDATA[<font  style='font-size:11pt; color:#0000FF'><i>ನೂಪುರ್ ದೀಕ್ಷಿತ <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0809/29/images/img1080929057_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></i>ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ಪಡೆಯುತ್ತದೆ. ಶಕ್ತಿಯ ಆರಾಧನೆಯ ಈ ಒಂಬತ್ತು ದಿನಗಳು ಮಹತ್ವಪೂರ್ಣವಾಗಿವೆ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿತವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಈ ಹಬ್ಬವನ್ನು ನವರಾತ್ರಿ ಎಂದು ಕರೆಯುತ್ತಾರೆ.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ನವರಾತ್ರಿ ಎಂದರೆ ಮಹಾಶಕ್ತಿಯ ಆರಾಧನೆಯ ಹಬ್ಬ. ನವರಾತ್ರಿಯಲ್ಲಿ ಮಾತೆ ದುರ್ಗೆಯ ಒಂಬತ್ತು ರೂಪಗಳ ಪೂಜೆಯನ್ನು ನೆರವೇರಿಸಲಾಗುತ್ತದೆ. ದೇವಿ ಮಾತಾ ದುರ್ಗೆಯ ಈ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದಾದ್ಯಂತ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಗುಜರಾತಿನಲ್ಲಿ ನವರಾತ್ರಿಯ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಲದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ. ಪಂಜಾಬ್ ರಾಜ್ಯದಲ್ಲಿ ಕೂಡಾ ಉಪವಾಸ ಮತ್ತು ಜಾಗರಣೆ ಹಾಗೂ ದೇವಿಯ ಪೂಜೆಯನ್ನು ನೆರವೇರಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಒಂಬತ್ತು ದಿನಗಳಲ್ಲಿ ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ನೀಡುವುದಲ್ಲದೇ ಅವರಿಗೆ ದಕ್ಷಿಣೆಯನ್ನು ಕೊಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ಮಾಡುವ ನಿಯಮಗಳು ದೇಶದ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದಲ್ಲಿ ಪ್ರತಿಯೊಂದು ಹಬ್ಬದ ಹಿಂದೆ ಒಂದು ಸಂದೇಶವಿರುತ್ತದೆ. ನವರಾತ್ರಿಯಲ್ಲೂ ಕೂಡಾ ಒಂದು ಸಂದೇಶವಿದೆ. ನಮ್ಮ ಸಮಾಜಕ್ಕೆ ಈ ಸಂದೇಶದ ಅಗತ್ಯವಿದೆ. ನವರಾತ್ರಿಯಲ್ಲಿ ಕುಮಾರಿಯರ ಪೂಜೆ ಮಾಡುವುದಲ್ಲದೇ ಅವರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸುವಂತೆ ಸಂದೇಶವನ್ನು ನೀಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನವರಾತ್ರಿಯ ಹಬ್ಬದ ಸಂದರ್ಭದಲ್ಲಿ ಮಹಿಳೆ ತನ್ನ ಶಕ್ತಿಯನ್ನು ಗುರುತಿಸಿಕೊಂಡು ಅನ್ಯಾಯ ಮತ್ತು ಅನೀತಿಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುವಂತೆ ದುರ್ಗೆಯಲ್ಲಿ ಪ್ರಾರ್ಥಿಸಬೇಕು. ದುರ್ಗಾ ಮಾತೆಯಂತೆ ನಮ್ಮ ಅಸ್ತಿತ್ವವನ್ನು ಬಲಗೊಳಿಸಿ, ಮನಸ್ಸಿನಲ್ಲಿ ಪ್ರೀತಿ ಮತ್ತು ಕರುಣೆಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ನವರಾತ್ರಿ ಪೂಜೆ ಮಾಡುವುದು ಸಾರ್ಥಕವಾಗುತ್ತದೆ.</font>]]></content:encoded>
      <pubDate>Wed, 28 Sep 2011 17:00:49 +0530</pubDate>
      <updatedDate>Tue, 15 Apr 2014 12:03:34 +0530</updatedDate>
      <category><![CDATA[Dasara Article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ದಸರಾ ವಿಶೇಷ: ಮಂಜಿನ ಮಡಿಕೇರಿಯಲ್ಲಿ ದಸರಾ ಬೆಳಗು]]></title>
      <link>https://kannada.webdunia.com/article/dasara-article/ದಸರಾ-ವಿಶೇಷ-ಮಂಜಿನ-ಮಡಿಕೇರಿಯಲ್ಲಿ-ದಸರಾ-ಬೆಳಗು-111092700034_1.htm</link>
      <guid>https://kannada.webdunia.com/article/dasara-article/ದಸರಾ-ವಿಶೇಷ-ಮಂಜಿನ-ಮಡಿಕೇರಿಯಲ್ಲಿ-ದಸರಾ-ಬೆಳಗು-111092700034_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ದಸರಾವನ್ನು ಮೈಸೂರು ಸ್ವಾಗತಿಸಿದರೆ... ಮಡಿಕೇರಿ ಬೀಳ್ಕೊಡುತ್ತದೆ... ಈ ಮಾತು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. 

ಮಡಿಕೇರಿ ದಸರಾ ಎಂದರೆ ಅಲ್ಲಿ ...]]></description>
      <content:encoded><![CDATA[<font  style='font-size:11pt; color:#000000'>ಚಿತ್ರ, ಲೇಖ</font><font style='font-size:11pt;'>ನ: </font><font style='font-size:11pt; color:#0000FF;'>ಬಿ.ಎಂ.ಲವಕುಮಾರ್, ಮೈಸೂರು </font><font style=' color:#000000;'></font><br/><!--Image--><p class="wdp_articleLImg"><p><img src='/kn/articles/1109/27/images/img1110927034_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ದಸರಾವನ್ನು ಮೈಸೂರು ಸ್ವಾಗತಿಸಿದರೆ... ಮಡಿಕೇರಿ ಬೀಳ್ಕೊಡುತ್ತದೆ... ಈ ಮಾತು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಡಿಕೇರಿ ದಸರಾ ಎಂದರೆ ಅಲ್ಲಿ ಅಧಿಕಾರಿಗಳ ದರ್ಬಾರ್ ಇಲ್ಲ. ಸರ್ಕಾರದ ಹಸ್ತಕ್ಷೇಪವಿಲ್ಲ. ಜಾತಿ, ಧರ್ಮಗಳ ಹಂಗುಗಳಿಲ್ಲದೆ ಜನರೇ ಜನರಿಗೋಸ್ಕರ ಆಚರಿಸುವ ಜನೋತ್ಸವವಾಗಿದೆ. ಹಾಗಾಗಿ ಇತರೆಡೆ ಆಚರಿಸಲ್ಪಡುವ ದಸರಾಕ್ಕಿಂತ ಮಡಿಕೇರಿ ದಸರಾ ವಿಭಿನ್ನ ಹಾಗೂ ವಿಶಿಷ್ಟವಾಗಿ ಕಂಗೊಳಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಡಿಕೇರಿ ದಸರಾ ಹಿಂದಿನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಈ ದಸರಾ ಉತ್ಸವವನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಮಡಿಕೇರಿ ದಸರಾ ಭಾವೈಕ್ಯತೆಯನ್ನು ಸಾರುವ ಉತ್ಸವವಾಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ದೊಡ್ಡ ಇತಿಹಾಸವೇ ಇದೆ...</font><font style=' color:#000000;'></font><br/><font  style='font-size:11pt; color:#000000'>ಮಡಿಕೇರಿಯಲ್ಲಿ ದಸರಾ ಆಚರಣೆ ಇಂದು ನಿನ್ನೆಯದಲ್ಲ ಇದಕ್ಕೆ ಗತ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ. 1781 ರಿಂದ 1809ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯರ್ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರಂತೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃ ಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳ ಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ಆ ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಜಯದಶಮಿಯಂದು ಎಲ್ಲೆಡೆ ದೇವಾಲಯಗಳಲ್ಲಿ ಭಜನೆ, ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಉತ್ಸವಗಳು ನಡೆಯುತ್ತಿದ್ದವು. ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಮೆರವಣಿಗೆ ಆರಂಭವಾಗುತ್ತಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ - ಹೀಗೆ ಎರಡು ಆನೆಗಳು ಮುನ್ನಡೆದರೆ, ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಮಹಾರಾಜರ ಈ ನವರಾತ್ರಿ ಉತ್ಸವ ಹೆಚ್ಚು ದಿನ ನಡೆಯಲಿಲ್ಲ. 1834ರಲ್ಲಿ ಕೊಡಗನ್ನಾಳುತ್ತಿದ್ದ ಚಿಕ್ಕವೀರರಾಜನನ್ನು ಬ್ರಿಟಿಷರು ಸೆರೆಹಿಡಿದರು. ಆ ನಂತರ ನವರಾತ್ರಿ ಉತ್ಸವ ಸಾರ್ವಜನಿಕ ಉತ್ಸವವಾಗಿ ಬದಲಾಯಿತು. ನಂತರ ಮಡಿಕೇರಿಯಲ್ಲಿದ್ದ ಭಜನಾಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರೆಸಿದವು. ಅಲ್ಲದೆ, ಮಡಿಕೇರಿಯ ಕೋಟೆಯನ್ನು ಕಾಯುವ ಕೋಟೆ ಮಾರಿಯಮ್ಮ, ನಗರವನ್ನು ಕಾಯುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು ಕಾಪಾಡುವ ದಂಡಿನ ಮಾರಿಯಮ್ಮ, ಆರೋಗ್ಯ ಹಾಗೂ ಐಶ್ವರ್ಯವನ್ನು ದಯಪಾಲಿಸುವ ಶ್ರೀ ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕು ಶಕ್ತಿದೇವತೆಗಳನ್ನು ಪೂಜಿಸುವ ಮೂಲಕ ತೇರನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವ ಆಚರಣೆ ರೂಢಿಗೆ ಬಂತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ ಬೀಳುತ್ತಿತ್ತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮುಂದುವರಿದ ಸಂಪ್ರದಾಯ </font><font style=' color:#000000;'></font><br/><font  style='font-size:11pt; color:#000000'>ಹಾಗೆ ನೋಡಿದರೆ ಹಾಲೇರಿ ವಂಶಸ್ಥರ ಕಾಲದಿಂದ ಆರಂಭಗೊಂಡ ಮಡಿಕೇರಿ ದಸರಾ ನಂತರದ ಕಾಲದಲ್ಲಿ ನಿಲ್ಲದೆ ಮುಂದುವರೆಯುತ್ತಾ ಬಂದಿರುವುದು ಇತಿಹಾಸವೇ ಎನ್ನಬೇಕು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಗ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ಎಲ್ಲಾ ರೀತಿಯ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ನಿಲ್ಲಲಿಲ್ಲವಂತೆ. ಮುಂದೆ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿಯೂ ಕರಗವನ್ನು ಹೊರಡಿಸುವುದು ನಿಲ್ಲಲಿಲ್ಲ. ಬದಲಿಗೆ  ವರ್ಷದಿಂದ ವರ್ಷಕ್ಕೆ ಮಡಿಕೇರಿ ದಸರಾ ಅಭಿವೃದ್ದಿಯತ್ತ ಸಾಗತೊಡಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊದಲಿದ್ದ ನಾಲ್ಕು ಮಂಟಪಗಳ ಜೊತೆಗೆ ಇನ್ನು ಕೆಲವು ದೇವಾಲಯಗಳು ಕೂಡ ಮಂಟಪವನ್ನು ಹೊರಡಿಸುವುದರ ಮೂಲಕ ದಸರಾ ಮೆರವಣಿಗೆಗೆ ಕಳೆಕಟ್ಟತೊಡಗಿದವು. 1958ರಲ್ಲಿ ರಾಜಸ್ಥಾನದಿಂದ ಬಂದು ಮಡಿಕೇರಿಯ ನೆಲೆಸಿದ್ದ ಭೀಮಸಿಂಗ್ ಅವರು ಬಾಣೆಮೊಟ್ಟೆಯ ರಘುರಾಮ ಮಂಟಪವನ್ನು ಮೆರವಣಿಗೆಗೆ ಸೇರ್ಪಡೆ ಮಾಡಿದರು. ಆಗ ಮೆರವಣಿಗೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಮಂಟಪದೊಂದಿಗೆ ಪೇಟೆ ಶ್ರೀ ರಾಮಮಂದಿರ, ದೇಚೂರಿನ ರಾಮಮಂದಿರ, ಚಿಕ್ಕಪೇಟೆಯ ಬಾಲಕ ರಾಮಮಂದಿರದ ಮಂಟಪಗಳು ಸಾಗುತ್ತಿದ್ದವು. ಮೊದಲು ಇದ್ದ ನಾಲ್ಕು ಮಂಟಪಗಳು ನಂತರದ ವರ್ಷದಲ್ಲಿ ಐದು, ಏಳು, ಒಂಭತ್ತು ಆಯಿತು. ಬಳಿಕ ಹನ್ನೊಂದಕ್ಕೆ ಏರಿತಾದರೂ ದಸರಾ ಸಮಿತಿ ಮಂಟಪದ ಸಂಖ್ಯೆಯನ್ನು ಹತ್ತಕ್ಕೆ ಸೀಮಿತಗೊಳಿಸಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಜನೋತ್ಸವವಾಗಿದ್ದು ಯಾವಾಗ...</font><font style='font-size:12pt; color:#000000;'></font><br/><!--Image--><p class="wdp_articleRImg"><p><img src='/kn/articles/1109/27/images/img1110927034_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಅವತ್ತು ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನೂ ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್.ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸಿ, ಭಜನಾ ಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ದಿನಗಳಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ದಿಷ್ಟ ಸಮಯದಲ್ಲಿ ಹಾದು ಹೋಗುವಂತೆಯೂ, ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಗೆ ಬಂತು. ಇದರೊಂದಿಗೆ ಮಂಟಪಗಳ ಮೆರವಣಿಗೆಯಲ್ಲಿ ಒಂದು ಧಾರ್ಮಿಕ ಶಿಸ್ತನ್ನು ಕಾಲೇಜು ರಸ್ತೆಯ ರಾಮಮಂದಿರವು ರೂಪಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದೇನೆಂದರೆ, ವಿಜಯದಶಮಿ ದಿನದಂದು ನಡೆಯುವ ಮೆರವಣಿಗೆಯಲ್ಲಿ ಪೇಟೆ ಶ್ರೀರಾಮ ಮಂದಿರದ ಮಂಟಪ ಮಂಗಳವಾದ್ಯ ಹಾಗೂ ಕಳಶದೊಂದಿಗೆ ಬಾರದ ಹೊರತು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಕರಗ ಹೊರಡುವಂತಿಲ್ಲ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಕರಗಗಳಾಗಲೀ, ಮಂಟಪಗಳಾಗಲೀ ಮೆರವಣಿಗೆಯಲ್ಲಿ ಬರುವಂತಿಲ್ಲ. ಎಲ್ಲಾ ಕರಗಗಳು ಹಾಗೂ ಮಂಟಪಗಳು ಶ್ರೀದಂಡಿನ ಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರವೇ ಬನ್ನಿ ಕಡಿಯಲು ಮೆರವಣಿಗೆಯಲ್ಲಿ ಸಾಗಬೇಕು. ಹಾಗಾಗಿ ಅಂದು ಪೇಟೆಯ ಶ್ರೀರಾಮಮಂದಿರದಿಂದ ಕಳಶ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಶ್ರಿ ಚೌಟಿ ಮಾರಿಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಕರಗ ಪೂಜೆಯನ್ನು ಸ್ವೀಕರಿಸಿ, ಬಳಿಕ ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯಕ್ಕೆ ಹೋಗಿ ಅಲ್ಲಿಯೂ ಪೂಜೆಯನ್ನು ಸ್ವೀಕರಿಸಿ ಅಲ್ಲಿಂದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಆಗಮಿಸುತ್ತದೆ. ಅದೇ ಸಮಯಕ್ಕೆ ಕೋಟೆ ಮಾರಿಯಮ್ಮ ದೇವಾಲಯದ ಕರಗ ಕೂಡ ಅಲ್ಲಿಗೆ ಬರುತ್ತದೆ. ಬಳಿಕ ಪೇಟೆ ರಾಮಮಂದಿರದ ಕಳಶ ಪೂಜೆ ನಡೆದು ಮೆರವಣಿಗೆ ಸಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂದು ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀಕೋಟೆಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ಹಾಗೂ ಶ್ರೀ ಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ವಿಜೃಂಭಿಸತೊಡಗಿದೆ ಉತ್ಸವ </font><font style=' color:#000000;'></font><br/><font  style='font-size:11pt; color:#000000'>ಹಿಂದೆ ಕೇವಲ ಐದೋ ಹತ್ತೋ ಸಾವಿರ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿದ್ದ ಮಂಟಪಗಳು ಇಂದು ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಜಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆಯಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ. ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿ ಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ದಸರಾ ಸಮಿತಿಯು ಮಡಿಕೇರಿ ದಸರಾಕ್ಕೆ ಮೆರುಗು ನೀಡುವ ಉದ್ದೇಶದಿಂದ ಮೈಸೂರು ದಸರಾ ಮಾದರಿಯಲ್ಲಿ ಒಂಬತ್ತು ದಿನಗಳ ಕಾಲ ಕ್ರೀಡಾಕೂಟ, ಕವಿಗೋಷ್ಠಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೈಸೂರು ದಸರಾವನ್ನು ವೀಕ್ಷಿಸಿದ ಬಳಿಕ ಪ್ರವಾಹೋಪಾದಿಯಲ್ಲಿ ಜನ ಮಡಿಕೇರಿ ದಸರಾವನ್ನು ವೀಕ್ಷಿಸಲು ಬರುವುದರಿಂದ ಮೈಸೂರಿನಿಂದ ಮಡಿಕೇರಿಗೆ ಅಂದು ವಿಶೇಷ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಒಮ್ಮೆ ಮಡಿಕೇರಿಯ ಮಂಜಿನಲ್ಲಿ ಮಿಂದೆದ್ದು ದಸರಾ ವೀಕ್ಷಿಸಿ ಹೋದವರು ಆ ಸುಂದರ ಕ್ಷಣವನ್ನು ಎಂದೆಂದಿಗೂ ಮರೆಯಲಾರರು. ಹಾಗಾಗಿಯೇ  ಮಡಿಕೇರಿ ದಸರಾದ ವೈಭವ  ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ ಎಂದರೆ ತಪ್ಪಾಗಲಾರದು.</font>]]></content:encoded>
      <pubDate>Tue, 27 Sep 2011 17:53:41 +0530</pubDate>
      <updatedDate>Tue, 15 Apr 2014 17:20:49 +0530</updatedDate>
      <category><![CDATA[Dasara Article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ನೋಡ ಬನ್ನಿ ಮೈಸೂರು ದಸರಾ...]]></title>
      <link>https://kannada.webdunia.com/article/dasara-article/ನೋಡ-ಬನ್ನಿ-ಮೈಸೂರು-ದಸರಾ-110100400081_1.htm</link>
      <guid>https://kannada.webdunia.com/article/dasara-article/ನೋಡ-ಬನ್ನಿ-ಮೈಸೂರು-ದಸರಾ-110100400081_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ...]]></description>
      <content:encoded><![CDATA[<!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1010/04/images/img1101004081_1_1.jpg' alt='ಜಂಬೂ ಸವಾರಿ ತಾಲೀಮು' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#0000FF'><i>ಚಿತ್ರ ಮತ್ತು ಲೇಖನ- ಬಿ.ಎಂ.ಲವಕುಮಾರ</font><font style='font-size:11pt;'>್ </font><font style='font-size:11pt; color:#000000;'></i></font><br/><font  style='font-size:11pt; color:#000000'>ದಸರಾ ಎಂದಾಕ್ಷಣ ವಿದ್ಯುತ್ ಅಲಂಕೃತ ಭವ್ಯ ಅರಮನೆ.... ಮಹಾರಾಜರ ಖಾಸಗಿ ದರ್ಬಾರ್.... ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ.... ಪಂಜಿನ ಕವಾಯತು.... ಹೀಗೆ ಒಂದೇ ಎರಡೇ... ಗತಕಾಲದ ರಾಜವೈಭವ  ನಮ್ಮ ಕಣ್ಮುಂದೆ ಹಾದು ಹೋಗುತ್ತದೆ.</font><font style=' color:#0000FF;'></font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಇತಿಹಾಸವೇ ಇದೆ </font><font style=' color:#000000;'></font><br/><font  style='font-size:11pt; color:#000000'>ಮೈಸೂರಿನ ದಸರಾ ಇತರೆಡೆಯಲ್ಲಿ ಆಚರಿಸುವ ದಸರಾಕ್ಕಿಂತ ವಿಭಿನ್ನ, ವಿಶಿಷ್ಟ ಹೀಗಾಗಿ ವಿಶ್ವವಿಖ್ಯಾತಿ ಗಳಿಸಿದೆ. ಹಾಗೆ ನೋಡಿದರೆ ಮೈಸೂರು ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತ ಇತಿಹಾಸವೇ ಇದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಸರಾ ಅರ್ಥಾತ್ ವಿಜಯದಶಮಿ - ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದ ಸಂಕೇತವೂ ಹೌದು. ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದ್ದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆದಿದ್ದು ಇತಿಹಾಸ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ವೈಶಿಷ್ಟ್ಯವಿದು ಆಚರಣ</font><font style='font-size:11pt;'>ೆ </font><font style='font-size:11pt; color:#000000;'></font><br/><font  style='font-size:11pt; color:#000000'>ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ, ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮನರಂಜನಾ ಕಲೆಗಳ ಉತ್ಸ</font><font style='font-size:11pt;'>ವ </font><font style='font-size:11pt; color:#000000;'></font><br/><font  style='font-size:11pt; color:#000000'>ಆದರೆ ಈ ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿವೆಯಲ್ಲ, ಅವು ದಸರಾಕ್ಕೆ ಮೆರುಗು ನೀಡುತ್ತವೆ.</font><br/><font  style='font-size:11pt; color:#000000'>ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮುಂದಿನ ಪುಟದಲ್ಲಿ- ರಾಜ ದರ್ಬಾರ್</font><!--Image--><p class="wdp_articleLImg"><p><img src='/kn/articles/1010/04/images/img1101004081_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#0000FF'>ರಾಜ ದರ್ಬಾರ</font><font style='font-size:11pt;'>್ </font><font style='font-size:11pt; color:#000000;'></font><br/><font  style='font-size:11pt; color:#000000'>ಇದೆಲ್ಲದರ ನಡುವೆ, ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ದಸರಾ ಖಾಸಗಿ ದರ್ಬಾರ್ ಗತದಿನಗಳ ರಾಜವೈಭವವನ್ನು ಮತ್ತೆ ನಮ್ಮ ಕಣ್ಮುಂದೆ ತೆರೆದಿಡುತ್ತದೆ. ನವರಾತ್ರಿಗೆ ಮೊದಲೇ ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗುತ್ತದೆ. ಇದು ಎಲ್ಲರಿಂದ ಸಾಧ್ಯವಿಲ್ಲ. ಇದಕ್ಕಾಗಿ ತಲೆತಲಾಂತರದಿಂದ ಮೈಸೂರಿಗೆ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರನ್ನು ಕರೆತರಲಾಗುತ್ತದೆ. ಅವರೇ ಸಿಂಹಾಸನವನ್ನು ಜೋಡಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನವರಾತ್ರಿ ಸಂದರ್ಭ ಅರಮನೆಯ ಸಂಪ್ರದಾಯದಂತೆ ಪೂಜಾಕಾರ್ಯವನ್ನು ನೆರವೇರಿಸಿ ಒಡೆಯರ್ ಮನೆತನದ ರಾಜರಾದ ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಿಂಹಾಸನವನ್ನು ಅಲಂಕರಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಸಂದರ್ಭ ಫಳಫಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು, ಅಲ್ಲದೆ ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ ಒಡೆಯರ್ ದರ್ಬಾರ್ ಹಾಲ್‌ಗೆ ಬರುತ್ತಿದ್ದಂತೆಯೇ ಇಂದ್ರನ ಐಭೋಗವನ್ನು ನೆನಪಿಸುವಂತೆ ಮಾಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನವರಾತ್ರಿಯ ಮೊದಲ ದಿನ ಅಂದರೆ  ಪಾಡ್ಯದ ದಿನ ಶ್ರೀಕಂಠದತ್ತ ಒಡೆಯರ್ ಅವರಿಗೆ ಬೆಳಿಗ್ಗೆ ಎದ್ದ ತಕ್ಷಣ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳ ಸ್ನಾನ ಮಾಡಲಾಗುತ್ತದೆ. ಮುತ್ತೈದೆಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಒಡೆಯರ್‌ಗೆ ಆರತಿ ಬೆಳಗುತ್ತಾರೆ. ಇದಾದ ನಂತರ ಒಡೆಯರ್ ಪೂಜೆಗೆ ಅಣಿಯಾಗುತ್ತಾರೆ.</font><br/><font  style='font-size:12pt; color:#000000'></font><br/><!--Image--><p class="wdp_articleRImg"><p><img src='/kn/articles/1010/04/images/img1101004081_2_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಕಳಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಒಡೆಯರ್ ಜೊತೆಗೆ ಅವರ ಶ್ರೀಮತಿ ಪ್ರಮೋದಾದೇವಿ ಸಹ ರಾಜಮನೆತನದ ಪದ್ಧತಿಯಂತೆ ಕಂಕಣ ಧರಿಸುತ್ತಾರೆ. ಇಲ್ಲಿಂದಲೇ ಎಲ್ಲಾ ರೀತಿಯ ಕಠಿಣ ವ್ರತಗಳು ಪ್ರಾರಂಭವಾಗುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಹಲವು ಪೂಜಾವಿಧಿಗಳು ಸಾಂಗೋಪವಾಗಿ ನಡೆಯುತ್ತವೆಯಲ್ಲದೆ, ದೇವಿ ಭಾಗವತವನ್ನು ಪಾರಾಯಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮಹಿಷಾಸುರನನ್ನು ಸಂಹರಿಸಲಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೆಳಿಗ್ಗೆ ಕಂಕಣಧಾರಿಗಳಾದ ಒಡೆಯರ್ ದಂಪತಿಗಳಿಗೆ ಪೂಜೆ ಮಾಡಲಾಗುತ್ತದೆ. ಜೊತೆಗೆ ದರ್ಬಾರ್‌ಗೆ ಬರುವ ಮುನ್ನ ಪತ್ನಿ ಪ್ರಮೋದಾದೇವಿಯವರು ಸುಮಂಗಲೆಯರೊಂದಿಗೆ ಒಡೆಯರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ದಿನನಿತ್ಯ ನಡೆಯುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದರ್ಬಾರ್ ಹಾಲ್‌ಗೆ ಆಗಮಿಸುವ ಒಡೆಯರ್, ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಆ ಸ್ಥಾನಕ್ಕೆ ಬಲಗೈಯಿಂದ ಸೆಲ್ಯೂಟ್ ಹೊಡೆದು ರಾಜಗತ್ತಿನಲ್ಲಿ ಆಸೀನರಾಗುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ಕೇಳಿ ಬರುತ್ತದೆ. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಿಗ್ಗೆಯಿಂದ ಖಾಸಗಿ ದರ್ಬಾರ್ ನಡೆದರೆ, ಉಳಿದಂತೆ ಸಂಜೆ ವೇಳೆಯಲ್ಲಿ ನಡೆಯುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತವೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ. ನಂತರ ದರ್ಬಾರ್ ಆರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಖಾಸಗಿ ದರ್ಬಾರ್ ದಸರಾದ ಅತ್ಯಾಕರ್ಷಣೆಯಾಗಿರುತ್ತದೆ. ಈ ಸಂದರ್ಭ ಅರಮನೆ ಬಣ್ಣದ ಬೆಳಕಿನಿಂದ ಜಗಮಗಿಸುತ್ತಿರುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮುಂದಿನ ಪುಟದಲ್ಲಿ - ಜಂಬೂ ಸವಾರಿ </font><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1010/04/images/img1101004081_3_1.jpg' alt='Mysore Palace' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#0000FF'>ಜಂಬೂ ಸವಾರ</font><font style='font-size:11pt;'>ಿ </font><font style='font-size:11pt; color:#000000;'></font><br/><font  style='font-size:11pt; color:#000000'>ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಮಾತ್ರ ಅತ್ಯದ್ಬುತ. ಇಂತಹಾ ಒಂದು ಭವ್ಯ ಮೆರವಣಿಗೆಯನ್ನು ನಾವು ಬೇರೆಲ್ಲೂ ಕಾಣಲಾರೆವು. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯೇ ಚಿನ್ನದ ಅಂಬಾರಿ. ಮೊದಲು ಮಹಾರಾಜರು ಇದರಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಈಗ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು ಮೆರವಣಿಗೆ ನಡೆಯುತ್ತದೆ. ಈ ಅಂಬಾರಿಯ ಬಗ್ಗೆ ಹೇಳಬೇಕೆಂದರೆ ಇದರ ತೂಕ ಸುಮಾರು 750 ಕೆ.ಜಿ. ಈ ಸುಂದರ ಮಂಟಪಕ್ಕೆ ಕರಕುಶಲ ಕಲೆಗಾರರು ಚಿನ್ನದ ತಗಡನ್ನು ಹೊದಿಸಿದ್ದು ಇದರ ನಿರ್ಮಾಣಕ್ಕೆ ಬಳಕೆಯಾಗಿರುವ ಚಿನ್ನ ಸುಮಾರು 80 ಕೆ.ಜಿ.ಯಂತೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂಬಾರಿ ಮೇಲೆ 5 ಕಳಶಗಳಿದ್ದು, ಅಂಬಾರಿಯಲ್ಲಿ ಎಲೆ, ಹೂ, ಬಳ್ಳಿಗಳ ಚಿತ್ತಾರಗಳನ್ನು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ. ದಸರಾ ದಿನದಂದು ನಿಗದಿತ ಮುಹೂರ್ತದಲ್ಲಿ ವಿಧಿ ವಿಧಾನದಂತೆ ಅಂಬಾರಿಯನ್ನು ಬಲರಾಮನಿಗೆ ಹೊರಿಸಲಾಗುತ್ತದೆ. ಇದರೊಂದಿಗೆ ಸಿಂಗಾರಗೊಂಡ ಇತರ 12 ಆನೆಗಳು ಹೆಜ್ಜೆ ಹಾಕುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಸಂದರ್ಭ ನಡೆಯುವ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳ ಕವಾಯತ್, ವಿವಿಧ ಜಾನಪದ ಕಲಾ ತಂಡಗಳು, ವಿವಿಧ ಇಲಾಖೆಗಳಲ್ಲದೆ, ವಿವಿಧ ಜಿಲ್ಲೆಯ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ  ಪಾಲ್ಗೊಂಡು ಮನಸೆಳೆಯುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅರಮನೆಯ ಆವರಣದಿಂದ ಆರಂಭವಾಗುವ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಅಂದು ರಾತ್ರಿ ನಡೆಯುವ ಪಂಜಿನ ಮೆರವಣಿಗೆ, ಬೈಕ್ ರೇಸ್, ಬಾಣಬಿರುಸು ಪ್ರದರ್ಶನದೊಂದಿಗೆ ದಸರಾಕ್ಕೆ ವಿದಾಯ ಹೇಳಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂದಿಗೆ ದಸರಾದ ಆಚರಣೆಗಳು ಮುಗಿದು ಹೋಗಬಹುದು. ಆದರೆ ದಸರಾ ಸಂಭ್ರಮ ಮಾತ್ರ ಹಲವು ದಿನಗಳವರೆಗೆ ಮೈಸೂರಿನಲ್ಲಿ ಹಾಗೆಯೇ ಉಳಿಯುತ್ತದೆ. ದಸರಾದ ಸುಂದರ ಕ್ಷಣಗಳನ್ನು ಹತ್ತಿರದಿಂದ ಸವಿದ ಪ್ರೇಕ್ಷಕ ಅದೇ ಗುಂಗಿನಲ್ಲಿ ಮುಂದಿನ ದಸರಾಕ್ಕೆ ಕಾಯುತ್ತಾನೆ... </font>]]></content:encoded>
      <pubDate>Tue, 27 Sep 2011 17:18:10 +0530</pubDate>
      <updatedDate>Tue, 15 Apr 2014 16:10:35 +0530</updatedDate>
      <category><![CDATA[Dasara Article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಮೈಸೂರು ದಸರಾ ಜಂಬೂ ಸವಾರಿಯ ರೂವಾರಿಗಳು]]></title>
      <link>https://kannada.webdunia.com/article/dasara-article/ಮೈಸೂರು-ದಸರಾ-ಜಂಬೂ-ಸವಾರಿಯ-ರೂವಾರಿಗಳು-110092000056_1.htm</link>
      <guid>https://kannada.webdunia.com/article/dasara-article/ಮೈಸೂರು-ದಸರಾ-ಜಂಬೂ-ಸವಾರಿಯ-ರೂವಾರಿಗಳು-110092000056_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ಶ್ರೀರಾಮ, ಅಭಿಮನ್ಯು, ಹರ್ಷ, ವಿಕ್ರಮ್, ಸರಳ, ಕಾಂತಿ ಸೇರಿ ಹನ್ನೆರಡು ಆನೆಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಆಗಮಿಸಿರುವ ಬಲರಾಮ, ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ ಆನೆಗಳಿಗೆ ...]]></description>
      <content:encoded><![CDATA[(<font  style='font-size:11pt; color:#0000FF'>ಚಿತ್ರ, ಲೇಖನ :ಬಿ.ಎಂ.ಲವಕುಮಾರ್, ಮೈಸೂರು )</font><font style='font-size:12pt; color:#000000;'></font><br/><!--Image--><p class="wdp_articleLImg"><p><img src='/kn/articles/1009/20/images/img1100920056_1_1.jpg' alt='BALARAMA, ARJUNA, ABHIMANYU, GAJENDRA, VARALAKSHMI, SARALA'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಆನೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಜೊತೆಗೆ ಜಂಬೂ ಸವಾರಿಯ ರೂವಾರಿಗಳೂ ಹೌದು. ಆನೆಗಳಿಲ್ಲದ ದಸರಾವನ್ನು ಊಹಿಸಲೂ ಸಾಧ್ಯವಿಲ್ಲ. ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಆಗಮಿಸುವ ಗಜಪಡೆ, ಕಾಡಿನಿಂದ ನಗರ ಪ್ರವೇಶಿಸುತ್ತಿದ್ದಂತೆಯೇ ಮೈಸೂರಿಗೆ ದಸರಾ ಕಳೆ ಬಂದು ಬಿಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಸರಾಕ್ಕೆ ಸುಮಾರು ಒಂದೂವರೆ ತಿಂಗಳಿರುವಾಗಲೇ ನಾಗರಹೊಳೆಯ ವೀರನಹೊಸಹಳ್ಳಿಯಿಂದ ಬಲರಾಮ ನೇತೃತ್ವದ ಆರು ಆನೆಗಳ ಮೊದಲ ತಂಡದ ಗಜಪಯಣ ಮೈಸೂರಿಗೆ ಆಗಮಿಸಿದರೆ, ಆ ನಂತರ ದಸರಾಕ್ಕೆ ಕೆಲವೇ  ದಿನಗಳ ಅಂತರದಲ್ಲಿ ಉಳಿದ ಆರು ಆನೆಗಳ ಎರಡನೆಯ ತಂಡ ಬರುತ್ತದೆ. ಈ ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ದಿನನಿತ್ಯ ವಿವಿಧ ಬಗೆಯ ಭೂರೀ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಬಲರಾಮನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದ ಸೈಡ್ ಐಟಂಗಳೂ ಇರುತ್ತವೆ. ಇದಲ್ಲದೆ,  ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತದೆ. ದಿನಕ್ಕೆರಡು ಬಾರಿ ಅರಮನೆ ಆವರಣದ ತೊಟ್ಟಿಯಲ್ಲಿ ಮಜ್ಜನದ ವೈಭೋಗ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಸಿದ್ಧವಾಗಿರಲು ಬಲರಾಮನಿಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆಯನ್ನು ಕಟ್ಟಿ ದಿನಕ್ಕೊಮ್ಮೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿ ಮಂಟಪದವರೆಗೆ ಕಡ್ಡಾಯ ಮಾರ್ಚ್‌ಫಾಸ್ಟ್ ನಡೆಯುತ್ತದೆ. ಈ ಗಜಪಡೆಯ ಉಸ್ತುವಾರಿಗೆ ಮಾವುತರು, ಕಾವಡಿಗರು ಇರುವುದರೊಂದಿಗೆ ಪಶುವೈದ್ಯಾಧಿಕಾರಿಗಳಿಂದ ಆಗಾಗ್ಗೆ ತಪಾಸಣೆಯೂ ನಡೆಯುತ್ತಿರುತ್ತದೆ. ಈ ಗಜಪಡೆಯನ್ನು ಜತನದಿಂದ ನೋಡಿಕೊಳ್ಳಲು ಮಾವುತರ ಕುಟುಂಬಗಳಿಗೆ ಅರಮನೆಯ ಆವರಣದಲ್ಲಿಯೇ ಶೆಡ್ ಹಾಕಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.</font><br/><font  style='font-size:12pt; color:#000000'></font><br/><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1009/20/images/img1100920056_1_2.jpg' alt='Gaja Payana' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#000000'>ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ಶ್ರೀರಾಮ, ಅಭಿಮನ್ಯು, ಹರ್ಷ, ವಿಕ್ರಮ್, ಸರಳ, ಕಾಂತಿ ಸೇರಿ ಹನ್ನೆರಡು ಆನೆಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಆಗಮಿಸಿರುವ ಬಲರಾಮ, ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ ಆನೆಗಳಿಗೆ ತಾಲೀಮು ನಡೆಯುತ್ತಿದೆ. ಉಳಿದ ಗಜಗಳ ಎರಡನೆಯ ತಂಡ ಈ ತಿಂಗಳ ಕೊನೆಯ ವಾರದಲ್ಲಿ ಮೈಸೂರು ಪ್ರವೇಶಿಸಲಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ದಿನನಿತ್ಯ ಕಠಿಣ ತಾಲೀಮು ನಡೆಸಿ ದಸರಾ ದಿನದಂದು ಕಣ್ಣು ಕುಕ್ಕಿಸುವಂತಹ ವೇಷಭೂಷಣಗಳಿಂದ ಕಂಗೊಳಿಸುತ್ತಾ ಗಾಂಭೀರ್ಯದ ಹೆಜ್ಜೆಯನ್ನಿಡುತ್ತಾ ಮೆರವಣಿಗೆಯಲ್ಲಿ ಸಾಗುವ ಗಜಪಡೆಗಳ ಬಗ್ಗೆ ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಈ ಬಾರಿಯ ಗಜಪಡೆಯ ವಿವರ ಹೀಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಬಲರಾ</font><font style=' color:#000000;'>ಮ: ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ 52 ವರ್ಷ. ಸೌಮ್ಯ ಸ್ವಭಾವದ ಈತ 2.70 ಮೀಟರ್ ಎತ್ತರ ಇದ್ದಾನೆ. ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಅರ್ಜು</font><font style=' color:#000000;'>ನ: ಕಳೆದ 9 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನನಿಗೆ ಈಗ 49 ವರ್ಷ. ಈತನ ಎತ್ತರ 2.65 ಮೀಟರ್. 1969ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಪ್ರಸ್ತುತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಿಂದ ಈತ ಬಂದಿದ್ದಾನೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮೇರ</font><font style=' color:#000000;'>ಿ: 54 ವರ್ಷದ ಹೆಣ್ಣಾನೆ ಮೇರಿ 2.11 ಮೀಟರ್ ಎತ್ತರವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿದೆ. ಇದನ್ನು 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದುವರೆಗೆ 9 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.</font><br/><font  style='font-size:11pt; color:#0000FF'></font><br/>'<font  style='font-size:11pt; color:#0000FF'>ಪಟ್ಟದ ಆನ</font><font style='font-size:11pt;'>ೆ' </font><font style='font-size:11pt;'>ಗಜೇಂದ್</font><font style=' color:#000000;'>ರ: ಚಾಮರಾಜನಗರ ವನ್ಯಜೀವಿ ವಿಭಾಗದ  ಕೆ.ಗುಡಿ ಆನೆಶಿಬಿರದಿಂದ ಬಂದಿರುವ ಗಜೇಂದ್ರನಿಗೆ ಈಗ 55 ವರ್ಷ. 2.80 ಮೀಟರ್ ಎತ್ತರವಿದ್ದಾನೆ. ಈತನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ಗಜೇಂದ್ರನಿಗೆ 14 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ.</font><br/> <font  style='font-size:11pt; color:#0000FF'></font><br/><font  style='font-size:11pt; color:#0000FF'>ಕವಿತ</font><font style=' color:#000000;'>ಾ: ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ 1977ರಲ್ಲಿ ಕವಿತಾಳನ್ನು ಖೆಡ್ಡದಲ್ಲಿ ಸೆರೆಹಿಡಿಯಲಾಗಿದ್ದು, ಈಕೆಗೆ ಈಗ 69 ವರ್ಷ. ಸುಮಾರು 2.35 ಮೀಟರ್ ಎತ್ತರವಿರುವ ಕವಿತಾ, ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದ್ದಾಳೆ. 5 ಬಾರಿ ದಸರಾದಲ್ಲಿ ಪಾಲ್ಗೊಂಡ ಅನುಭವವಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ವರಲಕ್ಷ್ಮ</font><font style=' color:#000000;'>ಿ: ಈ ಆನೆಯನ್ನು 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆಶಿಬಿರದಿಂದ ಬಂದಿದೆ. 7ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.</font><font style=' color:#0000FF;'></font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಶ್ರೀರಾ</font><font style=' color:#000000;'>ಮ: ಇದರ ಅಂದಾಜು ವಯಸ್ಸು 53. ಎತ್ತರ 2.65 ಮೀಟರ್. 1969ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆ ಹಿಡಿಯಲಾಗಿತ್ತು. ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿರುವ ವರಲಕ್ಷ್ಮಿ ಕಳೆದ 13 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟ್ಟದ ಆನೆಯ ಜೊತೆ ಅರಮನೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸುತ್ತಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಅಭಿಮನ್ಯ</font><font style=' color:#000000;'>ು: ಇದರ ವಯಸ್ಸು 44. ಎತ್ತರ 2.66 ಮೀಟರ್. ಕಾಡಾನೆಯನ್ನು ಹಿಡಿದು ಪಳಗಿಸುವ  ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಇದನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆಹಿಡಿಯಲಾಗಿತ್ತು. 12 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು, ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್ ಆನೆ ಶಿಬಿರದಿಂದ ಬಂದಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಹರ್</font><font style=' color:#000000;'>ಷ: ಕೊಡಗಿನ ಕುಶಾಲನಗರ ಬಳಿ</font><font style='font-size:11pt;'>ಯ </font><font style='font-size:11pt;'>ದುಬಾರೆ ಆನೆ ಶಿಬಿರದಿಂದ ಬಂದಿರುವ ಹರ್ಷನ ವಯಸ್ಸು 44. ಎತ್ತರ 2.57 ಮೀಟರ್. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹನ್ನೊಂದನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ವಿಕ್ರಮ</font><font style=' color:#000000;'>್: ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮ್‌ಗೆ 38 ವರ್ಷ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಇದು 9ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಸರಳ</font><font style=' color:#000000;'>ಾ: ಕಳೆದ ಆರು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ 69 ವರ್ಷದ ಸರಳಾಳನ್ನು 1977ರಲ್ಲಿ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆಶಿಬಿರದಿಂದ ಬಂದಿದೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಕಾಂತ</font><font style=' color:#000000;'>ಿ: ಗಜಪಡೆಗಳಿಗೆಲ್ಲಾ ಹಿರಿಯಜ್ಜಿಯಾಗಿರುವ ಕಾಂತಿಗೆ ಈಗ 71 ವರ್ಷ. 2.10 ಮೀಟರ್ ಎತ್ತರವಿರುವ ಇದು ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದೆ. 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು. ಇದುವರೆಗೆ 16 ಬಾರಿ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದೆ.</font>]]></content:encoded>
      <pubDate>Mon, 20 Sep 2010 17:17:32 +0530</pubDate>
      <updatedDate>Tue, 15 Apr 2014 15:59:58 +0530</updatedDate>
      <category><![CDATA[Dasara Article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಏನೂಂದ್ರೆ, ನಿಮ್ಮನೇಲಿ ಗೊಂಬೆಗಳ್ನ ಕೂರಿಸಿದ್ರಾ?]]></title>
      <link>https://kannada.webdunia.com/article/dasara-article/ಏನೂಂದ್ರೆ-ನಿಮ್ಮನೇಲಿ-ಗೊಂಬೆಗಳ್ನ-ಕೂರಿಸಿದ್ರಾ-108092900058_1.htm</link>
      <guid>https://kannada.webdunia.com/article/dasara-article/ಏನೂಂದ್ರೆ-ನಿಮ್ಮನೇಲಿ-ಗೊಂಬೆಗಳ್ನ-ಕೂರಿಸಿದ್ರಾ-108092900058_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚೆಲುವಿನ ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳ ...]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0809/29/images/img1080929058_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> <font  style='font-size:11pt; color:#000000'>ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚೆಲುವಿನ ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳ ಷೋಕೇಸಿನಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಮೈದಳೆಯುತ್ತವೆ. ಪುಟಿದೆದ್ದ ಚಿನ್ನದಂತೆ ಚಿಣ್ಣರ ಕಣ್ಗಳ ಕನಸಿನ ಕೂಸಾಗಿ ಉಪ್ಪರಿಗೆ ಏರಿ ಮಾಯಾಲೋಕವನ್ನೇ ಸೃಷ್ಟಿ ಮಾಡುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಲೋಕದಲ್ಲಿ ಬೊಂಬೆಗಳಿಗ್ಯಾವ ಭೇದವಿಲ್ಲ. ಕಿನ್ನರ ಲೋಕದ ಗಂಧರ್ವರಂತೆ ಕ್ರಿಕೆಟಿಗರಿಂದ ಹಿಡಿದು ದೇವ, ದಾನವರ ಜೊತೆಗೆ ರಾಷ್ಟ್ರದ ಹಿರಿಯ ಚೇತನಗಳು, ನೇತಾರರೂ ಸಹ ಇಲ್ಲಿ ಕಾಣಸಿಗುತ್ತಾರೆ. ಗೊಂಬೆಗಳಿಗೆ ಅಲಂಕರಿಸುವುದ ನೋಡುವ ಪರಿಯೇ ವಿಶಿಷ್ಟ. ಅವರವರ ಕಲಾತ್ಮಕ ಭಾವನೆಗಳು ಅಲಂಕಾರದ ಸಾಧನಗಳಾಗಿ, ಕನಸಿನ ಪುತ್ಥಳಿಗಳಾಗಿ ನೋಡುಗರ ಕಣ್ಮನ ಸೆಳೆಯುತ್ತವೆ. ಬೊಂಬೆಗಳನ್ನು ಅಲಂಕರಿಸುವ ಪರಿಪಾಠ ವಿಜಯನಗರದರಸರ ಕಾಲದಿಂದಲೂ ಬಂದಿದೆ. ಸನಾತನ ಸಂಪ್ರದಾಯವನ್ನು ಸವಿಯ ಬೇಕೆನ್ನಿಸಿದರೆ ನೀವು ಮೈಸೂರಿಗೆ ಬರಲೇ ಬೇಕು. ಇಲ್ಲಿನ ಬೀದಿ ಬೀದಿಗಳೂ, ಮನೆ ಮನೆಗಳೂ ಬೊಂಬೆಗಳ ಸಾಲಂಕೃತ. ಮೈಸೂರಲ್ಲಿ ನವರಾತ್ರಿ ಹಬ್ಬದಲ್ಲಿ ಸಿಂಗರಿಸಲಿಕ್ಕೆಂದೇ ಗೊಂಬೆಗಳನ್ನು ತಯಾರಿಸುತ್ತಾರೆ. ಪಕ್ಕದ ಪ್ರಾಂತ್ಯಗಳಾದ ಶ್ರೀರಂಗಪಟ್ಟಣ, ಚೆನ್ನಪಟ್ಟಣ, ರಾಮನಗರಂನಿಂದ ತಯಾರಿಸಿ ತಂದ ಸಾವಿರಾರು ಬೊಂಬೆಗಳು ಈ ದಿನಗಳಲ್ಲಿ ಇಲ್ಲಿ ಮಾರಾಟವಾಗುತ್ತವೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ಮದುಮಗನಂತೆ ಸಿಂಗರಿಸಿಕೊಂಡ ಗಂಡು ಬೊಂಬೆಯ ಬದಿಯಲ್ಲಿ ಮದುಮಗಳಂತೆ ಸಿಂಗರಿಸಿದ ಹೆಣ್ಣಿನ ಬೊಂಬೆಯನ್ನು ಇರಿಸಿ ಪಟ್ಟಕ್ಕೇರಿಸುತ್ತಾರೆ. ಪಟ್ಟಕ್ಕೆ ಕೂತ ಬೊಂಬೆಯ ಸುತ್ತಣ ಕಿನ್ನರ ಲೋಕವೇ ಸೃಷ್ಟಿಯಾಗುತ್ತದೆ. ಬೊಂಬೆಗಳಿಗೆ ಮತ್ತೂ ಮೆರುಗು ಕೊಡುವಂತೆ ಹಸಿರ ಲೋಕ, ಬಣ್ಣದ ಬೆಳಕಿನ ಲೋಕ, ಪುಟಿದೇಳುವ ನೀರ ಕಾರಂಜಿಯ ಲೋಕವೇ ಸೃಷ್ಟಿಯಾಗುತ್ತದೆ. ಮಂಗಳ ಸೂಚಕವಾಗಿ ಪಟ್ಟದ ಬೊಂಬೆಗಳ ಮುಂದೆ ಕಲಶವನ್ನು ಸ್ಥಾಪಿಸಿ ಹೂವು, ಪತ್ರೆಗಳೇರಿಸಿ ದೈವತ್ವದ ಭಾವನೆಯನ್ನು ಕಾಣುತ್ತಾರೆ. ಸಿಂಗರಿಸಿದ ಬೊಂಬೆಗಳಿಗೆ ಬೊಂಬೆ ಬಾಗಿನ ಮಾಡಿ, ಬೊಂಬೆಗಳ ಮುಂದಿರಿಸಿ ಬೊಂಬೆ ನೋಡಲು ಬರುವ ಚಿಣ್ಣರ ಪುಟ್ಟ ಕೈಗಳ ತುಂಬಾ ಬೊಂಬೆ ಬಾಗಿನದ ತಿಂಡಿಗಳನ್ನಿರಿಸಿ ಸಂತೋಷ ಪಡುತ್ತಾರೆ. ಬೊಂಬೆಗಳ ಹಬ್ಬ ಎಂದರೆ ಚಿಣ್ಣರ ಹಬ್ಬ ಎಂದೇ ರೂಢಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಳರಸರ ಕಾಲದಲ್ಲಿ ದಂತ, ಶ್ರೀಗಂಧ, ಹಿತ್ತಾಳೆ, ಬೆಳ್ಳಿ, ಕಂಚಿನ ಬೊಂಬೆಗಳಿದ್ದರೆ ಕಾಲಕ್ರಮೇಣ ಇಂದು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರೀಸ್, ಪ್ಲಾಸ್ಟಿಕ್, ಪಿಂಗಾಣಿ, ಪೇಪರ್ ಪೇಸ್ಟಿನ ಬೊಂಬೆಗಳು ಕಾಣಬರುತ್ತವೆ. ಅಂದಿನ ಬೊಂಬೆಗಳು ಸಂಸ್ಕೃತಿಯ ಪ್ರತೀಕವಾಗಿದ್ದರೆ ಇಂದಿನ ಬೊಂಬೆಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ದಿನಗಳಲ್ಲಿ ಬೊಂಬೆಗಳು ಒಂದು ಚರಿತ್ರೆಯನ್ನೇ ಹೇಳುತ್ತಿದ್ದವು ಆದರೆ ಈಗಿನ ದಿನಗಳಲ್ಲಿ ಅದೊಂದು ಸಾಂಪ್ರದಾಯಿಕ ಉತ್ಸವವಾಗಿದ್ದು ವೈವಿಧ್ಯಕ್ಕೆ, ಬಾಹ್ಯಾಡಂಬರಕ್ಕೇ ಹೆಚ್ಚಿನ ಒತ್ತು. ಬೊಂಬೆಗಳೋತ್ಸವದಲ್ಲಿ ವರ್ತಮಾನದ ಕಾಯಕಗಳನ್ನು ಪ್ರತಿಬಿಂಬಿಸುವುದಕ್ಕೇ ಮೊದಲ ಆದ್ಯತೆ. ಮೈಸೂರಲ್ಲಿ ಸುಮಾರು ನಲವತ್ತು, ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬೊಂಬೆ ಕೂಡಿಸುವ ಪರಿಪಾಠ ಇಟ್ಟುಕೊಂಡಿರುವ ಹತ್ತಾರು ಮನೆಗಳನ್ನು ಹಳೇ ಮೈಸೂರು ಪ್ರಾಂತ್ಯದಲ್ಲಿ ನೋಡಬಹುದು. ಉದಾಹರಣೆಗೆ ಅಗ್ರಹಾರದ ಗಾಯತ್ರಿ ಶಂಕರ್‌ರವರು. ಮಹಾಭಾರತ, ರಾಮಾಯಣ, ಮಹಿಷಾಸುರ ಮರ್ದಿನಿ, ಭಾಗವತ ಹೀಗೆ ಹತ್ತು ಹಲವಾರು ಸನ್ನಿವೇಶಗಳು, ಕಥಾನಕಗಳು ಪಟ್ಟದ ಬೊಂಬೆಗಳ ಜೊತೆ ಕಲೆಯಲ್ಲೇ ಅರಳಿ ಬೊಂಬೆಗಳಾಗಿ ನಿಂತಾಗ ನೋಡುವುದೇ ಆನಂದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಧುನಿಕ ಜಂಜಾಟದಲ್ಲಿ ಬೊಂಬೆಗಳು ತಮ್ಮ ಸ್ಥಾನ ಕಳೆದುಕೊಳ್ಳುತ್ತಿವೆ. ಬದಲಾದ ಪರಿಸ್ಥಿತಿಗನುಗುಣವಾಗಿ ಬೊಂಬೆಗಳ ಬೆಲೆಗಳೂ ಗಗನಕ್ಕೇರುತ್ತಿದೆ. ಕೊಳ್ಳುಗರು ಕಡಿಮೆಯಾದಂತೆ ಗೊಂಬೆಗಳ ತಯಾರಕರು ಚಿಂತಾಕ್ರಾಂತರಾಗುತ್ತಿದ್ದಾರೆ. ಮಾಡಿದ ಬೊಂಬೆಗಳ ಮಾರಾಟ ಮಾಡಲು ದಸರೆ ಆಸರೆಯಾದೀತೆ ಎಂದು ಆಗಸದತ್ತ ಕೈ ಚೆಲ್ಲಿ ಕೂತಿದ್ದಾನೆ.</font>]]></content:encoded>
      <pubDate>Sat, 19 Sep 2009 17:03:46 +0530</pubDate>
      <updatedDate>Tue, 15 Apr 2014 12:03:34 +0530</updatedDate>
      <category><![CDATA[Dasara Article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಬನ್ನಿ, ನಾಡ ಹಬ್ಬದೊಳಗೆ ನೆಮ್ಮದಿಯನರಸೋಣ..]]></title>
      <link>https://kannada.webdunia.com/article/dasara-article/ಬನ್ನಿ-ನಾಡ-ಹಬ್ಬದೊಳಗೆ-ನೆಮ್ಮದಿಯನರಸೋಣ-109091900055_1.htm</link>
      <guid>https://kannada.webdunia.com/article/dasara-article/ಬನ್ನಿ-ನಾಡ-ಹಬ್ಬದೊಳಗೆ-ನೆಮ್ಮದಿಯನರಸೋಣ-109091900055_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ನೆಮ್ಮದಿ ಬೇಕೆನ್ನಿಸಿದರೆ ನೀವು ಮೈಸೂರನ್ನು ಅರಸಲೇಬೇಕು. ಹಳೆಯ ಸೊಗಡಿನ ತಾಳಕ್ಕೆ ನೀವು ಮನಸೋಲಲೇ ಬೇಕು. ಪಾರಂಪರಿಕ ಸೌಧಗಳು, ಅರಮನೆಯ ವೈಭೋಗದ ಕುರುಹುಗಳು, ಭವ್ಯ ಪ್ರಾಕಾರ ಮಂದಿರ, ಮಂಟಪಗಳು, ಹಸಿರುಡುಗೆಯಲ್ಲಿ ಮಿಂದ ಉದ್ಯಾನಗಳು ಒಂದೇ ಎರಡೇ ಮನಗಳ ಸೂರೆಗೊಳ್ಳುವುದಕ್ಕೆ, ಮುದುಡಿದ ಮನಗಳಿಗೆ ಚೇತನ ಕೊಟ್ಟು ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/0909/19/images/img1090919055_1_1.jpg' alt='Banni Mantapa Pooja'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>NRB</p></p><!--endImage--> <font  style='font-size:11pt; color:#000000'>ನೆಮ್ಮದಿ ಬೇಕೆನ್ನಿಸಿದರೆ ನೀವು ಮೈಸೂರನ್ನು ಅರಸಲೇಬೇಕು. ಹಳೆಯ ಸೊಗಡಿನ ತಾಳಕ್ಕೆ ನೀವು ಮನಸೋಲಲೇ ಬೇಕು. ಪಾರಂಪರಿಕ ಸೌಧಗಳು, ಅರಮನೆಯ ವೈಭೋಗದ ಕುರುಹುಗಳು, ಭವ್ಯ ಪ್ರಾಕಾರ ಮಂದಿರ, ಮಂಟಪಗಳು, ಹಸಿರುಡುಗೆಯಲ್ಲಿ ಮಿಂದ ಉದ್ಯಾನಗಳು ಒಂದೇ ಎರಡೇ ಮನಗಳ ಸೂರೆಗೊಳ್ಳುವುದಕ್ಕೆ, ಮುದುಡಿದ ಮನಗಳಿಗೆ ಚೇತನ ಕೊಟ್ಟು ಒಂದು ಮಾಡುವುದಕ್ಕೆ!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅರಮನೆಯ ಮುಂದಿನ ವಿಶಾಲ ರಹದಾರಿಯಲ್ಲಿ ಹಳೆಯ ಕುರುಹುಗಳಲ್ಲೊಂದಾದ ಟಾಂಗಾಗಳನ್ನೇರಿ ಸವಾರಿ ಹೊರಟರೆ ಆಹಾ ಏನು ಮಜಾ.. ಅನುಭವಿಸಿಯೇ ತೀರಬೇಕು. ಮೈಸೂರಲ್ಲಿ ವಿಶೇಷವಾದ ಮುಂಬಯಿಯ ವಿಕ್ಟೋರಿಯಾ ಟಾಂಗಾ ಹಾಗೂ ಮೈಸೂರು ಮಹಾರಾಜರ ಕಾಲದ ಷಾ ಪಸಂದ್ ಟಾಂಗಾಗಳಿವೆ. ಈಗಲೂ ಮೈಸೂರ ಮೂಲೆ ಮೂಲೆಗಳಲ್ಲಿ ತಡಕಾಡಿದರೆ ಅಲ್ಲೊಂದು ಇಲ್ಲೊಂದು ಟಾಂಗಾಗಳಲ್ಲಿ ಆ ದಿನಗಳನ್ನು ನೆನಪಿಗೆ ತರುವಂತಹ ಟಾಂಗಾಗಳಿದ್ದು ಅವುಗಳಲ್ಲಿ ದೀಪಗಳಿವೆ. ದಸರಾ ದಿನಗಳಲ್ಲಿ ಮೈಸೂರು ಸುತ್ತಲು ಟಾಂಗಾಗಳಿಗೆ ಎಲ್ಲಿಲ್ಲದ ಬೇಡಿಕೆ. </font><br/><font  style='font-size:12pt; color:#000000'></font><br/><!--Image--><p class="wdp_articleRImg"><p><img src='/kn/articles/0909/19/images/img1090919055_1_2.jpg' alt='Mysore Palace'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>NRB</p></p><!--endImage--> <font  style='font-size:11pt; color:#000000'>ದಸರೆಯ ಈ ದಿನಗಳಲ್ಲಿ ಮೈಸೂರಲ್ಲಿ ನೋಡಲೇನಿದೆ ಅಂತ ಹುಬ್ಬೇರಿಸಬೇಡಿ. ನೋಡುತ್ತಾ ಹೋದರೆ ದಿನಗಳೇ ಸಾಲದು. ಚಾಮುಂಡಿ ಬೆಟ್ಟದ ಬುಡದಲ್ಲಿನ ನಂದಿ, ಮೇಲಿರುವ ಮಹಿಷಾಸುರನಿಂದ ಹಿಡಿದು ಅರಮನೆ, ವಸ್ತು ಪ್ರದರ್ಶನ ಕ್ರೀಡಾಂಗಣ, ಲಲಿತಮಹಲ್ ಪ್ಯಾಲೇಸ್ ಹೀಗೆ ಹತ್ತು ಹಲವಾರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಾಂಬೆ ಟಿಫಾನಿಸ್, ಇಂದ್ರ ಭವನ್, ರಾಘವೇಂದ್ರ ಭವನ್, ಬಾಂಬೆ ಪರಾಸ್‌ನಂತಹ ಹಳೆಯ ಹೋಟೆಲ್‌ಗಳು ರಾಜರ ಕಾಲದಿಂದಲೂ ಇದ್ದು, ಇಂದಿಗೂ ತನ್ನ ರುಚಿಗೆ, ಅಚ್ಚುಕಟ್ಟುತನಕ್ಕೆ ಜನಪ್ರಿಯವಾಗಿದೆ. ಇನ್ನು ಮೇಯೋ ಹಾಲ್, ಕ್ಲಾಕ್ ಟವರ್, ಜಗನ್ಮೋಹನ ಪ್ಯಾಲೇಸ್, ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರ, ವೀಣೆ ಶೇಷಣ್ಣನವರ ಗಾನಭಾರತೀ ಹೀಗೆ ಹತ್ತು ಹಲವಾರು ಹಳೆಯ ಕಟ್ಟಡಗಳು ಕಣ್ಮನ ಸೆಳೆಯುತ್ತವೆ.</font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/0909/19/images/img1090919055_1_3.jpg' alt='Jamboo Savari'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>NRB</p></p><!--endImage--> <font  style='font-size:11pt; color:#000000'>ಮೈಸೂರು ಅರಮನೆಯನ್ನು ಇಂಡೋಸಾರ್ಸನಿಕ್ ಶೈಲಿಯಲ್ಲಿ 1897ರಲ್ಲಿ ನಿರ್ಮಿಸಲಾರಂಭಿಸಿ 1912ರಲ್ಲಿ ಪೂರ್ಣಗೊಳಿಸಲಾಯಿತು. ಅಂಬಾವಿಲಾಸ (ಖಾಸಗಿ ದರ್ಬಾರು ನಡೆಯುವ ಸ್ಥಳ), ದಸರಾ ಮೆರವಣಿಗೆಯ ಬೃಹತ್ ತೈಲವರ್ಣದ ಚಿತ್ರಣ, ಕಲ್ಯಾಣ ಮಂಟಪದ ಕೊಠಡಿಗಳನ್ನು ಅರಮನೆ ಒಳಗೊಂಡಿದೆ. ದಸರಾ ಅವಧಿಯಲ್ಲಿ ಮಾತ್ರ ಅರಮನೆಯಲ್ಲಿ ಚಿನ್ನದ ಸಿಂಹಾಸನ ನೋಡಲು ಅವಕಾಶವಿದೆ. ರಾತ್ರಿ ವೇಳೆ ಅರಮನೆಯು 96 ಸಾವಿರ ಬಲ್ಬುಗಳಿಂದ ಬೆಳಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ಚಾಮರಾಜೇಂದ್ರ ಮೃಗಾಲಯ 250 ಎಕೆರೆ ಸ್ಥಳಾವಕಾಶದಲ್ಲಿದೆ. ಇದನ್ನು ರಾಷ್ಟ್ರದ ಪ್ರಥಮ ಮೃಗಾಲಯವೆಂದೂ ಕರೆಯುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಗನ್ಮೋಹನ ಅರಮನೆ 1900ರಲ್ಲಿ ಕಟ್ಟಿದ್ದಾದರೂ ಇಂದಿಗೂ ಮನಮೋಹಕವಾಗಿದೆ. ಇದನ್ನು ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕಲಾ ಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. 1954ರಲ್ಲಿ ಅಧಿಕೃತವಾಗಿ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಇಲ್ಲಿ ರಾಜ ಮನೆತನದವರ ವರ್ಣಚಿತ್ರಗಳು, ರಾಜಾ ರವಿವರ್ಮ ಮತ್ತು ಭಾರತೀಯ ಮತ್ತು ಪಾಶ್ಚಾತ್ಯ ವರ್ಣಚಿತ್ರಗಳನ್ನು ನೋಡಬಹುದಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಾಮುಂಡಿ ಬೆಟ್ಟ ನೆಲ ಮಟ್ಟದಿಂದ 3,489 ಅಡಿ ಎತ್ತರದಲ್ಲಿದ್ದು 1000 ಮೆಟ್ಟಿಲುಗಳನ್ನು ಹೊಂದಿದೆ. ರಾಜ ಮನೆತನದವರ ಆರಾಧ್ಯದೇವಿಯಾದ ಚಾಮುಂಡೇಶ್ವರಿಯ ಬೃಹತ್ ದೇವಾಲಯವು ಬೆಟ್ಟದ ಮೇಲಿದ್ದು ದ್ರಾವಿಡ ಶೈಲಿಯಲ್ಲಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೆ.ಆರ್.ಎಸ್.ನ ಬೃಂದಾವನ ಮೈಸೂರಿನಿಂದ 15 ಕಿ.ಮಿ. ದೂರದಲ್ಲಿದೆ. ಕೃಷ್ಣ ರಾಜ ಸಾಗರ (ಕೆಆರ್ಎಸ್) ರೂವಾರಿ ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಈ ಪ್ರಾಂತ್ಯಕ್ಕೆ ಅತಿ ದೊಡ್ಡದು. ಈ ಅಣೆಕಟ್ಟೆ 2621 ಮೀಟರಿಷ್ಟು ಉದ್ದ ಮತ್ತು 39 ಮೀಟರಿಷ್ಟು ಎತ್ತರವಿದೆ. ಜಲಾಶಯವು ಸುಮಾರು 130 ಚದರ ಅಡಿ ಕಿ.ಮೀ.ನಷ್ಟು ಪ್ರದೇಶದಲ್ಲಿದೆ. ಜಲಾಶಯದ ಸುತ್ತಲಿರುವ ಉದ್ಯಾನವನ, ಪುಟಿದೇಳುವ ಸಂಗೀತ ಕಾರಂಜಿ, ದೀಪಾಲಂಕಾರದಿಂದ ಅತ್ಯಾಕರ್ಷಕವಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೈಸೂರು ಎಷ್ಟು ಸುಂದರವೋ ಅಷ್ಟೇ ಸುಂದರವಾದ ಸ್ಥಳಗಳು ಅದರ ಸುತ್ತಮುತ್ತಲಿವೆ. ಅವುಗಳಲ್ಲಿ ಪ್ರಮುಖವಾಗಿ ಶ್ರೀರಂಗಪಟ್ಟಣ, ರಂಗನತಿಟ್ಟು, ನಂಜನಗೂಡನ್ನು ಹೆಸರಿಸಬಹುದು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮೈಸೂರು ಮಲ್ಲಿಗೆ, ಅದರ ಗಂಧ ಎಲ್ಲೆಎಲ್ಲೆಗೆ </font><font style=' color:#000000;'></font><br/><font  style='font-size:11pt; color:#000000'>ಮೈಸೂರು ಮಲ್ಲಿಗೆಯ ತವರೂರು. ಘಮ್ಮೆನುವ ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ ಎಲ್ಲೆ ಎಲ್ಲೆಗೆ ಹರಡಿ ಪರಿಮಳ ಬೀರುತ್ತವೆ. ಮೊಗ್ಗಿನ ಮಾಲೆಯ ಮುಡಿದು ದಸರೆಯ ಸವಾರಿ ನೋಡಲೆಂದು ಹೊರಡುವ ಹೆಂಗಳೆಯರು ಮೈಸೂರ ಚಂದಕ್ಕೊಂದು ಗರಿಮೆಯಾದರೆ ಮಲ್ಲಿಗೆಯ ರಾಶಿ ರಾಶಿಯನ್ನು ದಸರೆಯ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಕಾಣಬಹುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಹುಶಃ ಮೈಸೂರ ಮಲ್ಲಿಗೆಯ ಪರಿಮಳಕ್ಕೆ ಸೋತೇ ಪ್ರೇಮ ಕವಿ ಕೆ.ಎಸ್. ನರಸಿಂಹ ಸ್ವಾಮಿ ತಮ್ಮ ಮೈಸೂರು ಮಲ್ಲಿಗೆ ಕವನ ಸಂಕಲನದಲ್ಲಿ "ಹೂವು ಬೇಕೇ ಎಂದು ಮುಂಬಾಗಿಲಿಗೆ ಬಂದು ಕೇಳಿದಳು, ನಗು ನಗುತ ಹೂವಿನವಳು. ಬುಟ್ಟಿಯಲಿ ನೂರಾರು ಮಲ್ಲಿಗೆ ದಂಡೆಗಳು ನಗುವ ಚೆಲ್ಲಿದುವೆನ್ನ ಮುಖವ ಕಂಡು" ಎಂದು ಬರೆದಿದ್ದಾರೆ. ಮೈಸೂರು ಪ್ರವಾಸಿಗರ ಸ್ವರ್ಗವಷ್ಟೇ ಅಲ್ಲ ಮಲ್ಲಿಗೆಯ ಸೋಪಾನ ಎಂಬುದು ಇಂದಿಗೂ ಮನೆ ಮಾತು. </font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/0909/19/images/img1090919055_1_4.jpg' alt='Chamundeshwari'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>NRB</p></p><!--endImage--> <font  style='font-size:11pt; color:#000000'>ದಸರೆಯ ಮುಡಿಗೆ ಮಲ್ಲಿಗೆಯೇ ಬೇಕು. ದಸರೆಯ ದಿನಗಳಲ್ಲಿ ದೇಗುಲಗಳು ಮಲ್ಲಿಗೆಯ ಮಾಲೆಗಳಿಂದ, ಮಲ್ಲಿಗೆಯ ದಂಡೆಗಳಿಂದ ವಿಜೃಂಭಿಸುತ್ತವೆ. ಮಲ್ಲಿಗೆ ಇಂದಿಗೂ ಮೈಸೂರು ನಗರದ ಸುತ್ತ ಮುತ್ತ ಯಥೇಚ್ಛವಾಗಿ ಬೆಳೆಯುವ ಹೂವು. ಮುಂಚೆಲ್ಲಾ ಮೈಸೂರ ಅಂಗಣದ ತುಂಬೆಲ್ಲಾ ಮಲ್ಲಿಗೆಯ ತೋಟಗಳಿದ್ದವು, ಬೀರುವ ಕಂಪಿನಿಂದಾಗಿ ಮುದುಡಿದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ಅದಕ್ಕಿತ್ತು ಆದರೆ ಐಟಿ - ಬಿಟಿಗಳ ಕಂಪು, ಪಾರ್ಥೇನಿಯಂಗಳ ಕಮರು ಹರಡುತ್ತಿದ್ದಂತೆ ಮೈಸೂರಿನಲ್ಲಿ ಇಂದು ಅಷ್ಟೇನೂ ಮಲ್ಲಿಗೆಯ ಭರಾಟೆಯಿಲ್ಲ. ಆದರೆ ಅದರ ಕಂಪು ಇನ್ನೂ ಮಾಸಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಸರೆಯ ಈ ದಿನಗಳಲ್ಲಿ ಮಲ್ಲಿಗೆ ಅಲ್ಲಲ್ಲಿ ಕಂಡರೂ ನೈಜ ಮೈಸೂರು ದುಂಡು ಮಲ್ಲಿಗೆ ಕಾಣಸಿಗುವುದು ವಿರಳ. ಆದರೆ ಮಲ್ಲಿಗೆಯ ಬೀಡಾದ ಮೈಸೂರಲ್ಲೀಗ ತಮಿಳು ಮಲ್ಲಿಗೆಯ ಪರಿಮಳ. ಮೈಸೂರು ಮಲ್ಲಿಗೆ ಹೆಚ್ಚಾಗಿ ಕಾಣಸಿಗುವುದು ಎಚ್.ಡಿ.ಕೋಟೆ, ಹುಣಸೂರು, ನಂಜನಗೂಡಿನ ಆಸುಪಾಸಿನಲ್ಲಿ ಮಾತ್ರ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೈಸೂರನ್ನು ದೇವಿಯ ತವರೂರೆಂದೇ ಕರೆಯುತ್ತಾರೆ. ದೇವಿಯನ್ನು ಸಂತೃಪ್ತಿಗೊಳಿಸಲು ಮಲ್ಲಿಗೆ ಹೂವಿನ ಪೂಜೆ ಮಾಡಬೇಕೆನ್ನುತ್ತದೆ ನಮ್ಮ ಪುರಾಣಗಳು. ಬಹುಶಃ ಅದಕ್ಕೇ ಇರಬೇಕು ಇಲ್ಲಿ ಇಷ್ಟೊಂದು ಮಲ್ಲಿಗೆ ಹೂವಿನ ರಾಶಿಗಳು, ಮಲ್ಲಿಗೆ ದಂಡೆಗಳು! ವಿಸ್ಮಯ ತರುವ ವಿಚಾರವೆಂದರೆ ಮೈಸೂರು ಒಂದರಲ್ಲೇ ಪ್ರತಿ ದಿನ ಸರಾಸರಿ ಎರಡು ಸಾವಿರ ಕೆ.ಜಿ. ಮಲ್ಲಿಗೆ ಹೂವು ಖರ್ಚಾಗುತ್ತದಂತೆ. ಸಾಧಾರಣವಾಗಿ ಮಲ್ಲಿಗೆಯ ಇಳುವರಿ ಇರುವುದೇ ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ. ದಸರೆ ಬರುವುದೂ ಸಾಧಾರಣವಾಗಿ ಅಕ್ಟೋಬರ್ ತಿಂಗಳಲ್ಲೇ! ಹಾಗಾಗೇ ಮೈಸೂರು ದಸರೆಯಲ್ಲಿ ಮಲ್ಲಿಗೆಯದೇ ಸಡಗರ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮಲ್ಲಯುದ್ಧದ ಸೊಗಡುಳ್ಳ ದಸರೆ ಕ್ರೀಡಾಕೂಟ </font><font style='font-size:12pt; color:#000000;'></font><br/><!--Image--><p class="wdp_articleLImg"><p><img src='/kn/articles/0909/19/images/img1090919055_1_5.jpg' alt='Malla Yuddha'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>NRB</p></p><!--endImage--> <font  style='font-size:11pt; color:#000000'>ಮೈಸೂರ ದಸರೆಯೆಂದರೆ ಅದೊಂದು ಬಗೆಯ ರೋಮಾಂಚನ. ಮೈನವಿರೇಳುವ ದಸರೆಯ ಹತ್ತು ದಿನದ ಹಬ್ಬದ ಸಾಲಿನ ಹಿಂದೆ ಸಾಂಪ್ರದಾಯಿಕ ಆಚರಣೆಗಳ ಹೂರಣಗಳೇ ಇವೆ. ಅಂದಿನ ಆಳರಸರ ಸಾಂಪ್ರದಾಯಿಕತೆಯ ಹಳೆಯ ದಿನಗಳು ನಿಮ್ಮೆದುರು ತೆರೆದಿಡುತ್ತವೆ. ದಸರೆಯ ಉತ್ಸವದಲ್ಲಿ ಅರಮನೆ ದರ್ಬಾರು, ಚಾಮುಂಡೀ ಪೂಜೆಯೆಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆ ಹಾಗೂ ವಿಶೇಷತೆಯನ್ನು ಹೊಂದಿರುವ ದಸರಾ ಕ್ರೀಡಾ ಕೂಟ, ಆಸಕ್ತರ ಪಾಲಿನ ಸ್ವರ್ಗವೇ ಆಗಿದೆ. ಮಹಾರಾಜರ ಪರಂಪರೆ ಕಳೆಗುಂದಿದಂತೆ ಇಂದಿನ ದಿನದ ದಸರೆ ಕೇವಲ ಸಾಂಕೇತಿಕ ಸಂಭ್ರಮಕ್ಕಷ್ಟೇ ಮೀಸಲಾಗಿದೆ. ಢೀ ಢೀ ಎನ್ನುತ್ತಾ, ಪಟ್ಟುಗಳನ್ನು ಹಾಕುತ್ತಾ ಒಬ್ಬರನ್ನೊಬ್ಬರು ಮೇಲಕ್ಕೆತ್ತಿ ಬೆನ್ನು ತಾಗಿಸುವ ಗುರಿಯಲ್ಲಿ ಶಕ್ತಿ ಪ್ರದರ್ಶನ ನೀಡುವ ಆ ಮಲ್ಲಯುದ್ಧದ ಕುಸ್ತಿಯ ಕ್ಷಣಗಳನ್ನು ಕಾಣಬೇಕೆಂದರೆ ಮೈಸೂರು ದಸರೆಗೆ ಬರಬೇಕು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ದಸರಾ ಕ್ರೀಡೆಯ ಆನಂದ ಕ್ಷಣಗಳು ಆರಂಭವಾಗುವುದೇ ಜಿಲ್ಲಾ ಮಟ್ಟದ ಕ್ರೀಢಾ ಸ್ಪರ್ಧೆಗಳಿಂದ. ಮಹಾರಾಜರ ಅಂದಿನ ದಿನಗಳಲ್ಲಿ ಯಾವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ದೇಶ, ವಿದೇಶಗಳಿಂದ ಪೈಲ್ವಾನರು ಬರುತ್ತಿದ್ದರೋ, ಯಾವ ಗರಡಿ ಮನೆಗಳು ವಿಜೃಂಭಿಸುತ್ತಿದ್ದವೋ ಅವ್ಯಾವುವೂ ಇಂದಿಲ್ಲ. ಯುವಜನ ಕ್ರೀಡಾ ಇಲಾಖೆಯ ನೆರೆವಿಗೆ ಗರಬಡಿದಂತಿರುವ ಗರಡಿ ಮನೆಗಳಿಗೆ ಈ ದಿನಗಳಲ್ಲಿ ಕಾಯಕಲ್ಪ ಬರುತ್ತದೆ. ಇಲಾಖಾ ಆದೇಶದನುಸಾರ ಜಿಮ್ನ್ಯಾಸ್ಟಿಕ್ ಕೇಂದ್ರಗಳು, ಗರಡಿ ಮನೆಗಳು, ಬಾಡಿ ಬಿಲ್ಡಿಂಗ್ ಸಂಸ್ಥೆಗಳು ತಮ್ಮ ಪಟುಗಳನ್ನು ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ದಸರೆಗಾಗಿಯೇ ರೂಪಿತವಾದ ಅರ್ಧ ಮ್ಯಾರಥಾನ್ ಕ್ರೀಡಾ ಮನೋಭಾವವನ್ನು ಸ್ಥಳೀಯರಲ್ಲಿ ಹೆಚ್ಚಿಸಲು ಅಷ್ಟೇನು ಯಶಸ್ವಿಯಾಗದಿದ್ದರೂ ಸಹ ಹಳೆಯ ಪರಂಪರೆಗಳ ಉಳಿವಿಗಾಗಿ ಒಂದು ಹೆಜ್ಜೆಯನ್ನೇ ಇಟ್ಟಿದೆ. </font><br/><font  style='font-size:12pt; color:#000000'></font><br/><!--Image--><p class="wdp_articleRImg"><p><img src='/kn/articles/0909/19/images/img1090919055_1_6.jpg' alt='Mysore Darbar'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>NRB</p></p><!--endImage--> <font  style='font-size:11pt; color:#000000'>ಮೈಸೂರು ದಸರೆಯ ಕ್ರೀಡಾಕೂಟದಲ್ಲಿ ಮೂಲಸೌಲಭ್ಯಗಳ ಕೊರತೆ ಕಂಡರೂ ಭಾಗವಹಿಸುವವರ ಆಸಕ್ತಿಗೇನೂ ಕಡಿಮೆ ಇಲ್ಲ. ನೂತನ ದಾಖಲೆಗಳ ಬರವಿದ್ದರೂ ಸಹ ಹೊಸ ಪ್ರತಿಭೆಗಳ ಹುಡುಕಾಟಕ್ಕೊಂದು ತಳಹದಿಯಾಗಿದೆ. ದಶಕದ ಹಿಂದೆಯೇ ಚಾಮುಂಡಿ ಕ್ರೀಡಾಂಗಣವನ್ನು ನಗರದ ಕ್ರೀಡಾ ಮುಕುಟ ಮಣಿಯಾಗಿ ತಲೆ ಎತ್ತಿ ನಿಲ್ಲುವಂತೆ ಅಭಿವೃದ್ದಿ ಪಡಿಸಲಾಗಿದೆ. ಆದರೆ ಇಂದಿನ ಹೊಸ ಕ್ರೀಡೆಗಳ ಆಕರ್ಷಣೆಗಳಿಂದ ಹಳೆಯ ಕ್ರೀಡೆಗಳ ಪ್ರಾಮುಖ್ಯತೆ ದಿನಗಳೆದಂತೆ ಕುಂದುತ್ತಿರುವುದು ಶೋಚನಿಯ ಸಂಗತಿಯಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸದ್ಯಕ್ಕೆ ಮೈಸೂರು ದಸರಾ ಜಂಗೀ ಕುಸ್ತಿಗಷ್ಟೇ ಸೀಮಿತವಾಗಿದೆ. ಅದರ ವ್ಯಾಪ್ತಿ ಇಂದಿನ ದಿನಗಳಿಗನುಗುಣವಾಗಿ ಮತ್ತಷ್ಟು ಹೆಚ್ಚಬೇಕಿದೆ. ಈಜುಗೊಳದಂತಹ ಮುಂದಿನ ಯೋಜನೆಗಳು ಬರೀ ಕಾಗದದಲ್ಲೇ ಉಳಿದಿದ್ದು ಕಾರ್ಯ ರೂಪಕ್ಕೆ ಬರಬೇಕಾದ ಅವಶ್ಯಕತೆ ಹೆಚ್ಚಿದೆ. ದಸರಾ ಕ್ರೀಡಾಕೂಟವು ಗ್ರಾಮೀಣ ಪ್ರತಿಭಾನ್ವಿತರಿಗೆ ತೆರೆದ ಕನ್ನಡಿಯಾಗಬೇಕು ಎಂಬುದೇ ಕ್ರೀಡಾಸಕ್ತರ ಅಂಬೋಣ. ಸಾಂಕೇತಿಕ ನಡೆಯುವ ಕ್ರೀಡಾ ಉತ್ಸವ ಮಹತ್ತರವಾಗಿ ಹೊರಹೊಮ್ಮಬೇಕೆಂಬುದೇ ದಸರಾ ಪ್ರಿಯರ, ದಸರಾ ನೋಡುಗರ ಹೆಬ್ಬಯಕೆ. </font>]]></content:encoded>
      <pubDate>Sat, 19 Sep 2009 17:01:48 +0530</pubDate>
      <updatedDate>Tue, 15 Apr 2014 13:57:45 +0530</updatedDate>
      <category><![CDATA[Dasara Article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮೈಸೂರು ದಸರಾ 'ದರ್ಬಾರ್']]></title>
      <link>https://kannada.webdunia.com/article/dasara-article/ಮೈಸೂರು-ದಸರಾ-ದರ್ಬಾರ್-108100100006_1.htm</link>
      <guid>https://kannada.webdunia.com/article/dasara-article/ಮೈಸೂರು-ದಸರಾ-ದರ್ಬಾರ್-108100100006_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಬೆಂಗಳೂರು:ದಸರಾ ಹಬ್ಬ ಮೈಸೂರು ಸೇರಿದಂತೆ ಭಾರತದ ಉತ್ತರ ಭಾಗಗಳಲ್ಲಿಯೂ ದುರ್ಗಾಪೂಜೆಯನ್ನು ಆಚರಿಸುವ ಮೂಲಕ ನಡೆಸಲಾಗುತ್ತದೆ. ಒಂಬತ್ತು ದಿನಗಳ ಈ ಹಬ್ಬಕ್ಕೆ ನವರಾತ್ರಿ ಎಂಬುದಾಗಿಯೂ ಕರೆಯಲಾಗುತ್ತದೆ.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0810/01/images/img1081001006_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> <font  style='font-size:11pt; color:#000000'>ದಸರಾ ಹಬ್ಬ ಮೈಸೂರು ಸೇರಿದಂತೆ ಭಾರತದ ಉತ್ತರ ಭಾಗಗಳಲ್ಲಿಯೂ ದುರ್ಗಾಪೂಜೆಯನ್ನು ಆಚರಿಸುವ ಮೂಲಕ ನಡೆಸಲಾಗುತ್ತದೆ. ಒಂಬತ್ತು ದಿನಗಳ ಈ ಹಬ್ಬಕ್ಕೆ ನವರಾತ್ರಿ ಎಂಬುದಾಗಿಯೂ ಕರೆಯಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಯುಧಪೂಜೆ, ವಿಜಯದಶಮಿಗಳನ್ನೊಳಗೊಂಡ ಹಲವು ಹಬ್ಬದಾಚರಣೆ ಮೈಸೂರು ಪ್ರಾಂತ್ಯದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂಬುದೇ ವಿಶೇಷವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪುರಾಣ:ಶ್ರೀರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿಯನ್ನು ಧಮನಿಸಿದ ಶ್ರೀರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ, ಮನೆಗಳಲ್ಲಿಯೂ ನಾಡಹಬ್ಬವಾಗಿ ಪ್ರಚಲಿತವಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಆಕರ್ಷಕ ಖಾಸಗಿ ದರ್ಬಾರ್:<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0810/01/images/img1081001006_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೈಸೂರು ದಸರಾ ಮಹೋತ್ಸವಕ್ಕೆ 200ವರ್ಷಗಳ ಇತಿಹಾಸವಿದ್ದು,ಅಲ್ಲದೇ ದಸರಾದಲ್ಲಿ ನಡೆಯುವ ಮಹಾರಾಜರ ಖಾಸಗಿ ದರ್ಬಾರ್ ವಿಶೇಷ ಕಾರ್ಯಕ್ರಮವಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂಬಾ ವಿಲಾಸ ಅರಮನೆಯಲ್ಲಿ ನವರಾತ್ರಿಯ ಒಂಬತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ದಸರಾ ಆರಂಭಕ್ಕೂ ಮುನ್ನ ನಾಲ್ಕು ಟನ್ ಭಾರದ ಮೈಸೂರಿನ ಅತ್ಯಂತ ಪುರಾತನವಾದ ರತ್ನಖಚಿತ ಸಿಂಹಾಸನವನ್ನು ಅಣಿಗೊಳಿಸಲಾಗುತ್ತದೆ. ಒಡೆಯರ್ ಮನೆತನದ ರಾಜರಾದ ಶ್ರೀಕಂಠದತ್ತ ಒಡೆಯರ್ ಪೂಜಾವಿಧಾನಗಳನ್ನು ನೆರವೇರಿಸಿ,ಸುಮಾರು ನಲವತ್ತೈದು ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಿರ್ವಹಿಸುವುದು ಸಂಪ್ರದಾಯ. </font>]]></content:encoded>
      <pubDate>Fri, 18 Sep 2009 19:18:02 +0530</pubDate>
      <updatedDate>Tue, 15 Apr 2014 12:10:16 +0530</updatedDate>
      <category><![CDATA[Dasara Article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[|| ಭವಾನ್ಯಷ್ಟಕಂ ||]]></title>
      <link>https://kannada.webdunia.com/article/dasara-article/ಭವಾನ್ಯಷ್ಟಕಂ-108092900055_1.htm</link>
      <guid>https://kannada.webdunia.com/article/dasara-article/ಭವಾನ್ಯಷ್ಟಕಂ-108092900055_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ನ ತಾತೋ ನ ಮಾತಾ ನ ಬಂಧುರ್ ನ ದಾತಾ
ನ ಪುತ್ರೋ ನ ಪುತ್ರಿ ನ ಬೃತ್ಯೋ ನ ಬತ್ರ್|
ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |1|]]></description>
      <content:encoded><![CDATA[<font  style='font-size:11pt; color:#000000'>ನ ತಾತೋ ನ ಮಾತಾ ನ ಬಂಧುರ್ ನ ದಾತಾ</font><br/><font  style='font-size:11pt; color:#000000'>ನ ಪುತ್ರೋ ನ ಪುತ್ರಿ ನ ಬೃತ್ಯೋ ನ ಬತ್ರ್|</font><br/><font  style='font-size:11pt; color:#000000'>ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |1|</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಭವಾಧ್ಬಾವಪಾರೆ ಮಹಾದುಃಖಭೀರುಃ</font><br/><font  style='font-size:11pt; color:#000000'>ಪಪಾತ ಪ್ರಕಾಮಿ ಪ್ರಲೋಭಿ ಪ್ರಮತ್ತಃ |</font><br/><font  style='font-size:11pt; color:#000000'>ಕುಸಂಸಾರ ಪಾಶಾ ಪ್ರಬುದ್ಧ ಸದಾಹಂ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |2|</font><br/><font  style='font-size:11pt; color:#000000'></font><br/><font  style='font-size:11pt; color:#000000'>ನ ಜಾನಾಮಿ ದಾನಂ ನ ಚ ಧ್ಯಾನ ಯೋಗಂ</font><br/><font  style='font-size:11pt; color:#000000'>ನ ಜಾನಾಮಿ ತಂತ್ರಂ ನ ಚ ಸ್ತೋತ್ರ-ಮಂತ್ರಂ |</font><br/><font  style='font-size:11pt; color:#000000'>ನ ಜಾನಾಮಿ ಪೂಜಾ ನ ಚ ನ್ಯಾಸಯೋಗಂ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |3|</font><br/><font  style='font-size:11pt; color:#000000'></font><br/><font  style='font-size:11pt; color:#000000'>ನ ಜಾನಾಮಿ ಪುಣ್ಯಂ ನ ಜಾನಾನಿ ತೀರ್ಥ</font><br/><font  style='font-size:11pt; color:#000000'>ನ ಜಾನಾಮಿ ಮುಕ್ತಿ ಲಯಂ ವಾ ಕದಾಚಿತ್ |</font><br/><font  style='font-size:11pt; color:#000000'>ನ ಜಾನಾಮಿ ಭಕ್ತಿ ವೃತಂ ವಾಪಿ ಮಾತಾ-</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |4|</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕುಕರ್ಮ ಕುಸಂಗಿ ಕುಬುದ್ಧಿ ಕುದಾಸಃ</font><br/><font  style='font-size:11pt; color:#000000'>ಕುಲಾಚಾರಹೀನಃ ಕದಾಚಾರಲೀನಃ |</font><br/><font  style='font-size:11pt; color:#000000'>ಕೃಹಿಷ್ಠಿಃ ಕೃವಾಕ್ಯಪ್ರಬಂಧಃ ಸದಾಹ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |5|</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರಜೇಶಾಂ ರಮೇಶಾಂ ಮಹೇಶಾಂ ಸುರೇಶಾಂ</font><br/><font  style='font-size:11pt; color:#000000'>ದಿನೇಶಾಂ ನಿಶೀತ್ವೇಶ್ವರಂ ವಾ ಕದಾಚಿತ್ |</font><br/><font  style='font-size:11pt; color:#000000'>ನ ಜಾನಾಮಿ ಚಾನ್ಯತ್ ಸದಾಹಂ ಶರಣ್ಯೈ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |6|</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿವಾದೇ ವಿಷಾದೇ ಪ್ರಮಾದೆ ಪ್ರವಾಸೆ</font><br/><font  style='font-size:11pt; color:#000000'>ಜಲೆ ಚಾನಲೆ ಪರ್ವತೆ ಶತ್ರುಮಧ್ಯೆ |</font><br/><font  style='font-size:11pt; color:#000000'>ಅರಣ್ಯೆ ಶರಣ್ಯೆ ಸದಾ ಮಾಂ ಪ್ರಪಾಹೀ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |7|</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅನಾಥೋ ದರಿದ್ರೋ ಜರಾ-ರೋಗಯುಕ್ತೋ</font><br/><font  style='font-size:11pt; color:#000000'>ಮಹಾಕ್ಷೀಣದೀನಃ ಸದಾ ಜಾಡ್ಯವಕ್ತ್ರಃ |</font><br/><font  style='font-size:11pt; color:#000000'>ವಿಪತ್ತೌ ಪ್ರವಿಷ್ಠಃ ಪ್ರಣಾಷ್ಠಃ ಸದಾಹಂ</font><br/><font  style='font-size:11pt; color:#000000'>ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ |8|</font><br/><font  style='font-size:11pt; color:#000000'></font><br/>||<font  style='font-size:11pt; color:#000000'>ಇತಿ ಶ್ರೀಮಚ್ಛಂಕರಾಚಾರ್ಯಕೃತಂ ಭವಾನ್ಯಷ್ಟಕಂ ಸಂಪೂರ್ಣಂ||</font>]]></content:encoded>
      <pubDate>Fri, 18 Sep 2009 19:16:11 +0530</pubDate>
      <updatedDate>Tue, 15 Apr 2014 12:03:34 +0530</updatedDate>
      <category><![CDATA[Dasara Article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಹಾನವಮಿ ಮತ್ತು ಕುಮಾರಿ ಪೂಜೆ]]></title>
      <link>https://kannada.webdunia.com/article/dasara-article/ಮಹಾನವಮಿ-ಮತ್ತು-ಕುಮಾರಿ-ಪೂಜೆ-108092900054_1.htm</link>
      <guid>https://kannada.webdunia.com/article/dasara-article/ಮಹಾನವಮಿ-ಮತ್ತು-ಕುಮಾರಿ-ಪೂಜೆ-108092900054_1.htm</guid>
      <media:thumbnail url="https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg"/>
      <image>https://nonprod-media.webdunia.com/public_html/_media/hi/img/hp/home-page/2014-10/20/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1413776616-9494.jpg</image>
      <description><![CDATA[ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಕುಮಾರಿಯರನ್ನು ದೇವಿ ಸ್ವರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಲ್ಲದೇ ಈ ಪೂಜೆ ಅಪೂರ್ಣವಾಗುತ್ತದೆ ಎಂದು ಕಥೆಗಳು ಹೇಳುತ್ತವೆ. ಕುಮಾರಿಯರ ಮಹಾನವಮಿ ಪೂಜೆಯಿಂದ ಮಾತ್ರ ಸಾಧನೆ ಸಿದ್ದಿಸುತ್ತದೆ.]]></description>
      <content:encoded><![CDATA[<font  style='font-size:11pt; color:#0000FF'><i>ಡಾ.ರಾಮಕೃಷ್ಣ ಡಿ. ತಿವಾರಿ <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0809/29/images/img1080929054_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage-->  </font><font style=' color:#000000;'></i>ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಕುಮಾರಿಯರನ್ನು ದೇವಿ ಸ್ವರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಲ್ಲದೇ ಈ ಪೂಜೆ ಅಪೂರ್ಣವಾಗುತ್ತದೆ ಎಂದು ಕಥೆಗಳು ಹೇಳುತ್ತವೆ. ಕುಮಾರಿಯರ ಮಹಾನವಮಿ ಪೂಜೆಯಿಂದ ಮಾತ್ರ ಸಾಧನೆ ಸಿದ್ದಿಸುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಎರಡು ವರ್ಷದ ವಯಸ್ಸಿನ ಬಾಲಕಿಯರಿಗೆ ಕುಮಾರಿ, ಎರಡು ವರ್ಷಕ್ಕಿಂತ ಹೆಚ್ಚು ಮೂರು ವರ್ಷದೊಳಗಿನ ಬಾಲಕಿಯರನ್ನು ತ್ರಿಮೂರ್ತಿ, ಮೂರು ವರ್ಷಕ್ಕಿಂತ ಹೆಚ್ಚು ನಾಲ್ಕು ವರ್ಷದೊಳಗಿನ ಬಾಲಕಿಯರನ್ನು ಕಲ್ಯಾಣಿ, ನಾಲ್ಕು ವರ್ಷಕ್ಕಿಂತ ಹೆಚ್ಚು ಐದು ವರ್ಷದೊಳಗಿನ ಬಾಲಕಿಯರನ್ನು ರೋಹಿಣಿ, ಐದು ವರ್ಷಕ್ಕಿಂತ ಹೆಚ್ಚು ಆರು ವರ್ಷದೊಳಗಿನ ಬಾಲಕಿಯರನ್ನು ಕಾಲಿಕಾ, ಆರು ವರ್ಷಕ್ಕಿಂತ ಹೆಚ್ಚು ಏಳು ವರ್ಷದೊಳಗಿನ ಬಾಲಕಿಯರನ್ನು ಚಂಡಿಕಾ, ಏಳು ವರ್ಷಕ್ಕಿಂತ ಹೆಚ್ಚು ಎಂಟು ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರನ್ನು ಶಾಂಭವಿ, ಎಂಟು ವರ್ಷಕ್ಕಿಂತ ಹೆಚ್ಚು ಒಂಬತ್ತು ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರನ್ನು ದುರ್ಗಾ, ಒಂಬತ್ತು ವರ್ಷಕ್ಕಿಂತ ಹೆಚ್ಚು ಹತ್ತು ವರ್ಷದೊಳಗಿನ ಬಾಲಕಿಯರನ್ನು ಸುಭದ್ರಾ ಎಂದು ಅರ್ಚಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ವಯಸ್ಸಿನ ಬಾಲಕಿಯರನ್ನು ಅಹ್ವಾನಿಸಿ ಪಾದವನ್ನು ತೊಳೆದು ಪವಿತ್ರ ಸ್ಥಾನದಲ್ಲಿ ಕೂಡಿಸಿ, ಕುಮಾರಿಯ ಸಮ್ಮುಖದಲ್ಲಿ ತಮ್ಮ ಬೇಡಿಕೆಗಳನ್ನು ಉಚ್ಚರಿಸಬೇಕು. ತಮ್ಮ ಯೋಗ್ಯತೆಯ ಅನ್ವಯ ವಸ್ತ್ರ, ಅಲಂಕಾರ, ಪುಷ್ಪ, ಮಾಲೆ, ತೈಲ, ಚಂದನ, ಕುಂಕುಮ, ಕಾಡಿಗೆ, ಇವುಗಳನ್ನು ದೇವಿಯ ರೂಪದ ಕುಮಾರಿಗೆ ಅರ್ಪಣೆ ಮಾಡಬೇಕು. ನಂತರ ಕುಮಾರಿಗೆ ಸಂತೋಷದಿಂದ ಮೃಷ್ಟಾನ್ನ ಭೋಜನವನ್ನು ಬಡಿಸಬೇಕು.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಕುಮಾರಿಯ ಭೋಜನ ಪೂರ್ಣವಾದ ನಂತರ ಕೈ ಬಾಯಿಗಳನ್ನು ತೊಳೆದು, ಕುಮಾರಿಗೆ ಫಲ ಆಹಾರಗಳನ್ನು ನೀಡಿ ಗೌರವಿಸಿ ಮನೆಯ ಮುಂಬಾಗಿಲಿನವರೆಗೆ ಬೀಳ್ಕೊಡಬೇಕಾಗುತ್ತದೆ. ಕುಮಾರಿಯ ಊಟವಾಗುವವರೆಗೂ ಧೂಪ ಅಥವಾ ದೀಪವನ್ನು ಹಚ್ಚಬೇಕು. ಉಟದ ಸಾಮಾನುಗಳನ್ನು ಸ್ವತಃ ತಂದು ಮೃಷ್ಟಾನ್ನವನ್ನು ಬಡಿಸಬೇಕಾಗುತ್ತದೆ. ಕುಮಾರಿಯ ಊಟದ ನಂತರ ಎಂಜಲು ತೆಗೆಯಬೇಕು. ಕುಮಾರಿಯ ಭೋಜನ ಒಂದು ಮಹಾಪೂಜೆಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮನದಲ್ಲಿ ಕುಮಾರಿಯ ಪೂಜೆಯ ಮಹತ್ವ ತಿಳಿದವರು ಮಾತ್ರ ಈ ಪೂಜೆಗೆ ಸಿದ್ಧರಾಗಬೇಕು. ಉದ್ವೇಗ, ಕೋಪಗಳನ್ನು ತ್ಯಜಿಸಬೇಕಾಗುವುದು. ಕುಮಾರಿಯ ಪೂಜೆಯಲ್ಲಿ ಪಾದವನ್ನು ಹೇಗೆ ತೊಳೆಯಬೇಕು, ಎಂಜಲು ಪಾತ್ರೆಯನ್ನು ಹೇಗೆ ತೆಗೆಯಬೇಕು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ದೇವಿಯ ಪೂಜೆಯಂದು ತಿಳಿದು ಕುಮಾರಿಯ ಪೂಜೆ ಮಾಡಿದರೆ ದೇವಿಯ ಪೂಜೆ ಪೂರ್ಣವಾಗುತ್ತದೆ. </font>]]></content:encoded>
      <pubDate>Fri, 18 Sep 2009 19:15:46 +0530</pubDate>
      <updatedDate>Tue, 15 Apr 2014 12:03:34 +0530</updatedDate>
      <category><![CDATA[Dasara Article]]></category>
      <authorname>ಇಳಯರಾಜ</authorname>
    </item>
  </channel>
</rss>
