<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಸ್ವಾತಂತ್ರ್ಯ ಲೇಖನಗಳು]]></title>
    <link>https://kannada.webdunia.com/independence-day-article</link>
    <description><![CDATA[Find Special Kannada coverage of Major Events and Festivals of India and world during 2008 and many more in kannada at Webdunia kannada Special 08]]></description>
    <copyright>Copyright webdunia.com</copyright>
    <lastBuildDate>Sun, 14 Jun 2026 06:56:08 +0530</lastBuildDate>
    <language>en-us</language>
    <image>
      <title>ಸ್ವಾತಂತ್ರ್ಯ ಲೇಖನಗಳು</title>
      <url>https://kannada.webdunia.com/independence-day-article</url>
      <link>https://kannada.webdunia.com/independence-day-article</link>
    </image>
    <atom:link href="https://kannada.webdunia.com/rss/independence-day-article-10736.rss" rel="self" type="application/rss+xml"/>
    <item>
      <title><![CDATA['ಸೂಪರ್ ಪವರ್' ಭಾರತ ಅಷ್ಟು ಹೇಡಿಯಾ...?]]></title>
      <link>https://kannada.webdunia.com/article/independence-day-article/ಸೂಪರ್-ಪವರ್-ಭಾರತ-ಅಷ್ಟು-ಹೇಡಿಯಾ-109081300022_1.htm</link>
      <guid>https://kannada.webdunia.com/article/independence-day-article/ಸೂಪರ್-ಪವರ್-ಭಾರತ-ಅಷ್ಟು-ಹೇಡಿಯಾ-109081300022_1.htm</guid>
      <media:thumbnail url="http:"/>
      <image>http:</image>
      <description><![CDATA[ಭಾರತ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ, ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಸೇರಿದಂತೆ ಪ್ರಗತಿಶೀಲ ರಾಷ್ಟ್ರಗಳೇ ಭಾರತದತ್ತ ಅಚ್ಚರಿಯ ದೃಷ್ಟಿ ನೆಟ್ಟಿವೆ. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಹೆದರಿಸುತ್ತಿದ್ದ ...]]></description>
      <content:encoded><![CDATA[<font  style='font-size:11pt; color:#0000FF'><b>ನಾಗೇಂದ್ರ ತ್ರಾಸಿ</font><font style=' color:#000000;'></b></font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/0908/13/images/img1090813022_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> <font  style='font-size:11pt; color:#000000'>ಭಾರತ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ, ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಸೇರಿದಂತೆ ಪ್ರಗತಿಶೀಲ ರಾಷ್ಟ್ರಗಳೇ ಭಾರತದತ್ತ ಅಚ್ಚರಿಯ ದೃಷ್ಟಿ ನೆಟ್ಟಿವೆ. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಹೆದರಿಸುತ್ತಿದ್ದ ದೊಡ್ಡಣ್ಣ ಆರ್ಥಿಕ ಹೊಡೆತದಿಂದ ಕಂಗಾಲಾಗಿ, ಉಳಿದ ವಿದೇಶಿ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಗರಬಡಿದಂತೆ ಕೂತಿದ್ದರೆ, ಭಾರತ ಮಾತ್ರ ಏನೇ ಬಂದರು ಎದುರಿಸುತ್ತೇವೆ ಎಂಬ ದಿಟ್ಟತನದ ವರ್ತನೆ ತೋರಿತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತದ ಆರ್ಥಿಕ ವ್ಯವಸ್ಥೆ ಅಮೆರಿಕದ ಹಾಗೇ ಲಂಗು ಲಗಾಮಿಲ್ಲದ ವ್ಯವಸ್ಥೆಯದ್ದಾಗಿರಲಿಲ್ಲ. ಇದು ಭಾರತ...ಆದರೂ ಭಾರತ ಪ್ರಸಕ್ತವಾಗಿ ಅನುಭವಿಸುತ್ತಿರುವ ಬಹುದೊಡ್ಡ ಸಮಸ್ಯೆಯ ಉರುಳು ಯಾವುದು...?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತ 62ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶದ ಸ್ಥಿತಿಗತಿ ಬಗ್ಗೆ ವಿಶ್ಲೇಷಿಸುವ ಗೋಜಿಗೆ ಹೋಗುವ ಕೆಲಸವನ್ನು ಈ ಲೇಖನದಲ್ಲಿ ಮಾಡುತ್ತಿಲ್ಲ. ಬದಲಾಗಿ ಆರು ದಶಕಗಳ ನಂತರವೂ ದೇಶ ಪ್ರಮುಖವಾಗಿ ಎದುರಿಸುತ್ತಿರುವ ಭಯೋತ್ಪಾದನೆ ಬಗ್ಗೆ ಕಠಿಣವಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿಯ ಕೊರತೆ ಬಗ್ಗೆ ಚರ್ಚಿಸಬೇಕಾಗಿದೆ. ಬಡತನ, ಶಿಕ್ಷಣ, ಶೌಚಾಲಯ, ವಿದ್ಯುತ್, ಮೂಲಭೂತ ಸೌಕರ್ಯ ಹೀಗೆ ಸಮಸ್ಯೆಗಳ ಆಗರದ ನಡುವೆಯೇ ಇಂದು ದೇಶದ ಪ್ರತಿಯೊಂದು ಕಡೆಯಲ್ಲಿಯೂ ರಣಕೇಕೆ ಹಾಕಿ ಮುಗ್ದ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಉಗ್ರವಾದದ ಬಗ್ಗೆ ಭಾರತ ನಿರ್ವಿಯರಂತೆ ವರ್ತಿಸುತ್ತಿದೆಯಲ್ಲ...ಇನ್ನೆಷ್ಟು ಕಾಲ ಅಮಾಯಕ ಜೀವಗಳ ಹರಣವಾಗಬೇಕಾಗುತ್ತದೆ ಎಂಬುದೇ ಬಗೆಹರಿಯದ ಪ್ರಶ್ನೆಯಾಗಿ ಕಾಡುತ್ತದೆ. ಆರೋಪಿಯಾಗಿದ್ದರೂ ಶಿಕ್ಷೆ ನೀಡಲು ಆಗದೆ ಒದ್ದಾಡುವ ಸ್ಥಿತಿ ಭಾರತದ್ದು! ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವೇ ಕ್ಯಾಕರಿಸಿ ಉಗಿದು, ಕಾಂಗ್ರೆಸ್‌ಗೆ ತಾಕತ್ತಿದ್ದರೆ ನನ್ನ ಗಲ್ಲಿಗೇರಿಸಬೇಕು, ಹೋಗ್ಲಿ ಆಡ್ವಾಣಿ ಏನಾದ್ರು ಈ ದೇಶದ ಪ್ರಧಾನಿಯಾಗಿದ್ದರೆ ಏನಾದರೊಂದು ನಿರ್ಧಾರ ಕೈಗೊಳ್ಳುತ್ತಿದ್ದರು ಎಂದು ಹೇಳಿದ್ದ. ರಾಜೀವ್ ಗಾಂಧಿ ಹಂತಕರು ಕೂಡ ಮರಣದಂಡನೆಗಾಗಿ ಎದುರು ನೋಡುತ್ತಿದ್ದಾರೆ.</font><br/><font  style='font-size:12pt; color:#000000'></font><br/><!--Image--><p class="wdp_articleRImg"><p><img src='/kn/articles/0908/13/images/img1090813022_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>ND</p></p><!--endImage--> <font  style='font-size:11pt; color:#000000'>ಮುಂಬೈ ಸರಣಿ ಬಾಂಬ್ ಸ್ಫೋಟ, 26/11 ಸೇರಿದಂತೆ ಎಲ್ಲರಿಗೂ ಸುರಕ್ಷಿತ ನಗರ ಎಂದೇ ಖ್ಯಾತಿ ಪಡೆದಿದ್ದ ಉದ್ಯಾನನಗರಿ ಬೆಂಗಳೂರಿನಲ್ಲೂ ಸ್ಫೋಟ ಸಂಭವಿಸುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಹೋಗಲಿ 26/11 ಸ್ಫೋಟದ ರೂವಾರಿಗಳು ಯಾರು, ಎಷ್ಟು ಮಂದಿ ಬಂದಿದ್ದರು, ಎಲ್ಲಿ ಸಂಚು ರೂಪಿಸಿದ್ದರು ಎಂಬೆಲ್ಲಾ ವಿವರಗಳನ್ನು ಜೀವಂತವಾಗಿ ಸೆರೆಸಿಕ್ಕ ಉಗ್ರ ಅಮೀರ್ ಅಜ್ಮಲ್ ಕಸಬ್ ಎಳೆಎಳೆಯಾಗಿ ಬಿಡಿಸಿಟ್ಟರೂ ಕೂಡ ಪಾಕಿಸ್ತಾನ ಕಮಕ್ ಕಿಮಕ್ ಎನ್ನದೇ ಈ ಹಿಂದೆ ಹೇಳುತ್ತಿದ್ದ ಇಬ್ಬಗೆಯ ಹೇಳಿಕೆಯನ್ನು ನೀಡಿ ನೌಟಂಕಿ ನಾಟಕವನ್ನು ಮುಂದುವರಿಸಿದೆ ವಿನಃ ಬೇರೆನೂ ಆಗಿಲ್ಲ. ಯಾಕೆಂದರೆ ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುತ್ತಾರಲ್ಲ ಹಾಗೇ ಭಾರತ ಪ್ರತಿಯೊಂದಕ್ಕೂ ಅಮೆರಿಕದತ್ತ ಕೈಚಾಚುವುದು ಹೆಚ್ಚಾಗಿದೆ. ಪ್ರತಿಯೊಂದಕ್ಕೂ ಅಮೆರಿಕವೇ ನಿರ್ಣಾಯಕ ಎಂಬಂತಾಗಿ ಬಿಟ್ಟಿದೆ. ಅದೇನು ಸಾಚಾನಾ ಈ ಹಿಂದೆ ಅಮೆರಿಕ ಭಾರತದ ಬಗ್ಗೆ ಯಾವ ನಿಲುವು ತೋರಿತ್ತು ಎಂಬ ಪರಿಜ್ಞಾನವಾದರೂ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಎಂಬ ಖ್ಯಾತಿ ಪಡೆದ ಪ್ರಧಾನಿ ಸಿಂಗ್ ‌ಜೀಗೆ ತಿಳಿಯಬೇಡವೇ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಗತ್ತಿನಲ್ಲಿ ಮಿಡತೆಯಷ್ಟಿರುವ ದೇಶಗಳು ಅಮೆರಿಕಕ್ಕೆ ಕ್ಯಾರೆ ಎನ್ನದಿರುವಾಗ ಭಾರತ ಅದ್ಯಾಕೋ ಡೊಗ್ಗು ಸಲಾಮ್ ಹಾಕುತ್ತಿದೆ. ಜಗತ್ತಿಗೆ ತಾನೇ ಅನಧಿಕೃತ ಡಾನ್ ಎಂಬಂತೆ ವರ್ತಿಸುವ ಅಮೆರಿಕ ಸ್ವಂತ ಸಾಮರ್ಥ್ಯದಿಂದ ಮೇಲೇಳುವ ಪ್ರತಿಯೊಂದು ದೇಶದ ತಲೆಗೆ ಜಾಣತನದಿಂದ ಹೊಡೆತ ನೀಡುತ್ತದೆ!. ಅದರಲ್ಲೂ ಭಾರತ ಅಂದರೆ ಅದಕ್ಕೆ ಮೊದಲಿನಿಂದಲೂ ಮಹಾ ಅಲರ್ಜಿ. ಭಾರತ ಅತ್ಯಂತ ಕಷ್ಟದ ಸ್ಥಿತಿ ಅನುಭವಿಸುತ್ತಿರುವಾಗಲೆಲ್ಲ ಗಹಗಹಿಸಿ ನಗುತ್ತಿದ್ದ ದೇಶವೆಂದರೆ ಅದು ಅಮೆರಿಕ. 1947ರಲ್ಲಿ ಪಾಕಿಸ್ತಾನ ಇಲ್ಲಿನ ಭೂಮಿಯನ್ನು ವಶಪಡಿಸಿಕೊಂಡಾಗ ಅಮೆರಿಕ ಪಾಕ್‌ಗೆ ಬೆಂಬಲ ನೀಡಿತ್ತು. 1962ರಲ್ಲಿ ಚೀನಾ ಭಾರತದ ಮೇಲೆ ಸಮರ ಸಾರಿದಾಗ ಚೀನಾಕ್ಕೆ ಅಭಯಹಸ್ತ ನೀಡಿತ್ತು. ಭಾರತದ ಮೇಲೆ ದಾಳಿ ಮಾಡಲೆಂದೇ ಅದು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಚೀನಾಕ್ಕೆ ಸರಬರಾಜು ಮಾಡಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಲ್ಲದೆ ಕೋಟ್ಯಂತರ ರೂಪಾಯಿಯ ಬೋಫೋರ್ಸ್ ಹಗರಣದ ರೂವಾರಿ ಕ್ವಟ್ರೋಚಿಗೆ ಏನೂ ಆಗಿಲ್ಲ, 1984ರಲ್ಲಿ ಭೋಪಾಲ್‌ನಲ್ಲಿ ಸಂಭವಿಸಿದ ಅನಿಲ ದುರಂತದಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಕಾರಣವಾಗಿದ್ದು ಅಮೆರಿಕ!. ಆದರೆ ಸ್ವದೇಶಿ ಚಳವಳಿಯ ರಾಜೀವ್ ದೀಕ್ಷಿತ್ ಹೇಳುವಂತೆ, ನಮ್ಮ ನೀತಿಗೆಟ್ಟ ನಾಯಕರು ಮತ್ತು ಅವರ ಪಾರ್ಲಿಮೆಂಟ್ ಈ ಕಂಪೆನಿಯ ಅಧಿಕಾರಿ ವಾರನ್ ಆಂಡರ್‌ಸನ್ ಎಂಬಾತನನ್ನು ಮುಟ್ಟುವ ಧೈರ್ಯ ಕೂಡ ಮಾಡಿಲ್ಲ, ನೆನಪಿರಲಿ ಪಾಪಿಗಳ ಪಾರ್ಲಿಮೆಂಟ್‌ನಲ್ಲಿ ಯಾವತ್ತೂ ಕ್ರಾಂತಿಯಾಗುವುದಿಲ್ಲ! 26/11ರ ಘಟನೆ ಕುರಿತಂತೆ ಪಾಕಿಸ್ತಾನ ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿದ್ದರೆ ಭಾರತ, ಮೊದಲು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ನಂತರ ಮಾತುಕತೆ ಎನ್ನುತ್ತಿದೆ. ಅಮೆರಿಕ ಕೂಡ ಪಾಕ್‌ಗೆ ಗುರ್ ಎನ್ನುತ್ತಿದೆ. ಆದರೆ ಪಾಕಿಸ್ತಾನಕ್ಕೂ ಚೆನ್ನಾಗಿ ಗೊತ್ತು, ಅಮೆರಿಕಕ್ಕೆ ಒಳಗೊಳಗೆ ಭಾರತಕ್ಕಿಂತ ಪಾಕಿಸ್ತಾನವೇ ಮುದ್ದು. ಕರಿಯ ಜನಾಂಗದ ಅಧ್ಯಕ್ಷ ಎಂಬ ಹೆಗ್ಗಳಿಕೆ ಪಡೆದು ಶ್ವೇತ ಭವನ ಪ್ರವೇಶಿಸಿದ್ದ ಬರಾಕ್ ಒಬಾಮ ಕೂಡ ಮೊದಲು ಪಾಕಿಸ್ತಾನಕ್ಕೆ ನೀಡುತ್ತಿರುವ ಅನುದಾನ ನಿಲ್ಲಿಸುವುದಾಗಿ ಹೇಳಿದ್ದರೂ ಸಹ ಇದೀಗ ಐಎಂಎಫ್ 3.2 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಖ್ಯಾತ ಅಂಕಣಕಾರ ಟಿಜೆಎಸ್ ಜಾರ್ಜ್ ಅವರ ಮಾತಿನಲ್ಲೇ ಹೇಳುವುದಾದರೆ, ಭಾರತ ಇಂತಹ ಮೋಸಗಾರಿಕೆ ಮುಖವಾಡವನ್ನು ಬಯಲು ಮಾಡುವಲ್ಲಿ ಏಕೆ ವಿಫಲವಾಗುತ್ತೆ ? ಮನಮೋಹನ್ ಸಿಂಗ್ ಅವರ ಅಮೆರಿಕ ಮೋಹವೇ ಇದಕ್ಕೆ ಕಾರಣವೇ ? ಇನ್ನೂ ನಾವು ವಸಾಹತುಶಾಹಿ ಮನಸ್ಥಿತಿಯಿಂದ ಪಾರಾಗಿಲ್ಲ ಎನ್ನುವುದೇ ಕಾರಣವೇ? ಅಥವಾ ಅಭ್ಯಾಸಬಲದಿಂದ ಪಶ್ಚಿಮರಾಷ್ಟ್ರಗಳಿಗೆ ನಡುಬಗ್ಗಿಸಿ ಸಲಾಮು ಹಾಕುವುದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವಾ ? ಸ್ವತಂತ್ರ ಭಾರತದ ಚರಿತ್ರೆಯ ಪುಟಗಳನ್ನು ನೋಡಿದರೆ ನಾವು ಮಂಡಿಯೂರಿ ನಡೆದಿರುವ ಹಲವಾರು ಘಟನೆಗಳಿವೆ. ಅನಗತ್ಯವಾಗಿ ನಾವು ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯಗೊಳಿಸಿದೆವು. 1995ರಲ್ಲಿ ಪುರುಲಿಯಾದಲ್ಲಿ ವಿದೇಶಿ ವಿಮಾನವೊಂದು ಶಸ್ತ್ರಾಸ್ತ್ರಗಳನ್ನು ಇಳಿಸಿದಾಗ, ಅದಕ್ಕೆ ಕಾರಣವಾಗಿದ್ದ ಐವರು ಲ್ಯಾಟಿನ್ ಅಮೆರಿಕನ್‌ ಹಾಗೂ ಒಬ್ಬ ಬ್ರಿಟಿಷ್ ಪ್ರಜೆಗೆ ಶಿಕ್ಷೆಯಾಯಿತು. ಆದರೆ, ಅವರೆಲ್ಲರಿಗೂ ಕ್ಷಮಾದಾನ ಮಾಡಿ ಅವರವರ ರಾಷ್ಟ್ರಗಳಿಗೆ ಕಳುಹಿಸಿಕೊಡಲಾಯಿತು. ಸ್ವಾತಂತ್ರ್ಯ ಬಂದು ಆರು ದಶಕಗಳ ನಂತರವೂ ನಾವು ನಮ್ಮ ಘನತೆಯನ್ನು ಉಳಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಕಲಿಯಬೇಕಿದೆ. ಹೌದು ಇವತ್ತು ವೋಟ್ ಬ್ಯಾಂಕ್, ಡೊಗ್ಗು ಸಲಾಮಿನ, ಜಾತಿ ರಾಜಕಾರಣ ಮಾಡುವ ಮೂಲಕ ಹಲ್ಲಿಲ್ಲದ ಕಾನೂನನ್ನು ಕಿತ್ತೊಗೆದು, ಕಠಿಣ ಕಾನೂನುನನ್ನು ಜಾರಿಗೆ ತರಲು ಸ್ವಾತಂತ್ರ್ಯ ಬಂದು ಆರು ದಶಕಗಳ ನಂತರವೂ ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇವತ್ತು ಸಲಿಂಗಕಾಮವನ್ನು ಕಾನೂನು ಬದ್ಧಗೊಳಿಸಿದರ ಬಗ್ಗೆ ಪರ-ವಿರೋಧ ಮಾತನಾಡಿ ಕಾಲಕಳೆಯುತ್ತಿದ್ದೇವೆ. ಆದರೆ ದೇಶಕ್ಕಿಂದು ತುರ್ತಾಗಿ ಕೆಲವೊಂದು ಕಾನೂನುಗಳಲ್ಲಿ ಬದಲಾವಣೆ ಆಗಬೇಕಾಗಿದೆ. ಅದರ ಬಗ್ಗೆ ಸಂಸತ್‌ನ ಒಳಗಾಗಲಿ ಹೊರಗಾಗಲಿ ಯಾರೂ ಚರ್ಚಿಸುತ್ತಿಲ್ಲ. ಯಾಕೆಂದರೆ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಅವೆಲ್ಲ ಗೌಣವಾಗುತ್ತಿದೆ. ಈಗ ಇದ್ದ ಕಾನೂನೇ ಬಲಿಷ್ಠವಾಗಿದೆ ಎಂದು ಹೇಳಿಕೆ ನೀಡಿ ತೇಪೆ ಹಚ್ಚಲಾಗುತ್ತಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇವತ್ತು ಭಾರತ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಇಲ್ಲಿರುವ ಒಂದೆರಡು ಉದಾಹರಣೆಯನ್ನು ನೋಡಿ...</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇತ್ತೀಚೆಗಷ್ಟೇ ಕ್ಯೂಬಾ ಬಗ್ಗೆ ಹಿಲರಿ ಕ್ಲಿಂಟನ್ ಹೇಳಿಕೆಯನ್ನು ಸ್ವಾಗತಿಸಿರುವ ಅಧ್ಯಕ್ಷ ರೌಲ್, ಅಮೆರಿಕಕ್ಕೆ ಎಲ್ಲಾ ರೀತಿಯ ಗೌರವ ನೀಡಲಾಗುವುದು ಆದರೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಆಶಯದಂತೆ ಯಾವುದೇ ಕಾರಣಕ್ಕೂ ದೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಅದರ ಬದಲಿಗೆ ಕ್ರಾಂತಿಗೆ ಸಿದ್ದ ಎಂದು ಎಚ್ಚರಿಕೆ ನೀಡಿ, ದೇಶದಲ್ಲಿನ ಸಮಾಜವಾದ ವ್ಯವಸ್ಥೆಯನ್ನು ಮುಂದುವರಿಸಲಾಗುವುದು, ಅದನ್ನು ಯಾವುದೇ ಕಾರಣಕ್ಕೂ ನಾಶಗೊಳಿಸುವುದಿಲ್ಲ ಎಂದು ಕ್ಯಾಸ್ಟ್ರೋ ಅಮೆರಿಕದ ವಿರುದ್ಧವೇ ಗುಡುಗಿದ್ದರು.</font><br/><font  style='font-size:11pt; color:#000000'></font><br/>1965<font  style='font-size:11pt; color:#000000'>ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಎರಡನೇ ಬಾರಿ ದಂಡೆತ್ತಿ ಬಂದಿತ್ತು. ಆ ನಂತರ ಪಾಕ್ ಬಾಲಮಡಚಿಕೊಂಡು ಹೋಗಿದ್ದು ಇತಿಹಾಸ. ಆದರೆ ಆ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ವಿದೇಶಿ ಶಕ್ತಿಗಳ ಧಮಕಿಗಳಿಗೆ ಸೊಪ್ಪು ಹಾಕದೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ನಮ್ಮ ಸೈನ್ಯ ಪಡೆ ಪಾಕಿಸ್ತಾನದ ಸೈನಿಕರನ್ನು ಕರಾಚಿ, ರಾವಲ್ಪಿಂಡಿವರೆಗೆ ಅಟ್ಟಾಡಿಸಿಕೊಂಡು ಓಡಿಸುತ್ತಿತ್ತೋ ಇಲ್ಲವೋ?. ಆಗ ಇದೇ ಅಮೆರಿಕ ಪಾಕಿಸ್ತಾನದ ಜತೆ ಸಂಧಾನ ಮಾಡಿಕೊಳ್ಳಿ, ಇಲ್ಲವಾದಲ್ಲಿ ನಿಮಗೆ ಸರಬರಾಜು ಆಗುತ್ತಿರುವ ಕೆಂಪು ಗೋಧಿಯನ್ನೇ ನಿಲ್ಲಿಸಲಾಗುತ್ತದೆ ಎಂದು ಗುಡುಗಿದಾಗ, 'ಹೋಗ್ರಯ್ಯ ನಿಮ್ಮ ಗೋಧಿಯೇ ಬೇಕಾಗಿಲ್ಲ, ಬೇಕಾದ್ರೆ ನಮ್ಮ ಜನ ಉಪವಾಸ ಮಾಡ್ತಾರೇ ! ಎಂದು ಶಾಸ್ತ್ರಿ ಗರ್ಜಿಸಿದ್ದರು. ಆದರೆ ಆರು ದಶಕಗಳ ನಂತರ ನಾವು ಇಂತಹ ಸಿಂಹ ಗರ್ಜನೆಯ ನಾಯಕರನ್ನು ಹುಡುಕುವುದಾದರೂ ಎಲ್ಲಿ...?</font><br/><font  style='font-size:11pt; color:#FF8000'></font><br/><font  style='font-size:11pt; color:#FF8000'><b>ಕೊನೆಯ ಮಾತು...</font><font style=' color:#000000;'></b></font><br/><font  style='font-size:11pt; color:#000000'></font><br/>1965<font  style='font-size:11pt; color:#000000'>ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆದು, ಪಾಕ್ ಸೋಲು ಅನುಭವಿಸಿ ಹಿಮ್ಮೆಟ್ಟಿಸಿದ್ದು ಇತಿಹಾಸ. ಆದರೆ ಯುದ್ಧ ನಡೆದು ಬಹುಕಾಲದ ನಂತರ ಖ್ಯಾತ ಪತ್ರಕರ್ತರಾಗಿದ್ದ ಕುಲದೀಪ್ ನಯ್ಯರ್ ಅವರು, ಒಂದು ವೇಳೆ ಜವಾಹರಲಾಲ್ ನೆಹರು ಅವರು ಇದ್ದಿದ್ದರೆ ಭಾರತ-ಪಾಕ್ ಯುದ್ಧ ನಡೆಯುತ್ತಿತ್ತೇ ಎಂದು ಕೇಳಿದ್ದ ಪ್ರಶ್ನೆಗೆ, ಖಂಡಿತಾ ಇಲ್ಲ ಎಂಬ ಉತ್ತರ ಲಭಿಸಿತ್ತಂತೆ. ಯಾಕೆಂದರೆ ಭಾರತ ಮತ್ತು ಪಾಕ್ ನಡುವಿನ ಯುದ್ಧ ನಡೆಯುವುದೇ ಒಂದು ದೊಡ್ಡ ಅಪರಾಧ ಎಂಬ ಭಾವನೆ ನೆಹರು ಅವರಲ್ಲಿತ್ತಂತೆ!</font>]]></content:encoded>
      <pubDate>Thu, 13 Aug 2009 11:44:38 +0530</pubDate>
      <updatedDate>Tue, 15 Apr 2014 13:45:26 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ನಾವು ನಿಜವಾಗಿಯೂ ಸ್ವತಂತ್ರರಾ?]]></title>
      <link>https://kannada.webdunia.com/article/independence-day-article/ನಾವು-ನಿಜವಾಗಿಯೂ-ಸ್ವತಂತ್ರರಾ-109081300019_1.htm</link>
      <guid>https://kannada.webdunia.com/article/independence-day-article/ನಾವು-ನಿಜವಾಗಿಯೂ-ಸ್ವತಂತ್ರರಾ-109081300019_1.htm</guid>
      <media:thumbnail url="http:"/>
      <image>http:</image>
      <description><![CDATA[ವಿಶ್ವಕ್ಕೆ ಮಹಾನ್‌ಮಹಾನ್ ಕೊಡುಗೆ ನೀಡಿರುವ ಭರತಖಂಡ ಸರ್ವಸ್ವತಂತ್ರವಾಗಿ ಆರು ದಶಗಳೇ ಸಂದಿವೆ. ಆದರೆ ಈ ಗಣತಂತ್ರವೆಂಬ ಸ್ವತಂತ್ರ ರಾಷ್ಟ್ರದಲ್ಲಿ ನಾವು ನಿಜವಾಗಿಯೂ ಸ್ವತಂತ್ರವಾಗಿದ್ದೆವೆಯೇ ಎಂಬ ಪ್ರಶ್ನೆ ಏಳುತ್ತಿದೆ. ಒಂದು ಕಾಲದಲ್ಲಿ ಅನುಮಾನದಿಂದಲೂ ನಿರ್ಲಕ್ಷದಿಂದಲೂ ನಮ್ಮನ್ನು ಕಾಣುತ್ತಿದ್ದ ...]]></description>
      <content:encoded><![CDATA[<font  style='font-size:11pt; color:#0000FF'><b>ಸ್ನೇಹಾ    </font><font style=' color:#000000;'></b></font><br/><font  style='font-size:11pt; color:#000000'>ಭಾರತವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹಲವು ಪ್ರಥಮಗಳು ಅದರ ಮಡಿಲಲ್ಲಿದೆ. ಅಂಖೆಸಂಖ್ಯೆಗಳ ರಾಜ ಸೊನ್ನೆಯನ್ನು ಕಂಡು ಹುಡುಕಿದ್ದು ಭಾರತದ ಗಣಿತಶಾಸ್ತ್ರಜ್ಞ ಆರ್ಯಭಟ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಶ್ವದ ಪ್ರಥಮ ವಿಶ್ವವಿದ್ಯಾನಿಲಯವು ನಳಂದದಲ್ಲಿ ಕ್ರಿಸ್ತಪೂರ್ವ 700 ರಲ್ಲಿ ಆರಂಭವಾಯಿತು. ಇಲ್ಲಿ ವಿಶ್ವದ ಹತ್ತು ಸಾವಿರಕ್ಕೂ ಅಧಿಕಮಂದಿ 60ಕ್ಕೂ ವಿಷಯಗಳ ಅಧ್ಯಯನ ನಡೆಸಿದ್ದಾರೆ. ನಳಂದ ವಿಶ್ವಾವಿದ್ಯಾಲಯವನ್ನು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ನಾವು ಆಗಲೇ ಶೈಕ್ಷಣಿಕವಾಗಿ ವಿಶ್ವದಲ್ಲಿ ಪ್ರಮುಖಸ್ಥಾನವನ್ನೇ ಹೊಂದಿದ್ದೆವು. </font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/0908/13/images/img1090813019_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>ND</p></p><!--endImage--> <font  style='font-size:11pt; color:#000000'>ಇದೇವೇಳೆಯು ಆಯುರ್ವೇದವು ಆರಂಭಿಕ ವೈದ್ಯಕೀಯ ಶಾಲೆ ಎಂಬ ಹೆಮ್ಮೆ ಇದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಪ್ರಥಮಗಳಿವೆ. ಇದೇವೇಳೆ ಇನ್ನೊಂದು ಪ್ರಮುಖ ವಿಚಾರವೆಂದರೆ, ಭಾರತ ತನ್ನ ಸಾವಿರ ವರ್ಷಗಳ ಇತಿಹಾಸದಲ್ಲಿ ತಾನಾಗಿ ಯಾರ ಮೇಲೂ ದಂಡೆತ್ತಿ ಹೋಗಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮ್ಮ ಇತಿಹಾಸವು ಪ್ರಾಚೀನ ಇತಿಹಾಸ, ಮಧ್ಯಕಾಲೀನ ಇತಿಹಾಸ, ಮೊಗಲ್ ಇತಿಹಾಸದ ಬಳಿಕ ಭಾರತ ಕಂಪೆನಿ ಆಡಳಿತದ ಇತಿಹಾಸವನ್ನು ಹೊಂದಿದೆ.  ವ್ಯಾಪಾರಕ್ಕಾಗಿ ಬಂದು ಇಲ್ಲಿ ಝಂಡಾಹೂಡಿದ ಫ್ರೆಂಚರು, ಡಚ್ಚರು ಇವರ ಬಳಿಕ ಇಂಗ್ಲೀಷರು ಅತ್ಯಂತ ಸಿರಿವಂತಿಗೆಯಿಂದ ಕೂಡಿದ್ದ ಭಾರತದ ಮೇಲೆ ಪ್ರಾಬಲ್ಯ ಮೆರೆದು ಎಷ್ಟು ಸಾಧ್ಯವೋ ಅಷ್ಟು ದೋಚಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮ್ಮ ಪೂರ್ವಜರು ತಮ್ಮ ಧನ ಮಾನ ಪ್ರಾಣ ತ್ಯಾಗಗಳ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ನಮ್ಮ ಆಡಳಿತ ವ್ಯವಸ್ಥೆ ನಮ್ಮ ಕೈಗೆ ಬಂದಾಗ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯನ್ನು ಹುಟ್ಟು ಹಾಕಿಕೊಂಡ ನಮ್ಮದು ಪ್ರಜೆಗಳೇ ಪ್ರಭುಗಳಾಗುವ ಅವಕಾಶದ ರಾಷ್ಟ್ರ. ಎಷ್ಟು ಸುಂದರ ಪರಿಕಲ್ಪನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಶ್ವಕ್ಕೆ ಮಹಾನ್‌ಮಹಾನ್ ಕೊಡುಗೆ ನೀಡಿರುವ ಭರತಖಂಡ ಸರ್ವಸ್ವತಂತ್ರವಾಗಿ ಆರು ದಶಗಳೇ ಸಂದಿವೆ. ಆದರೆ ಈ ಗಣತಂತ್ರವೆಂಬ ಸ್ವತಂತ್ರ ರಾಷ್ಟ್ರದಲ್ಲಿ ನಾವು ನಿಜವಾಗಿಯೂ ಸ್ವತಂತ್ರವಾಗಿದ್ದೆವೆಯೇ ಎಂಬ ಪ್ರಶ್ನೆ ಏಳುತ್ತಿದೆ. ಒಂದು ಕಾಲದಲ್ಲಿ ಅನುಮಾನದಿಂದಲೂ ನಿರ್ಲಕ್ಷದಿಂದಲೂ ನಮ್ಮನ್ನು ಕಾಣುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯಗಳಿಂದು ನಮ್ಮ ಪ್ರಗತಿಯನ್ನು ಬೆರಗಿನಿಂದ ನೋಡುತ್ತಿವೆ. ಇದಕ್ಕೆ ನಾವು ಹೆಮ್ಮೆಪಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಷ್ಟು ಸುದೀರ್ಘ ಅವಧಿಗೆ ಹೋಲಿಸಿದರೆ ಅಪಾರವಾದ ಸಂಪನ್ಮೂಲವನ್ನು ಹೊಂದಿರುವ ನಮಗೆ ಇಷ್ಟೇ ಪ್ರಗತಿ ಸಾಕೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.</font><br/><font  style='font-size:11pt; color:#FF8040'></font><br/><font  style='font-size:11pt; color:#FF8040'><b>ನಾವು ಎಷ್ಟರ ಮಟ್ಟಿಗೆ ಸ್ವತಂತ್ರರು?   </font><font style=' color:#000000;'></b></font><br/><font  style='font-size:11pt; color:#000000'>ಕಳೆದ ನವೆಂಬರ್ ತಿಂಗಳ 26ರಂದು ಭಾರತದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದರು. ಈ ಖದೀಮರು ಯಾರು ಎಂಬುದು ವಿಶ್ವಕ್ಕೇ ಗೊತ್ತು. ಆದರೆ ಇವರ ವಿರುದ್ಧ ಕ್ರಮಕೈಗೊಳ್ಳಲು ನಾವು ಸ್ವತಂತ್ರರೇ? ಎಲ್ಲದಕ್ಕೂ ನಾವು ಅಮೆರಿಕದತ್ತ ನೋಡುತ್ತೇವೆ. ಉಗ್ರರನ್ನು ಮಟ್ಟ ಹಾಕಲು ನಮ್ಮ ಪಕ್ಷಗಳು ಸ್ವತಂತ್ರವಾಗಿವೆಯೇ? ಇಲ್ಲ. ಇದಕ್ಕೆ ವೋಟ್ ಬ್ಯಾಂಕ್ ಅಡ್ಡಿಯಾಗುತ್ತದೆ. ಮುಂದೇನು ಮಾಡಬೇಕು ಎಂಬುದಕ್ಕೆ ನಮ್ಮನ್ನು ಆಳುವವರು, ಅವರನ್ನು ಆಳುತ್ತಿರುವ ಅಮೆರಿಕದತ್ತ ದೃಷ್ಟಿ ಬೀರಿ ಕೂರುತ್ತಾರೆ. ನಿಮಗೆ ನೆಪಿರಬಹುದು ಆಗ ಅರುಣ್ ಶೌರಿ ಅವರು "ಪ್ರತಿಯೊಂದಕ್ಕೂ ಮಮ್ಮಿ(ಅಮೆರಿಕ) ಬಳಿ ಓಡೋದನ್ನು ನಿಲ್ಲಿಸಿ" ಎಂದಿದ್ದರು. ಅವರು ವಿರೋಧಪಕ್ಷದಲ್ಲಿದ್ದುಕೊಂಡು ಈ ಮಾತು ಹೇಳಿದ್ದು ಹೌದು. ಆದರೆ ಅದು ಎಷ್ಟೊಂದು ವಾಸ್ತವ? ಅಫ್ ಕೋರ್ಸ್ ನಮ್ಮ ನಡೆಯನ್ನು ಅಂತಾರಾಷ್ಟ್ರೀಯ ಸಮೂಹವು ಎಚ್ಚರಿಕೆಯಿಂದ ಗಮನಿಸುತ್ತಿರುತ್ತದೆ. ಆದರೆ ನಮ್ಮ ರಕ್ಷಣೆಗೆ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೋ ಬೇಡವೋ? ಅಮೆರಿಕದ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದನಾ ದಾಳಿ ಆದಾಗ ಅದರ ನಡೆ ಹೇಗಿತ್ತು. ಆಲ್ಲಿ ಯಾಕೆ ಮತ್ತೆ ದಾಳಿ ಆಗಿಲ್ಲ ಎಂಬುದಾಗಿ ಪ್ರಜೆಗಳು ಎತ್ತುತ್ತಿರುವ ಪ್ರಶ್ನೆ ಸರಿಇಲ್ವೇ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯದ ವಿಚಾರ ಬಂದಾಗ ನಾವು ಸಾಮಾನ್ಯ ಪ್ರಜೆಗಳು ನಮ್ಮ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದೇವೆಯೇ? ಇದಕ್ಕೆ ಒಂದು ಸಣ್ಣ ಉದಾಹರಣೆ ನೆನಪಿಸೋಣ. ಮತ್ತೆ ಅದೇ ಮುಂಬೈ ದಾಳಿಯ ಸಂದರ್ಭದ ಉದಾಹರಣೆ ನೀಡುವುದಾದರೆ, ಈ ವೇಳೆ ಉಗ್ರವಾದಿಗಳ ದಾಳಿಯಿಂದ ಕಂಗೆಟ್ಟಿದ್ದ ಮುಂಬೈ ಜನತೆ ಬೀದಿಗಿಳಿದರು. ಆ ಧರ್ಮ ಈ ಧರ್ಮ, ಬಡವ ಬಲ್ಲಿದ ಎಂಬ ಹಂಗನ್ನು ತೊರೆದು ಜನರು ಬೀದಿಗಿಳಿದು ತಮ್ಮ ಒಗ್ಗಟ್ಟು ಪ್ರದರ್ಶಿಸಿ ತಮ್ಮ ರಕ್ಷಣೆಗೆ ಒತ್ತಾಯಿಸಿದ್ದರ ಪ್ರತಿಫಲವೇನು ಎಂಬುದನ್ನು ನಾವು ಮರೆತಿಲ್ಲ. ಆಡಳಿತಕ್ಕೆ ಚಳಿ ಹುಟ್ಟಿದ್ದು ದಿಟ. ಕೆಲವು ಮಂತ್ರಿಗಳನ್ನು ಮನೆಗೆ ಕಳುಹಿಸಿದರೆ, ಮತ್ತೆ ಕೆಲವರು ಸ್ವಯಂಪ್ರೇರಣೆಯಿಂದ ಪೀಠಬಿಟ್ಟು ಕೆಳಕ್ಕಿಳಿದರು. ಇಂತಹ ಒಗ್ಗಟ್ಟು ನಮಗೆ ಯಾವಾಗಲೂ ಬೇಡವೇ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಂಬೈದಾಳಿಯ ಕ್ಷಣದಿಂದ ಪಾತಕಿ ಪಾಕಿಸ್ತಾನವೇ ಇದಕ್ಕೆ ಕಾರಣ ಎಂದು ನಮ್ಮ ಸ್ವತಂತ್ರ ಭಾರತ ಹೇಳುತ್ತಲೇ ಬಂತು. ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ತನಕ ಮತ್ತು ಇದರ ರೂವಾರಿಗಳನ್ನು ಕಾನೂನಿನ ಕಟಕಟೆಗೆ ಎಳೆದು ತರುವ ತನಕ ಪಾಕಿಸ್ತಾನದದೊಂದಿಗೆ ಯಾವುದೇ ಮಾತುಕತೆ ಇಲ್ಲವೇ ಇಲ್ಲ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಕೇಂದ್ರ ಸಚಿವರು ಧಿಗಿಣ ಹೊಡೆದಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಅದೇನಾಯಿತೋ, ಈಜಿಫ್ಟ್‌ನಲ್ಲಿ ಶೃಂಗ ಸಮ್ಮೇಳನಕ್ಕೆ ತೆರಳಿದ ವೇಳೆ, ಪ್ರಧಾನಿ ಸಿಂಗ್ ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾತುಕತೆಗೆ ಸಿದ್ಧವೆಂಬ ಮುಕ್ತತೆಯ ಸುಳಿವು ನೀಡಿದರು. ಇದಕ್ಕೂ ಮುಂಚೆ ರಶ್ಯಾ ಸಮ್ಮೇಳನಕ್ಕೆ ತೆರಳಿದ್ದ ವೇಳೆ ಅಮೆರಿಕ ಅಧ್ಯಕ್ಷ ಅಸಿಫ್ ಅಲಿ ಜರ್ಧಾರಿಯವರ ತಲೆ ಕಾಣುತ್ತಲೇ "ನೀವು ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು" ಎಂದು ಎಚ್ಚರಿಕೆ ನೀಡಿದ್ದರು. ಮಾಧ್ಯಮದವರ ಎದುರೇ ನೀಡಿದ ಈ ಎಚ್ಚರಿಕೆ ಜರ್ದಾರಿಗೆ ಇರಿಸುಮುರಿಸುಂಟು ಮಾಡಿತ್ತು. ಇಂತಿಪ್ಪ ನಮ್ಮ ಪ್ರಧಾನಿಗಳು ಕೈರೋದಲ್ಲಿ ಮೆತ್ತಗಾಗಲು ಕಾರಣವೇನು?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಮೆರಿಕ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಒಬಾಮಾ ಸಂದೇಶವಿರುವ ಲಕೊಟೆಯೊಂದನ್ನು ಭಾರತದ ಪ್ರಧಾನಿಗೆ ನೀಡಿದ್ದರು. ಬರ್ನ್ಸ್ ಅವರ ಮಿಕ್ಕೆಲ್ಲ ಕಾರ್ಯಕ್ರಮಗಳ ಕ್ಷಣಕ್ಷಣದ ವರದಿಗಳು ಬಿತ್ತರವಾಗಿದ್ದರೂ, ಆ ಲಕೋಟೆಯೊಳಗೆ ಏನಿತ್ತು ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದರೆ ಈ ಲಕೋಟೆಯ ಮಹಾತ್ಮೆಯೇ ಭಾರತವು ಪಾಕ್‌ನೊಂದಿಗೆ ಮಾತುಕತೆಗೆ ಮುಕ್ತವಾಗಲು ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಅತ್ತ ಆ ಪಾಕಿಸ್ತಾನ, (ಅದೂ ಭಾರತದಿಂದ ಮುರಿದುಕೊಂಡು ಹೋದ ಸ್ವತಂತ್ರ ರಾಷ್ಟ್ರವೇ) ನಮ್ಮ ರಾಷ್ಟ್ರಕ್ಕೂ ನಿಮ್ಮಲ್ಲಿ ನಡೆದ ಮುಂಬೈದಾಳಿಗೂ ಸಂಬಂಧ ಇಲ್ಲವೇಇಲ್ಲ ಎಂಬ ರಾಗ ಎಳೆಯುತ್ತಾ ಬಂದಿದ್ದು, ಬಳಿಕ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್ ಪಾಕ್ ಪ್ರಜೆ ಎಂದು ಒಪ್ಪಿಕೊಳ್ಳುವಷ್ಟು ಮೆತ್ತಗಾಯಿತು. ಇದೆಲ್ಲಕ್ಕೂ ದೊಡ್ಡಣ್ಣನ ಪ್ರಭಾವ ಕಾರಣವೇ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೈರೋದಲ್ಲಿ ಪಾಕಿಸ್ತಾನದ ಜತೆ ನೀಡಿದ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ಥಾನ ಪ್ರಸ್ತಾಪವನ್ನು ಪಾಕಿಸ್ತಾನ ತುರುಕಿದ್ದನ್ನು ಸಮರ್ಥಿಸಿಕೊಳ್ಳಲು ಪ್ರಧಾನಿ ಆಂಡ್ ಕೋ ಹೆಣಗಾಡಿದ್ದನ್ನು ದೇಶಕಂಡಿದೆ. ಇದನ್ನು ಸಮರ್ಥಿಸಿಕೊಳ್ಳುತ್ತಾ ನಮ್ಮನ್ನು ಆಳುವ ನಾಯಕರು ತಮ್ಮ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಾ? ವೈಯಕ್ತಿಕ ನಿಲುವಿಗಿಂತ ಪಕ್ಷದ ನಿಲುವು ದೊಡ್ಡದು. ಈಗ ಹೇಳಿ ತಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳು ನಮ್ಮ ನಾಯಕರು ಸ್ವತಂತ್ರರೇ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇಶಸ್ವತಂತ್ರವಾದ ಈ ಉತ್ಸವವನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಉಗ್ರರ ಬೆದರಿಕೆಯಡಿಯೇ ಆಚರಿಸುತ್ತಿದ್ದೇವೆ. ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿಯವರು ಬಂಧೂಕಿನ ಭದ್ರತೆಯ ಆಶ್ರಯದಲ್ಲೇ ಮಾತನಾಡುತ್ತಾರೆ. ಅಧಿಕಾರ ನಡೆಸುತ್ತಿರುವ  ಎಷ್ಟು ನಾಯಕರು ತಮ್ಮ ಆಳ್ವಿಕೆಯ ನೆಲದಲ್ಲಿ ಯಾವುದೇ ಬೆಂಗಾವಲಿಲ್ಲದೆ ಸ್ವತಂತ್ರವಾಗಿ ಓಡಾಡುತ್ತಾರೆ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಬರಹದ ಆರಂಭದಲ್ಲಿ ಸಾವಿರ ವರ್ಷದ ಇತಿಹಾಸದಲ್ಲಿ ತಾನಾಗಿ ಯಾರ ಮೇಲೂ ದಂಡೆತ್ತಿ ಹೊಗಿಲ್ಲ ಎಂದು ಹೇಳಲಾಗಿದೆ. ಈಗ ಕೊನೆಯಲ್ಲಿ ಹೇಳುವುದಾದರೆ, ತನ್ನಮೇಲೆ ದಂಡೆತ್ತಿ ಬಂದವರನ್ನೂ ಭಾರತ ಸರಿಯಾಗಿ ಹತ್ತಿಕ್ಕುತ್ತಿಲ್ಲ ಎಂಬುದು ಪ್ರಜೆಗಳ ಅಭಿಪ್ರಾಯ.</font><br/></font>]]></content:encoded>
      <pubDate>Thu, 13 Aug 2009 11:28:38 +0530</pubDate>
      <updatedDate>Tue, 15 Apr 2014 13:45:26 +0530</updatedDate>
      <category><![CDATA[independence day article]]></category>
      <authorname>ಚಂದ್ರಾವತಿ ಬಡ್ಡಡ್ಕ</authorname>
    </item>
    <item>
      <title><![CDATA[62 ವರ್ಷ ಕಳೆಯಿತು, ಅದೇ ಕಥೆ, ಅದೇ ವ್ಯಥೆ]]></title>
      <link>https://kannada.webdunia.com/article/independence-day-article/62-ವರ್ಷ-ಕಳೆಯಿತು-ಅದೇ-ಕಥೆ-ಅದೇ-ವ್ಯಥೆ-109081100094_1.htm</link>
      <guid>https://kannada.webdunia.com/article/independence-day-article/62-ವರ್ಷ-ಕಳೆಯಿತು-ಅದೇ-ಕಥೆ-ಅದೇ-ವ್ಯಥೆ-109081100094_1.htm</guid>
      <media:thumbnail url="http:"/>
      <image>http:</image>
      <description><![CDATA[1947, ಆಗಸ್ಟ್ 15 ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ದಿನ. ದಬ್ಬಾಳಿಕೆಯಿಂದ ಆಳಿದ ಬ್ರಿಟಿಷರನ್ನು ಭಾರತದಿಂದ  ತೊಲಗಿಸಿದ ದಿನ. ಅಂದು ಸ್ವಾತಂತ್ರ್ಯ ಗಳಿಸಲು ನೆತ್ತರು ಹರಿಸಿದವರು ಎಷ್ಟೋ ಜನ. ತ್ಯಾಗ, ಬಲಿದಾನ  ಮಾಡಿದವರು ಎಷ್ಟೋ ಜನ.]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/0908/11/images/img1090811094_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left">WD</p>WD</p></p><!--endImage--> <font  style='font-size:11pt; color:#000000'><b>ಗುಣವರ್ಧನ ಶೆಟ್ಟಿ</b></font><br/>1947, <font  style='font-size:11pt; color:#000000'>ಆಗಸ್ಟ್ 15 ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ದಿನ. ದಬ್ಬಾಳಿಕೆಯಿಂದ ಆಳಿದ ಬ್ರಿಟಿಷರನ್ನು ಭಾರತದಿಂದ  ತೊಲಗಿಸಿದ ದಿನ. ಅಂದು ಸ್ವಾತಂತ್ರ್ಯ ಗಳಿಸಲು ನೆತ್ತರು ಹರಿಸಿದವರು ಎಷ್ಟೋ ಜನ. ತ್ಯಾಗ, ಬಲಿದಾನ  ಮಾಡಿದವರು ಎಷ್ಟೋ ಜನ. ಆಗ ಜನರಲ್ಲಿ ದೇಶಪ್ರೇಮ, ಸ್ವಾಭಿಮಾನ ನೆಲೆಸಿತ್ತು. ನಮ್ಮ ತಾಯ್ನಾಡು, ನಮ್ಮ  ತಾಯ್ಡುಡಿಗಳ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 62 ವರ್ಷಗಳು  ಗತಿಸಿಹೋಗಿವೆ. 62 ವರ್ಷಗಳಲ್ಲಿ ನಮ್ಮ ಸಾಧನೆಯೇನು? ಅಂದಿನ ದೇಶಪ್ರೇಮದ ಕಿಚ್ಚು ಈಗಲೂ  ಹೊಗೆಯಾಡುತ್ತಿದೆಯೇ? ಸ್ವಾತಂತ್ರ್ಯದ ಬಳಿಕ ನಾವು ಗಳಿಸಿದ್ದೆಷ್ಟು?ಉಳಿಸಿದ್ದೆಷ್ಟು? ಸ್ವಾತಂತ್ರ್ಯದ ನಂತರ  ದೇಶಕ್ಕುಂಟಾದ ಒಳಿತು, ಕೆಡಕುಗಳೇನು? ಸ್ವಾತಂತ್ರ್ಯದ ನಂತರದ ದೇಶದ ಸ್ಥಿತಿಗತಿಯನ್ನು ಅವಲೋಕಿಸುತ್ತಾ  ಹೋದರೆ ಕೆಳಗಿನ ವಾಸ್ತವಿಕ ಚಿತ್ರಣ ಬಿಚ್ಚಿಕೊಳ್ಳುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಜನಸಂಖ್ಯಾ ಸ್ಫೋಟ:</b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಜನತೆ ನಾ ಮುಂದು ತಾ ಮುಂದು ಎಂದು ಜನಸಂಖ್ಯಾ ಸ್ಫೋಟಕ್ಕೆ ತಮ್ಮದೇ ಆದ  ಕೊಡುಗೆ ಸಲ್ಲಿಸಿದ್ದಾರೆ. "ಒಂದು ಬೇಕು, ಎರಡು ಸಾಕು" ಕುಟುಂಬ ಯೋಜನೆ ಮಂತ್ರ ಅತಂತ್ರವಾಯಿತು.  ಹೊಟ್ಟೆಗಿಲ್ಲದಿದ್ದರೂ ಕೈಗೊಂದು ಕಾಲಿಗೊಂದು ಮಕ್ಕಳುಮರಿ ಎನ್ನುವಂತಾಗಿದೆ. ಜನಸಂಖ್ಯಾ ಸ್ಫೋಟದಲ್ಲಿ ಗಿನ್ನೆಸ್  ದಾಖಲೆ ಬರೆಯಲು ಭಾರತ ನಾಗಾಲೋಟದಲ್ಲಿ ಮುನ್ನುಗ್ಗಿದೆ. ಸರ್ಕಾರ ಮಾತ್ರ ಜನಸಂಖ್ಯಾ ಸ್ಫೋಟವನ್ನು ಬಿಟ್ಟ  ಕಣ್ಣು ಬಿಟ್ಟಂತೆ ಮ‌ೂಕ ಪ್ರೇಕ್ಷಕನಂತೆ ನೋಡುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಬಡತನ:</b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಣ್ಣಲು ಕೂಳಿಲ್ಲ. ದುಡಿಯಲು ಕೆಲಸವಿಲ್ಲ, ತಲೆಯ ಮೇಲೊಂದು ಸೂರಿಲ್ಲ, ಮೈಮುಚ್ಚಲು ಬಟ್ಟೆಯಿಲ್ಲ,  ಇವೆಲ್ಲ ಇಲ್ಲದವುಗಳ ನಡುವೆ ಇರುವುದೇನೆಂದು ಹುಡುಕಿದರೆ ಸಿಗುವುದು ಅಸ್ಥಿಪಂಜರದ ಬಡಜೀವ. ಪ್ರಧಾನಿ  ಹೇಳುತ್ತಾರೆ:ದೇಶ ಪ್ರಗತಿ ಫಥದಲ್ಲಿ ಸಾಗಿದೆ. ಆರ್ಥಿಕ ಅಭಿವೃದ್ಧಿಯತ್ತ ದಾಪುಗಾಲು ಹಾಕಿದೆ. ನಾವು ಕೇಳುತ್ತೇವೆ:  ಅಭಿವೃದ್ಧಿಯ ಫಲ ಎಷ್ಟು ಜನರಿಗೆ ಸಿಕ್ಕಿದೆ?</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಮಾಜಿ ಪ್ರಧಾನಿ ನೆಹರೂ ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡಿದರು. ನೇಗಿಲಯೋಗಿಯನ್ನು ಮರೆತರು. ಗ್ರಾಮೀಣ  ಕೈಗಾರಿಕೆಗೆ ಉತ್ತೇಜನ ನೀಡಿರೆಂಬ ಗಾಂಧೀಜಿಯ ಕೂಗು ಅರಣ್ಯರೋದನವಾಯಿತು. ಅನ್ನದಾತನಿಗೆ ಅನ್ನ ಸಿಗದ  ದುಸ್ಥಿತಿ. ನೀರಾವರಿ ರೈತನ ಪಾಲಿಗೆ ಬರಿಯ "ವರಿ". ರಾಮನಿಗಾಗಿ ಕಾದುಕುಳಿತ ಶಬರಿಯಂತೆ ಮಳೆ ನಿರೀಕ್ಷಿಸಿ  ರೈತನ ಮುಖ ಆಕಾಶದತ್ತ. ಮಳೆ ಬಂದರೇನೆ ಬಡಜೀವ ಬದುಕೀತು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಭ್ರಷ್ಟಾಚಾರ</b></font><br/><font  style='font-size:11pt; color:#000000'></font><br/> <font  style='font-size:11pt; color:#000000'>ಸ್ವಾತಂತ್ರ್ಯದ ನಂತರ ನಮ್ಮ ಪ್ರಭುಗಳು ಉತ್ತು, ಬಿತ್ತು, ಬೆಳೆದು ಪೋಷಿಸಿದ್ದು ಭ್ರಷ್ಟಾಚಾರ.  ಅಭಿವೃದ್ಧಿ ಯೋಜನೆಗಳ ಫಲ ಬಡವರಿಗೆ, ರೈತರಿಗೆ ಸಿಕ್ಕಿದ್ದು ಅಷ್ಟಕ್ಕಷ್ಟೇ. ನಾಡಪ್ರಭುಗಳ ಹೊಟ್ಟೆ ಗಾತ್ರ ಮಾತ್ರ  ಬೆಳೆಯಿತಷ್ಟೇ. ಲಂಚ ಕೊಟ್ಟರೆ ಮಂಚ ಎನ್ನುತ್ತಿವೆ ಸರ್ಕಾರಿ ಕಚೇರಿಗಳು. ಕೆಳಗಿನಿಂದ ಮೇಲಿನವರೆಗೆ ನುಂಗಣ್ಣಗಳ  ನುಂಗುಭಾಕತನ. ನೀನಗಿದ್ದರೆ, ನಾ ನಿನಗೆ ಎನ್ನುವುದು ಸರ್ಕಾರಿ ಅಧಿಕಾರಿಗಳ ಧೋರಣೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಧಾನಸೌಧದಲ್ಲಿ  ಕೆತ್ತಲಾಗಿದೆ- 'ಸರ್ಕಾರಿ ಕೆಲಸ ದೇವರ ಕೆಲಸ'ವೆಂದು. ಸರ್ಕಾರಿ ನೌಕರರು ಹೇಳುತ್ತಾರೆ- ' ತಿನ್ನುವುದು ಮಾತ್ರ  ನಮ್ಮ ಕೆಲಸ' ಎಂದು. ಲಂಚ ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ ಎಂದುಕೊಳ್ಳಬೇಡಿ. ಕೊಟ್ಟವರು,  ಇಸ್ಕೊಂಡವರು ಇಬ್ಬರಿಗೂ ಇಲ್ಲಿ ಲಾಭವಿದೆ. ಆದರೆ ಲುಕ್ಸಾನಾಗುವುದು ಮಾತ್ರ ಸರ್ಕಾರಕ್ಕೆ. ಸರ್ಕಾರವೆಂದರೆ  ಜನರಿಂದ ರೂಪಿತವಾದ್ದು. ಜನರು ತೆರುವ ತೆರಿಗೆಯಿಂದ ರೂಪಿತವಾದ್ದು. ಸರ್ಕಾರಕ್ಕೆ ಲುಕ್ಸಾನೆಂದರೆ ಜನರಿಗೆ  ಲುಕ್ಸಾನವಾದ ಹಾಗೆ. ಭ್ರಷ್ಟಾಚಾರದಿಂದಲೂ ಸರ್ಕಾರದ ಬೊಕ್ಕಸಕ್ಕೆ ಲುಕ್ಸಾನು. </font><br/><font  style='font-size:11pt; color:#000000'></font><br/> <font  style='font-size:11pt; color:#000000'><b>ನಿರುದ್ಯೋಗ:</b></font><br/><font  style='font-size:11pt; color:#000000'></font><br/> <font  style='font-size:11pt; color:#000000'>ಸ್ವಾತಂತ್ರ್ಯಾನಂತರ ನಮ್ಮ ಅಧಿಕಾರಸ್ಥರ ಕೊಡುಗೆ ನಿರುದ್ಯೋಗ. ನಿರುದ್ಯೋಗದ ಹಿಂದೆಯೇ  ಬಡತನವೂ ಮೈಗಂಟಿದ ಶಾಪ. ಉದ್ಯೋಗಗಳ ಸೃಷ್ಟಿಯಲ್ಲಿ ವೈಫಲ್ಯದ ಫಲವೇ ನಿರುದ್ಯೋಗ. ರಟ್ಟೆ  ಗಟ್ಟಿಯಿದ್ದರೂ ದುಡಿಯಲು ಕೆಲಸವಿಲ್ಲ. ಹಸಿದ ಕಂಗಳ ಮಕ್ಕಳ ನಿಸ್ತೇಜ ನೋಟ. ಮುಂದಿನ ಬದುಕು ಹೇಗೆಂದು   ಆವರಿಸಿದ ಚಿಂತೆಯ ಕಾರ್ಮೋಡ.  ವಿದೇಶಗಳಲ್ಲಾದರೆ ಅಷ್ಟೊ ಇಷ್ಟೊ ಸಿಗುವ ನಿರುದ್ಯೋಗ ಭತ್ಯೆಯಿಂದ  ಉಸಿರಾಡಬಹುದು. ಆದರೆ ನಮ್ಮ ದೇಶದಲ್ಲಿ ನಿರುದ್ಯೋಗ ಭತ್ಯೆ ನೀಡಲು ಸರ್ಕಾರದ ಬೊಕ್ಕಸದ ಹಣವೂ  ಸಾಕಾಗುವುದಿಲ್ಲ. ಅಷ್ಟೊಂದು ಮಂದಿ ನಿರುದ್ಯೋಗಿಗಳ ದಂಡು ತುಂಬಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ದೇಶಾಭಿಮಾನ ಕುಂದಿಲ್ಲ</b></font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇಶದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಮ್ಮ ರಾಜಕೀಯ ಪ್ರಭುಗಳ ದೇಶಾಭಿಮಾನ ಕುಂದಿಲ್ಲ. ಪ್ರತಿ ವರ್ಷದ  ಸ್ವಾತಂತ್ರ್ಯ ದಿನೋತ್ಸವದಂದು ದೇಶಾಭಿಮಾನ ಅವರ ನರನಾಡಿಗಳಲ್ಲಿ ಉಕ್ಕಿಹರಿಯುತ್ತದೆ.  ಸ್ವಾತಂತ್ರ್ಯಕ್ಕಾಗಿ  ಆತ್ಮಾರ್ಪಣೆ ಮಾಡಿದ ಹುತಾತ್ಮರ ನೆನಪು ಮಾಡಿಕೊಳ್ಳುತ್ತಾರೆ. ಕಣ್ಣೀರಿನ ಧಾರೆಯನ್ನೇ ಹರಿಸುತ್ತಾರೆ. ಅವರ  ದೇಶಭಕ್ತಿ, ದೇಶಾಭಿಮಾನ ಕಂಡು ಜನರೂ ಕಂಬನಿ ಮಿಡಿಯುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ಮುಗಿಯಿತು.  ಮತ್ತದೇ ಬಡತನ, ಮತ್ತದೇ ನಿರುದ್ಯೋಗ, ಮತ್ತದೇ ಜನಸಂಖ್ಯಾ ಸ್ಫೋಟ, ಅದೇ ಕಥೆ, ಅದೇ ವ್ಯಥೆ.</font>]]></content:encoded>
      <pubDate>Wed, 12 Aug 2009 09:52:02 +0530</pubDate>
      <updatedDate>Tue, 15 Apr 2014 13:45:26 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಹಾತ್ಮ ಗಾಂಧೀಜಿಗಿಲ್ಲಿ ನಿತ್ಯವೂ ಆರತಿ-ಅರ್ಚನೆ]]></title>
      <link>https://kannada.webdunia.com/article/independence-day-article/ಮಹಾತ್ಮ-ಗಾಂಧೀಜಿಗಿಲ್ಲಿ-ನಿತ್ಯವೂ-ಆರತಿ-ಅರ್ಚನೆ-108081300045_1.htm</link>
      <guid>https://kannada.webdunia.com/article/independence-day-article/ಮಹಾತ್ಮ-ಗಾಂಧೀಜಿಗಿಲ್ಲಿ-ನಿತ್ಯವೂ-ಆರತಿ-ಅರ್ಚನೆ-108081300045_1.htm</guid>
      <media:thumbnail url="http:"/>
      <image>http:</image>
      <description><![CDATA[ದೇವರನ್ನು ನೋಡಿದವರಿಲ್ಲ. ಅವನು ಹೇಗಿರುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಕಲ್ಪನಾರೂಪ ನೀಡಿಕೊಂಡ ಮಾನವ, ಆ ಕಾಣದ ದೇವರ ಪ್ರತಿಮೆ ಮಾಡಿ ಭಕ್ತಿಯನ್ನು ತೋರ್ಪಡಿಸಿ ಭಯಾತಂಕಗಳನ್ನು ಹೋಗಲಾಡಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದಷ್ಟು ಉದಾರವಾಗಿ ಯೋಚಿಸಿದರೆ, ಪ್ರತಿಯೊಬ್ಬ ಮಾನವ ಜೀವಿಯೂ ...]]></description>
      <content:encoded><![CDATA[<font  style='font-size:11pt; color:#0000FF'><b>ಅವಿನಾಶ್   </font><font style=' color:#000000;'></b></font><br/><font  style='font-size:11pt; color:#000000'>ದೇವರನ್ನು ನೋಡಿದವರಿಲ್ಲ. ಅವನು ಹೇಗಿರುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಕಲ್ಪನಾರೂಪ ನೀಡಿಕೊಂಡ ಮಾನವ, ಆ ಕಾಣದ ದೇವರ ಪ್ರತಿಮೆ ಮಾಡಿ ಭಕ್ತಿಯನ್ನು ತೋರ್ಪಡಿಸಿ ಭಯಾತಂಕಗಳನ್ನು ಹೋಗಲಾಡಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದಷ್ಟು ಉದಾರವಾಗಿ ಯೋಚಿಸಿದರೆ, ಪ್ರತಿಯೊಬ್ಬ ಮಾನವ ಜೀವಿಯೂ ದೈವಾಂಶಸಂಭೂತ. ಇದು ಬಹುತೇಕ ಎಲ್ಲ ಧರ್ಮಗಳ ತಿರುಳು ಕೂಡ ಹೌದು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813045_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಇಂತಿರಲು, ಕೇವಲ ಓಟಿಗಾಗಿಯೇ ಗಾಂಧಿ ಹೆಸರನ್ನು ಬಳಸಿಕೊಳ್ಳುತ್ತಿರುವವರನ್ನು ನೋಡುತ್ತಿದ್ದೇವೆ, ಕೇಳುತ್ತಲೇ ಇದ್ದೇವೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ ಅಂತ ನಾವೆಲ್ಲ ಓದಿದ, ಕೇಳಿದ ಮತ್ತು ಸತ್ಯ, ಅಹಿಂಸೆ, ತ್ಯಾಗಗಳ ಪ್ರತೀಕವಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅಕ್ಷರಶಃ ಪೂಜಿಸುವವರ ಬಗ್ಗೆ ಕೇಳಿರುವುದು ಅಪರೂಪ. ಹೌದು. ಅಂಥದ್ದೊಂದು ತಾಣವನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕರ್ನಾಟಕ ಕರಾವಳಿಯ ಕೇಂದ್ರ ಭಾಗವಾಗಿರುವ ಮಂಗಳೂರಿನ ಕಂಕನಾಡಿ ಸಮೀಪ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರವಿದೆ. ಇದು ಇರುವುದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಪಕ್ಕ. ಗಾಂಧೀಜಿಗಾಗಿ ಕಟ್ಟಿಸಲಾದ ಆಲಯವೊಂದು ಇಲ್ಲಿ ನಮ್ಮನ್ನು ಆಕರ್ಷಿಸುತ್ತದೆ... ಇಲ್ಲಿ ಗಾಂಧೀಜಿಗೆ ದಿನಂಪ್ರತಿ ಅರ್ಚನೆ, ಆರತಿ ನಡೆಯುತ್ತಲೇ ಇರುತ್ತದೆ. ಬ್ರಹ್ಮಶ್ರೀ ನಾರಾಯಣಗುರುಗಳ ಗುಡಿಯ ಪಕ್ಕದಲ್ಲಿರುವ ಗಾಂಧೀಜಿಗೂ ಎರಡು ಹೊತ್ತು 2 ಬಾಳೆಹಣ್ಣು, ಒಂದು ಕುಡ್ತೆ ಹಾಲು ಮತ್ತು ಅಕ್ಕಿಯನ್ನು ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತದೆ.<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0808/13/images/img1080813045_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><br/><font  style='font-size:11pt; color:#000000'>ಇಲ್ಲಿ ಮಹಾತ್ಮ ಗಾಂಧೀಜಿ ಅವರು ಕೈಯಲ್ಲೊಂದು ಪುಸ್ತಕ ಹಿಡಿದು ಓದುತ್ತಿರುವ ಭಂಗಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ಗುಡಿಯನ್ನು ನಿರ್ಮಿಸಿ ಗಾಂಧೀಜಿಯನ್ನು ಪ್ರತಿಷ್ಠಾಪಿಸಿದ್ದು 1948ರ ಡಿಸೆಂಬರ್ 12ರಂದು. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಂದು ಈ ಕ್ಷೇತ್ರದ ಎಲ್ಲ ದೇವರಿಗೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮಾತ್ರವಲ್ಲ ಬ್ರಹ್ಮ, ಗಣಪತಿ ವಿಗ್ರಹಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಬಲಿ ಮೆರವಣಿಗೆಯನ್ನೂ ಮಾಡಲಾಗುತ್ತದೆ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813045_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಗರಡಿ ಬಗ್ಗೆ ಒಂದು ಮಾತು. ಬ್ರಹ್ಮ ಬೈದರ್ಕಳ ಗರಡಿ ಎಂಬುದು ತುಳುನಾಡಿನ ವೀರ ಸೋದರರೂ ಕಾರಣಿಕ ಪುರುಷರೂ ಆಗಿರುವ ಕೋಟಿ-ಚೆನ್ನಯ ಅವರಿಗೆ ಸಂಬಂಧಿಸಿದ್ದು. ತುಳುನಾಡಿನಲ್ಲಿ ಕೋಟಿ-ಚೆನ್ನಯರ ಪರಾಕ್ರಮ, ತ್ಯಾಗ-ಬಲಿದಾನ, ಕಾರಣಿಕಗಳು ಜನಜನಿತ. ಅವರ ಕಾರಣಿಕ ಶಕ್ತಿಯಿಂದಾಗಿಯೇ ಜನರು ಇಂದಿಗೂ ಈ ವೀರ ಸೋದರರನ್ನು ಗುಡಿ ಕಟ್ಟಿ ಆರಾಧಿಸುತ್ತಾರೆ. ಇವರಿಬ್ಬರೂ ದೇವರ ಅವತಾರ ಎಂದು ಪೂಜಿಸಲ್ಪಡುತ್ತಿದ್ದಾರೆ. 1874ರ ಮಾರ್ಚ್ 4ರಂದು ಈ ಗರಡಿ ಕ್ಷೇತ್ರವನ್ನು ನಿರ್ಮಿಸಲಾಯಿತು ಎಂದು ದಾಖಲೆಗಳು ವಿವರಿಸುತ್ತವೆ. ಈ ಗರಡಿಯ ಅಧಿದೈವ ಕೊಡಮಣಿತ್ತಾಯ. ಕೋಟಿ-ಚೆನ್ನಯ ಮತ್ತು ಅವರ ಸಹೋದರಿ ಮಾಯಂದಾಳ್ ವಿಗ್ರಹಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ. ಇಷ್ಟು ಮಾತ್ರವಲ್ಲದೆ ಈ ಕ್ಷೇತ್ರದ ಆವರಣದಲ್ಲಿ ಆನಂದಭೈರವ, ಸುಬ್ರಹ್ಮಣ್ಯ, ಗಣಪತಿ, ಬ್ರಹ್ಮಶ್ರೀ ನಾರಾಯಣಗುರು ಮತ್ತು ಬಾಲಪರಮೇಶ್ವರಿ ವಿಗ್ರಹಗಳಿಗೂ ಪೂಜೆ ಸಲ್ಲುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಕ್ಷೇತ್ರದ ವ್ಯವಸ್ಥಾಪಕರಾಗಿದ್ದ ಸೋಮಪ್ಪ ಪಂಡಿತ್ ಅವರು ಕಟ್ಟಾ ಗಾಂಧೀವಾದಿ ಮತ್ತು ಅಧ್ಯಕ್ಷ ನರಸಪ್ಪ ಸಾಲಿಯಾನ್ ಕೂಡ ಗಾಂಧೀಜಿಯವರ ಕಟ್ಟಾ ಅನುಯಾಯಿ. ಇವರಿಬ್ಬರು ಕಂಡ ಕನಸಿನ ಫಲವಾಗಿ, ಶಾಂತಿ ಮತ್ತು ಅಹಿಂಸೆಯ ದ್ಯೋತಕವಾಗಿ ಗಾಂಧೀಜಿಗಾಗಿ ಈ ಗುಡಿಯನ್ನು ಕಟ್ಟಿಸಲಾಗಿದ್ದು, ಗಾಂಧಿ ವಿಗ್ರಹವನ್ನು ವೆಂಕಪ್ಪ ಸಾಲಿಯಾನ್ ಎಂಬವರು ಉದಾರವಾಗಿ ಕೊಡುಗೆ ನೀಡಿದ್ದರು.<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0808/13/images/img1080813045_1_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><br/><font  style='font-size:11pt; color:#000000'>ಈ ಕ್ಷೇತ್ರ ಸಂದರ್ಶನಕ್ಕೆ ಬಂದವರು ಶಾಂತಿ, ಸೌಹಾರ್ದತೆ ಮತ್ತು ಅಹಿಂಸೆಯನ್ನೇ ಅಸ್ತ್ರವಾಗಿಸಿಕೊಂಡ ರಾಷ್ಟ್ರಪಿತನಿಗೂ ವಂದನೆ ಸಲ್ಲಿಸಲು ಮರೆಯುವುದಿಲ್ಲ. ಈ ವಿಶೇಷತೆಯೊಂದಿಗೆ ಈ ಕ್ಷೇತ್ರವು ಆಕರ್ಷಣೆಯೊಂದಿಗೆ ಕುತೂಹಲದ ಕೇಂದ್ರವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗಾಗಿ, ನೀವೊಮ್ಮೆ ಮಂಗಳೂರಿಗೆ ಭೇಟಿ ನೀಡಿದಾಗ, ನಗರದ ಕೇಂದ್ರಭಾಗದಿಂದ 3 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವನ್ನು ನೋಡಲು ಮರೆಯದಿರಿ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಚಿತ್ರ ಮತ್ತು ವೀಡಿಯೋ: ಇಮೇಜ್ ಸ್ಟುಡಿಯೋ, ಮಂಗಳೂರು</b></font>]]></content:encoded>
      <pubDate>Sat, 08 Aug 2009 17:29:37 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಸ್ವೇಚ್ಛಾಚಾರವೇ ಸ್ವಾತಂತ್ರ್ಯವೇ...?]]></title>
      <link>https://kannada.webdunia.com/article/independence-day-article/ಸ್ವೇಚ್ಛಾಚಾರವೇ-ಸ್ವಾತಂತ್ರ್ಯವೇ-108081300067_1.htm</link>
      <guid>https://kannada.webdunia.com/article/independence-day-article/ಸ್ವೇಚ್ಛಾಚಾರವೇ-ಸ್ವಾತಂತ್ರ್ಯವೇ-108081300067_1.htm</guid>
      <media:thumbnail url="http:"/>
      <image>http:</image>
      <description><![CDATA[ಸ್ವಾತಂತ್ರ್ಯ ಅಂದರೆ ಬಂಧನದಿಂದ ಮುಕ್ತಿ. ದಬ್ಬಾಳಿಕೆಯಿಲ್ಲದೆ, ನಮ್ಮನ್ನು ನಾವೇ ಆಳುವಂತಹ ಯೋಜನೆ. ಆಗಸ್ಟ್ 15ರಂದು ಭಾರತದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಅಂದು ಎಲ್ಲಿ ನೋಡಿದರಲ್ಲಿ ತ್ರಿವರ್ಣ ಧ್ವಜವು ಹಾರಾಡುತ್ತಿರುತ್ತದೆ. ನಮ್ಮ ದೇಶದ ರಾಜಕೀಯ ಧುರೀಣರಿಂದ ಹಿಡಿದು ಎಲ್ಲಾ ಮಹಾನ್ ...]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813067_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ಸ್ವಾತಂತ್ರ್ಯ ಅಂದರೆ ಬಂಧನದಿಂದ ಮುಕ್ತಿ. ದಬ್ಬಾಳಿಕೆಯಿಲ್ಲದೆ, ನಮ್ಮನ್ನು ನಾವೇ ಆಳುವಂತಹ ಯೋಜನೆ. ಆಗಸ್ಟ್ 15ರಂದು ಭಾರತದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಅಂದು ಎಲ್ಲಿ ನೋಡಿದರಲ್ಲಿ ತ್ರಿವರ್ಣ ಧ್ವಜವು ಹಾರಾಡುತ್ತಿರುತ್ತದೆ. ನಮ್ಮ ದೇಶದ ರಾಜಕೀಯ ಧುರೀಣರಿಂದ ಹಿಡಿದು ಎಲ್ಲಾ ಮಹಾನ್ ವ್ಯಕ್ತಿಗಳು ಅಂದು ಸ್ವಾತಂತ್ರ್ಯದ ಬಗೆಗೆ ಭಾಷಣ ಬೀಗುತ್ತಾರೆ. ಒಟ್ಟಿನಲ್ಲಿ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ, ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಇದೆ? ನಾವು ಸಂಪೂರ್ಣ ಸ್ವತಂತ್ರರೇ? ಅಥವಾ ಇನ್ನೂ ಪರತಂತ್ರರೇ? ಸ್ವಾತಂತ್ರ್ಯ ಎಂದರೆ ಅದು ಎಲ್ಲಾ ವಿಧದಲ್ಲೂ ಎಲ್ಲಾ ವಿಷಯಗಳಲ್ಲೂ ಅನ್ವಯಿಸುತ್ತದೆ. ಬೇರೊಬ್ಬರ ಆಳ್ವಿಕೆಯಿಂದ ಮುಕ್ತಿ ಹೊಂದಿದ ತಕ್ಷಣ ಅದನ್ನು ಸ್ವಾತಂತ್ರ್ಯವೆಂದು ಕರೆಯಲಾಗುವುದಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಾಗೆ ನೋಡಿದರೆ, ಭಾರತದಲ್ಲಿ ಆಂತರಿಕವಾಗಿ ಜನರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಇದಕ್ಕೆ ಅನೇಕ ಉದಾಹರಣೆಗಳಿಗೆ. ಕೂಲಿಕಾರ್ಮಿಕರ ಮೇಲೆ ದಬ್ಬಾಳಿಕೆಗಳು, ಕೀಳು ಜಾತಿಯವರ ಮೇಲಿನ ಅವಮಾನಗಳು, ಬಡವರ ಮೇಲಿನ ದೌರ್ಜನ್ಯ ಇನ್ನೂ ಸಾಗುತ್ತಲೇ ಇದೆ. ಹಾಗಿದ್ದರೆ ಇದನ್ನು ಸ್ವಾತಂತ್ರ್ಯ ಎಂದು ಕರೆಯಬಹುದೇ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ಕಡೆ ಭಯೋತ್ಪಾದಕರ ಭೀಕರ ಹಾವಳಿ. ನಕ್ಸಲೀಯರ ಸಮಸ್ಯೆ, ಉಗ್ರಗಾಮಿಗಳ ಭೀತಿ. ಇವುಗಳಿಂದೆಲ್ಲಾ ರಕ್ಷಿಸಬೇಕಾದ ನಾಯಕರು ತಮ್ಮ ಹಿತದೃಷ್ಟಿಯನ್ನಷ್ಟೇ ಕಾಪಾಡಿಕೊಂಡು ಬರುತ್ತಿದ್ದಾರೆ. ಇನ್ನು ಉಳಿದವರಿಗೆ ದೇವರೇ ಗತಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಷ್ಟೆಲ್ಲಾ ನಡೆಯುತ್ತಿರುವಾಗ ಸ್ವಾತಂತ್ರ್ಯ ಪೂರ್ವಕ್ಕೂ ಸ್ವಾತಂತ್ರ್ಯ ನಂತರಕ್ಕೂ ಬಹಳಷ್ಟು ವ್ಯತ್ಯಾಸಗಳಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅನ್ಯರಾಷ್ಟ್ರೀಯರ ದಬ್ಬಾಳಿಕೆಯಾದರೆ, ಇಂದು ಈ ದೇಶದ ಜನರದ್ದೇ ದಬ್ಬಾಳಿಕೆ. ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಮಹಾತ್ಮಾಗಾಂಧಿಯವರು ಮಾತೊಂದನ್ನು ಹೇಳಿದ್ದರು."ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದು ಒಬ್ಬ ಮಹಿಳೆ ಮಧ್ಯರಾತ್ರಿ ಯಾವುದೇ ಭಯವಿಲ್ಲದೆ ನಡೆದಾಗ ಮಾತ್ರ." ಮಧ್ಯರಾತ್ರಿ ಬಿಡಿ. ಈಗ ಹಗಲಲ್ಲಿ ನಡೆಯುವುದೇ ಕಷ್ಟ. ಅಂತಹ ಸ್ವಾತಂತ್ರ್ಯ ರಾಷ್ಟ್ರ ಭಾರತ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಷ್ಟೆಲ್ಲಾ ಇದ್ದೂ, ನಮ್ಮದು ಸ್ವಾತಂತ್ರ್ಯ ರಾಷ್ಟ್ರ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ನಮ್ಮೊಳಗಿನ ಸಂಕೋಲೆಗಳನ್ನು ನಾವು ಮೊದಲು ಬಿಡಿಸಿಕೊಳ್ಳಬೇಕು. ನಮ್ಮ ನಡುವಿನ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಬೇಕು. ಅದನ್ನು ಪಡೆದಾಗ ಮಾತ್ರವೇ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ. ಇಲ್ಲವಾದಲ್ಲಿ ಪರತಂತ್ರವೇ ಹೌದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಕ್ಕಾಗಿ ಇನ್ನಾದರೂ ದೇಶದ ಪ್ರಜೆಗಳಾದ ನಾವು ದೇಶದ ಒಳಿತಿಗಾಗಿ ಎಚ್ಚೆತ್ತುಕೊಂಡು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಪರಸ್ಪರ ಅನ್ಯೋನ್ಯ ಸಂಬಂಧಗಳನ್ನು ಬೆಳೆಸಿಕೊಂಡು ಪ್ರೀತಿ ವಿಶ್ವಾಸವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ,</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲಿದೆಯೋ ಸ್ವಾತಂತ್ರ್ಯ ಎಲ್ಲಿದೆಯೋ ಸ್ವಾತಂತ್ರ್ಯ...</font><br/><font  style='font-size:11pt; color:#000000'>ಸಾಗುತ್ತಿದೆ ಇಲ್ಲಿ ಪರತಂತ್ರ...</font><br/><font  style='font-size:11pt; color:#000000'>ಹಣ ಹೆಂಡವ ಕೊಟ್ಟು ಮತವ ಹಾಕಿಸುವರು....</font><br/><font  style='font-size:11pt; color:#000000'>ಕತ್ತಿ ಮಚ್ಚು ಹಿಡಿದು ಜನರ ಬೆದರಿಸುವರು....</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಂದು ಹೇಳಬೇಕಾದ ಪರಿಸ್ಥಿತಿ ಬಂದೊದಗಬಹುದು..</font>]]></content:encoded>
      <pubDate>Sat, 08 Aug 2009 17:25:35 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಕಥೆ: ಆ ಪ್ಲಾಸ್ಟಿಕ್ ಧ್ವಜದ ಗುಂಗಲ್ಲಿ...]]></title>
      <link>https://kannada.webdunia.com/article/independence-day-article/ಕಥೆ-ಆ-ಪ್ಲಾಸ್ಟಿಕ್-ಧ್ವಜದ-ಗುಂಗಲ್ಲಿ-108081300057_1.htm</link>
      <guid>https://kannada.webdunia.com/article/independence-day-article/ಕಥೆ-ಆ-ಪ್ಲಾಸ್ಟಿಕ್-ಧ್ವಜದ-ಗುಂಗಲ್ಲಿ-108081300057_1.htm</guid>
      <media:thumbnail url="http:"/>
      <image>http:</image>
      <description><![CDATA[ಸ್ವಾತಂತ್ರ್ಯ ದಿನಾಚರಣೆಯಂದು  ಪದ್ಯ ಹೇಳ್ಳಿಕುಂಟು ಅಂತ ಅಮ್ಮನತ್ರ ಕಾಡಿಸಿ ಪೀಡಿಸಿ ಹೊಸ ಬಿಳಿ ಡ್ರೆಸ್ಸು, ಕೈಗೆ ಕೇಸರಿ ಬಿಳಿ ಹಸಿರು ಬಣ್ಣದ ಬಳೆ, ಕೆಂಪು ರಿಬ್ಬನ್ ಹಾಕಿಸಿಕೊಂಡಾಗಿತ್ತು. ಮತ್ತೆ ಅಪ್ಪ ಬೆಳಿಗ್ಗೆ ಬಾಯಿ ಕೆಂಪು ಮಾಡಿ ಉಗಿವ ಹೊತ್ತಿಗೆ ಮೆಲ್ಲನೆ ಹೆದರಿ ಹೆದರಿ ಹಿಂದಿನಿಂದ ನಿಂತು ಒಂದು ...]]></description>
      <content:encoded><![CDATA[<font  style='font-size:11pt; color:#0000FF'><b>ಕೃಷ್ಣವೇಣಿ ಕುಂಜಾರು   <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813057_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ಕದಂ ಕದಂ ಬಡಾಯೆಗ </font><br/><font  style='font-size:11pt; color:#000000'>ಖುಷೀ ಸೆ ಗೀತ್ ಗಾಯೆಗ...</font><br/><font  style='font-size:11pt; color:#000000'>ಇಷ್ಟೇ ಇದ್ದಿದ್ದು ಚಿಂಟು ಮನದಲ್ಲಿ. ಸ್ವಾತಂತ್ರ್ಯ ದಿನಾಚರಣೆಯಂದು  ಪದ್ಯ ಹೇಳ್ಳಿಕುಂಟು ಅಂತ ಅಮ್ಮನತ್ರ ಕಾಡಿಸಿ ಪೀಡಿಸಿ ಹೊಸ ಬಿಳಿ ಡ್ರೆಸ್ಸು, ಕೈಗೆ ಕೇಸರಿ ಬಿಳಿ ಹಸಿರು ಬಣ್ಣದ ಬಳೆ, ಕೆಂಪು ರಿಬ್ಬನ್ ಹಾಕಿಸಿಕೊಂಡಾಗಿತ್ತು. ಮತ್ತೆ ಅಪ್ಪ ಬೆಳಿಗ್ಗೆ ಬಾಯಿ ಕೆಂಪು ಮಾಡಿ ಉಗಿವ ಹೊತ್ತಿಗೆ ಮೆಲ್ಲನೆ ಹೆದರಿ ಹೆದರಿ ಹಿಂದಿನಿಂದ ನಿಂತು ಒಂದು ಧ್ವಜ ತೆಗಿಲಿಕ್ಕೆ ಎಂಟಾಣೆ ಕೇಳಿ ಬೈಸಿಕೊಂಡಾಗಿತ್ತು. ಹಾಗೆಲ್ಲಾ ಪ್ಲಾಸ್ಟಿಕ್ ಬಾವುಟ ಹಿಡ್ದು ಆಡ್ಬಾರ್ದು ಅಂತ ಅಜ್ಜನ ಬುಧ್ಧಿವಾದಕ್ಕೆ ಮನಸ್ಸಿಲ್ಲದ ಮನಸ್ಸಿಂದ ಹೂಂಗುಟ್ಟುವಾಗ ಅಮ್ಮನಿಗೆ ಯಾಕೋ ತಡೆಯಲಾಗಲಿಲ್ಲ, ತನ್ನ ಡಬ್ಬಿಯಿಂದ ಯಾರಿಗೂ ಕಾಣದ ಹಾಗೆ ಎಂಟಾಣೆ ತೆಗೆದು ಕೊಟ್ಟಿದ್ದೇ ತಡ ಖುಷಿಯಿಂದ ಶಾಲೆಗೆ ಹೊರಟ್ಳು ಚಿಂಟು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲಕ್ಕಿಂತ ಹೆಚ್ಚು ಖುಷಿ ಯಾಕೆಂದರೆ ಅವಳಿಗೆ ಈವತ್ತು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಏರ್ಪಡಿಸಿದ್ದ ದೇಶಭಕ್ತಿ ಗೀತೆಯಲ್ಲಿ ಹಾಡ್ಲಿಕುಂಟು. ಕದಂ ಕದಂ ಬಡಾಯೆಗ.. ಅಂತ ಬೆಳಿಗ್ಗಿನಿಂದ ಅಜ್ಜ ಐದಾರು ಸಾರಿ ಹಾಡಿಸಿ ಚೆನ್ನಾಗಿ  ಅಭ್ಯಾಸ ಮಾಡಿಸಿದ್ದರು. ಒಳಗೊಳಗೆ ಅವಳಿಗೆ ಹೆಮ್ಮೆ, ಉತ್ಸಾಹ. ಯಾಕಂದ್ರೆ ಯಾವಾಗ್ಲೂ ಶಾಲೆಯಲ್ಲಿ ಹಾಡೋದರಲ್ಲಿ ಅವಳೇ ಫಸ್ಟ್!</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಾರಿಯಲ್ಲಿ ನಡೀತಾ ಇರ್ಬೇಕಾದ್ರೆ ಕಾಕಾನ ಅಂಗಡಿಯಿಂದ ಎಂಟಾಣೆಗೆ ಧ್ವಜ ತೆಗೆದು ಎಲ್ಲರಿಗೂ ಕಾಣುವ ಹಾಗೆ ಎತ್ತಿ ಹಿಡಿದು ನಡೀತಾ ಇದ್ದಳು. ಅದು ಅವಳ ಸುಮಾರು ದಿನದ ಕನಸಾಗಿತ್ತು. ಧ್ವಜ ಹೊತ್ತು ಮೆರಿಬೇಕು, ಎಲ್ಲರಂತೆ ನಾನೂ ಒಮ್ಮೆ'ದೊಡ್ಡ ಜನ' ಆಗಬೇಕೆಂದೇನಲ್ಲ. ಇಷ್ಟು ದಿನ ಆಗಿರಲಿಲ್ಲ. ಪ್ರತೀ ವರ್ಷ ಅಜ್ಜನ ಅದೇ ಉಪದೇಶಕ್ಕೆ ಕರಗಿ ಮನೆಯವರು ಅವಳ ಆಸೆಗೆ ತಣ್ಣೀರೆರಚುತ್ತಿದ್ದರು. ಹಾಗಾಗಿ ಇಂದವಳಿಗೆ ಸ್ವಾತಂತ್ರ್ಯ ಬಂದಷ್ಟೇ ಸಂಭ್ರಮ! ಜತೆಗೆ ಹಾಡುವಾಗ ನಮ್ಮ ವೇಷಭೂಷಣವನ್ನೂ ನೋಡ್ತಾರೇಂತ ಕ್ಲಾಸ್ ಟೀಚರ್ ನಿನ್ನೇನೇ ಹೇಳಿದ್ರು. ಹಾಗಾಗಿ ಅವಳ ಪಾಲಿಗೀಗ ಆ ಧ್ವಜವೇ ನಿರ್ಣಾಯಕ ಎನಿಸಿಬಿಟ್ಟಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ಪರ್ಧೆ ನಡೆಯುವಲ್ಲಿ ಟೀಚರ್ ಎಲ್ಲ ಮಕ್ಕಳನ್ನೂ ಕರೆದು ಕೂರಿಸಿದ್ದರು.ಚಿಂಟು ಒಮ್ಮೆ ಎಲ್ಲರತ್ತ ನೋಡಿದಳು.ಎಲ್ಲರೂ ಅವಳ ಹಾಗೇ ಸಮವಸ್ತ್ರದಲ್ಲಿದ್ದಾರೆ, ಆದರೆ ಯಾರ ಕೈಯಲ್ಲೂ ಧ್ವಜ ಇಲ್ಲ. ಅವಳಿಗೆ ಒಳಗೊಳಗೆ ಖುಷಿ. ನಾನು ಮಾತ್ರ ವಿಶೇಷ ರೀತಿಯಲ್ಲಿದ್ದೇನೆಂದು ಕಲ್ಪಿಸಿದ ಅವಳಿಗೆ ಬಹುಮಾನ ಗ್ಯಾರಂಟಿ ಅಂತ ಅನಿಸಿಬಿಟ್ಟಿತ್ತು. ಸ್ಫರ್ಧೆ ಪ್ರಾರಂಭವಾಗಿ ಅವಳ ಸರದಿ ಬಂದಾಗ ಹೋಗಿ ಸುಶ್ರಾವ್ಯವಾಗಿ ಹಾಡಿ ಬಂದಿದ್ದಳು ಚಿಂಟು. ಬಹುಮಾನ ಅವಳಿಗೆ ಗ್ಯಾರಂಟಿ ಅಂತ ಅಲ್ಲೆಲ್ಲ ಮಾತಾಡುತ್ತಿದ್ದನ್ನು ಕೇಳಿಸಿಕೊಂಡು ಜಂಬ ಬಂದಿತ್ತವಳಿಗೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ಫರ್ಧೆ ಎಲ್ಲ ಮುಗಿದು ಬಹುಮಾನ ವಿತರಣೆಯ ಸಮಯ... ಎಲ್ಲ ಸ್ಫರ್ಧಾಳುಗಳಿಗೂ ಫಲಿತಾಂಶದ ಬಗ್ಗೆ ಕುತೂಹಲವಿದ್ದರೆ ಚಿಂಟುಗೆ ಪೂರ್ತಿ ಭರವಸೆಯಿತ್ತು ಬಹುಮಾನ ತನಗೇ ಬರುವುದೆಂದು..</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಾಲಾ ಮುಖ್ಯೋಪಾಧ್ಯಾಯರು ಅಸೆಂಬ್ಲಿ ಸೇರುವ ಹೊತ್ತಿಗೆ ಬಹುಮಾನ ಘೋಷಣೆ ಮಾಡುತ್ತಿದ್ದರು. ದೇಶಭಕ್ತಿಗೀತೆಯ ವಿಭಾಗ ಬಂದಾಗ ಬಹುಮಾನ ಸ್ವೀಕರಿಸಲು ರೆಡಿಯಾಗಿ ನಿಂತ ಚಿಂಟು, ಪ್ರಥಮ ಬಹುಮಾನಕ್ಕೆ ತನ್ನ ಹೆಸರಿನ ಬದಲು ಇನ್ಯಾರದ್ದೋ ಹೆಸರು ಹೇಳಿದ್ದು ಕೇಳಿ ದಂಗಾದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವಳಿಗೆ ಅಳುವೇ ಬಂದು ಬಿಟ್ಟಿತು. ಜತೆಗೆ ಪಕ್ಕದಲ್ಲಿ ನಿಂತಿದ್ದ ಅವಳ ಕ್ಲಾಸ್ ಟೀಚರ್ ಹೇಳೋದು ಕೇಳಿಸಿತ್ತು. ನಿಜವಾಗ್ಲೂ ಪ್ರಥಮ ಬಹುಮಾನ ಚಿಂಟೂಗೇ ಬರಬೇಕಿತ್ತು; ಆದರೆ ಅವಳು ಪ್ಲಾಸ್ಟಿಕ್ ಧ್ವಜ ಹಿಡಿದ ಕಾರಣ ತೀರ್ಪುಗಾರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಶಿವರಾಮಣ್ಣನಿಗೆ ಇಷ್ಟ ಆಗ್ಲಿಲ್ಲ, ಪ್ಲಾಸ್ಟಿಕ್ ಧ್ವಜ ಹಿಡಿಯೋದಕ್ಕಿಂತ ಬಟ್ಟೆಯಿಂದ ಮಾಡಿದ ಧ್ವಜವಾಗಿದ್ದರೂ ಕೊಡಬಹುದಿತ್ತಂತೆ. ಪ್ಲಾಸ್ಟಿಕ್ ಧ್ವಜ ಒಳ್ಳೆದಲ್ಲಾಂತ ಅವರುಗಳ ಅಭಿಪ್ರಾಯವಂತೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನೆಲ್ಲಾ ಕೇಳುತ್ತಿದ್ದಂತೆ ಚಿಂಟು ಮನಸ್ಸಿಗೆ ಚಿವುಟಿದಂತಾಯಿತು. ಜತೆಗೆ ಅಜ್ಜ ತನ್ನ ಸಂಗ್ರಹಗಳೆಡೆಯಿಂದ ಕೊಡಲು ಹೊರಟ ಬಟ್ಟೆಯ ಧ್ವಜ, ಅದನ್ನು ತಾನು ನಿರಾಕರಿಸಿದ್ದು  ನೆನಪಾಗಿ ಅಳುವೇ ಬಂತು.... ಮತ್ತೆ ಟೀಚರು ಗೆಳತಿಯರೆಲ್ಲ ತಾನು ಅತ್ತಿದ್ದನ್ನು ನೋಡಿದರೆ? ಎಂಬ ಅನುಮಾನದಿಂದ ಕಣ್ಣೀರೊರೆಸಿ ಪೆಚ್ಚಾಗಿ ನಿಂತಳು ಚಿಂಟೂ.  </font>]]></content:encoded>
      <pubDate>Sat, 08 Aug 2009 17:25:22 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸ್ವಾತಂತ್ರ್ಯ ಹೋರಾಟದ ಕ್ರಾಂತಿಪುರುಷ ಉದಾಮ್‌ಸಿಂಗ್]]></title>
      <link>https://kannada.webdunia.com/article/independence-day-article/ಸ್ವಾತಂತ್ರ್ಯ-ಹೋರಾಟದ-ಕ್ರಾಂತಿಪುರುಷ-ಉದಾಮ್‌ಸಿಂಗ್-108081300055_1.htm</link>
      <guid>https://kannada.webdunia.com/article/independence-day-article/ಸ್ವಾತಂತ್ರ್ಯ-ಹೋರಾಟದ-ಕ್ರಾಂತಿಪುರುಷ-ಉದಾಮ್‌ಸಿಂಗ್-108081300055_1.htm</guid>
      <media:thumbnail url="http:"/>
      <image>http:</image>
      <description><![CDATA[1940ರ ಮಾರ್ಚ್ 13, ಕಾಕ್ಸ್‌ಟೌನ್ ಹಾಲ್‌ನಲ್ಲಿ ಈಸ್ಟ್ ಇಂಡಿಯ ಒಕ್ಕೂಟ ಮತ್ತು ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆ ನಿಗದಿಯಾಗಿತ್ತು. ಮೈಕೆಲ್ ಒ ಡಯರ್ ಭಾಷಣಕಾರರಲ್ಲಿ ಒಬ್ಬರಾಗಿದ್ದರು.  ಸಿಖ್ ಯುವಕನೊಬ್ಬ ಪುಸ್ತಕವೊಂದರಲ್ಲಿ ರಿವಾಲ್ವರ್ ಅಡಗಿಸಿಟ್ಟುಕೊಂಡು ಕಾಕ್ಸ್‌ಟೌನ್ ಹಾಲ್ ಪ್ರವೇಶಿಸಲು ...]]></description>
      <content:encoded><![CDATA[<font  style='font-size:11pt; color:#0000FF'><b>ಗುಣವರ್ಧನ್ ಶೆಟ್ಟಿ   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813055_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage-->  1940<font  style='font-size:11pt; color:#000000'>ರ ಮಾರ್ಚ್ 13, ಕಾಕ್ಸ್‌ಟೌನ್ ಹಾಲ್‌ನಲ್ಲಿ ಈಸ್ಟ್ ಇಂಡಿಯ ಒಕ್ಕೂಟ ಮತ್ತು ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆ ನಿಗದಿಯಾಗಿತ್ತು. ಮೈಕೆಲ್ ಒ ಡಯರ್ ಭಾಷಣಕಾರರಲ್ಲಿ ಒಬ್ಬರಾಗಿದ್ದರು.  ಸಿಖ್ ಯುವಕನೊಬ್ಬ ಪುಸ್ತಕವೊಂದರಲ್ಲಿ ರಿವಾಲ್ವರ್ ಅಡಗಿಸಿಟ್ಟುಕೊಂಡು ಕಾಕ್ಸ್‌ಟೌನ್ ಹಾಲ್ ಪ್ರವೇಶಿಸಲು ಯಶಸ್ವಿಯಾಗಿದ್ದ. ಸಭೆ ನಡೆದ ಬಳಿಕ ಎಲ್ಲರೂ ಎದ್ದುನಿಂತರು. ಡಯರ್ ಲಾರ್ಡ್ ಜೆಟ್‌ಲ್ಯಾಂಡ್ ಜತೆ ಮಾತನಾಡಲು ವೇದಿಕೆ ಏರಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಿಖ್ ಯುವಕನ ಮನಸ್ಸಿನಲ್ಲಿ ದ್ವೇಷದ ಕಿಡಿ ಹೊತ್ತಿಉರಿಯುತ್ತಿತ್ತು. ಚಕ್ಕನೇ ರಿವಾಲ್ವರ್ ಹೊರತೆಗೆದು ಡಯರ್‌ನತ್ತ ಎರಡು ಬಾರಿ ಗುಂಡು ಹಾರಿಸಿದ. ಡಯರ್ ಪ್ರಾಣಪಕ್ಷಿ ಹಾರಿಹೋಗಿತ್ತು. ಅಷ್ಟಕ್ಕೆ ತೃಪ್ತನಾಗದ ಸಿಖ್ ಯುವಕ ಲಾರ್ಡ್ ಜೆಟ್‌ಲ್ಯಾಂಡ್, ಸರ್ ಲೂವಿಸ್ ಡೇನ್‌ರತ್ತ ಕೂಡ ಗುಂಡು ಹಾರಿಸಿದ. ಲೂಯಿಸ್ ಡೇನ್ ಪಕ್ಕೆಲುಬು ಮುರಿದು ತೀವ್ರ ಗಾಯಗಳಿಂದ ನೆಲದ ಮೇಲೆ ಬಿದ್ದರು. ಲಾರ್ಡ್ ಲ್ಯಾಮಿಂಗ್‌ಟನ್ ಅವರಿಗೆ ಕೂಡ ಗುಂಡೊಂದು ಬಡಿದು ಬಲಗೈ ಮುರಿಯಿತು. ಇಷ್ಟೆಲ್ಲ ಅನಾಹುತಕ್ಕೆ ಕಾರಣನಾದ ಸಿಖ್ ಯುವಕನ ಹೆಸರು ಉದಾಮ್‌ ಸಿಂಗ್! ಇಂಗ್ಲೆಂಡ್‌ಗೆ ಆಗಮಿಸಿದ್ದ ಅವನ ಉದ್ದೇಶ ಈಡೇರಿತ್ತು. ಸಂತೃಪ್ತಿಯ ಭಾವ ಮುಖದಲ್ಲಿತ್ತು. ಹೊಗೆಯಾಡಿದ್ದ ಸೇಡಿನ ಕಿಚ್ಚು ಆರಿಹೋಗಿತ್ತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಫ್ಲ್ಯಾಶ್‌ಬ್ಯಾಕ್  </font><font style=' color:#000000;'></b></font><br/><font  style='font-size:11pt; color:#000000'>ಮಹಾತ್ಮಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ್ಯದ ಕಹಳೆ ಭಾರತದಾದ್ಯಂತ ಮೊಳಗಿತು. ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ಎಲ್ಲೆಲ್ಲೂ ಪ್ರತಿಭಟನೆಗಳು, ಸಭೆ, ಸಮಾರಂಭಗಳು ನಡೆದವು. ಬ್ರಿಟಿಷರೇ ದೇಶ ಬಿಟ್ಟು ತೊಲಗಿರಿ ಎಂಬ ಕೂಗು ಭಾರತವಿಡೀ ಮಾರ್ದನಿಸಿತು. 1919ರ ಏಪ್ರಿಲ್ 13ರಂದು ಅದೇ ತರದ ಸಭೆಯೊಂದು ನಡೆದಿತ್ತು. ಅಮೃತಸರದ ಜಲಿಯನ್‌ವಾಲಾಬಾಗ್‌ನಲ್ಲಿ ಸುಮಾರು 20 ಸಾವಿರ ಭಾರತೀಯರು ನೆರೆದಿದ್ದರು. ಅವರಲ್ಲಿ ಬಹುತೇಕ ಮಂದಿ ಸಿಖ್ ಸಮುದಾಯಕ್ಕೆ ಸೇರಿದವರು. ಬ್ರಿಟನ್ ವಸಾಹತುಶಾಹಿ ಆಡಳಿತ ವಿರುದ್ಧ ಜನತೆಯನ್ನು ಹುರಿದುಂಬಿಸಲು ಸ್ಥಳೀಯ ನಾಯಕರು ಸಜ್ಜಾಗಿದ್ದರು. ರೌಲಟ್ ಆಕ್ಟ್ ಕಾಯಿದೆಯಡಿಯಲ್ಲಿ ಡಾ.ಸತ್ಯಪಾಲ್, ಡಾ.ಸೈಫುದ್ದೀನ್ ಕಿಚ್‌ಲೆವ್ ಮತ್ತಿತರರ ಬಂಧನ ಮತ್ತು ಗಡಿಪಾರನ್ನು ಪ್ರತಿಭಟಿಸುವುದೂ ಅವರ ಉದ್ದೇಶವಾಗಿತ್ತು. ಉಧಾಂಸಿಂಗ್ ಮತ್ತವನ ಸಂಗಡಿಗರು ಬಿರುಬಿಸಿಲಿನ ಬೇಸಿಗೆಯ ಮಧ್ಯಾಹ್ನ ನೆರೆದಿದ್ದ ಗುಂಪಿನ ಬಾಯಾರಿಕೆ ತಣಿಸುತ್ತಿದ್ದರು. ಅಷ್ಟರಲ್ಲಿ ಎಲ್ಲಿಂದಲೋ ರೈಫಲ್‌ಗಳು ಮತ್ತು ಸಣ್ಣ ಕತ್ತಿಗಳಿಂದ ಸಜ್ಜಿತರಾದ 90 ಬ್ರಿಟಿಷ್ ಸೈನಿಕರ ಪಡೆ ಅಲ್ಲಿಗೆ ಮೆಷಿನ್ ಗನ್‌ಗಳಿಂದ ತುಂಬಿದ ಎರಡು ಕಾರುಗಳಲ್ಲಿ ಆಗಮಿಸಿತು. ಜಲಿಯನ್‌ವಾಲಾ ಬಾಗ್ ಕಿರಿದಾದ ಪ್ರವೇಶ ದ್ವಾರದಲ್ಲಿ ಸಂಜೆ 5.15ಕ್ಕೆ ಪಡೆಗಳು ಬಿರುಸಿನಿಂದ ಒಳಹೊಕ್ಕವು. </font><br/><font  style='font-size:11pt; color:#0000FF'></font><br/>379 <font  style='font-size:11pt; color:#0000FF'><b>ಜನರ ಕಗ್ಗೊಲೆ  </font><font style=' color:#000000;'></b></font><br/><font  style='font-size:11pt; color:#000000'>ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡಯರ್ ಗೋಲಿಬಾರಿಗೆ ಆದೇಶ ನೀಡಿದ್ದೇ ತಡ ಕೋವಿಗಳಿಂದ ಗುಂಡುಗಳು ಚಿಮ್ಮಿದವು. ಜನರು ದಿಕ್ಕಾಪಾಲಾಗಿ ಓಡಿದರು. ಸುತ್ತಲೂ ಎರಡಾಳೆತ್ತರದ ಕಾಂಪೌಂಡ್. ಇಕ್ಕಟ್ಟಾದ ಪ್ರವೇಶದ್ವಾರದಲ್ಲಿ ಪೊಲೀಸರ ಕಣ್ಗಾವಲು. 15 ನಿಮಿಷಗಳವರೆಗೆ ಬಂದೂಕುಗಳ ಗುಂಡುಗಳು ಸಿಡಿದವು.  ಉದ್ಯಾನವನದ ಗೋಡೆಯನ್ನು ಹತ್ತಲು ಕೆಲವರು ಪ್ರಯತ್ನಿಸಿದರು. ಇನ್ನೂ ಕೆಲವರು ಪಾರ್ಕಿನಲ್ಲಿದ್ದ ಬಾವಿಯೊಳಕ್ಕೆ ಜೀವವುಳಿಸಿಕೊಳ್ಳಲು ಧುಮುಕಿದರು. ಹಾರಿದ ಗುಂಡುಗಳಿಂದ ದಟ್ಟವಾದ ಹೊಗೆ ಆವರಿಸಿತು. ತುಪತುಪನೆ ಹೆಣಗಳು ಬೀಳತೊಡಗಿದವು. ನೆತ್ತರಿನ ಕೋಡಿಯೇ ಹರಿಯಿತು.ಅಧಿಕೃತ ಅಂಕಿಅಂಶಗಳ ಪ್ರಕಾರ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ 379 ಮತ್ತು ಗಾಯಗೊಂಡವರು 200 ಮಂದಿ. ಆದರೆ ಇತರೆ ವರದಿಗಳ ಪ್ರಕಾರ ಜೀವಕಳೆದುಕೊಂಡವರು 1000ಕ್ಕೂ ಹೆಚ್ಚು ಮಂದಿ. ರಾಜಕೀಯ ಕಾರಣಗಳಿಗಾಗಿ ಸತ್ತವರ ನಿಖರ ಸಂಖ್ಯೆಯನ್ನು ಬ್ರಿಟಿಷರು ಮುಚ್ಚಿಟ್ಟರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಲಿಯನ್‌ವಾಲಾ ಭಾಗ್ ದುರ್ಘಟನೆ ಸಂಭವಿಸಿದಾಗ ಉದಾಂಸಿಂಗ್ 20 ವರ್ಷ ಪ್ರಾಯದ ಯುವಕನಾಗಿದ್ದ. ಬ್ರಿಟನ್ ವಸಾಹತುಶಾಹಿ, ದಬ್ಬಾಳಿಕೆಯ ಆಡಳಿತದ ವಿರುದ್ಧ ಸಡ್ಡುಹೊಡೆದ ಅನೇಕ ಮಂದಿ ಬಿಸಿರಕ್ತದ ಯುವಕರಲ್ಲಿ ಉದಾಂಸಿಂಗ್ ಕೂಡ ಒಬ್ಬನಾಗಿದ್ದ. ಈ ಯುವಕರ ನರನಾಡಿಗಳಲ್ಲಿ ದೇಶಾಭಿಮಾನ ಉಕ್ಕಿಹರಿಯುತ್ತಿತ್ತು, ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿದಾಗಲೇ ದಾಸ್ಯದಿಂದ ಮುಕ್ತಿ ಎನ್ನುವ ಭಾವನೆ ಅವರಲ್ಲಿ ಮೊಳೆತಿತ್ತು. ಅದಕ್ಕಾಗಿ ಪ್ರಾಣತ್ಯಾಗಕ್ಕೂ ಅವರು ಸಿದ್ಧರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ತೀವ್ರವಾದಿ ಕ್ರಾಂತಿಕಾರಿಗಳಲ್ಲಿ ಸಿಂಗ್ ಕೂಡ ಒಬ್ಬನಾಗಿದ್ದ. ಭಗತ್ ಸಿಂಗ್, ಉದಾಂಸಿಂಗ್, ಚಂದ್ರಶೇಖರ ಆಜಾದ್, ಸುಖದೇವ್ ಮತ್ತು ರಾಜ್‌ಗುರು ಇವರೆಲ್ಲರೂ ಬೆಂಕಿಚೆಂಡಿನ ಸ್ವಾತಂತ್ರ್ಯ ವೀರರು ಎಂದೇ ಹೆಸರಾಗಿದ್ದರು. ಬ್ರಿಟಿಷರನ್ನು ತಾಯ್ನಾಡಿನಿಂದ ಬಲಪ್ರಯೋಗದಿಂದ ಅಟ್ಟಿದಾಗಲೇ ತಾಯ್ನಾಡಿಗೆ ಸ್ವಾತಂತ್ರ್ಯ, ಬ್ರಿಟಿಷರ ವಿರುದ್ಧ ಹಿಂಸಾಮಾರ್ಗದ ಮ‌ೂಲಕವೇ ಭಾರತಕ್ಕೆ ಮುಕ್ತಿ ಎನ್ನುವುದು ಈ ಯುವಕರ ಬಲವಾದ ನಂಬಿಕೆಯಾಗಿತ್ತು.</font><font  style='font-size:11pt; color:#0000FF'><b>ಭಗತ್ ಸಿಂಗ್  </font><font style=' color:#000000;'></b></font><br/><font  style='font-size:11pt; color:#000000'>ಭಗತ್ ಸಿಂಗ್ ಹೆಸರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ. ಭಗತ್ ಸಿಂಗ್ ಯ‌ೂರೋಪಿಯನ್ ಕ್ರಾಂತಿ ಚಳವಳಿಯನ್ನು ಅದ್ಯಯನ ಮಾಡಿ, ಸಮಾಜವಾದದ ಬಗ್ಗೆ ಪ್ರಭಾವಿತನಾಗಿದ್ದನು.ಭಾರತದಲ್ಲಿ ಕ್ರಾಂತಿಕಾರಿ ಆಂದೋಳನಕ್ಕೆ ಹೊಸ ದಿಕ್ಕನ್ನು ಭಗತ್ ಸಿಂಗ್ ನೀಡಿದ್ದ. ಅಂದಿನ ಕ್ರಾಂತಿಕಾರಿ ಯುವಕರು ಬ್ರಿಟನ್ ಸಾಮ್ರಾಜ್ಯವನ್ನು ನಾಶ ಮಾಡುವ ಒಂದೇ ಗುರಿ ಇಟ್ಟುಕೊಂಡಿದ್ದರೇ ಹೊರತು ರಾಜಕೀಯ ಪರ್ಯಾಯದ ಬಗ್ಗೆ ಚಿಂತಿಸಿರಲಿಲ್ಲ. ಇತಿಹಾಸದ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದ ಭಗತ್ ಸಿಂಗ್ ಕ್ರಾಂತಿಕಾರಿ ಆಂದೋಳನಕ್ಕೆ ಸ್ಪಷ್ಟ ರೂಪುರೇಷೆ ನೀಡಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಲಿಯನ್‌ವಾಲಾ ಭಾಗ್ ದುರಂತ ಸಂಭವಿಸಿದಾಗ ಭಗತ್ ಸಿಂಗ್ 12 ವರ್ಷ ಪ್ರಾಯದ ಬಾಲಕ. ಈ ಹತ್ಯಾಕಾಂಡ ಭಗತ್ ಸಿಂಗ್ ಮನಸ್ಸಿನ ಮೇಲೆ ಆಳವಾದ ಗಾಯವುಂಟುಮಾಡಿತು. ಹತ್ಯಾಕಾಂಡ ನಡೆದ ಮರುದಿನವೇ ಜಲಿಯನ್‌ವಾಲಾ ಭಾಗ್‌ಗೆ ತೆರಳಿ ಅಲ್ಲಿನ ಮಣ್ಣನ್ನು ತಂದು ಸ್ಮಾರಕವಾಗಿ ತನ್ನ ಜೀವನಪೂರ್ತಿ ಇರಿಸಿಕೊಂಡ. ಈ ಹತ್ಯಾಕಾಂಡವು ಬ್ರಿಟಿಷರನ್ನು ಹೊರಗಟ್ಟುವ ಅವನ ಸಂಕಲ್ಪವನ್ನು ಗಟ್ಟಿಗೊಳಿಸಿತು.<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0808/13/images/img1080813055_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಗತ್ ಸಿಂಗ್ ರೀತಿಯಲ್ಲಿ ಉದಾಂಸಿಂಗ್‌ನನ್ನು ಕೂಡ ಈ ದುರ್ಘಟನೆ ಆಳವಾಗಿ ಕಲಕಿತು. ಅದು ಅವನ ಜೀವನದ ತಿರುವಾಗಿ ಮಾರ್ಪಟ್ಟಿತು. ಪವಿತ್ರ ಸರೋವರದಲ್ಲಿ ಸ್ನಾನ ಮಾಡಿದ ಉದಾಂ ಸುವರ್ಣಮಂದಿರದ ಎದುರು ನಿಂತು ಮೌನವಾದ ಶಪಥವನ್ನು ತೊಟ್ಟ. ಹತ್ಯಾಕಾಂಡಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ. ಅವನ ನರನಾಡಿಗಳಲ್ಲಿ ಸೇಡಿನ ಜ್ವಾಲೆ ದಹಿಸುತ್ತಿತ್ತು. ತನ್ನ ಮನಸ್ಸಿನಲ್ಲಿ ಹುದುಗಿದ್ದ ಗುಪ್ತ ಯೋಜನೆಯನ್ನು ಸಾಧಿಸಲು ವಿವಿಧ ನಾಮಾಂಕಿತನಾಗಿ  ರಾಷ್ಟ್ರದಿಂದ ರಾಷ್ಟ್ರಕ್ಕೆ ಸಂಚರಿಸಿದ. ಆಫ್ರಿಕಾ, ನೈರೋಬಿ, ಅಮೆರಿಕ ಎಲ್ಲ ಕಡೆ ಸಂಚರಿಸಿ ಸಾಗರೋತ್ತರದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಹುರಿದುಂಬಿಸಿದ. ಭಾರತಕ್ಕೆ ಹಿಂದಿರುಗುವಂತೆ ಭಗತ್ ಸಿಂಗ್‌ಗೆ ಆದೇಶ ಬಂದಿತು. ಅಮೆರಿಕದಿಂದ ಸುಮಾರು 25 ಸಂಗಡಿಗರು, ರಿವಾಲ್ವರ್ ಮತ್ತು ಮದ್ದುಗುಂಡುಗಳೊಂದಿಗೆ ಭಾರತಕ್ಕೆ ವಾಪಸಾದ.</font><br/><font  style='font-size:11pt; color:#000000'></font><br/>1927<font  style='font-size:11pt; color:#000000'>ರ ಆಗಸ್ಟ್ 30ರಂದು ಉದಾಂಸಿಂಗ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಅಮೃತಸರದಲ್ಲಿ ಬಂಧಿಸಲಾಯಿತು. ಉದಾಂ ಸಿಂಗ್ ಕೋರ್ಟ್‌ನಲ್ಲಿ ಕೂಡ ಬ್ರಿಟನ್ ಸಾಮ್ರಾಜ್ಯವಾದಿಗಳ ಹಿಂಸಾತ್ಮಕ ಅಂತ್ಯವನ್ನು ಕಾಣಲು ಇಚ್ಛಿಸುವುದಾಗಿ ದಿಟ್ಟತನದಿಂದ ಹೇಳಿದ. ಅವನ ನಾಲ್ಕು ವರ್ಷ ಜೈಲುವಾಸದ ಅವಧಿಯಲ್ಲಿ ಭಾರತದ ಕ್ರಾಂತಿಕಾರಿ ಆಂದೋಳನ ಪರಾಕಾಷ್ಠೆಯ ಹಂತ ಮುಟ್ಟಿತು. ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಗಲ್ಲುಶಿಕ್ಷೆಗೆ ಗುರಿಯಾಗಿ ಹುತಾತ್ಮರಾದರು. ಉದಾಂಸಿಂಗ್‌ನನ್ನು 1931ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು.</font><br/><font  style='font-size:11pt; color:#000000'></font><br/>1933<font  style='font-size:11pt; color:#000000'>ರಲ್ಲಿ ತನ್ನ ಸ್ವಗ್ರಾಮಕ್ಕೆ ಭೇಟಿ ಕೊಟ್ಟ ಅವನು, ಕಾಶ್ಮೀರಕ್ಕೆ ತೆರಳಿ ಅಲ್ಲಿ ಪೊಲೀಸರಿಗೆ ಕೈಕೊಟ್ಟು ಜರ್ಮನಿಗೆ ಪಲಾಯನ ಮಾಡಿದ. 1934ರಲ್ಲಿ ಕೊನೆಗೂ ಲಂಡನ್ ಮುಟ್ಟಿದ್ದ ಉದಾಂಸಿಂಗ್ ಕಮರ್ಷಿಯಲ್ ರಸ್ತೆಯಲ್ಲಿ ನಿವಾಸವೊಂದನ್ನು ಬಾಡಿಗೆಗೆ ಪಡೆದ. ಸಿಂಗ್‌ನ ಏಕೈಕ ಗುರಿ ಜನರಲ್ ಡಯರ್ ಹತ್ಯೆಮಾಡುವುದಾಗಿತ್ತು. ಈ ಉದ್ದೇಶಕ್ಕಾಗಿ 6 ಚೇಂಬರ್ ರಿವಾಲ್ವರ್ ಮತ್ತು ಗುಂಡುಗಳನ್ನು ಖರೀದಿಸಿದ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಲಿಯನ್‌ವಾಲಾ ಬಾಗ್ ಕಗ್ಗೊಲೆಯಾಗಿ ಸುಮಾರು 21 ವರ್ಷಗಳು ಗತಿಸಿದ ಬಳಿಕ 1940ರಂದು ಸಿಂಗ್‌ಗೆ ಸದವಕಾಶವೊಂದು ಸಿಕ್ಕಿತು. ಜಂಟಿ ಸಭೆಯೊಂದರಲ್ಲಿ ಡೈಯರ್‌ನ ಹತ್ಯೆ ಮಾಡುವ ಮ‌ೂಲಕ ತಾಯ್ನಾಡಿನ ಗೌರವ ಉಳಿಸಿದೆನೆಂಬ ಸಂತೃಪ್ತಿಯ ಭಾವನೆ ಅವನಲ್ಲಿ ಮ‌ೂಡಿತು. ತನ್ನ ದೇಶಕ್ಕಾಗಿ ಜೀವತೆತ್ತ ಹುತಾತ್ಮರ ಸಾಲಿಗೆ ಉದಾಂಸಿಂಗ್ ಸೇರಿಹೋದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಲಿಯಾನಾವಾಲಾ ಭಾಗ್ ಘಟನೆಗೆ ಡಯರ್ ಪೂರ್ಣ ಜವಾಬ್ದಾರಿ ಎನ್ನುವುದನ್ನು ಮಾಧ್ಯಮಗಳು ನೆನಪಿಸಿಕೊಂಡವು. ಸಿಂಗ್‌ ಕೃತ್ಯವನ್ನು ದಮನಿತ ಜನರಿಂದ ಉಕ್ಕಿದ ಆಕ್ರೋಶ ಎಂದು ಬಣ್ಣಿಸಲಾಯಿತು. ಭಾರತೀಯರು 20 ವರ್ಷಗಳ ಬಳಿಕವೂ ತಮ್ಮ ಶತ್ರುವನ್ನು ಕ್ಷಮಿಸದೇ ಸದೆಬಡಿಯುತ್ತಾರೆಂದು ಜರ್ಮನ್ ರೇಡಿಯೋ ಪ್ರಸಾರ ಮಾಡಿತು.</font>]]></content:encoded>
      <pubDate>Sat, 08 Aug 2009 17:24:53 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ರೋಚಕ ಇತಿಹಾಸದ ಸ್ವತಂತ್ರ ಭಾರತ]]></title>
      <link>https://kannada.webdunia.com/article/independence-day-article/ರೋಚಕ-ಇತಿಹಾಸದ-ಸ್ವತಂತ್ರ-ಭಾರತ-108081300054_1.htm</link>
      <guid>https://kannada.webdunia.com/article/independence-day-article/ರೋಚಕ-ಇತಿಹಾಸದ-ಸ್ವತಂತ್ರ-ಭಾರತ-108081300054_1.htm</guid>
      <media:thumbnail url="http:"/>
      <image>http:</image>
      <description><![CDATA[ಸ್ವತಂತ್ರ ಭಾರತ ಅನೇಕ ಮಹನೀಯರ ತ್ಯಾಗಬಲಿದಾನಗಳ ಸಂಕೇತ. ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿರುವಾಗ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತ ಹೋರಾಟಗಾರರ ನೆನಪು ಅವಿಸ್ಮರಣೀಯ. ಅಂತಹ ನೋವು-ನಲಿವಿನ ಸ್ವತಂತ್ರ ಭಾರತದ ಇತಿಹಾಸ ರೋಚಕವಾದದ್ದು.]]></description>
      <content:encoded><![CDATA[<font  style='font-size:11pt; color:#0000FF'><b>ಜೋಮನ್ ವರ್ಗೀಸ್ </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813054_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ಸ್ವತಂತ್ರ ಭಾರತ ಅನೇಕ ಮಹನೀಯರ ತ್ಯಾಗಬಲಿದಾನಗಳ ಸಂಕೇತ. ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿರುವಾಗ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತ ಹೋರಾಟಗಾರರ ನೆನಪು ಅವಿಸ್ಮರಣೀಯ. ಅಂತಹ ನೋವು-ನಲಿವಿನ ಸ್ವತಂತ್ರ ಭಾರತದ ಇತಿಹಾಸ ರೋಚಕವಾದದ್ದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವತಂತ್ರ ಭಾರತಕ್ಕೆ 61 ರ ಸಂಭ್ರಮ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಮತ್ತೊಮ್ಮೆ ಆ ಸುವರ್ಣ ಗಳಿಕೆಯ ಸ್ಮರಣೆಗೆ ಸಜ್ಜಾಗುತ್ತಿದೆ. ನೀಲ ನಭದಲ್ಲಿ ಹಾರುತ್ತಿರುವ ರಾಷ್ಟ್ರದ್ವಜ ತನ್ನ ಹಿಂದಿರುವ ತ್ಯಾಗ, ಬಲಿದಾನ, ರಕ್ತಪಾತಗಳ ಸುದೀರ್ಘ ಇತಿಹಾಸವನ್ನು ತರೆದಿಡುತ್ತಿದೆ. ಆಗಸ್ಟ್ 15, 1947 ಭಾರತ ಇತಿಹಾಸದಲ್ಲಿ ಸ್ಮರಣೀಯ ದಿನ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇದ್ದ ಜನಸಂಖ್ಯೆ 30 ಕೋಟಿ. ಇದೀಗ ಆ ಸಂಖ್ಯೆ ನಾಲ್ಕು ಪಟ್ಟು ವೃದ್ಧಿಸಿದೆ. ಆಕಾಶದ ತಾರೆಗಳಂತೆ ಎಣಿಕೆಗೆ ನಿಲುಕದೆ ಅದು ಬೆಳೆಯುತ್ತಿದೆ! ಜಗತ್ತಿನ ಇತಿಹಾಸದಲ್ಲಿ ಸ್ವಾತಂತ್ರ್ಯ ದೊರಕಿದ ಮೇಲೂ ಆಮೆ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದರೆ ಭಾರತ. ನಮ್ಮಲ್ಲಿನ ಭ್ರಷ್ಟಾಚಾರ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅಪ್ರಾಮಾಣಿಕತೆ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆ ಎದುರಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಳೆದ 61 ವರ್ಷಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ರಾಜಕೀಯ ನಾಯಕರ ಭರವಸೆಯ ಭಾಷಣದ ನಡುವೆ, ನಿಜವಾದ ಪ್ರಾಮಾಣಿಕತೆಯಿಂದ ದುಡಿದ ಬೆರಳೆಣಿಕೆಯ ಅಧಿಕಾರ ವರ್ಗದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ನಾವೂ ಸೇರ್ಪಡೆಗೊಂಡಿದ್ದೇವೆ. ಆರೋಗ್ಯ, ಶಿಕ್ಷಣ, ರಾಜಕೀಯ, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ಹೊಸ ಬೆಳಕು ಹರಿದಿದೆ. ಕುಗ್ರಾಮದ ಕತ್ತಲಲ್ಲೂ ಮಾಹಿತಿ ತಂತ್ರಜ್ಞಾನದ ಹೊನಲು ಹರಿದಿದೆ. </font><br/><font  style='font-size:11pt; color:#000000'></font><br/>"<font  style='font-size:11pt; color:#000000'>ತಂತ್ರಜ್ಞಾನ ಇಲ್ಲದೆ ನಾಗರಿಕತೆ ಬೆಳೆಯುವುದಿಲ್ಲ"- ಜಗತ್ತಿಗೆ ಮೊಟ್ಟ ಮೊದಲು ಕಂಪ್ಯೂಟರ್ ಪರಿಚಯಿಸಿದ ಚಾರ್ಲ್ಸ್‌ಬ್ಯಾಬೇಜ್ ಶತಮಾನಗಳ ಹಿಂದೆ ಹೇಳಿದ ಮಾತಿದು. ತಂತ್ರಜ್ಞಾನ ಬೆಳೆದಂತೆ ಉತ್ಪಾದನೆ ಜಾಸ್ತಿಯಾಗುತ್ತದೆ. ಬೆಲೆ ಕಡಿಮೆಯಾಗುತ್ತದೆ. ಗಾತ್ರ ಕುಗ್ಗುತ್ತದೆ. ಆದರೆ ಅದರ ಉಪಯೋಗ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುತ್ತದೆ. ಆದರೆ ಸ್ವತಂತ್ರ ಭಾರತದಲ್ಲಿ ಉಳಿದ ಕ್ಷೇತ್ರಗಳು ಬೆಳೆದಂತೆ ತಂತ್ರಜ್ಞಾನ ಬೆಳೆದಿಲ್ಲ. ಉಳಿದ ದೇಶಗಳು ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದರೆ ಭಾರತ ಸ್ವತಂತ್ರವಾಗಿ ಉಪಗ್ರಹವೂಂದನ್ನು ಹಾರಿಬಿಡಲು ಕೆಲವು ವರ್ಷಗಳನ್ನು ತೆಗೆದುಕೊಂಡಿತು. ವಿದೇಶಿಗಳಿಗೆ ಹಳತಾಗಿರುವ ಐಟಿ ಎನ್ನುವ ಪದ ನಮಗೆ ಚಿರನೂತನ. ಭಾರತದಲ್ಲಿ ಆ ಪದ ಬಳಕೆ ವ್ಯಾಪಕತೆ ಪಡೆದುಕೊಂಡು ಐದಾರು ವರ್ಷಗಳು ಕಳೆದಿರಬೇಕಷ್ಟೇ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಮನುಷ್ಯನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ. ಆದರೆ ನಮ್ಮ ಅವಶ್ಯಕತೆಗಳ ಪ್ರಮಾಣವನ್ನು ತಗ್ಗಿಸುತ್ತದೆ, ಉಳಿದೆಲ್ಲವುಗಳಿಗಿಂತ ಹತ್ತಿರವೂ ಅನಿವಾರ್ಯವೂ ಆಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ತಂತ್ರಜ್ಞಾನ ಇಲ್ಲದ ಜಗತ್ತನ್ನು ಒಂದು ಕ್ಷಣವೂ ಊಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಅದರೆಡೆಗಿನ ನಿರ್ಲಕ್ಷ್ಯಕ್ಕಿಂತ ಸದ್ಬಳಕೆಯೇ ಚಾಣಾಕ್ಯತನ. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕುತ್ತೇನೆ ಎನ್ನುವ ಸಾಂಪ್ರದಾಯಿಕ ಧೋರಣೆ ಎಂದೋ ಮುಗಿದು ಹೋಗಿದೆ. ಮತ್ತೆ ಅದನ್ನೇ ಹಾಡುವುದು ಅರ್ಥಹೀನ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯ ನಂತರ ಭಾರತ ಮಾಹಿತಿ ತಂತ್ರಜ್ಞಾನದಲ್ಲಿ ಸಾಧಿಸಿದ ಪ್ರಗತಿಯನ್ನು ಗಮನಿಸೋಣ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಾಫ್ಟ್‌ವೇರ್  ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳನ್ನು ರಫ್ತು ಮಾಡುವ ದೇಶವಾಗಲಿದೆ. 2008 ರಲ್ಲಿ ಭಾರತ ಸಾಫ್ಟ್‌ವೇರ್ ರಫ್ತಿನಿಂದ 50 ಮಿಲಿಯನ್ ಡಾಲರ್ ಲಾಭ ಗಳಿಸಲಿದೆ ಎನ್ನುತ್ತದೆ ಜಾಗತಿಕ ಸಮೀಕ್ಷೆ. ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕ, ಚೀನಾ ನಂತರ ಮೂರನೇ ಶಕ್ತಿಯಾಗಿ ಬೆಳೆಯುತ್ತಿದೆ ಭಾರತ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದ ಆರ್ಥಿಕತೆ ಸಾಂಪ್ರದಾಯಿಕ ವೃತ್ತಿಯಾದ ಕೃಷಿ, ಕೈಕಸಬು, ಆಧುನಿಕತೆಯನ್ನು ಹೊಂದಿರುವ ಕೈಗಾರಿಕೆಗಳು ಉತ್ತಮ ಗುಣಮಟ್ಟದ ಸೇವೆಯಲ್ಲಿ ಅಡಗಿದೆ. ಭಾರತೀಯರ ಸೇವಾ ನೈಪುಣ್ಯತೆ ಇಡಿ ಜಗತ್ತನ್ನು ಬೆರಗಾಗುವಂತೆ ಮಾಡಿದೆ. ದೇಶದ ಶೇ.25 ರಷ್ಟು ಜನತೆ ಕಡುಬಡತನದಲ್ಲಿ ಜೀವನ ಸವೆಸುತ್ತಿದ್ದರೂ ಕೃಷಿ ವೃತ್ತಿಯನ್ನು ನಂಬಿ ಬದಕುತ್ತಿದ್ದಾರೆ. ಜಾಗತೀಕರಣದ ಗಾಳಿ ಬೀಸುತ್ತಿದ್ದರು ಎದೆಗುಂದದೆ ತಮ್ಮ ಕಾಯಕದಲ್ಲಿ ಕೃಷಿಕರು ತೊಡಗಿದ್ದಾರೆ. ದೇಶ ನಿರಂತರ ಅಭಿವೃದ್ಧಿಪಥದತ್ತ ಸಾಗುತ್ತಿದ್ದರೂ ಶ್ರೀಮಂತರ ಬಡವರ ನಡುವಿನ ಕಂದರ ಹೆಚ್ಚುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ಸದಾ ಸ್ವಾತಂತ್ರ್ಯವನ್ನು ಬಯಸುತ್ತ ಗುಂಡಿಗೆ ಹೆದರದೆ ಬ್ರಿಟಿಷರ  ನೇಣಿಗೆ ಬಲಿಯಾಗಿ ಜೈ ಭಾರತ ಮಾತೆ ಎಂದು ಘೋಷಿಸಿದ ಹೆಮ್ಮೆಯ ಪುತ್ರರ ಸ್ವಾಭಿಮಾನಕ್ಕೆ ಎಣೆಯುಂಟೆ. </font>]]></content:encoded>
      <pubDate>Sat, 08 Aug 2009 17:24:23 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಛಿದ್ರವಾಗುವ ಮುನ್ನ ಭದ್ರವಾಗೋಣ]]></title>
      <link>https://kannada.webdunia.com/article/independence-day-article/ಛಿದ್ರವಾಗುವ-ಮುನ್ನ-ಭದ್ರವಾಗೋಣ-108081300053_1.htm</link>
      <guid>https://kannada.webdunia.com/article/independence-day-article/ಛಿದ್ರವಾಗುವ-ಮುನ್ನ-ಭದ್ರವಾಗೋಣ-108081300053_1.htm</guid>
      <media:thumbnail url="http:"/>
      <image>http:</image>
      <description><![CDATA[ಇವತ್ತಿಗೂ ನೆನಪಿದೆ. ಯಾವತ್ತಿಗೂ ನೆನಪಿರುತ್ತದೆ. ಅಗಸ್ಟ್ 15ರ ಆ ಸಂಭ್ರಮ. ತ್ರಿವರ್ಣ ಧ್ವಜ ಗಾಳಿ ಸೀಳಿ ಕುಣಿಯುವಾಗ ಮೇರೆ ಮೀರಿ ಏರೋ ತೆರೆಗಳ ತರಹ ಕುಣಿದ ಆ ಕ್ಷಣ.]]></description>
      <content:encoded><![CDATA[<font  style='font-size:11pt; color:#0000FF'><b>ರಾಕೇಶ್ ನಡಜಾರು  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813053_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಇವತ್ತಿಗೂ ನೆನಪಿದೆ. ಯಾವತ್ತಿಗೂ ನೆನಪಿರುತ್ತದೆ. ಅಗಸ್ಟ್ 15ರ ಆ ಸಂಭ್ರಮ. ತ್ರಿವರ್ಣ ಧ್ವಜ ಗಾಳಿ ಸೀಳಿ ಕುಣಿಯುವಾಗ ಮೇರೆ ಮೀರಿ ಏರೋ ತೆರೆಗಳ ತರಹ ಕುಣಿದ ಆ ಕ್ಷಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದೆಷ್ಟೋ ಪ್ರೀತಿ, ಉತ್ಸಾಹ, ಕನಸು, ಹೇಳ(ಬರೆಯ)ಲಾಗದ ಅವ್ಯಕ್ತ ಭಾವ, ಈ ನನ್ನ ತಾಯಿಭೂಮಿಗೆ ಮರುಹುಟ್ಟು ನೀಡಿದ ಆ ದಿನದ ಬಗ್ಗೆ. ಅದಕ್ಕಾಗಿ ಇದ್ದದ್ದನ್ನೆಲ್ಲ ತ್ಯಾಗ ಮಾಡಿದ, ತ್ಯಾಗ ಮಾಡಲು ಸಿದ್ಧರಾಗಿದ್ದ ಆ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವಾಗ ಅದೆಂಥ ಪುಳಕ. ಹಿರಿಯರ ಭಾಷಣದಲ್ಲಿ ಹೋರಾಟಗಾರರ ಬಲಿದಾನದ ತುಣುಕುಗಳನ್ನು ಆಲಿಸಿದಾಗ ಕಣ್ಣಂಚಿನಲ್ಲಿ ಜಿನುಗುತ್ತಿದ್ದ ತುಂತುರು....</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಪುಟ್ಟ ಎದೆಯೊಳಗೆ ಹೆಡೆಯೆತ್ತುತ್ತಿದ್ದ ನಾನು ಈ ದೇಶಕ್ಕಾಗಿ ಏನನ್ನಾದರೂ ಮಾಡಲೇಬೇಕು ಎಂಬ ತವಕ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದೇ ನೀಲಿ - ಬಿಳಿ ಸಮವಸ್ತ್ರ, ಬಣ್ಣ ಕಳೆದುಕೊಂಡ ಗೋಡೆಗಳ ಶಾಲೆ, ರಗಳೆ ರಗಳೆ ಎಂದೆನಿಸಿಬಿಡುವ ಪಾಠ, ಅದೆಲ್ಲದ್ದಕ್ಕೆ ಸಾಥ್ ಕೊಡುವ ಜಿಟಿಪಿಟಿ ಮಳೆ ಎಲ್ಲವೂ ಅಗಸ್ಟ್ 15 ಬರುತ್ತಲೇ ಜೀವ ಪಡೆಯುತ್ತಿತ್ತು, ನಮ್ಮಲ್ಲೂ ಹೊಸ ಜೀವ ತುಂಬುತ್ತಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಆಗಿದ್ದ ಕನಸುಗಳಲ್ಲಿ ಕೆಲವು ಇನ್ನೂ ಉಳಿದಿವೆ, ಇನ್ನೂ ಕೆಲವು ಅರೆಜೀವಾವಸ್ಥೆಯಲ್ಲಿದೆ, ಹಲವು ಸತ್ತಿವೆ. ಅದೇನೇ ಇರಲಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಳ್ಳಿಗಳಲ್ಲಿ ಇಂದಿಗೂ ಸ್ವಾತಂತ್ರ್ಯೋತ್ಸವ ಎಂದರೆ ಮಕ್ಕಳಿಗೆ ಹಬ್ಬ. ನನಗಂತೂ ಅದೊಂದು ಮಧುರ ಯಾತನೆ. ಆದರೆ ಆ ಧ್ವಜಕಂಬದ ಮೇಲೆ ತ್ರಿವರ್ಣ ಧ್ವಜ ಪಟಪಟ ಹಾರುವಾಗ ಕೊಡುತ್ತಿದ್ದ ಸೆಲ್ಯೂಟ್ ಅದೆಂತಹ ಜೋಷ್ ನನ್ನಲ್ಲಿ ಮತ್ತು ನನ್ನ ಗೆಳೆಯರಲ್ಲಿ ತರುತ್ತಿತ್ತು ಗೊತ್ತಾ ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯೋತ್ಸವದ ಆ ಪೂರ್ವಭಾವಿ ಸಿದ್ದತೆ......! ಇದರ ಬಗ್ಗೆ ನನ್ನಲ್ಲಿ ಸಾಕಷ್ಟು ನೆನಪುಗಳ ಒರತೆಯಿದೆ. ಸ್ವಾತಂತ್ರ್ಯೋತ್ಸವಕ್ಕೆ ಹದಿನೈದು ದಿನಗಳಿರುತ್ತಲೇ ನಮ್ಮ ತಯಾರಿ. ಮೇಷ್ಟ್ರು ನಮ್ಮನ್ನೆ ಬೇರೆ ಬೇರೆ ತಂಡಗಳಾಗಿ ಮಾಡುತ್ತಿದ್ದರು. ಪ್ರತಿ ತಂಡಕ್ಕೂ ಅದರದ್ದೆಯಾದ ಜವಾಬ್ದಾರಿಗಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರೆಡೆಯಲ್ಲಿ ನೃತ್ಯ ತರಬೇತಿ, ಭಾಷಣಕ್ಕೆ ತಯಾರಿ, ಅಲಂಕಾರ ಹೀಗೆ ಏನೆಲ್ಲಾ ಕೆಲಸಗಳು. ಹಾರೋ ತ್ರಿವರ್ಣವನ್ನು ನೆನಪಿಸಿಕೊಳ್ಳವಾಗ ಆಗುತ್ತಿದ್ದ ರೋಮಾಂಚನದ ಮುಂದೆ ಈ ಕೆಲಸಗಳೆಲ್ಲ ಹೂವೆತ್ತಿದಷ್ಟು ಹಗುರವೆನಿಸಿಕೊಂಡು ಬಿಡುತ್ತಿದ್ದವು.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಅಗಸ್ಟ್ 15ರಂದು ಭಾಷಣ ಮಾಡುವ ಹುರುಪು, ಗುರು ಹಿರಿಯರ ಸಲಹೆ- ಸೂಚನೆಗಳು, ಇನ್ನೂ ನೃತ್ಯಕ್ಕೆ ರೆಡಿಯಾಗಬೇಕು ಅನ್ನೊ ಅವಸರ, ಮತ್ತೆ ನಾಟಕಕ್ಕೆ ತಯಾರಿ, ಒಟ್ಟಿನಲ್ಲಿ ದಿನವಿಡಿ ನಮ್ಮ ಕಲರವ. ದಿನದ ಕೊನೆಗೆ ಮನೆಯ ಹಾದಿ ಹಿಡಿದಾಗ ನಮ್ಮಲ್ಲಿ ಉಳಿಯುತ್ತಿದ್ದದ್ದು ನಾವೂ ಈ ದೇಶಕ್ಕಾಗಿ ಏನನ್ನೊ ಮಾಡಿದ್ದೇವೆ ಎಂಬ ಧನ್ಯತಾ ಭಾವ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂತಹ ಸ್ವಾತಂತ್ರ್ಯ ದಿನ ಕೆಲವರಿಗೆ ಬರೀ ರಜಾದಿನವಾಗಿ ಯಾಕೆ ಉಳಿಯುತ್ತದೆ. ಇದು ಪ್ರಬುದ್ಧತೆಯ ಸಂಕೇತವಾ? ಅಲ್ಲ ಉದಾಸೀನತೆಯೊ? ಈ ದೇಶಕ್ಕಾಗಿ ನಾವೇನು ಮಾಡಬಹುದು? ಏನು ಮಾಡಿದ್ದೇವೆ? ಯಾಕೆ ಏನನ್ನು ಮಾಡಲಾಗಿಲ್ಲ? ದೇಶ ನಿಜವಾಗಿಯೂ ಇಂದು ಯಾವ ಸ್ಥಿತಿಯಲ್ಲಿದೆ? ಇದಕ್ಕೇನು ಕಾರಣ? ಸ್ವಾತಂತ್ರ್ಯದ ನಂತರ ಭಾರತ ನಿರೀಕ್ಷಿತ ಅಭಿವೃದ್ಧಿ ಸಾಧಿಸಿದೆಯಾ? ಇಲ್ಲವಾ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ನಮ್ಮ ಆತ್ಮ ವಿಮರ್ಷೆಯೊಂದಿಗೆ ದೇಶದ ಬಗ್ಗೆ ಒಂದು ಕ್ಷಣ ಯೋಚಿಸಲಾರದಷ್ಟೂ ನಾವ್ಯಕೆ  ಸ್ವಾರ್ಥಿಗಳಾಗುತ್ತೇವೆ? ಪಕ್ಕದಲ್ಲೆಲ್ಲೊ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾರದಷ್ಟೂ ನಾವ್ಯಕೆ ಬ್ಯೂಸಿ ಎಂದೆನಿಸಿಕೊಳ್ಳುತ್ತೇವೆ? ಈ ಎಲ್ಲಾ ಕಾರ್ಯಗಳನ್ನು ಮಾಡಲು ಹರಕು ಬಾಯಿಯ ರಾಜಕಾರಣೆಗಳಿಗೆ ಯಾಕೆ ಗುತ್ತಿಗೆ ಒಪ್ಪಿಸುತ್ತೇವೆ? ಮತ್ತು ನಾವು ಮಾಡದ, ಮಾಡಲಾರಾದ, ಮಾಡಲಾಗದ ಕೆಲಸಗಳನ್ನು ಅವರು ಮಾಡಲಿ, ಮಾಡಬಹುದು ಅಥವಾ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸುತ್ತೇವೆ ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಾಂಬ್ ಸ್ಫೋಟವಾದಾಗ ನನ್ನ ಸ್ನೇಹಿತರು ಚೆನ್ನಾಗಿದ್ದಾರಾ? ನನ್ನ  ಮನೆಯವರಿಗೆ ಏನೂ ಆಗಿಲ್ಲ ತಾನೆ ? ಎಂಬ 'ನನ್ನತನ'ದ ಕೋಟೆಯನ್ನು ನಿರ್ಮಿಸಿಕೊಳ್ಳತ್ತೇವೆ. ನನ್ನ ತಾಯ್ನಾಡಿನ ಎದೆ ಛಿದ್ರಛಿದ್ರವಾಗುತ್ತಿದೆ. ಅದಕ್ಕೆ ರಕ್ತ ತರ್ಪಣವಾಗುತ್ತಿದೆ. ಇದನ್ನ ತಡೆಯಲು ನಾವೇನಾದರೂ ಮಾಡಬೇಕು ಎಂಬ ಅಲೆ ಯಾಕೆ ಸೃಷ್ಟಿಯಾಗುತ್ತಿಲ್ಲ? ಸಂಸತ್ತಿನಲ್ಲಿ ನೋಟಿನ ಧಾರೆ ಕಂಡಾಗ ಬಾಯಿಂದ ಉದುರುವ ಛಿ....ಥೂಗಳನ್ನು    ಚುನಾವಣಾ ಸಂದರ್ಭದಲ್ಲಿ ನಾವ್ಯಕೆ ನುಂಗಿಕೊಳ್ಳುತ್ತೇವೆ? ಅಣು ಒಪ್ಪಂದ ದೇಶಕ್ಕೆ ಪೂರಕವೋ, ಮಾರಕವೋ ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಯಾಕೆ ಒಂದು ಚಿಂತನಾ ಸಂಚಲನ ಉಂಟಾಗುವುದಿಲ್ಲ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂತಹ ಹತ್ತಾರು ಪ್ರಶ್ನೆಗಳು ಇಂದು ನನ್ನಲ್ಲಿ ಹುಟ್ಟಿಕೊಳ್ಳುತ್ತವೆ. ಅವೆಲ್ಲವೂ ಮುಗ್ಧತೆಯ ಲೇಪ ಹೊಂದಿದ್ದ  ಅಂದಿನ ಸ್ವಾತಂತ್ರ್ಯೋತ್ಸವದ ಸಡಗರವನ್ನು ಮರೆಸಿ ಬಿಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ನನ್ನೆಲ್ಲಾ ಭಾರತವಾಸಿಗಳಿಗೆ "ಛಿದ್ರವಾಗುವ ಮುನ್ನ ಭದ್ರವಾಗೋಣ" ಎಂದು ಕೂಗಿಕೂಗಿ ಹೇಳಬೆಕೆನಿಸುತ್ತದೆ. ನಮ್ಮ ದೇಶ 'ಹಾರೋ ಹಾದಿಯಲ್ಲಿ ರೆಕ್ಕೆ ಕಳೆದುಕೊಂಡ ಹಕ್ಕಿ'ಯಂತಾಗುವುದು ಬೇಡ ಎಂದು ಸಾರಿಸಾರಿ ಸಾರಬೇಕು ಎಂದೆನಿಸಿ ಬಿಡುತ್ತದೆ. </font><br/> <font  style='font-size:11pt; color:#000000'></font><br/><font  style='font-size:11pt; color:#000000'>ಅಷ್ಟಕ್ಕೂ ಈಗ ಉಳಿದಿರುವುದು.... ಎಲ್ಲೋ ಬದಲಾವಣೆಯ ಗಾಳಿ ಬೀಸಬಹುದು ಅದು ದೇಶವ್ಯಾಪಿಯಾಗಿ ಹಬ್ಬಬಹುದು ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಎಲ್ಲಾ ಮಹಾತ್ಮರ ಕಣ್ಣಲ್ಲಿ ಮಡುಗಟ್ಟಿದ್ದ ಮಾದರಿ ಭಾರತದ ಕನಸು ಈಡೇರಬಹುದು ಎಂಬ ನಿರೀಕ್ಷೆಯಷ್ಟೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯೋತ್ಸವ ಮರಳಿ ಮರಳಿ ಬರುತ್ತದೆ, ಆದರೆ ಆ ಬಾಲ್ಯ.............?</font><br/>  </font>]]></content:encoded>
      <pubDate>Sat, 08 Aug 2009 17:23:44 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಇವರ ಮನಸ್ಥಿತಿಗೊಂದಿಷ್ಟು....]]></title>
      <link>https://kannada.webdunia.com/article/independence-day-article/ಇವರ-ಮನಸ್ಥಿತಿಗೊಂದಿಷ್ಟು-108081300052_1.htm</link>
      <guid>https://kannada.webdunia.com/article/independence-day-article/ಇವರ-ಮನಸ್ಥಿತಿಗೊಂದಿಷ್ಟು-108081300052_1.htm</guid>
      <media:thumbnail url="http:"/>
      <image>http:</image>
      <description><![CDATA[ಮೊನ್ನೆ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದಾಗ ನಮ್ಮವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರ ಬಾಯಿಯಿಂದ ಉದುರಿದ ನುಡಿ ಮುತ್ತುಗಳಿವು. ಇದೊಂದೇ ಸಲವಲ್ಲ ಅದೆಷ್ಟು ಬಾರಿ ಭಾರತ ಭಯೋತ್ಪಾದಕರ ದಾಳಿಗೆ ನಲುಗಿತ್ತೋ ಅಷ್ಟೂ ಸಲವೂ ನಮ್ಮ ನಾಯಕರು ಇದೇ ಡೈಲಾಗನ್ನು ರಿಪಿಟೇಷನ್ ಮಾಡ್ತಾನೇ ...]]></description>
      <content:encoded><![CDATA[<font  style='font-size:11pt; color:#0000FF'><b>ಕೃಷ್ಣವೇಣಿ ಕುಂಜಾರು   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813052_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ನಾವು ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊನ್ನೆ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದಾಗ ನಮ್ಮವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರ ಬಾಯಿಯಿಂದ ಉದುರಿದ ನುಡಿ ಮುತ್ತುಗಳಿವು. ಇದೊಂದೇ ಸಲವಲ್ಲ ಅದೆಷ್ಟು ಬಾರಿ ಭಾರತ ಭಯೋತ್ಪಾದಕರ ದಾಳಿಗೆ ನಲುಗಿತ್ತೋ ಅಷ್ಟೂ ಸಲವೂ ನಮ್ಮ ನಾಯಕರು ಇದೇ ಡೈಲಾಗನ್ನು ರಿಪಿಟೇಷನ್ ಮಾಡ್ತಾನೇ ಇದ್ದಾರೆ. ನಮ್ಮ ದೇಶದ ಮುಗ್ದ ಜನರ ಪ್ರಾಣವನ್ನು ಎಗ್ಗಿಲ್ಲದೆ ರಕ್ತ ಬೀಜಾಸುರರಂತೆ ಹೀರ್ತಾನೇ ಇದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವರಿಗೂ ಗೊತ್ತಾಗಿ ಹೋಗಿದೆ ಭಾರತದ ನಾಯಕರು ಯಾವುದರಲ್ಲಿ, ಎಷ್ಟು ದುರ್ಬಲರೆಂದು. ನಮ್ಮ ದೇಶದ ಪ್ರತೀ ಮೂಲೆ ಮೂಲೆಯನ್ನು ನಮಗಿಂತ ಚೆನ್ನಾಗಿ ಭಯೋತ್ಪಾದಕರು ಬಲ್ಲರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಿಹಾದ್, ಕಾಶ್ಮೀರವನ್ನು ಸ್ವಾತಂತ್ರ್ಯಗೊಳಿಸುವ ನೆಪದಲ್ಲಿ ಅದೆಷ್ಟು ಮಾರಣ ಹೋಮ ನಡೆದವೋ..ಮೊದಲೆಲ್ಲ ಕಾಶ್ಮೀರಕ್ಕೆ ಮಾತ್ರ ಮೀಸಲಾಗಿದ್ದ ಭಯೋತ್ಪಾದಕ ಕೃತ್ಯಗಳ ಭೀತಿ ಈಗ ಭಾರತದ ಹಳ್ಳಿಗೂ ಹಬ್ಬಿದೆಯೆಂದರೆ ಪರಿಸ್ಥಿತಿ ಎಷ್ಟು ಗಂಭೀರವೆಂದು ಸಣ್ಣ ಮಗುವಿಗೂ ಗೊತ್ತಾಗಿಬಿಟ್ಟಿದೆ. ಆದರೂ ನಮ್ಮನ್ನಾಳುವವರಿಗ್ಯಾಕೆ ಇದೆಲ್ಲ ಸಾಮಾನ್ಯ ಸಂಗತಿಗಳಾಗಿವೆಯೋ ಗೊತ್ತಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೆಚ್ಚೇಕೆ ನಮ್ಮ ಸಂವಿಧಾನದ ಮಾತ್ರವಲ್ಲ ಇಡಿ ದೇಶದ ಅಭಿಮಾನದ ಪ್ರತೀಕ ಪಾರ್ಲಿಮೆಂಟ್ ಅಂಗಳದಲ್ಲಿ ರಕ್ತಪಿಪಾಸುಗಳು ಗುಂಡಿಕ್ಕಲು ಹೊರಟಾಗಲೂ ನಮ್ಮ ನಾಯಕರದ್ದು ಮತ್ತದೇ ಕೆಲಸಕ್ಕೆ ಬಾರದ  ಖಂಡನೆಗಳಿತ್ತಷ್ಟೇ ಹೊರತು ಮತ್ತೇನೂ ಇರಲಿಲ್ಲ. ಇದಿಷ್ಟೂ ಸಾಲದೆಂಬಂತೆ ಅಂದು ಆ ದುಷ್ಕೃತ್ಯವೆಸಗುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಅಫ್ಜಲ್ ಗುರುವಿನ ಮರಣದಂಡನೆಯನ್ನು ಇನ್ನೂ ಮುಂದೂಡುತ್ತಾ, ಆತನನ್ನೂ ರಕ್ಷಿಸುವ ನಮ್ಮ ರಾಜಕಾರಣಿಗಳ ಮನಸ್ಥಿತಿಗೆ  ಏನನ್ನಬೇಕೋ ಗೊತ್ತಿಲ್ಲ. ಅತ್ತ ಪಾಕ್ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸರಬ್ಜಿತ್ ಸಿಂಗ್ ಇವರಿಗೆ ಲೆಕ್ಕಕ್ಕೇ ಇಲ್ಲ.ಎಷ್ಟಾದರೂ ಮನೆಗೆ ಬಂದವ ಶತ್ರುವೇ ಆದರೂ ಅತಿಥಿಯಂತೇ ಸತ್ಕಾರ ಮಾಡಬೇಕೆಂಬ ಭಾರತೀಯ ಪರಂಪರೆಯವರಲ್ಲವೇ ಇವರೂ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಷ ಬೀಜ ಮೊಳಕೆಯಲ್ಲೇ ಚಿವುಟದಿದ್ರೇನೇ ಅದು ಮರವಾಗೋದು ಎಂಬ ಸತ್ಯ ನಮ್ಮನ್ನಾಳುವವರಿಗೇಕೆ ಅರ್ಥವಾಗಲಿಲ್ಲ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂದು ಬಾಂಗ್ಲಾದೇಶ ಪಾಕಿಸ್ತಾನದ ಕೈಯಲ್ಲಿ ನಲುಗುತ್ತಿದ್ದಾಗ ನಮ್ಮದೇ ದೇಶವೇನೋ ಎಂಬಂತೆ ಸಹಾಯ ಮಾಡಿ ನಿರಾಶ್ರಿತರಿಗೆ ಆಶ್ರಯ ಕೊಟ್ಟ ಭಾರತದ ಮೇಲೆ ಇಂದು ಅದೇ ಬಾಂಗ್ಲಾದ ಉಗ್ರರು ಪಾಕ್ ಉಗ್ರರ ಜತೆ ಸೇರಿ ಭಾರತಕ್ಕೇ ಕೊಳ್ಳಿ ಇಡುವ ಕೆಲಸ ಮಾಡಿದರೂ ನಾವು ಮಾತಾಡಲ್ಲ. ಆದರೆ ಅದೇ ಬಾಂಗ್ಲಾದವರು "ಭಾರತದದಲ್ಲಿ ಪ್ರತಿ ಭಯೋತ್ಪಾದಕ ಕೃತ್ಯ ನಡೆದಾಗಲೂ ಒಂದು ಹರಕೆಯ ಕುರಿ ಬೇಕಾಗುತ್ತದೆ" ಎನ್ನುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇರಾನ್‌ನಂತಹ ಸಣ್ಣ ದೇಶವೂ ಅಮೇರಿಕಾದ ದಾರ್ಷ್ಠ್ಯದ ಮಾತುಗಳಿಗೆ ಸೊಪ್ಪು ಹಾಕೋದಿಲ್ಲ. ಆದರೆ ಅದೇ ನಮ್ಮ ನಾಯಕರು ಅಮೆರಿಕಾಕ್ಕೆ ಯಾಕಷ್ಟು ಅನಗತ್ಯ ದಾಸರಾಗುತ್ತಾರೋ ತಿಳಿಯೋದಿಲ್ಲ. ನಮ್ಮಲ್ಲಿಂದ ರಫ್ತುಗೊಳ್ಳುವ ಮಾವಿನ ಹಣ್ಣುಗಳಲ್ಲಿ ಒಂದು ಗಾಯವಾಗಿದ್ದರೂ ವಹಿವಾಟು ನಿಲ್ಲಿಸುವ ಅಮೇರಿಕಾದ ಉತ್ಪನ್ನಗಳಿಂದ ಗಂಭೀರ ಅನಾರೋಗಕ್ಕೆ ತುತ್ತಾದರೂ ನಾವು ಅಲ್ಲಿನ ವಸ್ತುಗಳನ್ನು ಆಮದು ಮಾಡಿಕೊಳ್ಳೋದನ್ನು ನಿಲ್ಲಿಸೋದಿಲ್ಲ ಯಾಕೆ?   </font><br/>   <font  style='font-size:11pt; color:#000000'></font><br/><font  style='font-size:11pt; color:#000000'>ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳ ಮೇಲಾಯಿತು. ಯಃಕಶ್ಚಿತ್ ಉಗ್ರರ ದಾಳಿಯನ್ನು ಹಿಮ್ಮೆಟ್ಟಲು ನಮ್ಮ ನಾಯಕರು ನೀಡುವ ಹೇಳಿಕೆಗಳು, ಪಡಿಪಾಟಲುಗಳನ್ನು ಕಂಡರೆ ನಮ್ಮ ಶಕ್ತಿಯ ಬಗ್ಗೆ ನಮಗೇ ಸಂಶಯಮೂಡುತ್ತದೆ, ಅಲ್ಲ ಮೂಡುವಂತೆ ಮಾಡುತ್ತಾರೆ ಈ ನಾಯಕರುಗಳು. ಸದಾ ಇನ್ನೊಂದು ದೇಶದ, ಗುಂಪಿನ ಭಯದಲ್ಲಿರುವ ನಾವು ಎಷ್ಟರ ಮಟ್ಟಿಗೆ ಸ್ವತಂತ್ರರು? ಯೋಚಿಸಬೇಕಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮ್ಮ ಸ್ವಾತಂತ್ರ್ಯವನ್ನು ಯಾರೋ ಕಸಿದುಕೊಂಡಿದ್ದಾರೇನೋ ಎಂದೆನಿಸುವುದಿಲ್ಲವೇ ನಿಮಗೆ?  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಯಾವಾಗ ನಮ್ಮನ್ನಾಳುವವರು ಬರೇ 'ಖಂಡನೆ'ಯ ಬೊಗಳೆ ಮಾತನ್ನು ಬಿಟ್ಟು ದೇಶ ಉದ್ಧಾರ ಮಾಡುವತ್ತ ಗಮನಹರಿಸುತ್ತಾರೋ ಆಗಲೇ ನಾವು ಸ್ವತಂತ್ರರಾಗಬಹುದು. ಆದರೆ ಆ ಕಾಲ ಬರುವುದು ಯವಾಗಲೋ? ಇರಲಿ ಏನೇ ಆದರೂ 'ಮೇರಾ ಭಾರತ್ ಮಹಾನ್' ಅಲ್ವಾ?</font>]]></content:encoded>
      <pubDate>Sat, 08 Aug 2009 17:23:03 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸ್ವತಂತ್ರ ಭಾರತದ ರೈತ ಮತ್ತು ಗೋಲಿಬಾರ್]]></title>
      <link>https://kannada.webdunia.com/article/independence-day-article/ಸ್ವತಂತ್ರ-ಭಾರತದ-ರೈತ-ಮತ್ತು-ಗೋಲಿಬಾರ್-108081300051_1.htm</link>
      <guid>https://kannada.webdunia.com/article/independence-day-article/ಸ್ವತಂತ್ರ-ಭಾರತದ-ರೈತ-ಮತ್ತು-ಗೋಲಿಬಾರ್-108081300051_1.htm</guid>
      <media:thumbnail url="http:"/>
      <image>http:</image>
      <description><![CDATA[ಭಾರತ 61ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲೆಂದರಲ್ಲಿ ಭಾಷಣಗಳ ಸುರಿಮಳೆ, ಆಡಳಿತರೂಢ ಸರಕಾರ ಕೂಡ ಅಭಿವೃದ್ದಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತದೆ. ಸ್ವಾತಂತ್ರ್ಯ ಗಳಿಸಿ ಇಂದಿಗೆ ಆರು ದಶಕಗಳು ಸಂದಿವೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿತ್ತಿದೆ ...]]></description>
      <content:encoded><![CDATA[<font  style='font-size:11pt; color:#0000FF'><b>ನಾಗೇಂದ್ರ ತ್ರಾಸಿ  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813051_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಭಾರತ 61ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲೆಂದರಲ್ಲಿ ಭಾಷಣಗಳ ಸುರಿಮಳೆ, ಆಡಳಿತರೂಢ ಸರಕಾರ ಕೂಡ ಅಭಿವೃದ್ದಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತದೆ. ಸ್ವಾತಂತ್ರ್ಯ ಗಳಿಸಿ ಇಂದಿಗೆ ಆರು ದಶಕಗಳು ಸಂದಿವೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಸೋಗಲಾಡಿತನದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಜನರನ್ನು ದಿಗಿಲುಗೊಳಿಸದೆ ಇರಲಾರದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ ಸಾರಿಗೆ ಸಮಸ್ಯೆ, ವಿದ್ಯುತ್, ನಕ್ಸಲೀಸಂ, ಶೌಚಾಲಯ, ಮೂಲಭೂತ ಸೌಕರ್ಯ,ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಭಾರತ ನರಳುತ್ತಿದ್ದರೆ, ಮತ್ತೊಂದೆಡೆ ದೇಶದ ಬೆನ್ನೆಲುಬು ಎಂದು ಬಿರುದಾಂಕಿತನಾದ ರೈತರ ಸ್ಥಿತಿ ಮತ್ತೂ ಚಿಂತಾಜನಕವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೃಷಿ ಭಾರತದ ಆರ್ಥಿಕತೆಗೆ ಈಗಲೂ ಶೇ.20ರಷ್ಟು ಜಿಡಿಪಿಯನ್ನು ಕಾಣಿಕೆ ನೀಡುತ್ತಿದೆ. ರಾಷ್ಟ್ರದ ಒಟ್ಟು ಶೇ.60ರಷ್ಟು ಮಂದಿ ಕೃಷಿ ವಲಯದಲ್ಲಿ ಇದ್ದಾರೆ. ಅಷ್ಟಾಗಿಯೂ ದೇಶದ ರೈತರ ಗೋಳು ಪರಿಹಾರವಾಗಿಲ್ಲ. ನೆರೆಯ ಕಮ್ಯೂನಿಷ್ಟ್ ಆಡಳಿತದ ಚೀನಾ ಕೃಷಿ ಹಾಗೂ ಕೈಗಾರಿಕೆಯಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದೆ. ಹಾಗಾದರೆ ನಾವು ಕೃಷಿಗೆ ಪ್ರಾಧಾನ್ಯತೆ ಕೊಟ್ಟಿರುವುದಾಗಿ ಹೇಳುತ್ತಾ ಬಂದಿದ್ದರೂ ಕೂಡ,ಅರವತ್ತು ವರ್ಷಗಳ ಬಳಿಕವೂ ಇವತ್ತು ರೈತರ ಸ್ಥಿತಿ ಏನಾಗಿದೆ.<!--begin inline--><!--@@StartRightBlock@@--><p class="innerBlock_Right"><table id="inlinebox" width="200" height="68" border="0" cellpadding="0" cellspacing="0" class="boxBdr"><tr><td><table width="100%" cellpadding="0" cellspacing="0" border="0"><tr><td class="padding"><span></span></td></tr></table></td></tr><tr><td class="padding"><table width="100%" cellpadding="0" cellspacing="0" border="0" class="kreative"><tr><td width="52%" align="left" class="innerBlock_Text"><span class='imgQuadLeft'>  </span><!--BD-->ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ ಸಾರಿಗೆ ಸಮಸ್ಯೆ, ವಿದ್ಯುತ್, ನಕ್ಸಲೀಸಂ, ಶೌಚಾಲಯ, ಮೂಲಭೂತ ಸೌಕರ್ಯ,ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಭಾರತ ನರಳುತ್ತಿದ್ದರೆ, ಮತ್ತೊಂದೆಡೆ ದೇಶದ ಬೆನ್ನೆಲುಬು ಎಂದು ಬಿರುದಾಂಕಿತನಾದ ರೈತರ ಸ್ಥಿತಿ ಮತ್ತೂ ಚಿಂತಾಜನಕವಾಗಿ<!--ED--><span class='imgQuadRight'>      </span></td></tr></table></td></tr><tr><td class="padding"><table width="100%" border="0" cellspacing="0" cellpadding="0"><tr><td class='QuadFooterColor'><!--BF--><!--EF--></td></tr></table></td></tr></table></p><!--@@EndRightBlock@@--><!--end inline--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ರೈತರ ಸಾಲಮನ್ನಾದ ಘೋಷಣೆಯೊಂದಿಗೆ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರೈತ ನೇಣಿಗೆ ಶರಣಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಭಾರತದ ಅನೇಕ ಹಳ್ಳಿಗಳಲ್ಲಿ ಇವತ್ತಿಗೂ ವಿದ್ಯುತ್ ಇಲ್ಲ, ವೈಜ್ಞಾನಿಕ ಕೃಷಿ ಪದ್ದತಿಯತ್ತ ಯಾರ ಗಮನವೂ ಇಲ್ಲ. ಇಂತಹ ಕಾರಣಗಳಿಂದಾಗಿಯೇ ಕಳೆದ ಹತ್ತು ವರ್ಷಗಳಿಂದೀಚೆಗೆ ಲಕ್ಷಾಂತರ ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ. ಆದರೂ ದೇಶದ ಮಹಾನ್ ರಾಜಕಾರಣಿಗಳು ರೈತರ ಆತ್ಮಹತ್ಯೆ ಕೃಷಿ ಸಂಬಂಧಿತ ವಿಷಯದಿಂದಾಗಿಲ್ಲ, ಅದು ಕೌಟುಂಬಿಕ ಕಾರಣಗಳು ಎಂಬುದಾಗಿ ಹಲುಬುತ್ತಾರೆ!!.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಷ್ಟ್ರದಲ್ಲಿ ಈವರೆಗೆ ಸಂಭವಿಸಿದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.40ರಷ್ಟು ಸಂಭವಿಸಿರುವುದು ಕರ್ನಾಟಕದಲ್ಲಿ ಎಂಬುದನ್ನು ಗಮನಿಸಬೇಕಾಗಿದೆ. ಅದರಲ್ಲೂ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ 65ಸಾವಿರ ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಲಕ್ಷಾಂತರ ರೈತರು ಭವಣೆ ಪಡುವಂತಾಗಿದೆ. ನ್ಯಾಯ ಕೇಳಿ ಪ್ರತಿಭಟನೆ ನಡೆಸುವ ರೈತರ ಮೇಲೆ ಗೋಲಿಬಾರ್ ನಡೆಸಲಾಗುತ್ತಿದೆ. ಇದೆಂತಹ ನ್ಯಾಯ?! ಇದು 61ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೂತನವಾಗಿ ಅಧಿಕಾರದ ಗದ್ದುಗೆಗೆ ಏರಿ,ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಸರ್ಕಾರ ರಾಜ್ಯ ರೈತರಿಗೆ ನೀಡಿದ ಇನಾಮು!!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರ ಟಿಪ್ಪಣಿ ಪ್ರಕಾರ ಕೆಲವೊಂದು ಅಂಶಗಳನ್ನು ಗಮನಿಸಿ, ರೈತ ದೇಶದ ಬೆನ್ನೆಲುಬು,ದೇಶದ ಆಧಾರ ಸ್ತಂಭ ಎಂದು ಬೊಬ್ಬಿಡುತ್ತಿರುವ ಭಾರತ ಹಾಗೂ ವಿದೇಶಗಳಲ್ಲಿ ಕೃಷಿಗೆ ನೀಡಿರುವ ಮಹತ್ವ ನಿಮಗೆ ವೇದ್ಯವಾಗುತ್ತದೆ. ವಿದೇಶಗಳಲ್ಲಿ ಪ್ರತಿ ಹಸುವಿನ ಸಾಕಾಣೆಗೆ ಪ್ರತಿದಿನ 150ರೂ.ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೇ ಅಮೆರಿಕದ ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿ ಪಾಲು ಕೇವಲ ಶೇ.4ರಷ್ಟಿದೆ. ಅಷ್ಟಾದರೂ ಅಮೆರಿಕ ಹತ್ತಿ ಬೆಳೆಗೆ 390ಕೋಟಿ ರೂಪಾಯಿ ಡಾಲರ್ ಸಬ್ಸಿಡಿ ನೀಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಮೆರಿಕದಲ್ಲಿ ತಲಾ ಕೃಷಿಕನಿಗೆ 200ಹೆಕ್ಟೇರ್ ಜಮೀನು ಇದ್ದರೆ, ಭಾರತದಲ್ಲಿ ಇದೀಗ ರೈತರ ಬಳಿ 1.47ಹೆಕ್ಟೇರ್ ಮಾತ್ರ. ಅದರಲ್ಲೂ ವಿಶೇಷ ಆರ್ಥಿಕ ವಲಯ, ಕೈಗಾರಿಕೆಗಳ ಸ್ಥಾಪನೆಯ ಹೆಸರಲ್ಲಿ ರೈತರ ಭೂಮಿಯನ್ನು ವ್ಯವಸ್ಥಿತವಾಗಿ ಕಸಿಯಲಾಗುತ್ತಿದೆ. 2000ದಲ್ಲಿ ಭಾರತದಲ್ಲಿ ಪ್ರತಿ ಹೆಕ್ಟೇರಿಗೆ 20ಕ್ವಿಂಟಾಲ್ ಭತ್ತದ ಇಳುವರಿ ಇದ್ದರೆ, ಥಾಯ್ಲೆಂಡ್‌ನಲ್ಲಿ 32ಕ್ವಿಂಟಾಲ್, ಅದೇ ಅಮೆರಿಕದಲ್ಲಿ 70ಕ್ವಿಂಟಾಲ್. ಅಮೆರಿಕದಲ್ಲಿ ರೈತರ ಕುಟುಂಬ ಪ್ರತಿವರ್ಷ 30ಸಾವಿರ ಡಾಲರ್ ಸಬ್ಸಿಡಿ ಪಡೆಯುತ್ತದೆ.</font><font  style='font-size:11pt; color:#000000'>ಇನ್ನು ಕೃಷಿ ಮತ್ತು ಕೈಗಾರಿಕೆಗೆ ಪ್ರಮುಖ ಪ್ರಾಧಾನ್ಯತೆ ನೀಡಿರುವ ಚೀನಾ ಕೂಡ ಹಿಂದೆ ಬಿದ್ದಿಲ್ಲ, ಇತ್ತೀಚೆಗಷ್ಟೇ ಮಕ್ಕಳ ಪಂಚಾಯತ್ ಅಧ್ಯಕ್ಷೆಯಾಗಿದ್ದ ಕುಂದಾಪುರ ಗ್ರಾಮೀಣ ಪ್ರದೇಶದ ಪಾರ್ವತಿ ಎಂಬ ಯುವತಿ ಚೀನಾ ಅಧ್ಯಯನ ಪ್ರವಾಸಕ್ಕೆ ಹೋಗಿ ಬಂದಿದ್ದಳು, ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಆಕೆಯಲ್ಲಿ, ಚೀನಾದ ಕೃಷಿ ವ್ಯವಸ್ಥೆ ಕುರಿತು ಕೇಳಿದಾಗ ಅಲ್ಲಿನ ರೈತರಿಗೆ ಬೇಕಾದ ಸೌಲಭ್ಯ ಹಾಗೂ ಕೃಷಿಗೆ ಅವರು ನೀಡುತ್ತಿರುವ ಪ್ರಾಮುಖ್ಯತೆ ಅದ್ಭುತವಾದದ್ದು ಎಂದು ವಿವರಿಸಿದ್ದಳು. ಅದೇ ರೀತಿ ಭಾರತೀಯ ಸಂಸ್ಕೃತಿ ಬಗ್ಗೆಯೂ ಕುತೂಹಲ ಹೊಂದಿರುವುದಾಗಿ ತಿಳಿಸಿದ್ದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೂ ಚೀನಾ ರೈತರಿಗಾಗಿ 2004ರಲ್ಲಿ ಹಲವಾರು ಯೋಜನೆಗಳನ್ನ ರೂಪಿಸಿತ್ತು. ಅಲ್ಲದೇ ಚೀನಾ ಪ್ರಥಮ ಬಾರಿಗೆ ದೇಶಾದ್ಯಂತ ರೈತರಿಗಾಗಿ ನೇರ ಸಹಾಯಧನ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮ್ಮಲ್ಲಿ....ಬ್ಯಾಂಕಿನಿಂದ ಪಡೆದ ಸಾಲವನ್ನು ಬೆಳೆ ನಷ್ಟದಿಂದ ತೀರಿಸಲಾಗದೆ ರೈತ ಕುಟುಂಬ ಸಾಲು, ಸಾಲುಸಾಲಾಗಿ ಚಿತೆ ಏರುತ್ತಿದೆ. ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸದೆ ರೈತರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಆಡಳಿತವರ್ಗ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬೆಣ್ಣೆಯಂತಹ ಮಾತುಗಳನ್ನಾಡಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತವೆ. ಆಂಧ್ರದ ಕರ್ನೂಲ್‌ನಲ್ಲಿ ರೈತರು ಟೊಮೆಟೋಗೆ ಕನಿಷ್ಟ ಬೆಲೆಯೂ ದೊರೆಯದೆ, ಅವುಗಳನ್ನು ರಸ್ತೆಗೆ ಎಸೆದಿದ್ದರು, ಅದರಂತೆ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ಗಳಲ್ಲೂ ರೈತರು ಆಲೂಗಡ್ಡೆಯನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. </font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813051_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಹಾಗಾದರೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳು ಸಂದರೂ ರೈತರ ಬದುಕು ಹಸನಾಗಿದೆ ಎಂದು ಅನ್ನಿಸುತ್ತಾ? ಕೇವಲ ರೈತರ ಸ್ಥಿತಿ ಮಾತ್ರವಲ್ಲ ಮುಂದಿನ ದಿನಗಳಲ್ಲಿ ವಿದ್ಯುತ್‌ಗಾಗಿ ಹಪಹಪಿಸಬೇಕಾಗುತ್ತೆ, ಖ್ಯಾತ ಪತ್ರಕರ್ತ ಪ್ರೀಡ್‌ಮನ್ ಅವರ ಮಾತಿನಲ್ಲೇ  ಹೇಳುವುದಾದರೆ, ಈ ದೇಶಕ್ಕೇನಾದರೂ ದೊಡ್ಡ ಅಪಾಯ ಅಂತ ಇದೆಯಾದರೆ ಅದು ಟ್ರಾಫಿಕ್ ಸಮಸ್ಯೆ. ಬೆಂಗಳೂರು, ಹೈದರಾಬಾದ್, ಮುಂಬೈ, ಕೋಲ್ಕತಾ ಮಹಾನಗರಗಳಲ್ಲಿ ಓಡಾಟ ನಡೆಸಿದರೆ ಸಂಚಾರ ದಟ್ಟಣೆ ಮುಂದಿನ ದಿನಗಳಲ್ಲಿ ಯಾವ ಮಟ್ಟದ ತೊಂದರೆಯನ್ನು ತಂದೊಡ್ಡಬಲ್ಲದು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ವಿದ್ಯುತ್ ವಿಷಯಕ್ಕೆ ಬಂದರೆ, ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ 5600 ಮೆಗಾವ್ಯಾಟ್, ಬೇಡಿಕೆ ಇರುವುದು 8 ಸಾವಿರ ಮೆಗಾವ್ಯಾಟ್ ಬೇಕಾಗಿದೆ. ಅದರಲ್ಲಿ ಮಳೆ ಕೈಕೊಟ್ಟರೆ, ಅದರಲ್ಲೂ ಖೋತಾ!!. ಈ ಬಗ್ಗೆ ಸರಕಾರ ಮೀಸಲಿಡುವ ಆರ್ಥಿಕ ಪ್ರಮಾಣ ಅಷ್ಟಕಷ್ಟೇ, ಪರ್ಯಾಯ ಮಾರ್ಗ ಕಂಡುಕೊಂಡರೂ ಅಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ, ಹಾಗಾದರೆ ದೇಶದ ಒಟ್ಟು ವಿದ್ಯುತ್ ಕೊರೆತೆ ನೀಗಿಸುವ ಮಾತು ದೂರವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಲ್ಲ ಸ್ವಾಮಿ, ಅಣು ಒಪ್ಪಂದ ಮಾಡಿಕೊಂಡಿರುವುದು ಮತ್ಯಾಕೆ ಎಂದು ನೀವು ಪ್ರಶ್ನಿಸಿದರೂ ಕೂಡ, ಅಣು ಒಪ್ಪಂದದಿಂದಲೂ ನಮ್ಮ ವಿದ್ಯುತ್ ಕೊರತೆ ನೀಗಲಾರದು. ಬದಲಿಗೆ ಅದರಿಂದ ತಗುಲಿಕೊಳ್ಳುವ ಅಪಾಯ ಭಾರತ ಮತ್ತೊಂದು ಚಕ್ರವ್ಯೂಹದಲ್ಲಿ ಸಿಲುಕುತ್ತಿದೆ ಎಂಬುದು ಸ್ಪಷ್ಟ. ಯಾಕೆಂದರೆ ಪಾಶ್ಚಾತ್ಯ ದೇಶಗಳು ಇವತ್ತು ಪರಮಾಣು ವಿದ್ಯುತ್ ಉತ್ಪಾದನೆಯನ್ನು ಕೈಬಿಡುತ್ತಿವೆ. ಸಣ್ಣ ಪ್ರಮಾಣದ ವಿಕಿರಣ ಸೋರುವಿಕೆ ತೀವ್ರ ಆತಂಕ ಸೃಷ್ಟಿಸುತ್ತಿವೆ ಎಂದು ಅಣುಸ್ಥಾವರ ಸ್ಥಾಪನೆಯಿಂದ ದೂರ ಸರಿದಿವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದ ಒಡಲೊಳಗೆ ಒಂದೇ, ಎರಡೇ..ಅದೆಷ್ಟು 'ರಾಡಿ'ಗಳು ತುಂಬಿವೆ, ಅವುಗಳಿಗೆ ಸೂಕ್ತ ಚಿಕಿತ್ಸೆ ಮಾಡಬೇಕಿದ್ದರೆ, ನಮ್ಮ ರಾಜಕಾರಣಿಗಳಿಗೆ ಆ ಇಚ್ಚಾಶಕ್ತಿ ಇರಬೇಕು, ದೇಶದ ಮಹಾನ್ ರಾಜಕಾರಣಿಗಳನ್ನು ನೋಡಿದರೆ, ಸಂಸತ್‌ನೊಳಗೆ ನೋಟಿನ ಕಂತೆ ಪ್ರದರ್ಶಿಸುವವರು, ಹಣಕ್ಕಾಗಿ ಖರೀದಿಯಾಗುವ ಸಂಸದರು, ಕೊಲೆ ಪಾತಕರಿಂದ ತುಂಬಿರುವ ಸಂಸತ್, ಇಂತಹವರನ್ನು ಆಯ್ಕೆ ಮಾಡಿಕಳುಹಿಸುವ ನಮ್ಮಂಥ ಮೂರ್ಖ ಮತದಾರರು... ಇಂಥವರಿಂದ ತುಂಬಿ ಹೋಗಿರುವ ಸ್ವತಂತ್ರ ಭಾರತದಿಂದ ಏನನ್ನ ನಿರೀಕ್ಷಿಸಬಹುದು......</font>]]></content:encoded>
      <pubDate>Sat, 08 Aug 2009 17:20:51 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸಿನಿಕತನ ಬಿಡಿ, ಶ್ರೇಷ್ಠರು ನಾವೆಂದು ಹೆಮ್ಮೆ ಪಡಿ]]></title>
      <link>https://kannada.webdunia.com/article/independence-day-article/ಸಿನಿಕತನ-ಬಿಡಿ-ಶ್ರೇಷ್ಠರು-ನಾವೆಂದು-ಹೆಮ್ಮೆ-ಪಡಿ-108081300048_1.htm</link>
      <guid>https://kannada.webdunia.com/article/independence-day-article/ಸಿನಿಕತನ-ಬಿಡಿ-ಶ್ರೇಷ್ಠರು-ನಾವೆಂದು-ಹೆಮ್ಮೆ-ಪಡಿ-108081300048_1.htm</guid>
      <media:thumbnail url="http:"/>
      <image>http:</image>
      <description><![CDATA[ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ? ನಮ್ಮಲ್ಲಿ ಒಂದಿಷ್ಟೂ ಸುಧಾರಣೆಯಾಗಿಲ್ಲವೆ? ಒಂದುಕಾಲದ ಬ್ರಿಟಿಷರ ವಸಾಹತು ಇಂದು ಜಗತ್ತಿನಲ್ಲೇ ಬಲಿಷ್ಠ ರಾಷ್ಟ್ರವಾಗಿ ...]]></description>
      <content:encoded><![CDATA[<font  style='font-size:11pt; color:#0000FF'><b>ಚಂದ್ರಾವತಿ ಬಡ್ಡಡ್ಕ   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813048_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ಅದು ಮಕ್ಕಳ ದಿನವಿರಬಹುದು, ಮಹಿಳಾ ದಿನಾಚರಣೆ ಇರಬಹುದು ಅಥವಾ ಇನ್ಯಾವುದೇ ವಿಶೇಷ ದಿನವಿರಲಿ. ಚಿಂದಿ ಆಯುವ ಮಕ್ಕಳ ಚಿತ್ರ ಇಲ್ಲವೇ, ಹೊರೆಹೊತ್ತ ಕಾರ್ಮಿಕ ಮಹಿಳೆಯ ಚಿತ್ರಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. "ಇಂದು ಬಾಲಕಾರ್ಮಿಕರ ದಿನ. ಇಂತಹ ಊರಿನ ಇಂತಹ ಸ್ಥಳದಲ್ಲಿ ಚಿಂದಿ ಆಯುವ ಹುಡುಗ" ಎಂದೋ, "ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ,  ಮಹಿಳಾ ಕಾರ್ಮಿಕಳೊಬ್ಬಳು ತಲೆಹೊರೆ ಹೊತ್ತೊಯ್ಯುತ್ತಿರುವುದು" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳು ಪ್ರಕಟಗೊಂಡಿರುತ್ತವೆ. ಇಂತಹ ದಿನಗಳಲ್ಲಿ ಮಾಸ್ಟರ್ ಕಿಶನ್ ಅಥವಾ ಇನ್ಯಾವುದೋ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳ ಚಿತ್ರಗಳಾ ಅಥವಾ, ಕಿರಣ್ ಬೇಡಿ, ಕಲ್ಪನಾ ಚಾವ್ಲಾ, ಗಂಗೂಬಾಯಿ ಹಾನಗಲ್ ಇವರಂಥ ಮಹಿಳೆಯರ ಚಿತ್ರಗಳು "ಇಂದು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನಮ್ಮ ನಾಡಿನ ಹೆಮ್ಮೆಯ ಮಹಿಳೆಯರು" ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಬಾರದೇ? ಇಂತಹ ಸಿನಿಕತನ ನಮಗ್ಯಾಕೆ? </font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತ ಸಮಸ್ಯೆಮುಕ್ತ ಎಂಬುದು ಇಲ್ಲಿ ನನ್ನ ವಾದವಲ್ಲ. ಹಾಗಂತ ಭಾರತ ಸಂಪೂರ್ಣ ಸಮಸ್ಯೆಯಿಂದಲೇ ತುಂಬಿದೆ ಎಂಬುದನ್ನು ಒಪ್ಪಿಕೊಳ್ಳಲೂ ತಯಾರಿಲ್ಲ. ಸಮಸ್ಯೆಗಳನ್ನೇ, 'ಇಲ್ಲ'ಗಳನ್ನೇ ಎತ್ತಿ ಆಡುತ್ತಿರುವ ಈ ಸಂದರ್ಭದಲ್ಲಿ ಮೂಡಿರುವ ಕೆಲವು ಪ್ರಶ್ನೆಗಳನ್ನು, ಅನಿಸಿಕೆಗಳನ್ನು ಇಲ್ಲಿ ಮಂಡಿಸುತ್ತಿದ್ದೇನೆ.</font><font style='font-size:11pt;'></font><br/><!--begin inline--><!--@@StartRightBlock@@--><p class="innerBlock_Right"><table id="inlinebox" width="200" height="68" border="0" cellpadding="0" cellspacing="0" class="boxBdr"><tr><td><table width="100%" cellpadding="0" cellspacing="0" border="0"><tr><td class="padding"><span></span></td></tr></table></td></tr><tr><td class="padding"><table width="100%" cellpadding="0" cellspacing="0" border="0" class="kreative"><tr><td width="52%" align="left" class="innerBlock_Text"><span class='imgQuadLeft'>  </span><!--BD-->ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ?<!--ED--><span class='imgQuadRight'>      </span></td></tr></table></td></tr><tr><td class="padding"><table width="100%" border="0" cellspacing="0" cellpadding="0"><tr><td class='QuadFooterColor'><!--BF--><!--EF--></td></tr></table></td></tr></table></p><!--@@EndRightBlock@@--><!--end inline--> <font  style='font-size:11pt; color:#000000'></font><br/><font  style='font-size:11pt; color:#000000'>ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ? ನಮ್ಮಲ್ಲಿ ಒಂದಿಷ್ಟೂ ಸುಧಾರಣೆಯಾಗಿಲ್ಲವೆ? ಒಂದುಕಾಲದ ಬ್ರಿಟಿಷರ ವಸಾಹತು ಇಂದು ಜಗತ್ತಿನಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿರುವುದರ ಹಿಂದೆ ಯಾವುದೇ ಅಥವಾ ಯಾರದ್ದೇ ಶ್ರಮವಿಲ್ಲವೆ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೇಳಿ. ನಾವು ಯಾವ ವಿಚಾರದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಿಗಿಂತ ಹಿಂದಿದ್ದೇವೆ? ಒಳಿತು ಮತ್ತು, ಅಫ್‌ಕೋರ್ಸ್ ಕೆಡುಕುಗಳಲ್ಲೂ ನಾವು ಸರಿಸಮವಾಗೇ ಮುಂದುವರಿದಿದ್ದೇವೆ. ಒಂದು ಕಾಲದಲ್ಲಿ ಭಾರತವನ್ನು ದೂರವಿರಿಸಿದ್ದ ಅಮೆರಿಕಾದಂತಹ ಅಮೆರಿಕಾವೇ ನಮ್ಮ ಸ್ನೇಹಕ್ಕಾಗಿ ಕೈ ಚಾಚಿದೆ. ಭಾರತದ ಅಭಿವೃದ್ಧಿಯ ವೇಗ ಅದರೊಳಗೆ ಪುಕುಪುಕು ಭೀತಿ ಹುಟ್ಟಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾವು, ಲಭ್ಯವಿರುವ ಇತಿಹಾಸವನ್ನು ನಂಬುವುದೇ ಆದಲ್ಲಿ; ರಾಜಮಹಾರಾಜರ ಆಡಳಿತ, ದುರಾಡಳಿತ ಕಂಡ ರಾಷ್ಟ್ರ ನಮ್ಮದು. ವಿವಿಧ ರೀತಿಯ, ಮನಸ್ಥಿತಿಯ ರಾಜರು ನಮ್ಮ ಹಿರಿಯರನ್ನು ಆಳಿದ್ದಾರೆ. ಅಗಾಧ ಸಂಪತ್ತು ಹೊಂದಿದ್ದ ಭಾರತಕ್ಕೆ ವ್ಯಾಪಾರದ ಉದ್ದೇಶದಿಂದ ಬಂದವರು ಇಲ್ಲೇ ಠಿಕಾಣಿ ಹೂಡಿದರು. ಈಸ್ಟ್ ಇಂಡಿಯಾ ಕಂಪೆನಿ ಹುಟ್ಟುಹಾಕಿದರು. ಈ ಕಂಪೆನಿ ಭಾರತದ ಮೇಲೆ ಸವಾರಿ ಮಾಡಿತು. ಅವರ ಬಳಿ ಆಧುನಿಕ, ತಾಂತ್ರಿಕತೆ, ವಸ್ತುಗಳು, ಹತ್ಯಾರುಗಳಿದ್ದವು. ಇಲ್ಲಿದ್ದ ರಾಜರುಗಳು ತಮ್ಮೊಳಗೆ ಕಚ್ಚಾಡುವಲ್ಲೇ ನಿರತರಾಗಿದ್ದರು. ಇಲ್ಲವೇ ಬ್ರಿಟಿಷರ ಭಯಕ್ಕೋ ಇಲ್ಲ ಆಮಿಷಕ್ಕೋ ಒಳಗಾಗಿದ್ದರು. ಹಾಗಾಗಿ ಹಲವಾರು ದಶಕಗಳ ಕಾಲ ಅವರು ಆಡಿದ್ದೇ ಆಟವಾಗಿತ್ತು.</font><br/><font  style='font-size:11pt; color:#000000'></font><br/>(<font  style='font-size:11pt; color:#000000'>ಇಲ್ಲಿ ನನಗೊಂದು ಘಟನೆ ನೆನಪಾಗುತ್ತಿದೆ. ಈ ಹಿಂದೆ ನಾನೊಮ್ಮೆ ಕೆಎಎಸ್ ಪರೀಕ್ಷೆ(ಮುಖ್ಯ)ಗೆ ತಯಾರಿ ನಡೆಸುತ್ತಿದ್ದ ವೇಳೆ ಬೆಂಗಳೂರಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಕೋಚಿಂಗ್ ಪಡೆಯುತ್ತಿದ್ದೆ. ಆ ವೇಳೆ ಇತಿಹಾಸದ ಪಾಠ ಮಾಡುತ್ತಿದ್ದ ಉಪನ್ಯಾಸಕರು ನಮ್ಮ ಮುಂದೆ ಒಂದು ಪ್ರಶ್ನೆ ಇಟ್ಟಿದ್ದರು. "ಭಾರತೀಯರೆಲ್ಲ ಒಟ್ಟು ಸೇರಿ ಕಾದಾಡುವುದು ಬಿಡಿ, ಉಗುಳುತ್ತಿದ್ದರೂ ಆ ಉಗುಳಿನ ಹೊಳೆಯಲ್ಲಿ ಬ್ರಿಟಿಷರು ಕೊಚ್ಚಿ ಹೋಗುತ್ತಿದ್ದರು. ಆದರೆ ಭಾರತೀಯರು ಯಾಕೆ ಒಂದಾಗಿಲ್ಲ?" - ಇದು ಅವರ ಪ್ರಶ್ನೆಯಾಗಿತ್ತು. ಅದಕ್ಕೆ ತಟಕ್ಕನೆ ಉತ್ತರಿಸಿದ ನನ್ನ ಸಹ ಅಭ್ಯರ್ಥಿಯೊಬ್ಬ, "ಅವರವರೇ ಪರಸ್ಪರ ಉಗುಳಿಕೊಂಡು ಎಲ್ಲ ಉಗುಳು ಮುಗಿಸಿಕೊಂಡಿದ್ದರು" ಆ ಸಂದರ್ಭದಲ್ಲಿ ಎಲ್ಲರೂ ಗೊಳ್ಳನೆ ನಕ್ಕರೂ, ಇದು ವಾಸ್ತವಕ್ಕೆ ಎಷ್ಟೊಂದು ಹತ್ತಿರವಾಗಿದೆ!)</font><font  style='font-size:11pt; color:#000000'>ಇಂದು ನಡೆಯುತ್ತಿರುವುದಾದರೂ ಏನು? ನಾವು ನಮಗೆ ಲಭಿಸಿದ ಸ್ವಾತಂತ್ರ್ಯ, ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಯಾವುದೇ ಏಳಿಗೆಯನ್ನು ನಾವು ಬಡಪೆಟ್ಟಿಗೆ ಒಪ್ಪಿಕೊಳ್ಳುತ್ತೇವಾ? ಎಷ್ಟೊಂದು ವಿಘ್ನಗಳು, ತೊಡಕುಗಳು, ಅಡ್ಡಿಗಳು! ಉತ್ತಮ ಕಾರ್ಯಕ್ಕೆ ಸಂಘಟಿತರಾಗಲು ನಮ್ಮ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಅಲ್ಲಿ 'ಅಚ್ಚಾ' ಮನೋಭಾವಕ್ಕಿಂತ, 'ಕಚ್ಚಾ' ಮನೋಭಾವವೇ ಪ್ರಭಾವ ಬೀರುತ್ತದೆ. ಅದೇ ನಕಾರಾತ್ಮಕ ವಿಚಾರವಾದಲ್ಲಿ? ಬಹುಬೇಗ ನಮ್ಮ ಮನಸ್ಸು ಪ್ರಭಾವಿತವಾಗುತ್ತದೆ. ಎಲ್ಲದರಲ್ಲೂ, ಹುಳುಕು ಹುಡುಕದಿದ್ದರೆ ಹೇಗೆ? ತಂತ್ರ ಕುತಂತ್ರಗಳನ್ನು ಬಳಸಿ, ತಣ್ಣಗಿನ ಕ್ರೌರ್ಯ ಮೆರೆಯುತ್ತಾ 'ಸಾಧನೆಗಾಗಿ' ಮೀಸೆಯಡಿ ನಗುಬೀರುತ್ತೇವೆ.  'ಮೊಸರು ತಿಂದು ಮೇಕೆಯ ಬಾಯಿಗೆ ಕೈ ಒರೆಸುವ' ಪಂಗಡದವರು ನಾವು.<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0808/13/images/img1080813048_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage-->  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಭಿವೃದ್ಧಿ, ತಂತ್ರಜ್ಞಾನ, ವಿಜ್ಞಾನ, ಆರ್ಥಿಕತೆ, ಉದ್ಯಮ ಅಥವಾ ಇನ್ಯಾವುದೇ ಅಭಿವೃದ್ಧಿಗೆ ಮೂಲ ಶಿಕ್ಷಣ. ಈ ಕ್ಷೇತ್ರದಲ್ಲಿ ನಿಬ್ಬೆರಗಾಗುವಷ್ಟು ಬೃಹತ್ ಯಶಸ್ಸು ಸಾಧಿಸಿಲ್ಲವೇ ನಾವು? ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯದ ಆರಂಭದ ಸ್ಥಿತಿಗತಿಗಳಿಗೆ ಹೋಲಿಸಿ ನೋಡಿದರೆ ಅಗಾಧವಾದ ವ್ಯತ್ಯಾಸವಿಲ್ಲವೇ? ನಮ್ಮಲ್ಲಿನ ಸಂಪರ್ಕ ಕ್ರಾಂತಿ ಅದ್ಭುತವಾದ ಬೆಳವಣಿಗೆಯಲ್ಲವೇ? ಭೌಗೋಳಿಕವಾಗಿ ಇಷ್ಟು ದೊಡ್ಡ, ಇಷ್ಟೊಂದು ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಎಲ್ಲರಿಗೂ ಒಂದು ಹಂತದ ತನಕ ಶಿಕ್ಷಣ ಕೈಗೆಟಕುತ್ತಿಲ್ಲವೇ? ಹೌದು. ನಮಗೆ ನಮ್ಮ ಮಕ್ಕಳು ಇಂಜಿನಿಯರ್ ಮತ್ತು ವೈದ್ಯರೇ ಆಗಬೇಕು. ಪ್ರಸ್ತುತವಂತೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗೋದೇ ಗುರಿ. ಇದು ಬಿಟ್ಟರೆ ಮೂಲ ವಿಜ್ಞಾನ ಅಥವಾ ಇತರ ಡಿಸಿಪ್ಲೀನ್‌ಗಳಲ್ಲಿ ನಮ್ಮಮಕ್ಕಳು ಹೋಗುವುದು ನಮಗೆ ಬೇಕಿಲ್ಲ. ಇರುವ ಅವಕಾಶವನ್ನು ಉತ್ತಮವಾಗಿ ಚೆನ್ನಾಗಿ ಬಳಸಿಕೊಳ್ಳುವುದು 'ಘನತೆಗೆ' ಕಮ್ಮಿ. ಬದಲಿಗೆ ನಿಲುಕದಿರುವತ್ತ ಕೈ ಚಾಚುತ್ತಾ ಇಲ್ಲಗಳ ಪಟ್ಟಿ ಮಾಡುತ್ತೇವೆ. ಇಲ್ಲದಿರುವುದನ್ನು ಖಂಡಿಸುವ ವೇಳೆಗೆ ಇರುವುದನ್ನು ಮರೆಯುತ್ತೇವೆ. ಯಾಕೆ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉದಾಹರಣೆ ನೋಡೋಣ. ನಾವೊಂದು ಸಂಸ್ಥೆಗೆ ಉದ್ಯೋಗ ಯಾಚಿಸಿ ಅರ್ಜಿ ಹಾಕುತ್ತೇವೆ. ಶತಾಯಗತಾಯ ಕೆಲಸ ಗಿಟ್ಟಿಸುವುದು ನಮ್ಮ ಏಕೈಕ ಗುರಿಯಾಗಿರುತ್ತದೆ. ಸಾಧ್ಯವಿರುವ ಎಲ್ಲಾ ಪ್ರಭಾವಗಳನ್ನೂ ಬೀರುತ್ತೇವೆ. ಆ ಸಂದರ್ಭದಲ್ಲಿ ನಾವು ಯಾವುದಕ್ಕೂ ಸಿದ್ಧರಿರುತ್ತೇವೆ. ಬಳಿಕ, ಒಂದು ಹಂತಕ್ಕೆ ಬಂದೆವೆಂದಾದರೆ ಎಲ್ಲದರಲ್ಲೂ, ಎಲ್ಲರಲ್ಲೂ ಐಬು ಕಾಣಬರುತ್ತದೆ. ಸಂಸ್ಥೆಯ ನೀತಿ ನಡಾವಳಿಗಳು ನಮಗೆ ಇಷ್ಟವಾಗುವುದಿಲ್ಲ. ನಮ್ಮೊಳಗಿನ ಕ್ರಾಂತಿಕಾರಿ ಜಾಗೃತಗೊಳ್ಳುತ್ತಾನೆ. ಹತ್ತಿದ ಏಣಿಯನ್ನು ಒದೆಯಲು ಆರಂಭಿಸುತ್ತೇವೆ. ಹಕ್ಕುಗಳನ್ನು ಪ್ರಶ್ನಿಸುತ್ತೇವೆ. ಕರ್ತವ್ಯಗಳನ್ನು ಮರೆಯುತ್ತೇವೆ. ಸಂಸ್ಥೆ ಮತ್ತು ನಮ್ಮೊಳಗಿನ ಸಂಬಂಧ ಪರಸ್ಪರ ಕೊಡುಕೊಳ್ಳುವಿಕೆಯದೆಂಬುದು ನಮಗೆ ಅರ್ಥವಾಗುವುದಿಲ್ಲ. ನಾವ್ಯಾಕೆ ಋಣಾತ್ಮಕ ಮನೋಭಾವ ಬಿಟ್ಟು ಧನಾತ್ಮಕ ಮನೋಭಾವ ರೂಪಿಸಿಕೊಳ್ಳುವುದಿಲ್ಲ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯಾ ನಂತರದ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಅವಲೋಕಿಸಿ. ಯಾರಿಗೆ ಕಮ್ಮಿ ಇದೆ ಭಾರತ. ಯಾರೂ ಸುಲಭದಲ್ಲಿ ನಮ್ಮ ತಂಟೆಗೆ ಬರದಂತೆ ನಾವು ಆಗೀಗ ನಮ್ಮ ಸಾಮರ್ಥ್ಯವನ್ನು ತೋರಿಸುತ್ತಲೇ ಇದ್ದೇವೆ. ಯಾರಮೇಲೂ ದಂಡೆತ್ತಿ ಹೋಗಲು ಶಾಂತಿಪ್ರಿಯ ಭಾರತ ಬಯಸದಿದ್ದರೂ, ನಮ್ಮ ತಂಟೆಗೆ ಯಾರೇ ಬಂದರೂ ಢಮಾರ್ ಮಾಡಿಬಿಡುವ ಸಾಮರ್ಥ್ಯ ನಮಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮ್ಮ ಸ್ವತಂತ್ರ ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತದೆ ಎಂದು ಬೊಬ್ಬೆ ಹೊಡೆಯುತ್ತೇವೆ. ಇದರಲ್ಲಿ ನಾವು 74ರ ಸ್ಥಾನದಲ್ಲಿದ್ದೇವೆ ಎಂಬುದಾಗಿ ಅಂತಾರಾಷ್ಟ್ರೀಯ ಸಂಸ್ಥೆ ಟ್ರಾನ್ಸ್ಫರೆನ್ಸಿ ಇಂಟರ್‌ನ್ಯಾಶನಲ್ ನಡೆಸಿದ ಸಮೀಕ್ಷೆ ಹೇಳಿದೆ. ಮೊನ್ನೆ ಲೋಕಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮಂಡಿಸಿದ್ದ ವಿಶ್ವಾಸಮತ ಗೊತ್ತುವಳಿಯ ವೇಳೆ, ನಾವೆಲ್ಲ ದೂರದರ್ಶನದ ಪರದೆಯನ್ನು ವೀಕ್ಷಿಸುತ್ತಾ ಇರುವಾಗಲೇ, ಇದ್ದಕ್ಕಿದ್ದಂತೆ ಹಣದ ಕಟ್ಟುಗಳನ್ನು ಸಂಸದರು ಝಳಪಿಸಲಾರಂಭಿಸದರು. ಒಂದು ಕ್ಷಣ ಏನಾಯಿತೆಂದು ತಿಳಿಯದೇ ಕಣ್ಣು ಪಿಳಿಪಿಳಿ ಮಾಡುತ್ತ ನೋಡುತ್ತಿರಬೇಕಿದ್ದರೆ, ಇದು ವಿಶ್ವಾಸಮತ ಗೊತ್ತುವಳಿ ಪರವಾಗಿ ಮತಚಲಾಯಿಸಲು ಬಿಜೆಪಿ ಸಂಸದರಿಗೆ ನೀಡಿದ್ದ ಆಮಿಷದ ಹಣ ಒಂದು ಕೋಟಿ ರೂಪಾಯಿ ಎಂಬುದು ತಿಳಿಯಿತು. ಯುಪಿಎ ಮೈತ್ರಿಕೂಟದ ಕುದುರೆ ವ್ಯಾಪಾರದ ಆರೋಪಕ್ಕೆ ಪುರಾವೆ ಕೇಳಿದ್ದಕ್ಕೆ ಪ್ರತಿಯಾಗಿ ಈ ರೀತಿಯಲ್ಲಿ ಸಾಕ್ಷ್ಯ ಒದಗಿಸಿದ್ದಂತೆ. ಆ ಒಂದು ಕ್ಷಣದಲ್ಲೇ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಕರಾಳ ಇತಿಹಾಸ ದಾಖಲಾಯಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒನ್ಸ್ ಎಗೇನ್, ಇದಕ್ಕೆಯಾರು ಕಾರಣ. ನಾವು ಎಂತಹವರಿಗೆ ಮತಹಾಕುತ್ತೇವೆ? ನಮಗೆ ನೆನಪಿನ ಶಕ್ತಿ ಕಮ್ಮಿ. ಆಡಳಿತದಲ್ಲಿದ್ದಾಗ ಮಾಡಿರುವ ಅನಾಚಾರ ದುರಾಚಾರಗಳನ್ನು ಬಹುಬೇಗ ಮರೆಯುತ್ತೇವೆ. ಬಿಡಿ. ಹೆಸರಿನ ಮುಂದೆ ಪದವಿಗಳನ್ನು ಪೇರಿಸಿಕೊಂಡಿರುವ ನಾವು ನಮ್ಮ ಪರಮೋಚ್ಚ ಹಕ್ಕನ್ನು ಚಲಾಯಿಸುತ್ತೇವೆಯೇ? ಚುನಾವಣೆ ವೇಳೆ ಮತದಾನಕ್ಕೆ ನಾವು ನಿಷ್ಠೆಯಿಂದ ತೆರಳುತ್ತೇವಾ? ಮತದಾನದಿಂದ ವಿಮುಖರಾಗುತ್ತಿರುವುದು, ಅನಕ್ಷರಸ್ಥರು, ಹಳ್ಳಿಗರು ಅಥವಾ ದೇಶದ ಬೆನ್ನೆಲುಬು ರೈತರಲ್ಲ. ಇತ್ತೀಚಿನ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತದಾನದ ಶೇಕಡಾವಾರು ಇತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ. ಆದರೆ, ಚುನಾಯಿತರ ಅಯೋಗ್ಯತೆಯನ್ನು ಮಾತ್ರ ತುಂಬ ಚೆನ್ನಾಗಿ, ರಸವತ್ತಾಗಿ ಬಣ್ಣಿಸುತ್ತೇವೆ! ಮತ್ತೆ ನಮ್ಮ ಸ್ವಾತಂತ್ರ್ಯ ದಮನಕ್ಕೀಡಾಗಿದೆ ಎಂದು ಸೇರಿಸಲೂ ಮರೆಯುವುದಿಲ್ಲ.</font><font  style='font-size:11pt; color:#000000'>ಬೇಡ. ನಮ್ಮ ಯಾವುದೇ ಕೆಲಸ ಸುಲಭವಾಗಿ ನೆರವೇರುತ್ತದೆ ಎಂದಾದರೆ ನೇರದಾರಿ ಬಿಟ್ಟು ಅಡ್ಡದಾರಿ ಹಿಡಿಯಲು ಮುಂದಾಗುತ್ತೇವೆ. ಯಾವುದಾದರೂ ಒಂದು ಪರವಾನಗಿಯೋ ಅಥವಾ ಇನ್ನಾವುದೋ ಕೆಲಸ ಆಗಬೇಕೆಂದಿದ್ದರೆ, ಹೇಗೆ ಪ್ರಭಾವ ಬೀರಬಹುದು, ಯಾವುದೇ ಕಷ್ಟವಿಲ್ಲದೆ ಇಲ್ಲದೆ ನಮ್ಮ ಕೆಲಸವನ್ನು ಹೇಗೆ ಮಾಡಿಕೊಳ್ಳೋಣ ಎಂಬ ಆಲೋಚನೆಯೇ ವಿಜೃಂಭಿಸುತ್ತದೆ. ನ್ಯಾಯಯುತ ದಾರಿಯಲ್ಲಿ ಸಾಗುವ ವ್ಯವಧಾನ - ತಾಳ್ಮೆ ನಮಗಿರುವುದಿಲ್ಲ. ಅಷ್ಟಲ್ಲದೆ, ನಮ್ಮ ಈ ಸಾಹಸವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಕೂಡ. ಮತ್ತು ಈ ಮೂಲಕ ಇತರರನ್ನು ಈ ದಾರಿಗಿಳಿಯುವಂತೆ ಪರೋಕ್ಷ ಪ್ರಚೋದನೆ ನೀಡುತ್ತೇವೆ. ಕೆಲಸ ಮಾಡಿ ಕೊಡಬೇಕಿರುವವರೂ ಇಂತಹ 'ಫಾಸ್ಟ್ ಟ್ರಾಕ್‌'ಗಳಿಗೆ ಒಗ್ಗಿಕೊಂಡಿರುವ ಕಾರಣ, ಯಾವುದೇ 'ಪ್ರಭಾವ' ಇಲ್ಲದೆ ನ್ಯಾಯೋಚಿತ ಹಾದಿಯಲ್ಲಿ ಸಾಗಿದವರ ಕೆಲಸವನ್ನು ಅಡಿಗೆ ಹಾಕಿ ಕುಳಿತುಕೊಳ್ಳುತ್ತಾರೆ.  ಆದರೆ, ಭ್ರಷ್ಟಾಚಾರದ ಹೆಮ್ಮರ ಬೆಳೆಯಲು ನೀರೆರೆಯುವ ನಾವು, ಟೀಕೆ ಮಾಡುವ ರಭಸದಲ್ಲಿ ಇದನ್ನೆಲ್ಲ ಮರೆತುಬಿಡುತ್ತೇವೆ. ಇಷ್ಟಕ್ಕೂ ನಮಗೆ ನಮ್ಮ ಕೆಲಸ ಸುಸುತ್ರವಾಗಿ ಸರಾಗವಾಗಿ ಆದರೆ ಸಾಕು ತಾನೆ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಯೋತ್ಪಾದನೆ ವಿಶ್ವ ಎದುರಿಸುತ್ತಿರುವ ಪಿಡುಗು. ಪ್ರಭಾವಶಾಲಿ ಭಾರತವೂ ಇದರಿಂದ ಹೊರತಾಗಿಲ್ಲ. ಸ್ವತಂತ್ರ ಭಾರತದ ಉದಾರವಾದಿ ಕಾನೂನು, 'ಭಾವನೆಗಳಿಗೆ ಲಭಿಸುವ' ಗೌರವ, ಮಾನವೀಯತೆ ಇಂತಹವುಗಳನ್ನು ಮಟ್ಟಹಾಕಲು ಅಡ್ಡಿಯಾಗುತ್ತದೆ. ಇದರಿಂದಾಗೇ, ಸಂಸತ್ ಭವನದ ಮೇಲೆ ದಾಳಿಮಾಡಿರುವ ಅಫ್ಜಲ್‌ಗುರುವಿನಂತಹವರ ವಿರುದ್ಧ ಕ್ರಮಕೈಗೊಳ್ಳಲೂ ಕಾನೂನು ತೊಡಕು ಅಡ್ಡಿಯಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದಂತಹ ಅತಿ ವಿಶಾಲವಾದ, ಜಾತ್ಯತೀತ, ಪ್ರಜಾತಂತ್ರದ ನೆಲೆಗಟ್ಟಿನ, ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರದಲ್ಲಿ ಯೋಜನೆಯೊಂದು ರಾತ್ರಿಬೆಳಗಾಗುವುದರೊಳಗೆ ಅನುಷ್ಠಾನ ಆಗಬೇಕೆಂದರೆ ಕಷ್ಟಸಾಧ್ಯ. ಚಿಕ್ಕಪುಟ್ಟ ರಾಷ್ಟ್ರಗಳಲ್ಲಿ ನಮ್ಮಲ್ಲಿರುವಂತಹ ಅಡ್ಡಿ ಆತಂಕಗಳು ಇರುವುದಿಲ್ಲ. ಸರಕಾರ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ವಿರೋಧ ಪಕ್ಷಗಳು(ಅವುಗಳ ಹೆಸರಿನಂತೆ!) ವಿರೋಧಿಸುತ್ತವೆ. (ಇಲ್ಲವಾದರೆ ಎನ್‌ಜಿಒಗಳು ವಿರೋಧಿಸುತ್ತವೆ) ಕಾರ್ಯಕ್ರಮ ನನೆಗುದಿಗೆ ಬೀಳುತ್ತದೆ.  (ಕಾನೂನು ನಿರ್ಮಾಪಕರ ಭತ್ಯೆ ಅಥವಾ ಇತರ ಸವಲುತ್ತುಗಳು ಮಾತ್ರ ಇದಕ್ಕೆ ಅಪವಾದ) ಬಳಿಕ ವಿರೋಧ ಪಕ್ಷವಾಗಿದ್ದವರು ಅಧಿಕಾರಕ್ಕೆ ಬರುತ್ತಾರೆ. ಆ ಕಾರ್ಯಕ್ರಮಕ್ಕೆ ಬೇರೆಹೆಸರಿಟ್ಟೋ ಇಲ್ಲ ಒಂದಿಷ್ಟು ಬದಲಾವಣೆಯೊಂದಿಗೆ ಆ ಕಾರ್ಯಕ್ರಮವನ್ನು ಜಾರಿಗೆ ತರಲು ಪ್ರಯತ್ನಿಸುತ್ತಾರೆ. ಆಗ, ಈ ಹಿಂದೆ ಅಧಿಕಾರದಲ್ಲಿದ್ದು, ಪ್ರಸ್ತುತ ವಿರೋಧ ಪಕ್ಷಗಳ ಸ್ಥಾನದಲ್ಲಿರುವವರು ವಿರೋಧಿಸುತ್ತಾರೆ. ಏನಿಲ್ಲವಾದರೆ ಒಂದೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಾದರೂ ಸಲ್ಲಿಸಲ್ಪಡುತ್ತವೆ. ಪ್ರಕರಣ ನ್ಯಾಯಾಲಯಕ್ಕೆ ತೆರಳುತ್ತದೆ. ತನಿಖೆಗೆ ಸಮಿತಿಯ ನೇಮಕವಾಗುತ್ತದೆ. ಸಮಿತಿಯು ವರದಿ ಸಲ್ಲಿಕೆಗೆ ಸಮಯಾವಕಾಶ ಕೋರುತ್ತದೆ. ಇವುಗಳನ್ನೆಲ್ಲ ಸಂಭಾಳಿಸಿಕೊಂಡು ಒಂದು ಕಾರ್ಯ ಅನುಷ್ಠಾನಕ್ಕೆ ಬರಬೇಕಾದರೆ ಅದಕ್ಕೆ ಅದರದ್ದೇ ಆದ ಸಮಯ ಹಿಡಿಯುವುದಿಲ್ಲವೇ?</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/13/images/img1080813048_3_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಜನರಿಂದ ತುಂಬಿಹೋಗಿರುವ, ಪ್ರಸ್ತುತ 110 ಕೋಟಿ ದಾಟಿರುವ ಜನಸಂಖ್ಯೆಯ ಈ ನಮ್ಮ ಬೃಹತ್ ನಾಡಿನಲ್ಲಿ ವಿಶ್ವಮಟ್ಟದ ಕ್ರೀಡಾಕೂಟ ಒಲಿಂಪಿಕ್ಸ್‌ನಲ್ಲಿ ಒಂದೇ ಒಂದು ಚಿನ್ನ ಪಡೆಯುವ ಯೋಗ್ಯತೆ ಇಲ್ಲ ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಿದ್ದೆವು. ಹೇ... ಭಾರತಕ್ಕೆ ಪದಕ, ಚಿನ್ನ - ನಿಮಗೆಲ್ಲೂ ಭ್ರಾಂತು ಎಂಬ ಹೀಗಳಿಕೆಯ ಮಾತುಗಳು ಕೇಳಿಬರುತ್ತಿದ್ದೆವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ, ಆಗಸ್ಟ್ 11ರ ಸೋಮವಾರದಂದು ಏನಾಯಿತು? ಅಭಿನವ್ ಬಿಂದ್ರಾ ರೂಪದಲ್ಲಿ ಭಾರತಕ್ಕೆ ಚಿನ್ನ ಬರಲಿಲ್ಲವೇ? 10 ಮೀಟರ್ ಏರ್ ರೈಫಲ್ ಶೂಟಿಂಗ್‌ನ ವೈಯಕ್ತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು 108 ವರ್ಷಗಳ ಚಿನ್ನದ ಪದಕದ ಬರ ನೀಗಲಿಲ್ಲವೇ? ಒಡನೆಯೇ 'ಮೇರಾ ಭಾರತ್ ಮಹಾನ್' ಎಂಬ ಎಸ್ಎಂಎಸ್‌ಗಳು ಹರಿದಾಡಲಿಲ್ಲವೇ? ವ್ಯವಸ್ಥೆ ಯಾವುದೇ ರೀತಿಯಲ್ಲಿ ಗಬ್ಬೆದ್ದು ಹೋದರೂ, ಪ್ರತಿಭೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಇದಕ್ಕೆ ಸಾಕ್ಷಿ. ಸೋಮವಾರ ಅಭಿನವ್ ಫೈನಲ್ ಪ್ರವೇಶಿಸುವ ತನಕವೂ ಅವರು ಹೆಸರು ಅಷ್ಟೊಂದು ಕೇಳಿಬರುತ್ತಿರಲಿಲ್ಲ. ರಾಜವರ್ಧನ್ ರಾಥೋಡ್ ಮತ್ತು ಸಾನಿಯಾ ಹೆಸರುಗಳ ನಡುವೆ ಮರೆಯಾಗಿತ್ತು. ಅಭಿವೃದ್ಧಿ, ಯಶಸ್ಸು, ಸಾಧನೆಗಳಿಗೆ ತಾಳ್ಮೆ - ವ್ಯವಧಾನಗಳು ಬೇಕೆಂಬ ಮೂಲ ಅಂಶವನ್ನೇ ಮರೆತುಬಿಡುತ್ತೇವೆ ನಾವು!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೂಲಸೌಕರ್ಯಗಳ ಬಗ್ಗೆ ಮಾತನಾಡುತ್ತಾ ವಿದೇಶಗಳಲ್ಲಿರುವ ಸವಲತ್ತುಗಳನ್ನು ಬೆಟ್ಟು ಮಾಡುತ್ತೇವೆ. ಒಂದಿಪ್ಪತ್ತು ವರ್ಷಗಳ ಹಿಂದೆ ಸಾರಿಗೆ ಸೌಲಭ್ಯವೇ ಇಲ್ಲದಂತಹ ಊರುಗಳೂ ಇಂದು ರಸ್ತೆ, ವಿದ್ಯುತ್, ನೀರು ಮುಂತಾದ ಸೌಲಭ್ಯಗಳನ್ನು ಖಂಡಿತಾ ಪಡೆದಿವೆ. ಆದರೆ ಸರಕಾರದ ಆಸ್ತಿ ಎಂದರೆ ಅದನ್ನು ನಾವು ಜೋಪಾನ ಮಾಡುತ್ತೇವಾ? ಬೀದಿ ದೀಪಕಂಡರೆ ಕಲ್ಲುಹೊಡೆಯುತ್ತೇವೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ್ಗೆ ಎರಡ್ಮೂರು ವರ್ಷಗಳ ಹಿಂದೆ ನಾನು ಮಂಗಳೂರಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂದು ದಿನ ಆಫೀಸಿಗೆ ಹೋಗುತ್ತಿರಬೇಕಿದ್ದರೆ ಮುಂಜಾನೆ ಸುಮಾರು 9 ಗಂಟೆಯ ಹೊತ್ತಿಗೆ ಕೂಳೂರು ಎಂಬಲ್ಲಿಂದ ಉರ್ವಾಸ್ಟೋರ್ ತನಕ ಎಲ್ಲ ಬೀದಿದೀಪಗಳು ಉರಿಯುತ್ತಿತ್ತು. ಛೇ ಎಷ್ಟೊಂದು ವಿದ್ಯುತ್ ಪೋಲಾಗುತ್ತಿದೆ ಎಂದೆನಿಸಿದ ನಾನು ಮೆಸ್ಕಾಂಗೆ ಪೋನ್ ಮಾಡಿ ಈಗಲೂ ಬೀದಿದೀಪಗಳು ಉರಿಯುತ್ತಿವೆ ಎಂಬ ದೂರು ಕೊಟ್ಟೆ. ಅಲ್ಲಿಂದ ಬಂದ ಉತ್ತರ ಕೇಳಿ ದಂಗಾಗಿ ಹೋದೆ. "ಬೀದಿ ದೀಪ ಕಾರ್ಪೋರೇಶನ್‌ಗೆ ಸಂಬಂಧ ಪಟ್ಟದ್ದು, ನೀವು 'ಬೇಕಿದ್ದರೆ' ಅಲ್ಲಿಗೆ ಪೋನ್ ಮಾಡಿ, ನಮಗೂ ಅದಕ್ಕೂ ಸಂಬಂಧವಿಲ್ಲ!" ನಗರಪಾಲಿಕೆಗೆ ಪೋನ್‌ಮಾಡಿದರೆ, ಅದು ನಮ್ಮ ವಿಭಾಗವಲ್ಲ ಇನ್ನೊಂದು ವಿಭಾಗ ಎಂಬ ಉತ್ತರ ಬಂತು. ಯಾಕೆ ನಿಮಗೆ ಈ ವಿಷಯವನ್ನು ಸಂವಹಿಸಲು ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉಡಾಫೆಯ ಉತ್ತರ. ಇಂತಹವರಲ್ಲಿ ಯಾವಾಗ ಈ ಪ್ರಜ್ಞೆ ಹುಟ್ಟಿಕೊಳ್ಳುತ್ತದೆ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಸ್‌ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಛೀ....ಛೀ.. ಎಷ್ಟೊಂದು ಗಲೀಜು ಎಂದು ಮೂಗು ಮುರಿಯುತ್ತ ನಮ್ಮ ಮಕ್ಕಳನ್ನು ಅಲ್ಲೇ ಉಚ್ಚೆಹೊಯ್ಯಲು ಬಿಡುತ್ತೇವೆ. ಅಯ್ಯಯ್ಯೋ ವಾಸನೆಯೇ ಅನ್ನುತ್ತಾ ಅಲ್ಲೇ ಪಿಚಕ್ಕನೆ ಉಗುಳಿ ಆ ಗಲೀಜಿಗೆ ನಮ್ಮದೂ ಕಿರುಕಾಣಿಕೆ ಸಲ್ಲಿಸಿ, 'ಸಾರ್ವಜನಿಕರಿಗೆ' ನಾಗರಿಕ ಪ್ರಜ್ಞೆಯೇ ಇಲ್ಲ ಎಂಬ ಬೇಸರ ವ್ಯಕ್ತಪಡಿಸುತ್ತೇವೆ. ಬದಲಾವಣೆ ಆಕಾಶದಿಂದ ಇಳಿದು ಬರಬೇಕು ಎಂದು ಬಯಸುವ ನಾವು, ಇದು ನಮ್ಮಿಂದಲೇ ಯಾಕೆ ಆರಂಭವಾಗಬಾರದು ಎಂಬ ರೀತಿಯ ಚಿಂತನೆಗೆ ನಮ್ಮನ್ನು ಹಚ್ಚಿಕೊಳ್ಳುವುದಿಲ್ಲ.</font><br/><!--begin inline--><!--@@StartRightBlock@@--><p class="innerBlock_Right"><table id="inlinebox" width="200" height="68" border="0" cellpadding="0" cellspacing="0" class="boxBdr"><tr><td><table width="100%" cellpadding="0" cellspacing="0" border="0"><tr><td class="padding"><span></span></td></tr></table></td></tr><tr><td class="padding"><table width="100%" cellpadding="0" cellspacing="0" border="0" class="kreative"><tr><td width="52%" align="left" class="innerBlock_Text"><span class='imgQuadLeft'>  </span><!--BD-->ಉಡಾಫೆ ಅಥವಾ ಉದ್ಧಟತನ ನಿರ್ಭಿಡೆಯಾ? ಸ್ವೇಚ್ಚೆಯೇ ಸ್ವಾತಂತ್ರ್ಯವಾ<!--ED--><span class='imgQuadRight'>      </span></td></tr></table></td></tr><tr><td class="padding"><table width="100%" border="0" cellspacing="0" cellpadding="0"><tr><td class='QuadFooterColor'><!--BF--><!--EF--></td></tr></table></td></tr></table></p><!--@@EndRightBlock@@--><!--end inline--> <font  style='font-size:11pt; color:#000000'></font><br/><font  style='font-size:11pt; color:#000000'>ಇನ್ನೂ ಕೆಲವೆಡೆ ವೈಯಕ್ತಿಕ ಸ್ವಾತಂತ್ರ್ಯ ಹರಣದ ಬೊಬ್ಬೆಗಳು ಕೇಳುತ್ತಿವೆ. ಉಡಾಫೆ ಅಥವಾ ಉದ್ಧಟತನದ ವರ್ತನೆಯನ್ನು ನಿರ್ಬಿಢೆ ಅಥವಾ ಸುಧಾರಣೆ ಎಂದುಕೊಳ್ಳುತ್ತೇವೆ. ನಾವು ಸಾಗುತ್ತಿರುವ ಹಾದಿ ಸೂಕ್ತವಾದುದೇ ಎಂಬತ್ತ ಗಮನ ಹರಿಸದೆ, ಸ್ವೇಚ್ಛೆಯಿಂದ ವರ್ತಿಸುತ್ತಾ, ಇತರರ ತೇಜೋವಧೆ ಮಾಡುತ್ತಾ, ಬಾಯಿಗೆ ಬಂದಂತೆ ಅರುಹುತ್ತಾ ನಮ್ಮ ತಲೆಮೇಲೆಯೇ ಚಪ್ಪಡಿ ಎಳೆದುಕೊಳ್ಳುತ್ತಾ, ನಮಗಿರುವ ನೈಜ ಸ್ವಾತಂತ್ರ್ಯವನ್ನು ನಾವೇ ತುಳಿದುಕೊಳ್ಳುತ್ತೇವೆ. ಸ್ವೇಚ್ಚಾಚಾರ ಅಥವಾ ಉದ್ಧಟತನಗಳು ಕ್ರಾಂತಿಯಾಗುತ್ತದಾ? ಇಲ್ಲ ಇದುವೇ ಸ್ವಾತಂತ್ರ್ಯವೇ? ತಮ್ಮ ದೌರ್ಬಲ್ಯಗಳನ್ನು ಮುಚ್ಚಿಡುತ್ತೇವೆ. ಇದನ್ನು ಮರೆಮಾಚಲು ದಬ್ಬಾಳಿಕೆ, ಶೋಷಣೆ ಮುಂತಾದ ಶಬ್ದಗಳ ಮೂಲಕ ನಮ್ಮ ಮಾತನ್ನು ಅಲಂಕರಿಸುತ್ತೇವೆ. ನಮ್ಮ ಮೇಲೆ ಸ್ವಯಂಮರುಕ ಸೂಚಿಸಿಕೊಳ್ಳುತ್ತಾ ಇತರರಿಂದ 'ಅಯ್ಯೋ ಪಾಪ' ಗಿಟ್ಟಿಸುವ ಪ್ರಯತ್ನ ಮಾಡುತ್ತೇವೆ.</font><br/><font  style='font-size:11pt; color:#000000'></font><br/>"<font  style='font-size:11pt; color:#000000'>No man looses his freedom except through his own weakness" </font><font style='font-size:11pt;'>ತನ್ನದೇ ದೌರ್ಬಲ್ಯದ ಹೊರತಾಗಿ ಯಾವುದೇ ವ್ಯಕ್ತಿ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುವುದಿಲ್</font><font style='font-size:11pt;'>ಲ - </font><font style='font-size:11pt;'>ಇದು ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಹಾತ್ಮ ಗಾಂಧೀಜಿಯವರು ಹೇಳಿರುವ ಮಾತು.</font>]]></content:encoded>
      <pubDate>Sat, 08 Aug 2009 17:20:16 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಚಂದ್ರಾವತಿ ಬಡ್ಡಡ್ಕ</authorname>
    </item>
    <item>
      <title><![CDATA[ಮಡಿವಂತ ರಾಷ್ಟ್ರದಲ್ಲಿ ಸ್ವಾತಂತ್ರ್ಯದ ವಿಭಿನ್ನ ಮುಖ]]></title>
      <link>https://kannada.webdunia.com/article/independence-day-article/ಮಡಿವಂತ-ರಾಷ್ಟ್ರದಲ್ಲಿ-ಸ್ವಾತಂತ್ರ್ಯದ-ವಿಭಿನ್ನ-ಮುಖ-109080800041_1.htm</link>
      <guid>https://kannada.webdunia.com/article/independence-day-article/ಮಡಿವಂತ-ರಾಷ್ಟ್ರದಲ್ಲಿ-ಸ್ವಾತಂತ್ರ್ಯದ-ವಿಭಿನ್ನ-ಮುಖ-109080800041_1.htm</guid>
      <media:thumbnail url="http:"/>
      <image>http:</image>
      <description><![CDATA[ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ಈ ಸ್ವಾತಂತ್ರ್ಯೋತ್ಸವಕ್ಕೂ ವ್ಯತ್ಯಾಸವಿದೆ. ಏಕೆಂದರೆ ಈ ವರ್ಷ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಮೂಲೆಗುಂಪಾಗಿದ್ದ, ತುಚ್ಛವಾಗಿ ಪರಿಗಣಿಸಲ್ಪಟ್ಟಿದ್ದ ಪಂಗಡವೊಂದಕ್ಕೆ ವಿಶೇಷ ಸ್ವಾತಂತ್ರ್ಯ ದೊರಕಿದೆ. ಹೌದು, ನಾನು ಮಾತನಾಡುತ್ತಿರುವುದು ಸಲಿಂಗಕಾಮಿಗಳ ಬಗ್ಗೆ. ...]]></description>
      <content:encoded><![CDATA['<font  style='font-size:11pt; color:#0000FF'><b>ಪ್ರೀತಿ'</b></font><br/><font  style='font-size:11pt; color:#000000'><b></b></font><br/><font  style='font-size:11pt; color:#000000'>ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ಈ ಸ್ವಾತಂತ್ರ್ಯೋತ್ಸವಕ್ಕೂ ವ್ಯತ್ಯಾಸವಿದೆ. ಏಕೆಂದರೆ ಈ ವರ್ಷ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಮೂಲೆಗುಂಪಾಗಿದ್ದ, ತುಚ್ಛವಾಗಿ ಪರಿಗಣಿಸಲ್ಪಟ್ಟಿದ್ದ ಪಂಗಡವೊಂದಕ್ಕೆ ವಿಶೇಷ ಸ್ವಾತಂತ್ರ್ಯ ದೊರಕಿದೆ. ಹೌದು, ನಾನು ಮಾತನಾಡುತ್ತಿರುವುದು ಸಲಿಂಗಕಾಮಿಗಳ ಬಗ್ಗೆ. ಭಾರತದಲ್ಲಿನ ಸಲಿಂಗಿಗಳು ಇಷ್ಟು ಕಾಲ ತಮ್ಮ ಉತ್ತಮ, ಸಮಾನವಾದ ಗೌರವಯುತ ಬದುಕಿಗಾಗಿ ಮಾಡಿದ ಹೋರಾಟಕ್ಕೆ ಅಂತಿಮವಾಗಿ ನ್ಯಾಯ ದೊರಕಿದೆ. ಇದು ಒಂದರ್ಥದಲ್ಲಿ ಅವರಿಗೆ ಸಿಕ್ಕ ಸ್ವಾತಂತ್ರ್ಯವೆಂದರೂ ತಪ್ಪಲ್ಲ. ಸಮ್ಮತ ಸಲಿಂಗಕಾಮ ಅಪರಾಧವೇನಲ್ಲ ಎಂಬ ತೀರ್ಪು ಸಾವಿರಾರು ಸಲಿಂಗಕಾಮಿಗಳ ಮುಖದಲ್ಲಿ ಸಂತಸ ಮೂಡಿಸಿದ್ದು, ಸಲಿಂಗ ವಿವಾಹಕ್ಕೂ ಕಾನೂನು ಮಾನ್ಯತೆ ದೊರೆತಂತಾಗಿದೆ. ಸುಮಾರು ಶತಮಾನಗಳಿಂದ  ಭಾರತ ದೇಶದಲ್ಲಿ ಸಮಾಜದಿಂದ ದೂರವಿಟ್ಟಿದ್ದನ್ನು ಇದೀಗ ಸ್ವೀಕರಿಸಬೇಕಾಗಿ ಬಂದಿದೆ. ಆದ್ದರಿಂದ ಈ ವರ್ಷಕ್ಕೆ ಭಾರತದಲ್ಲಿ "ಸ್ವಾತಂತ್ರ್ಯ" ಎಂಬ ಪದಕ್ಕೆ ಉದಾಹರಣೆ ಕೊಡಬೇಕೆಂದಿದ್ದರೆ ಇದನ್ನೇ ಸ್ವೀಕರಿಸಬಹುದು.<!--Image--><p class="wdp_articleRImg"><p><img src='/kn/articles/0908/08/images/img1090808041_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದಂತಹ ರಾಷ್ಟ್ರದಲ್ಲಿ ಸಮಾಜ ಸಲಿಂಗಕಾಮವನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವದ ವಿಷಯವಲ್ಲ. ಆದ್ದರಿಂದ ಇಲ್ಲಿಯವರೆಗೂ ಸಲಿಂಗಿಗಳು ಬಹಿಷ್ಕೃತರಾಗಿಯೇ ಜೀವನ ಸಾಗಿಸಿದ್ದರು. ವೈದ್ಯಕೀಯದ ಪ್ರಕಾರ ಸಲಿಂಗಿಗಳ ನಡವಳಿಕೆ ಸಾಮಾನ್ಯರಿಗಿಂತ ಭಿನ್ನವಾಗಿರುತ್ತದೆ ಎಂದೇನೂ ಇಲ್ಲದಿದ್ದರೂ ಲೈಂಗಿಕ ಭಾವನೆಯಲ್ಲಿ ಮಾತ್ರ ಅವರು ಉಳಿದವರಿಗಿಂತ ಭಿನ್ನವಾಗಿರುತ್ತಾರೆ. ಹಾಗೆಯೇ ಇದಕ್ಕೆ ಪೂರಕವಾಗಿ 1992 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಲಿಂಗಕಾಮವನ್ನು ಮಾನಸಿಕ ಕಾಯಿಲೆ ಎಂಬ ಗುಂಪಿನಿಂದ ತೆಗೆದುಹಾಕಿತು. ಆದರೂ ಸಲಿಂಗಕಾಮಿಗಳಿಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದು ಸ್ವೀಡನ್, ಬ್ರಿಟನ್, ನೆದರ್ಲ್ಯಾಂಡ್, ಅಮೇರಿಕದಂತಹ ಕೆಲವು ದೇಶಗಳು ಮಾತ್ರ. ಗಮನಿಸಬೇಕಾದ ಅಂಶವೆಂದರೆ ವಿಶ್ವಸಂಸ್ಥೆಯ ನೋಂದಾಯಿತ 192 ರಾಷ್ಟ್ರಗಳ ಗುಂಪಿನಲ್ಲಿ 87 ದೇಶಗಳಲ್ಲಿ ವಯಸ್ಕರ ನಡುವಿನ ಸಲಿಂಗಕಾಮವನ್ನು ಇಂದೂ ಸಹ ಕ್ರಿಮಿನಲ್ ಕೇಸೆಂದು ಪರಿಗಣಿಸಲಾಗುತ್ತದೆ.<!--Image--><p class="wdp_articleLImg"><p><img src='/kn/articles/0908/08/images/img1090808041_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದ್ದರಿಂದ ಈ ಮೇಲಿನ ವಿಷಯಗಳನ್ನೆಲ್ಲಾ ಗಮನಿಸಿದಾಗ ಸಮಾಜ ಮತ್ತು ಕಾನೂನಿನ ಹೆದರಿಕೆಗೆ ಅಂಜಿ ಸಲಿಂಗಕಾಮಿಗಳು ತಮ್ಮ ಸ್ಥಿತಿಯನ್ನು ಹೇಳಿಕೊಳ್ಳಲು ಹಿಂಜರಿಯಬೇಕಾದ ಪರಿಸ್ಥಿತಿ ಇಲ್ಲಿಯವರೆಗೆ ಇತ್ತು. ಈ ಜೊತೆಗೆ ಅವನ ಅಥವಾ ಅವಳ ಕುಟುಂಬದ ಸದಸ್ಯರ ವಾತ್ಯಲ್ಯದಿಂದಲೂ ಅವರು ವಂಚಿತರಾಗಿದ್ದರು. ಮೊದಲೇ ಭಾರತದಂತಹ ರಾಷ್ಟ್ರ ಜಾತಿ-ಧರ್ಮಗಳ ಸಂಕೀರ್ಣತೆಯಲ್ಲಿ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ಭಾರತದ ಜೀವನ ಶೈಲಿಗೆ ಈಗಿನ ಕೊಡುಗೆಯಾದ ಸಲಿಂಗಕಾಮವನ್ನು ಸಮಾಜ ಒಪ್ಪುವ ಸ್ಥಿತಿಯಲ್ಲಿಯೂ ಇರಲಿಲ್ಲ ಮತ್ತು ಈಗಲೂ ಸಂಪೂರ್ಣವಾಗಿ ಇಲ್ಲ. ಜೊತೆಗೆ ಇದೊಂದು ಅನೈಸರ್ಗಿಕ ಚಟುವಟಿಕೆಯಾಗಿದ್ದು ಇದರಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ನಾಶವಾಗಲಿದೆ ಎಂಬ ಮಾತು ಬೇರೆ. ಇವೆಲ್ಲಾ ಕೂಗುಗಳ ನಡುವೆ ಸಲಿಂಗಿಗಳು ಸಮಾಜದಲ್ಲಿ ಮುಖ ಎತ್ತಿ ನಡೆದಾಡುವ ಮಾತೇ ಇರಲಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದ್ದರಿಂದ ತಮ್ಮ ಉತ್ತಮ, ಗೌರವಯುತ ಬದುಕಿಗಾಗಿ ಇಲ್ಲಿಯವರೆಗೂ ಹೋರಾಟ ಮಾಡುತ್ತಿದ್ದ ಸಲಿಂಗಿಗಳಿಗೆ ಕೊನೆಗೂ ಜಯ ಸಿಕ್ಕಿದೆ. ಜಯಕ್ಕಿಂತ ಒಂದರ್ಥದಲ್ಲಿ ಸ್ವಾತಂತ್ರ್ಯ ದೊರಕಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ವಯಸ್ಕರು ನಡೆಸುವ ಸಲಿಂಗಕಾಮ ಅಪರಾಧವಲ್ಲ ಎನ್ನುವ ದೆಹಲಿ ಹೈಕೋರ್ಟ್ ತೀರ್ಪು ಸಲಿಂಗಿಗಳಲ್ಲಿ ಆಶಾಭಾವನೆಯ ಮೂಡಿಸಿರುವುದರ ಜೊತೆಗೆ ಸಮಾಜದಲ್ಲಿ ಅವರಿಗೂ ಇದೀಗ ಮಾನ್ಯತೆ ಸಿಕ್ಕಿದೆ. ಸಲಿಂಗಕಾಮಕ್ಕೆ ಮಾನ್ಯತೆ ನೀಡುವುದು ನೈತಿಕತೆ ಮತ್ತು ಧಾರ್ಮಿಕ ಆಚರಣೆಗಳ ಮೇಲಿನ ದಾಳಿ ಎನ್ನುವುದಲ್ಲದೇ ಇನ್ನೂ ಹಲವಾರು ಆರೋಪ ಪ್ರತ್ಯಾರೋಪಗಳು ನಡೆದೇ ಇದ್ದರೂ, ಶತಮಾನಗಳಿಂದ ಬಹಿಷ್ಕಾರಕ್ಕೊಳಗಾಗಿದ್ದ ಸಮಾಜದ ಒಂದು ಪಂಗಡಕ್ಕೆ ಮಾನ್ಯತೆ ಸಿಕ್ಕಿರುವುದು ಒಂದರ್ಥದಲ್ಲಿ ಈ ಬಾರಿ ಸ್ವಾತಂತ್ರ್ಯ ಎಂಬ ಪದಕ್ಕೆ ನಿಜವಾಗಿಯೂ ಅನ್ವರ್ಥಕವಾಗಿದೆ.</font><br/></font>]]></content:encoded>
      <pubDate>Sat, 08 Aug 2009 15:24:47 +0530</pubDate>
      <updatedDate>Tue, 15 Apr 2014 13:45:26 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮುಂದಿನ ವರ್ಷದ ಸ್ವಾತಂತ್ರ್ಯ ಭರವಸೆ ನನಗಿಲ್ಲ..!]]></title>
      <link>https://kannada.webdunia.com/article/independence-day-article/ಮುಂದಿನ-ವರ್ಷದ-ಸ್ವಾತಂತ್ರ್ಯ-ಭರವಸೆ-ನನಗಿಲ್ಲ-109080800043_1.htm</link>
      <guid>https://kannada.webdunia.com/article/independence-day-article/ಮುಂದಿನ-ವರ್ಷದ-ಸ್ವಾತಂತ್ರ್ಯ-ಭರವಸೆ-ನನಗಿಲ್ಲ-109080800043_1.htm</guid>
      <media:thumbnail url="http:"/>
      <image>http:</image>
      <description><![CDATA[ಹೀಗೆ ಕೂತರೆ ಹಲವಾರು ಯೋಚನೆಗಳು ತಲೆ ತಿನ್ನುತ್ತವೆ. ಹಲವರು ಹೆಂಡತಿ ಬಂದ ಮೇಲೆ ನೆಟ್ಟಗಾಗಿದ್ದನ್ನು, ಇನ್ನು ಕೆಲವರು ಸೊಟ್ಟಗಾಗಿದ್ದನ್ನು ನೋಡಿದ್ದೇನೆ. ನನಗದರಲ್ಲಿ ಯಾವುದು ಕಾದಿದೆ ಅಂತ ಹಲವು ಬಾರಿ ಯೋಚಿಸಿದ್ದಿದೆ. ಇದನ್ನು ಆತಂಕಗಳು ಎಂದು ಬೇಕಾದರೂ ಕರೆಯಿರಿ.

ಹತ್ತಿರದ ಗೆಳೆಯ ರಾಜೇಶ್‌ನನ್ನು ನೋಡಿದ ...]]></description>
      <content:encoded><![CDATA[<font  style='font-size:11pt; color:#0000FF'><b>ಭುವನ್ ಪುದುವೆಟ್ಟು</font><font style=' color:#000000;'></b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಕೂತರೆ ಹಲವಾರು ಯೋಚನೆಗಳು ತಲೆ ತಿನ್ನುತ್ತವೆ. ಹಲವರು ಹೆಂಡತಿ ಬಂದ ಮೇಲೆ ನೆಟ್ಟಗಾಗಿದ್ದನ್ನು, ಇನ್ನು ಕೆಲವರು ಸೊಟ್ಟಗಾಗಿದ್ದನ್ನು ನೋಡಿದ್ದೇನೆ. ನನಗದರಲ್ಲಿ ಯಾವುದು ಕಾದಿದೆ ಅಂತ ಹಲವು ಬಾರಿ ಯೋಚಿಸಿದ್ದಿದೆ. ಇದನ್ನು ಆತಂಕಗಳು ಎಂದು ಬೇಕಾದರೂ ಕರೆಯಿರಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹತ್ತಿರದ ಗೆಳೆಯ ರಾಜೇಶ್‌ನನ್ನು ನೋಡಿದ ಮೇಲಂತೂ ಮದುವೆಯಾದ ಮೇಲೆ ಜೀವನದ ರೀತಿ-ನೀತಿಗಳು ಬದಲಾಗುತ್ತವೆ ಎಂಬುದನ್ನು ಅರಿತುಕೊಂಡಿದ್ದೇನೆ. ಅವರು ನಮ್ಮ ಕಣ್ಣ ಮುಂದೇನೇ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು. ಅಂದ್ರೆ, ಮೊದಲೆಲ್ಲ ಗೆಳೆಯರ ಜತೆ ಸಿನಿಮಾಕ್ಕೆ ಅಥವಾ ಇನ್ನೆಲ್ಲೋ ಟೊಂಕ ಕಟ್ಟಿ ಬರೋರು. ಮದುವೆ-ಮಕ್ಕಳಾದ ಮೇಲೆ ಆಫೀಸ್ ಬಿಟ್ರೆ ಮನೆ, ಮನೆ ಬಿಟ್ರೆ ಆಫೀಸು. ಹೆಂಡತಿ-ಮಕ್ಕಳನ್ನು ಬಿಟ್ಟು ಬರಕ್ಕಾಗಲ್ಲ ಅನ್ನೋದೇ ಅವರ ಕಂಪ್ಲೇಂಟು.<!--Image--><p class="wdp_articleRImg"><p><img src='/kn/articles/0908/08/images/img1090808043_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಹುಶಃ ಇದು ಬಹುತೇಕ ವಿವಾಹಿತರಿಗೆ ಬಾಧಿಸೋ ಕಾಯಿಲೆ (ಮಹಿಳಾವಾದಿಗಳಿಂದ ಕ್ಷಮೆಯಿರಲಿ) ಅಂದ್ಕೋತೀನಿ. ಆಕೇನ ಬಿಟ್ಟು ಕಚೇರಿಯವರ ಜತೆ ಹೋದ್ರೆ ಅವಳನ್ನು ಬಿಟ್ಟು ಹೋದ ಬೇಸರಕ್ಕಿಂತಲೂ ಆ ಟೀಮಲ್ಲಿ ಇನ್ನೂ ಯಾರ‌್ಯಾರು ಇದ್ರು ಅನ್ನೋದೇ ಮಹತ್ವದ ಪ್ರಶ್ನೆಯಾಗಿರುತ್ತೆ. ಆ ಪರಿಯ ಪ್ರೀತಿನೂ ಖುಷಿ ಕೊಡಬಹುದು ಎಂದೆಲ್ಲ ಅಂದ್ಕೊಳ್ಳೋದೂ ಇದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರೀತಿ ಅಂದ್ರೆ ಹಾಗೆಲ್ಲ ಇರೋದು ಮಾಮೂಲಿ ಅಂತಂದ್ಕಂಡ್ರೂ ಈಗಿರುವಂತೆ ಎಲ್ಲವೂ ಮಾಮೂಲಿಯಾಗಿರದು ಎಂಬುವುದು ದಿಟ. ಈ ಮೊಬೈಲ್ ಬಂದ ಮೇಲಂತೂ ಕರೆನ್ಸಿ ಹೇಗೆ ಖಾಲಿಯಾಗುತ್ತಂತಾನೇ ಗೊತ್ತಾಗಲ್ಲ. ಬರೀ ಮಾತು, ಮಾತು, ಮಾತು ಅಷ್ಟೇ. ಸುಮ್ನೆ ಮಾತಾಡೋಣ ಅನ್ಸತ್ತೆ. ಅದ್ಕೆಲ್ಲ ಹೆಂಡ್ತಿ ಬಿಡ್ತಾಳಾ? ಹೆದ್ರಿಕೆ ಆಗ್ತಿದೆ ಕಣ್ರೀ...</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾತ್ರಿಯೆಲ್ಲ ನಿದ್ರೆನೇ ಬರಲ್ಲ. ಹಾಳು-ಮೂಳು ತಿಂದ್ಕೊಂಡು ಇಲ್ಲದ ಹ್ಯಾಬಿಟ್‌ಗಳನ್ನು ಮುಗಿಸಿ ಕಣ್ಮುಚ್ಚುವಾಗ ರಾತ್ರಿ ಹನ್ನೆರಡಾಗುತ್ತೆ. ಯಾರ‌್ಯಾರಿಗೋ ಮೆಸೇಜ್ ಕಳ್ಸೋದು ಮುಂತಾದುವು ಮಾಮೂಲಿ ಬಿಡಿ. ಇದಕ್ಕೆಲ್ಲ ಖಂಡಿತಾ ಅವಳು ಬ್ರೇಕ್ ಹಾಕೇ ಹಾಕ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಏನೋ.. ಮದ್ವೆಯಾದ ಹೊಸತ್ರಲ್ಲಿ ಒಂದಿಷ್ಟು ಪ್ರೀತಿ-ಗೀತಿ ಅಂತ ಉಳಿದೋರನ್ನು ಮರೀಬೋದು. ನಂತರದ ದಿನಗಳನ್ನು ಮರೆಯೋಕೆ ಉಳಿದೋರೇ ಬೇಕಾಗಬಹುದು ಅನ್ನೋದು ನನ್ನ ಬಾಲಿಶ ಯೋಚನೆಯಾಗಿರಬಹುದು!<!--Image--><p class="wdp_articleLImg"><p><img src='/kn/articles/0908/08/images/img1090808043_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮನೆ ಹೊಸ್ತಿಲು ದಾಟಿದ ನಂತರದ 384 ವಾರಗಳಿಂದ ಕನಿಷ್ಠ 200 ಬಾರಿ ವಾರದ ಕರ್ಮವೆಂದೇ ಬೈದುಕೊಳ್ಳುವ ಬಟ್ಟೆ ಒಗೆದು ಹೈರಾಣಾಗಿ ಹೋಗಿದ್ದೇನೆ. ಹೆಂಡತಿ ಹೇಳಿದ ಕೆಲ್ಸಾನೆಲ್ಲಾ ಮಾಡೋಕೆ ಸಿದ್ಧನಿದ್ದೀನಿ -- ಆಕೆ ನಾನು ಹಾಕೋ ಬಟ್ಟೆ ಮಾತ್ರ ಒಗೀಲೇ ಬೇಕು ಎಂಬ ಭಯಂಕರ ನಿರ್ಧಾರಕ್ಕೆ ಯಾವತ್ತೋ ಬಂದಾಗಿದೆ. ಮುಂದೇನಾಗುತ್ತೋ..?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದ್ರೂ ಮದ್ವೆಯಾದ್ಮೇಲೂ ಸುಖವಾಗಿರಬಹುದಾ? ಯಾಕಿರಲ್ಲ ಅಂತೆಲ್ಲ ಮದ್ವೆಯಾದ ಪುರಾತನ ಟೀನ್‌ಗಳು ನನ್ನನ್ನು ದುರುಗುಟ್ಟಿದ್ದುಂಟು. ಏನೋ ಮದ್ವೆಯಾಗೋವಷ್ಟು ಪ್ರಾಯ ಇನ್ನೂ ಆಗಿಲ್ಲಾಂತಾನೇ ಅನ್ಸತ್ತೆ. ಆದ್ರೂ ಸ್ನಾನ ಮಾಡೋವಾಗ, ತಲೆ ಬಾಚೋವಾಗ ಕೂದಲು ಉದುರ್ತಿರೋದನ್ನು ನೋಡಿ (ಖಂಡಿತಾ ಇದು ಪ್ರಾಯ ದೋಷವಲ್ಲ..!) ಬೇಗ ಮದ್ವೆ ಆಗ್ಲೇ ಬೇಕೆಂಬ ಭೀಷ್ಮ ಪ್ರತಿಜ್ಞೆ ಮಾಡಿಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೆ ಭಯ. ಅಮ್ಮ ಏನು ಹೇಳ್ತಾಳೋ.. ನಾನು ಮದ್ವೆಯಾಗೋದೂಂದ್ರೆ ಅವಳಿಗೆ ಖುಷಿನೇ. ಆದ್ರೂ ಏನೋ ಒಂದ್ಸಲ್ಪ ನಾಚ್ಕೆ ನಂಗೂ ಆಗತ್ತೆ ಕಣ್ರೀ.. ಎಕ್ಸ್‌ಪೀರಿಯೆನ್ಸ್ ಕೂಡ ನನ್ನ ಬೆನ್ನಿಗಿಲ್ಲ ನೋಡಿ..!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದ್ರೂ ಹೆಂಡ್ತೀಗೆ ಅಷ್ಟೊಂದು ನಿಷ್ಠಾವಂತನಾಗಿ ಎಷ್ಟು ದಿನ ಬಾಳಬಹುದು. ಮದುವೆಯಾದ ಮೇಲೆ ಬೇರೆ ಹುಡುಗೀರನ್ನು ನೋಡ್ಬೇಕೂಂತ ಅನ್ನಿಸೋದೇ ಇಲ್ವ? ಅಂದ್ರೆ ಮದ್ವೆನೇ ಕೊನೆಯ ಸಂತೋಷನಾ? ನಮ್ಮೆಲ್ಲ ಗುಟ್ಟುಗಳನ್ನು ಆಕೆಯಲ್ಲಿ ಬಿಚ್ಚಿಡ್ಬೇಕಾ?<!--Image--><p class="wdp_articleRImg"><p><img src='/kn/articles/0908/08/images/img1090808043_1_3.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಕೆ ಹೇಗಿರ್ತಾಳೋ? ಜಡೆ ಉದ್ದ ಬಿಟ್ಟಿರ್ತಾಳೋ.. ಜಡೇನೇ ಇರಲ್ವೋ? ನಂಗಂತೂ ಲಿಪ್‌ಸ್ಟಿಕ್ ಕಂಡ್ರೆನೇ ಆಗಲ್ಲ. ಅದಿಲ್ಲದೇ ಹೊರಗೆ ಕಾಲಿಡದವಳು ಸಿಕ್ಕಿದ್ರೆ..? ಹುಡುಗಿ ನೋಡೋ ದಿನ ಅದ್ನೆಲ್ಲಾ ಕೇಳಕ್ಕಾಗತ್ತ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾನು ಅಂದ್ಕೊಂಡಿದ್ದೆಲ್ಲ ಅವಳಲ್ಲಿರತ್ತಾ? ಮನೆಯವರ ಜತೆ ಹೊಂದ್ಕೊಂಡು ಹೋಗ್ತಾಳಾ? ಬೆಡ್ ರೂಂ ಕಿಟಕಿಗೆ ಬಾಗಿಲಿಲ್ಲ ಅಂತ ಕೋಪ ಮಾಡ್ಕೊಂಡ್ರೆ? ಸಂಡೇ ಸಿನಿಮಾಕ್ಕೆ ಹೋಗ್ಲೇಬೇಕೂಂತ ಹಠ ಹಿಡಿದ್ರೆ? ಅದೂ ನನ್ನ ಜೇಬನ್ನೇ ನಂಬ್ಕೊಂಡಿದ್ರೆ? ವಾರಕ್ಕೊಮ್ಮೆ ಅಮ್ಮ ನೆನಪಾಗ್ತಾಳೆ ಅಂದ್ರೆ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಎಲ್ಲರಂತೆ ಸಿಕ್ಕಾಪಟ್ಟೆ ಆತಂಕಗಳು ಬೇಕಾಬಿಟ್ಟಿಯಾಗಿ ನನ್ನಲ್ಲೂ ಮನೆ ಮಾಡಿವೆ. ಆದ್ರೂ ಮದುವೆ ಆಗ್ಲೇ ಬೇಕು. ಏನಾಗುತ್ತೋ ನೋಡೋಣ ಅಂತ ತೀರ್ಮಾನಿಸಿದ್ದೀನಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಾಲೇಜು ಮತ್ತು ನಂತರದ ಜೀವನದಲ್ಲಿ ಅದೆಷ್ಟೋ ಹುಡುಗೀರನ್ನ ಕಂಡು ಸತಾಯಿಸಿದ್ದಿದೆ. ಇವಳೇನಾದ್ರೂ ಸಿಕ್ಕಿದ್ರೆ ನನ್ನನ್ನು ದೇವ್ರೇ ಕಾಪಾಡ್ಬೇಕು ಅಂತ ಹೇಳ್ಕೊಂಡದ್ದೂ ಇದೆ. ಏನ್ ಮಾಡ್ತಾನೋ ಗೊತ್ತಿಲ್ಲ. ಹಾಗಿದ್ದ ಹರುಕು-ಮುರುಕು ಸಂಬಂಧಗಳಿಗೆಲ್ಲ ಅಂದೇ ಶ್ರದ್ಧಾಂಜಲಿ ಅರ್ಪಿಸಬೇಕಾ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ವರ್ಷಾಂತೂ ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಹಾಗಾಗಿ ಎಲ್ರೂ ವಿಶ್ ಮಾಡಬಹುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಂದಿನ ವರ್ಷದ ಬಗ್ಗೆ ಯಾವುದೇ ಆಶಾವಾದಗಳು ನನ್ನಲ್ಲಿಲ್ಲ..!</font><br/></font>]]></content:encoded>
      <pubDate>Sat, 08 Aug 2009 15:20:39 +0530</pubDate>
      <updatedDate>Tue, 15 Apr 2014 13:45:26 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಭಾರತ ಅಂದು - ಇಂದು]]></title>
      <link>https://kannada.webdunia.com/article/independence-day-article/ಭಾರತ-ಅಂದು-ಇಂದು-108081400065_1.htm</link>
      <guid>https://kannada.webdunia.com/article/independence-day-article/ಭಾರತ-ಅಂದು-ಇಂದು-108081400065_1.htm</guid>
      <media:thumbnail url="http:"/>
      <image>http:</image>
      <description><![CDATA[ಮತ್ತೆ ಆಗಸ್ಟ್ 15 ಬಂದಿದೆ. ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡ ದಿನ. ಇಂದು ಎಲ್ಲ ಶಾಲಾ-ಕಾಲೇಜುಗಳು, ಸರ್ಕಾರಿ ಮುಖ್ಯ ಕಚೇರಿಗಳ ಮೇಲೆ ಭಾರತದ ಧ್ವಜವನ್ನು ಹಾರಿಸಿ ಸಿಹಿ ಹಂಚಿ ಉದ್ದುದ್ದ ಭಾಷಣ ಮಾಡಲು ರಾಜಕೀಯ ನಾಯಕರಿಗೆ, ಸ್ವಯಂ ಘೋಷಿತ ಸಮಾಜ ಸೇವಕರಿಗೆ ಇದೊಂದು ಸುವರ್ಣ ಅವಕಾಶ.]]></description>
      <content:encoded><![CDATA[<font  style='font-size:11pt; color:#0000FF'><b>ನಾಗರಾಜ್ ಬಿ.ಎನ್</font><font style=' color:#000000;'></b></font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814065_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PIB</td></tr></table></td></tr></table></p><!--endImage--> <font  style='font-size:11pt; color:#000000'>ಮತ್ತೆ ಆಗಸ್ಟ್ 15 ಬಂದಿದೆ. ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡ ದಿನ. ಇಂದು ಎಲ್ಲ ಶಾಲಾ-ಕಾಲೇಜುಗಳು, ಸರ್ಕಾರಿ ಮುಖ್ಯ ಕಚೇರಿಗಳ ಮೇಲೆ ಭಾರತದ ಧ್ವಜವನ್ನು ಹಾರಿಸಿ ಸಿಹಿ ಹಂಚಿ ಉದ್ದುದ್ದ ಭಾಷಣ ಮಾಡಲು ರಾಜಕೀಯ ನಾಯಕರಿಗೆ, ಸ್ವಯಂ ಘೋಷಿತ ಸಮಾಜ ಸೇವಕರಿಗೆ ಇದೊಂದು ಸುವರ್ಣ ಅವಕಾಶ. </font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತೀಯರ ಆಂತರಿಕ ಕಚ್ಚಾಟ ಮೇರೆ ಮೀರಿ ಕೇವಲ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಭಾರತವನ್ನು ರಾಜಕೀಯ ದಾಸ್ಯದಲ್ಲಿ ಇಟ್ಟುಕೊಳ್ಳುವಂತಾಯಿತು. ಜಗತ್ತಿಗೆ ಶಾಂತಿಮಂತ್ರಿ ಬೋಧಿಸಿದ ಭಾರತದ ಮಣ್ಣಿನಲ್ಲಿ ಅಧಿಕಾರ ದಾಹ ಮನೆಮಾಡಿ ನೈತಿಕ ಅಧಃಪತನಕ್ಕೆ ಆದಿಯಾಯಿತು. ಈ ಅವಮಾನಕಾರಿ ಪ್ರಸಂಗ ಮತ್ತೆ ಬಾರದಂತೆ ನಿಜವಾದ ಭಾರತ ಕಟ್ಟಬೇಕಿರುವುದು ನಮ್ಮಗಳ ನಿಜವಾದ ಆತ್ಮಪರಿವರ್ತನೆಯಿಂದ ಎಂಬುದನ್ನು ಭಾರತೀಯರು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬ್ರಿಟಿಷರು ಭಾರತವನ್ನು ವ್ಯವಸ್ಥಿತವಾಗಿ ಕೊಳ್ಳೆ ಹೊಡೆದರು.. ಅವರು ಈ ದೇಶವನ್ನು ಹಾಳು ಮಾಡಿದರು.. ಅವರ ದಾಸ್ಯದಿಂದ ಮುಕ್ತಿ ಪಡೆಯಲು ಹೋರಾಟ ನಡೆಯಿತು.. ಸಾವಿರಾರು ದೇಶಭಕ್ತರು ಪ್ರಾಣತ್ಯಾಗ ಮಾಡಿದರು.. ಅವರೆಲ್ಲ ಗಳಿಸಿಕೊಟ್ಟ  ಸ್ವಾತಂತ್ರ್ಯದ ಸಂಭ್ರಮದ ಸವಿಯನ್ನು ಸವಿಯುತ್ತಿದ್ದೇವೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ, ನಿಜವಾಗಿ ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳು ಮತ್ತು ಸಮಾಜ ಸೇವಕರು ಮಾಡಿರುವುದೇನು ಎಂದು ಗಮನಿಸಿದರೆ, ಭಾರತದ ನಿಜವಾದ ಶತ್ರುವಾದ ಜಾತಿವ್ಯವಸ್ಥೆ ಮತ್ತು ವರ್ಗ ಸಂಘರ್ಷಕ್ಕೆ ಮತ್ತಷ್ಟು ನೀರೆರೆದಿರುವುದು ಗೋಚರಿಸುತ್ತದೆ. ಸಮಾಜವನ್ನು ಜಾತಿಯ ಆಧಾರದ ಮೇಲೆ ಗುರುತಿಸಿ ಅದನ್ನು ಬೆಳೆಸುತ್ತೇವೆ ಎಂದ ನಾಯಕಮಣಿಗಳು.. ಬೆಳೆಸಿದ್ದು ಕೇವಲ ಜಾತೀಯತೆಯನ್ನು.. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸರ್ವಸಮಾನ ನಾಗರಿಕ ಸಮಾಜ ಸ್ಥಾಪಿಸುತ್ತೇವೆ.. ಎಲ್ಲರನ್ನೂ ಸಾಮಾಜಿಕ, ನೈತಿಕ ನಿಯಮಗಳ ಅಡಿ ನಡೆಸಿಕೊಳ್ಳುತ್ತೇವೆ ಎಂದು ಹೇಳಿದ ರಾಜಕೀಯ ಪಕ್ಷಗಳು ಅದನ್ನು ಸಾಧಿಸಲು ವಿಫಲವಾಗಿವೆ. ಇದಕ್ಕೆಲ್ಲ ಕಾರಣ ನಾಯಕರ ಅಧಿಕಾರ ದಾಹ ಮತ್ತು ಭಾರತದ ಪ್ರಜ್ಞಾಶೂನ್ಯ ಪ್ರಜೆಗಳು ಎಂದೇ ಹೇಳಬೇಕು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರಲ್ಲೂ ಉದಾರೀಕರಣ, ಜಾಗತೀಕರಣ ಭಾರತಕ್ಕೆ ದಾಂಗುಡಿಯಿಟ್ಟು ಅಟ್ಟಹಾಸ ಮೆರೆಯುತ್ತಿದೆ. ಇವೆರಡರಿಂದ ಭಾರತೀಯ ಸಮಾಜಕ್ಕೆ ಎಷ್ಟು ಒಳಿತಾಗಿರುವುದೋ ಅಷ್ಟೇ ಕೆಡುಕೂ ಆಗಿದೆ. ಭಾರತೀಯರ ಶತಶತಮಾನಗಳ ಸ್ವಾವಲಂಬಿ ಬದುಕಿನ ವ್ಯವಸ್ಥೆಯನ್ನು ಕೆಲವೇ ದಶಕಗಳಲ್ಲಿ ಇವೆರಡೂ ಪ್ರಕ್ರಿಯೆಗಳು ಛಿದ್ರಗೊಳಿಸಿವೆ. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0808/14/images/img1080814065_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PIB</td></tr></table></td></tr></table></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊದ ಮೊದಲು ನಾಲ್ಕೈದು ವರ್ಷಗಳಿಗೊಮ್ಮೆ ಬರುತ್ತಿದ್ದ ಚುನಾವಣೆಗಳು ಈಗ ವರ್ಷಾನುವರ್ಷ ಬರುತ್ತಿವೆ. ಚುನಾವಣೆ ಸಮಯದಲ್ಲಿ ನಾಯಕರು ಆಡುವ ಮಾತುಗಳು, ತಿಳಿವಳಿಕೆಯುಳ್ಳವರನ್ನು ನಾಚಿಸುತ್ತಿವೆ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಿದ ಹಣಬಲ.. ನಡೆದ ಜಾತೀಯ ಸಂಘರ್ಷವನ್ನು ನೆನೆಸಿಕೊಂಡರೆ ಭಾರತ ಸ್ವಾತಂತ್ರ್ಯ ಗಳಿಸಿ 60ವರ್ಷಗಳ ಬಳಿಕವೂ ಇಂತಹ ವ್ಯವಸ್ಥೆ ವಿರುದ್ಧವೇ ರೇಜಿಗೆ ಹುಟ್ಟಿಸದೆ ಇರಲಾರದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇವೆಲ್ಲವನ್ನು ಗಮನಿಸಿದರೆ, ಪಾಶ್ಚಾತ್ಯ ದೇಶಗಳ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿದ್ದೇವೆ.. ಎಂದು ಬೊಬ್ಬೆ ಹಾಕುತ್ತಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ನಮ್ಮ ವರ್ತನೆ ಅರ್ಥಹೀನವೆನಿಸುತ್ತದೆ. ಆದ್ದರಿಂದ ಕೃತಕ ತೋರಿಕೆಯನ್ನು ಬದಿಗಿರಿಸಿ ನಿಜವಾದ ಭಾರತದ ಅಂತಃಶಕ್ತಿಯನ್ನು ವೃದ್ದಿಸುವ ಕಡೆಗೆ ನಾವೆಲ್ಲರೂ ಸಂಕಲ್ಪ ಮಾಡಿದರೆ ಸ್ವಾತಂತ್ರ್ಯೋತ್ಸವಕ್ಕೆ ಅರ್ಥ ಬರಲು ಸಾಧ್ಯವಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಗಾಂಧೀಜಿಯವರ `ರಾಮರಾಜ್ಯ' ಕಲ್ಪನೆ ಅಪ್ಪಟ ಸ್ವದೇಶಿ ತತ್ವದ ಮೇಲೆಯೇ ನಿಂತಿದೆ. 'ಸ್ವಾವಲಂಬನೆಯೇ ಜೀವನ-ಪರಾವಲಂಬನೆಯೇ ದಾರು</font><font style='font-size:11pt;'>ಣ' </font><font style='font-size:11pt;'>ಎಂದು ಹೊಸ ಮಂತ್ರದೊಂದಿಗೆ ಭಾರತೀಯರಾದ ನಾವು ಮುಂದಡಿ ಇಡಬೇಕಿದೆ.</font><br/><font  style='font-size:11pt; color:#000000'></font><br/>`<font  style='font-size:11pt; color:#000000'>ಒಂದು ದೇಶದ ಆರೋಗ್ಯವಂತ ಸ್ಥಿತಿ ತಿಳಿಯಲು ಅಲ್ಲಿನ ಪ್ರಜೆಯ ಮನಸ್ಸನ್ನು ತಿಳಿದರೆ ಸಾಕು' ಎನ್ನುತ್ತದೆ ದಾರ್ಶನಿಕ ವಾಣಿ. ಇದನ್ನು ನೆನೆದಾಗ ಭಾರತೀಯ ಸಮಾಜದಲ್ಲಿ ನಡೆದಿರುವ ಆಂತರಿಕ ಘರ್ಷಣೆ ಮತ್ತು ಈಗಲೂ ನಡೆಯುತ್ತಿರುವ ಸಾಮಾಜಿಕ ವೈಪರೀತ್ಯಗಳು ಕಣ್ಮುಂದೆ ರಾಚುತ್ತವೆ. ಜಾತಿ ವ್ಯವಸ್ಥೆ,ವರ್ಗ ಸಂಘರ್ಷ,ಕೋಮುವಾದದಂತಹ ಪಿಡುಗುಗಳನ್ನು ಮೆಟ್ಟಿ ನಿಂತಲ್ಲಿ ಭಾರತ ನಿಜವಾದ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. </font>]]></content:encoded>
      <pubDate>Fri, 15 Aug 2008 13:54:20 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?]]></title>
      <link>https://kannada.webdunia.com/article/independence-day-article/ಮುನ್ನುಗ್ಗುತ್ತಿರುವ-ಭಾರತ-ಮುಂದಿನ-ಸೂಪರ್-ಪವರ್-108081400028_1.htm</link>
      <guid>https://kannada.webdunia.com/article/independence-day-article/ಮುನ್ನುಗ್ಗುತ್ತಿರುವ-ಭಾರತ-ಮುಂದಿನ-ಸೂಪರ್-ಪವರ್-108081400028_1.htm</guid>
      <media:thumbnail url="http:"/>
      <image>http:</image>
      <description><![CDATA[ಸ್ವತಂತ್ರದ ಆದಿಯಲ್ಲಿನ ಭಾರತ ಮತ್ತು 60 ವರ್ಷಗಳ ನಂತರದ ಈಗಿನ ಭಾರತ ನಡುವಿನ ವ್ಯತ್ಯಾಸ ಅಜಗಜಾಂತರ. ಅಂದಿನ ಭಾರತದಲ್ಲಿ ಅನಿಶ್ಚಿತತೆ, ಗೊಂದಲ, ಡೋಲಾಯಮಾನ ಎಲ್ಲವೂ ಮನೆ ಮಾಡಿತ್ತು. ಆದರೆ ಇಂದಿನ ಭಾರತದಲ್ಲಿ ಅಭಿವೃದ್ಧಿ, ನಿರೀಕ್ಷೆ, ದೃಢತೆ, ನಿಖರತೆ, ವಿಶ್ವಾಸ ಮನೆ ಮಾಡಿದೆ. ಅಂದಿನ ಭಾರತವನ್ನು ...]]></description>
      <content:encoded><![CDATA[<font  style='font-size:11pt; color:#0000FF'><b>ವೆಂಕಟ್ ಪೊಳಲಿ  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814028_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಸ್ವತಂತ್ರದ ಆದಿಯಲ್ಲಿನ ಭಾರತ ಮತ್ತು 60 ವರ್ಷಗಳ ನಂತರದ ಈಗಿನ ಭಾರತ ನಡುವಿನ ವ್ಯತ್ಯಾಸ ಅಜಗಜಾಂತರ. ಅಂದಿನ ಭಾರತದಲ್ಲಿ ಅನಿಶ್ಚಿತತೆ, ಗೊಂದಲ, ಡೋಲಾಯಮಾನ ಎಲ್ಲವೂ ಮನೆ ಮಾಡಿತ್ತು. ಆದರೆ ಇಂದಿನ ಭಾರತದಲ್ಲಿ ಅಭಿವೃದ್ಧಿ, ನಿರೀಕ್ಷೆ, ದೃಢತೆ, ನಿಖರತೆ, ವಿಶ್ವಾಸ ಮನೆ ಮಾಡಿದೆ. ಅಂದಿನ ಭಾರತವನ್ನು ಪ್ರತಿಯೊಬ್ಬರೂ ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದ್ದರೆ, ಇಂದಿನ ಭಾರತವನ್ನು ಬೆರಗು, ಅಚ್ಚರಿಯ ದೃಷ್ಟಿಯಿಂದ ನೋಡಲಾಗುತ್ತಿದೆ. ಸ್ವತಂತ್ರದ ಆದಿಯಲ್ಲಿ ಭಾರತದ ಉಳಿವಿಕೆಯ ಬಗ್ಗೆಯೇ ಅನುಮಾನಗಳು ಸುಳಿದಾಡುತ್ತಿದ್ದವು. ಆದರೆ ಈಗಿನ ಭಾರತವನ್ನು ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ನೋಡಲಾಗುತ್ತಿದೆ. ಇದು ಭಾರತ ತನ್ನ ಸ್ವಂತ ಕಾಲಿನಲ್ಲಿ ನಿಂತ 60 ವರ್ಷಗಳಲ್ಲಿ ಸಾಧಿಸಿದ ಬೆಳವಣಿಗೆ, ಅಭಿವೃದ್ಧಿ, ಸಾಧನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವತಂತ್ರ ಸಿಕ್ಕ ಪ್ರಾರಂಭದಲ್ಲಿ ಭಾರತ ತನ್ನ ಮಡಿಲಲ್ಲಿ ಹಲವು ಅನಿಶ್ಚಿತತೆ, ಸಮಸ್ಯೆ, ಸವಾಲು, ಗೊಂದಲಗಳನ್ನು ತುಂಬಿಕೊಂಡಿತ್ತು. ಭಾರತದ ಎದುರು ಅಸಂಖ್ಯಾತ ಸಮಸ್ಯೆಗಳು ಜೋತು ಬಿದ್ದಿದ್ದವು. ಒಂದು ಕಡೆ ಮಿಲಿಯಗಟ್ಟಲೆ ನಿರಾಶ್ರಿತರಿಗೆ ಮನೆ ಮಠ, ಉದ್ಯೋಗ, ಭೂಮಿ ಮತ್ತು ಸೂಕ್ತ ನಾಗರಿಕತ್ವ ನೀಡುವ ಹೊಣೆ, ಮತ್ತೊಂದು ಕಡೆ ವಿವಿಧ ಜಾತಿ, ಭಾಷೆ, ಸಂಸ್ಕೃತಿಯಿಂದ ಕೂಡಿದ್ದ ಭೂ ಖಂಡವನ್ನು ಒಂದು ಸೂರಿನಡಿ ಅಂದರೆ ಒಂದು ರಾಷ್ಟ್ರವಾಗಿ ಒಗ್ಗೂಡಿಸುವ ಬೃಹತ್ ಸವಾಲು. ಇನ್ನೊಂದೆಡೆ ಭಾರತದಲ್ಲಿ ಬೀಡುಬಿಟ್ಟಿದ್ದ ಸುಮಾರು 500 ರಾಜಾಡಳಿತವನ್ನು ಅಖಂಡ ಭಾರತಕ್ಕೆ ಸೇರಿಸಿ ಕೊಳ್ಳುವ ಬೃಹತ್ ಕಾರ್ಯ.             </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೆಲ ರಾಜರು ಯಾವುದೇ ತಕರಾರಿಲ್ಲದೆ ಭಾರತಕ್ಕೆ ಸೇರಿಕೊಂಡರೆ, ಮತ್ತೆ ಕೆಲ ರಾಜಾಡಳಿತಗಳು ಕೆಲ ಷರತ್ತುಗಳನ್ನು ಇಟ್ಟಿದ್ದವು. ಆದರೆ ಕೆಲ ರಾಜರು ತಮ್ಮ ರಾಜಾಡಳಿತವನ್ನು ಬಿಟ್ಟು ಕೊಡಲು ನಿರಾಕರಿಸಿದರು. ಇದರಲ್ಲಿ ಹೈದರಾಬಾದ್ ನಿಜಾಂ ಮೊದಲಿಗನಾಗಿದ್ದ. ತನ್ನ ರಾಜಾಡಳಿತದಿಂದ ಹೊರ ಬರಲು ಇಚ್ಚಿಸದ ನಿಜಾಂ ಪ್ರತ್ಯೇಕ ರಾಜ್ಯವೊಂದನ್ನು ನಿರ್ಮಿಸುವ ಹಠ ಹಿಡಿದಿದ್ದ. ಈ ಹಠಮಾರಿ ನಿಜಾಂನನ್ನು ಭಾರತಕ್ಕೆ ಸೇರಿಸಿಕೊಳ್ಳುವ ಗುರುತರ ಜವಬ್ದಾರಿ ವಲ್ಲಬಾಭಾಯ್ ಪಟೇಲ್ ಮೇಲಿತ್ತು. ಸ್ವತಂತ್ರ ಹೈದರಾಬಾದ್ ಅಖಂಡ ಭಾರತದ ಒಡಲಿನಲ್ಲಿನ ಒಂದು ಕ್ಯಾನ್ಸರ್ ಆಗಿ ಪರಿಣಮಿಸಲಿದೆ ಎಂಬುದನ್ನು ಅರಿತಿದ್ದ ಪಟೇಲ್ ಒಂದು ವರ್ಷದ ಬಳಿಕ ಹೈದರಾಬಾದ್‌ಗೆ ಸೇನೆಯನ್ನು ಕಳುಹಿಸಿ, ನಿಜಾಂ ಸ್ವತಂತ್ರ ಭಾರತಕ್ಕೆ ಸೇರುವಂತೆ ಮಾಡಿದರು. </font><font  style='font-size:11pt; color:#000000'>ಭಾರತ ಎದುರಿಗಿದ್ದ ಮತ್ತೊಂದು ಬೃಹತ್ ಸವಾಲು ವಿವಿಧ ಭಾಷೆ, ಸಂಸ್ಕೃತಿ, ಜಾತಿ, ಧರ್ಮವನ್ನು ಹೊಂದಿರುವ ಜನರನ್ನು ಒಂದೇ ರಾಷ್ಟ್ರ ಎಂಬ ಸೂರಿನಡಿಗೆ ತರುವುದು. ಈ ನಿಟ್ಟಿನಲ್ಲಿ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿದ್ದವು. ಕಾರಣ ಆವರೆಗೆ ವಿವಿಧ ಜಾತಿ, ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಭೂ ಖಂಡವನ್ನು ಒಟ್ಟಾಗಿಸಿ ಒಂದು ರಾಷ್ಟ್ರವನ್ನಾಗಿ ರಚಿಸಿದ ಉದಾಹರಣೆ ಇರಲಿಲ್ಲ. ಇಂಗ್ಲೆಂಡ್ ಆಗಲಿ, ಫ್ರಾನ್ಸ್ ಆಗಲಿ, ಪೊಲೆಂಡ್ ಆಗಲಿ ಎಲ್ಲವೂ ಒಂದು ಭಾಷೆ, ಸಂಸ್ಕೃತಿ, ಜಾತಿ ಆಧಾರದಲ್ಲಿ ತಮ್ಮ ರಾಷ್ಟ್ರವನ್ನು ಕಟ್ಟಿದ್ದವು.  ಆದರೆ ಭಾರತದಲ್ಲಿ ಉತ್ತರದಿಂದ ಹಿಡಿದು ದಕ್ಷಿಣದವರೆಗೆ ನಾನಾ ರೀತಿಯ ಭಾಷೆ, ಸಂಸ್ಕೃತಿ, ಜಾತಿ, ಧರ್ಮಗಳ ಜನರು ನೆಲೆಸುತ್ತಾರೆ. ಇವರನ್ನು ಒಟ್ಟುಗೂಡಿಸಿ ಒಂದೇ ರಾಷ್ಟ್ರದಡಿ ತರುವುದು ಭಾರತದ ಎದುರಿಗಿನ ಅತಿ ದೊಡ್ಡ ಸವಾಲಾಗಿತ್ತು. ಆದರೆ ಭಾರತ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿತು. ಆಗ ಭಾರತದ ಅಖಂಡತೆಯನ್ನು ಅನುಮಾನ ದೃಷ್ಠಿಯಿಂದ ನೋಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತದ ವಿವಿಧತೆಯಲ್ಲಿನ ಏಕತೆಯನ್ನು ಬೆರಗು ಕಣ್ಣಿನಿಂದ ಹಾಗೂ ಗೌರವಯುತವಾಗಿ ಕಾಣುತ್ತಿವೆ.</font><br/><!--begin inline--><!--@@StartLeftBlock@@--><p class="innerBlock_Left"><table id="inlinebox" width="200" height="68" border="0" cellpadding="0" cellspacing="0" class="boxBdr"><tr><td><table width="100%" cellpadding="0" cellspacing="0" border="0"><tr><td class="padding"><span></span></td></tr></table></td></tr><tr><td class="padding"><table width="100%" cellpadding="0" cellspacing="0" border="0" class="kreative"><tr><td width="52%" align="left" class="innerBlock_Text"><span class='imgQuadLeft'>  </span><!--BD-->ಆಗ ಭಾರತದ ಅಖಂಡತೆಯನ್ನು ಅನುಮಾನ ದೃಷ್ಠಿಯಿಂದ ನೋಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತ ವಿವಿಧತೆಯಲ್ಲಿನ ಏಕತೆಯನ್ನು ಬೆರಗು ಕಣ್ಣಿನಿಂದ ಹಾಗೂ ಗೌರವಯುತವಾಗಿ ಕಾಣುತ್ತಿವೆ.<!--ED--><span class='imgQuadRight'>      </span></td></tr></table></td></tr><tr><td class="padding"><table width="100%" border="0" cellspacing="0" cellpadding="0"><tr><td class='QuadFooterColor'><!--BF--><!--EF--></td></tr></table></td></tr></table></p><!--@@EndLeftBlock@@--><!--end inline--> <font  style='font-size:11pt; color:#000000'></font><br/><font  style='font-size:11pt; color:#000000'>ಈ ಬೃಹತ್ ಸವಾಲುಗಳ ಯಶಸ್ವಿ ನಿಭಾವಣೆಗೆ ಭಾರತದ ಸದೃಢ ಪ್ರಜಾಪ್ರಭುತ್ವ ಪ್ರಮುಖ ಕಾರಣವಾಗಿದೆ. ಆಗಿನ ರಾಷ್ಟ್ರ ನಾಯಕರ ದೂರದೃಷ್ಟಿ, ದೇಶಾಭಿಮಾನ ಮತ್ತು ಬುದ್ಧಿವಂತಿಕೆ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಮೊದಲ ಭಾರಿಗೆ ದೇಶ ಸಾರ್ವತ್ರಿಕ ಚುನಾವಣೆಗೆ ಹೋಗುವ ವೇಳೆ ಎಲ್ಲರೂ ಅನುಮಾನ ವ್ಯಕ್ತಪಡಿಸಿದ್ದರು. ಕಾರಣ ಅಸಂಖ್ಯಾತ ಅನಕ್ಷರಸ್ಥ, ವಿವಿಧ ಜಾತಿ ಧರ್ಮದ ಜನರನ್ನು ಹೊಂದಿರುವ ರಾಷ್ಟ್ರವೊಂದು ಚುನಾವಣೆ ನಡೆಸುವುದು ಅದೇ ಮೊದಲಾಗಿತ್ತು. ಆದರೆ ಭಾರತ ಅದನ್ನು ಯಶಸ್ವಿಯಾಗಿ ಪೂರೈಸಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಮೂಕವಿಸ್ಮಿತವನ್ನಾಗಿಸಿತು. ಭಾರತ ಈವರೆಗೆ ಒಟ್ಟು 14 ಸಾರ್ವತ್ರಿಕ ಚುನಾವಣೆಯನ್ನು ನಡೆಸಿದ್ದರೆ, ಅಸಂಖ್ಯಾತ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತದ್ವಿರುದ್ಧವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತದಾರರ ಸಂಖ್ಯೆಯೂ ಪ್ರತಿ ಬಾರಿಯೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಪ್ರಜಾಪ್ರಭುತ್ವ ಮೇಲಿನ ಭಾರತ ಜನರ ನಂಬಿಕೆ, ವಿಶ್ವಾಸ ಮತ್ತು ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆಗಳ ಭದ್ರ ಬುನಾದಿ.</font><br/><font  style='font-size:11pt; color:#000000'></font><br/>1980<font  style='font-size:11pt; color:#000000'>ರಿಂದೀಚೆಗೆ ಸರಕಾರ ಅಳವಡಿಸಿದ ಉದ್ದಿಮೆ, ಮಾರುಕಟ್ಟೆ ಸ್ನೇಹಿ ಆರ್ಥಿಕ ನೀತಿಯ ಫಲವಾಗಿ ಭಾರತ ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಶರವೇಗದ ಬೆಳವಣಿಗೆ ಕಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತವನ್ನು ಬೆರಗಿನಿಂದ ಕಾಣುತ್ತಿವೆ. ಭಾರತ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬೆಳೆದು ಬಂದ ರೀತಿ ಅನುಕರಣೀಯ. ನಮ್ಮ ದೇಶೀಯ ಉದ್ಯಮಿಗಳು ಶ್ರೀಮಂತ ರಾಷ್ಟ್ರಗಳಲ್ಲಿನ ಬೃಹತ್ ಕಂಪೆನಿಗಳನ್ನು ಖರೀದಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಈ ಬೆಳವಣಿಗೆಗಳು ಭಾರತದಲ್ಲಿ ಸುಮಾರು 200 ದಶಲಕ್ಷ ಮಧ್ಯಮ ವರ್ಗದವರನ್ನು ಸೃಷ್ಟಿಸಿದ್ದು, ಅವರಲ್ಲಿ ವಿಶ್ವಾಸ ತುಂಬಿ ತುಳುಕುವಂತೆ ಮಾಡಿದೆ. ವಿಶ್ವ ಆರ್ಥಿಕತೆಯನ್ನು ಏರುಪೇರು ಮಾಡುವಷ್ಟರ ಮಟ್ಟಿಗೆ ಭಾರತದ ಆರ್ಥಿಕತೆ ಬೆಳೆದು ನಿಂತಿದೆ. ಈ ಹಿಂದೆ ಭಾರತದತ್ತ ಆತಂಕದ ನೋಟವನ್ನು ಹರಿಸುತ್ತಿದ್ದ ವಿದೇಶಿ ರಾಷ್ಟ್ರಗಳು ಈಗ ಧೈರ್ಯದಿಂದ, ವಿಶ್ವಾಸದಿಂದ ನೋಡುತ್ತಿವೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರ ಅರ್ಥ ಭಾರತದಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ಭಾರತ ಅನೇಕ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿದೆ. ಭಾರತದಲ್ಲಿ ಇನ್ನೂ ಸುಮಾರು 300 ದಶಲಕ್ಷ ಜನರು ಬಡತನ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ನಕ್ಸಲ್‌ವಾದ, ಭಯೋತ್ಪಾದನೆಗಳು ಅಖಂಡ ಭಾರತಕ್ಕೆ ಸವಾಲು ಒಡ್ಡುತ್ತಿವೆ. ಇದರ ಜತೆಗೆ ದೇಶದ ಭ್ರಷ್ಟ ರಾಜಕಾರಣಿಗಳು ಪ್ರಜಾಪ್ರಭುತ್ವ ಆಡಳಿತ ಯಂತ್ರದಲ್ಲಿದ್ದಕೊಂಡೇ ರಾಷ್ಟ್ರವನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಆದರೂ ಭಾರತ ಮುನ್ನುಗ್ಗುತ್ತಿದೆ. ಇದಕ್ಕೆ ಕಾರಣ ಭಾರತದ ಸದೃಢ ಪ್ರಜಾಪ್ರಭುತ್ವ. ಭಾರತ ಉಳಿಯಲಿದೆಯೇ? ಎಂಬ ಪ್ರಶ್ನೆ ಇಂದು ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆಯೇ? ಎಂಬುದಾಗಿ ಪರಿವರ್ತಿತವಾಗಿದೆ. </font>]]></content:encoded>
      <pubDate>Fri, 15 Aug 2008 10:51:38 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ನಗುತ್ತಲೇ ನೇಣಿಗೆ ಕೊರಳೊಡ್ಡಿದನೇ ಖುದೀರಾಮ್?]]></title>
      <link>https://kannada.webdunia.com/article/independence-day-article/ನಗುತ್ತಲೇ-ನೇಣಿಗೆ-ಕೊರಳೊಡ್ಡಿದನೇ-ಖುದೀರಾಮ್-108081400019_1.htm</link>
      <guid>https://kannada.webdunia.com/article/independence-day-article/ನಗುತ್ತಲೇ-ನೇಣಿಗೆ-ಕೊರಳೊಡ್ಡಿದನೇ-ಖುದೀರಾಮ್-108081400019_1.htm</guid>
      <media:thumbnail url="http:"/>
      <image>http:</image>
      <description><![CDATA[18ನೇ ವರ್ಷದಲ್ಲಿ ನಗು ನಗುತ್ತಲೇ ನೇಣುಗಂಬವೇರಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಿರಿಯ ಹುತಾತ್ಮ ಎಂದು ಹೆಸರು ಪಡೆದಿದ್ದ ಖುದೀರಾಮ್ ಬೋಸ್ ಅವರ ಗಲ್ಲುಶಿಕ್ಷೆಯ ಕುರಿತು ಪಶ್ಚಿಮ ಬಂಗಾಳದ ವಿದ್ವಾಂಸರು ವಿಭಿನ್ನ ವಾದವೊಂದನ್ನು ಮುಂದಿಟ್ಟಿದ್ದಾರೆ. ಅದೀಗ ಖುದೀರಾಮ್ ಬಗೆಗಿದ್ದ ಭಾವನೆಗಳನ್ನು ಬದಲಿಸುವ ...]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814019_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> 18<font  style='font-size:11pt; color:#000000'>ನೇ ವರ್ಷದಲ್ಲಿ ನಗು ನಗುತ್ತಲೇ ನೇಣುಗಂಬವೇರಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಿರಿಯ ಹುತಾತ್ಮ ಎಂದು ಹೆಸರು ಪಡೆದಿದ್ದ ಖುದೀರಾಮ್ ಬೋಸ್ ಅವರ ಗಲ್ಲುಶಿಕ್ಷೆಯ ಕುರಿತು ಪಶ್ಚಿಮ ಬಂಗಾಳದ ವಿದ್ವಾಂಸರು ವಿಭಿನ್ನ ವಾದವೊಂದನ್ನು ಮುಂದಿಟ್ಟಿದ್ದಾರೆ. ಅದೀಗ ಖುದೀರಾಮ್ ಬಗೆಗಿದ್ದ ಭಾವನೆಗಳನ್ನು ಬದಲಿಸುವ ಸಾಧ್ಯತೆಗಳಿವೆ ಎಂಬುದು ಇತ್ತೀಚಿನ ಸುದ್ದಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಕುರಿತು ವಿದ್ವಾಂಸರು ಸಂಶೋಧನೆ ನಿರತರಾಗಿದ್ದು, ಬೋಸ್ ಕುರಿತ ಕ್ಷಮಾದಾನ ಅರ್ಜಿಯೊಂದು ಬ್ರಿಟಿಷ್ ಸರಕಾರಕ್ಕೆ ಹೋಗಿತ್ತು ಮತ್ತು ಅದನ್ನು ಬ್ರಿಟಿಷ್ ಆಡಳಿತಗಾರರು ತಳ್ಳಿ ಹಾಕಿದ್ದರು ಎಂಬುದು ಈ ವಿದ್ವಾಂಸರಿಗೆ ದಾಖಲೆಗಳ ಆಧಾರದಲ್ಲಿ ದೊರೆತ ಸುಳಿವು.</font><br/><font  style='font-size:11pt; color:#000000'></font><br/>1905<font  style='font-size:11pt; color:#000000'>ರ ಬಂಗಾಳದ ವಿಭಜನೆಯಿಂದ ಕೆರಳಿ ಕೆಂಡವಾಗಿದ್ದ ಖುದೀರಾಮ್ ಬೋಸ್, ಕೇವಲ 16ನೇ ವಯಸ್ಸಿನಲ್ಲಿ ಯುಗಾಂತರ ಎಂಬ ಕ್ರಾಂತಿಕಾರಿಗಳ ಸಮೂಹವನ್ನು ಸೇರಿಕೊಂಡಿದ್ದ. ಸ್ವಾತಂತ್ರ್ಯ ಹೋರಾಟಗಾರರನ್ನು ಮಟ್ಟ ಹಾಕುವುದಕ್ಕೆ ಕುಪ್ರಸಿದ್ಧನಾಗಿದ್ದ ಮುಜಾಫರ್‌ಪುರದ ಮ್ಯಾಜಿಸ್ಟ್ರೇಟ್ ಕಿಂಗ್ಸ್‌ಫರ್ಡ್‌ನನ್ನು ನಿವಾರಿಸಲೆಂದು ಆತನನ್ನು ಪ್ರಫುಲ್ಲ ಚಾಕಿ ಜೊತೆಗೆ ಮುಜಾಫರ್‌ಪುರದ ಯುರೋಪಿಯನ್ ಕ್ಲಬ್‌ನತ್ತ ಕಳುಹಿಸಿಕೊಡಲಾಗಿತ್ತು.</font><br/><font  style='font-size:11pt; color:#000000'></font><br/>1908<font  style='font-size:11pt; color:#000000'>ರ ಏಪ್ರಿಲ್ 30ರಂದು ಇವರಿಬ್ಬರೂ ಕ್ಲಬ್ ಹೊರಗೆ, ಬಾಂಬ್‌ಗಳೊಂದಿಗೆ ಕಾದು ಕುಳಿತರು. ಕ್ಲಬ್‌ನಿಂದ ಜನಸಮೂಹವೊಂದು ಹೊರಬರಲಾರಂಭಿಸಿದ್ದನ್ನು ನೋಡಿದ ತಕ್ಷಣವೇ, ಅವರು ಬಾಂಬ್‌ಗಳನ್ನು ಅತ್ತ ಎಸೆದರು. ಇದರಲ್ಲಿ ಇಬ್ಬರು ಬ್ರಿಟಿಷ್ ಮಹಿಳೆಯರು ಸಾವನ್ನಪ್ಪಿದರು. ಆ ಬಳಿಕ ಚಾಕಿಯನ್ನು ಸಮಷ್ಟಿಪುರ ರೈಲು ನಿಲ್ದಾಣದಲ್ಲಿ ಬಂಧಿಸಿದಾಗ ಆತ ಬ್ರಿಟಿಷರ ಕೈಯಲ್ಲಿ ಸಾಯುವುದಕ್ಕಿಂತ, ತಾನಾಗಿಯೇ ಆತ್ಮಹತ್ಯೆಗೆ ಮೊರೆ ಹೋದ. ಆದರೆ ಖುದೀರಾಮ್‌ನನ್ನು ಮಹಿಳೆಯರ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದೇ ವರ್ಷದ ಆಗಸ್ಟ್ 11ರಂದು ಖುದೀರಾಮ್‌ನನ್ನು ಗಲ್ಲಿಗೇರಿಸಲಾಯಿತು. ಅಂದಿನವರೆಗೆ ಖುದೀರಾಮ್ ಕುರಿತು ನಡೆದಿದ್ದ ವಿಚಾರಣೆಗಳು ಮತ್ತು ಜೈಲಿನಲ್ಲಿ ಆತನ ಕೊನೆಯ ದಿನಗಳ ಕುರಿತ ಮಾಹಿತಿ ಇದ್ದ ದಾಖಲೆ ಪತ್ರಗಳು ಇತ್ತೀಚೆಗೆ ಗೃಹರಾಜಕೀಯ ಇಲಾಖೆ ಮತ್ತು ಗುಪ್ತಚರ ವಿಭಾಗದ ನೆರವಿನಿಂದ ಪತ್ರಾಗಾರದಲ್ಲಿ ದೊರೆತಿದ್ದವು. ಈ ದಾಖಲೆಗಳಲ್ಲಿ ಉಲ್ಲೇಖವಾಗಿರುವಂತೆ, ಮೇ 1ರಂದು ಬೋಸ್ ಅವರು ಮುಜಾಫರ್‌ಪುರ ಮ್ಯಾಜಿಸ್ಟ್ರೇಟ್ ಎದುರು ಕೊಲೆ ಆರೋಪವನ್ನು ಒಪ್ಪಿಕೊಂಡಿದ್ದರು, ಆದರೆ ಆತನನ್ನು ಆಲಿಪುರ ಸೆಶನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದಾಗ, 'ಈ ಕೃತ್ಯ ನಡೆಸಲು ಚಾಕಿ ತನ್ನ ಮನವೊಲಿಸಿದ್ದ' ಎಂಬ ಹೇಳಿಕೆ ನೀಡಿದ್ದ.</font><br/><font  style='font-size:11pt; color:#000000'></font><br/>'<font  style='font-size:11pt; color:#000000'>ಆದರೆ ಬ್ರಿಟಿಷ್ ಸರಕಾರವು ಖುದೀರಾಮ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಕೇಸು ಜಡಿದಿತ್ತು. ವಿಚಾರಣೆ ಹೈಕೋರ್ಟ್‌ವರೆಗೂ ಹೋಯಿತು. ಬೋಸ್ ವಕೀಲರು ಪ್ರಬಲ ವಾದ ಮಂಡಿಸಿದರಾದರೂ, ಆತನಿಗೆ ಗಲ್ಲು ಶಿಕ್ಷೆ ಖಾಯಂ ಆಯಿತು. ಆ ಬಳಿಕ ಬೋಸ್ ವಕೀಲರು ಕ್ಷಮಾದಾನ ಅರ್ಜಿಯೊಂದನ್ನು ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದರು. ಬೋಸ್ ಅವರಿಗೆ ಕೇವಲ 18 ವರ್ಷ ಪ್ರಾಯವಾಗಿರುವುದರಿಂದ, ಆತ ಇಬ್ಬರು ಮಹಿಳೆಯರ ಸಾವಿಗೆ ಕಾರಣ ಎಂದು ಸಾಬೀತಾಗಿರುವುದರಿಂದ, ಸಂಪೂರ್ಣವಾಗಿ ಕ್ಷಮಿಸದಿದ್ದರೂ, ಸರಕಾರವು ಆತನಿಗೆ ಜೀವಿಸಲು ಅವಕಾಶ ಮಾಡಿಕೊಡಬಹುದು ಎಂದು ವಕೀಲರು ಮನವಿ ಮಾಡಿದ್ದರು' ಎಂದು ಪತ್ರಾಗಾರದ ನಿರ್ದೇಶಕ ಅತೀಶ್ ದಾಸ್‌ಗುಪ್ತಾ ತಿಳಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೋಸ್ ಅವರ ಪರವಾಗಿ ವಾದಿಸಿದ್ದು ಹೈಕೋರ್ಟ್ ಹಿರಿಯ ವಕೀಲರಾಗಿದ್ದ ನರೇಂದ್ರ ಕುಮಾರ್ ಬಸು. ಅವರು ಯಾವುದೇ ಶುಲ್ಕ ತೆಗೆದುಕೊಳ್ಳದೆ ಈ ವಾದ ಮಂಡಿಸಿದ್ದರು. ಈಗ ಈ ಹೊಸ ವಾದದ ಕುರಿತು ಸಂಶೋಧನೆ ಮುಂದುವರಿದಿದೆ.</font>]]></content:encoded>
      <pubDate>Thu, 14 Aug 2008 18:07:25 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ವಿಡಂಬನೆ: ನಂಗೂ ಸ್ವಾತಂತ್ರ್ಯ ಸಿಕ್ತು, ನಾನೂ ಭ್ರಷ್ಟಾಚಾರಿಯಾದೆ!]]></title>
      <link>https://kannada.webdunia.com/article/independence-day-article/ವಿಡಂಬನೆ-ನಂಗೂ-ಸ್ವಾತಂತ್ರ್ಯ-ಸಿಕ್ತು-ನಾನೂ-ಭ್ರಷ್ಟಾಚಾರಿಯಾದೆ-108081400027_1.htm</link>
      <guid>https://kannada.webdunia.com/article/independence-day-article/ವಿಡಂಬನೆ-ನಂಗೂ-ಸ್ವಾತಂತ್ರ್ಯ-ಸಿಕ್ತು-ನಾನೂ-ಭ್ರಷ್ಟಾಚಾರಿಯಾದೆ-108081400027_1.htm</guid>
      <media:thumbnail url="http:"/>
      <image>http:</image>
      <description><![CDATA[ಅರ್ಧ ಶತಮಾನದ ಹಿಂದೆ... ನಮ್ಮಜ್ಜ, ತಾತಂದಿರ ಕಾಲವದು. 1947ರಲ್ಲಿ ಭಾರತಕ್ಕೆ ಸಾತಂತ್ರ್ಯ ಸಿಕ್ಕಾಗ ನಮ್ಮಜ್ಜಂದಿರಿಗೂ ಸ್ವಾತಂತ್ರ್ಯ ಸಿಕ್ತು. ಅದು ವಂಶ ಪಾರಂಪರ್ಯವಾಗಿ ಹರಿದು ಸ್ವಾತಂತ್ರ್ಯ ಅನ್ನೋ ಆಜನ್ಮ ಸಿದ್ದ ಹಕ್ಕು ನನ್ನ ಪಾಲಿಗಾಯಿತು. ಹೌದು, ಜನ್ಮ ಪೂರ್ವತಃವಾಗಿಯೇ ನನಗೆ ಈ ಹಕ್ಕು ...]]></description>
      <content:encoded><![CDATA['<font  style='font-size:11pt; color:#0000FF'><b>ಅನ್ವೇಷಿ' </font><font style=' color:#000000;'></b></font><br/><font  style='font-size:11pt; color:#000000'>ಅರ್ಧ ಶತಮಾನದ ಹಿಂದೆ... ನಮ್ಮಜ್ಜ, ತಾತಂದಿರ ಕಾಲವದು. 1947ರಲ್ಲಿ ಭಾರತಕ್ಕೆ ಸಾತಂತ್ರ್ಯ ಸಿಕ್ಕಾಗ ನಮ್ಮಜ್ಜಂದಿರಿಗೂ ಸ್ವಾತಂತ್ರ್ಯ ಸಿಕ್ತು. ಅದು ವಂಶ ಪಾರಂಪರ್ಯವಾಗಿ ಹರಿದು ಸ್ವಾತಂತ್ರ್ಯ ಅನ್ನೋ ಆಜನ್ಮಸಿದ್ಧ ಹಕ್ಕು ನನ್ನ ಪಾಲಿಗಾಯಿತು. ಹೌದು, ಜನ್ಮ ಪೂರ್ವತಃವಾಗಿಯೇ ನನಗೆ ಈ ಹಕ್ಕು ಲಭಿಸಿತ್ತು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814027_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ಅಂತೂ ನಾನು ಬೆಳೆದು, ಭಾರತದ ಬಡ 'ಮತದಾರ'ನ ವಯಸ್ಸೂ ಆಯಿತು. ಆಗೊಂದು ಮನಸ್ಸೂ ಆಯಿತು. ಅದೇನೆಂದರೆ ದಿಢೀರ್ ಶ್ರೀಮಂತನಾಗಬೇಕು. ಯೋಚಿಸಿದೆ, ಏನು ಮಾಡೋಣ? ಹಾಂ.....ಒಂದು ಐಡಿಯಾ ಹೊಳೆಯಿತು. ಕಳ್ಳತನ ಮಾಡಿದರೆ ಬೇಕಾದಷ್ಟು ಗಳಿಸಬಹುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೌದು, ಅಂದಿನಿಂದಲೇ ನನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಿದೆ. ಸಣ್ಣ ಪುಟ್ಟ ಕಳ್ಳತನ ಮಾಡಿದೆ. ಅದೂ ಚಾಕಚಕ್ಯತೆಯಿಂದ... ಪೊಲೀಸರ ವ್ಯಾಪ್ತಿಗೆ ಹೊರತಾದ ಕಳ್ಳತನ ಮಾಡಿದೆ. ಆದರೆ ಕೆಲವೇ ದಿನಗಳಲ್ಲಿ 'ಸಂಪಾದನೆ' ಕಡಿಮೆಯಾಯಿತೆಂದು ತೋರಿತು. ಸ್ವಲ್ಪ 'ಎತ್ತರ'ಕ್ಕೇರಿದೆ. ಮಹಡಿ ಮನೆ, ನವ್ಯ ಬಂಗಲೆಗಳುಳ್ಳವರತ್ತ ಕಣ್ಣು ಹಾಯಿಸಿದೆ. ಒಂದೆರೆಡು ಬಾರಿ ಜೈಲಿಗೆ ಹೋಗಿ ಬಂದೆ. ಅಷ್ಟೊತ್ತಿಗಾಗಲೇ ನಮ್ಮ ಊರಿನ ಸುತ್ತಮುತ್ತ ನಾನು 'ಪ್ರಸಿದ್ಧ'ನಾಗಿದ್ದೆ. ನಿಧಾನವಾಗಿ ಗ್ಯಾಂಗೊಂದನ್ನು ಕಟ್ಟಿದೆ. ಬಾಲ ಅಲ್ಲಾಡಿಸುತ್ತಾ ನನ್ನಾಜ್ಞೆಗೆ ಕಾಯುತ್ತಿರುವ ಚಮಚಾಗಳನ್ನು ಸಂಪಾದಿಸಿದೆ. ಅವಕ್ಕೊಂದಿಷ್ಟು ಬಿಸಾಕಿದರೆ ಬಾಲ ಮಡಚಿಕೊಂಡು ನನ್ನ ಕೆಲಸ ಮಾಡಿಕೊಡುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೂ ಅನೇಕ ಕೊಲೆ, ಸುಲಿಗೆ, ಆತ್ಯಾಚಾರ, ವಂಚನೆ ಮುಂತಾದ 'ಸಣ್ಣ ಪುಟ್ಟ' ಕೆಲಸಗಳಿಂದ ನನಗೆ ಬೇಕಾದಷ್ಟು ಸಂಪಾದಿಸಲು ಆಸಾಧ್ಯ ಎನ್ನಿಸಿತು. ಹಾಗಾದರೆ ಇನ್ನೇನು ಉಪಾಯ? ಯೋಚಿಸಬೇಕಾದ ಪರಿಸ್ಥಿತಿ ಬರಲಿಲ್ಲ. ಇದ್ದೇ ಇದೆಯಲ್ಲ....'ರಾಜಕೀಯ'! ಅದಕ್ಕೆ ಧುಮುಕುಲು ಯೋಚಿಸುತ್ತಲೇ ಇರುವಾಗ 'ರೋಗಿ ಬಯಸಿದ್ದೂ ಹಾಲನ್ನ, ವೈದ್ಯ ಹೇಳಿದ್ದೂ ಹಾಲನ್ನ' ಎಂಬಂತೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷನೋರ್ವ ನನ್ನನ್ನು ಭೇಟಿಯಾದ. ಇದಕ್ಕೆ ಕಾರಣ ನನ್ನ ಸಿದ್ಧಿ-ಪ್ರಸಿದ್ಧಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಾಗಲೇ ಕೇಂದ್ರದಲ್ಲಿನ ಆಡಳಿತ ಸರಕಾರದಲ್ಲಿ ಭಿನ್ನಮತಗಳು ಉಲ್ಬಣವಾಗಿ, ಪರಾಕಾಷ್ಠೆಗೇರಿ, ಕೊನೆಗೆ ಪಕ್ಷವು ಒಡೆದು ಚೂರು ಚೂರಾಗಿ ಸರಕಾರ ವಿಸರ್ಜನೆಯಾಗಿ ಲೋಕಸಭಾ ಚುನಾವಣೆ ಘೋಷಿಸಿಯಾಗಿತ್ತು. ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ನಾನು ಸೇರಿದ ಆ ಪಕ್ಷದ ಅಧ್ಯಕ್ಷ ಟಿಕೆಟು ನೀಡಿದ. ಅಬ್ಬಾ! ಆರಿಸಿ ಬಂದರೆ ಸರಕಾರವನ್ನು ಎಷ್ಟು ಬೇಕಾದರೂ ದೋಚಿ, ಹೋದ ಹಣವನ್ನೆಲ್ಲಾ ಮರು ಸಂಪಾದಿಸಬಹುದು ಎಂದು ಯೋಚಿಸಿದ್ದೇ ತಡ, ಕಾರ್ಯಪ್ರವೃತ್ತನಾದೆ. ನಾನು ಸ್ಪರ್ಧಿಸಿದ ಕ್ಷೇತ್ರದಲ್ಲಿ ಎಲ್ಲರಿಗೂ (ಬೇಕಾದವರಿಗೆ) ದಿನಂಪ್ರತಿ ತಲಾ 50 ತೊಟ್ಟೆ ಸರಾಯಿ ಸರಬರಾಜು ಮಾಡಿದೆ, ಉಳಿದವರಿಗೆಲ್ಲಾ ಹಣ, ಸೀರೆ ಹಂಚಿದೆ. ಅಂತೂ ಜನರ ಮನಸ್ಸನ್ನು ನಾನು "ಗೆದ್ದೇ" ಬಿಟ್ಟೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನನ್ನ ವಿರುದ್ದ ನಿಂತ ಆಭ್ಯರ್ಥಿಯೊಬ್ಬ "ಪ್ರಾಮಾಣಿಕ" ಎಂಬ ಅಪ್ರಯೋಜಕ ಹಣೆಪಟ್ಟಿ ಧರಿಸಿದ್ದ ಬಡಪಾಯಿಯಾಗಿದ್ದ. ಆತ ಹೋದಲ್ಲೆಲ್ಲಾ ಬೆರಳಣಿಕೆಯಷ್ಟು ಜನ ಸೇರುವುದನ್ನು ನೋಡಿ ಅಯ್ಯೋ ಅನ್ನಿಸುತ್ತಿತ್ತು. ಚುನಾವಣೆ ನಡೆದು ಫಲಿತಾಂಶ ಬಂದೇ ಬಂತು. ಫಲಿತಾಂಶ ನಿಮಗೇನೂ ಹೇಳಬೇಕಾಗಿಲ್ಲ ತಾನೇ? ನನ್ನ ಕ್ಷೇತ್ರದಲ್ಲಿ 100 ಶೇಕಡಾ ಮತ ಗಳಿಸಿ ನಾನು ಆಯ್ಕೆಯಾದೆ. 100 ಶೇಕಡಾ  ಹೇಗಂತೀರಾ?  ನನ್ನ ಎದುರಾಳಿಯಾದ ಪ್ರಾಮಾಣಿಕ ಅಭ್ಯರ್ಥಿಯ ಸ್ವಂತ ಮತವನ್ನೇ ನನ್ನ ಕಡೆಯವರು ಅವನಿಗಿಂತಲೂ ಮೊದಲೇ ಹೋಗಿ ಹಾಕಿ ಬಂದಿದ್ದರು. ಮತ್ತೆ ಮತ ಪೆಟ್ಟಿಗೆ ವಶ, ಬೂತ್ ವಶಗಳು ಇದ್ದದ್ದೇ ಅಲ್ವೇ! ಒಟ್ಟಿನಲ್ಲಿ ನಾನು ಆರಿಸಿ ಬಂದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊನೆಗೆ ನಾವೊಂದೆರಡ್ಮೂರು ಪಕ್ಷಗಳು ಒಟ್ಟು ಸೇರಿ ಚೌಚೌ ಸರಕಾರ ರಚಿಸಿದೆವು. ನನಗೂ ಒಂದು ಮಂತ್ರಿ ಪದವಿ ಸಿಕ್ತು. ಆದರೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಿಲ್ಲವೆಂದು ನಾನು ಸಿಡಿದೆದ್ದೆ. ರಾಜೀನಾಮೆ ನೀಡಲು ಮುಂದಾದೆ. ನಾನು ಹೊಸಬನಾದುದರಿಂದ, ನನ್ನತ್ತ ಯಾರೂ ಗಮನ ಹರಿಸುವುದಿಲ್ಲವೆಂದು ತಿಳಿದು ಬಂದಾಗ, ತೆಪ್ಪಗಾಗಿ 'ಸಿಕ್ಕಿದ್ದು ದೇವರ ಪುಣ್ಯ' ಎಂಬಂತೆ ಸ್ವೀಕರಿಸಿದೆ, ನಮ್ಮ ಪ್ರಧಾನಿಯವರಿಗೆ 'ಸಂಪೂರ್ಣ ಬೆಂಬಲ' ನೀಡುತ್ತೇವೆ ಎಂದು ಘೋಷಿಸಿ ಎಲ್ಲರಿಂದಲೂ ಶಹಭಾಸ್ ಪಡೆದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ನನ್ನೊಳಗಿನ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಮುಂದಿನ ಬಾರಿ ಇವರಿಗೆ ಬುದ್ಧಿ ಕಲಿಸೋಣವೆಂದುಕೊಂಡು "ಮುಂದಿನ ಚುನಾವಣೆಗೆ' ತಯಾರಿ ಮಾಡಿಕೊಳ್ಳುವತ್ತ ದೃಷ್ಟಿ ನೆಟ್ಟೆ. ಹೇಗೆ? ಈಗ ಸಿಕ್ಕಿರೋ ಸಚಿವಾಲಯದಿಂದ ಖಜಾನೆಯನ್ನು ದೋಚುವುದು. ಹೇಗಿದ್ದರೂ "ಹುಟ್ಟುಗುಣ ...' ಎಲ್ಲವನ್ನು ಜೇಬಿಗಿಳಿಸಿದೆ. ರಾಜಾರೋಷವಾಗಿ ಭಾಷಣ ಬಿಗಿದು, "ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ'' ಮುಂತಾದ "ನಿಕೃಷ್ಟ' ವಾಕ್ಯ ಪ್ರಯೋಗ ಮಾಡಿ ಜನರನ್ನು ಮರುಳುಗೊಳಿಸತೊಡಗಿದೆ. ಹೋದಲ್ಲೆಲ್ಲಾ ಹಾರ ಹಾಕುವಂತೆ, ಜಯಘೋಷ ಹಾಕುವಂತೆ, ಲಾರಿಗಟ್ಟಲೆ ಜನ ಸೇರುವಂತೆ ನನ್ನ ಚಮಚಾಗಳು ನೋಡಿಕೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನನ್ನ ಈ ಜನಪ್ರಿಯತೆಯನ್ನು ಕಂಡು ನಮ್ಮ ಪಕ್ಷಾಧ್ಯಕ್ಷ ಮೆತ್ತಗಾದ. ಮಾತ್ರವಲ್ಲ, ಇತರ ಪಕ್ಷಗಳವರೂ ನನ್ನತ್ತ ಕಣ್ಣು ಹಾಯಿಸತೊಡಗಿದರು. ಆದಾಗಲೇ ನಮ್ಮ ಸರಕಾರದಲ್ಲಿ ಭಿನ್ನಾಭಿಪ್ರಾಯಗಳೆದ್ದು ಸರಕಾರ ಉರುಳುವ ಹಂತಕ್ಕೆ ಬಂದಿತ್ತು. ಅನೇಕ ಪಕ್ಷಗಳವರು ನನ್ನನ್ನು ಸೆಳೆಯಲು ಯೋಚಿಸಿದರು. ಕೆಲವರು ನನಗೆ "ಗೌರವ"ಧನ ಕೊಡಲು ಬಂದರು. ಕೊಟ್ಟವರನ್ನೆಲ್ಲಾ ಚೆನ್ನಾಗಿ ಸತ್ಕರಿಸಿ ಅವರು ಹೇಳಿದ್ದಕ್ಕೆಲ್ಲಾ ಕೋಲೆ ಬಸವನಂತೆ ತಲೆ ಆಡಿಸಿ, ಸಿಕ್ಕಿದ್ದನ್ನೆಲ್ಲಾ ದೇವರ ಕಾರ್ಯವೆನ್ನುವಂತೆ ಜೇಬಿಗಿಳಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ನನ್ನ ಈ ಘನ ಕಾರ್ಯಗಳನ್ನು ತಿಳಿದ ನಮ್ಮ ಪಕ್ಷಾಧ್ಯಕ್ಷ ಅನೇಕರ ಒತ್ತಡಕ್ಕೆ ಮಣಿದು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ. ನಾನು ಸಿಡಿದೆದ್ದೆ. ಘರ್ಜಿಸಿದೆ. ರೋಷಗೊಂಡೆ. ಕೊನೆಗೆ ಇದ್ದೇ ಇದೆಯಲ್ಲ, ಪ್ರತ್ಯೇಕ ಪಕ್ಷ... ರಚಿಸಿದೆ. ಅದಕ್ಕೆ ಅಖಿಲ ಭಾರತ ಭ್ರಷ್ಟ ಪಕ್ಷ (ಅಭಾಭ್ರಪ) ಎಂದು ಸರ್ವತ್ರ ಪರಿಚಿತವಾಗಿರುವ ಪದವುಳ್ಳ ಹೆಸರಿಟ್ಟೆ. ಯಾಕೆಂದರೆ ಈ ದೇಶದಲ್ಲಿ 'ಭ್ರಷ್ಟ' ಎಂಬ ಶಬ್ದ ಒಂದು ಸಣ್ಣ ಮಗುವಿನ ಬಾಯಲ್ಲೂ ಕೇಳಿ ಬರುತ್ತಿರುತ್ತದೆ. ಅಷ್ಟು ಹಾಸುಹೊಕ್ಕಾಗಿದೆ ಆ ಶಬ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನನ್ನ ಉಚ್ಚಾಟನೆಯಾದ ಬಳಿಕ ಭಿನ್ನಮತ ತೀವ್ರವಾಗಿ ಸರಕಾರ ಉರುಳಿ ಬಿತ್ತು. ಇದರಲ್ಲಿ ನನ್ನ ಅಮೋಘ ಕೈವಾಡವಿತ್ತೆನ್ನುವುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಸರಿ, ಮತ್ತೆ ಚುನಾವಣೆ ಘೋಷಿಸಲಾಯಿತು. ನನ್ನ "ಮಾಮೂಲಿ ಪ್ರಕ್ರಿಯೆ'ಗಳಿಂದ ಮತ್ತೆ ಆರಿಸಿ ಬಂದೆ. ನನ್ನ ವಿರುದ್ಧ ನಿಂತವರೆಲ್ಲಾ ಠೇವಣಿ ಕಳಕೊಂಡರು. ಈ ಬಾರಿಯ ಚುನಾವಣೆಯಲ್ಲಿ ಅನೇಕ ಪಕ್ಷಗಳ ಸದಸ್ಯರು ಸ್ವರ್ಧಿಸಿದ್ದರು. ನನ್ನ ಅಭಾಭ್ರಪದ ಓರ್ವ ಕಿರಿಯ ಸದಸ್ಯನೂ ವಿಜಯಿಯಾದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಫಲಿತಾಂಶಗಳೆಲ್ಲಾ ಘೋಷಿಸಲ್ಪಟ್ಟವು. ಒಟ್ಟು 545 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಮಾತ್ರ ವಿಚಿತ್ರವಾಗಿತ್ತು. ಅಭಾಭ್ರಪದ ನಮ್ಮಿಬ್ಬರನ್ನು ಹೊರತುಪಡಿಸಿ ಇತರ 540 ಎಂ.ಪಿ.ಗಳೂ 543 ವಿವಿಧ ಪಕ್ಷಗಳಿಗೆ ಸೇರಿದವರು!</font><font  style='font-size:11pt; color:#000000'>ಈರ್ವರು ಸದ್ಯಸರುಳ್ಳ ಏಕೈಕ ಅತಿದೊಡ್ಡ ಪಕ್ಷದ ನಾಯಕನಾದ ನನ್ನನ್ನು ಸರಕಾರ ರಚಿಸುವಂತೆ ರಾಷ್ಟ್ರಪತಿಗಳು ಆಹ್ವಾನಿಸಿದರು. ಪತ್ರಿಕೆಗಳು ಏನೇನೆಲ್ಲಾ ಬರೆದವು. ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳದೆ ನಾನು, ಲಂಚದ ಹೊಳೆಯನ್ನೇ ಹರಿಸಿ, ಒಂದೇ ದಿನದಲ್ಲಿ ಬಹುಮತ ಸಾಬೀತು ಪಡಿಸಿದೆ. ಅದೂ 100 ಶೇಕಡಾ ಬಹುಮತ. ಇನ್ನು ಪ್ರತಿಪಕ್ಷದ ಪ್ರಶ್ನೆಯೇ ಏಳುವುದಿಲ್ಲ. ಅಂದಿನಿಂದ ಶುರುವಾಯಿತು ನನ್ನ ರಾಜ್ಯಭಾರ. ನಾನು ಪ್ರಧಾನಿಯಾದೆ. 544 ಎಂ.ಪಿ.ಗಳಿಗೆ 544 ಕ್ಯಾಬಿನೆಟ್ ದರ್ಜೆಯ ಸಚಿವ ಪದವಿಗಳನ್ನು (ಸೃಷ್ಟಿಸಿ) ನೀಡಲು ಯೋಚಿಸಿದೆ. ಪತ್ರಿಕೆಗಳು ಜಂಬೋ ಜೆಟ್ ಎಂದು ಬರೆದವು. ನಾನು ಕೇರ್ ಮಾಡಲಿಲ್ಲ. ನನ್ನ ಕ್ಯಾಬಿನೆಟ್ ಪ್ರಮಾಣ ವಚನ ಸ್ವೀಕಾರದ ಪ್ರಕ್ರಿಯೆಗಳಿಗೆ ಒಂದು ತಿಂಗಳೇ ಹಿಡಿಯಿತು. ಕೆಲವರು ಲಂಚದ ಹೆಸರಿನಲ್ಲಿ, ಕೆಲವರು ಭ್ರಷ್ಟಾಚಾರದ ಹೆಸರಿನಲ್ಲೆಲ್ಲಾ ಪ್ರತಿಜ್ಞಾವಿಧಿ ಸ್ವೀಕರಿಸಿ ತಮ್ಮ ನೈಪುಣ್ಯ ಮೆರೆದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ಪ್ರಥಮ ಸಮಸ್ಯೆ ಉಧ್ಬವಿಸಿತು. 544 ಸಚಿವರಿಗೆ ವಸತಿ ವ್ಯವಸ್ಥೆ... ಸರಿ, ದೆಹಲಿಯ ಎಲ್ಲಾ ಪ್ರತಿಷ್ಠಿತ ಬಂಗಲೆಗಳಲ್ಲಿರುವವರೆಲ್ಲಾ ತಮ್ಮ ಜಾಗ ಖಾಲಿ ಮಾಡಿ ಜೋಪಡಿಗಳಲ್ಲಿ ನೆಲೆಸುವಂತೆ ಅಜ್ಞೆ ಮಾಡಿದೆ. ಆ ಸ್ಥಳಗಳಲ್ಲಿ ಇದ್ದ ಬಂಗಲೆಗಳನ್ನು ಕೆಡಹಿ ತಮ್ಮ ಅಭಿರುಚಿಗನುಗುಣವಾದ ಬಂಗಲೆಗಳನ್ನು ಎಲ್ಲಾ ಸಚಿವರಿಗೆ ಸರಕಾರೀ ವೆಚ್ಚದಲ್ಲಿ ಕಟ್ಟಿಸುವುದಾಗಿ ಘೋಷಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪತ್ರಿಕೆಗಳು ಮತ್ತೆ ಬೊಬ್ಬಿಟ್ಟವು. ಕೂಡಲೇ ನಾನೊಂದು ತುರ್ತು ಪತ್ರಿಕಾ ಗೋಷ್ಠಿ ಕರೆದು, ಸಾಮಾಜಿಕ ನ್ಯಾಯಕ್ಕಾಗಿ, ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಇದನ್ನು ಮಾಡಲಾಯಿತೆಂದು ಹೇಳಿಕೆ ನೀಡಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಸರಕಾರೀ ಹಣ ಬಿಡುಗಡೆಯಾಗದೆ, ಸಚಿವರುಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮಾಧಾನಿಸಲೆತ್ನಿಸಿದೆ. ಊಹೂಂ...ಸಾಧ್ಯವಾಗಲಿಲ್ಲ. ಆಯ್ತು, ರಾಜೀನಾಮೆ ನೀಡಿ, ಹೊರ ನಡೆಯಿರಿ... ಘರ್ಜಿಸಿಯೇ ಬಿಟ್ಟೆ. ಈ ಔಷಧವು ಕೆಲಸ ಮಾಡಿತು. ಎಲ್ಲರೂ ದಿಢೀರನೇ ತೆಪ್ಪಗಾಗಿ ನಾನು ದಬಾಯಿಸಿದ್ದನ್ನೇ ಅಮೂಲ್ಯ ಸಲಹೆ ಅಂತ ಪರಿಗಣಿಸಿ ನನ್ನನ್ನು ಅಭಿನಂದಿಸಲಾರಂಭಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಲ್ಪ ದಿನಗಳಲ್ಲಿ, ಮತ್ತೆ ಆರಂಭವಾಯಿತು ಕಿರಿಕಿರಿ- ಖಾತೆ ಹಂಚಿಕೆಯ ಜಗಳ. ನಿಮಗೆ ವೈಭವೋಪೇತ ವಸತಿ ಕಲ್ಪಿಸಿ ಈಗಷ್ಟೇ ಸುಸ್ತಾಗಿದ್ದೇನೆ. ಇನ್ನೈದು ದಿನಗಳಲ್ಲಿ ನಿಮಗೆ ಬೇಕಾದ ಖಾತೆ ಕೊಡುತ್ತೇನೆ ಎಂದು ಭರವಸೆಯಿತ್ತೆ. ಭಾರೀ ಸಮಾಧಾನಗೊಂಡ ಅವರೆಲ್ಲಾ ಹೊರ ನಡೆದರು. ನಾನು ನಿಟ್ಟುಸಿರು ಬಿಟ್ಟೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ಖಾತೆಯನ್ನು ಹಂಚಲು ಆರಂಭಿಸಿದೆ. ನನ್ನ ಪಕ್ಷದ ಇನ್ನೋರ್ವ ಸದಸ್ಯನನ್ನು ಕರೆದು ಅವನಿಗೆ "ಭ್ರಷ್ಟಾಚಾರ, ನಯವಂಚನೆ ಮತ್ತು ನಿರಾಕರಣೆ"ಯ ಖಾತೆಯನ್ನು ನೀಡಿದೆ. ಅವ ಸಂತೋಷಗೊಂಡು ಮುನ್ನಡೆದ. ಆದರೆ ಇನ್ನೂ 543 ಖಾತೆಗಳನ್ನು ಹೇಗಪ್ಪಾ ತಯಾರಿಸುವುದು ಎಂದು ಆಲೋಚಿಸಿದಾಗ ನನ್ನ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ನಾನು ಅನೇಕ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದೆ. ಅಂತಾರಾಷ್ಟ್ರೀಯ ಭಾಷೆಯಾಗಿ ಕನ್ನಡದ ಮಹತ್ವ, ಮುಂದಿನ ಅಮೆರಿಕಾ ಚುನಾವಣೆಯಲ್ಲಿ ಒಬಾಮಾ ಜಯಗಳಿಸುವರೇ, ಚಾರ್ಲ್ಸ್ ಡಯಾನಾರ ಸಂಬಂಧದಿಂದ ಬ್ರಿಟನ್ ಜನತೆಯ ಮೇಲೆ ಪರಿಣಾಮ, ನ್ಯೂಜಿಲೆಂಡ್ ಏಕೆ ಅಷ್ಟೊಂದು ಸ್ವಚ್ಛವಾಗಿದೆ, ಜರ್ಮನಿಯ ರಾಷ್ಟ್ರ ಭಾಷೆಯಾಗಿ ಹಿಂದಿ ಏಕಾಗಬಾರದು, ಮಲೇಷ್ಯಾದಲ್ಲಿ ತಮಿಳು ಮಾತೃಭಾಷೆಯೇಕೆ ಮಾಡಬಾರದು, ಕೆನಡಾದಲ್ಲಿ ಉರ್ದು ಭಾಷೆ ಯಾಕೆ ಜಾರಿಗೆ ತರಬಾರದು, ಅಮೆರಿಕಾದ ರಸ್ತೆಗಳಲ್ಲಿ ಎತ್ತಿನ ಗಾಡಿಗಳು ಏಕಿಲ್ಲ, ಬ್ರಿಟಿಷ್ ಸಚಿವರುಗಳು ಜೋಪಡಿಗಳಲ್ಲೇಕೆ ವಾಸಿಸುವುದಿಲ್ಲ, ಆಸ್ಟ್ರೇಲಿಯನ್ನರು ಏಕೆ ಸೀರೆ ಉಡುವುದಿಲ್ಲ, ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟರೆ ಬಹುಸಂಖ್ಯಾತರಿಗೇನು ಕೇಡು? ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೇಗಿದೆ... ಪ್ರತಿಭಾವಂತರಿಗೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಯಾಕೆ ಕೊಡಬೇಕು?...ಇತ್ಯಾದಿ....ಇತ್ಯಾದಿಗಳ ಕುರಿತು ಪರಾಮರ್ಶಿಸಲು.ಒಟ್ಟು 543 ಸಮಿತಿಗಳನ್ನು ರಚಿಸಿದೆ. ಒಂದೊಂದು ಸಮಿತಿಗೆ ಒಂದೊಂದು ಸಚಿವರು ಮುಖ್ಯಸ್ಥರು, ಅವರ ಕುಟುಂಬಸ್ಥರೆಲ್ಲಾ ಆ ಸಮಿತಿಯ ಸದಸ್ಯರು. </font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾನು ಸಂಪುಟ ಸಭೆ ಕರೆದು ಘೋಷಿಸಿದೆ. ಮಿತ್ರರೇ, ನಿಮ್ಮನ್ನೂ ಈ ಎಲ್ಲಾ ಸಮಿತಿಗಳ ಮುಖಂಡರನ್ನಾಗಿಸಲಾಗಿದೆ. ನೀವು ಸಂಬಂಧಪಟ್ಟ ದೇಶಗಳಿಗೆ ಹೋಗಿ, ಈ ಬಗ್ಗೆ ಎಷ್ಟು ಬೇಕೋ ಅಷ್ಟು ಕಾಲ ಅಧ್ಯಯನ ನಡೆಸಿ ಬನ್ನಿ. ಎಲ್ಲರ ವೆಚ್ಚವನ್ನೂ, ಭಾರತದ ಘನ ಸರಕಾರ ಭರಿಸುತ್ತದೆ. ನೀವು ಹಿಂತಿರುಗಿ ಬಂದ ಬಳಿಕ ನಿಮ್ಮ ಖಾತೆಗಳನ್ನು ಸಿದ್ದಪಡಿಸುತ್ತೇನೆ. ಬೆಸ್ಟ್ ಆಫ್ ಲಕ್.... ಹೋಗಿ ಬನ್ನಿ.... ಅಂದು ಬಿಟ್ಟೆ. ಎಲ್ಲಾ ಸಚಿವರೂ ಹೊರಟು ಬಿಟ್ಟರು. ಇದಕ್ಕೆ ಸುಮಾರು ಎರಡು ತಿಂಗಳು ಹಿಡಿದವು. ಎಲ್ಲಾ ಫ್ಲೈಟ್‌ಗಳು ರಾತ್ರಿಯೇ ಇದ್ದುದರಿಂದ ನನಗಂತೂ ರಾತ್ರಿ ನಿದ್ದೆ ಇಲ್ಲ. ಹಗಲು ಕಚೇರಿಯಲ್ಲೋ, ಸಂಸತ್ತಿನಲ್ಲೋ.. ನಿದ್ದೆ ಮಾಡುತ್ತಿದ್ದೆ.</font><font  style='font-size:11pt; color:#000000'>ರಾಷ್ಟ್ರದ ಕಾರ್ಯಭಾರಗಳನ್ನು ನಾವಿಬ್ಬರೇ ನೋಡಿಕೊಳ್ಳತೊಡಗಿದ್ದೆವು. ಪತ್ರಿಕೆಗಳು ಖಂಡಿಸಿದವು, ಛೀಮಾರಿ ಹಾಕಿದವು, ಬೊಬ್ಬಿಟ್ಟವು. ಹುಚ್ಚ ಪ್ರಧಾನಿ ಎಂದು ಬಣ್ಣಿಸಿದವು. ರಾಷ್ಟ್ರದ ಖಜಾನೆಯನ್ನು ದೋಚಿ ಮಂತ್ರಿಗಳ ಮಜಾಕ್ಕಾಗಿ ಬಳಸಲಾಗುತ್ತದೆ ಎಂದು ದೂರಿದವು. ನನ್ನ "ನಿರಾಕರಣೆ ಸಚಿವ" ಪತ್ರಿಕಾ ಗೋಷ್ಠಿ ಕರೆದು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಆಶ್ಚರ್ಯಕರವಾಗಿ, ವಿದೇಶಕ್ಕೆ ತೆರಳಿದ್ದ ಸಚಿವರೆಲ್ಲಾ ನಾನಂದು ಕೊಂಡಿದ್ದಕ್ಕಿಂತ ಮೊದಲೇ ಬಂದು ಬಿಟ್ಟಿದ್ದರು. ಕಾರಣ? ತನ್ನ ವಿರೋಧಿ ತನಗಿಂತ ಬೇಗ ಬಂದು ಮಹತ್ವದ ಖಾತೆಯನ್ನು ಪಡೆದರೆ ಎಂಬ ಭಯ. ತಲೆನೋವು ಮತ್ತೆ ಆರಂಭವಾಯಿತು. ಕೆಲವು ಎಂ.ಪಿ.ಗಳು ಬಂದು, ಖಾತೆಗಳನ್ನು ನಿರ್ಧರಿಸಿದ್ದೀರೆ ಎಂದು ಕೇಳಿದರು. ನಾನು "ತುಂಬಾ ಬ್ಯುಸಿಯಾಗಿದ್ದುದರಿಂದ ಇನ್ನೂ ಇಲ್ಲ' ಎಂದುತ್ತರಿಸಿದೆ. ಶುರುವಾಯಿತು ಗದ್ದಲ, ಪ್ರತಿಭಟನೆ. "ಜನಪ್ರತಿನಿಧಿಗಳಿಗೆ ಸಚಿವ ಪದವಿ ಕೊಡದಿದ್ದುದರಿಂದ ರಾಷ್ಟ್ರವು ನರಳುತ್ತಿದೆ' ಎಂದು ಕೂಗಾಡಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾನು ನನ್ನ ತಾಳ್ಮೆಯ ಕಟ್ಟೆಯನ್ನು ಒಡೆಯಲು ಬಿಡಲಿಲ್ಲ. ಶಾಂತವಾಗಿ ಉತ್ತರಿಸಿದೆ. " ಓ.ಕೆ. ನಿಮಗೆ ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಹೋಗಬಹುದು'. ಈ ಮ್ಯಾಜಿಕ್ ವಾಕ್ಯ ಮತ್ತೆ ನನ್ನ ಸಹಾಯಕ್ಕೆ ಬಂತು. "ಹ್ಹೆ.....ಹ್ಹೆ....ಇಲ್ಲ ಮಹಾಸ್ವಾಮಿ, ಹಾಗೇನಿಲ್ಲ, ಭಾರತದ ಬಡ ಪ್ರಜೆಗಳು, ತಮ್ಮ ಪ್ರತಿನಿಧಿಗಳು ಸಚಿವರಾಗುವುದನ್ನು ನೋಡಲು ಬಯಸುತ್ತಾರೆ ಎಂಬುದನ್ನು ನಾವು ನಿಮಗೆ ತಿಳಿಸಲು ಬಂದೆವಷ್ಟೇ. ತಾವು ತಪ್ಪು ತಿಳಿದುಕೊಳ್ಳಬೇಡಿ' ಎನ್ನುತ್ತಾ ತಣ್ಣಗಾಗಿ ಬಾಲಮಡಚಿಕೊಂಡು ಹೋದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾನೀಗ ಕಠಿಣನಾದೆ. "ನೋಡಿ, ಇದೇ ಕೊನೆ, ಇದೇ ಆರಂಭ, ಇನ್ನೂ ಮುಂದೆ ಯಾರೂ ಚಕಾರವೆತ್ತಬಾರದು. ನೀವೆಲ್ಲರೂ ಖಾತೆಗಳಿಲ್ಲದ ಸಚಿವರಾಗಿಯೇ ಉಳಿಯಿವಿರಿ' ಎಂದು ಹೇಳಿ ನಾನೇ ಎಲ್ಲಾ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡು "ದೋಚ ತೊಡಗಿದ್ದೆ'. ಮಧ್ಯೆ ಮದ್ಯೆ ವಿದೇಶ ಪ್ರಯಾಣ. ನಮ್ಮ ಮನೆಯ ಟಾಮಿಯ ಕಾಲಿಗೆ ಮುಳ್ಳು ಚುಚ್ಚಿತು. ಚಿಕಿತ್ಸೆಗಾಗಿ ನಾನು ಸಂಸಾರ ಸಮೇತನಾಗಿ ಮೊಮ್ಮಕ್ಕಳು, ಮರಿಮಕ್ಕಳೊಂದಿಗೆ ಅಮೆರಿಕಕ್ಕೆ ಹೋಗಿ ಒಂದು ತಿಂಗಳು ಇದ್ದು ಬಂದೆ. ಇದಲ್ಲದೆ ನಮ್ಮ ಮನೆಯ ಪ್ರೀತಿಯ ಬೆಕ್ಕಿಗೂ ಸ್ವಲ್ಪ ಏಟಾಗಿದ್ದುದರಿಂದ ಚಿಕಿತ್ಸೆಗಾಗಿ ವಿದೇಶಕ್ಕೆ ರವಾನಿಸಿದೆ. ಆ ಬಳಿಕವೂ ವಿವಿಧ ಕಾರಣಗಳನ್ನೊಡ್ಡಿ ವಿ.ಪ್ರ. ಕೈಗೊಂಡು ಮಜಾ ಉಡಾಯಿಸಿದೆ.  ನನ್ನಪ್ಪನ ಗಂಟೇನೂ.......!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಷ್ಟೊತ್ತಿಗಾಗಲೇ ಭಾರತದಲ್ಲಿ ಭಿನ್ನಮತದ ಅಲೆಯೊಂದು ತೀವ್ರವಾಗಿತ್ತು. ನಾನು ಮಾಡಿದ್ದೆಲ್ಲಾ ಹಗರಣ ಎಂದು ಶುದ್ಧ ಆಪಾದನೆಗಳೊಂದಿಗೆ ಒಂದೊಂದೇ ಬೆಳಕಿಗೆ ಬರತೊಡಗಿದ್ದವು. ಮೇವು ತಿಂದ ಪ್ರಧಾನಿಗೆ ಧಿಕ್ಕಾರ, ಗೊಬ್ಬರ (ಯೂರಿಯಾ) ನುಂಗಿದ ಪ್ರಧಾನಿ, ಬೋಫೋರ್ಸ್ ಗನ್ ಕಬಳಿಸಿದ ಪ್ರಧಾನಿ, ಫೋರ್ಜರಿ ಮಾಡಿದ ಪ್ರಧಾನಿ, 1 ಲಕ್ಷ ಡಾಲರ್ ವಂಚಕ ಪ್ರಧಾನಿ, ದೇಶವನ್ನು ಲೂಟಿಗೈದ ಪ್ರಧಾನಿ, ಹವಾಲಾ ಜಾಲದಲ್ಲಿ ಭಾಗಿಯಾಗಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಭ್ರಷ್ಟ ಪ್ರಧಾನಿ, ಲಂಚ ನೀಡಿ ಸಂಸದರನ್ನು ಖರೀದಿಸಿದ ಪ್ರಧಾನಿ ಎಂಬಿತ್ಯಾದಿ ಸಹಸ್ರನಾಮಾರ್ಚನೆ ಅಲ್ಲಲ್ಲಿ ಕೇಳಿ ಬರುತ್ತಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಾಗಲೇ, ಸಿಬಿಐ ತನಿಖೆ ಆರಂಭಿಸಿತ್ತು. ಒಂದು ಪ್ರಕರಣದಲ್ಲಂತೂ ನನ್ನನ್ನು ಬಂಧಿಸುವವರೆಗೆ ಮುಂದುವರಿದ ಅದರ ನಿರ್ದೇಶಕನನ್ನು ಎತ್ತಂಗಡಿ ಮಾಡಿಸಿದೆ. ನನ್ನ ಅಪ್ತನೋರ್ವನನ್ನು ಆ ಸ್ಥಾನಕ್ಕೆ ನೇಮಿಸಿದೆ. ರಾಜೀನಾಮೆಗೆ ಎಲ್ಲೆಲ್ಲಿಂದಲೂ ಆಗ್ರಹ ಕೇಳಿ ಬರುತ್ತಿತ್ತು. ನಾನಂತೂ ದೃಢವಾಗಿ "ಸತ್ತ ಮೇಲೆ ಖಂಡಿತವಾಗಿಯೂ ರಾಜೀನಾಮೆ ನೀಡುವೆ, ಅಲ್ಲಿ ತನಕ ವಿಶ್ವವೇ ಎದುರಾದರೂ ರಾಜೀನಾಮೆ ನೀಡಲಾರೆ, ಮಾತ್ರವಲ್ಲ ಬಂಧನವಾದರೂ ಜೈಲಿನಿಂದಲೇ ಆಡಳಿತ ನಡೆಸುವೆ'ನೆಂದು ಘಂಟಾಘೋಷವಾಗಿ ಸಾರಿದೆ. ಅದಾಗಲೇ ನನ್ನ ಆಡಳಿತಾವಧಿಯ ಕೊನೆಯ ವರ್ಷದಲ್ಲಿದ್ದೆ. ನನ್ನ"ಸಾಧನೆಯ ಸಮಾವೇಶ'ವೊಂದನ್ನು ಮಾಡಲು ಉದ್ದೇಶಿಸಿದೆ. ಮಿಲಿಯಗಟ್ಟಲೆ "ನನ್ನದಲ್ಲದ' ಹಣ ನೀರಿನಂತೆ ಖರ್ಚಾಯಿತು. ಆದರೆ ಆ ಸಮಾವೇಶದಲ್ಲಿ ಮಳೆ ಜೋರಾಗಿ ಬರುತ್ತಿತ್ತು...</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಖಕ್ಕೆ ಒಂದು ಬಕೆಟು ನೀರು ರಭಸದಿಂದ ಅಪ್ಪಳಿಸಿದಂತಾಯಿತು. "ದಿನಾ ಏರುತ್ತಿರುವ ಬೆಲೆಗಳಿಂದಾಗಿ ಒಂದು ತುತ್ತು ಅನ್ನ ಮಾಡೋಕೂ ಅಕ್ಕಿ ಇಲ್ಲ. ಇದೊಂದು ಸತ್ತ ಹೆಣ ಬಿದ್ಕೊಂಡ್ಹಾಗೆ ಬಿದ್ದಿದೆ. ಮನೆಯವರ ಪರಿಜ್ಞಾನ ಒಂಚೂರೂ ಇಲ್ಲ. ಹೋಗ್ರಿ, ತಗೊಳ್ಳಿ ನನ್ನ ಕರಿಮಣಿ. ಅದನ್ನು ಮಾರಿ ಅದಕ್ಕೆ ಸಿಗುವ "ಅರ್ಧ ಕಿಲೋ' ಅಕ್ಕಿಯನ್ನು ತನ್ನಿ. ಇವತ್ತಾದ್ರೂ ಊಟ ಮಾಡೋಣ' ಎಂದು ವಟಗುಟ್ಟುವುದು ಕೇಳಿ ನಿದ್ರಾಲೋಕದಿಂದ ಈ ಲೋಕಕ್ಕೆ ಬಂದೆ. ಹೆಂಡ್ತಿ ಮುಖ ನೋಡಲಾರ್ದೆ ತಲೆತಗ್ಗಿಸಿಕೊಂಡು ನಮ್ಮ ಸ್ವಾತಂತ್ರ್ಯದ ಮಹೋತ್ಸವ ಸಂದರ್ಭದಲ್ಲಿ ಬಡ ಭಾರತೀಯನ ಸ್ಥಿತಿ ನೆನೆಯುತ್ತಾ, ಒಂದೆರಡು ಹನಿ ಕಣ್ಣೀರಿನೊಂದಿಗೆ ಮುಖಕ್ಕೆ ನೀರು ಹಚ್ಚಿಕೊಂಡು ಒಂದು ಚೀಲದ ತುಂಬಾ ಇದ್ದ ಬದ್ದ ನೋಟುಗಳನ್ನೆಲ್ಲಾ ತುಂಬಿಕೊಂಡು, ಜೇಬು ತುಂಬಾ (!) ಅಕ್ಕಿ ತರಲು ಅಂಗಡಿಯತ್ತ ಧಾವಿಸಿದೆ.</font>]]></content:encoded>
      <pubDate>Thu, 14 Aug 2008 18:06:31 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ರವೀಂದ್ರನಾಥ ಠಾಗೋರರು ಕೊಟ್ಟ ರಾಷ್ಟ್ರಗೀತೆ]]></title>
      <link>https://kannada.webdunia.com/article/independence-day-article/ರವೀಂದ್ರನಾಥ-ಠಾಗೋರರು-ಕೊಟ್ಟ-ರಾಷ್ಟ್ರಗೀತೆ-108081400030_1.htm</link>
      <guid>https://kannada.webdunia.com/article/independence-day-article/ರವೀಂದ್ರನಾಥ-ಠಾಗೋರರು-ಕೊಟ್ಟ-ರಾಷ್ಟ್ರಗೀತೆ-108081400030_1.htm</guid>
      <media:thumbnail url="http:"/>
      <image>http:</image>
      <description><![CDATA[ತಮ್ಮ ಕೃತಿ "ಗೀತಾಂಜಲಿ"ಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಯುಳ್ಳ ಕವಿ ರವೀಂದ್ರ ನಾಥ ಠಾಗೋರ್ (ಮೇ 7, 1861 – ಆಗಸ್ಟ್ 7, 1941) ಅವರು ರಚಿಸಿದ ರಾಷ್ಟ್ರಗೀತೆ ಇಂತಿದೆ:]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814030_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ತಮ್ಮ ಕೃತಿ "ಗೀತಾಂಜಲಿ"ಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಯುಳ್ಳ ಕವಿ ರವೀಂದ್ರ ನಾಥ ಠಾಗೋರ್ (ಮೇ 7, 1861 - ಆಗಸ್ಟ್ 7, 1941) ಅವರು ರಚಿಸಿದ ರಾಷ್ಟ್ರಗೀತೆ ಇಂತಿದೆ:</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜನ ಗಣ ಮನ ಅಧಿನಾಯಕ ಜಯ ಹೇ</font><br/><font  style='font-size:11pt; color:#000000'>ಭಾರತ ಭಾಗ್ಯ ವಿಧಾತಾ</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪಂಜಾಬ ಸಿಂಧು ಗುಜರಾತ ಮರಾಠಾ</font><br/><font  style='font-size:11pt; color:#000000'>ದ್ರಾವಿಡ ಉತ್ಕಲ ವಂಗ</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಂಧ್ಯ ಹಿಮಾಚಲ ಯಮುನಾ ಗಂಗಾ</font><br/><font  style='font-size:11pt; color:#000000'>ಉಚ್ಛಲ ಜಲಧಿ ತರಂಗ</font><br/><font  style='font-size:11pt; color:#000000'></font><br/><font  style='font-size:11pt; color:#000000'>ತವ ಶುಭ ನಾಮೇ ಜಾಗೇ</font><br/><font  style='font-size:11pt; color:#000000'>ತವ ಶುಭ ಆಶಿಶ ಮಾಗೇ</font><br/><font  style='font-size:11pt; color:#000000'>ಗಾಹೇ ತವ ಜಯ ಗಾಥಾ</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜನ ಗಣ ಮಂಗಲ ದಾಯಕ ಜಯ ಹೇ</font><br/><font  style='font-size:11pt; color:#000000'>ಭಾರತ ಭಾಗ್ಯ ವಿಧಾತಾ</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಯ ಹೇ ಜಯ ಹೇ ಜಯ ಹೇ</font><br/><font  style='font-size:11pt; color:#000000'>ಜಯ ಜಯ ಜಯ ಜಯ ಹೇ||</font>]]></content:encoded>
      <pubDate>Thu, 14 Aug 2008 18:01:28 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಭಾರತೀಯರನ್ನು ಒಗ್ಗೂಡಿಸಿದ ಗೀತೆ: ವಂದೇ ಮಾತರಂ]]></title>
      <link>https://kannada.webdunia.com/article/independence-day-article/ಭಾರತೀಯರನ್ನು-ಒಗ್ಗೂಡಿಸಿದ-ಗೀತೆ-ವಂದೇ-ಮಾತರಂ-108081400031_1.htm</link>
      <guid>https://kannada.webdunia.com/article/independence-day-article/ಭಾರತೀಯರನ್ನು-ಒಗ್ಗೂಡಿಸಿದ-ಗೀತೆ-ವಂದೇ-ಮಾತರಂ-108081400031_1.htm</guid>
      <media:thumbnail url="http:"/>
      <image>http:</image>
      <description><![CDATA[ಸ್ವಾತಂತ್ರ್ಯ ಆಂದೋಲನ ಕಾಲದಲ್ಲಿ ಭಾರತೀಯರನ್ನು ಒಗ್ಗೂಡಿಸಿದ ರಾಷ್ಟ್ರೀಯ ಗಾನ "ವಂದೇ ಮಾತರಂ". ಪಶ್ಚಿಮ ಬಂಗಾಳದ ಕವಿ ಬಂಕಿಮಚಂದ್ರ ಚಟರ್ಜಿಯವರು ರಚಿಸಿದ ಈ ಕೃತಿಯು ರವೀಂದ್ರನಾಥ ಠಾಗೋರರ "ಜನಗಣಮನ"ದಷ್ಟೇ ಮಾನ್ಯತೆ ಪಡೆದಿದೆ.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814031_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ಸ್ವಾತಂತ್ರ್ಯ ಆಂದೋಲನ ಕಾಲದಲ್ಲಿ ಭಾರತೀಯರನ್ನು ಒಗ್ಗೂಡಿಸಿದ ರಾಷ್ಟ್ರೀಯ ಗಾನ "ವಂದೇ ಮಾತರಂ". ಪಶ್ಚಿಮ ಬಂಗಾಳದ ಕವಿ ಬಂಕಿಮಚಂದ್ರ ಚಟರ್ಜಿಯವರು ರಚಿಸಿದ ಈ ಕೃತಿಯು ರವೀಂದ್ರನಾಥ ಠಾಗೋರರ "ಜನಗಣಮನ"ದಷ್ಟೇ ಮಾನ್ಯತೆ ಪಡೆದಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಂಕಿಮರ "ಆನಂದ ಮಠ" ಎಂಬ ಮಹಾ ಕೃತಿಯ ಭಾಗವಾಗಿತ್ತು ಈ ಗೀತೆ. ಅದು ಇಂತಿದೆ:</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ವಂದೇ ಮಾತರಂ </font><font style=' color:#000000;'></font><br/><font  style='font-size:11pt; color:#000000'></font><br/><font  style='font-size:11pt; color:#000000'>ವಂದೇ ಮಾತರಂ!</font><br/><font  style='font-size:11pt; color:#000000'>ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!</font><br/><font  style='font-size:11pt; color:#000000'>ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದುಲ ಶೋಭಿನಾಂ</font><br/><font  style='font-size:11pt; color:#000000'>ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ,</font><br/><font  style='font-size:11pt; color:#000000'>ದ್ವಿ ಕೋಟಿ ಕೋಟಿ ಭುಜೈರ್ದೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ</font><br/><font  style='font-size:11pt; color:#000000'>ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!</font><br/><font  style='font-size:11pt; color:#000000'></font><br/><font  style='font-size:11pt; color:#000000'>ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ</font><br/><font  style='font-size:11pt; color:#000000'>ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ</font><br/><font  style='font-size:11pt; color:#000000'></font><br/><font  style='font-size:11pt; color:#000000'>ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ</font><br/><font  style='font-size:11pt; color:#000000'>ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ</font><br/><font  style='font-size:11pt; color:#000000'>ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!</font>]]></content:encoded>
      <pubDate>Thu, 14 Aug 2008 18:00:47 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಬ್ರಿಟಿಷರ ನಿದ್ದೆಗೆಡಿಸಿದ್ದ 'ಉಕ್ಕಿನ ಮನುಷ್ಯ' - ಪಟೇಲ್]]></title>
      <link>https://kannada.webdunia.com/article/independence-day-article/ಬ್ರಿಟಿಷರ-ನಿದ್ದೆಗೆಡಿಸಿದ್ದ-ಉಕ್ಕಿನ-ಮನುಷ್ಯ-ಪಟೇಲ್-108081400039_1.htm</link>
      <guid>https://kannada.webdunia.com/article/independence-day-article/ಬ್ರಿಟಿಷರ-ನಿದ್ದೆಗೆಡಿಸಿದ್ದ-ಉಕ್ಕಿನ-ಮನುಷ್ಯ-ಪಟೇಲ್-108081400039_1.htm</guid>
      <media:thumbnail url="http:"/>
      <image>http:</image>
      <description><![CDATA[ಹಲವಾರು ಮಹಾನುಭಾವರ ತ್ಯಾಗ ಬಲಿದಾನಗಳ ಮೂಲಕ ಗಳಿಸಿದ ಭಾರತದ ಸ್ವಾತಂತ್ರ್ಯದ ಇತಿಹಾಸ ರೋಚಕವಾದದ್ದು, ದೇಶ ಸ್ವಾತಂತ್ರ್ಯ ಗಳಿಸುವ ನಿಟ್ಟಿನಲ್ಲಿ ಚಳುವಳಿಗೆ ಧುಮುಕಿ ಹೋರಾಟ ನಡೆಸಿದವರು ಅಸಂಖ್ಯಾತ ಮಂದಿ. ಅವರಲ್ಲಿ "ಭಾರತದ ಉಕ್ಕಿನ ಮನುಷ್ಯ" ಎಂದೇ ಕರೆಸಿಕೊಂಡ ವಲ್ಲಭಭಾಯಿ ಪಟೇಲ್ ಕೂಡಾ ಪ್ರಮುಖರು.]]></description>
      <content:encoded><![CDATA[<font  style='font-size:11pt; color:#0000FF'><b>ರಾಜೇಶ್ ಪಾಟೀಲ್ </font><font style=' color:#000000;'></b></font><br/><font  style='font-size:11pt; color:#000000'>ಹಲವಾರು ಮಹಾನುಭಾವರ ತ್ಯಾಗ ಬಲಿದಾನಗಳ ಮೂಲಕ ಗಳಿಸಿದ ಭಾರತದ ಸ್ವಾತಂತ್ರ್ಯದ ಇತಿಹಾಸ ರೋಚಕವಾದದ್ದು, ದೇಶ ಸ್ವಾತಂತ್ರ್ಯ ಗಳಿಸುವ ನಿಟ್ಟಿನಲ್ಲಿ ಚಳುವಳಿಗೆ ಧುಮುಕಿ ಹೋರಾಟ ನಡೆಸಿದವರು ಅಸಂಖ್ಯಾತ ಮಂದಿ. ಅವರಲ್ಲಿ "ಭಾರತದ ಉಕ್ಕಿನ ಮನುಷ್ಯ" ಎಂದೇ ಕರೆಸಿಕೊಂಡ ವಲ್ಲಭಭಾಯಿ ಪಟೇಲ್ ಕೂಡಾ ಪ್ರಮುಖರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗುಜರಾತ್‌ನ ನಡಿಯಾಡ್ ಗ್ರಾಮದಲ್ಲಿ ಝವೇರ್‌ ಭಾಯಿ ಮತ್ತು ಲಾಡ್‌ಬಾಯಿ ದಂಪತಿಗಳ ಸುಪುತ್ರರಾಗಿ ರೈತರ ಕುಟುಂಬದಲ್ಲಿ ಜನಿಸಿದ ಅವರು, 1917ರಲ್ಲಿ ಗೆಳೆಯರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಹಮದಾಬಾದ್‌ನ ನೈರ್ಮಲ್ಯ ಆಯಕ್ತರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ನಾಗರಿಕ ಸಮಸ್ಯೆಗಳ ಕುರಿತಂತೆ ಬ್ರಿಟಿಷ್ ಅಧಿಕಾರಿಗಳ ಮಧ್ಯೆ ಕೆಲ ಬಾರಿ ವಾಗ್ವಾದ ನಡೆಯುತ್ತಿತ್ತು. ಆದರೆ ವಲ್ಲಭಭಾಯಿಯವರಿಗೆ ರಾಜಕೀಯದಲ್ಲಿ ಇಷ್ಟವಿರಲಿಲ್ಲ. ಚಂಪಾರಣ್ಯದಲ್ಲಿ ಗಾಂಧಿ ನೇತೃತ್ವದಲ್ಲಿ  ರೈತರ ಪರವಾಗಿ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟದಲ್ಲಿ ಜಯ ಸಾಧಿಸಿದ ರೀತಿಯನ್ನು ಕಂಡು ಪ್ರಭಾವಿತರಾದ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ಚಳುವಳಿಗೆ ಧುಮುಕುವುದಾಗಿ ಘೋಷಿಸಿದರು. ಪ್ರಪ್ರಥಮ ಬಾರಿಗೆ 1917ರಲ್ಲಿ ಗುಜರಾತ್‌ನ ಬೋರ್ಸಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಲ್ಲಭಭಾಯಿ ಪಟೇಲರು, ರಾಷ್ಟ್ರಾದ್ಯಂತ ಗಾಂಧೀಜಿಯವರ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಮನವಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814039_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> '<font  style='font-size:11pt; color:#000000'>ಕರ ನಿರಾಕರಣೆ' ಆಂದೋಲನದ ಅಂಗವಾಗಿ, ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಖೇಡಾ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ತೆರಿಗೆ ನೀಡುವುದನ್ನು ತಿರಸ್ಕರಿಸುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಕೆಂಡಾಮಂಡಲವಾದ ಸರಕಾರ ಪೊಲೀಸರನ್ನು ಹಲವು ತಂಡಗಳಾಗಿ ರಚಿಸಿ ಗ್ರಾಮಸ್ಥರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿತು. ಸರಕಾರ ಸಾವಿರಾರು ರೈತರನ್ನು ಬಂಧಿಸಿತು. ಇದರಿಂದ ದೇಶಾದ್ಯಂತ ಅನುಕಂಪದ ಅಲೆ ಮೂಡಿ ಬಂದ ಹಿನ್ನೆಲೆಯಲ್ಲಿ ಸರಕಾರ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿ ರೈತರ ಒಂದು ವರ್ಷದ ತೆರಿಗೆಯನ್ನು ರದ್ದುಗೊಳಿಸಿತು. ಈ ಘಟನೆಯಿಂದಾಗಿ ಗುಜರಾತ್‌ನಾದ್ಯಂತ ವಲ್ಲಭಭಾಯಿ ಪಟೇಲ್ ಹೀರೋ ಆಗಿ ಕಂಗೊಳಿಸಿ ದೇಶದೆಲ್ಲೆಡೆ ಹೆಸರುವಾಸಿಯಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದ ಪಟೇಲ್ 3 ಲಕ್ಷ ಕಾರ್ಯಕರ್ತರ ಪಡೆಯನ್ನು ಸಿದ್ಧಗೊಳಿಸಿ 1.5 ಮಿಲಿಯನ್ ಹಣವನ್ನು ಸಂಗ್ರಹಿಸಿದರು. ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿ ತಾವು ಸ್ವತಃ ಖಾದಿ ಬಟ್ಟೆಗೆ ಮಾರು ಹೋದರು.</font><br/><font  style='font-size:11pt; color:#000000'></font><br/>1923<font  style='font-size:11pt; color:#000000'>ರಲ್ಲಿ ಗಾಂಧೀಜಿಯವರು ಕಾರಾಗೃಹದಲ್ಲಿದ್ದಾಗ ನಾಗ್‌ಪುರದಲ್ಲಿ ನಡೆಯುವ ಸತ್ಯಾಗ್ರಹದ ಮುಖಂಡತ್ವವನ್ನು ವಹಿಸುವಂತೆ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಸಾವಿರಾರು ಬೆಂಬಲಿಗರ ಪಡೆಯನ್ನು ರಚಿಸಿ ಹೋರಾಟಕ್ಕಿಳಿದ ವಲ್ಲಭಭಾಯಿ ಪಟೇಲ್ ಬ್ರಿಟಿಷರ ನಿದ್ದೆಗೆಡಿಸಿದರು.</font><br/><font  style='font-size:11pt; color:#000000'></font><br/>1937<font  style='font-size:11pt; color:#000000'>ರಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್‌ರನ್ನು ಸಂಸದೀಯ ಉಪಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆ ಅವರ ಮೇಲೆ ಬಿದ್ದಿತು. ಸರ್ದಾರ್ ಪಟೇಲ್‌ರ ಶ್ರಮ ಹಾಗೂ ದೂರದೃಷ್ಟಿಯಿಂದಾಗಿ ಕಾಂಗ್ರೆಸ್ ಬಲಿಷ್ಠವಾಗುತ್ತಾ ಸಾಗಿತು.</font><br/><font  style='font-size:11pt; color:#000000'></font><br/>1942<font  style='font-size:11pt; color:#000000'>ರ ಅಗಸ್ಟ್ 8 ರಂದು 'ಕ್ವಿಟ್ ಇಂಡಿಯಾ' ಮಸೂದೆಯನ್ನು ಜಾರಿಗೊಳಿಸಲಾಯಿತು. ಈ ಹೋರಾಟದಲ್ಲಿ  ಬ್ರಿಟನ್ ಸರಕಾರವು ಸರ್ದಾರ್ ಪಟೇಲ್, ಜವಾಹರ್ ಲಾಲ್ ನೆಹರು, ಗಾಂಧೀಜಿ ಮತ್ತಿತರ ಕಾಂಗ್ರೆಸ್ ನಾಯಕರನ್ನು  ಬಂಧಿಸಿತು.</font><br/><font  style='font-size:11pt; color:#000000'></font><br/>1946<font  style='font-size:11pt; color:#000000'>ರ ಮಾರ್ಚ್ 23ರಂದು ಬ್ರಿಟನ್‌ನ ಲೇಬರ್ ಪಕ್ಷದ ಪ್ರಧಾನ ಮಂತ್ರಿ ಭಾರತಕ್ಕೆ ಭೇಟಿ ನೀಡಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಭರವಸೆಯನ್ನು ನೀಡಿದರು. ಮಧ್ಯಂತರ ಸರಕಾರ ರಚಿಸಲು  ಚುನಾವಣೆಗಳು ನಡೆದು ಕಾಂಗ್ರೆಸ್ ಪರಿಪೂರ್ಣ ಬಹುಮತ ಪಡೆದು ಜವಾಹರಲಾಲ್ ನೆಹರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಹಾಗೂ ವಾರ್ತಾ ಮತ್ತು ಮಾಹಿತಿ ಖಾತೆ ಸಚಿವರಾಗಿ ಪಟೇಲ್ ಕಾರ್ಯನಿರ್ವಹಿಸಿದರು. ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಿಸಿದ ನಂತರ ಅಗಸ್ಟ್ 15, 1947 ರಂದು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸರ್ದಾರ್ ಪಟೇಲ್‌ ಗೃಹ ಹಾಗೂ ವಾರ್ತಾ - ಮಾಹಿತಿ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಕೋಮುವಾದಿಗಳು ಹಾಗೂ ದೇಶದ್ರೋಹಿಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದಾಗ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಸೆರೆಮನೆಗೆ ಅಟ್ಟಿದರು. ಹತ್ತು ಸಾವಿರ ಸಂಖ್ಯೆಯಲ್ಲಿರುವ ಮುಸ್ಲಿಮರು ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿದಾಗ  ಸೇನೆಯನ್ನು ಬಳಸಿ ದೊಂಬಿಯನ್ನು ಹತ್ತಿಕ್ಕಿದರು. ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಗಲು ಹೈದ್ರಾಬಾದ್ ನಿಜಾಮ ನಿರಾಕರಿಸಿದ ಹಿನ್ನೆಲೆಯಲ್ಲಿ ಹೈದ್ರಾಬಾದ್‌ಗೆ ಸೇನೆಯನ್ನು ನುಗ್ಗಿಸಿ ಒಂದೇ ರಾತ್ರಿಯಲ್ಲಿ  ಯಾವುದೇ ಹಿಂಸಾಚಾರವಿಲ್ಲದೇ ನಿಜಾಮರು ಶರಣಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಷ್ಟ್ರ ನಿರ್ಮಾಣಕ್ಕಾಗಿ ಭಾರತೀಯ ಅಡಳಿತಾತ್ಮಕ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಮತ್ತು  ಕೇಂದ್ರ ಸೇವೆಗಳನ್ನು ಆರಂಭಿಸಿ ಉಕ್ಕಿನ ಮನುಷ್ಯರೆಂದು ಖ್ಯಾತಿಪಡೆದ ಸರ್ದಾರ್ ವಲ್ಲಭಭಾಯಿ ಪಟೇಲರು 1950ರಲ್ಲಿ ನಿಧನ ಹೊಂದಿದರು. ಆದರೆ ಅವರ ಧೈರ್ಯ ಸಾಹಸಗಳು ಜನಮಾನಸದಲ್ಲಿ ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ.</font>]]></content:encoded>
      <pubDate>Thu, 14 Aug 2008 17:57:49 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಭಯ-ಆತಂಕಗಳ ನಡುವೆ 'ಸ್ವಾತಂತ್ರ್ಯ' ಸಂಭ್ರಮ!]]></title>
      <link>https://kannada.webdunia.com/article/independence-day-article/ಭಯ-ಆತಂಕಗಳ-ನಡುವೆ-ಸ್ವಾತಂತ್ರ್ಯ-ಸಂಭ್ರಮ-108081400048_1.htm</link>
      <guid>https://kannada.webdunia.com/article/independence-day-article/ಭಯ-ಆತಂಕಗಳ-ನಡುವೆ-ಸ್ವಾತಂತ್ರ್ಯ-ಸಂಭ್ರಮ-108081400048_1.htm</guid>
      <media:thumbnail url="http:"/>
      <image>http:</image>
      <description><![CDATA[ಸ್ವತಂತ್ರ ಭಾರತ 61ರ ಸ್ವಾತಂತ್ರ್ಯೋತ್ಸವದ ಗುಂಗಿನಲ್ಲಿದ್ದರೆ, ದೇಶದ ಮಹಾನಗರ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳ, ದೇವಾಲಯಗಳ ಪರಿಸರದಲ್ಲಿ ಆತಂಕದ ಛಾಯೆ ಮಡುಗಟ್ಟಿದೆ. ಆಂಧ್ರಪ್ರದೇಶದ ತಿರುಪತಿ, ಕಾಶಿ ವಿಶ್ವನಾಥ ದೇವಾಲಯ, ತಮಿಳುನಾಡಿನ ಮಧುರೈ ಮೀನಾಕ್ಷಿ, ತಾಜ್ ಮಹಲ್, ಕುತುಬ್ ಮೀನಾರ್ ಒಂದೇ ಎರಡೇ... ...]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814048_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಸ್ವತಂತ್ರ ಭಾರತ 61ರ ಸ್ವಾತಂತ್ರ್ಯೋತ್ಸವದ ಗುಂಗಿನಲ್ಲಿದ್ದರೆ, ದೇಶದ ಮಹಾನಗರ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳ, ದೇವಾಲಯಗಳ ಪರಿಸರದಲ್ಲಿ ಆತಂಕದ ಛಾಯೆ ಮಡುಗಟ್ಟಿದೆ. ಆಂಧ್ರಪ್ರದೇಶದ ತಿರುಪತಿ, ಕಾಶಿ ವಿಶ್ವನಾಥ ದೇವಾಲಯ, ತಮಿಳುನಾಡಿನ ಮಧುರೈ ಮೀನಾಕ್ಷಿ, ತಾಜ್ ಮಹಲ್, ಕುತುಬ್ ಮೀನಾರ್ ಒಂದೇ ಎರಡೇ... ಎಲ್ಲೆಡೆ ಭಯ ಮಿಶ್ರಿತ ವಾತಾವರಣ ತುಂಬಿಕೊಂಡಿದೆ!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಾದರೂ ಸ್ವತಂತ್ರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂತಸವನ್ನು ಹಂಚಿಕೊಳ್ಳೋಣ, ಇಲ್ಲವೇ ದೇವಾಲಯಕ್ಕೆ ಹೋಗಿ ಹರಕೆ ಸಲ್ಲಿಸಿ ಬರೋಣ ಎಂದುಕೊಂಡಿದ್ದರೆ, ಭಯೋತ್ಪಾದನೆ, ಬಾಂಬ್ ಸ್ಫೋಟದ ಭಯ ಎಲ್ಲರನ್ನೂ ಆತಂಕದ ಮಡಿಲಿಗೆ ದೂಡಿರುವುದು ಸ್ವತಂತ್ರ ಭಾರತದ ದುರಂತವಲ್ಲದೆ ಇನ್ನೇನು?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂದು ಯಾವುದೇ ಜನನಿಬಿಡ ಪ್ರದೇಶ, ಪಾರ್ಕ್, ಬೀಚ್ ಪ್ರದೇಶಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮುಕ್ತವಾಗಿ ಓಡಾಡದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ ಇಲ್ಲೆಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ಅಲ್ಲಿಯೂ ಉಸಿರು ಗಟ್ಟಿಯಾಗಿ ಬಿಡುವಂತಿಲ್ಲ, ದೊಡ್ಡ ಬ್ಯಾಗ್ ಒಯ್ಯುವಂತಿಲ್ಲ, ಅನುಮಾನ ಬಂದರೆ ಮತ್ತಷ್ಟು ಗೋಳು... ಹೀಗೆ ಒಂದರ್ಥದಲ್ಲಿ ಭಯದ ನೆರಳಲ್ಲೇ ಓಡಾಡಬೇಕಾದ ಸ್ಥಿತಿ ಬಂದೊದಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಡತನ, ಅನಕ್ಷರತೆ, ಶೌಚಾಲಯ ಸಮಸ್ಯೆಗಳ ಜೊತೆ, ಜೊತೆಗೆ ಭಯೋತ್ಪಾದನೆ ಇಂದು ಜಗತ್ತಿನಾದ್ಯಂತ ಪ್ರಬಲವಾಗಿ ತಳವೂರುತ್ತಿದ್ದರೆ, ಅದರಲ್ಲಿ ಭಾರತವೂ ಸೇರ್ಪಡೆಗೊಂಡಿದೆ. ಇತ್ತೀಚೆಗಷ್ಟೇ ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎಲ್ಲೆಡೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜೈಲಿನೊಳಗಡೆ ಇದ್ದ ಕೈದಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಮಾರಂಭದಲ್ಲಿ ಪಾಲ್ಗೊಳ್ಳಬಹುದೇ ವಿನಃ ಅವರನ್ನು ಬಂಧಮುಕ್ತಗೊಳಿಸುವುದಿಲ್ಲ, ಇದೀಗ ಸ್ವತಂತ್ರ ಭಾರತೀಯರ ಸ್ಥಿತಿಯೂ ಹಾಗೇ ಆಗಿದೆ .ಸ್ವಾತಂತ್ರ್ಯ ಬಂದು ಆರು ದಶಕಗಳೇ ಸಂದರೂ ಇದೊಂದು ಬಂಧನದ ಸ್ವಾತಂತ್ರ್ಯವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂದು ಪ್ರತಿಯೊಬ್ಬರ ಧಮನಿಧಮನಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿಕೊಂಡು ಬ್ರಿಟಿಷರ ಕಬಂಧಬಾಹುಗಳಿಂದ ದೇಶವನ್ನು ಸ್ವತಂತ್ರಗೊಳಿಸಲು ಮಾಡಿದ ತ್ಯಾಗ-ಬಲಿದಾನ ಅಮೋಘವಾದದ್ದು. ಆದರೆ ಇಂದು ಜೆಹಾದ್, ಕ್ರುಸೇಡ್‌ಗಳ ಹೆಸರಲ್ಲಿ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುವ ಕಾರ್ಯ ಹೆಚ್ಚಾಗುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಧರ್ಮಾಂಧತೆ, ಮತಾಂಧತೆಯ ಕಪಿಮುಷ್ಠಿಗೆ ಸಿಲುಕಿದ ಸಾವಿರಾರು ಮಂದಿಗೆ ಅದೇ ಒಂದು ಪ್ರಪಂಚವಾಗಿದ್ದು, ತಮ್ಮದೇ ಪ್ರಪಂಚದ ಸೃಷ್ಟಿಗಾಗಿ ನಡೆಸುತ್ತಿರುವ ಹೋರಾಟ ದೇಶದ ಸಾಮರಸ್ಯ,ಭಾವೈಕ್ಯತೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಾಗಿರುವುದು ಭಾರತದ ಪ್ರಗತಿಗೆ ತಗುಲಿಕೊಂಡ ಪಿಡುಗಾಗಿ ಪರಿಣಮಿಸಿದೆ. ಭಯಮುಕ್ತ ಸಮಾಜದೊಂದಿಗೆ ಸ್ವಾತಂತ್ರ್ಯ ಆಚರಿಸುವಂತಾಗಲಿ....</font>]]></content:encoded>
      <pubDate>Thu, 14 Aug 2008 17:51:48 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸ್ವಾತಂತ್ರ್ಯ ಪ್ರಯುಕ್ತ 35 ಕೈದಿಗಳ ಬಿಡುಗಡೆ]]></title>
      <link>https://kannada.webdunia.com/article/independence-day-article/ಸ್ವಾತಂತ್ರ್ಯ-ಪ್ರಯುಕ್ತ-35-ಕೈದಿಗಳ-ಬಿಡುಗಡೆ-108081400050_1.htm</link>
      <guid>https://kannada.webdunia.com/article/independence-day-article/ಸ್ವಾತಂತ್ರ್ಯ-ಪ್ರಯುಕ್ತ-35-ಕೈದಿಗಳ-ಬಿಡುಗಡೆ-108081400050_1.htm</guid>
      <media:thumbnail url="http:"/>
      <image>http:</image>
      <description><![CDATA[ದೇಶದ 62ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ಪಾಕಿಸ್ತಾನ ಸರಕಾರ, 35 ಭಾರತೀಯ ಕೈದಿಗಳನ್ನು ಶುಕ್ರವಾರದಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.]]></description>
      <content:encoded><![CDATA[<font  style='font-size:11pt; color:#000000'>ದೇಶದ 62ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ಪಾಕಿಸ್ತಾನ ಸರಕಾರ, 35 ಭಾರತೀಯ ಕೈದಿಗಳನ್ನು ಶುಕ್ರವಾರದಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪಾಕಿಸ್ತಾನ ವ್ಯಾಪ್ತಿಯ ಸಮುದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಪಾದನೆಯ ಮೇಲೆ ಬಂಧಿತರಾದ 34 ಭಾರತೀಯ ಮೀನುಗಾರರು ಹಾಗೂ ಒಬ್ಬ ನಾಗರಿಕನನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ಆಂತರಿಕ ವ್ಯವಹಾರಗಳ ಸಚಿವರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಂಧಿತ ಭಾರತೀಯರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಲಾಗುವುದು ಎಂದು ಪಾಕಿಸ್ತಾನ ಸರಕಾರದ ಮೂಲಗಳು ತಿಳಿಸಿವೆ. </font>]]></content:encoded>
      <pubDate>Thu, 14 Aug 2008 17:04:31 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಫ್ರೀಡಂ ಈಸ್ ನಾಟ್ ಫ್ರೀ....]]></title>
      <link>https://kannada.webdunia.com/article/independence-day-article/ಫ್ರೀಡಂ-ಈಸ್-ನಾಟ್-ಫ್ರೀ-108081400029_1.htm</link>
      <guid>https://kannada.webdunia.com/article/independence-day-article/ಫ್ರೀಡಂ-ಈಸ್-ನಾಟ್-ಫ್ರೀ-108081400029_1.htm</guid>
      <media:thumbnail url="http:"/>
      <image>http:</image>
      <description><![CDATA[ಇದು ಅರುವತ್ತೆರಡನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಭಾರತೀಯರಿಗೆ. ಕಳೆದ ಅರವತ್ತೊಂದು ವರ್ಷಗಳಲ್ಲಿ ಭಾರತೀಯರು ಕ್ರಮವಾಗಿ ಉತ್ತಮ ಪ್ರಗತಿಯನ್ನು ಕೂಡ ಸಾಧಿಸಿದ್ದಾರೆ. ಆದರೆ ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಎಷ್ಟು ಕಷ್ಟವಿತ್ತು. ಅದೆಷ್ಟು ಮಂದಿ ಬಲಿದಾನ ಮಾಡಿದರು ಎನ್ನುವುದು ಸ್ವಾತಂತ್ರ್ಯಾ ನಂತರ ...]]></description>
      <content:encoded><![CDATA[<font  style='font-size:11pt; color:#0000FF'><b>ಕೆ.ಎನ್. ಸತೀಶ್    </font><font style=' color:#000000;'></b></font><br/><font  style='font-size:11pt; color:#000000'>ಇದು ಅರುವತ್ತೆರಡನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಭಾರತೀಯರಿಗೆ. ಕಳೆದ ಅರವತ್ತೊಂದು ವರ್ಷಗಳಲ್ಲಿ ಭಾರತೀಯರು ಕ್ರಮವಾಗಿ ಉತ್ತಮ ಪ್ರಗತಿಯನ್ನು ಕೂಡ ಸಾಧಿಸಿದ್ದಾರೆ. ಆದರೆ ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಎಷ್ಟು ಕಷ್ಟವಿತ್ತು. ಅದೆಷ್ಟು ಮಂದಿ ಬಲಿದಾನ ಮಾಡಿದರು ಎನ್ನುವುದು ಸ್ವಾತಂತ್ರ್ಯಾ ನಂತರ ಜನಿಸಿದ ಮಂದಿಗೆ ತಿಳಿದಿರಲಾರದು. </font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/14/images/img1080814029_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ಶಿವ್ ಖೇರಾ ಇದೇ ವಿಷಯವನ್ನೇ ಆರಿಸಿಕೊಂಡು ಬರೆದಿರುವ ಪುಸ್ತಕದ ಹೆಸರು 'ಫ್ರೀಡಂ ಈಸ್ ನಾಟ್ ಫ್ರೀ'. ಬ್ರಿಟೀಷರು, ಭಾರತೀಯರನ್ನು ಗುಲಾಮರಂತೆ  ಕಾಣುತ್ತಿದ್ದ ಸಂದರ್ಭದಲ್ಲಿಯೇ ಅವರನ್ನು ಎದುರಿಸಿ ಸ್ವಾತಂತ್ರ್ಯ ಪಡೆದದ್ದು ಸಣ್ಣ ಸಾಧನೆಯೇನಲ್ಲ. ಇದಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದವರ ಪಟ್ಟಿ ಬಹಳ ದೊಡ್ಡದಿದೆ. </font><br/><font  style='font-size:11pt; color:#000000'></font><br/>200 <font  style='font-size:11pt; color:#000000'>ವರ್ಷಗಳ ಕಾಲ ಭಾರತದ ಸಂಪತ್ತನ್ನು ದೋಚಿದ ಬ್ರಿಟೀಷರನ್ನು ಎದುರಿಸಲು ಗಾಂಧಿ ಎಂಬ ಮಹಾನ್ ವ್ಯಕ್ತಿಯೊಬ್ಬ ಬಾರದೇ ಹೋಗಿದ್ದಿದ್ದರೆ, ಭಾರತದ ಸ್ವಾತಂತ್ರ್ಯ ಇನ್ನಷ್ಟು ಮುಂದಕ್ಕೆ ಹೋಗುತ್ತಿತ್ತೇನೋ. ಈ ಹಿಂದೆ 1857ರಲ್ಲಿ ನಡೆದ ಸಿಪಾಯಿ ದಂಗೆ ಯಶಸ್ವಿಯಾಗಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಬಹಳ ಕಾಲವಾಗಿರುತ್ತಿತ್ತು.  ಆದರೆ ಬ್ರಿಟೀಷರು ಹಾಗಾಗಲು ಬಿಡಲಿಲ್ಲ. ಭಾರತೀಯರ ಬಲಹೀನತೆಗಳನ್ನು ಉಪಯೋಗಿಸಿಕೊಂಡೇ ನಂತರದ 90 ವರ್ಷಗಳನ್ನು ಆಳಿಬಿಟ್ಟರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ದಕ್ಷಿಣ ಆಫ್ರಿಕಾದಿಂದ ಬಂದಿಳಿದ ಗಾಂಧಿ, 20 ಲಕ್ಷ ಮಂದಿ ಭಾರತೀಯರ ಮನಸ್ಸು ಮತ್ತು ದೇಹ ಒಂದೇ ಎನ್ನುವ ಭಾವನೆಯನ್ನು ತುಂಬಿದರು. ಬಹುತೇಕ ಭಾರತೀಯರಿಗೆ ತಾವೊಬ್ಬ ಅರೆ ದಿಗಂಬರ ಎನ್ನುವ ಮ‌ೂಲಕ ಪ್ರೇರೇಪಣೆ ನೀಡಿದರು. ಸ್ವಾತಂತ್ರ್ಯ, ತಮ್ಮ ದೇಶವಾಸಿಗಳ ಹಕ್ಕು ಎನ್ನುವುದನ್ನು ಅಹಿಂಸಾ ಪದ್ಧತಿಯ ಮೂಲಕವೇ ಪ್ರತಿಪಾದಿಸಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಬ್ರಿಟೀಷರ ಶಿಕ್ಷೆ ಅದೆಷ್ಟು ತೀವ್ರವಾಗಿತ್ತೆಂದರೆ, ಮನುಷ್ಯನೊಬ್ಬನನ್ನು ಈ ರೀತಿಯ‌ೂ ಶಿಕ್ಷಿಸಬಹುದೆಂದು ಹಿಟ್ಲರ್ ಕಲಿತುಕೊಂಡು ಅನುಷ್ಟಾನಕ್ಕೆ ತಂದದ್ದರ ಹಿಂದೆ ಅವರ ಪ್ರಭಾವ ಇತ್ತೆಂದರೆ, ಶಿಕ್ಷೆಯ ತೀವ್ರತೆಯನ್ನು ಅರಿತುಕೊಳ್ಳಬಹುದು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಕುರಿತಂತೆ ಅನೇಕ ಚಿತ್ರಗಳು ಸಹ ತಯಾರಾಗಿದ್ದರೂ ಸಹ ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ 'ಕಾಲಾಪಾನಿ', ಅಂದಿನ ಶಿಕ್ಷೆಯ ಪರಿಚಯವನ್ನು ಮಾಡಿಸುತ್ತದೆ. ದೂರದ ಅಂಡಮಾನ್ ದ್ವೀಪಕ್ಕೆ ಕರೆದೊಯ್ದು ಅವರಿಂದ ದುಡಿಮೆಯನ್ನು ಮಾಡಿಸಲಾಗುತ್ತಿತ್ತು. ಸಾಧ್ಯವಾಗದವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದೇ ರೀತಿಯ ಮತ್ತೊಂದು ಚಿತ್ರವೆಂದರೆ ತೆಲುಗಿನ ಚಿರಂಜೀವಿ ನಟಿಸಿರುವ 'ವೇಟ' ಚಿತ್ರ. ಈ ಚಿತ್ರದಲ್ಲಿ ಅಂಡಮಾನ್ ಸೆರೆಮನೆಗಳು ಹೇಗಿದ್ದವು, ಡಂಜನ್ ಎಂದು ಹೆಸರಿಸಲಾಗುವ ಆಳದ ಕತ್ತಲ ಬಂದೀಖಾನೆಗಳು ಹೇಗಿರುತ್ತಿದ್ದವು ಎಂದು ತೋರಿಸಿದ್ದಾರೆ. ಸತ್ತವನನ್ನು ಹೇಗೆ ಗೋಣಿಚೀಲದಲ್ಲಿ ತುಂಬಿ ಸಮುದ್ರಕ್ಕೆ ಎಸೆಯುತ್ತಿದ್ದರು ಎಂಬ  ಚಿತ್ರಣ ಇದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬ್ರಿಟೀಷರು ನೀಡುತ್ತಿದ್ದ ಶಿಕ್ಷೆಗಳ ಭೀಕರತೆ ಎಂತಹವರನ್ನೂ ಗಾಬರಿಗೊಳಿಸುವಂತೆ ಇತ್ತು. ಭಾರತೀಯರನ್ನು ಶಿಕ್ಷೆಯ ಪ್ರಯೋಗಪಶುಗಳನ್ನಾಗಿ ಮಾಡಿಕೊಂಡು ಬಿಟ್ಟಿದ್ದರು ಅವರು. ಚರ್ಮ ಸುಲಿದರೆ ಮನುಷ್ಯ ಹೇಗೆ ಕಾಣುತ್ತಾನೆ. ಉಗುರು ಕಿತ್ತರೆ ಏನಾಗುತ್ತದೆ. ನಾಲಿಗೆ ಕತ್ತರಿಸಿದರೆ ಮಾತನಾಡಲು ಆಗುತ್ತದೆಯೇ, ಆಳವಾದ ಗಾಯ ಮಾಡಿ ಖಾರದ ಪುಡಿ ತುಂಬಿದರೆ ನೋವಾಗುತ್ತದೆಯೇ ಎನ್ನುವುದು ದೈಹಿಕ ಹಿಂಸೆಗಳಾಗಿದ್ದವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬ್ರಿಟೀಷರು ಭಾರತೀಯರ ಭಾವನಾತ್ಮಕತೆಯ ಜೊತೆ ಸಹ ಆಟವಾಡುತ್ತಿದ್ದರು. ಮನೆಯ ಸದಸ್ಯರನ್ನು ಬಂಧಿಸಿ, ಉಗ್ರ ಶಿಕ್ಷೆ ನೀಡಿ, ಇಬ್ಬರಲ್ಲಿ ಒಬ್ಬರು ಬದುಕುಳಿಯಬೇಕೆಂದರೆ, ಇಬ್ಬರೂ ಪರಸ್ಪರ ಹೋರಾಟ ಮಾಡಿ ಒಬ್ಬನನ್ನು ಕೊಂದು ಮತ್ತೊಬ್ಬ ಉಳಿಯಬೇಕು ಎಂದು ಸ್ಪರ್ಧೆಯನ್ನು ಒಡ್ಡುತ್ತಿದ್ದರು. ಟಿಪ್ಪು ಸುಲ್ತಾನನ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ಯಾವುದೇ ಪೋಷಕರಿಗೂ ಹೃದಯ ವಿದ್ರಾವಕವೇ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮನೆ ಸದಸ್ಯರನ್ನೇ ಗೂಢಚಾರರನ್ನಾಗಿಸಿ ಅವರೊಳಗೆ ಭೇದ ತಂದಿಡುತ್ತಿದ್ದರು. ಅವರು ಅನುಸರಿಸಿದ ಪ್ರಮುಖ ತಂತ್ರವೆಂದರೆ ಇದೇ. ಡಿವೈಡ್ ಅಂಡ್ ರೂಲ್ ಪದ್ಧತಿ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯ ಹೋರಾಟಗಾರರು ಮತ್ತೆ ಅಂತಹ ಪ್ರಯತ್ನಕ್ಕೆ ಕೈಹಾಕಬಾರದೆಂದು, ಬಂಧಿತನನ್ನು ಸಾಮ‍ೂಹಿಕವಾಗಿ ಶಿಕ್ಷೆ ನೀಡುತ್ತಿದ್ದ ಪದ್ಧತಿ ಸಾರ್ವಜನಿಕರಲ್ಲಿ ಭಯವನ್ನೂ ಮತ್ತು ದುಃಖವನ್ನು ಏಕಕಾಲಕ್ಕೆ ಉಂಟು ಮಾಡುತ್ತಿದ್ದವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಇವೆಲ್ಲಾ ಶಿಕ್ಷೆಯನ್ನು ಅನುಭವಿಸಿಯ‌ೂ ಸ್ವಾತಂತ್ರ್ಯ ಗಳಿಸಿದ್ದಕ್ಕೆ, ಅಮೆರಿಕದ ಸ್ವಾತಂತ್ರ್ಯ ಗಳಿಕೆಯ‌ೂ ಸಹ ಪ್ರೇರೇಪಣೆ ನೀಡಿತ್ತು. ಅಲ್ಲಿ 56 ಮಂದಿ ಒಂದೇ ಸಾರಿಗೆ ನೇಣಿಗೆ ಕೊರಳೊಡ್ಡಲು ಸಿದ್ಧರಾಗಿದ್ದರು ಎನ್ನುವುದು ಕೆಲವರಲ್ಲಿ ಉತ್ತೇಜನವನ್ನೂ ನೀಡಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯ ಕಳೆದುಕೊಂಡರೆ ಏನಾಗುತ್ತದೆ ಎನ್ನುವುದನ್ನು ಅಬ್ರಹಾಂ ಲಿಂಕನ್ ತಿಳಿಸುತ್ತಾ, ಮನುಷ್ಯನ ಸ್ವಾತಂತ್ರ್ಯವನ್ನು ಕಳೆದರೆ ಅವನಲ್ಲಿ ಶೀಲವನ್ನೂ, ಧೈರ್ಯವನ್ನೂ ತುಂಬುವುದು ಸಾಧ್ಯವಿಲ್ಲ ಎಂದಿದ್ದಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ಅನುಭವಿಸುತ್ತಿರುವ ಸ್ವಾತಂತ್ರ್ಯ ಅದೆಷ್ಟೋ ಪ್ರಾಣಹಾನಿಯ ಪ್ರತಿಫಲವಾಗಿದೆ. ಚಿತ್ರಹಿಂಸೆಯಿಂದ ಕಣ್ಣೀರು ಹಾಕಿದ್ದರ ಒಂದು ಅಂಶವಾಗಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.</font>]]></content:encoded>
      <pubDate>Thu, 14 Aug 2008 13:41:53 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಗ್ರಾಮೀಣ ವಿದ್ಯುತ್‌ಗೆ 'ಗಾಂಧಿ ಚರಕ'ದ  ನೆರವು]]></title>
      <link>https://kannada.webdunia.com/article/independence-day-article/ಗ್ರಾಮೀಣ-ವಿದ್ಯುತ್‌ಗೆ-ಗಾಂಧಿ-ಚರಕ-ದ-ನೆರವು-108081400018_1.htm</link>
      <guid>https://kannada.webdunia.com/article/independence-day-article/ಗ್ರಾಮೀಣ-ವಿದ್ಯುತ್‌ಗೆ-ಗಾಂಧಿ-ಚರಕ-ದ-ನೆರವು-108081400018_1.htm</guid>
      <media:thumbnail url="http:"/>
      <image>http:</image>
      <description><![CDATA[ಬಾಸ್ಸಿ(ಜೈಪುರ್) : ಮಹಾತ್ಮಾ ಗಾಂಧಿಯವರ ಚರಕ ಕೇವಲ ಸ್ವಾವಲಂಬನೆ, ಉದ್ಯೋಗದ ಸಾಧನವಲ್ಲ.ಇದೀಗ ಜೈಪುರ್‌ನ ಪುಟ್ಟ ಗ್ರಾಮವಾದ ಬಾಸ್ಸಿಯಲ್ಲಿ ಗ್ರಾಮಸ್ಥರಿಗೆ ವಿದ್ಯುತ್ ಉತ್ಪಾದನೆಯ ಮಾರ್ಗದರ್ಶಕ ಜ್ಯೋತಿಯಾಗಿದೆ.]]></description>
      <content:encoded><![CDATA[<font  style='font-size:11pt; color:#000000'>ಬಾಸ್ಸಿ(ಜೈಪುರ್) : ಮಹಾತ್ಮಾ ಗಾಂಧಿಯವರ ಚರಕ ಕೇವಲ ಸ್ವಾವಲಂಬನೆ, ಉದ್ಯೋಗದ ಸಾಧನವಲ್ಲ.ಇದೀಗ ಜೈಪುರ್‌ನ ಪುಟ್ಟ ಗ್ರಾಮವಾದ ಬಾಸ್ಸಿಯಲ್ಲಿ ಗ್ರಾಮಸ್ಥರಿಗೆ ವಿದ್ಯುತ್ ಉತ್ಪಾದನೆಯ ಮಾರ್ಗದರ್ಶಕ ಜ್ಯೋತಿಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗ್ರಾಮಸ್ಥರು ಚರಕದಲ್ಲಿ ನೇಗಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಉತ್ಪಾದಿಸುವ ನವೀನ ರೀತಿಯ ಯಂತ್ರವನ್ನು ನಿರ್ಮಿಸಿದ್ದು,ಇದು ಕಾರ್ಯನಿರ್ವಹಿಸುತ್ತಿರುವಾಗ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹಣೆಗೊಂಡು ನಂತರ ಅವರು ಮನೆಗೆ ತೆರಳುವ ಸಂದರ್ಭದಲ್ಲಿ ಬ್ಯಾಟರಿಯನ್ನು  ಮನೆಗೆ ಒಯ್ದು  ಅದನ್ನು ವಿದ್ಯುತ್‌ ಪಡೆಯಲು ಉಪಯೋಗಿಸಲಾಗುತ್ತದೆ.  </font><br/><font  style='font-size:11pt; color:#000000'></font><br/> <font  style='font-size:11pt; color:#000000'>ಗಾಂಧೀಜಿಯವರ ಕರೆಯ ಮೇರೆಗೆ 1954ರಲ್ಲಿ ತಮಿಳುನಾಡಿನ ಏಕಂಬರನಾಥ್ ಅವರು ಅಂಬೇರ್ ಚರಕವನ್ನು ಪರಿಚಯಿಸಿದರು.ವರ್ಷಗಳುರುಳಿದಂತೆ ಚರಕ ಬದಲಾವಣೆಗಳನ್ನು ಕಂಡು ಪ್ರಸ್ತುತ ವಿದ್ಯುತ್ ಉತ್ಪಾದಿಸುವ ಯಂತ್ರವಾಗಿ ಮಾರ್ಪಟ್ಟಿದೆ.  </font><br/><font  style='font-size:11pt; color:#000000'>ಲೈಟ್ ಎಮಿಟಿಂಗ್ ಡೈಯೋಡ್‌ನ್ನು ವಿಶೇಷವಾಗಿ ರಚಿಸಲಾಗಿದ್ದು,  ಟ್ರಾನ್‌ಸಿಸ್ಟರ್‌ ರೇಡಿಯೊಗಳನ್ನು ಜೋಡಿಸಿರುವುದರಿಂದ ಚರಕವನ್ನು ಉಪಯೋಗಿಸುವ ಗ್ರಾಮಸ್ಥರಿಗೆ ಉದ್ಯೋಗದ ಜೊತೆಗೆ ವಿದ್ಯುತ್,  ಮನರಂಜನೆ ದೊರೆತಂತಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಾಸ್ಸಿಯ ಖಾದಿ ಗ್ರಾಮೊದ್ಯೋಗ ಸಗನ್ ವಿಕಾಸ್ ಸಮಿತಿ ಖಾದಿ ಆಯೋಗದ ಪೈಲಟ್ ಯೋಜನೆಯಡಿಯಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ  ಬಹುಪಯೋಗಿ ಅಂಬೇರ್ ಚರಕವನ್ನು ಪರಿಚಯಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನೂತನ ಚರಕದಲ್ಲಿ ಕನ್‌ವರ್ಟರ್ ಹಾಗೂ ರಿಚಾರ್ಜ್ ಸಂಗ್ರಹ ಮತ್ತು ಎಲ್‌ಇಡಿಯನ್ನು ಜೋಡಿಸಲಾಗಿದೆ. ಎರಡು ಗಂಟೆಗಳ ಅವಧಿಗೆ ಚರಕ ಕಾರ್ಯನಿರ್ವಹಿಸುವುದರಿಂದ ಮನೆಯಲ್ಲಿ  7.5 ಗಂಟೆಗಳವರೆಗೆ ಬಲ್ಬ್  ಉರಿಯುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಾಸ್ಸಿಯ ಖಾದಿ ಗ್ರಾಮದ್ಯೋಗ ಸಗನ್ ವಿಕಾಸ್ ಸಮಿತಿ ಕಾರ್ಯದರ್ಶಿ ಲಕ್ಷ್ಮಿ ಚಂದ ಭಂಡಾರಿ ಅವರು ಮಾತನಾಡಿ ಇ-ಚರಕವನ್ನು ಖಾದಿ ಆಯೋಗದ ಪೈಲಟ್ ಯೋಜನೆಯಡಿ ಆರು ತಿಂಗಳ ಹಿಂದೆ ಪರಿಚಯಿಸಲಾಗಿದೆ.ನೂತನ ಅಂಬೇರ್ ಚರಕ ಗರಿಷ್ಟ 8 ಸ್ಪಿಂಡಲ್‌ಗಳಷ್ಟು ಬಳಸಬಹುದಾಗಿದ್ದು , ಸ್ಪಿಂಡಲ್‌ಗಳ   ಹಿಂದೆ ವಿದ್ಯುತ್ ಸಂಗ್ರಹಣೆಗಾಗಿ ಬ್ಯಾಟರಿಯನ್ನು ಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ.  </font>]]></content:encoded>
      <pubDate>Thu, 14 Aug 2008 12:13:22 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[independence day article]]></category>
      <authorname>ಇಳಯರಾಜ</authorname>
    </item>
  </channel>
</rss>
