<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಚಿಣ್ಣರ ಕಥೆಗಳು]]></title>
    <link>https://kannada.webdunia.com/kannada-kids-stories</link>
    <description><![CDATA[ಮಕ್ಕಳ ಕಥೆಗಳು]]></description>
    <copyright>Copyright webdunia.com</copyright>
    <lastBuildDate>Tue, 09 Jun 2026 22:55:57 +0530</lastBuildDate>
    <language>en-us</language>
    <image>
      <title>ಚಿಣ್ಣರ ಕಥೆಗಳು</title>
      <url>https://kannada.webdunia.com/kannada-kids-stories</url>
      <link>https://kannada.webdunia.com/kannada-kids-stories</link>
    </image>
    <atom:link href="https://kannada.webdunia.com/rss/kannada-kids-stories-1070705.rss" rel="self" type="application/rss+xml"/>
    <item>
      <title><![CDATA[ಮರಿ ಬದಲಿಗೆ ಮೊಟ್ಟೆ ಇಡುವ ಪ್ರಾಣಿಗಳು]]></title>
      <link>https://kannada.webdunia.com/article/kannada-kids-stories/egg-laying-animals-instead-of-baby-117121900034_1.html</link>
      <guid>https://kannada.webdunia.com/article/kannada-kids-stories/egg-laying-animals-instead-of-baby-117121900034_1.html</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1513672339-3871.jpg</image>
      <description><![CDATA[ಮಾಂಸಾಹಾರಿ ಸಸ್ಯಗಳು, ಮರಿ ಹಾಕುವ ಹಾವುಗಳು ಹೀಗೆ ಹತ್ತು ಹಲವು ರೀತಿಯ ಪ್ರಕೃತಿ ವಿಸ್ಮಯಗಳನ್ನು ನೀವು ಓದಿರುತ್ತೀರಿ ಅಥವಾ ತಿಳಿದುಕೊಂಡಿರುತ್ತೀರಿ. ಅದೇ ರೀತಿ ಮೊಟ್ಟೆ ಇಡುವ ಪ್ರಾಣಿಗಳು (ಸಸ್ತನಿಗಳು) ಸಹ ಇವೆ. ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ.]]></description>
      <content:encoded><![CDATA[<p>
	<strong>ಮಾಂಸಾಹಾರಿ ಸಸ್ಯಗಳು, ಮರಿ ಹಾಕುವ ಹಾವುಗಳು ಹೀಗೆ ಹತ್ತು ಹಲವು ರೀತಿಯ ಪ್ರಕೃತಿ ವಿಸ್ಮಯಗಳನ್ನು ನೀವು ಓದಿರುತ್ತೀರಿ ಅಥವಾ ತಿಳಿದುಕೊಂಡಿರುತ್ತೀರಿ. ಅದೇ ರೀತಿ ಮೊಟ್ಟೆ ಇಡುವ ಪ್ರಾಣಿಗಳು (ಸಸ್ತನಿಗಳು) ಸಹ ಇವೆ. ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ. </strong><br />
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="421" src="http://media.webdunia.com/_media/kn/img/article/2017-12/19/full/1513684834-0841.jpg" style="border: 1px solid #DDD; margin-right: 0px; float: none; z-index: 0;" title="platypus" width="590" /></p>
	</p>
	<br />
	ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ. ಪ್ರಪಂಚದಲ್ಲಿ ಈವರೆಗೆ ಐದು ಪ್ರಕಾರದ ಮೊಟ್ಟೆ ಇಡುವ ಸಸ್ತನಿಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ಲಾಟಿಪಸ್ ಒಂದಾದರೆ, ಎಕಿಡ್ನಾ ಜಾತಿಯ ನಾಲ್ಕು ಪ್ರಾಣಿಗಳು ಇವೆ.</p>
<p>
	 </p>
<p>
	ಈ ಪ್ರಾಣಿಗಳು ಜೀವ ವರ್ಗೀಕರಣದ ಪ್ರಕಾರ ಮೊನೊಟ್ರೆಮಿ ಗಣಕ್ಕೆ ಸೇರಿವೆ. ಮೊನೊಟ್ರೆಮಿ ಎಂದರೆ ಮೊಟ್ಟೆಯಿಡುವ ಪ್ರಾಣಿಯಾಗಿದ್ದು, ಮೂತ್ರಜನಕಾಂಗ, ಜೀರ್ಣಾಂಗ ವ್ಯವಸ್ಥೆಗಳಿಗೆ ಮತ್ತು ಸಂತಾನೋತ್ಪತ್ತಿಗೆ ಒಂದೇ ದ್ವಾರವನ್ನು ಹೊಂದಿರುವ ಜೀವಿಗಳು ಅದನ್ನು ಕ್ಲೋಯಕಾ ಎಂದು ಕರೆಯುತ್ತಾರೆ. ಇವುಗಳು ಬಿಸಿ ರಕ್ತದ ಪ್ರಾಣಿಗಳಾಗಿದ್ದು, ಹೆಚ್ಚು ಚಯಾಪಚಯ ಕ್ರಿಯೆಯ ಶಕ್ತಿಯನ್ನು ಹೊಂದಿವೆ. ಇವುಗಳು ಹೆಚ್ಚಾಗಿ ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಲ್ಲಿ ಕಂಡು ಬರುತ್ತವೆ. ಇವು ಸರೀಸೃಪ ಮತ್ತು ಪಕ್ಷಿಗಳಂತೆ ಮೊಟ್ಟೆ ಇಡುತ್ತವೆ. ಆದರೆ ಮರಿಗಳಾದ ಮೇಲೆ ಮೊಲೆತೊಟ್ಟುಗಳ ಬದಲಿಗೆ ಚರ್ಮದಡಿಯಲ್ಲಿನ ಹಾಲನ್ನು (ಮಿಲ್ಕ್ ಪ್ಯಾಚಸ್) ಉಣಿಸುತ್ತವೆ. ಇವುಗಳು ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನದ ಮೂಲಕ ಬೇಟೆಯನ್ನು ಅರಸಿಕೊಂಡು ಹೋಗುತ್ತವೆ.</p>
<p>
	 </p>
<p>
	ಪ್ಲಾಟಿಪಸ್</p>
<p>
	 </p>
<p>
	ಪ್ಲಾಟಿಪಸ್ ಬಾತುಕೋಳಿಯ ಕೊಕ್ಕು, ಬೀವರ್‌ನ ಬಾಲ ಮತ್ತು ನೀರುನಾಯಿಯ ದೇಹವನ್ನು ಕೂಡಿ ಮಾಡಿದಂತಹ ದೇಹಾಕೃತಿಯನ್ನು ಹೊಂದಿದ್ದು ಜಾಲಪೊರೆಯುಳ್ಳ ಪಾದಗಳನ್ನು ಹೊಂದಿದೆ. ಇದು ಉಭಯಚರ ಪ್ರಾಣಿಯಾಗಿದೆ. ಇದರ ವೈಜ್ಞಾನಿಕ ಹೆಸರು ಆರ್ನಿಥೊರಿಂಚಸ್ ಅನಟೀನಸ್. ಪ್ಲಾಟಿಪಸ್ ಲ್ಯಾಟಿನ್ ಪದವಾಗಿದ್ದು ಗ್ರೀಕ್ ಮೂಲದ ಪ್ಲಾಟಪಸ್‌ನಿಂದ ಎರವಲು ಪಡೆಯಲಾಗಿದೆ. ಪ್ಲಾಟಪಸ್ ಎಂದರೆ ಚಪ್ಪಟೆಯಾದ ಕಾಲು, ಪ್ಲಾಟಸ್ ಎಂದರೆ ಅಗಲವಾದ, ಚಪ್ಪಟೆಯಾದ ಎಂದರ್ಥ.</p>
<p>
	 </p>
<p>
	ಪ್ರಾಯದ ಗಂಡು ಪ್ಲಾಟಿಪಸ್ 50 ಸೆಂಮೀ ಹಾಗೂ ಹೆಣ್ಣು ಪ್ಲಾಟಿಪಸ್ 43 ಸೆಂಮೀ ಇದ್ದು, ಸುಮಾರು 0.7 ರಿಂದ 2.4 ಕೆಜಿವರೆಗೆ ಬೆಳಯುತ್ತದೆ. ಇದರ ದೇಹದ ಉಷ್ಣತೆ ಸರಾಸರಿ 32° ಸೆ ಇರುತ್ತದೆ. ಹೆಣ್ಣು ಪ್ಲಾಟಿಪಸ್ 2-4 ಮೊಟ್ಟೆಗಳನ್ನಿಡುತ್ತದೆ, ಅವುಗಳನ್ನು ಎರಡು ವಾರಗಳಲ್ಲಿ ಮರಿ ಮಾಡುತ್ತದೆ. ಆತ್ಮರಕ್ಷಣೆಗಾಗಿ ಹೆಣ್ಣು-ಗಂಡು ಎರಡೂ ಪ್ಲಾಟಿಪಸ್‌ಗಳು ಹಿಂಗಾಲಿನಲ್ಲಿ ಸ್ಪರ್‌ಗಳನ್ನು ಹೊಂದಿದ್ದು, ಗಂಡು ಮಾತ್ರ ವಿಷವನ್ನು ಹೊಂದಿರುತ್ತದೆ. ಈ ವಿಷ ಸಣ್ಣ ಪ್ರಾಣಿಗಳನ್ನು ಸಾಯಿಸುವಷ್ಟು ಶಕ್ತಿಯನ್ನು ಹೊಂದಿದ್ದು, ಮನುಷ್ಯರಿಗೆ ಅಷ್ಟು ಮಾರಕವಾಗಿಲ್ಲ. ಆದರೆ ವಾರಗಟ್ಟಲೆ ತೀವ್ರ ನೋವನ್ನು ಉಂಟು ಮಾಡಬಲ್ಲದು. ಇವುಗಳ ಜೀವಿತಾವಧಿ 12 ವರ್ಷಗಳಾಗಿದೆ.</p>
<p>
	 </p>
<p>
	ಪ್ಲಾಟಿಪಸ್‌ಗಳು ಅತ್ಯುತ್ತಮವಾಗಿ ಈಜುತ್ತವೆ, ಇವುಗಳು ಆಹಾರಕ್ಕಾಗಿ ಕೆಲವು ಸೆಕೆಂಡುಗಳ ಕಾಲ ನೀರಿನಲ್ಲಿರಬಲ್ಲವು. ಪ್ಲಾಟಿಪಸ್ ನೀರಿನಲ್ಲಿರುವಾಗ ಕಿವಿ ಮತ್ತು ಕಣ್ಣುಗಳನ್ನು ಮುಚ್ಚಿಕೊಂಡಿರುತ್ತವೆ. ಇವುಗಳು ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನದ ಮೂಲಕ ಹುಳಗಳು, ಜಂತುಗಳು, ಸಿಹಿ ನೀರಿನ ಸಿಗಡಿಗಳನ್ನು ಹಾಗೂ ನದಿಯ ಮಣ್ಣುಗಳ ಅಡಿಯಲ್ಲಿನ ಜಂತುಗಳನ್ನು ಕೊಕ್ಕು, ಉಗುರುಗಳ ಮೂಲಕ ಬೇಟೆಯಾಡುತ್ತವೆ. ಇವು ತಮ್ಮ ತೂಕದ 20% ಆಹಾರವನ್ನು ಪ್ರತಿ ದಿನ ಸೇವಿಸುತ್ತವೆ. ಪ್ಲಾಟಿಪಸ್ ದಿನಕ್ಕೆ 14 ಗಂಟೆಗಳ ಕಾಲ ಮಲಗುತ್ತವೆ. ಇವುಗಳು ರಾತ್ರಿ ಪ್ರಾಣಿಗಳಾಗಿದ್ದು, ಮೋಡ ಕವಿದ ವಾತಾವರಣಗಳಲ್ಲಿಯೂ ಹೊರಬರುತ್ತವೆ. ಇವುಗಳನ್ನು ಹಾವುಗಳು, ನೀರು ಇಲಿಗಳು, ಗಿಡುಗ, ಗೂಬೆ, ಹದ್ದುಗಳು ಮತ್ತು ಮೊಸಳೆಗಳು ಬೇಟೆಯಾಡುತ್ತವೆ.</p>
<p>
	 </p>
<p>
	ಪ್ಲಾಟಿಪಸ್‌ಗಳನ್ನು 20ನೇ ಶತಮಾನದ ಮೊದಲು ತುಪ್ಪಳಕ್ಕಾಗಿ ಬೇಟೆಯಾಡುತ್ತಿದ್ದರು. ಆದರೆ ಇದೀಗ ಅವುಗಳು ಆಸ್ಟ್ರೇಲಿಯಾದ ಸಂರಕ್ಷಿತ ಜೀವಿಗಳಾಗಿವೆ. ಪ್ಲಾಟಿಪಸ್ ನ್ಯೂ ಸೌತ್ ವೇಲ್ಸ್‌ನ ರಾಜ್ಯ ಪ್ರಾಣಿಯಾಗಿದೆ. ಈ ಪ್ರಾಣಿಯ ಚಿತ್ರವನ್ನು ಆಸ್ಟ್ರೇಲಿಯಾದ 20 ಸೆಂಟ್ ನಾಣ್ಯದಲ್ಲಿ ಮುದ್ರಿಸಲಾಗಿದೆ.</p>
<p>
	 </p>
<p>
	ಈ ಪ್ರಾಣಿಯನ್ನು ಮೊದಲ ಬಾರಿಗೆ 18ನೇ ಶತಮಾನದಲ್ಲಿ ಪತ್ತೆಹಚ್ಚಲಾಯಿತು ಹಾಗೂ ಅದನ್ನು ಬ್ರಿಟಿಷ್ ವಿಜ್ಞಾನಿಗಳು ಅಧ್ಯಯನಕ್ಕಾಗಿ ಯುರೋಪ್‌ಗೆ ಕೊಂಡೊಯ್ದಿದ್ದಾರೆ. ಬಹಳಷ್ಟು ಜನರು ಇದರ ದೇಹವನ್ನು ಕಂಡು ಬೀವರ್ ದೇಹದ ಮತ್ತು ಬಾತುಕೋಳಿಯ ಕೊಕ್ಕಿನ ಪ್ರಾಣಿ ಎಂದು ತಮಾಷೆ ಮಾಡಿದ್ದರು.</p>
<p>
	 </p>
<p>
	ಎಕಿಡ್ನಾ</p>
<p>
	 </p>
<p>
	ಎಕಿಡ್ನಾ ನೋಡಲು ಮುಳ್ಳು ಹಂದಿಯಂತಿದ್ದು ತುಂಬಾ ವಿಲಕ್ಷಣವಾದ ಈ ಜೀವಿ, ಮೈಮೇಲೆ ಒರಟಾದ ಕೂದಲು ಮತ್ತು ಮುಳ್ಳುಗಳನ್ನು ಹಾಗೂ ಉದ್ದನೆಯ ಕೊಕ್ಕನ್ನು ಹೊಂದಿರುತ್ತದೆ. ಇದರ ವೈಜ್ಞಾನಿಕ ಹೆಸರು ಟಾಕಿಗ್ಲೋಸಿಡೆ. ಇದು ಏಕಾಂಗಿಯಾಗಿ ಜೀವಿಸುವ ಪ್ರಾಣಿಯಾಗಿದ್ದು, ಮಧ್ಯಮ ಗಾತ್ರವನ್ನು ಹೊಂದಿರುತ್ತದೆ.</p>
<p>
	 </p>
<p>
	ಸಂಪೂರ್ಣ ಬೆಳದಿರುವ ಗಂಡು ಎಕಿಡ್ನಾ 6 ಕೆಜಿ ಇರಬಹುದಾಗಿದ್ದು ಹೆಣ್ಣು 4.5 ಕೆಜಿ ತೂಕವಿರುತ್ತದೆ. ಗಂಡು ಎಕಿಡ್ನಾ ಸಾಮಾನ್ಯವಾಗಿ ಹೆಣ್ಣು ಎಕಿಡ್ನಾಗಿಂತ 25% ದೊಡ್ಡದಾಗಿರುತ್ತದೆ. ಈ ಪ್ರಾಣಿಯ ದೇಹದ ಉಷ್ಣತೆ ಸರಾಸರಿ 32° ಸೆ ಇರುತ್ತದೆ. ಹೆಣ್ಣು ಎಕಿಡ್ನಾ ಒಂದು ವರ್ಷಕ್ಕೆ ಒಂದು ಮೊಟ್ಟೆಯನ್ನು ಮಾತ್ರ ಇಡುತ್ತದೆ. ಅದನ್ನು 10 ದಿನಗಳಲ್ಲಿ ಮರಿ ಮಾಡುತ್ತದೆ. ತದನಂತರ ತಾಯಿ ಎಕಿಡ್ನಾ ತನ್ನ ದೇಹದ ಚೀಲದಲ್ಲಿ ಇರಿಸಿಕೊಂಡಿರುತ್ತದೆ. ಅದನ್ನು 6 ತಿಂಗಳುಗಳವರೆಗೆ ಹಾಲುಣಿಸಿ ಪೋಷಿಸುತ್ತದೆ. ನಂತರ ಅದನ್ನು ತೊರೆಯುತ್ತದೆ. ಆತ್ಮರಕ್ಷಣೆಗಾಗಿ ಮೈಮೇಲೆ ಮುಳ್ಳುಗಳಿರುತ್ತವೆ. ಒಣ ಪ್ರದೇಶದಲ್ಲಿ ವಾಸಿಸುವ ಈ ಜೀವಿ ಅಂದಾಜು 50 ವರ್ಷಗಳವರೆಗೆ ಬದುಕುತ್ತದೆ.</p>
<p>
	 </p>
<p>
	ಎಕಿಡ್ನಾಗಳು ಸಮರ್ಥವಾಗಿ ಈಜುತ್ತವೆ. ದೊಡ್ಡ ಉಗುರುಗಳನ್ನು ಹೊಂದಿರುವ ಚಿಕ್ಕದಾದ, ಬಲವಾದ ಕಾಲುಗಳನ್ನು ಹೊಂದಿರುತ್ತವೆ ಮತ್ತು ಇವುಗಳಿಗೆ ಮಣ್ಣನ್ನು ಅಗೆಯಲು ಸಹಾಯಕಾರಿಯಾಗಲೆಂದು ಹಿಂಗಾಲಿನ ಕಾಲುಗಳು ಹಿಮ್ಮುಖವಾಗಿರುತ್ತವೆ. ಸಣ್ಣದಾದ ಬಾಯಿ ಇದ್ದು ದವಡೆಗಳಲ್ಲಿ ಹಲ್ಲುಗಳಿರುವುದಿಲ್ಲ. ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನೆಯನ್ನು ಬಳಸಿಕೊಂಡು ಎಕಿಡ್ನಾ ತನ್ನ ಆಹಾರವನ್ನು ಉದ್ದವಾದ, ಅಂಟಿನಿಂದ ಕೂಡಿದ ನಾಲಿಗೆಯ ಸಹಾಯದಿಂದ ಪಡೆದುಕೊಳ್ಳುತ್ತದೆ. ಇವುಗಳು ಹೆಚ್ಚಾಗಿ ಇರುವೆಗಳನ್ನು ತಿನ್ನುತ್ತವೆ, ಆದ್ದರಿಂದ ಇದಕ್ಕೆ ಮುಳ್ಳು ಇರುವೆಬಾಕ (ಸ್ಪಿನ್ನಿ ಆಂಟ್ಇಟರ್ಸ್) ಎಂತಲೂ ಕರೆಯುತ್ತಾರೆ.</p>
<p>
	 </p>
<p>
	ಎಕಿಡ್ನಾಗಳು ತೀವ್ರವಾದ ಉಷ್ಣಾಂಶವನ್ನು ತಡೆದುಕೊಳ್ಳುವುದಿಲ್ಲ, ಆದ್ದರಿಂದ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಆಶ್ರಯಕ್ಕೆ ಗುಹೆಗಳು ಮತ್ತು ಬಂಡೆಯ ಬಿರುಕುಗಳಲ್ಲಿ ಸೇರಿಕೊಳ್ಳುತ್ತವೆ. ಅವುಗಳಿಗೆ ಅಪಾಯ ಎಂದು ಭಾವಿಸಿದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಣ್ಣಿನಲ್ಲಿ ಹೂತುಕೊಳ್ಳಲು ಪ್ರಯತ್ನಿಸುತ್ತವೆ ಅಥವಾ ಅವುಗಳು ಚೆಂಡಿನಾಕಾರವನ್ನು ಪಡೆದುಕೊಳ್ಳುತ್ತವೆ. ಈ ಎರಡೂ ವಿಧಾನಗಳಲ್ಲಿ ತಮ್ಮ ಮುಳ್ಳುಗಳನ್ನು ಅವುಗಳು ಬಳಸುತ್ತವೆ. ಕಾಡು ಬೆಕ್ಕುಗಳು, ನರಿಗಳು, ನಾಯಿಗಳು ಮತ್ತು ಉಡಗಳಿಂದ ಇವುಗಳಿಗೆ ಅಪಾಯ ತಪ್ಪಿದ್ದಲ್ಲ. ಹಾವುಗಳು ಎಕಿಡ್ನಾ ಮರಿಗಳನ್ನು ಬೇಟೆಯಾಡುವುದರಿಂದ ಅವುಗಳ ಸಂತತಿ ಕ್ಷೀಣಿಸುತ್ತಿದೆ.</p>
<p>
	 </p>
<p>
	ಈ ಎರಡು ಮೊಟ್ಟೆಯಿಡುವ ಸಸ್ತನಿಗಳು ನಿಸರ್ಗದಲ್ಲಿ ವಿಸ್ಮಯಕಾರಿಯಾಗಿ ಜೀವನ ಶೈಲಿಯನ್ನು ಹೊಂದಿವೆ. ಈ ಜೀವಿಗಳು ಇದೀಗ ವಿವಿಧ ಕಾರಣಗಳಿಂದಾಗಿ ಅಳಿವಿನಂಚಿಗೆ ತಲುಪಿವೆ. ಇವುಗಳ ರಕ್ಷಣೆಗೆ ಆಸ್ಟ್ರೇಲಿಯಾ ಸರ್ಕಾರ ಹಲವಾರು ಸಂರಕ್ಷಣೆಯ ಕ್ರಮಗಳನ್ನು ತೆಗೆದುಕೊಂಡಿದೆ. </p>
<p>
	<br />
	 </p>]]></content:encoded>
      <pubDate>Tue, 19 Dec 2017 14:00:00 +0530</pubDate>
      <updatedDate>Tue, 19 Dec 2017 18:02:13 +0530</updatedDate>
      <category><![CDATA[Kannada Kids Stories]]></category>
      <authorname>ರಾಮಕೃಷ್ಣ ಪುರಾಣಿಕ</authorname>
    </item>
    <item>
      <title><![CDATA[ಯಾರ ಮುಡಿಗೆ ಸೌಂದರ್ಯ ಕಿರೀಟ...]]></title>
      <link>https://kannada.webdunia.com/article/kannada-kids-stories/ಯಾರ-ಮುಡಿಗೆ-ಸೌಂದರ್ಯ-ಕಿರೀಟ-108071900043_1.htm</link>
      <guid>https://kannada.webdunia.com/article/kannada-kids-stories/ಯಾರ-ಮುಡಿಗೆ-ಸೌಂದರ್ಯ-ಕಿರೀಟ-108071900043_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1513672339-3871.jpg</image>
      <description><![CDATA[ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು.]]></description>
      <content:encoded><![CDATA[<font  style='font-size:11pt; color:#0000FF'><b>ರಶ್ಮಿ.ಪೈ </font><font style=' color:#000000;'></b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು. ಏನಾದರೂ ಹೊಸ ಕಾರ್ಯಕ್ರಮ ಮಾಡಬೇಕು, ಅದು ಎಲ್ಲರನ್ನೂ ಆಕರ್ಷಿಸುವಂತಿರಬೇಕು ಎಂದು ನೇರಳೆ ಅಂಗಿ ತೊಟ್ಟು "ಪೋನಿಟೈಲ್" ಜುಟ್ಟು ಬಿಟ್ಟಿದ್ದ ಸುಂದರಾಂಗಿ ಬದನೆ ಹೇಳಿತು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಸ್ವಲ್ಪ ಹೊತ್ತು ಎಲ್ಲಾ ತರಕಾರಿಗಳು ಯೋಚನೆಯಲ್ಲಿ ಮುಳುಗಿದವು. ಸಭೆ ಶಾಂತವಾಗಿತ್ತು, ಕೂಡಲೇ ಬಳುಕು ಸೊಂಟದ ವಯ್ಯಾರಿ ಕ್ಯಾರೆಟ್ " ಸೌಂದರ್ಯ ಸ್ಪರ್ಧೆ" ನಡೆಸಿದರೆ ಒಳ್ಳೆಯದು ಎಂದು ಅಭಿಪ್ರಾಯ ಮುಂದಿಟ್ಟಿತು. ಇದನ್ನು ಕೇಳಿದ ತರಕಾರಿ ರಾಜ ಕುಂಬಳಕಾಯಿಗೆ ಹೊಸ ಐಡಿಯಾ ಸರಿಯೆನಿತು. ಸಭೆಯಲ್ಲಿ ನೆರೆದಿರುವ ಎಲ್ಲಾ ತರಕಾರಿ ಮಹನಿಯರಿಗೆ ಕೇಳುವಂತೆ ಕುಂಬಳ ಕಾಯಿ ಗಟ್ಟಿಯಾಗಿ ಮುಂದಿನ ವಾರ್ಷಿಕೋತ್ಸವಕ್ಕೆ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುವುದಾಗಿ ಪ್ರಕಟಣೆಯನ್ನು ಹೊರಡಿಸಿತು.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ತರಕಾರಿಗಳೆಲ್ಲವೂ ಸೌಂದರ್ಯ ಸ್ಪರ್ಧೆಗೆ ಅಣಿಯಾಗತೊಡಗಿದವು. ಅಂತೂ ವಾರ್ಷಿಕೋತ್ಸವ ಬಂದೇ ಬಿಟ್ಟಿತು. ವಿಶಾಲವಾದ ವೇದಿಕೆಯನ್ನು ಸೌಂದರ್ಯ ಸ್ಪರ್ಧೆಗಾಗಿ ಅಣಿಗೊಳಿಸಲಾಗಿತ್ತು. ನೆರೆದಿದ್ದ ತರಕಾರಿಗಳೆಲ್ಲಾ ತಾ ಮುಂದು ನಾ ಮುಂದು ಎಂಬಂತೆ ಅಲಂಕಾರ ಮಾಡಿ ಬಂದಿದ್ದವು. ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಅಡ್ಡ ಮರದ ಬೊಡ್ಡನಾದ ಹಲಸಿನ ಹಣ್ಣು, ಉದ್ದ ಮರದ ಸನ್ಯಾಸಿ ಅಡಿಕೆ ಹಾಗೂ ಸುಂದರ ಹಲ್ಲಿನ ದಾಳಿಂಬೆ ವೇದಿಕೆಯ ಮುಂದೆ ಆಸೀನವಾಗಿದ್ದವು. ವೇದಿಕೆಗೆ ಬಂದ ಪಡುವಲ ಕಾಯಿ ಕೈಯಲ್ಲಿ ಮೈಕ್ ಹಿಡಿದುಕೊಂಡು ಸ್ಪರ್ಧಾಳುಗಳ ಹೆಸರನ್ನು ಸರದಿಯಂತೆ ಕೂಗ ತೊಡಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊದಲನೆಯಾದಾಗಿ ಬಿಂಕದ ವಯ್ಯಾರಿ ಹಸಿರು ನಿಲುವಂಗಿ ತೊಟ್ಟ ಬೆಂಡೆಕಾಯಿ ಸೊಂಟ ಬಳುಕಿಸುತ್ತಾ  ವೇದಿಕೆಯ ಮುಂದೆ ಬಂದು ತನ್ನ ಸೌಂದರ್ಯವನ್ನು ಪ್ರದರ್ಶಿಸಿತು. ಸಭಿಕರಾಗಿ ನೆರೆದಿದ್ದ ತರಕಾರಿ ತುಂಟರು ಸಿಳ್ಳೆ ಹಾಕಿ, ಯು ಸೋ ಬ್ಯೂಟಿಫುಲ್.. ಎಂದು ಉದ್ಗರಿಸಿದರು. ನಂತರದ ಸಾಲಿನಲ್ಲಿ ನುಣುಪು ಕೆನ್ನೆಯನ್ನು ತೋರಿಸುತ್ತಾ ನೇರಳೆ ಬಣ್ಣದ ಗುಂಡು ಬದನೆಕಾಯಿ ಮತ್ತು ಉದ್ದದ ಹಸಿರು ಬದನೆಕಾಯಿ ಜೋಡಿಯಾಗಿ ಹೆಜ್ಜೆ ಹಾಕಿದವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಣ್ಣ ಬಣ್ಣದ ದೀಪಗಳು ವೇದಿಕೆಯಲ್ಲಿ ಝಗಝಗಿಸುತ್ತಿದ್ದವು. ತರಕಾರಿಗಳ ಸುಂದರಿ ಕ್ಯಾರೆಟ್ ರಾಂಪ್ ಮೇಲೆ ಕಾಲಿಟ್ಟ ಕೂಡಲೇ ಸಭಿಕರ ಕರತಾಡನ ಮುಗಿಲು ಮುಟ್ಟಿತು. ಇದರ ಹಿಂದೆಯೇ ತಾನೇನು ಕ್ಯಾರೆಟ್‌ಗಿಂತ ಕಡಿಮೆಯೇ ಎಂಬ ಭಿನ್ನಾಣದಲ್ಲಿ ಮೂಲಂಗಿಯು ಹಸಿರು ಟೋಪಿ ತೊಟ್ಟು ಕ್ಯಾಟ್ ವಾಕ್ ಮಾಡಿತು. ಸುತ್ತಲೂ ಧ್ವನಿವರ್ಧಕಗಳಲ್ಲಿ ಹಾಡು ಮೊಳಗುತ್ತಿರುವಂತೆಯೇ ಹಣ್ಣುಗಳ ಪ್ರಾಯೋಜಕತ್ವದ ಜಾಹೀರಾತು ಕೇಳಿ ಬರುತ್ತಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವೇದಿಕೆಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿರುವವರು ಕಹಿರುಚಿಯ ಹಾಗಲ ಕಾಯಿ ಎಂದು ಮೈಕ್‌ನಲ್ಲಿ ಗಟ್ಟಿಯಾಗಿ ಘೋಷಣೆ. ಕಹಿರುಚಿ ಎಂದು ಹೇಳಿದ್ದಕ್ಕೆ ಹುಸಿ ಮುನಿಸು ಮಾಡಿಕೊಂಡ ಹಾಗಲಕಾಯಿ ತನ್ನ ಜರಿಜರಿ ಹಸಿರಂಗಿಯನ್ನು ತೊಟ್ಟು ಸೌಂದರ್ಯವನ್ನು ಪ್ರದರ್ಶಿಸಿತು. ಇದರ ಹಿಂದೆಯೇ ರಾಂಪಿಗೆ ಬಂದ ಟೋಮೇಟೋ ನನ್ನಕ್ಕಿಂತ ಚಂದ ಇನ್ನಾರು ಎಂಬಂತೆ ತನ್ನ ಅಂಗವನ್ನು ಪ್ರದರ್ಶಿಸಿ, ಕೆಂಪು ಕೆನ್ನೆಯನ್ನುಬ್ಬಿಸಿ ನಗೆಬೀರಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ನಂತರ ವೇದಿಕೆಗೆ ಬಂದ  ಹಸಿರು ಸೌತೆಕಾಯಿಯು ಬಂಗಾರದ ಬಣ್ಣದ ಸೌತೆಕಾಯಿ ಜೊತೆಗೆ ಬೆಕ್ಕಿನ ನಡಿಗೆಯಿಟ್ಟಾಗ ವೇದಿಕೆಯಲ್ಲಿದ್ದ ಇತರ ಸ್ಪರ್ಧಾಳುಗಳು ಚಕಿತಗೊಂಡರು. ಇದೀಗ ಸೌಂದರ್ಯ ಪ್ರದರ್ಶಿಸಿದವರಲ್ಲಿ ಒಬ್ಬರಿಂದ ಒಬ್ಬರು ಮೇಲು. ಯಾರ ಮುಡಿಗೆ ಸೌಂದರ್ಯ ಕಿರೀಟ ದಕ್ಕುವುದೋ ಎಂಬುದಾಗಿ ಎಲ್ಲರಿಗೂ ಕುತೂಹಲ! ನೆರೆದಿರುವ ಸಭಿಕರು ಇನ್ನೇನೋ ಸ್ಪರ್ಧೆ ಮುಗಿಯಿತು ಅಂದು ಕೊಂಡಿರುವಾಗ ಸಣ್ಣಗಾತ್ರದ ತೊಂಡೆಕಾಯಿ ಚಂದದ ತುಟಿಯಲ್ಲಿ ಅಂದದ ನಗೆ ಬೀರಿ ಎಲ್ಲರನ್ನೂ ಚಕಿತಗೊಳಿಸಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪಡುವಲಕಾಯಿ ತನ್ನ ಕೈಯಲ್ಲಿದ್ದ ಸ್ಪರ್ಧಾಳುಗಳ ಪಟ್ಟಿಯನ್ನೊಮ್ಮೆ ನೋಡಿ ಸಭಿಕರೇ ಈಗಾಗಲೇ ನೀವು ತೆಳು ಶರೀರದ ವಯ್ಯಾರಿಗಳ ಬಳುಕುವ ನಡಿಗೆಯನ್ನು ನೋಡಿದ್ದೀರಿ. ನಿಮ್ಮ ಮುಂದೆ ಇದೀಗ ಹೆಜ್ಜೆಯಿಡಲು ಬರುತ್ತಿದ್ದಾರೆ ತರಕಾರಿಗಳ ರಾಜ ಕುಂಬಳಕಾಯಿ..ಎಂದು ಗಟ್ಟಿಯಾಗಿ ಉದ್ಗೋಷಿಸಿತು. ಎಲ್ಲರ ಕಣ್ಣು ವೇದಿಕೆಯ ಮೇಲೆ ನೆಟ್ಟಿತು. ಅಬ್ಬರದ ಸಂಗೀತದ ನಡುವೆ ಕುಂಬಳಕಾಯಿ ಮುಖ ತುಂಬಾ ಪೌಡರ್ ಮೆತ್ತಿಕೊಂಡು ಬಂದು ನಿಂತಿತ್ತು. ದೊಡ್ಡ ಗಾತ್ರದ ದೇಹವನ್ನು ಬಳುಕಿಸಲಾರದೆ ವೇದಿಕೆಯ ಮೇಲೆ ಹೊರಳಾಡಿತು. ಕೆಲವರು ಈ ಪ್ರದರ್ಶನವನ್ನು ನೋಡಿ ನಕ್ಕರೆ ಕೆಲವರಂತೂ ತರಕಾರಿ ರಾಜನ ಕಸರತ್ತಿಗೆ ಹೋ...ಎಂದು ಪ್ರೋತ್ಸಾಹ ನೀಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂತೂ ಒಟ್ಟಿನಲ್ಲಿ ಸೌಂದರ್ಯ ಸ್ಪರ್ಧೆ ಮುಕ್ತಾಯಗೊಂಡಿತು. ಇನ್ನು ಸೌಂದರ್ಯ ರಾಣಿ ಯಾರೆಂದು ಘೋಷಿಸುವುದು ಮಾತ್ರ ಬಾಕಿ ಇತ್ತು. ಸ್ಪರ್ಧಾ ನಂತರ ನಿರ್ಣಾಯಕರು ಪರಸ್ಪರ ಮಾತನಾಡಿಕೊಂಡು ಒಂದು ನಿರ್ಣಯಕ್ಕೆ ಬಂದ ಮೇಲೆ ಪುನಃ ಮೈಕ್ ಕೈಗೆತ್ತಿಕೊಂಡ ಪಡುವಲ ಕಾಯಿ, ಪ್ರಿಯ ತರಕಾರಿ ಬಾಂಧವರೇ..ಇಲ್ಲಿ ನಡೆದ ಅತೀ ಕುತೂಹಲಕರವಾದ ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಲು ನಾನು ನಮ್ಮ ವಿಶೇಷ ಅತಿಥಿಯಾದ ಬಟಾಟೆ ಗುಂಡನನ್ನು ವೇದಿಕೆಗೆ ಆಹ್ವಾನಿಸುತ್ತಿದ್ದೇನೆ ಎಂದು ಘೋಷಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೈಯಲ್ಲಿ ವಿಜೇತರ ಹೆಸರಿನ ಪಟ್ಟಿಯನ್ನು ಹಿಡಿದು ಬಂದ ಬಟಾಟೆ ಗುಂಡ ಇಂದಿನ ವಿಜಯಿ ಸುಂದರಾಂಗಿ "ಟೊಮೇಟೋ" ಎಂದು ಕೂಗಿದ ಕೂಡಲೇ ಟೊಮೇಟೋ ಬಂಧುಗಳೆಲ್ಲ ವೇದಿಕೆಗೆ ಹಾರಿ ಕುಣಿದು ಕುಪ್ಪಳಿಸ ತೊಡಗಿದರು. ವೇದಿಕೆಯೆಲ್ಲಾ ಟೊಮೇಟೋ ದಾಳಿಗೆ ಅಲ್ಲೋಲಕಲ್ಲೋಲವಾಯಿತು. ಒಂದರ ಮೇಲೊಂದು ಟೊಮೇಟೋಗಳು ವೇದಿಕೆಗೆ ಜಿಗಿದು ನರ್ತನವಾಡ ತೊಡಗಿದಾಗ ವೇದಿಕೆಯಲ್ಲಿದ್ದ ಮಹನಿಯರೆಲ್ಲಾ ಹೆದರಿ ಓಡತೊಡಗಿದರು.  ಟೊಮೇಟೋಗಳಿಂದ ತುಂಬಿದ ವೇದಿಕೆಯಲ್ಲಿ ಕೊನೆಗೆ ಯಾರೂ ಉಳಿಯದೇ ಇದ್ದುದರಿಂದ ತರಕಾರಿ ಸೌಂದರ್ಯ ಸ್ಪರ್ಧೆಯು ಅಲ್ಲಿಗೆ ಮುಕ್ತಾಯಗೊಂಡಿತು.</font><br/><font  style='font-size:11pt; color:#000000'></font><br/> <font  style='font-size:11pt; color:#000000'></font><br/></font>]]></content:encoded>
      <pubDate>Mon, 23 Feb 2009 16:16:15 +0530</pubDate>
      <updatedDate>Tue, 15 Apr 2014 11:48:12 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಆಲಸಿ ಗುಂಡ ಮತ್ತು ಸ್ಕೇಟಿಂಗ್ ಬೂಟ್]]></title>
      <link>https://kannada.webdunia.com/article/kannada-kids-stories/ಆಲಸಿ-ಗುಂಡ-ಮತ್ತು-ಸ್ಕೇಟಿಂಗ್-ಬೂಟ್-108020800035_1.htm</link>
      <guid>https://kannada.webdunia.com/article/kannada-kids-stories/ಆಲಸಿ-ಗುಂಡ-ಮತ್ತು-ಸ್ಕೇಟಿಂಗ್-ಬೂಟ್-108020800035_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1513672339-3871.jpg</image>
      <description><![CDATA[ಬಹಳ ವರ್ಷಗಳ ಹಿಂದೆ ಒಂದು ಊರಿನಲ್ಲಿ ಗುಂಡನೆಂಬ ಮುದ್ದಾದ ಬಾಲಕನಿದ್ದ. ಗುಂಡನ ಮನೆ ಹಿಮ ಪರ್ವತದ ಕೆಳಗೆ ಇತ್ತು. ಗುಂಡ ಒಬ್ಬ ಉತ್ತಮ ಹುಡುಗನಾಗಿದ್ದ. ಆದರೆ ಆತ ಬಾರಿ ಆಲಸಿಯಾಗಿದ್ದ.]]></description>
      <content:encoded><![CDATA[<font  style='font-size:11pt; color:#000000'>ಬಹಳ ವರ್ಷಗಳ ಹಿಂದೆ ಒಂದು ಊರಿನಲ್ಲಿ ಗುಂಡನೆಂಬ ಮುದ್ದಾದ ಬಾಲಕನಿದ್ದ. ಗುಂಡನ ಮನೆ ಹಿಮ ಪರ್ವತದ ಕೆಳಗೆ ಇತ್ತು. ಗುಂಡ ಒಬ್ಬ ಉತ್ತಮ ಹುಡುಗನಾಗಿದ್ದ. ಆದರೆ ಆತ ಬಾರಿ ಆಲಸಿಯಾಗಿದ್ದ. ಆತ ಯಾವುದನ್ನೂ ಬಯಸುತ್ತಿರಲಿಲ್ಲ. ಆತ ಚಳಿ ಕಾಯಿಸಲು ಬಿಸಿಲ ಅಡಿ ಮನೆಯ ಮೂಲೆಯೊಂದರಲ್ಲಿ ಮುದುರಿಕೊಂಡು ಮಲಗುತ್ತಿದ್ದ ಮತ್ತು ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗುಂಡನ ತಾಯಿಗೆ ಮಗ ಒದಲು ಕಲಿಯಬೇಕು ಮತ್ತು ಚುರುಕಿನವನಾಗ ಬೇಕೆಂಬ ಬಯಕೆಯನ್ನು ಇರಿಸಿದ್ದಳು. ಆದರೆ ತಾಯಿ ಹಲವು ಬಾರಿ ಗುಂಡನಿಗೆ ಓದಲು ಕಲಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಅದು ಯಾವುದೂ ಫಲಕಾರಿಯಾಗದೆ ಕೊನೆಗೆ ತನ್ನ ಪ್ರಯತ್ನವನ್ನು ಕೈಬಿಟ್ಟಿದ್ದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಾದ ಸ್ವಲ್ಪ ಸಮಯದ ನಂತರ ಒಬ್ಬ ಯುವ ವ್ಯಕ್ತಿ ದೂರದ ಊರಿನಿಂದ ಗುಂಡನ ಮನೆಗೆ ಬರುತ್ತಾನೆ. ಆತ ಬರುವಾಗ ಈವರೆಗೆ  ನೆರೆಯವರು ಕಾಣದ ಸ್ಕೇಟಿಂಗ್ ಬೂಟ್ಸ್‌ಗಳನ್ನು ತಂದಿದ್ದ. ಆ ವ್ಯಕ್ತಿ ಆ ಸ್ಕೇಟಿಂಗ್ ಬೂಟನ್ನು ಬಳಸಿ ಹಿಮ ಪರ್ವತದಲ್ಲಿ ವೇಗದಿಂದ ಆ ಕಡೆ ಈ ಕಡೆ ಹೋಗುತ್ತಿದ್ದ. ಇದನ್ನು ಕಂಡ ಗುಂಡನಿಗೆ ಬಹಳ ಕುತೂಹಲ ಮತ್ತು ಆಶ್ಚರ್ಯವಾಯಿತು. ಗುಂಡ ವೇಗದಲ್ಲಿ ಆ ವ್ಯಕ್ತಿಯ ಕಡೆ ಒಡಿ ಹೋಗುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಒಂದು ದಿನ ಆ ಯುವಕ ಗುಂಡನಿಗೆ ಸ್ಕೇಟಿಂಗ್ ಬೂಟಿನಲ್ಲಿ ಆಡಲು ಬಿಡುತ್ತಾನೆ. ಗುಂಡ ಬಹಳ ಆನಂದಿಸುತ್ತಾನೆ. ಮೊದಲ ಬಾರಿಗೆ ಗುಂಡ ಬೀಳುತ್ತಾನೆ ಆದರೆ ದೃತಿ ಗೆಡದೆ ಹಿಡಿದ ಕೆಲಸ ಬಿಡದಂತೆ ಛಲದಿಂದ ಆ ಸ್ಕೇಂಟಿಂಗ್ ಬೂಟ್ ಧರಿಸಿ ಆಡುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕಂಡ ಯುವಕ ಗುಂಡ ನನ್ನ ಚಿಕ್ಕಮ್ಮ ನಿನಗೆ ಓದಿಸ ಬೇಕು ಎಂದು ಭಾರಿ ಪ್ರಯತ್ನಿಸುತ್ತಿದ್ದಾಳೆ. ಏಕೆ ನೀನು ಓದು ಕಲಿಯುವುದಿಲ್ಲ? ನೀನು ಬಹಳ ಆಲಸಿ ಯಾಗಿದ್ದು ಒಂದು ವೇಳೆ ನೀನು ಓದು ಕಲಿತರೆ ನಾನು ನಿನಗೆ ಹೊಸ ವರ್ಷದಲ್ಲಿ ಇಂತಹುದೇ ಒಳ್ಳೆಯ ಸ್ಕೇಟಿಂಗ್ ಬೂಟನ್ನು ತೆಗೆದು ಕೊಡುತ್ತೇನೆ ಎಂದು ಹೇಳುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ಗುಂಡ ತನ್ನ ಕಣ್ಣನ್ನು ಮಿಣುಕಿಸುತ್ತಾನೆ ಮತ್ತು ನನಗೆ ಆ ಸ್ಕೇಟಿಂಗ್ ಬೂಟು ಬೇಕು ಅದಕ್ಕಾಗಿ ನಾನು ಒದಲು ಕಲಿಯುತ್ತೇನೆ ಎಂದು ಪಣತೊಡುತ್ತಾನೆ. ಒಂದು ಸಾರಿ ಕೆಲಸವನ್ನು ಮಾಡಬೇಕು ಎಂದು ಗುಂಡ ಪಣ ತೊಟ್ಟರೆ, ಅವನು ಹಿಂಜರಿಯುದಿಲ್ಲ ಅದನ್ನು ಮಾಡೇ ತೀರುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಮುಂಚೆ ಗುಂಡನಿಗೆ ಓದಿಸಲು ಬಹಳವಾಗಿ ಕಷ್ಟಪಟ್ಟಿದ್ದ ತಾಯಿಗೆ ಈ ಬಾರಿ ಯಾವುದೇ ಕಷ್ಟವಾಗಲಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೊಸ ವರ್ಷದ ಬೆಳಗ್ಗೆ ಗುಂಡನಿಗೆ ಒಂಗು ಕೆಂಪು ಬಣ್ಣದ ಪೆಟ್ಟಿಗೆ ಸಿಕ್ಕಿತು. ಅದರ ಮೇಲೆ ಇದನ್ನು ಓದಲು ಸಾದ್ಯವಾಗುವವರಿಗೆ ಇದರ ಒಳಗಿದ್ದ ವಸ್ತುವನ್ನು ಹೊಂದಲು ಸಾದ್ಯ ಎಂದು ಬರೆದಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಗುಂಡ ಇದರ ಮೇಲಿದ್ದ ಎಲ್ಲಾ ಶಬ್ದಗಳನ್ನು ಸ್ಪಷ್ಟವಾಗಿ ಮತ್ತು ಶೀಘ್ರದಲ್ಲಿ ಓದಿದಳು ಮತ್ತು ಸ್ಕೇಟಿಂಗ್ ಬೂಟನ್ನು ತನ್ನದಾಗಿಸಿದನು. ತದ ನಂತರ ಗುಂಡ ಯಾವತ್ತೂ ಆಲಸಿಯಾಗಿ ಬಿಸಿಲಿನಲ್ಲಿ ಚಳಿಕಾಯಿಸುತ್ತಿರಲಿಲ್ಲ. ಯಾವತ್ತೂ ಕ್ರಿಯಾತ್ಮಕನಾಗಿದ್ದ.       </font>]]></content:encoded>
      <pubDate>Mon, 23 Feb 2009 16:16:08 +0530</pubDate>
      <updatedDate>Tue, 15 Apr 2014 11:21:26 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಚಿನ್ನು ಮತ್ತು ಮಾವಿನಮರ]]></title>
      <link>https://kannada.webdunia.com/article/kannada-kids-stories/ಚಿನ್ನು-ಮತ್ತು-ಮಾವಿನಮರ-107122200016_1.htm</link>
      <guid>https://kannada.webdunia.com/article/kannada-kids-stories/ಚಿನ್ನು-ಮತ್ತು-ಮಾವಿನಮರ-107122200016_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1513672339-3871.jpg</image>
      <description><![CDATA[ಚಿನ್ಮಯಿ ಅವಳ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಬೇಸಿಗೆ ರಜೆ ಸಿಕ್ಕಿದ ಕೂಡಲೇ ಅವಳು ಅವಳ ಅಜ್ಜನ ಮನೆಗೆ ಹೋಗುತ್ತಿದ್ದಳು.ಅವಳ ಅಜ್ಜ ಮತ್ತು ಅಜ್ಜಿ ಅವಳನ್ನು ಪ್ರೀತಿಯಿಂದ ಚಿನ್ನು ಎಂದೇ ಕರೆಯುತ್ತಿದ್ದರು.]]></description>
      <content:encoded><![CDATA[<font  style='font-size:11pt; color:#0000FF'><b>ರಜನಿ ಭಟ್  </font><font style=' color:#000000;'></b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಿನ್ಮಯಿ ಅವಳ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಬೇಸಿಗೆ ರಜೆ ಸಿಕ್ಕಿದ ಕೂಡಲೇ ಅವಳು ಅವಳ ಅಜ್ಜನ ಮನೆಗೆ ಹೋಗುತ್ತಿದ್ದಳು.ಅವಳ ಅಜ್ಜ ಮತ್ತು ಅಜ್ಜಿ ಅವಳನ್ನು ಪ್ರೀತಿಯಿಂದ ಚಿನ್ನು ಎಂದೇ ಕರೆಯುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಜ್ಜನ ಮನೆಯಲ್ಲಿ ಒಂದು ದೊಡ್ಡ ಮಾವಿನ ಮರವಿತ್ತು. ಆ ಮರದ ಮೇಲೆ ಚಿನ್ನುಗೆ ಅತೀವ ಪ್ರೀತಿ.ಅದರಲ್ಲಿ ಆಗುವ ಮಾವಿನ ಹಣ್ಣುಗಳನ್ನು ತಿನ್ನುವುದು, ಆ ಮರದ ಕೆಳಗೆ ಆಟವಾಡುವುದು ಅಂದರೆ ಚಿನ್ನುಗೆ ತುಂಬಾ ಇಷ್ಟ. ಅದಕ್ಕಾಗಿಯೇ ಅವಳು ಅಜ್ಜನ ಮನೆಗೆ ಹೋಗುತ್ತಿದ್ದದ್ದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ಮರವು ತುಂಬಾ ಹಳೆಯದಾಗಿತ್ತು ಹಾಗೂ ತುಂಬಾ ದೊಡ್ಡದಾಗಿತ್ತು. ಅಜ್ಜನ ಮನೆಯ ಬಳಿ ಒಬ್ಬ ರಾಮು ಅಂತ ಇದ್ದ ಅವನಿಗೆ ಯಾವತ್ತೂ ಆ ಮರದ ಮೇಲೆ ಕಣ್ಣು. ಆ ಮರವನ್ನು ಕಡಿದು ಮಾರಿದರೆ ಎಷ್ಟೊಂದು ಹಣ ಸಿಗಬಹುದು ಎಂಬುದು ಅವನ ಯೋಚನೆಯಾಗಿತ್ತು. ಈ ವಿಷಯದ ಬಗ್ಗೆ ಅವನು ಅಜ್ಜನಲ್ಲಿ ಅನೇಕ ಬಾರಿ ಹೇಳಿದ್ದ ಆದರೆ ಅಜ್ಜ ಆ ಮರವನ್ನು ಕಡಿಯುವುದಕ್ಕೆ ಒಪ್ಪುತ್ತನೇ ಇರಲಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ವರ್ಷ ಬಂದ ತೀವ್ರವಾದ ಮಳೆ ಗಾಳಿಗೆ ಆ ಮಾವಿನ ಮರದ ಒಂದು ಭಾಗವು ಬಿದ್ದು ಹೋಯಿತು. ಇದೇ ಸಂದರ್ಭವನ್ನು ಕಾಯುತ್ತಿದ್ದ ರಾಮು ಅಜ್ಜನಲ್ಲಿ ಬಂದು,ಈಗಾಗಲೇ ಒಂದು ಭಾಗ ಬಿದ್ದು ಹೋಗಿದೆ, ಇನ್ನೊಂದು ಭಾಗವು ಸದ್ಯಕ್ಕೆ ಬಿದ್ದು ಹೋಗುತ್ತದೆ ಈಗಲಾದರೂ ಅದನ್ನು ಮಾರಿಬಿಡಿ ಎಂದು ಹೇಳುತ್ತಾನೆ. ಈಗ ಅಜ್ಜನಿಗೂ ಅದು ಸರಿ ಎನಿಸಿ ಆ ಮರವನ್ನು ಕಡಿದು ಮಾರುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ವರ್ಷ ಬೇಸಿಗೆ ರಜೆ ಪ್ರಾರಂಭವಾದಾಗ ಚಿನ್ನು ಬಹಳ ಖುಷಿಯಿಂದಲೇ ಅಜ್ಜನ ಮನೆಗೆ ಬರುತ್ತಾಳೆ. ಆದರೆ ಅಜ್ಜನ ಮನೆಗೆ ಬರುವಾಗ ಅವಳ ಖುಷಿಯೆಲ್ಲಾ ಮಾಯವಾಗಿರುತ್ತದೆ ಯಾಕೆಂದರೆ ಅವಳ ಪ್ರೀತಿಯ ಮಾವಿನ ಮರವೇ ಅಲ್ಲಿರುವುದಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವಳು ಅಜ್ಜನಲ್ಲಿ ಮಾವಿನ ಮರ ಎಲ್ಲಿ ಹೋಯ್ತು ಎಂದು ಕೇಳಿದಾಗ ಅಜ್ಜ ಅದು ಮರಕ್ಕೆ ತುಂಬಾ ಹಳೆಯದಾಗಿ ಅರ್ಧ ಭಾಗ ಬಿದ್ದು ಹೋಗಿತ್ತಲ್ಲ ಅದಕ್ಕೆ ಪೂರ್ತಿ ಕಡಿದು ಮಾರಿದೆ ಎಂದು ನಡೆದ ಸಂಗತಿಯನ್ನು ಚಿನ್ನುಗೆ ತಿಳಿಸುತ್ತಾರೆ. ಇದನ್ನು ಕೇಳಿ ಚಿನ್ನುಗೆ ತುಂಬಾ ಬೇಸರವಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ಅವಳು ಅಜ್ಜನಿಗೆ, ನಿಮಗೆ ಅದರ ಮೇಲೆ ಪ್ರೀತಿಯೇ ಇಲ್ಲ, ಇಷ್ಟು ಸಮಯ ಅದು ಕೊಡುತ್ತಿದ್ದ ಹಣ್ಣುಗಳನ್ನು ತಿನ್ನುತ್ತಿದ್ದೆವು ಆದರೆ ಈಗ ಅದು ಬಿದ್ದು ಹೋಯ್ತು ಅಂದ ಕೂಡಲೇ ಮಾರಿಬಿಡುವುದಾ? ಹಾಗಾದರೇ ಮನುಷ್ಯರನ್ನು ಕೂಡಾ ಹಾಗೆಯೇ ಮಾಡಬಹುದಲ್ವ ಎಂದು ಹೇಳಿ, ಬೇಜಾರಲ್ಲಿ ನಾನು ಇನ್ನು ಮುಂದೆ ರಜೆಯಲ್ಲಿ ನಿಮ್ಮ ಮನೆಗೆ ಬರುವುದೇ ಇಲ್ಲ ಎಂದು ತನ್ನ ಮನೆಗೇ ಹಿಂತಿರುಗುತ್ತಾಳೆ. ಅಜ್ಜ ಮತ್ತು ಅಜ್ಜಿ ಎಷ್ಟು ಕೇಳಿದರೂ ನಿಲ್ಲುವುದೇ ಇಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಿನ್ನು ತನ್ನ ಮನೆಗೆ ವಾಪಾಸಾಗಿದ್ದು ಅಜ್ಜನಿಗಂತೂ ತುಂಬಾ ಬೇಜಾರಾಗಿರುತ್ತದೆ. ಅನೇಕ ಪಕ್ಷಿಗಳಿಗೆ ಆಶ್ರಯವನ್ನು ನೀಡುತ್ತಿದ್ದ,ತುಂಬಾ ಹಣ್ಣುಗಳನ್ನು ನೀಡುತ್ತಿದ್ದ ಆ ಮರದ ಉಪಕಾರವನ್ನು ಪಡೆದು, ಈಗ ಅದು ಉಪಯೋಗವಿಲ್ಲ ಎಂದಾಗ ಅದನ್ನು ಮಾರುವುದು ನಿಜಕ್ಕೂ ತಪ್ಪು.ಅಷ್ಟು ಚಿಕ್ಕವಳಿಗೆ ಬಂದ ಯೋಚನೆ ನನಗೆ ಯಾಕೆ ಬರಲಿಲ್ಲ, ಚಿನ್ನು ಹೇಳಿದ್ದು ಎಷ್ಟು ಸತ್ಯ, ಚಿನ್ನುವನ್ನು ಹೇಗಾದರೂ ಮಾಡಿ ಮತ್ತೆ ಹಿಂತಿರುಗಿ ಬರುವಂತೆ ಮಾಡಬೇಕೆಂದು ಯೋಚಿಸಿ ಕೊನೆಗೂ ಒಂದು ನಿರ್ಧಾರಕ್ಕೆ ಬರುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗುತ್ತದೆ.ಅಜ್ಜ ಪೇಟೆಗೆ ಹೋಗಿ ಒಂದು ಮಾವಿನ ಗಿಡವನ್ನು ತಂದು ಕಡಿದು ಹಾಕಿದ ಮರದ ಜಾಗದಲ್ಲೇ ನೆಡುತ್ತಾರೆ. ನೆಟ್ಟ ಮರುದಿವಸವೇ ಚಿನ್ನುವಿನ ಮನೆಗೆ ಹೋಗಿ ಅವಳನ್ನು ಮನೆಗೆ ಬರುವಂತೆ ಹೇಳುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಚಿನ್ನುಗೆ ಆಗ ಶಾಲೆ ಪ್ರಾರಂಭವಾಗಿರುತ್ತದೆ ಆದುದರಿಂದ ಅವಳುಬರುವುದಿಲ್ಲ ಎಂದು ಹೇಳಿದರೂ, ಅಜ್ಜ ಚಿನ್ನುವನ್ನು ಮತ್ತು ಅವಳ ಅಪ್ಪ ಅಮ್ಮನನ್ನು ಕರೆದುಕೊಂಡು ತನ್ನ ಮನೆಗೆ ಹೋಗುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತಾನು ನೆಟ್ಟ ಗಿಡದ ಬಳಿ ಚಿನ್ನುವನ್ನು ಕರೆದುಕೊಂಡು ಹೋಗಿ, ನಿನಗಾಗಿ ಹೊಸ ಮಾವಿನ ಗಿಡವನ್ನು ತಂದು ನೆಟ್ಟಿದ್ದೇನೆ,ಇದು ದೊಡ್ಡದಾಗಿ ಮೊದಲಿನ ರೀತಿಯಲ್ಲೇ ನಿನಗೆ ಹಣ್ಣುಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಿನ್ನುವಿನ ಅಪ್ಪ ಅಮ್ಮನಿಗೆ ಒಂದೂ ಅರ್ಥ ಆಗಿರುವುದಿಲ್ಲ, ಅವರು ಇದೆಲ್ಲ ಏನು ಎಂದು ಕೇಳಿದಾಗ ಅಜ್ಜ ಅವರಲ್ಲಿ ಚಿನ್ನು ನನ್ನ ಕಣ್ಣು ತೆರೆಸಿದ್ದಾಳೆ, ಅವಳೆದುರು ನಾನು ತುಂಬಾ ಚಿಕ್ಕವನಾದೆ ಎಂದು ನಡೆದ ವಿಷಯವನ್ನು ಚಿನ್ನುವಿನ ಅಪ್ಪ ಅಮ್ಮನಿಗೆ ತಿಳಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಜ್ಜ ಮತ್ತು ಅಜ್ಜಿ ಚಿನ್ನುವಿನಲ್ಲಿ ಇನ್ನು ಮುಂದೆ ಮೊದಲಿನ ರೀತಿಯಲ್ಲೇ ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಬರುತ್ತೀಯಲ್ಲಾ ಎಂದು ಕೇಳಿದಾಗ ಚಿನ್ನು, ನೀವು ಯಾವತ್ತೂ ಆ ಮರವನ್ನು ಕಡಿಯುವುದಿಲ್ಲ ಎಂದು 'ಪ್ರಾಮಿಸ್' ಮಾಡಿದರೆ ಖಂಡಿತಾ ಬರುತ್ತೇನೆ ಎನ್ನುತ್ತಾಳೆ. </font><br/></font>]]></content:encoded>
      <pubDate>Mon, 23 Feb 2009 16:15:50 +0530</pubDate>
      <updatedDate>Tue, 15 Apr 2014 11:10:57 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಬಣ್ಣ ಬಣ್ಣದ ಕಾಮಿನಿ]]></title>
      <link>https://kannada.webdunia.com/article/kannada-kids-stories/ಬಣ್ಣ-ಬಣ್ಣದ-ಕಾಮಿನಿ-107111700022_1.htm</link>
      <guid>https://kannada.webdunia.com/article/kannada-kids-stories/ಬಣ್ಣ-ಬಣ್ಣದ-ಕಾಮಿನಿ-107111700022_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1513672339-3871.jpg</image>
      <description><![CDATA[ಬಹಾದುರ ಆನೆಮರಿಯ ಗೆಳತಿಯಾದ ಕಾಮಿನಿ ಓತಿಕೇತ ಇತರ ಓತಿಕೇತಗಳಾದ ಕವಿತಾ, ಕರಣ್, ಕರೀಂ, ಕೊಂಕಣಾ, ಕೀರ್ತನಾ, ಕಬೀರ್ ಅವರೊಂದಿಗೆ ಬಣ್ಣ ಹೊಂದಿಸಲು ಕಲಿಯುತ್ತಿದ್ದರು.]]></description>
      <content:encoded><![CDATA[<!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0711/17/images/img1071117022_1_1.jpg' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td align='left'>WD</td><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಬಹಾದುರ ಆನೆಮರಿಯ ಗೆಳತಿಯಾದ ಕಾಮಿನಿ ಓತಿಕೇತ ಇತರ ಓತಿಕೇತಗಳಾದ ಕವಿತಾ, ಕರಣ್, ಕರೀಂ, ಕೊಂಕಣಾ, ಕೀರ್ತನಾ, ಕಬೀರ್ ಅವರೊಂದಿಗೆ ಬಣ್ಣ ಹೊಂದಿಸಲು ಕಲಿಯುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನನಗೆ ಕಪಿಲಾ ಆಂಟಿ ಬಂದಾಗ ಬಣ್ಣಹೊಂದಿಸಲು ಬಂದರೆ ಸಾಕು ಬಹಾದುರ್ ಎಂದು ಕಾಮಿನಿ ಬಹಾದುರನಲ್ಲಿ ಹೇಳಿದಳು. ಅಷ್ಟುಹೊತ್ತಿಗೆ ಕಪಿಲಾ ಆಂಟಿ ಬಂದುಬಿಟ್ಟರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳೇ ಈಗ ಬಣ್ಣ ಹುಡುಕುವ ಸಮಯ, ಮರದಿಂದ ಮರಕ್ಕೆ ಮ್ಯಾಚಿಂಗ್ ಶುರುಮಾಡೋಣ ಎಂದು ಕಪಿಲಾ ಆಂಟಿ ಹೇಳಿದಳು. ಎಲ್ಲಾ ಪುಟ್ಟ ಓತಿಕೇತಗಳು ಮರಹತ್ತಿ ಕೂತವು. ಕಾಮಿನಿಯು ಕೂಡಾ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಪಿಲಾ ಆಂಟಿ ಹೇಳಿದಳು. ರೆಡೀ, ಗೆಟ್,ಸೆಟ್,ಗೋ... ಕಂದು. ಎಲ್ಲಾ ಓತಿಕೇತಗಳು ಕಂದುಬಣ್ಣಕ್ಕೆ ತಿರುಗಿದಳು. ಆದರೆ ಕಾಮಿನಿಯೊಬ್ಬಳನ್ನು ಬಿಟ್ಟು.ನಿನಗೆ ಹೀಗೆ ಬಣ್ಣ ಬದಲಾಯಿಸಲು ಬರದಿದ್ದರೆ ನೀನು ಹೇಗೆ ಕಾಡಿನಲ್ಲಿ ಓಡುತ್ತೀಯಾ ಎಂದು ಕಪಿಲಾ ಆಂಟಿ ಬೇಸರದಿಂದ ಹೇಳಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಾಮಿನಿಗೆ ತುಂಬಾ ಬೇಜಾರಾಗಿತ್ತು. ಅವಳು ನಂತರ ಬಹಾದುರನಲ್ಲಿ, ನನಗೆ ಬಣ್ಣ ಬದಲಾಯಿಸಲು ತಿಳಿದಿದೆ ಬಹಾದುರ್ ಆದರೆ ಕಪಿಲಾ ಆಂಟಿ ಬಂದಾಗ ನಾನು ಬಣ್ಣ ಬದಲಾಯಿಸಿದರೆ ಕುಶಿಯಿಂದ ಹುಚ್ಚಾಗುತ್ತೇನೆ ಹಾಗಾದಾಗ ನಾನು ಹೊಳೆಯುವ ಬಣ್ಣದವಳಾಗುತ್ತೇನೆ. ನನ್ನ ಎಲ್ಲಾ ಸ್ನೇಹಿತರು ಗೆರೆಗಳಾಗಿ ಚುಕ್ಕಿಗಳಾಗಿ ಬದಲಾಗುತ್ತಾರೆ ಎಂದು ದುಃಖದಿಂದ ಹೇಳಿದಳು.ಬಹಾದುರನಿಗೆ ತನ್ನ ಗೆಳತಿಯ ಕಥೆ ಕೇಳಿ ತುಂಬಾ ಬೇಸರವಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಹಾದುರ ಮನೆಗೆ ಹಿಂತಿರುಗಿದಾಗ ಮನೆಯಲ್ಲಿ ಕಪಿಲಾ ಆಂಟಿ ಅಮ್ಮನೊಂದಿಗೆ ಮತ್ತು ಹುತೋಕ್ಷಿ ಕುದುರೆಯೊಂದಿಗೆ ಯುವಕ ಆನೆಗಳು ಬಾಳೆ ತೋಟದ ಸುತ್ತ ಓತಿಕೇತಗಳನ್ನು ತಿಳಿಯುವಂತೆ ಓಡುತ್ತಿರುತ್ತವೆ ಎಂದು ದೂರು ನೀಡುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಮ್ಮ ಇದು ನಿಜವೇ ಎಂದು ಕೇಳಿದಾಗ ಅಕ್ಕ ಮತ್ತು ಅಣ್ಣ ನಮಗೆ ಯಾವ ಓತಿಕೇತಗಳೂ ಕಾಣಿಸಲಿಲ್ಲ ಎಂದು ಹೇಳಿದರು. ಆಗ ಬಹಾದುರ ಓತಿಕೇತಗಳು ಬಣ್ಣ ಹೊಂದಿಸುತ್ತಿದ್ದವು ಹಾಗಾಗಿಯೇ ಅವರು ಕಾಣಿಸಲಿಲ್ಲ ಎಂದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಓತಿಕೇತಗಳು ಕಣ್ಣಿಗೆ ಬೀಳದಿದ್ದರೆ ಇವರು ಹೇಗೆ ತಾನೆ ಜಾಗ್ರತೆಯಿಂದಿರಲು ಸಾಧ್ಯ ಎಂದು ಅಮ್ಮ ಕಪಿಲಾ ಆಂಟಿಯ ಬಳಿ ಹೇಳಿದರು. ಈಗ ಎಲ್ಲರಿಗೂ ತಲೆಬಿಸಿಯಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ಬಹಾದುರ ಒಂದು ಉಪಾಯವನ್ನು ತಿಳಿಸಿದ. ಇದು ಕಾಮಿನಿಯಿಂದ ಸಾಧ್ಯ ಎಂದ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ಕಾಮಿನಿ ದಿನವೂ ಬಣ್ಣ ಬದಲಾಯಿಸುತ್ತಾ ಕಾವಲು ಕೂರುತ್ತಾಳೆ. ಯಾರಾದರೂ ಬಾಳೇತೋಟಕ್ಕೆ ಬಂದರೆ ಅವಳಿಗೆ ಕುಶಿಯೋ ಕುಶಿ. ಕಾಮಿನಿ ಕುಶಿಗೊಂಡಾಗ ಕೆಂಪು, ಕಂದು, ಹಸಿರು, ಗುಲಾಬಿ, ನೀಲಿ, ಕೇಸರಿ, ಕಪ್ಪು, ನೇರಳೆ ಹೀಗೆ ಬಣ್ಣ ಬಣ್ಣ ಬದಲಾಯಿಸಲು ಶುರುಮಾಡುತ್ತಾಳೆ. ಆಗ ಅಣ್ಣ ಮತ್ತು ಅಕ್ಕ ಅವರನ್ನು ಗುರುತಿಸಿ ಮೆತ್ತಗೆ ಓತಿಕೇತಗಳನ್ನು ತುಳಿಯದಂತೆ ನಡೆಯುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ಯಾರಿಗೂ ಏನೂ ತೊಂದರೆಯಿಲ್ಲವಲ್ಲ ಎಂದು ಕಾಮಿನಿಗೆ, ಕಪಿಲಾ ಆಂಟಿಗೆ, ಅಣ್ಣ ಮತ್ತು ಅಕ್ಕನಿಗೆ ಎಲ್ಲರಿಗೂ ಕುಶಿಯೋ ಕುಶಿ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಲೇಖಕಿ ರಾಧಿಕಾ ಛಡ್ಡಾ ಕಾಮಿನಿ ಓತಿಕೇತ ಪಾತ್ರದ ಮೂಲಕ ವಿವಿಧ ಬಣ್ಣಗಳನ್ನು ಮಕ್ಕಳಿಗೆ ಈ ಕಥೆಯಲ್ಲಿ ತಿಳಿಯಪಡಿಸುತ್ತಾರೆ.ಓತಿಕೇತಗಳನ್ನು ಅಣ್ಣಮತ್ತು ಅಕ್ಕ ಬಾಳೆತೋಟದಲ್ಲಿ ಗುರುತಿಸುವಂತೆ ಬಹಾದುರನು ನೀಡುವ ಉಪಾಯವು ಅತ್ಯಂತ ಕುತೂಹಲಕಾರಿಯಾಗಿದ್ದು ಈ ಕಥೆಯನ್ನು ಓದಿಸಿಕೊಂಡು ಹೋಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರಿಯಾ ಕುರಿಯನ್ ಅವರ ಚಿತ್ರವು ಈ ಪುಸ್ತಕಕ್ಕೆ ಮತ್ತಷ್ಟು ಮೆರುಗನ್ನು ನೀಡಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕದ ಹೆಸರು: </b>ಬಣ್ಣ ಬಣ್ಣದ ಕಾಮಿನಿ</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಲೇಖಕರು: </b>ರಾಧಿಕಾ ಚಡ್ಢಾ</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಅನುವಾದ: </b>ಅಶ್ವಿನಿ ಭಟ್</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಬೆಲೆ: 90 </b>ರೂಪಾಯಿಗಳು</font><br/></font>]]></content:encoded>
      <pubDate>Mon, 23 Feb 2009 16:15:42 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮೊಸಳೆಯ ಶಾಪವಿಮೋಚನೆ]]></title>
      <link>https://kannada.webdunia.com/article/kannada-kids-stories/ಮೊಸಳೆಯ-ಶಾಪವಿಮೋಚನೆ-107111300049_1.htm</link>
      <guid>https://kannada.webdunia.com/article/kannada-kids-stories/ಮೊಸಳೆಯ-ಶಾಪವಿಮೋಚನೆ-107111300049_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಪಾಂಡವರಲ್ಲಿ ಮೂರನೆಯವನಾದ ಅರ್ಜುನನಿಗೆ ಒಮ್ಮೆ ತೀರ್ಥಯಾತ್ರೆ ಹೋಗುವ ಮನಸ್ಸಾಯಿತು.]]></description>
      <content:encoded><![CDATA[<font  style='font-size:11pt; color:#000000'>ಪಾಂಡವರಲ್ಲಿ ಮೂರನೆಯವನಾದ ಅರ್ಜುನನಿಗೆ ಒಮ್ಮೆ ತೀರ್ಥಯಾತ್ರೆ ಹೋಗುವ ಮನಸ್ಸಾಯಿತು. ತೀರ್ಥಯಾತ್ರೆಯನ್ನು ಮಾಡಿ ಆ ಸ್ಥಳದಲ್ಲಿ ಧ್ಯಾನ ಅಥವಾ ಪ್ರಾರ್ಥನೆಯನ್ನು ಮಾಡಿದ್ದಲ್ಲಿ ದೇವರು ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂತೆಯೇ ಅರ್ಜುನನು ತನ್ನ ಶತ್ರುಗಳನ್ನು ನಾಶಮಾಡಲು ಶಕ್ತಿಯನ್ನು ಸಂಪಾದಿಸುವುದಕ್ಕಾಗಿ ತೀರ್ಥಯಾತ್ರೆಯನ್ನು ಕೈಗೊಂಡನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅರ್ಜುನನು ತೀರ್ಥಯಾತ್ರೆ ಕೈಗೊಳ್ಳಲು ಅಪೇಕ್ಷೆಪಟ್ಟ ದಕ್ಷಿಣ ಸಮುದ್ರ ತೀರದಲ್ಲಿ ಐದು ಪವಿತ್ರ ತೀರ್ಥಕ್ಷೇತ್ರಗಳಿದ್ದವು. ಅರ್ಜುನನು ಈ ಎಲ್ಲಾ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದನು. ಆದರೆ ಅಲ್ಲಿ ಯಾವುದೇ ಜನರು ಕಂಡುಬರದ ಕಾರಣ ಅರ್ಜುನನು ಅತ್ಯಂತ ನಿರಾಶೆಗೊಂಡನು. ಈ ಪವಿತ್ರ ಕ್ಷೇತ್ರದಲ್ಲಿ ಏನೋ ತಪ್ಪು ನಡೆದು ಹೋಗಿದೆ ಅಥವಾ ನಾನು ಬೇರೆ ಯಾವುದೋ ಸ್ಥಳಕ್ಕೆ ಬಂದಿರಬಹುದೆಂದು ಅರ್ಜುನನು ಯೋಚಿಸಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲಾ ಐದೂ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಅತ್ಯಂತ ಬೇಸರದಿಂದಲೇ ಅರ್ಜುನನು ಹಿಂತಿರುಗಿದನು. ಸ್ವಲ್ಪ ದೂರ ಸಾಗಿದಾಗ ಒಬ್ಬ ಋಷಿಯು ತಪಸ್ಸು ಮಾಡುತ್ತಿರುವುದನ್ನು ಅರ್ಜುನನು ಕಂಡನು. ಕೂಡಲೇ ಅವರ ಬಳಿಗೆ ಸಾಗಿ, ಮುನಿಗಳೇ ನಾನು ಈಗಾಗಲೇ ಐದು ಪವಿತ್ರ ಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದೆ, ಆದರೆ ಅಲ್ಲಿ ಯಾವನೇ ಒಬ್ಬನೂ ಪ್ರಾರ್ಥನೆಗೈಯುವುದಾಗಲಿ ಅಥವಾ ಧ್ಯಾನ ಮಾಡುವುದಾಗಲೀ ಕಾಣುತ್ತಿಲ್ಲವಲ್ಲ, ಯಾಕೆ ಹೀಗೆ ಎಂದು ಕೇಳಿದನು. ಅದಕ್ಕೊಂದು ವಿಶೇಷ ಕಾರಣವಿದೆ ಎಂದು ಮುನಿಗಳು ಉತ್ತರಿಸಿದರು. ಆ ರಹಸ್ಯವನ್ನು ತನಗೆ ತಿಳಿಸುವಂತೆ ಅರ್ಜುನನು ಅವರಿಗೆ ಒತ್ತಾಯಿಸಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನೀನು ಆ ಸ್ಥಳಕ್ಕೆ ಹೋದರೆ ದೇವರ ದರ್ಶನ ಮಾಡುವ ಮೊದಲು ಅಲ್ಲಿರುವ ನದಿಯಲ್ಲಿ ಸ್ನಾನಮಾಡಬೇಕು. ಆದರೆ ಜನರು ಆ ನದಿಗಿಳಿಯುತ್ತಿದ್ದಂತೆ ಭೀಕರ ಮೊಸಳೆಯೊಂದು ಅವರನ್ನು ತಿಂದು ಹಾಕುತ್ತದೆ. ಆ ಪ್ರಾಣಿಯು ನದಿ ನೀರಿನಲ್ಲಿ ವಾಸಿಸುತ್ತದೆ. ಒಮ್ಮೆ ನೀನು ಆ ನದಿಗೆ ಇಳಿದೆ ಅಂತಾದರೆ ನಿನಗೆ ಹಿಂದಕ್ಕೆ ಬರಲು ಸಾಧ್ಯವೇ ಇಲ್ಲ. ಈ ಎಲ್ಲಾ ಐದು ಪುಣ್ಯಕ್ಷೇತ್ರದಲ್ಲಿ ಇದೇ ಸಂಭವಿಸುತ್ತದೆ. ಅದಕ್ಕಾಗಿ ಯಾರೂ ಇಲ್ಲಿ ಧ್ಯಾನವನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡುವುದಿಲ್ಲ ಎಂದು ಆ ಋಷಿಯು  ಕಾರಣವನ್ನು ತಿಳಿಸಿದನು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಓ ಹೀಗಾ ವಿಷಯ, ನಾನು ಹಿಂದಕ್ಕೆ ಹೋಗಿ ನದಿಯಲ್ಲಿ ಸ್ನಾನ ಮಾಡುತ್ತೇನೆ. ನಾನೇನು ಭಯಗೊಂಡಿಲ್ಲ ಎಂದು ಅರ್ಜುನನು ಹಿಂತಿರುಗಿ ಹೋಗಿ ನದಿಯಲ್ಲಿ ಸ್ನಾನಕ್ಕಿಳಿದನು. ಋಷಿಯು ಹೇಳಿದಂತೆ ಮೊಸಳೆಯೊಂದು ಅವನನ್ನು ನೀರಿನೊಳಕ್ಕೆ ಎಳೆಯಲು ಪ್ರಾರಂಭಿಸಿತು. ಮೊಸಳೆಯು ಅರ್ಜುನನನ್ನು ತಿನ್ನಲು ಪ್ರಯತ್ನಿಸಿತು. ಆದರೆ ಅರ್ಜುನನು ತನ್ನ ಅಸಾಧಾರಣ ಶಕ್ತಿಯಿಂದ ಮೊಸಳೆಯೊಂದಿಗೆ ಹೋರಾಟ ಪ್ರಾರಂಭಿಸಿದನು. ನೀರಿನಡಿಯಲ್ಲಿ ಇಬ್ಬರ ಮಧ್ಯೆಯೂ ಭೀಕರ ಸೆಣಸಾಟ ನಡೆದು ಕೊನೆಯಲ್ಲಿ ಅರ್ಜುನನು ಮೊಸಳೆಯನ್ನು ಸೋಲಿಸಿದನು. ನಂತರ ಆ ಮೊಸಳೆಯನ್ನು ಎಳೆದುಕೊಂಡು ನೀರಿನಿಂದ ಹೊರಗೆ ಬಂದನು. ನೀರಿನಿಂದ ಹೊರಗೆ ಬರುತ್ತಿದ್ದಂತೆಯೇ ಮೊಸಳೆಯು ಸುಂದರ ಅಪ್ಸರೆಯಾಗಿ ಬದಲಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ನೋಡಿ ಅರ್ಜುನ ಬಹಳ ದಿಗ್ಭ್ರಾಂತಗೊಂಡನು. ನೀನು ಮೊಸಳೆಯ ರೂಪದಲ್ಲಿ ನನ್ನೊಂದಿಗೆ ಸೆಣಸಾಡಿ ಈಗ ನೋಡಿದರೆ ಅಪ್ಸರೆಯಾಗಿ ಬದಲಾಗಿದ್ದೀಯ ಎಂದು ಅರ್ಜುನನು ಆಶ್ಚರ್ಯಚಕಿತನಾಗಿ ಕೇಳಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ಅಪ್ಸರೆಯು ಅರ್ಜುನನಲ್ಲಿ, ನೀನು ನನ್ನನ್ನು ರಕ್ಷಿಸಿದ್ದೀಯ. ಇದಕ್ಕಾಗಿ ನಾನು ನಿನಗೆ ಚಿರಋಣಿಯಾಗಿದ್ದೇನೆ. ದಯವಿಟ್ಟು ಇತರ ನಾಲ್ಕು ಮೊಸಳೆಗಳನ್ನೂ ರಕ್ಷಿಸು. ಅವರು ನನ್ನ ಸ್ನೇಹಿತರು ಎಂದು ವಿನಂತಿಸಿದಳು. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಅರ್ಜುನನು ಕೇಳಿದಾಗ ಅಪ್ಸರೆಯು ನಡೆದಿದ್ದ ಸಂಗತಿಯನ್ನು ಅರ್ಜುನನಿಗೆ ತಿಳಿಸಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಮ್ಮೆ ಒಬ್ಬ ಪ್ರಸಿದ್ಧ ಋಷಿಯು ಪವಿತ್ರ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದನು. ಅವನು ಎಷ್ಟು ಘೋರವಾಗಿ ತಪಸ್ಸು ಮಾಡುತ್ತಿದ್ದನೆಂದರೆ ದೇವಾದಿದೇವತೆಗಳೆಲ್ಲ ಚಿಂತೆಗೊಳಗಾದರು. ಹೇಗಾದರೂ ಮಾಡಿ ಅವನ ತಪಸ್ಸಿಗೆ ಭಂಗ ತರಬೇಕೆಂದು ನಿರ್ಣಯಿಸಿ ನಮ್ಮನ್ನು ತಪಸ್ಸು ಮಾಡುವ ಸ್ಥಳಕ್ಕೆ ಕಳುಹಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರಂತೆಯೇ ನಾವು ಆ ಋಷಿಯ ತಪಸ್ಸನ್ನು ಭಂಗಪಡಿಸಲು ಪ್ರಯತ್ನಿಸಿದೆವು. ಆದರೆ ಆ ಋಷಿಯು ಕುಪಿತಗೊಂಡು ಮೊಸಳೆಯ ರೂಪವನ್ನು ಹೊಂದುವಂತೆ ನಮಗೆ ಶಾಪವಿತ್ತನು. ಅಲ್ಲದೆ ನಾವು ಇಲ್ಲಿರುವ ಐದು ಪುಣ್ಯಕ್ಷೇತ್ರಗಳ ನದಿಯಲ್ಲಿ ವಾಸಿಸಿ ನದಿಗಿಳಿಯುವ ಭಕ್ತಾದಿಗಳನ್ನು ತಿಂದುಹಾಕುವಂತೆ ತಿಳಿಸಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಯಾವಾಗ ಬಲಶಾಲಿ ಹಾಗೂ ಧೈರ್ಯವಂತನಾದ ಶೂರನು ಬಂದು ನಮ್ಮೊಂದಿಗೆ ಸೆಣಸಾಡಿ ನಮ್ಮನ್ನು ಸೋಲಿಸಿ ನದಿಯಿಂದ ನಮ್ಮನ್ನು ಹೊರಗೆತರುತ್ತಾನೋ ಅಂದಿಗೆ ನಮ್ಮ ಶಾಪವಿಮೋಚನೆಯಾಗುತ್ತದೆ ಎಂಬುದಾಗಿ ತಿಳಿಸಿದ್ದರು ಎಂದು ಅತ್ಯಂತ ದುಃಖದಿಂದ ಈ ಅಪ್ಸರೆಯು ನಡೆದ ಸಂಗತಿಯನ್ನು ಅರ್ಜುನನಿಗೆ ತಿಳಿಸಿದಳು. ಅಂತಹ ವ್ಯಕ್ತಿಗಾಗಿ ನಾವು ಕಾಯುತ್ತಿದ್ದೆವು. ಇಂದು ನೀನು ನನ್ನನ್ನು ರಕ್ಷಿಸಿದ್ದಿ. ದಯವಿಟ್ಟು ಹೀಗೆಯೇ ನನ್ನ ಸ್ನೇಹಿತರನ್ನು ಕೂಡಾ ರಕ್ಷಿಸು ಎಂಬುದಾಗಿ ಅಪ್ಸರೆಯು ದೈನ್ಯದಿಂದ ಬೇಡಿಕೊಂಡಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಪ್ಸರೆಯ ವಿನಂತಿಯ ಮೇರೆಗೆ ಅರ್ಜುನನು ಉಳಿದ ಎಲ್ಲಾ ನಾಲ್ಕು ನದಿಗಳಿಗೂ ಇಳಿದು ಅದರಲ್ಲಿದ್ದ  ಮೊಸಳೆಗಳೊಂದಿಗೆ ಸಣಸಾಡಿ ಅವುಗಳನ್ನು ನೀರಿನಿಂದ ಹೊರಗೆ ತಂದು ಶಾಪ ವಿಮೋಚನೆಗೊಳಿಸಿದನು.</font>]]></content:encoded>
      <pubDate>Mon, 23 Feb 2009 16:15:19 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಕಷ್ಟ ಪಟ್ಟರೆ ಸೂಕ್ತ ಪ್ರತಿಫಲ]]></title>
      <link>https://kannada.webdunia.com/article/kannada-kids-stories/ಕಷ್ಟ-ಪಟ್ಟರೆ-ಸೂಕ್ತ-ಪ್ರತಿಫಲ-107111300013_1.htm</link>
      <guid>https://kannada.webdunia.com/article/kannada-kids-stories/ಕಷ್ಟ-ಪಟ್ಟರೆ-ಸೂಕ್ತ-ಪ್ರತಿಫಲ-107111300013_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ದಿನ ರಾಮುವಿಗೆ ಕನಸಿನಲ್ಲಿ ಒಬ್ಬ ಮುದಿಯ ಬಂದು ಮನೆಯ ಹಿತ್ತಲಿನಲ್ಲಿ ತಾಳೆ ಮರದ ಕೆಳಗೆ ನಿಧಿ ಇದೆ ಎಂದು ಹೇಳುತ್ತಾನೆ. ಮಾರನೇ ದಿನ ರಾಮು ಹಿತ್ತಲಿಗೆ ಹೋಗಿ ಆ ತಾಳೆ ಮರದ ಕೆಳಗೆ ಅಗೆಯಲು ಪ್ರಾರಂಭಿಸುತ್ತಾನೆ. ರಾಮು ಮಣ್ಣು ಅಗೆಯಲು ಪ್ರಾರಂಭಿಸುತ್ತಾನೆ. ಮಣ್ಣು ಅಗೆದು ಅಗೆದು ಮೇಲೆ...]]></description>
      <content:encoded><![CDATA[<font  style='font-size:11pt; color:#000000'>ಒಂದು ದಿನ ರಾಮುವಿಗೆ ಕನಸಿನಲ್ಲಿ ಒಬ್ಬ ಮುದಿಯ ಬಂದು ಮನೆಯ ಹಿತ್ತಲಿನಲ್ಲಿ ತಾಳೆ ಮರದ ಕೆಳಗೆ ನಿಧಿ ಇದೆ ಎಂದು ಹೇಳುತ್ತಾನೆ. ಮಾರನೇ ದಿನ ರಾಮು ಹಿತ್ತಲಿಗೆ ಹೋಗಿ ಆ ತಾಳೆ ಮರದ ಕೆಳಗೆ ಅಗೆಯಲು ಪ್ರಾರಂಭಿಸುತ್ತಾನೆ. ರಾಮು ಮಣ್ಣು ಅಗೆಯಲು ಪ್ರಾರಂಭಿಸುತ್ತಾನೆ. ಮಣ್ಣು ಅಗೆದು ಅಗೆದು ಮೇಲೆ ರಾಡಿ ರಾಶಿಯಾಗುತ್ತಾ ಹೋಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಮು ಅಗೆಯುತ್ತಾ ಹೋಗುತ್ತಾನೆ. ಆದರೆ ಎಷ್ಟೇ ಅಗೆದರೂ ರಾಮುವಿಗೆ ನಿಧಿ ಸಿಗುವುದಿಲ್ಲ. ರಾಮು ಹಿಡಿದ ಛಲ ಬಿಡದಂತೆ ಅಗೆಯುವ ಕೆಲಸವನ್ನು ಮುಂದುವರಿಸುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಬಹು ಆಳದವರೆಗೆ ಅಗೆಯುತ್ತಾನೆ. ಮಣ್ಣಿನ ರಾಶಿ ದೊಡ್ಡದಾಗುತ್ತಾ ಹೋಗುತ್ತದೆ. ಆದರೆ ನಿಧಿಯ ಯಾವುದೇ ಕುರುಹು ಸಿಗುವುದಿಲ್ಲ. ಅಂತಿಮವಾಗಿ ರಾಮುವಿಗೆ ಒಂದು ಕಲ್ಲು ಸಿಗುತ್ತದೆ ಅಷ್ಟೇ. ಇದನ್ನು ನೋಡಿ ರಾಮು ಬಹಳ ನಿರಾಶೆಗೊಳ್ಳುತ್ತಾನೆ. ನಿನ್ನೆ ಕನಸಿನಲ್ಲಿ ಆ ಮುದಿಯ ನನಗೆ ಸುಳ್ಳು ಹೇಳಿದ್ದಾನೆ ಎಂದು ಹಲುಬುತ್ತಾನೆ ಮತ್ತು ಮುದಿಯನಿಗೆ ಬಯ್ಯುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಮು ಬೇಸರದಿಂದ ಆಯಾಸದಿಂದ ಕೂರುತ್ತಾನೆ. ರಾಮುವಿನ ತಾಯಿ ಬಂದು ಆ ಹೊಂಡವನ್ನು ನೋಡುತ್ತಾಳೆ. ಅದನ್ನು ಕಂಡು ಅವಳಿಗೆ ಬಹಳ ಸಂತೋಷವಾಗುತ್ತದೆ. ಮತ್ತು ರಾಮುವನ್ನು ತನ್ನ ಎರಡೂ ಕೈಗಳಿಂದ ಅಪ್ಪಿ ಹಿಡಿದು ರಾಮು ನಾನು ಹಲವು ದಿನಗಳಿಂದ ಈ ಸ್ಥಳದಲ್ಲಿ ಒಂದು ಗಿಡವನ್ನು ನೆಡಲು ಯೋಚಿಸುತ್ತಿದ್ದೆ, ಆದರೆ ಅದಕ್ಕಾಗಿ ನಾನು ಹೊಂಡವನ್ನು ಮಾಡಬೇಕಾಗಿತ್ತು. ಅದು ನನ್ನಿಂದ ಅಸಾಧ್ಯವಾಗಿತ್ತು. ಹಾಗಾಗಿ ನನ್ನ ಆಶೆ ಫಲಕಾರಿಯಾಗದೆ ಹಾಗೇ ಉಳಿದಿತ್ತು. ಆದರೆ ನೀನು ಇಂದು ನನ್ನ ಆಶೆಯನ್ನು ಪೂರೈಸಿದೆ. ನೀನು ಈ ಹೊಂಡವನ್ನು ತೋಡಿ ನನ್ನ ಎದುರಿದ್ದ ದೊಡ್ಡ ಸಮಸ್ಯೆಯನ್ನು ನಿವಾರಿಸಿದೆ ಎಂದು ಹೇಳಿ ಆತನ ಕೈಗೆ ಬಹುಮಾನವಾಗಿ 100 ರೂಪಾಯಿಯನ್ನು ನೀಡುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತನಗೆ ನಿಧಿ ಸಿಕ್ಕಿಲ್ಲ ಎಂಬ ಬೇಸರದಿಂದ ಇದ್ದ ರಾಮು ಈ 100 ರೂಪಾಯಿ ಬಹುಮಾನವನ್ನು ಕಂಡು ಸಂತೋಷ ಪಡುತ್ತಾನೆ. ಆ 100 ರೂಪಾಯಿಯಿಂದ ರಾಮು ತನಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಸಂತೋಷ ಪಡುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಷ್ಟ ಪಟ್ಟರೆ ಪ್ರತಿಫಲ ದೊರೆಯುತ್ತದೆ ಎಂಬುದು ಇದರಿಂದ ನಮಗೆ ತಿಳಿಯುತ್ತದೆ.</font>]]></content:encoded>
      <pubDate>Mon, 23 Feb 2009 16:15:04 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಗುಂಡ ಮತ್ತು ಅಯಸ್ಕಾಂತ ಕಲ್ಲು]]></title>
      <link>https://kannada.webdunia.com/article/kannada-kids-stories/ಗುಂಡ-ಮತ್ತು-ಅಯಸ್ಕಾಂತ-ಕಲ್ಲು-107111300012_1.htm</link>
      <guid>https://kannada.webdunia.com/article/kannada-kids-stories/ಗುಂಡ-ಮತ್ತು-ಅಯಸ್ಕಾಂತ-ಕಲ್ಲು-107111300012_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಗುಂಡ ಎಂಬ ಹುಡುಗನಿದ್ದ. ಆತನಿಗೆ ತಂದೆ ತಾಯಿ ಯಾರು ಇರಲಿಲ್ಲ. ಆತ ಕೂಲಿ ಕೆಲಸ ಮಾಡಿ ಕಷ್ಟದಿಂದ ತನ್ನ ಜೀವನ ಸಾಗಿಸುತ್ತಿದ್ದ.

ಹೀಗೆ ಒಂದು ದಿನ ಗುಂಡ ಕೆಲಸ ಮುಗಿಸಿ ಆಟಿಕೆಯನ್ನು ತೆಗೆದುಕೊಳ್ಳಲು ಅಂಗಡಿಗೆ ಹೋಗುತ್ತಾನೆ.]]></description>
      <content:encoded><![CDATA[<font  style='font-size:11pt; color:#000000'>ಒಂದು ಊರಿನಲ್ಲಿ ಗುಂಡ ಎಂಬ ಹುಡುಗನಿದ್ದ. ಆತನಿಗೆ ತಂದೆ ತಾಯಿ ಯಾರು ಇರಲಿಲ್ಲ. ಆತ ಕೂಲಿ ಕೆಲಸ ಮಾಡಿ ಕಷ್ಟದಿಂದ ತನ್ನ ಜೀವನ ಸಾಗಿಸುತ್ತಿದ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಒಂದು ದಿನ ಗುಂಡ ಕೆಲಸ ಮುಗಿಸಿ ಆಟಿಕೆಯನ್ನು ತೆಗೆದುಕೊಳ್ಳಲು ಅಂಗಡಿಗೆ ಹೋಗುತ್ತಾನೆ. ಗುಂಡ ಅಲ್ಲಿ ಒಂದು ಅಯಸ್ಕಾಂತ ಕಲ್ಲನ್ನು ಕಂಡು ಅದನ್ನು 5 ರೂಪಾಯಿ ಕೊಟ್ಟು ಖರೀದಿಸುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆತ ಅಯಸ್ಕಾಂತ ಕಲ್ಲನ್ನು ಎಲ್ಲಿಗೂ ಹೋದರು ತನ್ನ ಜತೆ ತೆಗೆದುಕೊಂಡು ಹೋಗುತ್ತಿದ್ದ. ಹೀಗೆ ಒಂದು ದಿನ ಗುಂಡ ಕೆಲಸ ಮುಗಿಸಿ ನದಿಯ ಹತ್ತಿರ ತಿರುಗಾಡಲು ಹೋಗುತ್ತಾನೆ. ತಿರುಗಾಡುತ್ತಾ ನದಿ ತೀರದ ಹತ್ತಿರ ಹೋದಾಗ ಆತನಿಗೆ ಏನೋ ವಿಚಿತ್ರ ಅನುಭವವಾದಂತೆ ಆಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನದಿ ತೀರದಲ್ಲಿ ಅನೇಕ ಅಯಸ್ಕಾಂತ ಕಲ್ಲುಗಳಿರುವುದನ್ನು ನೋಡುತ್ತಾನೆ. ಆ ಅಯಸ್ಕಾಂತ ಕಲ್ಲುಗಳು ಗುಂಡನ ಬಳಿ ಇದ್ದ ಕಲ್ಲಿಗೆ ಅಂಟಲು ಪ್ರಾರಂಭಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರಿಂದ ಗುಂಡ ತಪ್ಪಿಸಲು ಪ್ರಯತ್ನಿಸುತ್ತಾನೆ. ಆದರೆ ಗುಂಡನಿಗೆ ಈ ಅಯಸ್ಕಾಂತ ಕಲ್ಲುಗಳು ಅವನಲ್ಲಿದ್ದ ಅಯಸ್ಕಾಂತ ಕಲ್ಲಿಗೆ ಅಂಟುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಹೀಗೆ ಆತ ಎಷ್ಟೇ ಪ್ರಯತ್ನಿಸಿದರೂ ಅದರಿಂದ ತಪ್ಪಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ಈ ಅಂಟಿದ ಅಯಸ್ಕಾಂತ ಕಲ್ಲುಗಳಿಂದಾಗಿ ಗುಂಡನ ಮೇಲೆ ಹೆಚ್ಚು  ಭಾರ ಬೀಳುತ್ತದೆ. ಆತ ಆಯಾಸದಿಂದ ಅಲ್ಲೇ ಕೂರುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಕೂರುವಾಗ ಕಾಪಾಡಿ ಕಾಪಾಡಿ ಎಂದು ಕೂಗುವ ಶಬ್ದ ಕೇಳುತ್ತದೆ. ಗುಂಡ ಶಬ್ದ ಬಂದ ಕಡೆ ನೋಡುತ್ತಾನೆ. ಮುದಿ ಕೊಕ್ಕರೆ ಒಂದು ರಭಸವಾಗಿ ಹರಿಯುತ್ತಿರುವ ನದಿಯ ಮಧ್ಯದಲ್ಲಿ ಸಿಕ್ಕಿಬಿದ್ದಿರುವುದನ್ನು ಕಾಣುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದನ್ನು ರಕ್ಷಿಸುವುದು ಹೇಗೆ ಎಂದು ಯೋಚಿಸಲು ತೊಡಗುತ್ತಾನೆ. ಗುಂಡನಿಗೆ ಒಂದು ವಿಚಾರ ಹೊಳೆಯುತ್ತದೆ. ಆತ ಆ ಆಯಸ್ಕಾಂತ ಕಲ್ಲುಗಳನ್ನು ಒಂದೊಂದಾಗಿ ಜೋಡಿಸಿ ಮುದಿ ಕೊಕ್ಕರೆ ಇದ್ದ ಸ್ಥಳಕ್ಕೆ ಸೇತುವೆಯಂತೆ ಅವುಗಳನ್ನು ಜೋಡಿಸುತ್ತಾನೆ. ಮತ್ತು ಮುದಿ ಕೊಕ್ಕರೆಯನ್ನು ಅದರ ಮುಖಾಂತರ ದಡಕ್ಕೆ ಬರುವಂತೆ ಹೇಳುತ್ತಾನೆ. ಮುದಿ ಕೊಕ್ಕರೆ ನಿಧಾನವಾಗಿ ಅಯಸ್ಕಾಂತ ಕಲ್ಲಿನ ಸೇತುವೆ ಮುಖಾಂತರ ದಡಕ್ಕೆ ಸೇರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುದಿ ಕೊಕ್ಕರೆ ಗುಂಡನನ್ನು ಕೊಕ್ಕರೆ ರಾಜನ ಹತ್ತಿರ ಕರೆದುಕೊಂಡು ಹೋಗುತ್ತಾನೆ ಮತ್ತು ನಡೆದ ವಿಷಯವನ್ನು ಮುದಿ ಕೊಕ್ಕರೆ ಹೇಳುತ್ತದೆ. ಇದನ್ನು ಕೇಳಿದ ರಾಜ ಕೊಕ್ಕರೆ ಗುಂಡನಿಗೆ ಧನ್ಯವಾದ ಸಲ್ಲಿಸಿ ಒಂದು ಜಾದೂ ತಟ್ಟೆಯನ್ನು ಕೊಡುತ್ತದೆ. ಈ ಜಾದೂ ತಟ್ಟೆಯಲ್ಲಿ ನಿನಗೆ ಏನು ಬೇಕೋ ಅದನ್ನು ಕೇಳು, ಅದರಲ್ಲಿ ನೀನು ಕೇಳಿದ ವಸ್ತು ಪ್ರತ್ಯಕ್ಷವಾಗುತ್ತದೆ ಎಂದು ಹೇಳುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗುಂಡ ಅದನ್ನು ತನ್ನ ಜತೆಯಲ್ಲಿ ತೆಗೆದುಕೊಂಡು ಹೋಗಿ, ಮುಂದಿನ ದಿನವನ್ನು ಸುಖವಾಗಿ ಆನಂದದಿಂದ ಕಳೆಯುತ್ತಾನೆ.</font>]]></content:encoded>
      <pubDate>Mon, 23 Feb 2009 16:14:44 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಕ್ಕಳೇ ಗುಲಾಬಿ ಹೂಗಳು ಎಂದ ಚಾಚಾ]]></title>
      <link>https://kannada.webdunia.com/article/kannada-kids-stories/ಮಕ್ಕಳೇ-ಗುಲಾಬಿ-ಹೂಗಳು-ಎಂದ-ಚಾಚಾ-107111300006_1.htm</link>
      <guid>https://kannada.webdunia.com/article/kannada-kids-stories/ಮಕ್ಕಳೇ-ಗುಲಾಬಿ-ಹೂಗಳು-ಎಂದ-ಚಾಚಾ-107111300006_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಸರಿ ಸುಮಾರು ನೂರು ವರ್ಷಗಳ ಹಿಂದೆ ಅಂದರೆ, 1889 ನವೆಂಬರ್ 14 ರಂದು ಅಲಹಾಬಾದ್‌ ನಗರದಲ್ಲಿ ಪ್ರಖ್ಯಾತ ವಕೀಲರಾದ ಮೋತಿಲಾಲ್ ನೆಹರು ಮತ್ತು ಸ್ವರೂಪ್ ರಾಣಿ ದಂಪತಿಗಳ ಮನೆಯಲ್ಲಿ ಮಗುವೊಂದು ಜನಿಸಿತು]]></description>
      <content:encoded><![CDATA[<font  style='font-size:11pt; color:#000000'>ಸರಿ ಸುಮಾರು ನೂರು ವರ್ಷಗಳ ಹಿಂದೆ ಅಂದರೆ, 1889 ನವೆಂಬರ್ 14 ರಂದು ಅಲಹಾಬಾದ್‌ ನಗರದಲ್ಲಿ ಪ್ರಖ್ಯಾತ ವಕೀಲರಾದ ಮೋತಿಲಾಲ್ ನೆಹರು ಮತ್ತು ಸ್ವರೂಪ್ ರಾಣಿ ದಂಪತಿಗಳ ಮನೆಯಲ್ಲಿ ಮಗುವೊಂದು ಜನಿಸಿತು. ತಂದೆ ತಾಯಿಗಳು ಮುದ್ದಿನಿಂದ ಮಗುವನ್ನು ಜವಾಹರಲಾಲ್ ಎಂದು ನಾಮಕರಣ ಮಾಡಿದರು. ಮಗು ತುಂಬಾ ಬುದ್ಧಿವಂತನಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಆಡುತ್ತಾಡುತ್ತಾ ಬೆಳೆಯಿತು ಈ ಮಗು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜವಾಹರಲಾಲ್ ದೊಡ್ಡವನಾದಾಗ, ತಂದೆ ಮೋತಿಲಾಲ್ ನೆಹರು ಕೇಂಬ್ರಿಡ್ಜ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಮಗನನ್ನು ಇಂಗ್ಲೆಂಡ್‌ಗೆ ಕಳುಹಿಸಿದರು. ಶಿಕ್ಷಣ ಮುಗಿಸಿದ ನಂತರ ಭಾರತಕ್ಕೆ ಮರಳಿದ ನಂತರ ಜವಾಹರಲಾಲ್ ನೆಹರು ಹಣ ಗಳಿಸುವುದಕ್ಕಾಗಿ ವೃತ್ತಿ ಮಾಡುವುದು ಸರಿಯಲ್ಲ. ಅದು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ತಂದೆಗೆ ಹೇಳಿದರು. ವೃತ್ತಿಯನ್ನು ಬಿಟ್ಟು ದೇಶಸೇವೆ ಹಾಗೂ ತುಳಿತಕ್ಕೆ ಒಳಗಾದವರ ಮತ್ತು ಬಡವರ ಸೇವೆಯೇ  ನನ್ನ ಜೀವನದ ಗುರಿ ಎಂದು ಸಾರಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಾತಂತ್ರ್ಯ ಸಂಗ್ರಾಮದ ಕಾಲವದು. ಕಾಂಗ್ರೆಸ್‌ನಲ್ಲಿ ಸೇರಿ ಗಾಂಧೀಜಿಯವರು ಆರಂಭಿಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರಲ್ಲದೇ ಅಲ್ಪ ಸಮಯದಲ್ಲಿ  ಉತ್ತಮ ವಾಗ್ಮಿಗಳೆಂದು ಹೆಸರುವಾಸಿಯಾದರು. ಪ್ರಾಮಾಣಿಕ ಮತ್ತು ನಿಸ್ವಾರ್ಥ ರಾಜಕಾರಣಿಯಾದ ಜವಾಹರಲಾಲ್ ನೆಹರು ಸ್ವಾತಂತ್ರ್ಯ ದೊರಕಿದ ಕೂಡಲೇ ತಮ್ಮ ಕಾರ್ಯದಕ್ಷತೆಯಿಂದಾಗಿ ದೇಶದ ಮೊಟ್ಟಮೊದಲ ಪ್ರಧಾನಿಯಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗುಲಾಬಿ ಹೂವಿನ ಬಗ್ಗೆ ಹಾಗೂ ಮಕ್ಕಳಿಗೆ ಅವರು ಧಾರೆಯರೆಯುತ್ತಿದ್ದ ಪ್ರೀತಿಯ ಕುರಿತು ಜಗತ್ತಿಗೇ ಗೊತ್ತಿದೆ. ಯಾವಾಗಲೂ ಮಕ್ಕಳನ್ನು ಹಾಗೂ ಗುಲಾಬಿ ಹೂಗಳನ್ನು ಹೋಲಿಸಿಯೇ ಮಾತನಾಡುತ್ತಿದ್ದರು. ಮಕ್ಕಳು ತೋಟದಲ್ಲಿರುವ ಹೂಗಳಿದ್ದಂತೆ ಎಂದು ಯಾವಾಗಲೂ ಹೇಳುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳನ್ನು ತುಂಬಾ ಪ್ರೀತಿಸಿ. ಉತ್ತಮ ಶಿಕ್ಷಣ ಕೊಡಿ ,ಅವರು ದೇಶದ ಭವಿಷ್ಯ ಮತ್ತು ನಾಳಿನ ಜವಾಬ್ದಾರಿಯುತ ಪ್ರಜೆಗಳು ಎಂದು ಹೇಳುತ್ತಿದ್ದರು. ಮಕ್ಕಳೇ ದೇಶದ ನಿಜವಾದ ಶಕ್ತಿ. ಹೆಣ್ಣು, ಗಂಡು ಎನ್ನುವ ಭೇದ ಭಾವ ಮಾಡದೇ ಉಭಯರಿಗೂ ಸಮಾನ ಅವಕಾಶ ಕೊಡಬೇಕು ಎಂದು ಪ್ರತಿಪಾದಿಸುತ್ತಿದ್ದರು. ನೆಹರು ಅವರ ಮುದ್ದಿನ ಮಗಳೇ ಇಂದಿರಾಗಾಂಧಿ. ಭಾರತದ ಮೂರನೇಯ ಪ್ರಧಾನಮಂತ್ರಿಯಾದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳಿಗೆ ಅವರು ತೋರಿಸುವ ಪ್ರೀತಿಯಿಂದಾಗಿ ಅವರು ಚಾಚಾ ನೆಹರು ಎಂದು ಪ್ರಸಿದ್ಧರಾದರು. ಚಾಚಾ ನೆಹರು ಅವರ ಹುಟ್ಟುಹಬ್ಬವನ್ನು "ಜಾಗತಿಕವಾಗಿ ಮಕ್ಕಳ ದಿನ" ಎಂದು ಆಚರಿಸುತ್ತಾರೆ. ಚಾಚಾ ಅವರ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ಘೋಷಿಸಲಾಗಿದ್ದು ಅಂದು ಮಕ್ಕಳಿಗಾಗಿ ಸಂಗೀತ, ನೃತ್ಯ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ, ದೂರದರ್ಶನ ಮತ್ತು ರೇಡಿಯೋಗಳಲ್ಲಿ  ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳಿಗೆ ಉತ್ತಮ ಪರಿಸರ, ಶಿಕ್ಷಣ ಅವಕಾಶಗಳನ್ನು ನೀಡಿದಾಗ ಮಕ್ಕಳು ಬುದ್ಧಿಶಾಲಿಗಳಾಗಿ ಆರೋಗ್ಯವಂತರಾಗಿ ಬೆಳೆದಾಗ ಮಾತ್ರ ದೇಶ ಶಕ್ತಿಶಾಲಿಯಾಗುತ್ತದೆ ಎನ್ನುವ ಚಾಚಾ ಅವರ ಸಂದೇಶ ಯಾವಾಗಲೂ ಪ್ರಸ್ತುತ.</font><br/>  <font  style='font-size:11pt; color:#000000'></font><br/></font>]]></content:encoded>
      <pubDate>Mon, 23 Feb 2009 16:14:22 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ತಿರುಕ್ಕುರಳ್ ಕಂಠಪಾಠ ಹೇಳುವ 7ರ ಬಾಲಕಿ]]></title>
      <link>https://kannada.webdunia.com/article/kannada-kids-stories/ತಿರುಕ್ಕುರಳ್-ಕಂಠಪಾಠ-ಹೇಳುವ-7ರ-ಬಾಲಕಿ-107111300004_1.htm</link>
      <guid>https://kannada.webdunia.com/article/kannada-kids-stories/ತಿರುಕ್ಕುರಳ್-ಕಂಠಪಾಠ-ಹೇಳುವ-7ರ-ಬಾಲಕಿ-107111300004_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಕನ್ನಡದಲ್ಲಿ ಸರ್ವಜ್ಞನ ವಚನಗಳು ಇದ್ದಂತೆಯೇ ತಮಿಳಿನಲ್ಲಿ 'ತಿರುಕ್ಕುರಳ್' ಪ್ರಸಿದ್ಧವಾದ ಉಕ್ತಿಗಳು. ಈ ತಿರುಕ್ಕುರಳ್‌ನಲ್ಲಿ 1330 ದ್ವಿಪದಿಗಳಿವೆ.

ಈ ಎಲ್ಲಾ ದ್ವಿಪದಿಗಳನ್ನು ಕಂಠಪಾಠ ಮಾಡಿಕೊಂಡು ಸುಲಲಿತವಾಗಿ ಹೇಳಬಲ್ಲಳು ಕೇವಲ...]]></description>
      <content:encoded><![CDATA[<font  style='font-size:11pt; color:#000000'>ಕನ್ನಡದಲ್ಲಿ ಸರ್ವಜ್ಞನ ವಚನಗಳು ಇದ್ದಂತೆಯೇ ತಮಿಳಿನಲ್ಲಿ 'ತಿರುಕ್ಕುರಳ್' ಪ್ರಸಿದ್ಧವಾದ ಉಕ್ತಿಗಳು. ಈ ತಿರುಕ್ಕುರಳ್‌ನಲ್ಲಿ 1330 ದ್ವಿಪದಿಗಳಿವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಎಲ್ಲಾ ದ್ವಿಪದಿಗಳನ್ನು ಕಂಠಪಾಠ ಮಾಡಿಕೊಂಡು ಸುಲಲಿತವಾಗಿ ಹೇಳಬಲ್ಲಳು ಕೇವಲ ಏಳು ವರ್ಷ ಪ್ರಾಯದ ಬಾಲೆ ಲವೀನಾಶ್ರೀ. ಅಚ್ಚರಿಯಾಗುತ್ತದೆಯೇ? ಹೌದು. ಆಕೆ ಇದೇ ಕಾರಣಕ್ಕಾಗಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದೀಗ ಆಕೆಯ ಈ ಹೆಮ್ಮೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ. ಅವಳೀಗ ರಾಷ್ಟ್ರೀಯ ಬಾಲ-ಪ್ರತಿಭೆ ಪ್ರಶಸ್ತಿಯ ಒಡತಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಶೇಷ ಸಾಧನೆಗಾಗಿ ಇರುವ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ-2006 ಆಯ್ಕೆ ಸಮಿತಿಯು ಮದುರೈಯ ಶಾಲೆಯೊಂದರಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಎಂ.ಲವೀನಾಶ್ರೀಯನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೂರು ವರ್ಷದವಳಿರುವಾಗಲೇ ಲವೀನಾ ಈ ತಿರುಕ್ಕುರಳ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಳು ಎಂದು ಆಕೆಯ ತಂದೆ ಕೆ.ಮುನಿಸ್ವಾಮಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇತ್ತೀಚಿನ ವರ್ಷಗಳಲ್ಲಿ ಈಕೆ ಪಡೆದ ಪ್ರಶಸ್ತಿಗಳಲ್ಲಿ ಪ್ರಮುಖವಾದದ್ದೆಂದರೆ, ತಮಿಳುನಾಡು ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲಾ ಮತ್ತು ತಮಿಳು ಇಲಾಖೆಯಿಂದ ದೊರೆತ 5000 ರೂ. ನಗದು ಪುರಸ್ಕಾರ. ಆಕೆ ಇತ್ತೀಚೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಮದುರೈಗೆ ಬಂದಿದ್ದಾಗ ಅವರನ್ನು ಭೇಟಿಯಾಗಿದ್ದಳು. ಕಲಾಂ ಅವರೂ ಅವಳ ಬೆನ್ನು ತಟ್ಟಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತಿರುಕ್ಕುರಳನ್ನು ನನ್ನ ಮಗಳು ಕಂಠಪಾಠ ಮಾಡಿಕೊಂಡಿದ್ದಾಳೆ. ಅದನ್ನು ತಪ್ಪಿಲ್ಲದೆ ಉಚ್ಚರಿಸುತ್ತಾಳೆ. ಇದೀಗ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅವಳಿಗೆ ದೊರೆತ ಪ್ರೋತ್ಸಾಹ ಎಂದು ಉದ್ಗರಿಸುತ್ತಾರೆ ಮುನಿಸ್ವಾಮಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನವದೆಹಲಿಯಲ್ಲಿ ಮಕ್ಕಳ ದಿನವಾದ ನವೆಂಬರ್ 14ರ ಬುಧವಾರ ನಡೆಯುವ ಸಮಾರಂಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ರೇಣುಕಾ ಚೌಧುರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.</font>]]></content:encoded>
      <pubDate>Mon, 23 Feb 2009 16:14:03 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಗೊರಕೆಗಾರ ಶಣ್ಮುಗಂ]]></title>
      <link>https://kannada.webdunia.com/article/kannada-kids-stories/ಗೊರಕೆಗಾರ-ಶಣ್ಮುಗಂ-107110300005_1.htm</link>
      <guid>https://kannada.webdunia.com/article/kannada-kids-stories/ಗೊರಕೆಗಾರ-ಶಣ್ಮುಗಂ-107110300005_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಕಾಡಿನ ರಾಜನಾದ ಶಣ್ಮುಗಂ ಸಿಂಹ ತುಂಬಾ ಸೋಮಾರಿ. ಶಣ್ಮುಗಂಗೆ ತಿಳಿದಿರುವುದು ಮೂರೇ ಕೆಲಸ ತಿನ್ನುವುದು,ಮಲಗುವುದು ಮತ್ತು ಗೊರಕೆ ಹೊಡೆಯುವುದು.]]></description>
      <content:encoded><![CDATA[<!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0711/03/images/img1071103005_1_1.jpg' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಕಾಡಿನ ರಾಜನಾದ ಶಣ್ಮುಗಂ ಸಿಂಹ ತುಂಬಾ ಸೋಮಾರಿ. ಶಣ್ಮುಗಂಗೆ ತಿಳಿದಿರುವುದು ಮೂರೇ ಕೆಲಸ ತಿನ್ನುವುದು,ಮಲಗುವುದು ಮತ್ತು ಗೊರಕೆ ಹೊಡೆಯುವುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹುತೋಕ್ಷಿ ಕುದುರೆಗೆ ಶಣ್ಮುಗಂ ಮೇಲೆ ಯಾವಾಗಲೂ ಸಿಟ್ಟು. ಎಂಥ ಸೋಮಾರಿ ಇವನು, ಇವನಿಗೆ ತಿನ್ನುವುದು ಮತ್ತು ಮಲಗುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಹುತೋಕ್ಷಿ ಯಾವಾಗಲೂ ಶಣ್ಮುಗಂಗೆ ಬೈಯುತ್ತಿದ್ದಳು. ಸಿಟ್ಟಾಗಬೇಡ ಸಾಧುಸಿಂಹ ರಾಜನಾಗಿರುವುದು ಒಳ್ಳೆಯದೇ ಬದಲಾಗಿ ಯಾವುದೋ ಕ್ರೂರ ಸಿಂಹ ರಾಜನಾಗಿರುತ್ತಿದ್ದರೆ ಎಂದು ಅಮ್ಮ ಆನೆ ಅವಳನ್ನು ಸಮಾಧಾನಪಡಿಸಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಣ್ಮುಗಂ ಹೆಚ್ಚು ತಿಂದಷ್ಟೂ ಹೆಚ್ಚು ನಿದ್ದೆ ಮಾಡುತ್ತಿದ್ದ. ಅಲ್ಲದೆ ಬೆನ್ನ ಮೇಲೆ ಒರಗಿ ಖೊರ್ ರ್ ರ್ ರ್.... ಎಂಬ ಕರ್ಕಶ ಧ್ವನಿಯಿಂದ ಗೊರಕೆ ಹೊಡೆಯುತ್ತಿದ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮನ್ನು ಮಂಗನಿಗಂತೂ ಶಣ್ಮುಗಂನ ಹೊಟ್ಟೆಯ ಮೇಲೆ ಕೂರುವುದಂದರೆ ಬಹಳ ಇಷ್ಟ. ಶಣ್ಮುಗಂ ದೀರ್ಘ ಉಸಿರೆಳೆದಾಗ ಅವನ ಹೊಟ್ಟೆ ಉರುಟಾಗುತ್ತಿತ್ತು ಮತ್ತು ಉಸಿರು ಬಿಟ್ಟಾಗ ಚಪ್ಪಟೆಯಾಗುತ್ತಿತ್ತು. ಮನ್ನು ಮಂಗನಿಗೆ ಇದೊಂತರಾ ಮೋಜಿನ ಸವಾರಿಯಾಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಣ್ಮುಗಂನ ಗೊರಕೆ ಕೇಳಿ ಸುಸ್ತಾದಾಗ ಪ್ರಾಣಿಗಳಿಗೆ ಗೊರಕೆ ನಿಲ್ಲಿಸುವ ಸುಲಭ ಉಪಾಯವೂ ತಿಳಿದಿತ್ತು. ಶಣ್ಮುಗಂ ತನ್ನ ಬೆನ್ನ ಮೇಲೆ ಮಲಗಿದಾಗ ಮಾತ್ರ ಗೊರಕೆ ಹೊಡೆಯುತ್ತಿದ್ದ. ಅಮ್ಮ ಆನೆ ತನ್ನ ಬಲವಾದ ಸೊಂಡಿಲಿನಿಂದ ಅವನನ್ನು ಮೆತ್ತಗೆ ಬದಿಗೆ ಹೊರಳಿಸಿದಾಗ ಅವನು ಗೊರಕೆ ಹೊಡೆಯುವುದನ್ನು ನಿಲ್ಲಿಸುತ್ತಿದ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ದಿನ ಶಣ್ಮುಗಂ ಬದಿಗೆ ಹೊರಳಿ ಸದ್ದು ಮಾಡದೆ ಮಲಗಿದ್ದರಿಂದ ಕಾಡು ಶಾಂತಿಯಿಂದಿತ್ತು.ಮನ್ನು ಮಂಗ ಮರ ಏರಿತ್ತು, ರಿತು ಮೊಲ ಬಿಲದೊಳಗೆ ನುಸುಳಿತ್ತು, ಚಂದು ಮೊಸಳೆ ನದಿಗೆ ಹಿಂತಿರುಗಿತ್ತು, ಹುತೋಕ್ಷಿ ಕುದುರೆ ಬಹಾದುರ್ ಮತ್ತು ಅಮ್ಮನೊಂದಿಗೆ ಹೊರಟು ಹೋಗಿದ್ದಳು.ಒಂಟೆ ಕಮಲನಯನ ಮರಳುಗಾಡಿನಿಂದ ವಾಪಾಸು ಬರುತ್ತಿದ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದ್ದಕ್ಕಿದ್ದಂತೆಯೇ ಕಮಲನಯನನಿಗೆ ಭಯಾನಕ ಸದ್ದು ಕೇಳಿಸಿತು. ಹೊಸ ಸಿಂಹದ ಗರ್ಜನೆ. ಕೆಟ್ಟ, ಸೊಟ್ಟ, ದುಷ್ಟ, ಗಬ್ಬರ್‌ಸಿಂಹ ಮನೆಗಾಗಿ ಕಾಡನ್ನು ಹುಡುಕುತ್ತಿದ್ದ. ಇಲ್ಲೆಲ್ಲೂ ಬೇರೆ ಸಿಂಹ ಇಲ್ಲವೇನೋ ಬೇರೆ ಬೇರೆ ಪ್ರಾಣಿಗಳ ವಾಸನೆ ಬೇರೆ ಬರುತ್ತಿದೆ. ಇದೇ ನನಗೆ ಸೂಕ್ತ ಜಾಗ ಎಂದು ಗಬ್ಬರ್ ಸಿಂಹ ಕೊಳಕಾಗಿ ನಕ್ಕ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಕೆಟ್ಟ ಸುದ್ದಿಯನ್ನು ತಿಳಿದು ಎಲ್ಲರಿಗೂ ತುಂಬಾ ಬೇಸರವಾಯಿತು. ಹುತೋಕ್ಷಿಯಂತೂ ಉಪಯೋಗವಿಲ್ಲದ ರಾಜ ಎಂದು ಶಣ್ಮುಗಂಗೆ ಬಯ್ಯತೊಡಗಿದಳು.ಎಲ್ಲರೂ ಶಣ್ಮುಗಂನನ್ನು ಎಬ್ಬಿಸಲು ಪ್ರಯತ್ನಿಸಿದರು. ಏಳು ಶಣ್ಮುಗಂ ಏಳು ಎಂದು ಮನ್ನು ಕಿರುಚಿತು. ಆದರೆ ಗಾಢ ನಿದ್ದೆಯಲ್ಲಿದ್ದ ಶಣ್ಮುಗಂಗೆ ಇದು ಕೇಳಿಸಲೇ ಇಲ್ಲ. ಎಲ್ಲರಿಗೂ ಏನು ಮಾಡುವುದೆಂದೇ ತೋಚದಾಯಿತು. ಅಷ್ಟೊತ್ತಿಗೆ ಬಹಾದುರನಿಗೆ ಒಂದು ಉಪಾಯ ಹೊಳೆಯಿತು. ಅವನು ಅಮ್ಮನ ಬಳಿ ಪಿಸುಗುಟ್ಟಿದನು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಮ್ಮ ಆನೆ ಮೆತ್ತಗೆ ಶಣ್ಮುಗಂನನ್ನು ಎಳೆದು ಬೆನ್ನ ಮೇಲೆ ಮಲಗುವಂತೆ ಮಾಡಿದಳು. ಶಣ್ಮುಗಂ ಬೆನ್ನ ಮೇಲೆ ಮಲಗಿದರೆ ಅವನು ಗೊರಕೆ ಹೊಡೆಯುತ್ತಾನೆ. ಖೊರ್ ರ್ ರ್ ರ್ ರ್.... ಗಬ್ಬರ್ ಸಿಂಗ್‌ಗೆ ಈ ಘರ್ಜನೆ ಕೇಳಿ ತುಂಬಾ ಹೆದರಿಕೆಯಾಯಿತು. ಬಹುಷ ಈ ಕಾಡಿನಲ್ಲಿ ಯಾವುದೋ ಬಲಶಾಲಿ ಸಿಂಹವಿರಬೇಕು. ಅವನು ನನ್ನನ್ನು ನೋಡುವ ಮೊದಲು ಇಲ್ಲಿಂದ ಕಾಲುಕೀಳಬೇಕು ಎಂದು ಓಡಿಹೋಗಿಬಿಟ್ಟ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲರಿಗೂ ತುಂಬಾ ಖುಶಿ. ಎಂತಹಾ ಜಾಣಮರಿ ಎಂದು ಎಲ್ಲರೂ ಬಹಾದುರನನ್ನು ಹೊಗಳತೊಡಗಿದರು. ಅಷ್ಟುಹೊತ್ತಿಗೆ ಶಣ್ಮುಗಂಗೆ ಎಚ್ಚರವಾಯಿತು. ಎಲ್ಲರೂ ಸುತ್ತ ಸೇರಿರುವುದನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ಏನಾಯಿತು?ನನ್ನ ಗೊರಕೆಯಿಂದ ನಿಮಗೆ ತೊಂದರೆಯಾಯಿತೇ  ಎಂದು ಕೇಳಿದ. ಖಂಡಿತಾ ಇಲ್ಲ ಶಣ್ಮುಗಂ ಇನ್ನೂ ಚೆನ್ನಾಗಿ ಗೊರಕೆ ಹೊಡಿ ಎಂದರು ಎಲ್ಲರೂ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಮ್ಮ ಆನೆಮರಿ ಶಣ್ಮುಗಂನ ಗೊರಕೆಯನ್ನು ನಿಲ್ಲಿಸಲು ಮಾಡುವ ಉಪಾಯ ಮತ್ತು ಗಬ್ಬರ್‌ಸಿಂಗ್ ಸಿಂಹವನ್ನು ಓಡಿಸಲು ಆನೆಮರಿ ಬಹಾದುರನ ಉಪಾಯಗಳು " ಅಪಾಯವನ್ನು ಉಪಾಯದಿಂದ ಎದುರಿಸಬೇಕು ' ಎಂಬ ನೀತಿಯನ್ನು ಈ ಕಥೆಯು ಮಕ್ಕಳಿಗೆ ತಿಳಿಸುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರಿಯಾ ಕುರಿಯನ್ ಅವರ ಚಿತ್ರಗಳು ಮೊಲ, ಸಿಂಹ, ಮೊಸಳೆ, ಕುದುರೆ, ಒಂಟೆ ಮುಂತಾದ ಪ್ರತಿಯೊಂದು ಮಕ್ಕಳು ಪ್ರಾಣಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಅಲ್ಲದೆ ಬಣ್ಣಬಣ್ಣಗಳಿಂದ ಕೂಡಿದ ಈ ಪುಸ್ತಕವು ಮಕ್ಕಳನ್ನು ಆಕರ್ಷಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕದ ಹೆಸರು: </b>ಗೊರಕೆಗಾರ ಶಣ್ಮುಗಂ</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಲೇಖಕರು: </b>ರಾಧಿಕಾ ಚಡ್ಢಾ</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಅನುವಾದ: </b>ಅಶ್ವಿನಿ ಭಟ್</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಬೆಲೆ: 90 </b>ರೂಪಾಯಿಗಳು</font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/></font>]]></content:encoded>
      <pubDate>Mon, 23 Feb 2009 16:13:56 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ನಾನು ಮಲಗಬೇಕು]]></title>
      <link>https://kannada.webdunia.com/article/kannada-kids-stories/ನಾನು-ಮಲಗಬೇಕು-107102700005_1.htm</link>
      <guid>https://kannada.webdunia.com/article/kannada-kids-stories/ನಾನು-ಮಲಗಬೇಕು-107102700005_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಪುಟ್ಟ ಆನೆಮರಿ ಬಹಾದುರ ಬಹಳ ಮರೆಯುವ ಮಗು. ಒಂದು ಸಲ ಅವನು ನೀರು ಕುಡಿಯುವುದು ಹೇಗೆ ಎಂಬುದನ್ನೇ ಮರೆತಿದ್ದ.  ನೀರು ಕುಡಿಯಲು ನಿನ್ನ ಮೂಗು ಉಪಯೋಗಿಸಬೇಕು ಮಗೂ ಎಂದು ಅವನ ಅಮ್ಮ ಅವನಿಗೆ ಹೇಳಿದ್ದಳು.]]></description>
      <content:encoded><![CDATA[<!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0710/27/images/img1071027005_1_1.jpg' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಪುಟ್ಟ ಆನೆಮರಿ ಬಹಾದುರ ಬಹಳ ಮರೆಯುವ ಮಗು. ಒಂದು ಸಲ ಅವನು ನೀರು ಕುಡಿಯುವುದು ಹೇಗೆ ಎಂಬುದನ್ನೇ ಮರೆತಿದ್ದ.  ನೀರು ಕುಡಿಯಲು ನಿನ್ನ ಮೂಗು ಉಪಯೋಗಿಸಬೇಕು ಮಗೂ ಎಂದು ಅವನ ಅಮ್ಮ ಅವನಿಗೆ ಹೇಳಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಸಲ ಬಹಾದುರನ ಅಮ್ಮ ಗೀತಾ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದರು. ಪುಟ್ಟ ಬಹಾದುರನಿಗೆ ಬಹಳ ನಿದ್ದೆ ಆದರೆ ನಿದ್ದೆ  ಮಾಡುವುದು ಹೇಗೆ ಎಂಬುದೇ ನೆನಪು ಬರುತ್ತಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ತನ್ನ ಕಾಡಿನ ಸ್ನೇಹಿತರ ಹತ್ತಿರ ಸಹಾಯ ಕೇಳೋಣವೆಂದು ಸಿಂಹ ಶಣ್ಮುಗಂ ಹತ್ತಿರ ಹೋದ. ಆದರೆ ಶಣ್ಮುಗಂ ದಿನವೆಲ್ಲಾ  ಮಲಗುತ್ತಾನೆ ಆನೆಗಳು ಹಾಗೆಲ್ಲ ಮಲಗುವುದಿಲ್ಲ ಅಂದುಕೊಂಡ ಬಹಾದುರ ಮನ್ನು ಮಂಗನ ಸಹಾಯ ಕೇಳಿದ. ಮನ್ನು ಮಂಗ  ಮೇಲೆ ಹತ್ತಿ ಬಾ ಎಂದು ಕರೆದ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆನೆಗಳು ಮರ ಹತ್ತಲಾಗುವುದಿಲ್ಲ ಆನೆಗಳು ಹಾಗೇನು ಮಲಗುವುದಿಲ್ಲ ಎಂದುಕೊಂಡು ಬಹಾದೂರ ರಿತು ಮೊಲದ ಬಳಿಯಲ್ಲಿ  ನಾನು ಮಲಗಬೇಕು ಎಂದ. ರಿತು ಮೊಲ ನನ್ನ ಮನೆ ಒಳಗೆ ಬಂದು ಮಲಗು ಎಂದು ತನ್ನ ಬಿಲದೊಳಗೆ ನೂರಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಹಾದುರ ಬಿಲವನ್ನು ನೋಡಿದ. ಅದರಲ್ಲಿ ನನ್ನ ಸೊಂಡಿಸು ಕೂಡ ಹಿಡಿಸುವುದಿಲ್ಲ ಇಲ್ಲ ಆನೆಗಳು ಹಾಗೇನು ಮಲಗುವುದಿಲ್ಲ  ಎಂದುಕೊಂಡ ಬಹಾದುರ ಚಂದು ಮೊಸಳೆಯ ಬಳಿ ನನಗೆ ತುಂಬಾ ನಿದ್ರೆ ಮಲಗಬೇಕು ಎಂದು ಕೇಳಿದ. ಬಾ ನನ್ನ ಜೊತೆ ಈಜು  ಎಂದು ಚಂದು ಮೊಸಳೆ ಕರೆಯಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನದಿ ಮಧ್ಯದ ಬಂಡೆಯ ಮೇಲೆ ಮಲಗಿದ್ದು ಬಹಾದುರನಿಗೆ ನೆನಪೇ ಬರಲಿಲ್ಲ. ಇಲ್ಲ ಆನೆಗಳು ಹಾಗೆ ಮಲಗುವುದಿಲ್ಲ ಎಂದುಕೊಂಡ  ಒಂಟೆ ಕಮಲನಯನ ಬಳಿ ನಾನು ಮಲಗಬೇಕು ಎಂದ. ನನ್ನ ಜೊತೆ ಮರಳಲ್ಲಿ ಮಲಗು ಎಂದು ಕಮಲನಯನ ಹೇಳಿದ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಮರಳು ನನ್ನ ಸೊಂಡಿಲು, ಕಿವಿಯಲ್ಲೆಲ್ಲಾ ತುಂಬುತ್ತಲ್ಲಾ , ಇಲ್ಲ ಆನೆಗಳು ಹಾಗೇನು ಮಲಗುವುದಿಲ್ಲ ಎಂದು ಯೋಚಿಸಿ  ಬಹಾದುರ ಮುಂದೆ ಹೋಗುತ್ತಿದ್ದಾಗ ಹುತೋಕ್ಷಿ ಕುದುರೆ ನಿಂತುಕೊಂಡೇ ಗೊರಕೆ ಹೊಡೆಯುತ್ತಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ಬಹಾದುರನಿಗೆ ನೆನಪಾಯಿತು. ನಾವು ಆನೆಗಳು ನಿಂತುಕೊಂಡು ಅಥವಾ ಒರಗಿಕೊಂಡು ಮಲಗಬಹುದು ಎಂದು ಬಹಳ  ಸಂತೋಷದಿಂದ ಬಹಾದುರ ಒಂದು ಮರಕ್ಕೆ ಒರಗಿ ಗಾಢವಾಗಿ ನಿದ್ರಿಸಿಯೇ ಬಿಟ್ಟ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಲೇಖಕಿ ರಾಧಿಕಾ ಚಡ್ಢಾ ಬಹಾದುರ ಆನೆಯ ಪಾತ್ರದ ಮೂಲಕ, ಸಿಂಹ, ಮಂಗ, ಮೊಲ, ಮೊಸಳೆ, ಒಂಟೆ ಮತ್ತು ಕುದುರೆಗಳು  ಹೇಗೆ ಮಲಗುತ್ತವೆ ಎಂಬುದನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ.ಅಲ್ಲದೆ ಆನೆಗಳು ದಿನವೆಲ್ಲ ಮಲಗುವುದಿಲ್ಲ,  ಮರದ ಮೇಲೆ ಮಲಗುವುದಿಲ್ಲ, ಬಂಡೆಗಳ ಮೇಲೆ ಮಲಗುವುದಿಲ್ಲ, ಮರಳಲ್ಲಿ ಮಲಗುವುದಿಲ್ಲ ಕೇವಲ ನಿಂತುಕೊಂಡೇ ಅಥವಾ  ಮರಕ್ಕೆ ಒರಗಿಕೊಂಡೆ ಮಲಗುತ್ತವೆ ಎಂಬುದಾಗಿ ಆನೆಗಳು ಮಲಗುವ ರೀತಿಯನ್ನು ಮಕ್ಕಳಿಗೆ ಈ ಕಥೆಯಮೂಲಕ  ತಿಳಿಯಪಡಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರಿಯಾ ಕುರಿಯನ್ ಅವರ ಚಿತ್ರಗಳು ಮೊಲ, ಸಿಂಹ, ಮೊಸಳೆ, ಕುದುರೆ, ಒಂಟೆ ಮುಂತಾದ ಪ್ರತಿಯೊಂದು ಮಕ್ಕಳು  ಪ್ರಾಣಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಅಲ್ಲದೆ ಬಣ್ಣಬಣ್ಣಗಳಿಂದ ಕೂಡಿದ ಈ ಪುಸ್ತಕವು ಮಕ್ಕಳನ್ನು ಆಕರ್ಷಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕದ ಹೆಸರು: </b>ನಾನು ಮಲಗಬೇಕು</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18  <b></b></font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಲೇಖಕರು: </b>ರಾಧಿಕಾ ಚಡ್ಢಾ</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಅನುವಾದ: </b>ವಿ.ಆರ್.ದೇವಿಕಾ</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಬೆಲೆ: 95 </b>ರೂಪಾಯಿಗಳು</font>]]></content:encoded>
      <pubDate>Mon, 23 Feb 2009 16:13:40 +0530</pubDate>
      <updatedDate>Tue, 15 Apr 2014 02:01:37 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪುತುಲ್ ಮತ್ತು ಢಾಲ್ಫಿನ್‌ಗಳು]]></title>
      <link>https://kannada.webdunia.com/article/kannada-kids-stories/ಪುತುಲ್-ಮತ್ತು-ಢಾಲ್ಫಿನ್‌ಗಳು-107101300006_1.htm</link>
      <guid>https://kannada.webdunia.com/article/kannada-kids-stories/ಪುತುಲ್-ಮತ್ತು-ಢಾಲ್ಫಿನ್‌ಗಳು-107101300006_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಬಂಗಾಳದಲ್ಲಿ ಗಂಗಾನದಿಯ ತೀರದಲ್ಲಿ ಧಾಬ್ರಿ ಎಂಬ ಪುಟ್ಟ ಹಳ್ಳಯೊಂದಿತ್ತು. ಈ ಹಳ್ಳಿಯಲ್ಲಿ ಅನೇಕ ಮೀನುಗಾರರ ಗುಡಿಸಲುಗಳಿದ್ದು, ಪುತುಲ್ ಎಂಬ ಹುಡುಗಿಯು ಒಂದು ಗುಡಿಸಲಿನಲ್ಲಿ ತನ್ನ ಅಪ್ಪ ಅಮ್ಮನೊಂದಿಗೆ ವಾಸಿಸುತ್ತಿದ್ದಳು.]]></description>
      <content:encoded><![CDATA[<!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0710/13/images/img1071013006_1_1.jpg' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td align='left'>Avinash</td><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಬಂಗಾಳದಲ್ಲಿ ಗಂಗಾನದಿಯ ತೀರದಲ್ಲಿ ಧಾಬ್ರಿ ಎಂಬ ಪುಟ್ಟ ಹಳ್ಳಯೊಂದಿತ್ತು. ಈ ಹಳ್ಳಿಯಲ್ಲಿ ಅನೇಕ ಮೀನುಗಾರರ ಗುಡಿಸಲುಗಳಿದ್ದು, ಪುತುಲ್ ಎಂಬ ಹುಡುಗಿಯು ಒಂದು ಗುಡಿಸಲಿನಲ್ಲಿ ತನ್ನ ಅಪ್ಪ ಅಮ್ಮನೊಂದಿಗೆ ವಾಸಿಸುತ್ತಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಲ್ಲಿರುವ ಗುಡಿಸಲುಗಳು ನದಿಗೆ ಎಷ್ಟು ಹತ್ತಿರವಾಗಿತ್ತೆಂದರೆ ಅಲ್ಲಿ ಹಚ್ಚಿದ್ದ ದೀಪಗಳ ಬೆಳಕು ಹರಿಯುವ ನೀರಿನ ಮೇಲೆ ಹೊಳೆವ ಹಳದಿ ಎಳೆಗಳಂತೆ ತೋರುತ್ತಿದ್ದವು.ಗಂಗಾನದಿಯು ಇಲ್ಲಿನ ಜನರಿಗೆ ಒಡನಾಡಿ, ಶತ್ರು ಎರಡೂ ಆಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ನದಿಯು ಇಲ್ಲಿನ ಜನರಿಗೆ ಮಾರಲಿಕ್ಕೆ ಮತ್ತು ತಿನ್ನಲಿಕ್ಕೆ ಮೀನನ್ನು ಕೊಡುತ್ತಿತ್ತು ಆದರೆ ಮಳೆಗಾಲದಲ್ಲಿ ಕೆಲವೊಮ್ಮೆ ರಾಕ್ಷಸರೂಪ ತಾಳುತ್ತಿತ್ತು.ಒಂದು ಮಳೆಗಾಲದಲ್ಲಿ ಉಂಟಾದ ತೀವ್ರ ಮಳೆಯಿಂದಾಗಿ ಗಂಗಾನದಿ ಉಕ್ಕಿ ಹರಿದು ಗುಡಿಸಲುಗಳ ಬಾಗಿಲವರೆಗೂ ಬಂದಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ನೀರಿನೊಂದಿಗೆ ಎರಡು ಪುಟ್ಟ ಡಾಲ್ಫಿನ್ನುಗಳು ಆಡುತ್ತಾ ಆಡುತ್ತಾ ಪುತುಲ್‌ನ ಮನೆಯ ಬಾಗಿಲಿಗೇ ಬಂದುಬಿಟ್ಟವು. ಡಾಲ್ಫಿನ್ನುಗಳನ್ನು ಹಿಡಿದು ಮಾರಿದರೆ ತುಂಬಾ ಹಣ ಸಿಗಬಹುದೆಂದು ಅವಳ ಅಮ್ಮ ಅದನ್ನು ಓಡಿಸಬೇಡ ಎಂದು ಪುತುಲ್‌ಗೆ ಹೇಳಿದ್ದಳು. ಆದರೆ ಪುತುಲ್‌ಗೆ ಆ ಮುದ್ದುಮರಿಗಳನ್ನು ಸಾಯಿಸುವುದು ಇಷ್ಟವಿರಲಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಕ್ಕಾಗಿ ತಾನೂ ಈಜುತ್ತಾ ಅವುಗಳನ್ನು ನದಿಯೆಡೆಗೆ ಕರೆದೊಯ್ದಳು ಆದರೆ ಉಕ್ಕು ನದಿಯ ಶಕ್ತಿಯುತ ಅಲೆಗಳು ಅವಳನ್ನನು ನದಿಮದ್ಯಕ್ಕೆ ಎಳೆದೊಯ್ದಾಗ ಈ ಎರಡು ಪುಟ್ಟ ಡಾಲ್ಫಿನ್ನುಗಳು ಅವಳು ಸಿಕ್ಕಿಹಾಕಿಕೊಂಡಿದ್ದ ಸುಳಿಯಿಂದ ಬಿಡಿಸಿದವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪುಟ್ಟ ಡಾಲ್ಫಿನ್ ಮರಿಗಳನ್ನು ಕೊಲ್ಲಲು ಇಷ್ಟವಿಲ್ಲದ ಪುತುಲ್ ಅವುಗಳನ್ನು ಓಡಿಸಲು ನಡೆಸುವ ಪ್ರಯತ್ನ ಮತ್ತು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಪುತುಲ್‌ನನ್ನು ಡಾಲ್ಫಿನ್ನುಗಳು ರಕ್ಷಿಸುವ ರೀತಿಯನ್ನು ಲೇಖಕ ಮರಿಯಮ್ ಕರೀಮ್ ಅಹ್ಲಾವತ್ ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ. ಇದರೊಂದಿಗೆ ಉಪಕಾರ ಸ್ಮರಣೆಯ ಮಹತ್ವವನ್ನು ಈ ಕಥೆಯ ಮೂಲಕ ಮಕ್ಕಳಿಗೆ ತಿಳಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರೊಯಿತಿ ರಾಯ್ ಅವರು ಈ ಕಥೆಯಲ್ಲಿ ಜಾನಪದ ಶೈಲಿಯ ಚಿತ್ರಗಳನ್ನು ಅತ್ಯಂತ ಆಕರ್ಷಕವಾಗಿ ಚಿತ್ರಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕ: </b>ಪುತುಲ್ ಮತ್ತು ಡಾಲ್ಫಿನ್ನುಗಳು</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಲೇಖಕರು: </b>ಮರಿಯಮ್ ಕರೀಮ್- ಅಹ್ಲಾವತ್</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಚಿತ್ರ: </b>ಪ್ರೊಯಿತಿ ರಾಯ್</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಅನುವಾದ: </b>ಬಾಗೇಶ್ರೀ</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಬೆಲೆ: 120 </b>ರೂಪಾಯಿಗಳು</font><br/></font>]]></content:encoded>
      <pubDate>Mon, 23 Feb 2009 16:13:30 +0530</pubDate>
      <updatedDate>Tue, 15 Apr 2014 02:01:37 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಓಡಿ ಹೋದ ಮೆಣಸಿನಕಾಳು]]></title>
      <link>https://kannada.webdunia.com/article/kannada-kids-stories/ಓಡಿ-ಹೋದ-ಮೆಣಸಿನಕಾಳು-107100600011_1.htm</link>
      <guid>https://kannada.webdunia.com/article/kannada-kids-stories/ಓಡಿ-ಹೋದ-ಮೆಣಸಿನಕಾಳು-107100600011_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಅಮ್ಮಿಣಿಕುಟ್ಟಿಗೆ ಬಿಸಿಬಿಸಿ ದೋಸೆ ಮತ್ತು ನೀರುಳ್ಳಿಚಟ್ನಿ ತಿನ್ನಬೇಕೆಂಬ ಆಸೆಯಾಗುತ್ತದೆ.]]></description>
      <content:encoded><![CDATA[<font  style='font-size:11pt; color:#000000'>ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಅಮ್ಮಿಣಿಕುಟ್ಟಿಗೆ ಬಿಸಿಬಿಸಿ ದೋಸೆ ಮತ್ತು ನೀರುಳ್ಳಿಚಟ್ನಿ ತಿನ್ನಬೇಕೆಂಬ ಆಸೆಯಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಕ್ಕಾಗಿ ಅವಳು ನೀರುಳ್ಳಿ, ಉಪ್ಪು, ಮೆಣಸಿನಕಾಯಿ ಮತ್ತು ಕೊನೆಯಲ್ಲಿ ಇದ್ದ ಒಂದೇ ಒಂದು ಮೆಣಸಿನಕಾಳನ್ನು ಅರೆಯುವ ಕಲ್ಲಿಗೆ ಸೇರಿಸಿ ರುಬ್ಬಲು ಪ್ರಾರಂಭಿಸುವಾಗ ಈ ಪುಟಾಣಿ ಮೆಣಸಿನಕಾಳು ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೆಣಸಿನಕಾಳು ಇಲ್ಲದೆ ನೀರುಳ್ಳಿ ಚಟ್ನಿ ಮಾಡುವುದಾದರೂ ಹೇಗೆ ಎಂದು ಯೋಚಿಸಿದ ಅಮ್ಮಿಣಿಕುಟ್ಟಿ ಆ ಮೆಣಸಿನಕಾಳನ್ನು ಬೆನ್ನತ್ತಿ ಓಡತೊಡಗುತ್ತಾಳೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಮೆಣಸಿನಕಾಳು ಅಮ್ಮಿಣಿಕುಟ್ಟಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾರುತ್ತಾ, ಜಿಗಿಯುತ್ತಾ, ನೆಗೆಯುತ್ತಾ ಹಾಗೂ ಓಡುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಇದನ್ನು ಹಿಡಿಯಲು ಪಾರ್ವತಿ ಚೇಚಿ, ನೆಟ್ಟನ್ ಪಪ್ಪು ಮುಂತಾದವರು ಪ್ರಯತ್ನಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲರ ಕೈಯಿಂದಲೂ ತಪ್ಪಿಸಿಕೊಂಡ ಈ ಮೆಣಸಿನಕಾಳು ದಿನಸಿ ಅಂಗಡಿಯ ಮೆಟ್ಟಿಲ ಮೇಲಿರುವ ದೊಡ್ಡ ಗೋಣಿಚೀಲದೊಳಗೆ ಸೇರಿಕೊಂಡು ಬಿಡುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಪುಟಾಣಿ ಕಥೆಯ ಲೇಖಕಿ ಸುಚಿತ್ರಾ ರಾಮದೊರೈ ಅವರು ಮೆಣಸಿನಕಾಳು ಅಮ್ಮಿಣಿಕುಟ್ಟಿಯಿಂದ ತಪ್ಪಿಸಿಕೊಂಡು ಓಡುವ ರೀತಿಯನ್ನು ಹಾಗೂ ಆ ಮೆಣಸಿನಕಾಳಿಗಾಗಿ ಅಮ್ಮಿಣಿಕುಟ್ಟಿ ಬೆನ್ನತ್ತುವ ರೀತಿಯನ್ನು ಅತ್ಯಂತ ಸ್ವಾರಸ್ಯಕರವಾಗಿ ತಿಳಿಸಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಲ್ಲದೆ ದಾರಿಯಲ್ಲಿ ತನ್ನನ್ನು ಹಿಡಿಯಲು ಪ್ರಯತ್ನಿಸುವ ಪಾರ್ವತಿ ಚೇಚಿ, ನೆಟ್ಟನ್ ಪಪ್ಪು ಮುಂತಾದವರಿಂದ ತಪ್ಪಿಸಿಕೊಳ್ಳಲು ಮೆಣಸಿನಕಾಳು ಹೂಡುವ ಉಪಾಯವು ಅತ್ಯಂತ ಕುತೂಹಲಕಾರಿಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳಿಗಾಗಿ ಅನೇಕ ವರ್ಷಗಳಿಂದ ಚಿತ್ರಗಳನ್ನು ಬರೆಯುತ್ತಾ ಬಂದ ಅಶೋಕ್ ರಾಜಗೋಪಾಲನ್ ಅವರು ಬರೆದ ಚಿತ್ರವು ಇಲ್ಲಿನ ಕಥೆಯ ಅಮ್ಮಿಣಿಕುಟ್ಟಿ ಮತ್ತು ಮೆಣಸಿನಕಾಳಿನ ಓಟಕ್ಕೆ ಸರಿಸಾಟಿಯಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕ: </b>ಓಡಿ ಹೋದ ಮೆಣಸಿನಕಾಳು</font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಲೇಖಕರು: </b>ಸುಚಿತ್ರಾ ರಾಮದೊರೈ</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಚಿತ್ರ: </b>ಅಶೋಕ್ ರಾಜಗೋಪಾಲನ್</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಅನುವಾದ: </b>ಜಯಶ್ರೀ ಕಾಸರವಳ್ಳಿ</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಬೆಲೆ: 100 </b>ರೂಪಾಯಿಗಳು</font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/></font>]]></content:encoded>
      <pubDate>Mon, 23 Feb 2009 16:13:09 +0530</pubDate>
      <updatedDate>Tue, 15 Apr 2014 02:01:37 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಏನು ಮಾಡಲಿ]]></title>
      <link>https://kannada.webdunia.com/article/kannada-kids-stories/ಏನು-ಮಾಡಲಿ-107092900011_1.htm</link>
      <guid>https://kannada.webdunia.com/article/kannada-kids-stories/ಏನು-ಮಾಡಲಿ-107092900011_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಚಪಾತಿ ಮಾಡಲು ಹಿಟ್ಟು ಕಲಸುತ್ತಿದ್ದ ನೀರಜ್‌ನ ಅಮ್ಮ ನೀರಜ್‌ಗೆ ಆಟವಾಡಲು ಸ್ವಲ್ಪ ಹಿಟ್ಟನ್ನು ಕೊಡುತ್ತಾಳೆ. ನೀರಜ್ ಆ ಹಿಟ್ಟಿನಿಂದ ಏನು ಮಾಡಲಿ ಎಂದು ಯೋಚಿಸಿ ಕೊನೆಗೆ ತನ್ನದೇ ಕುಶಲತೆಯನ್ನು ಉಪಯೋಗಿಸಿ ವಿವಿಧ ಪ್ರಾಣಿಗಳ ಆಕೃತಿಯನ್ನು ಮಾಡುತ್ತಾನೆ.]]></description>
      <content:encoded><![CDATA[<font  style='font-size:11pt; color:#0000FF'>ರಜನಿ </font><font style='font-size:11pt; color:#000000;'></font><br/><!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0709/29/images/img1070929011_1_1.jpg' Alt='ಏನು ಮಾಡಲಿ-ಮಕ್ಕಳ ಕಥೆ' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಚಪಾತಿ ಮಾಡಲು ಹಿಟ್ಟು ಕಲಸುತ್ತಿದ್ದ ನೀರಜ್‌ನ ಅಮ್ಮ ನೀರಜ್‌ಗೆ ಆಟವಾಡಲು ಸ್ವಲ್ಪ ಹಿಟ್ಟನ್ನು ಕೊಡುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನೀರಜ್ ಆ ಹಿಟ್ಟಿನಿಂದ ಏನು ಮಾಡಲಿ ಎಂದು ಯೋಚಿಸಿ ಕೊನೆಗೆ ತನ್ನದೇ ಕುಶಲತೆಯನ್ನು ಉಪಯೋಗಿಸಿ ವಿವಿಧ ಪ್ರಾಣಿಗಳ ಆಕೃತಿಯನ್ನು ಮಾಡುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊದಲಿಗೆ ಹಿಟ್ಟನ್ನು ಹಿಂದೆ ಮುಂದೆ ತಿರುಚಿ ಉದ್ದನೆ ಹಗ್ಗ ಮಾಡಿ, ಹಗ್ಗದ ಒಂದು ತುದಿಯಲ್ಲಿ ಎರಡು ಸಣ್ಣ ಸಣ್ಣ ಕಣ್ಣು ಇಟ್ಟು ಮತ್ತೊಂದು ಬದಿಯಲ್ಲಿ ಚೂಪಾದ ಬಾಲ ಮಾಡಿ ಅದಕ್ಕೆ ಹಾವಿನ ರೂಪ ಕೊಡುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ಹಿಟ್ಟನ್ನು ಚೆನ್ನಾಗಿ ತಟ್ಟಿ ಪುಟ್ಟ ಪುಟ್ಟ ಎರಡು ಕಣ್ಣುಗಳನ್ನು ಇಟ್ಟು ಇನ್ನೊಂದು ತುದಿಯಲ್ಲಿ ಉದ್ದನೆಯ ಬಾಲವನ್ನು ಮಾಡಿ ಅದಕ್ಕೆ ಇಲಿಯ ರೂಪವನ್ನು ನೀಡುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೊಮ್ಮೆ ಆ ಹಿಟ್ಟನ್ನು ಒಂದು ದೊಡ್ಡ ಹಾಗೂ ಒಂದು ಸಣ್ಣ ಉಂಡೆಯಾಗಿ ಮಾಡಿ,ದೊಡ್ಡ ಉಂಡೆಯ ಮೇಲೆ ಸಣ್ಣ ಉಂಡೆಯನ್ನು ಇಟ್ಟು, ಅದಕ್ಕೆ ಕಣ್ಣು, ಮೂಗು,ಬಾಲ ಕಿವಿಗಳನ್ನು ಮಾಡಿ ಬೆಕ್ಕಿನ ಆಕೃತಿಯನ್ನು ಮಾಡುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊನೆಯಲ್ಲಿ ನೀರಜ್ ಹಿಟ್ಟನ್ನು ಮಡಚಿ ಉರುಟುರುಟು ಉಂಡೆ ಮಾಡಿ ಅದನ್ನು ಚಪ್ಪಟೆಯಾಗಿ ತಟ್ಟಿ ದೊಡ್ಡ ವೃತ್ತ ಮಾಡುತ್ತಾನೆ. ಅವನ ಅಮ್ಮ ಅದನ್ನು ಕಾವಲಿಯಲ್ಲಿ ಇಟ್ಟು ಕಾಯಿಸುತ್ತಾಳೆ. ನೀರಜ್ ತಾನು ಮಾಡಿದ ಚಪಾತಿಯನ್ನು ಖುಷಿಯಿಂದಲೇ ತಿನ್ನುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಪಾತಿ ಹಿಟ್ಟಿನಿಂದ ವಿವಿಧ ಪ್ರಾಣಿಗಳ ಆಕೃತಿಗಳನ್ನು ನೀರಜ್‌ನಿಂದ ಮಾಡಿಸುವ ಮೂಲಕ ಲೇಖಕಿ ನಂದಿನಿ ನಾಯರ್ ಹಾವು, ಬೆಕ್ಕು, ಇಲಿ ಮುಂತಾದ ಪ್ರಾಣಿಗಳ ಪರಿಚಯವನ್ನು ಈ ಕಥೆಯಲ್ಲಿ  ಮಕ್ಕಳಿಗೆ ಮಾಡಿಸುತ್ತಾರೆ. ಅಲ್ಲದೆ ಹಿಟ್ಟನ್ನು ಕಿವುಚಿ, ಚಿವುಟಿ, ತಟ್ಟಿ, ಚಪ್ಪಟೆಯಾಗಿ ಉರುಟಾಗಿ ಹೊರಳಿಸಿ ಕಾಯಿಸಿದರೆ ರುಚಿಯಾದ ಚಪಾತಿಯಾಗುತ್ತದೆ ಎಂಬುದಾಗಿ ಚಪಾತಿ ಮಾಡುವ ರೀತಿಯನ್ನು ಮಕ್ಕಳಿಗೆ ಸುಲಭ ರೀತಿಯಲ್ಲಿ ಈ ಕಥೆಯ ಮೂಲಕ ತಿಳಿಯಪಡಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರೊಯಿತಿ ರಾಯ್ ಅವರ ಚಿತ್ರವು ತುಂಬಾ ಅರ್ಥಪೂರ್ಣವಾಗಿದ್ದು ಹಿಟ್ಟಿನಿಂದ ವಿವಿಧ ಆಕೃತಿಗಳನ್ನು ಮಾಡುವ ಹಾಗೂ ಚಪಾತಿ ಮಾಡುವ ವಿಧಾನದ ಪ್ರತಿ ಹಂತವನ್ನು ಮಕ್ಕಳು ಸುಲಭವಾಗಿ ಅರ್ಥೈಸುವ ರೀತಿಯಲ್ಲಿ ಚಿತ್ರಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕ: </b>ಏನು ಮಾಡಲಿ</font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ, ಅಭಿರಾಮಪುರಮ್, ಚೆನ್ನೈ- 18</font><br/><font  style='font-size:11pt; color:#000000'><b>ಲೇಖಕರು: </b>ನಂದಿನಿ ನಾಯರ್</font><br/><font  style='font-size:11pt; color:#000000'><b>ಚಿತ್ರ: </b>ಪ್ರೊಯಿತಿ ರಾಯ್</font><br/><font  style='font-size:11pt; color:#000000'><b>ಅನುವಾದ: </b>ಅಶ್ವಿನಿ ಭಟ್</font><br/><font  style='font-size:11pt; color:#000000'><b>ಬೆಲೆ: 70 </b>ರೂಪಾಯಿಗಳು</font>]]></content:encoded>
      <pubDate>Mon, 23 Feb 2009 16:12:57 +0530</pubDate>
      <updatedDate>Tue, 15 Apr 2014 01:16:47 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಅವನೀತ್ ಆಂಟಿಯ ಮೊಬೈಲ್ ಫೋನ್]]></title>
      <link>https://kannada.webdunia.com/article/kannada-kids-stories/ಅವನೀತ್-ಆಂಟಿಯ-ಮೊಬೈಲ್-ಫೋನ್-107092200009_1.htm</link>
      <guid>https://kannada.webdunia.com/article/kannada-kids-stories/ಅವನೀತ್-ಆಂಟಿಯ-ಮೊಬೈಲ್-ಫೋನ್-107092200009_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಚಿಕ್ಕಿ ಬೆಕ್ಕು ಮತ್ತು ಗಗನ್ ತುಂಬಾ ಬೆಸ್ಟ್ ಫ್ರೆಂಡ್ಸ್. ಗಗನ್‌ನ ಅಜ್ಜಿ ಇವರಿಬ್ಬರಿಗೆ ಒಳ್ಳೊಳ್ಳೆಯ ಕಥೆಗಳನ್ನು ಹೇಳುತ್ತಿರುತ್ತಾರೆ. ಅದಕ್ಕೆ ಇವರಿಬ್ಬರಿಗೆ ಅಜ್ಜಿಯನ್ನು ಕಂಡರೆ ತುಂಬಾ ಪ್ರೀತಿ. 

ಒಂದು ದಿನ ಅಜ್ಜಿ ಇವರಿಬ್ಬರಿಗೂ ಕಥೆಹೇಳಲು ಹೊರಟಾಗ ಅವನೀತ್ ಆಂಟಿ ಬರುತ್ತಾರೆ.]]></description>
      <content:encoded><![CDATA[<!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0709/22/images/img1070922009_1_1.jpg' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಚಿಕ್ಕಿ ಬೆಕ್ಕು ಮತ್ತು ಗಗನ್ ತುಂಬಾ ಬೆಸ್ಟ್ ಫ್ರೆಂಡ್ಸ್. ಗಗನ್‌ನ ಅಜ್ಜಿ ಇವರಿಬ್ಬರಿಗೆ ಒಳ್ಳೊಳ್ಳೆಯ ಕಥೆಗಳನ್ನು ಹೇಳುತ್ತಿರುತ್ತಾರೆ. ಅದಕ್ಕೆ ಇವರಿಬ್ಬರಿಗೆ ಅಜ್ಜಿಯನ್ನು ಕಂಡರೆ ತುಂಬಾ ಪ್ರೀತಿ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ದಿನ ಅಜ್ಜಿ ಇವರಿಬ್ಬರಿಗೂ ಕಥೆಹೇಳಲು ಹೊರಟಾಗ ಅವನೀತ್ ಆಂಟಿ ಬರುತ್ತಾರೆ. ಅವನೀತ್ ಆಂಟಿ ಮಾತಿನ ಮಲ್ಲಿ. ಇವರು ಬಂದರೆ ಅಜ್ಜಿ ಕಥೆ ಹೇಳುವುದನ್ನು ನಿಲ್ಲಿಸಿ ಅವನೀತ್ ಆಂಟಿ ಜೊತೆ ಮಾತನಾಡಲು ಪ್ರಾರಂಭಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ಅಜ್ಜಿ ನಮಗೆ ಕಥೆ ಹೇಳುವುದಿಲ್ಲ ಎಂದು ಗಗನ್ ಮತ್ತು ಚಿಕ್ಕಿ ಆಟವಾಡಲು ಪ್ರಾರಂಭಿಸುತ್ತಾರೆ. ಆಟವಾಡುವಾಗ ಅವನೀತ್ ಆಂಟಿಯ ಮೊಬೈಲ್ ಬಿದ್ದು ಒಡೆದು ಹೋಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವನೀತ್ ಆಂಟಿಗೆ ತುಂಬಾ ಕೋಪ ಬಂದಿದೆ ಎಂದು ಎಣಿಸಿ ಗಗನ್ " ಸಾರಿ ಅವನೀತ್ ಆಂಟಿ" ಎನ್ನುತ್ತಾನೆ. ಆದರೆ ಅವನೀತ್ ಆಂಟಿ ಕೋಪಗೊಳ್ಳದೆ ಗಗನ್ ಮತ್ತು ಚಿಕ್ಕಿಯನ್ನು ಕ್ಷಮಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಲೇಖಕಿ ಕವಿತಾ ಸಿಂಗ್ ಅವನೀತ್ ಆಂಟಿಯ ಮೂಲಕ ಮಾನವೀಯತೆಯ ಸಂಬಂಧಗಳ ಪ್ರಾಮುಖ್ಯತೆಯನ್ನು ಈ ಕಥೆಯಲ್ಲಿ ಮಕ್ಕಳಿಗೆ ತಿಳಿಯಪಡಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಡೆದುಹೋದ ಮೊಬೈಲ್‌ಗಾಗಿ ಅವನೀತ್ ಆಂಟಿ ಗಗನ್ ಮತ್ತು ಚಿಕ್ಕಿ ಜೊತೆ ಕೋಪಮಾಡಿಕೊಳ್ಳಬಹುದಿತ್ತು, ಮೊಬೈಲ್ ಮತ್ತೆ ಪಡೆಯಬಹುದು, ಆದರೆ ಒಡೆದುಹೋದ ಮನಸ್ಸನ್ನು ಸರಿಪಡಿಸುವುದು ಕಷ್ಟ ಎಂದು ತಿಳಿದ ಆಂಟಿ ತನ್ನ ಉದಾರ ಮನೋಭಾವದಿಂದ ಚಿಕ್ಕಿ ಮತ್ತು ಗಗನ್‌ನನ್ನು ಕ್ಷಮಿಸಿ ಬಾಂಧವ್ಯದ ನೆಲೆಯನ್ನು ಗಟ್ಟಿಗೊಳಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರೊಂದಿಗೆ ಚಿಕ್ಕಿ ಮತ್ತು ಗಗನ್‌ನ ಗಾಢವಾದ ಸ್ನೇಹದ ಮೂಲಕ ಗೆಳೆತನದ ಮಹತ್ವವನ್ನು ಕೂಡಾ ಮಕ್ಕಳಿಗೆ ಈ ಕಥೆಯ ಮೂಲಕ ತಿಳಿಸುತ್ತಿದ್ದಾರೆ. ಅಲ್ಲದೆ ಆಕರ್ಷಕವಾದ ಚಿತ್ರಗಳ ಮೂಲಕ ಮಕ್ಕಳಿಗೆ ಈ ಪುಸ್ತಕವನ್ನು ಓದಲು ಪ್ರೇರೇಪಿಸುವಂತೆ ಮಾಡಿದೆ. ಇದರಲ್ಲಿ ಆಂಗ್ಲ ರೂಪಾಂತರವೂ ಇದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಪುಸ್ತಕ: </b>ಅವನೀತ್ ಆಂಟಿಯ ಮೊಬೈಲ್ ಫೋನು</font><br/><font  style='font-size:11pt; color:#000000'><b>ಪ್ರಕಾಶಕರು: </b>ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18</font><br/><font  style='font-size:11pt; color:#000000'><b>ಲೇಖಕರು: </b>ಕವಿತಾ ಸಿಂಗ್ ಕಾಳೆ</font><br/><font  style='font-size:11pt; color:#000000'><b>ಅನುವಾದ: </b>ಅಶ್ವಿನಿ ಭಟ್</font><br/><font  style='font-size:11pt; color:#000000'><b>ಬೆಲೆ: 100 </b>ರೂಪಾಯಿಗಳು</font>]]></content:encoded>
      <pubDate>Mon, 23 Feb 2009 16:12:40 +0530</pubDate>
      <updatedDate>Tue, 15 Apr 2014 01:16:47 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಏಂಜೆಲಾ]]></title>
      <link>https://kannada.webdunia.com/article/kannada-kids-stories/ಏಂಜೆಲಾ-107091800036_1.htm</link>
      <guid>https://kannada.webdunia.com/article/kannada-kids-stories/ಏಂಜೆಲಾ-107091800036_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಗಂಡ ಹೆಂಡತಿ ವಾಸಿಸುತ್ತಿದ್ದರು ಅವರಿಗೆ ಮಕ್ಕಳು ಇಲ್ಲ ಎಂಬ ಕೊರಗು ಇತ್ತು. ಈ ಗಂಡ ಹೆಂಡದಿರು ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು.]]></description>
      <content:encoded><![CDATA[<font  style='font-size:11pt; color:#000000'>ಒಂದು ಊರಿನಲ್ಲಿ ಗಂಡ ಹೆಂಡತಿ ವಾಸಿಸುತ್ತಿದ್ದರು ಅವರಿಗೆ ಮಕ್ಕಳು ಇಲ್ಲ ಎಂಬ ಕೊರಗು ಇತ್ತು. ಈ ಗಂಡ ಹೆಂಡದಿರು ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ಮನೆ ಹಿಂದುಗಡೆ ಒಂದು ಸಣ್ಣ ಕಿಟಕಿ ಇತ್ತು. ಅದರಿಂದ ಒಬ್ಬ ಸುಂದರವಾದ ಉದ್ಯಾನವನ್ನು ನೋಡ ಬಹುದಿತ್ತು. ಆ ಉದ್ಯಾವನವನ ಸುಂದರ ಹೂಗಳು ಮತ್ತು ತರಕಾರಿಗಳಿಂದ ಕೂಡಿತ್ತು. ಆದರೆ ಅದರ ಸುತ್ತ ಕೋಟೆ ಆವರಿಸಿತ್ತು. ಆ ಕೋಟೆಯ ಒಳಗೆ ಹೋಗಲು ಹೆದರುತ್ತಿದ್ದರು ಕಾರಣ ಅಲ್ಲಿ ಒಬ್ಬಳು ಕೆಟ್ಟ ಮಾಟಗಾತಿ ಇದ್ದಳು. ಅವಳಿಗೆ ಎಲ್ಲರೂ ಹೆದರುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ದಿನ ಆ ಮನೆಯ ಒಡತಿ ಕಿಟಕಿ ಪಕ್ಕದಲ್ಲಿ ಕೂತು ಆ ಉದ್ಯಾನ ವನವನ್ನು ನೋಡುತ್ತಿದ್ದಳು. ಅಲ್ಲಿ ಅವಳು ಉತ್ತಮ ಮೂಲಂಗಿ ದಷ್ಟ ಪುಷ್ಟವಾಗಿ ಬೆಳೆದಿರುವುದನ್ನು ನೋಡಿ ಆಸೆ ಪಟ್ಟಳು ಆದರೆ ಅದನ್ನು ತೆಗೆದು ಕೊಂಡು ಬರಲು ಸಾದ್ಯವಿರಲಿಲ್ಲ ಏಕೆಂದರೆ ಆ ಕೋಟೆಯಲ್ಲಿ ಮಾಟಗಾತಿ ಇದ್ದಳು. ಇದರಿಂದ ಮನೆಯ ಒಡತಿ ಬಹಳ ಬೇಸರ ಗೊಂಡು ಅಳಲು ಶುರು ಹಚ್ಚಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗಂಡನಿಗೆ ಹೆಂಡತಿಯ ದುಖಃವನ್ನು ನೋಡಲು ಸಾದ್ಯವಾಗಲಿಲ್ಲ. ಆದದ್ದು ಆಗಲಿ ಎಂದು ಎಣಿಸಿ ಆ ಮೂಲಂಗಿಯನ್ನು ಕೊಂಡು ಬರಲು ಸಂಜೆ ವೇಳೆ ಕೋಟೆಯತ್ತ ಹೋಗಿ ಅದನ್ನು ತೆಗೆದು ಕೊಂಡು ಬಂದು ಹೆಂಡತಿಗೆ ಕೊಟ್ಟ ಹೆಂಡತಿಗೆ ಅದನ್ನು ನೋಡಿ ಬಹಳ ಸಂತೋಷವಾಗಿ ಅದರಿಂದ ಪದಾರ್ಥವನ್ನು ಮಾಡಿ ತಿಂದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ಪದಾರ್ಥ ಎಷ್ಟು ರುಚಿಯಾಗಿತ್ತೆಂದರೆ ಹೆಂಡತಿಗೆ ಅದನ್ನು ಇನ್ನೊಮ್ಮೆ ತಿನ್ನಬೇಕೆಂಬ ಬಯಕೆ ಆಯಿತು. ಹೆಂಡತಿಯನ್ನು ನಿರಾಶೆ ಗೊಳಿಸಲು ಬಯಸದ ಗಂಡ ಅದನ್ನು ಮತ್ತೊಮ್ಮೆ ತರಲು ಕೋಟೆ ಕಡೆ ಹೋದ. ಕೋಟೆಯನ್ನು ಹತ್ತಿದಾಗ ಎದುರಿಗೆ ಆ ಮಾಟಗಾತಿ ಎದುರಾದಳು. ಮಾಟಗಾತಿ ಈತ ಮೂಲಂಗಿ ಕದಿಯುದನ್ನು ನೋಡಿ ಕುಪಿತ ಗೊಂಡಳು. ಇದರಿಂದ ಗಂಡನಿಗೆ ಬಹಳ ಹೆದರಿಕೆಯಾಗಿ ನಾನು ಉದ್ದೇಶಪೂರ್ವಕವಾಗಿ ಇದನ್ನು ಕದಿಯಲಿಲ್ಲ ನನ್ನ ಹೆಂಡತಿಗೆ ಇದಕ್ಕಾಗಿ ಕೊರಗುತ್ತಿದ್ದಾಳೆ ಅದಕ್ಕಾಗಿ ನಾನು ಬಂದೆ ನನ್ನನ್ನು ಕ್ಷಮಿಸು ಎಂದು ಅಂಗಲಾಚಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ಮಾಟಗಾತಿ ನಾನು ನಿನಗೆ ಈ ಎಲ್ಲಾ ಮೂಲಂಗಿಯನ್ನು ಕೊಂಡಯ್ಯಲು ಕೊಂಡೊಯ್ಯಲು ಬಿಡುತ್ತೇನೆ ಆದರೆ ನೀನು ನನಗೆ ನಿನ್ನ ಮೊದಲ ಮಗುವನ್ನು ನನಗೆ ಒಪ್ಪಿಸ ಬೇಕು ಎಂದು ಷರತ್ತು ಹಾಕಿದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಿಂದು ಮುಂದು ಯೋಚಿಸದೆ ಗಂಡ ಇದಕ್ಕೆ ಒಪ್ಪಿದ. ಸ್ವಲ್ಪ ಸಮಯದ ನಂತರ ಅವರಿಗೆ ಹೆಣ್ಣು ಮಗು ಹುಟ್ಟಿತು. ಅದನ್ನು ಆ ಮಾಟಗಾತಿ ತನ್ನ ಕೋಟೆಗೆ ಕೊಂಡೊಯ್ದಳು. ಅದಕ್ಕೆ ಮಾಟಗಾತಿ ಏಂಜೆಲಾ ಎಂದು ಹೆಸರಿಟ್ಟಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ಹುಡುಗಿ ದೊಡ್ಡವಳಾದಳು, ಅವಳು ಬಹಳ ಸುಂದರಿಯಾಗಿದ್ದಳು. ಏಂಜೆಲಾ 12 ವರ್ಷದವಳಾದಾಗ ಅವಳನ್ನು ಒಂದು ಎತ್ತರವಾದ ಗೋಪುರದ ಮೇಲೆ ಇರಿಸಿದಳು. ಆ ಗೋಪುರಕ್ಕೆ ಯಾವುದೇ ಮೆಟ್ಟಿಲುಗಳು ಅಥವ ಬಾಗಿಲುಗಳು ಇರಲಿಲ್ಲ ಕೇವಲ ಕಿಟಕಿ ಮಾತ್ರವಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಾಟಗಾತಿ ಅವಳನ್ನು ಬೇಟಿಯಾಗ ಬೇಕೆಂದಿದ್ದರೆ, ಆ ಗೋಪುರದ ಕೆಳಗೆ ನಿಂತು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕೂಗು ಕೊಡುತ್ತಿದ್ದಳು. ಏಂಜೆಲಾ ಸುಂದರವಾದ ಗಟ್ಟಿ ಮುಟ್ಟಾದ ಚಿನ್ನದ ಕೂದಲನ್ನು ಹೊಂದಿದ್ದಳು. ಹುಡುಗಿ ಕಿಟಕಿಯ ಬಳಿ ಬಂದು ತನ್ನ ಕೂದಲನ್ನು ಕೆಳಗೆ ಬಿಡುತ್ತಿದ್ದಳು ಮತ್ತು ಅದನ್ನು ಹಿಡಿದು ಕೊಂಡು ಮಾಟಗಾತಿ ಮೇಲೆ ಬರುತ್ತಿದ್ದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಕೆಲವು ವರ್ಷ ಕಳೆದ ನಂತರ ಆ ಅರಣ್ಯದ ಕಡೆ ರಾಜಕುಮಾರನ ಮಗ ಬರುತ್ತಾನೆ. ಆತ ಹಾದುಹೋಗುತ್ತಿರುವಾಗ ಅವನ ಕಿವಿಗೆ ಇಂಪಾದ ಹಾಡು ಕೇಳಿಸುತ್ತದೆ ಅದು ಏಂಜೆಲಾನ ಮಧುರ ಕಂಠವಾಗಿತ್ತು. ರಾಜಕುವರ ಆ ಗೋಪುರವನ್ನು ಹತ್ತಲು ಪ್ರಯತ್ನಿಸುತ್ತಾನೆ ಆದರೆ ಅದಕ್ಕೆ ಬಾಗಿಲು ಇಲ್ಲದನ್ನು ಕಾಣದೆ ನಿರಾಶೆಯಿಂದ ತನ್ನ ಅರಮನೆಗೆ ವಾಪಸಾಗುತ್ತಾನೆ. ಆದರೆ ಅವನಿಗೆ ಆ ಇಂಪಾಗಿ ಹಾಡಿದ ಹುಡುಗಿಯನ್ನು ನೋಡುವ ಹೆಬ್ಬಯಕೆ ಉಂಟಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಒಂದು ದಿನ ಅವನು ಗೋಪುರದ ಮುಂದೆ ನಿಂತಿದ್ದಾಗ ಮಾಟಗಾತಿ ಬರುವುದನ್ನು ನೋಡುತ್ತಾನೆ. ಅವಳು ಆ ಗೋಪುರದ ಕೆಳಗೆ ಬಂದು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕರೆಯುದನ್ನು ಕೇಳುತ್ತಾನೆ ಮತ್ತು ಏಂಜೆಲಾ ತನ್ನ ಕೂದಲನ್ನು ಕೆಳಗೆ ಹಾಕಿ ಅದರ ಮುಖಾಂತರ ಮಾಟಗಾತಿ ಮೇಲೇರುದನ್ನು ನೋಡುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮರು ದಿನ ರಾಜಕುವರ ಗೋಪುರದ ಕೆಳಗೆ ನಿಂತು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕೂಗುತ್ತಾನೆ. ಆಗ ಏಂಜೆಲಾ ಕಿಟಕಿ ಸಮೀಪ ಬಂದು ತನ್ನ ಕೂದಲನ್ನು ಕೆಳಗೆ ಬಿಡುತ್ತಾಳೆ. ರಾಜಕುವರನನ್ನು ನೋಡಿ ಮೊದಲಿಗೆ ಹೆದರುತ್ತಾಳೆ ಆದರೆ ರಾಜಕುವರನ ಪ್ರೀತಿಯ ಮಾತುಗಳನ್ನು ಕೇಳಿ ಅವನನ್ನು ಮೇಲಕ್ಕೆ ಬರಲು ಬಿಡುತ್ತಾಳೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಏಂಜೆಲಾಳನ್ನು ನೋಡಿ ರಾಜಕುವರ ತನ್ನನ್ನು ಮದುವೆಯಾಗುವೆಯಾ ಎಂದು ಕೇಳುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಂದರವಾದ ರಾಜಕುವರನನ್ನು ನೋಡಿ ಮದುವೆಯಾಗಲು ಒಪ್ಪುತ್ತಾಳೆ ಮತ್ತು ಗೋಪುರದಿಂದ ಕೆಳಗೆ ಇಳಿಯುವುದಕ್ಕೆ ಉಪಾಯ ಹುಡುಕುತ್ತಾರೆ. ರಾಜಕುವರ ಪ್ರತಿ ಸಲ ಬರುವಾಗ ರೇಷ್ಮೆ ತುಂಡನ್ನು ತರಲು ಹೇಳುತ್ತಾಳೆ ಮತ್ತು ನಾನು ಅದರಿಂದ ಏಣಿಯನ್ನು ತಯಾರಿಸಿ ಕೆಳಗೆ ಬರುತ್ತೇನೆ ಎಂದು ಉಪಾಯ ಹೂಡುತ್ತಾರೆ ಮತ್ತು ಸಂಜೆವರೆಗೆ ಭೇಟಿಯಾಗದಿರುವ ಶಪತ ಮಾಡುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ದಿನದಂದು ಆ ಮಾಟಗಾತಿ ಬರುತ್ತಾಳೆ. ಆದರೆ ಏಂಜೆಲಾ ಬಾಯಿ ತಪ್ಪಿ ಅಜ್ಜಿ ನೀವು ಮೇಲೆ ಬರಲು ಇಷ್ಟು ಕಷ್ಟ ಪಡುತ್ತೀರಿ ಆದರೆ ರಾಜಕುವರ ನಿಮಿಷದಲ್ಲಿ ಇದನ್ನು ಹತ್ತಿ ಮೇಲಕ್ಕೆ ಬರುತ್ತಾನೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಮಾಟಗಾತಿ ಕುಪಿತಗೊಂಡು ಅವಳನ್ನು ಹಿಗ್ಗಾ ಮುಗ್ಗು ಬಯ್ದು ಅವಳ ಸುದರವಾದ ಕೂದಲನ್ನು ತುಂಡರಿಸಿ ದೂರದ ಮರುಭೂಮಿ ಕಡೆ ಬಿಡುತ್ತಾಳೆ. ಅಲ್ಲಿ ಏಂಜೆಲಾ ಬಹಳ ದುಸ್ಥಿತಿಯಿಂದ, ದುಖಃದಿಂದ ದಿನ ಕಳೆಯುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರ ಅರಿವಿಲ್ಲದ ರಾಜಕುವರ ಸಂಜೆ ಗೋಪುರದ ಕೆಳಗೆ ಬಂದು ಏಂಜೆಲಾ ಏಂಜೆಲಾ ನಿನ್ನ ಕೂದಲನ್ನು ಕೆಳಗೆ ಬಿಡು ಎಂದು ಕೂಗುತ್ತಾನೆ. ಮೇಲಿದ್ದ ಮಾಟಗಾತಿ ಕೂದಲನ್ನು ಕೆಳಗೆ ಬಿಡುತ್ತಾಳೆ. ಮೇಲೇರಿದ ರಾಜಕುವರ ಅವಳನ್ನು ನೋಡಿ ಗಾಬರಿಗೊಳ್ಳುತ್ತಾನೆ. ಮಾಟಗಾತಿ ಸಿಟ್ಟಿನಿಂದ ನಾನು ಅವಳನ್ನು ದೂರದ ಮರುಭೂಮಿಗೆ ಬಿಟ್ಟಿದ್ದೇನೆ. ನೀನು ಇನ್ನು ಅವಳನ್ನು ನೋಡಲು ಸಾದ್ಯವಿಲ್ಲ ಎಂದು ಹೇಳುತ್ತಾಳೆ.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಇದರಿಂದ ವಿಚಲಿತನಾದ ರಾಜಕುವರ ದುಖಃದಿಂದ ಗೋಪುರದಿಂದ ಕೆಳಗೆ ಹಾರುತ್ತಾನೆ. ಹಾರುವ ಬರದಲ್ಲಿ ಅವನ ಕಣ್ಣಿಗೆ ಮುಳ್ಳು ತಾಕಿ ಕುರುಡನಾಗುತ್ತಾನೆ. ಆತ ಏಂಜೆಲಾ ಕಳೆದು ಹೋಗಿದ್ದರ ದುಖಃದಿಂದ ಅರಣ್ಯದಲ್ಲೆಲ್ಲಾ ತಿರುಗಾಡುತ್ತಾನೆ. ಕೆಲವು ವರ್ಷ ಅದೇ ರೀತಿ ತಿರುಗಾಡಿ ಅಂತಿಮವಾಗಿ ಏಂಜೆಲಾ ಇದ್ದ ಮರುಭೂಮಿ ಮುಟ್ಟುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಲ್ಲಿ ಅವನು ಏಂಜೆಲಾನ ಸುಮದುರ ಕಂಠದಿಂದ ಹಾಡುವುದನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಆ ದಿಕ್ಕಿನಲ್ಲಿ ನಡೆಯುತ್ತಾನೆ. ಏಂಜೆಲಾ ರಾಜಕುವರನ ಗುರುತು ಹಿಡಿಯುತ್ತಾಳೆ ಮತ್ತು ಅವನ ಮೇಲೆ ಬಿದ್ದು ಜೋರಾಗಿ ಅಳುತ್ತಾಳೆ. ಅವಳ ಕಣ್ಣೀರು ರಾಜಕುವರನ ಕಣ್ಣಿಗೆ ಬೀಳುತ್ತದೆ. ಅದರಿಂದ ರಾಜಕುವರನ ಕಣ್ಣು ಸರಿಯಾಗಿ ಮುಂಚಿನಂತೆ ಕಾಣಲು ಸಾದ್ಯವಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವರಿಬ್ಬರು ಆ ಸ್ಥಳವನ್ನು ಬಿಟ್ಟು ಅರಮನೆಯ ಹುಡುಕಾಟದಲ್ಲಿ ತಿರುಗಾಡುತ್ತಾರೆ. ಸ್ವಲ್ಪ ದಿನದ ತಿರುಗಾಟದ ನಂತರ ರಾಜಕುಮಾರನ ಅಧಿಪತ್ಯಕ್ಕೆ ಬರುತ್ತಾರೆ. ಅವರನ್ನು ಬಹಳ ಸಡಗರದಿಂದ ಬರಮಾಡಿ ಕೊಳ್ಳಲಾಗುತ್ತದೆ. ನಂತರ ಅವರಿಬ್ಬರು ಮದುವೆಯಾಗಿ ಬಹಳ ಸಂತೋಷದಿಂದ ಆಡಳಿತ ನಡೆಸುತ್ತಾರೆ.</font><br/><font  style='font-size:11pt; color:#000000'>ಆದರೆ ಆ ಮಾಟಗಾತಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ.              </font><br/> </font>]]></content:encoded>
      <pubDate>Mon, 23 Feb 2009 16:12:19 +0530</pubDate>
      <updatedDate>Tue, 15 Apr 2014 01:16:47 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ರಾಜನ ಹೊಸ ಬಟ್ಟೆ]]></title>
      <link>https://kannada.webdunia.com/article/kannada-kids-stories/ರಾಜನ-ಹೊಸ-ಬಟ್ಟೆ-107091800035_1.htm</link>
      <guid>https://kannada.webdunia.com/article/kannada-kids-stories/ರಾಜನ-ಹೊಸ-ಬಟ್ಟೆ-107091800035_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಸುಮಾರು ವರ್ಷಗಳ ಹಿಂದೆ ಒಬ್ಬ ರಾಜನಿದ್ದ ಅವನಿಗೆ ಹೊಸ ಬಟ್ಟೆಗಳೆಂದರೆ ಪಂಚ ಪ್ರಾಣ. ಆತ ಹೊಸ ಬಟ್ಟೆಗಳಿಗಾಗಿ ಹೆಚ್ಚಿನ ಹಣವನ್ನು ವ್ಯಯಿಸುತ್ತಿದ್ದ. ಆತನು ದಿನದ ಪ್ರತಿ ಗಂಟೆ ಬಟ್ಟೆಗಳನ್ನು ಬದಲಾಯಿಸುತ್ತಿದ್ದ. ಮತ್ತು ಎಲ್ಲರಿಗೂ ಅದನ್ನು ತೋರಿಸುವ ಚಾಳಿ.]]></description>
      <content:encoded><![CDATA[<font  style='font-size:11pt; color:#000000'>ಸುಮಾರು ವರ್ಷಗಳ ಹಿಂದೆ ಒಬ್ಬ ರಾಜನಿದ್ದ ಅವನಿಗೆ ಹೊಸ ಬಟ್ಟೆಗಳೆಂದರೆ ಪಂಚ ಪ್ರಾಣ. ಆತ ಹೊಸ ಬಟ್ಟೆಗಳಿಗಾಗಿ ಹೆಚ್ಚಿನ ಹಣವನ್ನು ವ್ಯಯಿಸುತ್ತಿದ್ದ. ಆತನು ದಿನದ ಪ್ರತಿ ಗಂಟೆ ಬಟ್ಟೆಗಳನ್ನು ಬದಲಾಯಿಸುತ್ತಿದ್ದ. ಮತ್ತು ಎಲ್ಲರಿಗೂ ಅದನ್ನು ತೋರಿಸುವ ಚಾಳಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಕೆಲವು ವರ್ಷ ಕಳೆದ ನಂತರ ಅವನ ಆಸ್ಥಾನಕ್ಕೆ ಇಬ್ಬರು ವ್ಯಕ್ತಿಗಳು ಬಂದರು. ಅವರು ತಮ್ಮನ್ನು ತಾವು ಬಟ್ಟೆ ನೇಯುವವರು ಎಂದು ರಾಜನಿಗೆ ಪರಿಚಯಿಸಿದರು. ಮತ್ತು ತಾವು ಒಂದು ಅದ್ಬುತ, ಸುಂದರ ಬಣ್ಣದ ಬಟ್ಟೆಯನ್ನು ಹೊಲಿದು ಕೊಡುತ್ತೇವೆ ಎಂದು ರಾಜನಿಗೆ ಹೇಳುತ್ತಾರೆ ಮತ್ತು ಈ ಬಟ್ಟೆ ಯಾರು ತಮ್ಮ ಆಸ್ತಾನದಲ್ಲಿ ಅಪ್ರಯೋಜಕರಾಗಿರುತ್ತಾರೋ ಅವರಿಗೆ ಇದು ಕಾಣಿಸುವುದಿಲ್ಲ. ಅಂತಹ ಅಮೋಘ ಶಕ್ತಿಯನ್ನು ಒಳಗೊಂಡಿದೆ ಎಂದು ಹೇಳುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ರಾಜನಿಗೆ ಅಂತಹ ಅದ್ಬುತ ಬಟ್ಟೆಯನ್ನು ತಾನು ಹೊಂದುವ ಬಗ್ಗೆ ಇಚ್ಚಿಸುತ್ತಾನೆ ಮತ್ತು ಆ ಇಬ್ಬರು ನೇಯುವವರಿಗೆ ಆ ಬಟ್ಟೆಯನ್ನು ತಯಾರಿಸಲು ಹೇಳುತ್ತಾನೆ. ಅದಕ್ಕಾಗಿ ಆತ ಆ ಇಬ್ಬರು ನೇಯುವವರಿಗೆ ಸಾಕಷ್ಟು ಹಣವನ್ನು ನೀಡುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಬ್ಬರು ನೇಕಾರರು ನೇಯುವ ಯಂತ್ರವನ್ನು ತಯಾರಿಸುವ ಮತ್ತು ಬಟ್ಟೆ ನೇಯುವಂತೆ ನಟಿಸಲು ಪ್ರಾರಂಭಿಸುತ್ತಾರೆ. ವಾಸ್ತವವಾಗಿ ಅವರು ಏನು ಮಾಡುವುದಿಲ್ಲ. ಈ ಬಟ್ಟೆ ನೇಯುದಕ್ಕಾಗಿ ಅವರು ಅತ್ಯಮೂಲ್ಯ ಹತ್ತಿ ಮತ್ತು ಶುಭ್ರವಾದ ಚಿನ್ನವನ್ನು ಕೇಳುತ್ತಾರೆ. ಆದರೆ ಈ ಇಬ್ಬರು ಆ ಚಿನ್ನವನ್ನು ತಮ್ಮ ಚೀಲದಲ್ಲಿ ತುಂಬಿಸಿಕೊಂಡು ರಾತ್ರಿ ವರೆಗೆ ಸುಮ್ಮನೆ ಕೂರುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವಲ್ಪ ಸಮಯದ ನಂತರ ಈ ಕಡೆ ರಾಜನಿಗೆ ತಯಾರಾಗುತ್ತಿರುವ ಬಟ್ಟೆಯ ಬಗ್ಗೆ ಕುತೂಹಲ ಪ್ರಾರಂಭವಾಗುತ್ತದೆ ಮತ್ತು ಇದನ್ನು ನೋಡುವ ಆಶೆ ಉಂಟಾಗುತ್ತದೆ. ಆದರೆ ಈ ಬಟ್ಟೆಯನ್ನು ನನಗೆ ನೋಡಲು ಸಾದ್ಯವಾಗದಿದ್ದರೆ ನಾನು ಅಪ್ರಯೋಜಕನೆಂದಾಗುತ್ತದೆ ಎಂದು ಭಯ ಬೀತಗೊಂಡು ತನ್ನ ವಿಶ್ವಾಸಾರ್ಹ ಸಚಿವನನ್ನು ನೇಯಲ್ಪಡುತ್ತಿರುವ ಬಟ್ಟೆಯನ್ನು ನೋಡಲು ಕಳುಹಿಸುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಚಿವ ಬಟ್ಟೆ ನೇಯಲ್ಪಡುತ್ತಿರುವ ಕೊಠಡಿಗೆ ಹೋಗುತ್ತಾನೆ ಆದರೆ ಆತನಿಗೆ ಏನು ಕಾಣುವುದಿಲ್ಲ. ಇದರಿಂದ ಗಾಭರಿ ಗೊಂಡ ಸಚಿವ ಇದರ ಅರ್ಥ ನಾನು ನಿಶ್ಪ್ರಯೋಜಕನೇ ಎಂದು ಯೋಚಿಸತೊಡಗುತ್ತಾನೆ. ಸಚಿವನನ್ನು ನೋಡಿದ ನೇಕಾರರು ಆತನನ್ನು ಬರ ಮಾಡಿಕೊಂಡು ಬಟ್ಟೆ ಹೇಗೆ ಇದೆ ಎಂದು ಕೇಳುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಚಿವ ಮನಸ್ಸಿನಲ್ಲೇ ಒಂದು ವೇಳೆ ನಾನು ಕಾಣಿಸುತ್ತಿಲ್ಲ ಎಂದು ಹೇಳಿದರೆ ನಾನು ಅಪ್ರಯೋಜಕನೆಂದು ಗೊತ್ತಾಗುವುದು. ಇದನ್ನು ನಾನು ಯಾರಿಗೂ ಗೊತ್ತಾಗಿಸ ಕೂಡದು ಹಾಗಾಗಿ ನಾನು ಕಾಣಿಸುತ್ತಿಲ್ಲ ಎಂದು ಹೇಳಬಾರದು ಎಂದು ಯೋಚಿಸುತ್ತಾನೆ. ನೇಕಾರರು ಮತ್ತೊಮ್ಮೆ ಬಟ್ಟೆ ಹೇಗಿದೆ ಎಂದು ಕೇಳುತ್ತಾರೆ. ಸಚಿವ ಸುಮ್ಮನೆ ಬಟ್ಟೆ ಬಹಳ ಸುಂದರವಾಗಿದೆ ಎಂದು ಹೇಳುತ್ತಾನೆ. ನಂತರ ನೇಕಾರರು ಸುಮ್ಮನೆ ಇಲ್ಲದ ಬಟ್ಟೆಯ ಬಣ್ಣವನ್ನು ವಿವರಿಸುತ್ತಾರೆ ಮತ್ತು ಬಟ್ಟೆಗಾಗಿ ಇನ್ನಷ್ಟು ಚಿನ್ನದ ನೂಲನ್ನು ಕೇಳುತ್ತಾರೆ. ರಾಜನ ಹತ್ತಿರ ಬಂದು ಸಚಿವ, ಬಟ್ಟೆ ಬಹಳ ಸುಂದರವಾಗಿದೆ ಎಂದು ಸುಮ್ಮನೆ ಬಣ್ಣಿಸುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಾದ ಸ್ವಲ್ಪ ಸಮಯದ ನಂತರ ರಾಜ ಇನ್ನೊಬ್ಬನನ್ನು ಅಲ್ಲಿಗೆ ಕಳುಹಿಸುತ್ತಾನೆ. ಆತನಿಗೂ ಯಾವುದೇ ಬಟ್ಟೆ ಕಾಣಿಸುವುದಿಲ್ಲ. ನೇಕಾರರು ಆತನಲ್ಲಿ ಬಟ್ಟೆ ಹೇಗಿದೆ ಎಂದು ಪ್ರಶ್ನಿಸುತ್ತಾರೆ. ಆತ ಕೂಡ ಒಂದು ವೇಳೆ ನಾನು ಕಾಣುತ್ತಿಲ್ಲ ಎಂದು ಹೇಳಿದರೆ ನಾನು ಅಪ್ರಯೋಜಕನೆಂದು ಗೊತ್ತಾಗುವುದು. ಇದರಿಂದ ನನ್ನ ಕೆಲಸಕ್ಕೆ ಸಂಚಕಾರ ಬರುವುದು ಹಾಗಾಗಿ ನಾನು ಕಾಣಿಸುವುದಿಲ್ಲ ಎಂದು ಹೇಳಬಾರದು ಎಂದು ನಿರ್ಧರಿಸುತ್ತಾನೆ.ಮತ್ತು ಬಟ್ಟೆ ಬಹಳ ಸುಂದರವಾಗಿದೆ ಎಂದು ಇಬ್ಬರು ನೇಕಾರರನ್ನು ಪ್ರಶಂಸಿಸುತ್ತಾನೆ. ರಾಜನ ಹತ್ತಿರ ಬಂದು ಬಟ್ಟೆ ಸುಂದರವಾಗಿದೆ ಎಂದು ಹೇಳುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂತಿಮವಾಗಿ ರಾಜನಿಗೆ ಆ ಬಟ್ಟೆಯನ್ನು ನೋಡುವ ಬಯಕೆ ಆಗುತ್ತದೆ. ರಾಜ ಕೆಲವರನ್ನು ಕರೆದುಕೊಂಡು ಬಟ್ಟೆ ನೇಯುತ್ತಿರುವ ಕೊಠಡಿಗೆ ಹೋಗುತ್ತಾನೆ. ಆದರೆ ರಾಜನಿಗೂ ಅಲ್ಲಿ ಯಾವುದೇ ಬಟ್ಟೆ ಕಾಣಿಸುವುದಿಲ್ಲ. ಇದರಿಂದ ರಾಜನಿಗೆ ಗಾಬರಿಯಾಗುತ್ತದೆ. ಇದರ ಅರ್ಥ ನಾನು ಅಪ್ರಯೋಜಕನೆಂದೇ? ನಾನು ರಾಜನಾಗಿ ಪಟ್ಟದಲ್ಲಿ ಕೂರಲು ಅನರ್ಹವೆಂದು ಇದರ ಅರ್ಥವೇ ಎಂದು ಯೋಚಿಸಿ ಗಾಬರಿ ಗೊಳ್ಳುತ್ತಾನೆ. ಹಾಗಾಗಿ ತಾನೂ ಬಟ್ಟೆ ಕಾಣಿಸುತ್ತಿದೆ ಎಂದು ಸುಳ್ಳು ಹೇಳಬೇಕು ಎಂದು ಯೋಚಿಸಿ, ಬಟ್ಟೆ ಬಹಳ ಅದ್ಬುತವಾಗಿದೆ ಎಂದು ಹೇಳುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ಇತರ ಅಧಿಕಾರಿಗಳು ಬಟ್ಟೆ ಕಾಣಿಸದಿದ್ದರೂ ಹೌದು ಹೌದು ಬಟ್ಟೆ ಸುಂದರವಾಗಿದೆ ಎಂದು ಸುಳ್ಳು ಹೇಳುತ್ತಾರೆ. ರಾಜ ಇನ್ನೂ ಸ್ವಲ್ಪ ಮುಂದೆ ಹೋಗಿ ನಾಳೆ ನಾನು ಇದನ್ನು ದರಿಸಿಕೊಂಡು ಮೆರವಣಿಗೆ ನಡೆಸಲಿದ್ದೇನೆ ಎಂದು ತಿಳಿಸುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಮಾರನೇ ದಿನ ರಾಜನ ಆಸ್ಥಾನಕ್ಕೆ ಇಬ್ಬರು ನೇಕಾರರು ಬಂದು ನಿಜವಾಗಿ ಬಟ್ಟೆ ಇರುವಂತೆ ಕೈಯಿಂದ ಎತ್ತಿ ಹಿಡಿದು, ನೋಡಿ ಈ ಸುಂದರವಾದ ಬಟ್ಟೆಯನ್ನು ಇದು ಹತ್ತಿಯಷ್ಟು ಹಗುರವಾಗಿದೆ. ರಾಜ ತಮ್ಮ ಬಟ್ಟೆಯನ್ನು ತೆಗೆದರೆ ನಾವು ಈ ಹೊಸ ಬಟ್ಟೆಯನ್ನು ಅವರಿಗೆ ಧರಿಸುತ್ತೇವೆ ಎಂದು ಹೇಳುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನೇಕಾರರು ರಾಜನಿಗೆ ಆ ಬಟ್ಟೆಯನ್ನು ಧರಿಸುವಂತೆ ನಟಿಸುತ್ತಾರೆ ಮತ್ತು ಎಷ್ಟು ಸುಂದರ ಎಂದು ಶ್ಲಾಘಿಸುತ್ತಾರೆ. ನೆರೆದಿದ್ದ ಎಲ್ಲರೂ ಹೌದು ಈ ಬಟ್ಟೆಯಿಂದ ರಾಜ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಸುಳ್ಳು ಸುಳ್ಳಾಗಿ ಬೊಬ್ಬಿಡಲು ಪ್ರಾರಂಭಿಸುತ್ತಾರೆ. ಇಲ್ಲದಿದ್ದರೆ ನಾವು ಅಪ್ರಯೋಜಕರೆಂದು ತಿಳಿಸುತ್ತದೆ ಎಂದು ಹೆದರಿ ಸುಮ್ಮನೆ ಎಲ್ಲರೂ ಹೊಗಳಲು ಪ್ರಾರಂಭಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಮೆರವಣಿಗೆಯಲ್ಲಿ ಸಾಗುತ್ತಿರುವಾಗ ರಾಜನ ಮಗಳು ಬಟ್ಟೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾಳೆ. ಇದು ಎಲ್ಲರ ಕಿವಿಗೂ ಹರಡುತ್ತದೆ ಮತ್ತು ಎಲ್ಲರೂ ಹೌದು ಬಟ್ಟೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ. ರಾಜನಿಗೂ ಜನೇರು ಹೇಳುತ್ತಿರುವುದು ಸತ್ಯ ಎಂದು ಯೊಚಿಸಿ ತನ್ನ ಮಂಕು ಬುದ್ದಿಯ ಅರಿವಾಗಿ ತನ್ನನ್ನೇ ತಾನು ಹಳಿಯುತ್ತಾನೆ.</font><br/>             </font>]]></content:encoded>
      <pubDate>Mon, 23 Feb 2009 16:11:59 +0530</pubDate>
      <updatedDate>Tue, 15 Apr 2014 01:16:47 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಏಳು ಆಡು ಮರಿ ಮತ್ತು ಕಪಟ ನರಿ]]></title>
      <link>https://kannada.webdunia.com/article/kannada-kids-stories/ಏಳು-ಆಡು-ಮರಿ-ಮತ್ತು-ಕಪಟ-ನರಿ-107052400011_1.htm</link>
      <guid>https://kannada.webdunia.com/article/kannada-kids-stories/ಏಳು-ಆಡು-ಮರಿ-ಮತ್ತು-ಕಪಟ-ನರಿ-107052400011_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಮುದಿ ಆಡು ಇತ್ತು. ಆ ಮುದಿ ಆಡಿಗೆ 7 ಸಣ್ಣ ಮರಿಗಳಿದ್ದವು .]]></description>
      <content:encoded><![CDATA[<font  style='font-size:11pt; color:#000000'>ಒಂದು ಊರಿನಲ್ಲಿ ಮುದಿ ಆಡು ಇತ್ತು. ಆ ಮುದಿ ಆಡಿಗೆ 7 ಸಣ್ಣ ಮರಿಗಳಿದ್ದವು . </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ದಿನ ತಾಯಿ ಆಡು ಆಹಾರಕ್ಕಾಗಿ ಕಾಡಿಗೆ ಹೋಗುವ ಪರಿಸ್ಥಿತಿ ಒದಗಿ ಬಂತು. ಆಗ ತಾಯಿ ಆಡು ತನ್ನ 7 ಮಕ್ಕಳನ್ನು ಕರೆದು, ಮಕ್ಕಳೇ, ನಾನು ಕಾಡಿಗೆ ಹೋಗಲೇ ಬೇಕು. ಹಾಗಾಗಿ ನೀವು ಕಪಟ ನರಿ ಬಗ್ಗೆ ಬಹಳ ಜಾಗೃತರಾಗಿರಿ, ಅದು ಯಾವ ಹೊತ್ತ ಬರಬಹುದು. ಬಂದರೆ ನಿಮ್ಮನ್ನೆಲ್ಲಾ ತಿನ್ನುತ್ತಾನೆ. ನರಿ ಯಾವಗಲೂ ವೇಷಮರೆಸಿ ನಿಮ್ಮನ್ನು ಮೋಸ ಮಾಡಬಹುದು. ಆದರೆ ಅದರ ಒರಟು ಶಬ್ದ, ಕರಿ ಪಾದದಿಂದ ನಿಮಗೆ ಅದು ನರಿ ಎಂದು ತಿಳಿಯ ಬಹುದು ಎಂದು ಎಚ್ಚರಿಕೆ ಕೊಟ್ಟಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮರಿ ಆಡುಗಳು, ಅಮ್ಮ ನೀವು ಹೆದರಬೇಡಿ. ನಾವು ಜಾಗೃತೆಯಿಂದ ಇರುತ್ತೇವೆ ನೀವು ನಿರ್ಭಯವಾಗಿ ಕಾಡಿಗೆ ಹೋಗಿ ಎಂದು ತಾಯಿಗೆ ಧೈರ್ಯ ತುಂಬಿದವು.</font><br/><font  style='font-size:11pt; color:#000000'>ಸ್ವಲ್ಪ ಹೊತ್ತಿನ ನಂತರ ಯಾರೋ ಬಾಗಿಲು ಬಡಿಯುತ್ತಾ ಬಾಗಿಲು ತೆರೆಯಿರಿ ಮಕ್ಕಳೇ ನಾನು ನಿಮ್ಮ ತಾಯಿ ಎಂದು ಹೇಳಿತು. ಆದರೆ ಮರಿ ಆಡುಗಳು ಒರಟು ದ್ವನಿಯನ್ನು ಕೇಳಿ ಇದು ಕಪಟ ನರಿ ಎಂದು ಪತ್ತೆ ಹಚ್ಚಿತು. ನಾವು ಬಾಗಿಲು ತೆರೆಯುದಿಲ್ಲ ನಮಗೆ ನೀನು ನರಿ ಎಂದು ತಿಳಿದಿದೆ ನಿನ್ನ ಒರಡು ದ್ವನಿಯಿಂದ ಅದು ಗೊತ್ತಾಯಿತು ಎಂದು ಹೇಳಿದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ನರಿ ಅಂಗಡಿಗೆ ಓಡಿ ದ್ವನಿ ಮಧುರವಾಗಲು ಒಂದು ತುಂಡು ಸುಣ್ಣವನ್ನು ಖರೀಧಿಸಿ ತಿಂದಿತು. ನಂತರ ವಾಪಾಸು ಹೋಗಿ ಬಾಗಿಲು ಬಡಿಯಲು ಪ್ರಾರಂಭಿಸಿತು. ಬಾಗಿಲು ತೆರಯಿರಿ ಮಕ್ಕಳೇ  ಇದು ನಿಮ್ಮ ತಾಯಿ ಎಂದು ಹೇಳಿತು. ಆದರೆ ನರಿಯ ಕರಿ ಪಾದವನ್ನು ಕಂಡ ಮರಿ ಆಡು ನೀನು ನಮ್ಮ ತಾಯಿಯಲ್ಲಿ ನೀನು ನರಿ ನಿನ್ನ ಕರಿ ಪಾದದಿಂದ ನಮಗೆ ತಿಳಿಯಿತು ಎಂದು ಹೇಳಿದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ನರಿ ಬೇಕರಿ ಅಂಗಡಿಗೆ ಹೋಗಿ ನನ್ನ ಪಾದಕ್ಕೆ ತುರುಚಿದ ಗಾಯವಾಗಿದೆ ಸ್ವಲ್ಪ ಅದಕ್ಕೆ ಹಿಟ್ಟನ್ನು ಹಾಕು ಎಂದು ಹೇಳಿತು. ಬೇಕರಿಯವ ಆ ರೀತಿ ಮಾಡಿದ. ನಂತರ ನರಿ ಓಡಿ ಗಿರಣಿಗಾರನ ಸಮೀಪ ಹೋಗಿ ನನ್ನ ಪಾದಗಳಿಗೆ ಬಿಳಿ ದ್ರವವನ್ನು ಹಾಕು ಎಂದು ಹೇಳಿತು. ನರಿ ಯಾರಿಗೋ ಮೋಸ ಮಾಡಲು ಹೀಗೆ ಹೇಳುತ್ತಿದೆ ಎಂದು ಅರಿತ ಗಿರಾಣಿಗಾರ ಅದು ಹೇಳಿದಂತೆ ಮಾಡಲು ಹಿಂಜರಿದ. ಆಗ ನರಿ ಒಂದು ವೇಳೆ ನೀನು ಹಾಗೆ ಮಾಡದಿದ್ದರೆ ನಾನು ನಿನ್ನನ್ನು ತಿನ್ನುತ್ತೇನೆ ಎಂದು ಗದರಿಸಿತು. ಆತ ಹೆದರಿಕೆಯಿಂದ ನರಿಯ ಪಾದವನ್ನು ಬಿಳಿ ಮಾಡಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೂರನೇ ಭಾರಿಗೆ ಆಡಿನ ಮನೆಗೆ ಹೋದ ಕಪಟ ನರಿ, ಬಾಗಿಲು ಬಡಿಯುತ್ತಾ, ಬಾಗಿಲು ತೆರೆಯಿರಿ ಮಕ್ಕಳೇ ನಾನು ನಿಮ್ಮ ತಾಯಿ ಎಂದು ಹೇಳಿತು. ಆಗ ಮರಿ ಆಡುಗಳು ನೀನು ನಿನ್ನ ಪಾದಗಳನ್ನು ತೋರಿಸು. ಅದರಿಂದ ನಮಗೆ ನೀನು ನಮ್ಮ ತಾಯಿಯೇ ಎಂದು ಗೊತ್ತಾಗುತ್ತದೆ ಎಂದು ಹೇಳಿತು.</font><br/><font  style='font-size:11pt; color:#000000'>ನಂತರ ನರಿ ತನ್ನ ಪಾದವನ್ನು ತೋರಿಸಿತು. ಬಿಳಿ ಪಾದವನ್ನು ಕಂಡ ಮರಿ ಆಡುಗಳು ಇದು ನಮ್ಮ ತಾಯಿ ಎಂದು ಎಣಿಸಿ ಬಾಗಿಲು ತೆರೆದವು. ಆದರೆ ಬಾಗಿಲು ತೆರೆದಾಗ ತಾವು ಮೋಸ ಹೋದದ್ದು ಮರಿಗಳಿಗೆ ಅರಿವಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನರಿಯನ್ನು ನೋಡಿದ ಕೂಡಲೇ ಮರಿಗಳು ಒಂದೊಂದು ಮೂಲೆಗೆ ಹೋಗಿ ಅಡಗಿ ಕುಳಿತವು. ಆದರೆ ನರಿ ಅವುಗಳನ್ನು ಪತ್ತೆಹಚ್ಚಿ ಒಂದೊಂದಾಗಿ ಹಿಡಿದು, ನುಂಗಿತು. ಆದರೆ ಒಂದು ಮರಿಯನ್ನು ಹುಡುಕಲು ಸಾದ್ಯವಾಗಸಲಿಲ್ಲ. ತನ್ನ ಹುಟ್ಟೆ ತುಂಬಿದೆ ಎಂದು ಅರಿವಾದ ನಂತರ ನರಿ ಹುಲ್ಲುಗಾವಲಿನ ಪ್ರದೇಶಕ್ಕೆ ಹೋಗಿ ನಿದ್ರೆಗೆ ಜಾರಿತು.</font><font  style='font-size:11pt; color:#000000'>ಈ ಕಡೆ ತಾಯಿ ಆಡು ಕಾಡಿನಿಂದ ವಪಾಸು ಬಂದಾಗ ಮನೆಯ ಬಾಗಿಲು ತೆರೆದಿದ್ದನ್ನು ಕಂಡು ಹೆದರಿ ಬಿದ್ದಿತು. ಒಳಗೆ ಹೋಗಿ ನೋಡಿದಾಗ ಮನೆಯ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಕಂಡು ಗಾಬರಿ ಗೊಂಡಳು. ಒಂದೊಂದಾಗಿ ತನ್ನ ಮರಿಗಳ ಹೆಸರನ್ನು ಕರೆಯಲು ಪ್ರಾರಂಭಿಸಿದಳು ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಕೊನೆ ಮರಿಯ ಹೆಸರು ಕರೆದಾಗ ಅದು ಹೆದರಿಕೆಯಿಂದ ಓ ಗುಟ್ಟಿತು. ನಂತರ ಅದನ್ನು ಹೊರತೆಗೆದ ತಾಯಿ ತನ್ನ ಆಡು ಮರಿಗಳನ್ನು ನರಿ ತಿಂದ ವಿಷಯವನ್ನು ವಿವರವಾಗಿ ತಿಳಿದುಕೊಂಡಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದುಖಃದಿಂದ ತಾಯಿ ಆಡು ವೇಗದಿಂದ ಹುಲ್ಲುಗಾವಲಿನತ್ತ ಓಡಿತು. ಅಲ್ಲಿ ನರಿ ಮರದ ಕೆಳಗೆ ಆರಾಮದಿಂದ ಮಲಗಿದ್ದನ್ನು ಕಂಡಿತು. ಎಚ್ಚರಿಕೆಯಿಂದ ಅದರ ಹತ್ತಿರ ಹೋಗಿ ಅದನ್ನು ಸರಿಯಾಗಿ ಪರೀಕ್ಷಿಸಿತು. ಹೀಗೆ ಪರಿಕ್ಷಿಸುತ್ತಿರುವಾಗ ಅದರ ತುಂಬಿದ ಹೊಟ್ಟೆಯಿಂದ ಚಲನೆ ಯಾಗುವುದು ಕಂಡು ಬಂತು. ನನ್ನ ಮರಿಗಳನ್ನು ನುಂಗಿದ ನರಿಯ ಹೊಟ್ಟೆಯಲ್ಲಿ ಅವುಗಳು ಇನ್ನೂ ಜೀವಂತವಿದೆ ಎಂದು ತಾಯಿ ಆಡು ಯೋಚಿಸಿತು.</font><br/>  <font  style='font-size:11pt; color:#000000'></font><br/><font  style='font-size:11pt; color:#000000'>ಕೂಡಲೇ ತನ್ನ ಕೊನೆಯ ಮರಿ ಆಡಿಗೆ ಮನೆಯಿಂದ ಚೂರಿ ತರಲು ಹೇಳಿತು. ಮರಿ ಆಡು ವೇಗವಾಗಿ ಮನೆಗೆ ಹೋಗಿ ಚೂರಿ ತೆಗೆದುಕೊಂಡು ತಾಯಿಗೆ ಕೊಟ್ಟಿತು. ತಾಯಿ ಆಡು ನಿದಾನವಾಗಿ ಮಲಗಿದ್ದ ನರಿ ಹತ್ತಿರ ಹೋಗಿ ಅದರ ಹೊಟ್ಟೆಯನ್ನು ಜಾಗರೂಕತೆಯಿಂದ ಸೀಳಿತು. ಹಾಗೆ ಸೀಳಿದ ಕೂಡಲೇ ಒಳಗಿದ್ದ ಇತರ ಆಡು ಮರಿಗಳು ಒಂದೊಂದಾಗಿ ಹೊರಕ್ಕೆ ಹಾರಿತು. ಎಲ್ಲಾ ಮರಿಗಳು ಸುರಕ್ಷಿತವಾಗಿದ್ದವು. ಯಾವುದೇ ಗಾಯ ಆಗಿರಲಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ತಾಯಿ ಆಡು, ಮರಿ ಆಡಿಗೆ ಕೆಲವು ದೊಡ್ಡ ಕಲ್ಲುಗಳನ್ನು ತರಲು ಹೇಳಿತು. ಮರಿ ಆಡುಗಳು ಕಲ್ಲುಗಳನ್ನು ತಂದು ತಾಯಿಗೆ ಕೊಟ್ಟವು. ತಾಯಿ ಆಡು ಆ ಕಲ್ಲುಗಳನ್ನು ನರಿಯ ಹೊಟ್ಟೆಯೊಳಗೆ ಹಾಕಿ ಸೀಳಿದ್ದ ಹೊಟ್ಟೆಯನ್ನು ವೇಗವಾಗಿ ಹೊಲಿಯುತ್ತದೆ. ನಂತರ ತಾಯಿ ಆಡು ತನ್ನ ಮರಿಗಳನ್ನು ಕೆರೆದುಕೊಂಡು ತನ್ನ ಮನೆಗೆ ಹೋಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಕಡೆ ನರಿ ನಿದ್ದೆಯಿಂದ ಏಳುತ್ತದೆ ಮತ್ತು ಬಾರಿ ಬಾಯರಿಕೆ ಎಣಿಸಿ ನೀರು ಕುಡಿಯಲು ಬಾವಿಯತ್ತ ಹೋಗುತ್ತದೆ. ಆದರೆ ಹೋಗುತ್ತಿರುವಾಗ ಅದರ ಹೊಟ್ಟೆಯೊಳಗಿದ್ದ ಕಲ್ಲುಗಳು ಒಂದಕ್ಕೊಂದು ತಾಕಲು ಪ್ರಾರಂಭಿಸಿದವು ಮತ್ತು ಹೊಟ್ಟೆಗೆ ಜೋರಾಗಿ ಕುಟ್ಟುತ್ತಾ ಇತ್ತು. ಆಗ ನರಿ, ನನ್ನ ಹೊಟ್ಟೆಯಲ್ಲಿ ಅಲ್ಲಾಡುತ್ತಿರುವುದು, ಜಿಗಿಯುತ್ತಿರುವುದು ಏನು?. ನಾನು ಇದು 6 ಸಣ್ಣ ಆಡಿನ ಮರಿಗಳು ಎಂದು ಎಣಿಸಿದ್ದೆ ಆದರೆ ಈಗ ಇದು ಕಲ್ಲುಬಂಡೆಗಿಂತಲೂ ಭಾರವಾಗಿದೆಯಲ್ಲಾ ಎಂದು ಕಿರುಚಾಡಲು ಪ್ರಾರಂಭಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನರಿ ಪ್ರಾಯಸದಿಂದ ಭಾವಿ ಸಮೀಪ ಬಂದು, ನೀರು ಕುಡಿಯಲೆಂದು ಬಾಗಿದಾಗ, ಅದರ ಹೊಟ್ಟೆಯಲ್ಲಿನ ಕಲ್ಲುಗಳು ಹೆಚ್ಚು ಬಾರ ಇದ್ದ ಕಾರಣ ಅದು ಆಯ ತಪ್ಪಿ ಆಳದ ಬಾವಿಯೊಳಗೆ ಬಿದ್ದು ತನ್ನ ಪ್ರಾಣ ಕಳೆದು ಕೊಂಡಿತು.ಇದನ್ನು ನೋಡಿದ 7 ಆಡು ಮರಿಗಳು ಖುಷಿಯಿಂದ ಕುಣಿಯುತ್ತಾ ಕಪಟ ನರಿ ಸತ್ತುಹೋಯಿತು ಎಂದು ಜೋರಾಗಿ ಕಿರುಚಾಡಲು ಶುರುಹಚ್ಚಿದವು. ನಂತರ ಈ 7 ಆಡು ಮರಿಗಳು ತನ್ನ ತಾಯಿಯೊಂದಿಗೆ ನಿರ್ಭಯದಿಂದ ಜೀವಿಸುತ್ತಿತ್ತು.</font>]]></content:encoded>
      <pubDate>Mon, 23 Feb 2009 16:11:46 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ನಿಜವಾದ ರಾಜಕುಮಾರಿ]]></title>
      <link>https://kannada.webdunia.com/article/kannada-kids-stories/ನಿಜವಾದ-ರಾಜಕುಮಾರಿ-107052400010_1.htm</link>
      <guid>https://kannada.webdunia.com/article/kannada-kids-stories/ನಿಜವಾದ-ರಾಜಕುಮಾರಿ-107052400010_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಬಹುದಿನಗಳ ಹಿಂದೆ ಒಬ್ಬ ರಾಜಕುಮಾರನಿದ್ದ, ಆತನಿಗೆ ತಾನು ರಾಜಕುಮಾರಿಯೊಬ್ಬಳ ಜತೆ ಮದುವೆ ಆಗ ಬೇಕೆಂಬ ಬಯಕೆ ಇತ್ತು.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524010_1_1.jpg' Alt='RAIN' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಬಹುದಿನಗಳ ಹಿಂದೆ ಒಬ್ಬ ರಾಜಕುಮಾರನಿದ್ದ, ಆತನಿಗೆ ತಾನು ರಾಜಕುಮಾರಿಯೊಬ್ಬಳ ಜತೆ ಮದುವೆ ಆಗ ಬೇಕೆಂಬ ಬಯಕೆ ಇತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ರಾಜಕುಮಾರಿ ನಿಜವಾದ ರಾಜಕುಮಾರಿ ಆಗಬೇಕು ಎಂಬುದು ಆತನ ಹಠ. ಹೀಗೆ ಆತ ನಿಜವಾದ ರಾಜಕುಮಾರಿ ಹುಡುಕಾಟದಲ್ಲಿ ಜಗತ್ತಿನಾದ್ಯಂತ ಸಂಚಾರ ನಡೆಸಿದನು . </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಆತ ಕಂಡ ಯುವತಿಯರಲ್ಲಿ ಏನಾದರೊಂದು ತಪ್ಪುಗಳನ್ನು ಕಾಣುತ್ತಿದ್ದ. ಆತ ಅನೇಕ ರಾಜಕುಮಾರಿಯನ್ನು ಪತ್ತೆಮಾಡಿದ್ದ ಆದರೆ ಅವರು ನಿಜವಾದ ರಾಜಕುಮಾರಿಯೇ ಎಂಬುದನ್ನು ನಿರ್ಧರಿಸುವುದು ರಾಜಕುಮಾರನಿಗೆ ಅಸಾದ್ಯವಾಗಿತ್ತು. ಅಂತಿಮವಾಗಿ ರಾಜಕುಮಾರ ಬೇಸರದಿಂದ ತನ್ನ ಅರಮನೆಗೆ ಮರಳುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ದಿನ ರಾತ್ರಿ ಜೋರಿನಿಂದ ಗುಡುಗು ಸಿಡಿಲಿನಿಂದ ಕೂಡಿದ್ದ ಭಾರಿ ಮಳೆ ಸುರಿಯುತ್ತಿತ್ತು. ಇದ್ದಕ್ಕಿದ್ದಂತೇ ಅರಮನೆಯ ಬಾಗಿಲನ್ನು ಜೋರಾಗಿ ಬಡಿಯುತ್ತಿರುವ ಶಬ್ದ ಕೇಳಿ ಬಂತು. ರಾಜ ಕುಮಾರನ ತಂದೆ ಸ್ವತ್ಹ ಹೋಗಿ ಬಾಗಿಲು ತೆರೆಯುತ್ತಾರೆ. ಬಾಗಿಲು ತೆರೆದಾಗ ಬಾಗಿಲ ಹೊರಗಡೆ ಸುಂದರವಾದ ಒಬ್ಬಳು ರಾಜಕುಮಾರಿ ನಿಂತಿದ್ದಳು. ಅವಳು ಮಳೆಯಿಂದ ಸುಪೂರ್ಮವಾಗಿ ತೊಯ್ದು ಹೋಗಿದ್ದಳು. ನಾನು ಒಳಗೆ ಬರಬಹುದೇ ನಾನು ನಿಜವಾದ ರಾಜಕುಮಾರಿ ಎಂದು ಹೇಳಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರ ಬಗ್ಗೆ ಬಹು ಬೇಗ ಗೊತ್ತಾಗುತ್ತದೆ ಎಂದು ಮನಸ್ಸಿನಲ್ಲೇ ಯೋಚಿಸಿದ ರಾಜಕುಮಾರನ ತಾಯಿ ಅವಳನ್ನು ಒಳಗೆ ಕರೆಸುತ್ತಾರೆ. ರಾಜಕುಮಾರನ ತಾಯಿ ನೇರವಾಗಿ ಮಲಗುವ ಕೊಠಡಿಗೆ ಹೋಗಿ, ಮಂಚಕ್ಕೆ ಹೊದಿಸಿದ್ದ ಎಲ್ಲಾ ಬಟ್ಟೆಗಳನ್ನು ತೆಗೆದಳು ಮತ್ತು ಮಂಚದ ಮೇಲೆ ಸಣ್ಣ ಗಾತ್ರದ 3 ಬಟಾಣಿಗಳನ್ನು ಹಾಕುತ್ತಾಳೆ. ಅದರ ಮೇಲೆ ನಂತರ ಅದರ ಮೇಲುಗಡೆ ಒಂದರ ಮೇಲೊಂದರಂತೆ 20 ಚಾಪೆಗಳನ್ನು ಹಾಕುತ್ತಾಳೆ. ಅದರ ಮೇಲೆ 20 ಗರಿಯಿಂದ ಕೂಡಿರುವ ಹೊದಿಕೆಯನ್ನು ಹಾಕುತ್ತಾಳೆ. ಈ ಮಂಚದ ಮೇಲೆ ರಾಜಕುಮಾರಿ ಮಲಗ ಬೇಕಾಗಿರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮರುದಿಮ ಬೆಳಗ್ಗೆ ರಾಜಕುಮಾರನ ತಾಯಿ ಹೇಗೆ ನಿನ್ನೆ ರಾತ್ರಿ ಮಲಗಿದೆ ಎಂದು ರಾಜಕುಮಾರಿಯನ್ನು ಪ್ರಶ್ನಿಸುತ್ತಾಳೆ. ಆಗ ರಾಜಕುಮಾರಿ ಬಹಳ ಕೆಟ್ಟದಾಗಿ ನಾನು ನಿದ್ರೆ ಮಾಡಿದೆ. ನಿನ್ನೆ ಇಡೀ ರಾತ್ರಿ ನನಗೆ ಸರಿಯಾಗಿ ನಿದ್ರೆ ಮಾಡಲಾಗಲಿಲ್ಲ. ನನ್ನ ಮಂಚದ ಕೆಳಗೆ ಏನು ಇತ್ತು ಎಂಬುದು ನನಗೆ ಗೊತ್ತಿಲ್ಲ. ಆದರೆ ಯಾವುದೋ ಗಟ್ಟಿ ವಸ್ತು ನನ್ನ ಮಂಚದಲ್ಲಿತ್ತು ಎಂದು ಹೇಳಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ರಾಜಕುಮಾರನ ತಾಯಿ ಇವಳು ನಿಜವಾದ ರಾಜಕುಮಾರಿ ಎಂದು ನಿರ್ಧರಿಸಿದಳು. ಏಕೆಂದರೆ 20 ಚಾಪೆ ಮತ್ತು 20 ಗರಿಗಳಿಂದ ಕೂಡಿದ್ದ ಹೊದಿಕೆ ಇದ್ದರೂ ಕಠಿಣ ವಸ್ತುವಿನ ಇರುವಿಕೆಯನ್ನು ಅರಿಯಲು ಸಾದ್ಯವಾಗುವುದು ಒಬ್ಬ ನಿಜವಾದ ರಾಜಕುಮಾರಿಗೆ ಮಾತ್ರ ಸಾದ್ಯ.</font><br/><font  style='font-size:11pt; color:#000000'>ಇದರ ಪ್ರಕಾರ ರಾಜಕುಮಾರ ಅವಳೊಂದಿಗೆ ಮದುವೆ ಯಾಗುತ್ತಾನೆ.   </font>]]></content:encoded>
      <pubDate>Mon, 23 Feb 2009 16:11:28 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ನಕ್ಷತ್ರಗಳಿಂದ ಉದುರಿದ ಅದೃಷ್ಟ]]></title>
      <link>https://kannada.webdunia.com/article/kannada-kids-stories/ನಕ್ಷತ್ರಗಳಿಂದ-ಉದುರಿದ-ಅದೃಷ್ಟ-107052400009_1.htm</link>
      <guid>https://kannada.webdunia.com/article/kannada-kids-stories/ನಕ್ಷತ್ರಗಳಿಂದ-ಉದುರಿದ-ಅದೃಷ್ಟ-107052400009_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಒಬ್ಬಳು ಸುಂದರವಾದ ಹುಡುಗಿ ಇದ್ದಳು. ಅವಳು ತನ್ನ ತಂದೆ, ತಾಯಿಯನ್ನು ಕಳೆದು ಕೊಂಡು ಅನಾಥವಾಗಿದ್ದಳು.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524009_1_1.jpg' Alt='Girls' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಒಂದು ಊರಿನಲ್ಲಿ ಒಬ್ಬಳು ಸುಂದರವಾದ ಹುಡುಗಿ ಇದ್ದಳು. ಅವಳು ತನ್ನ ತಂದೆ, ತಾಯಿಯನ್ನು ಕಳೆದು ಕೊಂಡು ಅನಾಥವಾಗಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವಳಿಗೆ ತಂಗಲು ಒಂದು ಸಣ್ಣ ಮನೆಯೂ ಇದ್ದಿರಲಿಲ್ಲ. ಅವಳಿಗೆ ತಾನು ಉಟ್ಟ ಬಟ್ಟೆ ಮತ್ತು ಯಾರೋ ಕೊಟ್ಟ ಬ್ರೆಡ್ ತುಂಡು ಬಿಟ್ಟರೆ ಜಗತ್ತಿನಲ್ಲಿ ತನ್ನ ಆಸ್ತಿ ಎಂದು ಹೇಳಿಕೊಳ್ಳುವ ಯಾವುದೇ ಆಸ್ತಿ ಇರಲಿಲ್ಲ.ಆದರೆ ಅವಳು ಒಬ್ಬಳು ಉತ್ತಮ, ವಿನಮ್ರತೆಯ, ಹಾಲು ಮನಸಿನ ಹುಡುಗಿಯಾಗಿದ್ದಳು. ಅವಳು ಜಗತ್ತಿನಲ್ಲಿ ಏಕಾಂಗಿಯಾಗಿದ್ದರಿಂದ ತನ್ನ ಎಲ್ಲಾ ನಂಬಿಕೆಯನ್ನು ದೇವರ ಮೇಲೆ ಹಾಕಿದ್ದಳು ಮತ್ತು ತನ್ನ ಅದೃಷ್ಟ ಹುಡುಕುವುದಕ್ಕಾಗಿ ಹೊರ ನಡೆಯುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ನಡೆಯುತ್ತಿರುವಾಗ ಕುಮಾರಿ ಮೊದಲಿಗೆ ಬಡ ಪುರುಷನನ್ನು ಭೇಟಿಯಾಗುತ್ತಾನೆ. ಆತ ಇವಳನ್ನು ನೋಡಿ, ನನಗೆ ತಿನ್ನಲು ಏನಾದರು ಕೊಡು. ನನಗೆ ಬಹಳ ಹಸಿವಾಗಿದೆ ಎಂದು ಕೇಳುತ್ತಾನೆ. ಇದನ್ನು ಕೇಳಿದ ಸಣ್ಣ ಹುಡುಗಿ ತನ್ನಲ್ಲಿದ್ದ ಸಣ್ಣ ಬ್ರೆಡ್ ತುಂಡನ್ನು ಆತನಿಗೆ ಕೊಡುತ್ತಾಳೆ. ಇದನ್ನು ಪಡೆದ ಆ ವ್ಯಕ್ತಿ ನಿನಗೆ ದೇವರು ಒಳ್ಳೆದು ಮಾಡಲಿ ಎಂದು ಹುಡುಗಿಯನ್ನು ಹಾರೈಸುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಮುಂದೆ ಸಾಗುತ್ತಿರುವಾಗ ಹುಡುಗಿ ಎದುರು ಅಳುತ್ತಿದ್ದ ಮಗುವೊಂದು ಎದುರಾಗುತ್ತದೆ. ಆ ಮಗು ನನ್ನ ತಲೆ ಬಹಳ ತಂಪಾಗುತ್ತಿದ್ದು, ದಯವಿಟ್ಟು ನನ್ನ ತೆಲೆಯನ್ನು ಮುಚ್ಚಲು ಏನಾದರು ಕೊಡು ಎಂದು ಕೇಳುತ್ತದೆ. ಆಗ ಹುಡುಗಿ ತನ್ನಲ್ಲಿದ್ದ ಟೋಪಿಯನ್ನು ಅದಕ್ಕೆ ಕೋಟ್ಟು ಮುಂದೆ ಸಾಗುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಮುಂದೆ ಸಾಗುವಾಗ ಇನ್ನೊಂದು ಮಗು ಎದುರಾಗುತ್ತದೆ ಆ ಮಗು ನಿರ್ವಸ್ತ್ರವಾಗಿದ್ದು, ಚಳಿಯಿಂದ ನಡುಗುತ್ತಿತ್ತು. ಅದನ್ನು ಕಂಡ ಹುಡುಗಿ ತನ್ನ ಕೋಟನ್ನು ಆ ಮಗುವಿಗೆ ಕೊಡುತ್ತಾಳೆ. ಹೀಗೆ ಸ್ವಲ್ಪ ದೂರ ಸಾಗಿದಾಗ ಇನ್ನೊಂದು ಸಣ್ಣ ಹೆಣ್ಣು ಮಗುವೊಂದನ್ನು ಭೇಟಿಯಾಗುತ್ತಾಳೆ. ಅದು ಇವಳು ಧರಿಸಿದ್ದ ಬಟ್ಟೆಯನ್ನು ಕೇಳುತ್ತದೆ. ಆದಾಗಲೇ ಕತ್ತಲು ಆವರಿಸಿದ್ದುದರಿಂದ ಮತ್ತು ಅರಣ್ಯ ಸಮೀಪಿಸಿದ್ದುದರಿಂದ ತಾನು ದರಿಸಿದ್ದ ಬಟ್ಟೆಯನ್ನು ಸಂತೋಷದಿಂದ ಆ ಹೆಣ್ಣು ಮಗುವಿಗೆ ನೀಡುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗ ಅವಳು ಕಾಡಿನ ಕತ್ತಲೆಯಲ್ಲಿ ತನ್ನಲ್ಲಿದ್ದುದನ್ನೆಲ್ಲವನ್ನು ದಾನ ಮಾಡಿ ನಿರ್ವಸ್ತ್ರವಾಗಿ ನಿಂತಿದ್ದಳು. ಆಗ ಆಕಾಶದಿಂದ ನಕ್ಷತ್ರಗಳು ಹೊಳೆಯುವ ನಕ್ಷತ್ರವಾಗಿ ಭೂಮಿಗೆ ಬೀಳುತ್ತಿತ್ತು. ಅವಳು ತನ್ನ ಬಟ್ಟೆಗಳನ್ನು ದಾನ ಮಾಡಿದ್ದರೂ, ಅಚಾನಕ್ಕಾಗಿ ಹೊಚ್ಚಹೊಸ ಮತ್ತು ಅದ್ಬುತ ಸತ್ವದಿಂದ ಕೂಡಿದ್ದ ಬಟ್ಟೆಯನ್ನು ತಾನು ಹಾಕಿರುವುದು ಅವಳ ಗಮನಕ್ಕೆ ಬಂತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಂತೋಷದಿಂದ ತಾನು ಹಾಕಿದ್ದ ಸುಂದರ ಬಟ್ಟೆಯನ್ನು ಮುಂದೊಡ್ಡಿ ಬಿದ್ದಿದ್ದ ನಾಣ್ಯಗಳನ್ನು ಅದರಲ್ಲಿ ಒಟ್ಟುಗೂಡಿಸಿದಳು. ಮತ್ತು ಮುದಿನ ದಿನಗಳನ್ನು ಬಹಳ ಶ್ರೀಮಂತಿಕೆಯಿಂದ ಕಳೆದಳು.     </font>]]></content:encoded>
      <pubDate>Mon, 23 Feb 2009 16:11:07 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಹಕ್ಕಿ ಕೊಕ್ಕಿನ ರಾಜ]]></title>
      <link>https://kannada.webdunia.com/article/kannada-kids-stories/ಹಕ್ಕಿ-ಕೊಕ್ಕಿನ-ರಾಜ-107052400008_1.htm</link>
      <guid>https://kannada.webdunia.com/article/kannada-kids-stories/ಹಕ್ಕಿ-ಕೊಕ್ಕಿನ-ರಾಜ-107052400008_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಬ್ಬ ರಾಜನಿಗೆ ಒಂದು ಮಗಳಿದ್ದಳು. ವಳು ಬಹಳ ಸುಂದರಿಯಾಗಿದ್ದಳು.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524008_1_1.jpg' Alt='Book' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಒಬ್ಬ ರಾಜನಿಗೆ ಒಂದು ಮಗಳಿದ್ದಳು. ವಳು ಬಹಳ ಸುಂದರಿಯಾಗಿದ್ದಳು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಆದರೆ ಅವಳು ಎಷ್ಟು ಜಂಬದವಳು ಮತ್ತು ದುರಾಭಿಮಾನಿಯಾಗಿದ್ದಳೆಂದರೆ ಬರುವ ಎಲ್ಲಾ ವರಗಳಿಗೆ ಅವಳು ಅವಮಾನ ಮಾಡುತ್ತಿದ್ದಳು ಮತ್ತು ಅವರು ನನಗೆ ಸರಿಯಾದ ವರ ಅಲ್ಲ ಎಂದು ಅವರನ್ನು ನಿರಾಕರಿಸುತ್ತಿದ್ದಳು ಇದರ ಜತೆಗೆ ಬಂದ ವರಗಳನ್ನು ತಮಾಷೆ ಮಾಡುತ್ತಿದ್ದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ದಿನ ರಾಜ ಒಂದು ದೊಡ್ಡ ಹಬ್ಬವನ್ನು ಬಹಿರಂಗವಾಗಿ ಪ್ರಕಟಿಸಿದನು ಮತ್ತು ದೂರ ದಿಂದ ಮದುವೆಯಾಗುವಂತ ಯುವಕರನ್ನು ಇದಕ್ಕೆ ಆಹ್ವಾನಿಸಿದನು. ಅವರೆಲ್ಲರು ಸಾಲಾಗಿ ಕುಳಿತು ರಾಜಕುಮಾರಿಯನ್ನು ನೋಡಲು ಪ್ರಾರಂಭಿಸದರು. ಆದರೆ ರಾಜಕುಮಾರಿ ಎಲ್ಲರನ್ನೂ ತಮಾಷೆ ಮಾಡಲು ಶುರುಹಚ್ಚಿದಳು. ಪ್ರತಿ ವರರಿಗೂ ಅಡ್ಡಹೆಸರನ್ನು ಇಡುತ್ತಾಇದ್ದಳು. ವಿಶೇಷವಾಗಿ ಒಬ್ಬ ಯುವ ರಾಜನ ಗಲ್ಲ ವಕ್ರವಾಗಿತ್ತು ಅದನ್ನು ನೋಡಿ ರಾಜಕುಮಾರಿ ನಗಲು ಪ್ರಾರಂಭಿಸಿದಳು ಮತ್ತು ಆ ಯುವ ರಾಜನನ್ನು ಹಕ್ಕಿಯ ಕೊಕ್ಕಿನವ ಎಂದು ಅಡ್ಡ ಹೆಸರು ಇಟ್ಟಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರಿಂದ ಕುಪಿತ ಗೊಂಡ ರಾಜ ನನ್ನ ಅರಮನೆ ದ್ವಾರದ ಬಳಿ ಬರುವ ಮೊದಲ ಬಿಕ್ಷುಕನಿಗೆ ನಾನು ತನ್ನ ಮಗಳನ್ನು ಮದುವೆ ಮಾಡಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದನು.</font><br/><font  style='font-size:11pt; color:#000000'>ಇದಾದ ಎರಡು ದಿನಗಳ ನಂತರ ಒಬ್ಬ ಹಾಡುಗಾರ ಅರಮನೆಯ ದ್ವಾರದ ಹತ್ತಿರ ಬೇಡುತ್ತಾ ಬರುತ್ತಿದ್ದ. ಅದನ್ನು ಕಂಡ ರಾಜ ಅವನನ್ನು ಮೇಲೆ ಕರೆದು ತರುವಂತೆ ಅಜ್ಞಾಪಿಸಿದನು. ಆ ಭಿಕ್ಷುಕ ರಾಜ ಮತ್ತು ರಾಜಕುಮಾರಿ ಎದುರು ಹಾಡಿ, ಏನಾದರು ಕೊಡುವಂತೆ ಕೇಳುತ್ತಾನೆ. ಆಗ ರಾಜ ನನಗೆ ನಿನ್ನ ಹಾಡು ಕೇಳಿ ಸಂತೋಷವಾಗಿದೆ. ನಾನು ನನ್ನ ಕಡೆಯ ಮಗಳನ್ನು ನಿನ್ನ ಹೆಂಡತಿಯಾಗಿ ಕೊಡುತ್ತೇನೆ ಎಂದು ಹೇಳಿದ. ಇದನ್ನು ಕೇಳಿದ ರಾಜಕುಮಾರಿ ಹೆದರಿದಳು. ಆದರೆ ರಾಜ ತನ್ನ ಪ್ರತಿಜ್ಞೆಗೆ ಪಟ್ಟು ಬಿದ್ದು ರಾಜಕುಮಾರಿಯ ಎಲ್ಲಾ ಮನವಿಯನ್ನು ನಿರಾಕರಿಸಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ಪುರೋಹಿತರನ್ನು ಕರೆದು ಮದುವೆ ಕಾರ್ಯಕ್ರಮವನ್ನು ಪೋರೈಸಿ. ಮಗಳನ್ನು ಆ ಬಿಕ್ಷುಕನೊಂದಿಗೆ ಕಳುಹಿಸಿದ. ಬಿಕ್ಷುಕ ತನ್ನ ಹೆಂಡತಿಯನ್ನು ಬರೆಗಾಲಲ್ಲೇ ಕರೆದುಕೊಂಡು ಹೋದ. ಹೀಗೆ ಹೋಗುತ್ತಾ ಒಂದು ಸಣ್ಣ ಗುಡಿಸಲಿನ ಹತ್ತಿರ ಬಂದರು. ಅದನ್ನು ನೊಡಿದ ರಾಜಕುಮಾರಿ ಯಾರದು ಆ ದರಿದ್ರ ಮುರುಕು ಗುಡಿಸಲು ಎಂದು ಪ್ರಶ್ನಿಸುತ್ತಾಳೆ. ಆಗ ಬಿಕ್ಷುಕ ಅದು ನನ್ನ ಗುಡಿಸಲು. ಇಲ್ಲಿ ನಾವಿಬ್ಬರು ಜೀವಿಸಲಿದ್ದೇವೆ ಎಂದು ಉತ್ತರಿಸಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮನಸ್ಸಿಲ್ಲದ ಮನಸ್ಸಿನಿಂದ ಗುಡಿಸಲಿನ ಒಳಗೆ ಪ್ರವೇಶಿಸಿದ ರಾಜಕುಮಾರಿ ಎಲ್ಲ ನಮ್ಮ ಕೆಲಸದಾಳುಗಳು ಎಂದು ಕೇಳಿದಳು. ಆಗ ಗಂಡ ಯಾವ ಕೆಲಸದಾಳುಗಳು. ಇಲ್ಲಿ ಯಾವುದೇ ಕೆಲಸದಾಳುಗಳು ಇಲ್ಲ. ಎಲ್ಲಾ ಕೆಲಸವೂ ನೀನೇ ಮಾಡ ಬೇಕು ಎಂದು ಪ್ರತಿಕ್ರಿಯಿಸಿದ. ಆದರೆ ಅಡಿಗೆ ಅಥವಾ ಒಲೆ ಉರಿಸಲು ಗೊತ್ತಿಲ್ಲದ ರಾಜಕುಮಾರಿ ಬಹಳ ದುಖಃ ಪಟ್ಟಳು. ಹೀಗೆ ಎರಡು ಮೂರು ದಿನಗಳ ನಂತರ ಶೇಖರಿಸಿದ್ದ ಆಹಾರ ಕಾಲಿಯಾಯಿತು. ಆಗ ಬಿಕ್ಷುಕ ನಾವು ಈ ರೀತಿ ಇದ್ದರೆ ನಮಗೆ ತಿನ್ನಲು ಏನು ಇರುವುದಿಲ್ಲ. ಅದಕ್ಕಾಗಿ ನಾವು ಇನ್ನು ಬುಟ್ಟಿನೇಯ್ದು ಹಣಮಾಡಬೇಕು ಎಂದು ಹೇಳಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಬುಟ್ಟಿ ನೇಯಲು ಬೇಕಾದ ಸಾಮಾನುಗಳನ್ನು ಕಾಡಿನಿಂದ ಬಿಕ್ಷುಕ ತರುತ್ತಾನೆ. ರಾಜಕುಮಾರಿ ಆವುಗಳನ್ನು ನೇಯಲು ಹೋದಾಗ ತನ್ನ ಕೈಗೆ ಗಾಯಮಾಡುತ್ತಾಳೆ. ಆಗ ಬಿಕ್ಷುಕ ಗಂಡ, ನೀನು ನಿನ್ನ ಕೆಲಸಗಳನ್ನು ಹಾಳುಗೆಡವುತಿದ್ದಿ. ಇನ್ನು ನಾವು ಮಡಿಕೆಗಳನ್ನು ಮಾರಿ ಹಣಮಾಡಬೇಕು ಅದಕ್ಕಾಗಿ ನೀನು ಮಾರುಕಟ್ಟೆಯಲ್ಲಿ ಕುಳಿತು ಮಡಿಕೆಗಳನ್ನು ಮಾರಬೇಕು ಎಂದು ಹೇಳುತ್ತಾನೆ. </font><font  style='font-size:11pt; color:#000000'>ಇದನ್ನು ಕೇಳಿದ ರಾಜಕುಮಾರಿ ಆಘಾತಕ್ಕೊಳಗಾಗುತ್ತಾಳೆ ಒಂದು ವೇಳೆ ನನ್ನ ತಂದೆಯ ಕಡೆಯವರು ನಾನು ಮಾರುಕಟ್ಟೆಯಲ್ಲಿ ಕುಳಿತು ಮಡಿಕೆ ಮಾರುವುದನ್ನು ನೋಡಿದರೆ ನಗುತ್ತಾರೆ ಎಂದು ಗಂಡನಿ ಹತ್ತಿರ ಗೋಗರೆಯುತ್ತಾಳೆ ಆದರೆ ಅವಳ ಯಾವ ವಿವರಣೆಗಳನ್ನು ಗಂಡ ಕೇಳುವುದಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊದಲ ದಿನ ಎಲ್ಲವೂ ಸರಿಯಾಗಿ ನಡೆಯಿತು ಎಲ್ಲರು ರಾಜಕುಮಾರಿಯ ಸುಂದರ ರೂಪ ನೋಡಿ ಹೆಚ್ಚಿನ ಮಡಿಕೆಗಳನ್ನು ಖರೀಧಿಸಿದರು. ನಂತರ ಗಂಡ ಇನ್ನೊಮ್ಮೆ ಮಡಿಕೆಗಳ ಸಂಗ್ರಹವನ್ನು ಖರೀಧಿಸಿದನು. ಈ ಮಡಿಕೆಗಳನ್ನು ಮಾರುವುದಕ್ಕಾಗಿ ರಾಜಕುಮಾರಿ ಮಾರುಕಟ್ಟೆಯ ಒಂದು ಮೂಲೆಯಲ್ಲಿ ತನ್ನ ಅಂಗಡಿಯನ್ನು ಇಟ್ಟಳು. ಆಗ ಒಬ್ಬ ಕುಡುಕ ಕುದುರೆಸವಾರ ಅವಳ ಅಂಗಡಿಯ ಮದ್ಯದಲ್ಲೇ ಎತ್ವಾತದ್ವಾ ಕುದುರೆ ಒಡಿಸಿ ಇದ್ದ ಎಲ್ಲಾ ಮಡಿಕೆಗಳು ಪುಡಿ ಪುಡಿಯಾಗಿ ಕೆಳಕ್ಕೆ ಬಿದ್ದವು. ರಾಜಕುಮಾರಿ ಅಳುತ್ತಾ ಗಂಡನಲ್ಲಿ ಈ ವಿಷಯ ತಿಳಿಸಿದಳು ಆಗ ಗಂಡ ಕೋಪದಿಂದ, ಯಾರಾದರೂ ಅಂಗಡಿಯನ್ನು ಮಾರುಕಟ್ಟೆಯ ಮೂಲೆಯಲ್ಲಿ ಇಡುತ್ತಾರೋ ಎಂದು ಗದರಿಸುತ್ತಾನೆ. ಅರಮನೆಯಲ್ಲಿ ಅಡಿಗೆ ಕೆಲಸ ಖಾಲಿ ಇದ್ದು, ನೀನು ಇನ್ನು ಮುಂದೆ ಅರಮನೆಯಲ್ಲಿ ಅಡಿಗೆಕೆಲಸದವಾಳಾಗಿ ಕೆಲಸ ಮಾಡು ಎಂದು ಹೇಳಿ ಗಂಡ ಅವಳನ್ನು ಅರಮನೆಯ ಅಡಿಗೆಯಾಳುವಾಗಿ ಕಳುಹಿಸುತ್ತಾನೆ. </font><br/><font  style='font-size:11pt; color:#000000'>ಅರಮನೆಯಲ್ಲಿ ಅಡಿಗೆ ಕೆಲಸದವಳಾಗಿ ರಾಜಕುಮಾರಿ ಕೊಳಕು ತಟ್ಟೆಗಳನ್ನು ತೊಳೆಯುವ ಕೆಲಸ ಮಾಡುವಂತಾಯಿತು. ನಂತರ ಉಳಿದಿದ್ದ ಆಹಾರಗಳನ್ನು ಮನೆಗೆ ತರುತಿದ್ದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೆಲವು ದಿನಗಳ ನಂತರ ರಾಜನ ಹಿರಿಯ ಮಗನ ಮದುವೆ ಸಮಾರಂಭ ನಡೆಯ ಬೇಕಾಗಿತ್ತು ಆ ಸಮಾರಂಭದಲ್ಲಿ ಬಿಕ್ಷುಕನ ಹೆಂಡತಿ ರಾಜಕುಮಾರಿಯನ್ನು ಸಂತೋಷ ಕೂಟ ಕೊಠಡಿಯ ದ್ವಾರ ಪಾಲಕನಾಗಿ ನೇಮಿಸಲಾಯಿತು. ಹೊಚ್ಚ ಹೊಸ ಉಡುಗೆ ತೊಡುಗೆಗಳನ್ನು ಹಾಕಿ ಸುಂದರ ಯುವತಿಯರು ಈ ಕೊಠಡಿಗೆ ಪ್ರವೇಶಿಸಿದರು. ಇವರ ಆಡಂಬರವನ್ನು ನೋಡಿ ರಾಜಕುಮಾರಿ ಮರುಕ ಪಡಲು ಪ್ರಾರಂಭಿಸದಳು ಮತ್ತು ತನ್ನ ಹಣೆ ಬರಹವನ್ನು ದೂಷಿಸಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದೇ ವೇಳೆ ರಾಜನ ಪುತ್ರ ಪ್ರವೇಶಿಸುತ್ತಾನೆ. ದ್ವಾರದಲ್ಲಿ ನಿಂತಿದ್ದ ಸುದರ ಕುಮಾರಿಯನ್ನು ನೋಡಿದ ಕೂಡಲೇ ಆತ ಅವಳನ್ನು ತನ್ನ ಕೈಯಿಂದ ಸೆರಹಿಡಿದು, ಕುಣಿಯುವಂತೆ ಹೇಳಿದ. ಅವಳು ಇದರಿಂದ ಹೆದರಿ ಕುಣಿಯಲು ನಿರಾಕರಿಸಿದಳು. ಕೈಹಿಡಿದ ರಾಜಕುಮಾರ ಅವಳೇ ಅಡ್ಡಹೆಸರಿಟ್ಟಿದ್ದ ಹಕ್ಕಿ ಕೊಕ್ಕಿನ ರಾಜನಾಗಿದ್ದ. ಆ ರಾಜನನ್ನು ಅಂದು ತಮಾಷೆ ಮಾಡಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಕುಮಾರ ಅವಳನ್ನು ಕೊಠಡಿಗೆ ಎಳೆದು ಕೊಂಡುಹೋಗುತ್ತಾನೆ. ಆಗ ಅಲ್ಲಿದ್ದ ಎಲ್ಲಾ ಅಡುಗೆ ಪದಾರ್ಥಗಳು ನೆಲದಲ್ಲಿ ಎಲ್ಲೆಂದರಲ್ಲಿ ಚೆಲ್ಲಾ ಪಿಲ್ಲಿಯಾಗುತ್ತದೆ. ಇದನ್ನು ಕಂಡು ನೆರೆದಿದ್ದ ಅಥಿತಿಗಳು ಜೋರಾಗಿ ನಗಲು ಪ್ರಾರಂಭಿಸಿದರು. ಇದರಿಂದ ಬಹಳ ಅವಮಾನಕ್ಕೀಡಾದ ರಾಜಕುಮಾರಿ ಅಲ್ಲಿಂದ ಹೊರಕ್ಕೆ ಓಡಿ ಹೋಗುತ್ತಾಳೆ. ಆದರೆ ಹೊರಗೆ ಹೋಗುತ್ತಿದ್ದಂತೆ ಒಬ್ಬ ಪುರುಷ ಅವಳ ಕೈಹಿಡಿದು ಮೇಲೆ ತರುತ್ತಾನೆ. ಮುಖ ಎತ್ತಿ ಆ ಪುರುಷನನ್ನು ನೋಡುವಾಗ ಅದು ಪುನಃ ಹಕ್ಕಿ ಕೊಕ್ಕಿನ ರಾಜನಾಗಿರುತ್ತಾನೆ.</font><br/><font  style='font-size:11pt; color:#000000'>ಆತ ಸಮಾದಾನದಿಂದ ಹೆದರಬೇಡ, ನಿನ್ನ ಜತೆಗಿದ್ದ ಬಿಕ್ಷುಕ ಮತ್ತು ಕುಡುಕ ಕುದುರೆ ಸವಾರ ನಾನೆ. ಇದೆಲ್ಲಾ ನಿನ್ನ ಪ್ರೀತಿಗಾಗಿ ನಾಟಕ ಮಾಡಿದ್ದು. ಇದೆಲ್ಲಾ ನಿನ್ನ ಗರ್ವ ಮತ್ತು ದುರಾಭಿಮಾನವನ್ನು ಮುರಿಯಲು ಮಾಡಿದ ನಾಟಕವಾಗಿತ್ತು ಎಂದು ಹೇಳಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ರಾಜಕುಮಾರಿ ಜೋರಾಗಿ ಅಳಲು ಪ್ರಾರಂಭಿಸಿದಳು. ನಾನು ನಿನ್ನ ಹೆಂಡತಿಯಾಗಲು ಯೋಗ್ಯವಲ್ಲ. ನಾನು ನಿಮಗೆ ತಂಬಾ ಅವಮಾನ ಮಾಡಿದ್ದೇನೆ ಎಂದು ಪಶ್ಚಾತಾಪದಿಂದ ನುಡಿಯುತ್ತಾಳೆ. ಅದಕ್ಕೆ ರಾಜಕುಮಾರ ಆ ಕೆಟ್ಟ ದಿನಗಳೆಲ್ಲಾ ಇತಿಹಾಸ ಸೇರಿದೆ. ನಾವೀಗ ನಮ್ಮ ಮದುವೆಯನ್ನು ಸಂಭ್ರಮಿಸೋಣ ಎಂದು ಪ್ರತಿಕ್ರಿಯಿಸಿದ.</font><br/><font  style='font-size:11pt; color:#000000'>ನಂತರ ಅವರಿಬ್ಬರ ಮದುವೆಯನ್ನು ಬಹಳ ಸಂಭ್ರಮದಿಂದ ಆಚರಿಸಿಲಾಯಿತು. ನೆರೆದಿದ್ದ ಎಲ್ಲರೂ ಅವರ ಸುಖ ಜೀವನಕ್ಕಾಗಿ ಹಾರೈಸಿದರು. </font>]]></content:encoded>
      <pubDate>Mon, 23 Feb 2009 16:10:34 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಕುಬ್ಜ ದಂದಂ]]></title>
      <link>https://kannada.webdunia.com/article/kannada-kids-stories/ಕುಬ್ಜ-ದಂದಂ-107052400007_1.htm</link>
      <guid>https://kannada.webdunia.com/article/kannada-kids-stories/ಕುಬ್ಜ-ದಂದಂ-107052400007_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಒಬ್ಬ ಬಡ ಗಿರಣಿಗಾರನಿದ್ದ. ಆತನಿಗೆ ಒಬ್ಬಳು ಸುದರವಾದ, ಬುದ್ದಿವಂತ ಮಗಳು ಇದ್ದಳು. ಒಂದು ಭಾರಿ ಗಿರಣಿದಾರನಿಗೆ ರಾಜನ ಆಸ್ಥಾನದಲ್ಲಿ ವ್ಯವಹರಿಸುವ ಅವಕಾಶ ಒದಗಿ ಬಂತು.]]></description>
      <content:encoded><![CDATA[<font  style='font-size:11pt; color:#000000'>ಒಂದು ಊರಿನಲ್ಲಿ ಒಬ್ಬ ಬಡ ಗಿರಣಿಗಾರನಿದ್ದ. ಆತನಿಗೆ ಒಬ್ಬಳು ಸುದರವಾದ, ಬುದ್ದಿವಂತ ಮಗಳು ಇದ್ದಳು. ಒಂದು ಭಾರಿ ಗಿರಣಿದಾರನಿಗೆ ರಾಜನ ಆಸ್ಥಾನದಲ್ಲಿ ವ್ಯವಹರಿಸುವ ಅವಕಾಶ ಒದಗಿ ಬಂತು. ಅಲ್ಲಿ ರಾಜನನ್ನು ಖುಷಿಪಡಿಸಲು ಗಿರಣಿಗಾರ ಬಡಾಯಿ ಕೊಚ್ಚಲು ಪ್ರಾರಂಭಿಸಿದ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಗಿರಣಿಗಾರ: ನನಗೆ ಒಬ್ಬಳು ಸುಂದರ ಮಗಳಿದ್ದು ಅವಳು ಬಹಳ ಬುದ್ದಿಯುಳ್ಳವಳಾಗಿದ್ದಾಳೆ. ಅವಳು ಹುಲ್ಲನ್ನು ಚಿನ್ನವಾಗಿ ಪರಿವರ್ತಿಸ ಬಲ್ಲಳು.</font><br/><font  style='font-size:11pt; color:#000000'>ರಾಜ: ಅದನ್ನು ನಂಬುವುದು ಕಷ್ಟ. ಒಂದು ವೇಳೆ ನಿನ್ನ ಮಗಳು ಆ ಸಾಮರ್ಥ್ಯ ಹೊಂದಿದರೆ. ಅವಳನ್ನು ನನ್ನ ಆಸ್ಥಾನಕ್ಕೆ ಕರೆದು ತಾ. ನಾನು ಅವಳನ್ನು ಪರೀಕ್ಷಿಸುತ್ತೇನೆ.</font><br/><font  style='font-size:11pt; color:#000000'>ಗಿರಣಿದಾರ ಮಗಳನ್ನು ರಾಜನ ಎದುರು ಹಾಜರು ಪಡಿಸಿದನು, ರಾಜ ಅವಳನ್ನು ಹುಲ್ಲಿನಿಂದ ಕೂಡಿದ್ದ ಕೊಠಡಿಗೆ ಕರೆದುಕೊಂಡು, ಅವಳಿಗೆ ಚರಕ ಮತ್ತು ಕದಿರಣಿಗೆಯನ್ನು ಕೊಡುತ್ತಾನೆ. ಇನ್ನು ಕೆಲಸ ಶುರುಹಚ್ಚು ಒಂದು ವೇಳೆ ನೀನು ಬೆಳಗಿನ ಹೊತ್ತಿಗೆ ಈ ಹುಲ್ಲುಗಳನ್ನು ಚಿನ್ನವಾಗಿ ಪರಿವರ್ತಿಸದಿದ್ದರೆ ನಿನ್ನನ್ನು ಸಾಯಿಸಲಾಗುವುದು ಎಂದು ಹೇಳಿ, ಬಾಗಿಲು ಮುಚ್ಚುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಏಕಾಂಗಿಯಾದ ಹುಡುಗಿ, ಬಹಳ ಬೇಸರದಿಂದ ಕುಳಿತಿರುತ್ತಾಳೆ. ಹೊತ್ತು ಹೋದಂತೆ ಅವಳ ಚಿಂತೆ ಹೆಚ್ಚುತ್ತಾ ಹೋಯಿತು. ಕೊನಗೆ ಅವಳು ಅಳಲು ಪ್ರಾರಂಭಿಸಿದಳು. ಆ ಹೊತ್ತಿಗೆ ಮುಚ್ಚಿದ್ದ ಬಾಗಿಲು ತೆರೆಯಲ್ಪಟ್ಟಿತು ಮತ್ತು ಒಬ್ಬ ಕುಬ್ಜ ವ್ಯಕ್ತಿ ಒಳಗಡೆ ಪ್ರವೇಶಿಸಿ,</font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ಏನಾಯಿತು ನನ್ನ ಮಗಳೇ ಏಕೆ ಅಳುತ್ತಿದ್ದೀ? ಎಂದು ಕೇಳುತ್ತಾನೆ. </font><br/><font  style='font-size:11pt; color:#000000'>ಹುಡುಗಿ: ಹಾ, ನಾನು ಈ ಹುಲ್ಲುಗಳನ್ನು ಚಿನ್ನದ ನೂಲುಗಳನ್ನಾಗಿ ನೇಯಬೇಕು. ಒಂದು ವೇಳೆ ಸಾದ್ಯವಾಗದಿದ್ದರೆ ನನ್ನನ್ನು ಕೊಲ್ಲುತ್ತಾರೆ ಎಂದು ದುಃಖದಿಂದ ಹೇಳುತ್ತಾಳೆ.</font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ಒಂದು ವೇಳೆ ನಾನು ಹಾಗೆ ಮಾಡಿದರೆ ನೀನು ನನಗೆ ಏನು ಕೊಡುವಿ ಎಂದು ಕೇಳಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹುಡುಗಿ: ನಾನು ನಿನಗೆ ನನ್ನ ಕೊರಳವಸ್ತ್ರವನ್ನು ಕೊಡುತ್ತೇನೆ.</font><br/><font  style='font-size:11pt; color:#000000'>ಕೂಡಲೇ ಕುಬ್ಜ ವ್ಯಕ್ತಿ ಕೊರಳವಸ್ತ್ರವನ್ನು ತೆಗೆದು ಕೊಂಡು, ಅಲ್ಲಿದ್ದ ಹುಲ್ಲುಗಳನ್ನು ಚರಕದಲ್ಲಿ ತಿರುಗಿಸಿ ನೂಲುಗಳನ್ನಾಗಿ ಪರಿವರ್ತಿಸುತ್ತಾನೆ. ಬೆಳಗೆ ಬಂದು ರಾಜ ಕೊಠಡಿ ಬಾಗಿಲು ತೆರೆಯುತ್ತಾನೆ. ನೋಡಿದರೆ ಕೊಠಡಿ ತುಂಬಾ ಚಿನ್ನ. ರಾಜನಿ ಅಚ್ಚರಿ ಉಂಟಾಗಿ ತುಬಾ ಖುಷಿಪಡುತ್ತಾನೆ. ಈಗ ರಾಜನ ಮನಸ್ಸು ಹೆಚ್ಚಿನ ಚಿನ್ನಕ್ಕೆ ಹಾತೊರೆಯುತ್ತದೆ. ರಾಜ ಗಿರಾಣಿಗಾರನ ಮಗಳನ್ನು ಹುಲ್ಲು ತಂಬಿದ್ದ ದೊಡ್ಡ ಕೊಠಡಿಗೆ ಕರೆದು ಕೊಂಡು ಹೋಗಿ ಬೆಳಗಾಗುವದರೊಳಗೆ ಇವುಗಳನ್ನೆಲ್ಲಾ ಚಿನ್ನವಾಗಿ ಪರಿವರ್ತಿಸ ಬೇಕು ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಾಲಾಗುವುದು ಎಂದು ಗದರಿಸಿ, ಬಾಗಿಲು ಮುಚ್ಚಿ ಹೋಗುತ್ತಾನೆ. ಹುಡುಗಿಗೆ ಏನು ಮಾಡುವುದೆಂದು ತೋಚದೆ ಅಳಲು ಪ್ರಾರಂಭಿಸುತ್ತಾಳೆ. ಆಗ ಮತ್ತೊಮ್ಮೆ ಆ ಕುಬ್ಜ ವ್ಯಕ್ತಿ ಬಾಗಿಲು ತೆರೆದು ಒಳಗೆ ಬರುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ಇದನ್ನು ಚಿನ್ನವಾಗಿ ಪರಿವರ್ತಿಸಿದರೆ ನೀನು ನನಗೆ ಏನು ಕೊಡುತ್ತೀ ಎಂದು ಕೇಳುತ್ತಾನೆ.</font><br/><font  style='font-size:11pt; color:#000000'>ಹುಡುಗಿ: ನಾನು ನನ್ನ ಕೈ ಉಂಗುರವನ್ನು ಕೊಡುತ್ತೇನೆ ಎಂದು ಹೇಳುತ್ತಾಳೆ.</font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ ಆ ಉಂಗುರವನ್ನು ತೆಗೆದು ಕೊಂಡು ಅಲ್ಲಿದ್ದ ಎಲ್ಲಾ ಹುಲ್ಲುಗಳನ್ನು ಚರಕದಿಂದ ನೂಲುಗಳನ್ನಾಗಿ ಪರಿವರ್ತಿಸುತ್ತಾನೆ. ಇದನ್ನು ನೋಡಿದ ರಾಜ ಬಹಳ ಸಂತೋಷ ಪಟ್ಟು ಮತ್ತಷ್ಟು ಚಿನ್ನಕ್ಕೆ ಹಾ ತೊರೆಯುತ್ತಾನೆ ಮತ್ತು ಅವಳನ್ನು ಇನ್ನಷ್ಟು ದೊಡ್ಡ ಕೊಠಡಿಗೆ ಕರೆದು ಕೊಂಡು ಹೋಗಿ ಇಲ್ಲಿದ್ದ ಎಲ್ಲಾ ಹುಲ್ಲುಗಳನ್ನು ಚಿನ್ನವನ್ನಾಗಿ ಮಾಡಿದರೆ ನಾನು ನಿನ್ನನ್ನು ಮದುವೆ ಯಾಗುತ್ತೇನೆ ಎಂದು ಹೇಳುತ್ತಾನೆ. ಮತ್ತೊಮ್ಮೆ ಹುಡುಗಿ ಚಿಂತಾಕ್ರಾಂತಳಾಗುತ್ತಾಳೆ. ಆಗ ಆ ಕುಬ್ಜ ವ್ಯಕ್ತಿ ಬರುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ನಾನು ಮತ್ತೊಮ್ಮೆ ಈ ಹುಲ್ಲುಗಳನ್ನು ಚಿನ್ನವಾಗಿಸಿದರೆ ನೀನು ನನಗೆ ಏನು ಕೊಡುವಿ?.</font><br/><font  style='font-size:11pt; color:#000000'>ಹುಡುಗಿ: ನನ್ನಲ್ಲಿ ನಿನಗೆ ಕೊಡಲು ಏನು ಉಳಿದಿಲ್ಲ ಎಂದು ಬೇಸರದಿಂದ ನುಡಿಯುತ್ತಾಳೆ.</font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ಒಂದು ವೇಳೆ ನೀನು ರಾಣಿಯಾದರೆ ನಿನಗೆ ಹುಟ್ಟಿದ ಮೊದಲ ಮಗುವನ್ನು ನನಗೆ ಕೊಡುವ ಭರವಸೆ ಕೊಡು ಎಂದು ಹೇಳಿದ.</font><br/><font  style='font-size:11pt; color:#000000'>ಬೇರೆ ಏನು ದಾರಿ ಕಾಣದ ಗಿರಾಣಿಗಾರನ ಹುಡುಗಿ ಕುಬ್ಜ ವ್ಯಕ್ತಿಗೆ ಭರವಸೆ ನೀಡುತ್ತಾಳೆ. ಈ ಕುಬ್ಜ ವ್ಯಕ್ತಿ ಮತ್ತೊಮ್ಮೆ ಅಲ್ಲಿದ್ದ ಎಲ್ಲಾ ಹುಲ್ಲುಗಳನ್ನು ಚಿನ್ನವಾಗಿ ಪರಿವರ್ತಿಸುತ್ತಾನೆ.</font><br/><font  style='font-size:11pt; color:#000000'>ಬೆಳಗ್ಗೆ ರಾಜ ಬಂದು ಚಿನ್ನದ ಹುಲ್ಲುಗಳನ್ನು ನೋಡಿ ಸಂತೋಷಗೊಳ್ಳುತ್ತಾನೆ ಮತ್ತು ಭರವಸೆ ನೀಡಿದಂತೆ ಗಿರಾಣಿಗಾರನ ಸುಂದರ ಮಗಳೊಂದಿಗೆ ಮದುವೆಯಾಗುತ್ತಾನೆ ಮತ್ತು ಗಿರಾಣಿ ಮಗಳು ರಾಣಿಯಾಗುತ್ತಾಳೆ.</font><font  style='font-size:11pt; color:#000000'>ಒಂದು ವರ್ಷದ ಬಳಿಕ ಸುಂದರವಾದ ಮಗುವಿನ ಜನನವಾಗುತ್ತದೆ. ಆದರೆ ರಾಣಿ ತಾನು ಆ ಕುಬ್ಜ ವ್ಯಕ್ತಿಗೆ ಕೊಟ್ಟ ಭರವಸೆಯನ್ನು ಮರೆತಿರುತ್ತಾಳೆ. ಒಂದು ದಿನ ಆ ಕುಬ್ಜ ವ್ಯಕ್ತಿ ಇವಳ ಕೊಠಡಿಯಲ್ಲಿ ಪ್ರತ್ಯಕ್ಷನಾಗಿ, ಮಗುವನ್ನು ಕೊಡುವಂತೆ ಕೇಳುತ್ತಾನೆ. ಇದನ್ನು ಕೇಳಿ ಆಘಾತಕ್ಕೊಳಗಾದ ರಾಣಿ  ನಿನಗೆ ನನ್ನ ಎಲ್ಲಾ ಸಂಪತ್ತನ್ನು ಕೊಡುತ್ತೇನೆ ಆದರೆ ಮಗುವನ್ನು ಕೇಳಬೇಡ ಎಂದು ಮೊರೆ ಇಡುತ್ತಾಳೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ಕುಬ್ಜ ವ್ಯಕ್ತಿ ನನಗೆ ಸಂಪತ್ತಿನ ಆಶೆ ಇಲ್ಲ ನಾನು ಪ್ರೀತಿಸುವುದು ಜೀವಂತ ವಸ್ತುವನ್ನು ಎಂದು ಉತ್ತರಿಸುತ್ತಾನೆ. ಆಗ ರಾಣಿ ಅಳಲು ಪ್ರಾರಂಭಿಸುತ್ತಾಳೆ. ಇದನ್ನು ಕಂಡು ಕುಬ್ಜ ವ್ಯಕ್ತಿ ಕನಿಕರ ಹೊಂದಿ ನಾನು ನಿನಗೆ ಮೂರು ದಿನಗಳ ಕಾಲವಕಾಶ ಕೊಡ್ಡುತ್ತೇನೆ. ಅದರ ಒಲಗೆ ನೀನು ನನ್ನ ಹೆಸರನ್ನು ಹೇಳಿದರೆ ನಾನು ನಿನ್ನ ಮಗುವನ್ನು ಬಿಟ್ಟುಬಿಡುತ್ತೇನೆ ಎಂದು ಹೇಳುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾತ್ರಿ ಇಡೀ ರಾಣಿ ಆ ಕುಬ್ಜನ ಹೆಸರನ್ನು ಯೋಚಿಸುದರಲ್ಲೇ ನಿದ್ದೆ ಗೆಡುತ್ತಾಳೆ. ಇದೇ ವೇಳೆ ಕೆಲವು ವಿಶಿಷ್ಟ ಹೆಸರನ್ನು ಪತ್ತೆಹಚ್ಚಲು ತಮ್ಮ ಮಾಹಿತಿದಾರರನ್ನು ಎಲ್ಲಾ ಕಡೆ ಕಳುಹಿಸುತ್ತಾಳೆ. ಮರುದಿನ ಕುಬ್ಜ ವ್ಯಕ್ತಿ ಬಂದಾಗ ಈ ವಿವಿದ ಹೆಸರುಗಳನ್ನು ಅವನ ಮುಂದಿರಿಸುತ್ತಾಳೆ. ಆದರೆ ಅದೆಲ್ಲದಕ್ಕೂ ಆತ ತಲೆ ಅಲ್ಲಾಡಿಸಿ ಇದು ನನ್ನ ಹೆಸರಲ್ಲ ಎಂದು ಹೇಳುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'></font><br/>2<font  style='font-size:11pt; color:#000000'>ನೇ ದಿನವು ಆಕೆ ವಿವಿದ ವಿಚಿತ್ರ ಹೆಸರುಗಳನ್ನು ಹೇಳುತ್ತಾಳೆ ಆದರೆ ಅದೆಲ್ಲದಕ್ಕೂ ಆತ ನಿರಾಕರಿಸುತ್ತಾನೆ.</font><br/>3<font  style='font-size:11pt; color:#000000'>ನೇ ದಿನ ಒಬ್ಬ ಮಾಹಿತಿದಾರ ವಪಾಸಾಗಿ, ನಾನು ಯಾವುದೇ ನೂತನ ಹೆಸರು ಪತ್ತೆಹಚ್ಚಿಲ್ಲ. ಆದರೆ ನಾನು ನಿನ್ನೆ ರಾತ್ರಿ ಗುಡ್ಡದ ಮೇಲಿರುವ ಸಣ್ಣ ಕಾಡಿನಿಂದ ವಾಪಸು ನಡೆದುಕೊಂಡು ಬರುತ್ತಿರುವಾಗ ನಾನು ಒಂದು ಸಣ್ಣ ಮನೆಯನ್ನು ನೋಡಿದೆ. ಆ ಮನೆಯ ಮುಂದೆ ಬೆಂಕಿ ಹಾಕಿ ಅದರ ಸುತ್ತ ತಿರುಗುತ್ತಿದ್ದ ಸಣ್ಣ ವ್ಯಕ್ತಿ </font><br/>"<font  style='font-size:11pt; color:#000000'>ಇಂದು ನಾನು ಬೇಯಿಸುತ್ತಿದ್ದೇನೆ, ನಾಳೆ ನಾನು ಮದ್ಯ ಸೇವಿಸುತ್ತೇನೆ, ಇನ್ನೊಂದು ದಿನ ನಾನು ರಾಣಿಯ ಮಗುವನ್ನು ಇಲ್ಲಿಗೆ ತರುತ್ತೇನೆ, ಒ ನಾನು ಎಷ್ಟು ಅದೃಷ್ಟವಂತ ನನ್ನ ಹೆಸರು ದಂದಂ ಎಂದು ಯಾರಿಗೂ ತಿಳಿದಿಲ್ಲ" ಎಂದು ಕೂಗಾಡುತ್ತಿದ್ದ ಎಂದು ಹೇಳಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಹೆಸರು ಕೇಳಿ ಬಹಳ ಸಂತೋಷಕ್ಕೊಳಗಾದ ರಾಣಿ ಅಂದಿನ ಸಂಜೆ ಆ ಕುಬ್ಜನ ಬರುವಿಕೆಗಾಗಿ ಕಾಯುತ್ತಿದ್ದಳು. ಸಂಜೆಯ ವೇಳೆ ಕುಬ್ಜ ವ್ಯಕ್ತಿ ಅರಮನೆಗೆ ಪ್ರವೇಶಿಸಿದ.</font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ಓ ರಾಣಿ ನನ್ನ ಹೆಸರು ಏನು?</font><br/><font  style='font-size:11pt; color:#000000'>ರಾಣಿ: ನಿನ್ನ ಹೆಸರು ಬಂಗು ಅಲ್ಲವೆ?</font><br/><font  style='font-size:11pt; color:#000000'>ಕುಬ್ಜ ವ್ಯಕ್ತಿ: ಅಲ್ಲ ಎಂದು ಘರ್ಜಿಸಿದ.ರಾಣಿ ಅನಾವಶ್ಯಕವಾಗಿ ಬೇರೆ ಹೆಸರನ್ನು ಕೇಳುತ್ತಿದ್ದಳು. ಅದಕ್ಕೆಲ್ಲಾ ಆತ ಅಲ್ಲ ಎಂದು ಉತ್ತರಿಸುತ್ತಿದ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊನೆಗೆ ರಾಣಿ ನಿನ್ನ ಹೆಸರು ದಂದಂ ಅಲ್ಲವೇ ಎಂದು ಕೇಳಿದಳು. ಆಗ ಕುಬ್ಜ ವ್ಯಕ್ತಿ ನಿನಗೆ ಪಿಶಾಚಿ ಹೇಳಿ ಕೊಟ್ಟಿತು ಎಂದು ಜೋರಾಗಿ ಬೊಬ್ಬೆ ಹಾಕಲು ಪ್ರಾರಂಭಿಸಿತು. ಮತ್ತು ತನ್ನ ಬಲ ಗಾಲನ್ನು ಬಲವಾಗಿ ತುಳಿಯಿತು ಆ ರಭಸಕ್ಕೆ ಅದು ಮಹಡಿ ಮುಖಾಂತರ ಹೋಯಿತು. ಆವೇಷದಲ್ಲಿ ಅವನು ತನ್ನ ಎಡ ಗಾಲನ್ನು ಎರಡೂ ಕೈಗಳಿಂದ ಹಿಡಿದು, ತನ್ನನ್ನು ಎರಡು ಭಾಗಗಳಾಗಿ ಹರಿದು ಬಿಟ್ಟನು. ಅಲ್ಲಿಗೆ ಕುಬ್ಜ ದಂದಂನ ಕಥೆ ಮುಗಿಯಿತು.</font>]]></content:encoded>
      <pubDate>Mon, 23 Feb 2009 16:09:51 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪಟ್ಟಣದ ಸಂಗೀತಗಾರರು]]></title>
      <link>https://kannada.webdunia.com/article/kannada-kids-stories/ಪಟ್ಟಣದ-ಸಂಗೀತಗಾರರು-107052400006_1.htm</link>
      <guid>https://kannada.webdunia.com/article/kannada-kids-stories/ಪಟ್ಟಣದ-ಸಂಗೀತಗಾರರು-107052400006_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಒಂದು ಕತ್ತೆ ಇತ್ತು. ಅದು ತನ್ನ ದನಿಕನಿಗಾಗಿ ಬಹಳ ವರ್ಷದಿಂದ ಪ್ರಾಮಾಣಿಕನಾಗಿ ದುಡಿದಿತ್ತು.]]></description>
      <content:encoded><![CDATA[<font  style='font-size:11pt; color:#000000'>ಒಂದು ಊರಿನಲ್ಲಿ ಒಂದು ಕತ್ತೆ ಇತ್ತು. ಅದು ತನ್ನ ದನಿಕನಿಗಾಗಿ ಬಹಳ ವರ್ಷದಿಂದ ಪ್ರಾಮಾಣಿಕನಾಗಿ ದುಡಿದಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಈಗ ಕತ್ತೆ ತನ್ನ ಎಲ್ಲಾ ಶಕ್ತಿಗಳನ್ನು ಕಳೆದು ಕೊಂಡು, ಕಠಿಣ ಕೆಲಸ ಮಾಡಲು ಸಾದ್ಯವಾಗುತ್ತಿರಲಿಲ್ಲ. ಹಾಗಾಗಿ ಕತ್ತೆಯ ಧನಿಕ ನಾನು ಇದರ ಮಾಂಸ  ಮಾರಿ ಎಷ್ಟು ಹಣ ಗಳಿಸಬಹುದು ಎಂಬ ಬಗ್ಗೆ ಚಿಂತಿಸಲು ಪ್ರಾರಂಭಿಸಿದ್ದ. ಇದನ್ನು ಅರಿತ ಕತ್ತೆ ಇನ್ನು ಇಲ್ಲಿ ಉಳಿದರೆ ಉಳಿಗಾಲವಿಲ್ಲ ಎಂದು ಯೋಚಿಸಿ  ಪಟ್ಟಣದ ಕಡೆ ಹೋಗುವ ಯೋಚನೆ ಮಾಡಿತು. ನಂತರ ತಾನು ಪಟ್ಟಣದ ಸಂಗೀತಗಾರನಾದರೆ ಹೇಗೆ ಎಂದು ಯೋಚಿಸಿ ಪಟ್ಟಣದ ಕಡೆ ಮುನ್ನಡೆಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ದಾರಿಯಲ್ಲಿ ಹೋಗುತ್ತಿರುವಾಗ ಭೇಟೆ ನಾಯಿಯೊಂದು ರಸ್ಥೆ ಬದಿಯಲ್ಲಿ ಮಲಗಿದ್ದನ್ನು ಕಂಡಿತು. ಆ ನಾಯಿ ಆಕಳಿಸುತ್ತಾ ಬಹಳ ಬೇಸರದಿಂದ ರಸ್ಥೆ  ಬದಿಯಲ್ಲಿ ಮಲಗಿತ್ತು. ಇದನ್ನು ಕಂಡ ಕತ್ತೆ ಏಕೆ ಬಹಳ ಬೇಸರದಿಂದ ಇದ್ದಿ ಎಂದು ಕೇಳಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾಯಿ: ನಾನು ದಿನಗಳೆದಂತೆ ಮುದುಕನಾಗುತ್ತಿದ್ದು ನನಗೆ ಭೇಟೆಮಾಡಲು ಸಾದ್ಯವಾಗುತ್ತಿಲ್ಲ. ಅದಕ್ಕಾಗಿ ನನ್ನ ಒಡೆಯ ನನಗೆ ಸಾಯುವಂತೆ ಹೊಡೆದ.  ನಾನು ಅಲ್ಲಿಂದ ಹೇಗಾದರು ತಪ್ಪಿಸಿ ಕೊಂಡು ಬಂದೆ. ಆದರೆ ನನ್ನ ಮುಂದಿರುವ ದೊಡ್ಡ ಸಮಸ್ಯೆ ಎಂದರೆ ಮುಂದೆ ನಾನು ಹೇಗೆ ಜೀವಿಸುವುದು ಎಂಬುದು  ಎಂದು ಬೇಸರದಿಂದ ಹೇಳಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕತ್ತೆ: ನಾನು ಪಟ್ಟಣಕ್ಕೆ ಸಂಗೀತಗಾರನಾಗಲು ಹೋಗುತ್ತಿದ್ದೇನೆ. ಒಂದು ವೇಳೆ ನೀನು ನನ್ನ ಜತೆ ಬಂದು ಸಂಗೀತಗಾರನಾಗಿ ಸೇರು. ನೀನು ವಾದ್ಯ ಊದಿದರೆ,  ನಾನು ಡ್ರಂ ಭಾರಿಸುತ್ತೇನೆ ಎಂದು ತಿಳಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರಿಂದ ಹರ್ಷಚಿತ್ತವಾದ ನಾಯಿ, ಕತ್ತೆಯ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತು. ಹೀಗೆ ಒಟ್ಟಿಗೆ ಮುಂದೆ ಸಾಗುತ್ತಿರುವಾಗ ಬೆಕ್ಕೊಂದು ಪೇಲವ ಮುಖ ಹೊತ್ತು ಕೊಂಡು  ದಾರಿ ಮದ್ಯದಲ್ಲಿ ಕುಳಿತಿರುದನ್ನು ಕಂಡಿತು.  </font><font  style='font-size:11pt; color:#000000'>ಕತ್ತೆ: ಏಕೆ ಇಲ್ಲಿ ಕೂತಿರುವೆ? </font><br/><font  style='font-size:11pt; color:#000000'>ಬೆಕ್ಕು: ನನಗೆ ಪ್ರಾಯವಾಗುತ್ತಿದೆ. ನಾನು ಇಲಿಯನ್ನು ಹಿಡಿಯುವ ಬದಲು ಹೆಚ್ಚಾಗಿ ಬೆಂಕಿ ಮುಂದೆ ಕೂತಿರಲು ಬಯಸುತ್ತೇನೆ. ಒಡತಿ ನನ್ನನ್ನು ನೀರಿನಲ್ಲಿ  ಮುಳುಗಿಸಿ ಸಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಅದಕ್ಕೆ ನಾನು ಅಲ್ಲಿಂದ ಓಡಿ ಬಂದೆ. ಆದರೆ ಈಗ ನನಗೆ ಏನು ಮಾಡುವುದು ಎಂದು ತಿಳಿದಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕತ್ತೆ: ನೀನು ನಮ್ಮ ಜತೆ ಪಟ್ಟಣಕ್ಕೆ ಬಾ, ನಿನಗೆ ರಾತ್ರಿ ಸಂಬಂಧಿತ ಸಂಗೀತದ ಬಗ್ಗೆ ಹೆಚ್ಚು ತಿಳಿದಿದೆ. ಹಾಗಾಗಿ ನೀನು ಪಟ್ಟಣದ ಸಂಗೀತಗಾರನಾಗಲು ಸಾದ್ಯ.</font><br/><font  style='font-size:11pt; color:#000000'>ಬೆಕ್ಕು ಇವರ ಮಾತಿಗೆ ಒಪ್ಪಿ ಅವರ ಜತೆ ಸೇರಿ ಕೊಂಡು, ಒಟ್ಟಾಗಿ ಮುಂದೆ ಸಾಗಿದವು ಹೀಗೆ ಹೋಗುತ್ತಿರುವಾಗ ಕೋಳಿಯೊಂದು ಬಹಳ ಬೇಸರದಿಂದ ಎಲ್ಲಾ  ರೀತಿಯ ಶಬ್ದದಿಂದ ಕೂಗಾಡುತ್ತಿತ್ತು.  ಕತ್ತೆ: ಏಕೆ ನೀನು ಇಷ್ಟು ಬೇಸರದಿಂದ ಕೂಗಾಡುತ್ತಿದ್ದಿ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೋಳಿ: ಭಾನುವಾರದಂದು ಮನೆಗೆ ನಂಟರು ಬರುತ್ತಿದ್ದು, ಅವರ ಊಟಕ್ಕಾಗಿ ಒಡತಿ ನನ್ನನ್ನು ಸೂಪ್ ಮಾಡುವಂತೆ ಅಡಿಗೆಯವನಿಗೆ ತಿಳಿಸಿದ್ದಾಳೆ ಮತ್ತು ಈ  ಸಂಜೆ ನನ್ನ ತಲೆ ಕಡಿಯಲಾಗುವುದು. ಹಾಗಾಗಿ ಎಷ್ಟು ಸಾದ್ಯವೂ ಅಷ್ಟು ಜೋರಿನಿಂದ ನಾನು ಕೂಗಾಡುತ್ತಿದ್ದೇನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕತ್ತೆ: ನೀನು ಏಕೆ ನಮ್ಮ ಜತೆ ಬರಬಾರದು . ನಾವು ಪಟ್ಟಣಕ್ಕೆ ಹೋಗಿ ಸಂಗೀತಗಾರರಾಗಲಿದ್ದೇವೆ. ನೀನು ಉತ್ತಮವಾಗಿ ಹಾಡುತ್ತಿ.</font><br/><font  style='font-size:11pt; color:#000000'>ಇದಕ್ಕಿ ಒಪ್ಪಿದ ಕೋಳಿ ಇವರ ಜತೆ ಸೇರಿ ಪಟ್ಟಣದ ಕಡೆ ಮುಂದುವರಿಯಿತು. ಹೀಗೆ ಹೋಗುತ್ತಾ ರಾತ್ರಿಯಾಯಿತು. ನಡೆದು ಸುಸ್ತಾದ ಇವುಗಳು ದಾರಿ  ಮದ್ಯದಲ್ಲಿ ಸಿಕ್ಕಿದ ಕಾಡಿನಲ್ಲಿ ತಂಗಲು ನಿರ್ಧರಿಸಿದವು. ಹೀಗೆ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕೋಳಿ ಮತ್ತು ಬೆಕ್ಕಿಗೆ ಸ್ವಲ್ಪ ದೂರದಿಂದ  ಮನೆಯೊಂದರಿಂದ ದೀಪ ಬೆಳಗುತ್ತಿರುವುದು ಕಂಡುಬಂತು.</font><br/><font  style='font-size:11pt; color:#000000'>ಬೆಕ್ಕು: ಇಲ್ಲೇ ಹತ್ತಿರದಲ್ಲಿ ಮನೆಯೊಂದು ಕಾಣಿಸುತ್ತಿದೆ. ಅಲ್ಲಿ ಏನಾದರು ತಿನ್ನಲು ಸಿಗಬಹುದು. ನಾವು ಅಲ್ಲಿಗೆ ಹೋಗೋಣ.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಇದಕ್ಕೆ ಎಲ್ಲರೂ ಒಪ್ಪಿಕೊಂಡು, ವೇಗದಲ್ಲಿ ಆ ಮನೆಯ ಕಡೆ ಸಾಗಿದವು. ಉದ್ದವಾಗಿದ್ದ ಕತ್ತೆ ಕಿಟಕಿಯಿಂದ ಇಣುಕಿ ಒಳಗೆ ನೋಡಿತು. ಒಳಗಡೆ ಕಾಡುಗಳ್ಳರು  ಮಾಂಸದಿಂದ ತಂಬಿದ್ದ ಟೇಬಲ್ ಎದುರು ಕುಳಿತು ಊಟಮಾಡುತ್ತಿದ್ದ ದೃಷ್ಯವನ್ನು ಕಂಡಿತು. ಈ ಬಗ್ಗೆ ತನ್ನ ಸಹವರ್ತಿಗಳಿಗೆ ತಿಳಿಸಿತು.ಬಹಳ ಹಸಿವಿನಿಂದ  ಬಳಲಿದ್ದರಿಂದ ಅವರನ್ನು ಮನೆಯಿಂದ ಓಡಿಸಿ, ಮಾಂಸವನ್ನು ತಿನ್ನುವುದಕ್ಕೆ ಉಪಾಯ ಹೂಡಲು ಶುರುಹಚ್ಚಿದವು. ಹೀಗೆ ಎಲ್ಲವೂ ಒಂದು ನಿರ್ಧಾರಕ್ಕೆ ಬಂದವು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಕತ್ತೆ ಕಿಟಕಿಯ ಬದಿಗೆ ತನ್ನ ಎದುರಿನ ಕಾಲುಗಳನ್ನು ಊರಿ ಎತ್ತರವಾಗಿ ನಿಂತಿತು. ಕತ್ತೆಯ ಮೇಲೆ ನಾಯಿ ನಿಂತಿತು. ನಾಯಿಯ ಮೇಲೆ ಬೆಕ್ಕು, ಬೆಕ್ಕಿನ ಮೇಲೆ  ಕೋಳಿ ಹೀಗೆ ಒಂದರ ಮೇಲೊಂದರಂತೆ ನಿಂತು ತಮ್ಮ ಶಕ್ತಿಮೀರಿ ಜೋರಿನಿಂದ ಕಿರುಚಲು ಪ್ರಾರಂಭಿಸಿದವು. ಈ ಅನಿರೀಕ್ಷಿತ ಕಿರುಚಾಟದಿಂದ ಬೆಚ್ಚಿಬಿದ್ದ  ಕಾಡುಗಳ್ಳರು ನಮ್ಮ ಮನೆಗೆ ಯಾವುದೋ ಭೂತ ಪ್ರವೇಶಿಸಿದೆ ಎಂದು ತಿಳಿದು ಭಯದಿಂದ ಎದ್ದು ಬಿದ್ದು ಕಾಡಿನ ಒಳಗೆ ಓಡಲು ಶುರುಹಚ್ಚಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವರು ಓಡಿದ ಕೂಡಲೇ ಈ 4 ಸಹವರ್ತಿಗಳು ಒಳಗೆ ಬಂದು ಟೇಬಲ್ ಎದುರು ಕುಳಿತು ಅಲ್ಲಿದ್ದ ಮಾಂಸವನ್ನು ಗಬಗಬನೆ ತಿನ್ನಲು ಪ್ರಾರಂಭಿಸಿದವು. ಎಲ್ಲಾ  ತಿಂದು ತೇಗಿದ ನಂತರ ನಡೆದು ಸುಸ್ತಾದ ಸಹವರ್ತಿಗಳು ವಿಶ್ರಾಂತಿ ಪಡೆಯಲು ತಮ್ಮ ತಮ್ಮ ಜಾಗಗಳನ್ನು ಹುಡುಕಲು ಪ್ರಾರಂಭಿಸಿದವು. ಅಭ್ಯಾಸ  ಬಲದಂತೆ ಕತ್ತೆ ಹುಲ್ಲಿನ ಮೆದೆ ಇರುವ ಸ್ಥಳದಲ್ಲಿ ಹೋಗಿ ಮಲಗಿತು. ನಾಯಿ ಬಾಗಿಲ ಹೊರಗಡೆ ಮಲಗಿತು. ಬೆಕ್ಕು ಅಲ್ಲೇ ಇದ್ದ ಬೂದಿಯ ಮೇಲೆ ಹೋಗಿ  ಮಲಗಿದರೆ, ಕೋಳಿ ಅಲ್ಲೇ ಮೇಲೆ ಹಾದು ಹೋಗಿದ್ದ ರೆಂಬೆಯ ಮೇಲೆ ಕುಳಿತು ಕೊಂಡಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಮದ್ಯರಾತ್ರಿಯಾದಾಗ ತಮ್ಮ ಮನೆಯಿಂದ ಯಾವುದೇ ದೀಪ ಕಾಣಿಸದ್ದನ್ನು ಅರಿತ ಕಾಡುಗಳ್ಳರು ನಿದಾನವಾಗಿ ಮನೆಯ ಕಡೆ ಬಂದರು. ಕಳ್ಳರ ನಾಯಕ  ಮನೆಯಲ್ಲಿನ ಪರಿಸ್ಥಿತಿ ನೋಡಿ ಬರುವಂತೆ ಕಳುಹಿಸುತ್ತಾನೆ. ಆತ ಮೆಲ್ಲನೆ ಭಯದಿಂದ ಮನೆಯೊಳಗೆ ಹೋಗಿ ದೀಪ ಉರಿಸಲು ಪ್ರಯತ್ನಿಸುತ್ತಾನೆ. ಅಲ್ಲೇ  ಮಲಗಿದ್ದ ಬೆಕ್ಕು ಇದನ್ನು ಅರಿತು ದೊಪ್ಪನೆ ಕಳ್ಳನೆ ಮೇಲೆ ಎಗರಿ ಅವನ ಮುಖವನ್ನು ಪರಚಿ ಹಾಕಿತು. ಹೆದರಿ ಹೋದ ಕಳ್ಳ ಬಾಗಿಲಿನ ಕಡೆ ಓಡುತ್ತಾನೆ. ಅಲ್ಲೇ  ಮಲಗಿದ್ದ ನಾಯಿ ಕಳ್ಳನ ಕಾಲನ್ನು ಚೆನ್ನಾಗಿ ಕಚ್ಚುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಳ್ಳ ಆಯತಪ್ಪಿ ಹುಲ್ಲಿನ ರಾಶಿಗೆ ಬೇಳುತ್ತಾನೆ. ಅಲ್ಲೇ ಇದ್ದ ಕತ್ತೆ ತನ್ನ ಕಾಲಿನಿಂದ ಬಲವಾಗಿ ಕಳ್ಳನಿಗೆ ಒದೆಯುತ್ತದೆ. ಈ ಕಡೆ ಕೋಳಿ ತನ್ನ ರೆಕ್ಕೆಗಳಿಂದ  ಬಲವಾಗಿ ಕಳ್ಳನ ಕೆನ್ನೆಗೆ ಹೊಡೆದು, ಕರ್ಕಶವಾಗಿ ಕೂಗುತ್ತದೆ. ಕಳ್ಳ ಹೆದರಿಕೆಯಿಂದ ನಾಯಕನ ಕಡೆ ಓಡಿ ಹೋಗಿ, ಆ ಮನೆಯಲ್ಲಿ ಭಯಾನಕ ಮಾಯಗಾತಿ  ಇದ್ದ ಅವಳು ತನ್ನ ಉದ್ದನೆಯ ಉಗುರುಗಳಿಂದ ನನ್ನ ಮುಖವನ್ನು ಪರಚಿದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ದ್ವಾರದ ಮುಂಬಾಗ ಚೂರಿ ಹಿಡಿದು ಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಕಾಲಿಗೆ ಇರಿದರೆ, ಅಲ್ಲೇ ಇದ್ದ ಹುಲ್ಲಿನ ಮೆದೆಯಲ್ಲಿ ವಿಕಾರರೂಪಿ ಪ್ರಾಣಿಯೊಂದು ಮಲಗಿತ್ತು  ಅದು ಕೋಲಿನಿಂದ ಬಲವಾಗಿ ನನಗೆ ಹೊಡೆಯಿತು. ಇದರ ಜತೆಗೆ ಮಹಡಿ ಮೇಲೆ ಒಬ್ಬ ನ್ಯಾಯವಾದಿ ಕುಳಿತಿದ್ದನು ಅವನು ಜೋರಾಗಿ ಆ ದ್ರೋಹಿಯನ್ನು  ಮೇಲಕ್ಕೆ ತನ್ನಿ ಎಂದು ಗರ್ಜಿಸಿತು. ನಾನು ಭಯದಿಂದ ಎದ್ದು ಬಿದ್ದು ಓಡಿ ಬಂದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ಕಾಡುಗಳ್ಳರು ತಮ್ಮ ಮನೆಗೆ ಹೋಗುವ ಧೈರ್ಯ ಮಾಡಲಿಲ್ಲ. ಆದರೆ ಈ ನಾಲ್ವರು ಪಟ್ಟಣದ ಸಂಗೀತಗಾರರು ಹಾಯಾಗಿ ಅಲ್ಲೇ ಜೀವಿಸಿದವು. </font>]]></content:encoded>
      <pubDate>Mon, 23 Feb 2009 16:09:14 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮುದಿ ಹಿಮ ತಾಯಿ]]></title>
      <link>https://kannada.webdunia.com/article/kannada-kids-stories/ಮುದಿ-ಹಿಮ-ತಾಯಿ-107052400005_1.htm</link>
      <guid>https://kannada.webdunia.com/article/kannada-kids-stories/ಮುದಿ-ಹಿಮ-ತಾಯಿ-107052400005_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಮಹಿಳೆ ಇದ್ದಳು ಅವಳಿಗೆ ಇಬ್ಬರು ಮಕ್ಕಳಿದ್ದರು. ಒಬ್ಬಾಕೆ ಸುಂದರ ಹಾಗೂ ಉದ್ಯೋಗಶೀಲೆಯಾಗಿದ್ದರೆ, ಇನ್ನೊಬ್ಬಾಕೆ ಕುರೂಪಿ ಮತ್ತು ಆಲಸಿಯಾಗಿದ್ದಳು.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524005_1_1.jpg' Alt='Picture' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಮಹಿಳೆ ಇದ್ದಳು ಅವಳಿಗೆ ಇಬ್ಬರು ಮಕ್ಕಳಿದ್ದರು. ಒಬ್ಬಾಕೆ ಸುಂದರ ಹಾಗೂ ಉದ್ಯೋಗಶೀಲೆಯಾಗಿದ್ದರೆ, ಇನ್ನೊಬ್ಬಾಕೆ ಕುರೂಪಿ ಮತ್ತು ಆಲಸಿಯಾಗಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕುರೂಪಿ ಮಗಳು ತನ್ನದೇ ಮಗಳಾಗಿದ್ದರಿಂದ ಆ ಮಹಿಳೆ ಅವಳ ಜತೆ ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಳು. ಆದರೆ ಸುಂದರ ಕುಮಾರಿಯ ಜತೆ ಬಹಳ ಕ್ರೂರವಾಗಿ ನಡೆಯುತ್ತಿದ್ದಳು. ಅವಳನ್ನು ಮನೆಯ ಕೆಲಸದಾಕೆಯಾಗಿ ಮಾಡಿದ್ದಳು.ಸುಂದರ ಕುಮಾರಿಯನ್ನು ಮಹಿಳೆ, ರಸ್ಥೆ ಬದಿಯಲ್ಲಿದ್ದ ಭಾವಿಯ ಸಮೀಪ ಹೋಗಿ ನೂಲು ಹೊಸೆಯುವಂತೆ ಹೇಳುತ್ತಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ಸಲ ನೂಲು ಹೊಸೆದು ಕೈಯಲ್ಲಿ ರಕ್ತ ಬಂದು ಕಡರು ರಕ್ತಮಯವಾಯಿತು. ಈ ರಕ್ತಮಯ ಕಡರನ್ನು ಸಮೀಪದಲ್ಲಿದ್ದ ಬಾವಿಯ ನೀರಿನಿಂದ ತೊಳೆಯಲು ಪ್ರಯತ್ನಿಸುತ್ತಿರುವಾಗ ಕುಮಾರಿಯ ಕೈಯಿಂದ ಆ ಕಡರ ಬಾವಿಗೆ ಬಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಳುತ್ತಾ ಮಲತಾಯಿತ್ತ ಹೋಗಿ, ನಡೆದ ಘಟನೆಯನ್ನು ವಿವರಿಸಿದಳು. ಇದರಿಂದ ಸಿಟ್ಟುಗೊಂಡ ಮಲತಾಯಿ ಅವಳಿಗೆ ಬಯ್ದು, ಅವಳ ಜತೆ ಅತಿ ಕ್ರೂರವಾಗಿ ವರ್ತಿಸಿದಳು ಮತ್ತು ಕೊನೆಯಲ್ಲಿ ಆ ಕಡರವನ್ನು ಭಾವಿಯಿಂದ ಹೊರತರಬೇಕು ಎಂದು ಗದರಿದಳು. ನಂತರ ಕುಮಾರಿ ಏನು ಮಾಡುವುದುದೆಂಬುದು ತೋಚದೆ, ಹತಾಶೆಯಿಂದ ಆ ಕಡರವನ್ನು ಹೊರತೆಗೆಯಲು ಹಿಂದೂ ಮುಂದೂ ನೋಡದೆ ಬಾವಿಗೆ ಹಾರಿದಳು. ಅವಳು ಬಾವಿಗೆ ಹಾರಿದ ಕೂಡಲೇ ಪ್ರಜ್ಞಾಶೂನ್ಯಳಾದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಣ್ಣು ತೆರೆದಾಗ ಅವಳು ಹುಲ್ಲುಗಾವಲಿನಿಂದ ಕೂಡಿದ್ದ ಒಂದು ಸುಂದರ ಪ್ರದೇಶದಲ್ಲಿ ಇದ್ದಳು. ಹೀಗೆ ಅಚ್ಚರಿಯಿಂದ ನಡೆದು ಕೊಂಡು ಹೋಗುತ್ತಿರುವಾಗ ಬ್ರೆಡ್‌ವೊಂದು ಬೇಕರಿಯ ಒಲೆಯಲ್ಲಿ ಅಳುತ್ತಿರುವುದು ಕೇಳಿಸಿತು. ಅದು ನನ್ನನ್ನು ಇಲ್ಲಿಂದ ಏಳಿಸಿ, ನಾನು ಸಾಕಷ್ಟು ಕಾದಿದ್ದೇನೆ. ಇನ್ನು ನಾನಿಲ್ಲಿದ್ದರೆ ಹೊತ್ತಿಹೋಗುತ್ತೇನೆ ಎಂದು ಕೂಗಾಡುತ್ತಿತ್ತು. ಅದನ್ನು ಕೇಳಿದ ಅವಳು ಅತ್ತ ಹೋಗಿ ಬ್ರೆಡ್‌ನ್ನು ಒಂದೊಂದಾಗಿ ಒಲೆಯಿಂದ ಹೊರಎಳೆದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಮುಂದೆ ಸಾಗುತ್ತಿರುವಾಗ ಸೇಬಿನ ಮರವೊಂದು ಎದುರಾಯಿತು. ಸೇಬಿನ ಮರ ನನ್ನನ್ನು ಅಲ್ಲಾಡಿಸಿ. ನನ್ನ ಕಾಂಡಗಳಲ್ಲಿರುವ ಸೇಬುಗಳು ಬೆಳೆದಿದೆ ಎಂದು ಗೋಗರೆಯುತ್ತಿತ್ತು. ಆಕೆ ಎಲ್ಲಾ ಸೇಬುಹಣ್ಣುಗಳನ್ನೂ ಕೆಳಗೆ ಬೀಳುವವರೆಗೆ ಮರವನ್ನು ಸರಿಯಾಗಿ ಅಲ್ಲಾಡಿಸಿ ಬಿದ್ದ ಎಲ್ಲಾ ಹಣ್ಣುಗಳನ್ನು ಒಂದು ಗೂಡಿಸಿ ಮುಂದೆ ಸಾಗಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂತಿಮವಾಗಿ ಅವಳು ಒಂದು ಗುಡಿಸಲಿನ ಹತ್ತಿರ ಬಂದಳು. ಅಲ್ಲಿ ಮುದುಕಿಯೊಬ್ಬಳು ಇಣುಕುತ್ತಾ ಇದ್ದಳು. ಮುದುಕಿ ಉದ್ದದ ಹಲ್ಲುಗಳನ್ನು ಹೊಂದಿದ ಕಾರಣ ಸುಂದರಿ ಭಯದಿಂದ ಓಡಲು ಶುರುಹಚ್ಚಿದಳು. ಇದನ್ನು ನೋಡಿದ ಮುದುಕಿ ಆಕೆಯನ್ನು ಕರೆದು ಯಾಕೆ ಹೆದರುತ್ತಿದ್ದಿ ಮಗುವೇ, ನನ್ನ ಜತೆ ಇರು. ಒಂದು ವೇಳೆ ನೀನು ಎಲ್ಲಾ ವಸ್ತುಗಳನ್ನು ಕ್ರಮವಾಗಿ ಜೋಡಿಸಿಟ್ಟರೆ ನಿನ್ನ ಜತೆ ಎಲ್ಲವೂ ಸರಿಯಾಗುವುದು. ಆದರೆ ನೀನು ನನ್ನ ಹಾಸಿಗೆಯನ್ನು ಸರಿಯಾಗಿ ಅಲ್ಲಾಡಿಸಿ ಅದರ ಗರಿಗಳು ಭೂಮಿ ಮೇಲೆ ಬೀಳುವಂತೆ ಮಾಡಬೇಕು. ನಾನು ಮುದಿ ಹಿಮ ತಾಯಿ ಎಂದು ಹೇಳುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಷ್ಟು ಚೆನ್ನಾಗಿ ಮಾತನಾಡಿದ್ದನ್ನು ಕಂಡ ಸುಂದರ ಕುಮಾರಿ ಅವಳ ಚಾಕರಿ ಮಾಡಲು ಒಪ್ಪಿಗೆ ಸೂಚಿಸಿದಳು. ಕುಮಾರಿ ದಿನನಿತ್ಯ ಹಾಸಿಗೆಯನ್ನು ಚೆನ್ನಾಗಿ ಅಲ್ಲಾಡಿಸಿದ ಕಾರಣ ಗರಿಗಳು ಹಿಮಗಳ ಹಾಗೆ ಕೆಳಗೆ ಬೀಳುತ್ತಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಇದ್ದಕ್ಕಿದ್ದಂತೆ ಅವಳಿಗೆ ತನ್ನ ಮನೆಯ ನೆನಪಾಗಿ ತನ್ನ ಮನೆಗೆ ಹೋಗುವ ಇಚ್ಚೆಯನ್ನು ವ್ಯಕ್ತಪಡಿಸಿದಳು. ಆಗ ಮುದುಕಿ ನನಗೆ ಗೊತ್ತಿದೆ ನಿನಗೆ ಮನೆಯ ನೆನಪಾಗುತ್ತದೆ ಎಂದು. ನೀನು ಉತ್ತಮವಾಗಿ ಚಾಕರಿ ಮಾಡಿದ್ದಿ ಹಾಗಾಗಿ ನಾನು ನಿನ್ನನ್ನು ಮೇಲೆವರೆಗೆ ಬಿಟ್ಟು ಬಿಡುತ್ತೇನೆ ಎಂದು ಪ್ರತಿಕ್ರಿಯಿಸಿದಳು. ಹಾಗೆ ಹೇಳಿ ಕುಮಾರಿಯನ್ನು ಮಹಾ ದ್ವಾರದ ಕಡೆಗೆ ಕರೆದೊಯ್ದಳು. </font><br/></font><font  style='font-size:11pt; color:#000000'>ಆ ಮಹಾದ್ವಾರದ ಅಡಿ ಬಂದಾಗ ಚಿನ್ನದ ಮಳೆ ಅವಳ ಮೇಲೆ ಬೀಳಲು ಪ್ರಾರಂಭವಾಯಿತು. ಇದರಿಂದ ಅವಳು ಚಿನ್ನದಿಂದ ಮುಚ್ಚಿಹೋದಳು. ನಿನ್ನ ಉದ್ಯೋಗಶೀಲತೆಗಾಗಿ ನೀನು ಇದನ್ನು ಹೊಂದಲೇ ಬೇಕು ಎಂದು ಹೇಳಿ ಮುದಿ ಮಹಿಳೆ ಆ ಕಡರವನ್ನು ಕುಮಾರಿಗೆ ಕೊಡುತ್ತದೆ.  ನಂತರ ಬಾಗಿಲು ಮುಚ್ಚುತ್ತದೆ. ಅವಳು ಮನೆಯ ಹತ್ತಿರ ಬಂದಾಗ ಹುಂಜ ನಮ್ಮ ಚಿನ್ನದ ಕುಮಾರಿ ಮತ್ತೆ ಮನೆಗೆ ಬಂದಳು ಎಂದು ಕೂಗಾಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಂದರ ಕುಮಾರಿ ಶ್ರೀಮಂತವಾದ ಕಥೆಯನ್ನು ಕೇಳಿದ ಮಲತಾಯಿ ನನ್ನ ಕುರೂಪಿ ಮಗಳೂ ತನ್ನ ಅದೃಷ್ಟವನ್ನು ಪರೀಕ್ಷಿಸ ಬೇಕು ಎಂಬ ಇಚ್ಚೆ ವ್ಯಕ್ತ ಪಡಿಸುತ್ತಾಳೆ. ಅದಕ್ಕಾಗಿ ಆಲಸಿ ಮಗಳು ಭಾವಿ ಸಮೀಪ ಹೋಗಿ ನೂಲನ್ನು ಹೊಸೆಯಲು ಪ್ರಾರಂಭಿಸುತ್ತಾಳೆ. ಕಡರ ರಕ್ತಮಯವಾಗುವಂತೆ ತನ್ನ ಕೈಯನ್ನು ಮುಳ್ಳಿಗೆ ತಾಕಿಸುತ್ತಾಳೆ ಮತ್ತು ಕಡರವನ್ನು ಭಾವಿಗೆ ಬಿಸಾಕುತ್ತಾಳೆ. ನಂತರ ಬಾವಿಗೆ ಹಾರುತ್ತಾಳೆ.</font><br/><font  style='font-size:11pt; color:#000000'>ನಂತರ ತನ್ನ ಸಹೋದರಿಯ ಹಾಗೆ ಸುಂದರ ಹುಲ್ಲುಗಾವಲಿನ ಪ್ರದೇಶಕ್ಕೆ ಬರುತ್ತಾಳೆ ಮತ್ತು ಅದೇ ದಾರಿಯನ್ನು ಹಿಡಿಯುತ್ತಾಳೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವಳು ಬೇಕರಿಯನ್ನು ಸಮೀಪಿಸಿದಾಗ ಬ್ರೆಡ್ ಅದೇ ರೀತಿ ನನ್ನನ್ನು ಎಳೆಯಿರಿ ನಾನು ಹೊತ್ತಿಹೋಗುತ್ತೇನೆ. ನಾನು ಈಗಾಗಲೇ ಕಾದಿದ್ದೇನೆ ಎಂದು ಬೊಬ್ಬಿಡುತ್ತಿತ್ತು. ಇದಕ್ಕೆ ಆಲಸಿ ಮಗಳು ನಿನ್ನನ್ನು ಎಳೆದು ನಾನು ಏಕೆ ನನ್ನ ಕೈಯನ್ನು ಕೊಳಕು ಮಾಡಬೇಕು ಎಂದು ಉತ್ತರಿಸಿ ಸೇಬಿನ ಮರದ ಹತ್ತಿರ ಹೋಗುತ್ತಾಳೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೇಬಿನ ಮರ ನನ್ನನ್ನು ಅಲ್ಲಾಡಿಸಿ ನಾನು ಬೆಳೆದಿದ್ದೇನೆ ಎಂದು ಕರೆಯಲು ಶುರುಹಚ್ಚಿತು ಅದಕ್ಕೆ ಆಲಸಿ ಮಗಳು, ಒಂದು ವೇಳೆ ನನ್ನ ತಲೆಗೆ ಬಿದ್ದರೆ ಎಂದು ಹೇಳಿ ಅದನ್ನು ನಿರಾಕರಿಸಿ ಎದುರು ಮುನ್ನಡೆಯುತ್ತಾಳೆ. ನಂತರ ಆಲಸಿ ಮಗಳು ಮುದಿ ಹಿಮ ತಾಯಿಯನ್ನು ಎದುರಾಗುತ್ತಾಳೆ. ಆದರೆ ಮುಂಚೆಯೇ ತಿಳಿದಿದ್ದ ಕಾರಣ ಅವಳ ಉದ್ದನೆಯ ಹಲ್ಲುಗಳನ್ನು ನೋಡಿ ಭಯಬೀಳಲಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ಮುದುಕಿಯ ಚಾಕರಿ ಮಾಡಲು ಶುರುಹಚ್ಚಿದಳು. ಮೊದಲ ದಿನ ಚಿನ್ನದ ಮಳೆಯ ಹಂಬಲದಿಂದ ಬಹಳ ಕ್ರೀಯಾಶೀಲಳಾಗಿ ಕೆಲಸ ಮಾಡಿದಳು. 2ನೇ ದಿನ ಆಲಸಿ ತೋರಿಸಲು ಪ್ರಾರಂಭಿಸಿದಳು. 3ನೇ ದಿನ ಇನ್ನೂ ಹೆಚ್ಚಿಗೆ ಆಲಸಿ ತೋರಿಸಿದಳು. ಮುದುಕಿ ಹೇಳಿದಂತೆ ಅವಳ ಹಾಸಿಗೆಯನ್ನು ಚೆನ್ನಾಗಿ ಅಲ್ಲಾಡಿಸಲಿಲ್ಲ. ಗರಿಗಳು ಹಾರಲೂ ಇಲ್ಲ. ಇದರಿಂದಾಗಿ ಅವಳನ್ನು ಮುದುಕಿ ಕೆಲಸದಿಂದ ತೆಗೆದು ಹಾಕಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ಆಲಸಿ ಮಹಿಳೆಯನ್ನು ದ್ವಾರದ ಹತ್ತಿರ ಕೊಂಡೊಯ್ಯಲಾಯಿತು. ದ್ವಾರದ ಅಡಿ ಹತ್ತಿರ ಬಂದಂತೆ ಅವಳ ತಲೆ ಮೇಲೆ ರಾಡಿಯ ಮಳೆ ಬೀಳಲು ಪ್ರಾರಂಭವಾಯಿತು. ಇದು ನಿನ್ನ ವೇತನ ಎಂದು ಹೇಳಿ ಮುದಿ ಹಿಮ ತಾಯಿ ಬಾಗಿಲನ್ನು ಮುಚ್ಚುತ್ತಾಳೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಲಸಿ ಮಗಳು ಮನೆಯ ಹತ್ತಿರ ಬಂದ ಕೂಡಲೇ ಹುಂಜ, ನಮ್ಮ ಕೊಳಕು ಕುಮಾರಿ ಮನೆಗೆ ಮತ್ತೊಮ್ಮೆ ಬಂದಳು ಎಂದು ಕೂಗಾಡಲು ಪ್ರಾರಂಭಿಸಿತು.</font><br/><font  style='font-size:11pt; color:#000000'>ಆ ರಾಡಿ ಅವಳನ್ನು ಅಂಟಿಕೊಂಡಿತ್ತು ಮತ್ತು ಅವಳು ಜೀವನ ಪರ್ಯಂತ ಅದರಿಂದ ಹೊರಗೆ ಬರಲೇ ಇಲ್ಲ.         </font>]]></content:encoded>
      <pubDate>Mon, 23 Feb 2009 16:08:22 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಂಡೂಕ ರಾಜಕುಮಾರ]]></title>
      <link>https://kannada.webdunia.com/article/kannada-kids-stories/ಮಂಡೂಕ-ರಾಜಕುಮಾರ-107052400004_1.htm</link>
      <guid>https://kannada.webdunia.com/article/kannada-kids-stories/ಮಂಡೂಕ-ರಾಜಕುಮಾರ-107052400004_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಹಿಂದಿನ ಕಾಲದಲ್ಲಿ ಒಬ್ಬ ರಾಜನಿದ್ದ. ಆತನ ಹೆಣ್ಣುಮಕ್ಕಳು ಬಹಳ ಸುಂದರವಾಗಿದ್ದರು. ಅದರಲ್ಲಿ ರಾಜನ ಕೊನೆಯ ಪುತ್ರಿ ಚಂದ್ರಮುಖಿ ಬಹಳ ಸ್ಪುರರೂಪಿಯಾಗಿದ್ದಳು.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524004_1_1.jpg' Alt='Frog' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>Vishnu</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಹಿಂದಿನ ಕಾಲದಲ್ಲಿ ಒಬ್ಬ ರಾಜನಿದ್ದ. ಆತನ ಹೆಣ್ಣುಮಕ್ಕಳು ಬಹಳ ಸುಂದರವಾಗಿದ್ದರು. ಅದರಲ್ಲಿ ರಾಜನ ಕೊನೆಯ ಪುತ್ರಿ ಚಂದ್ರಮುಖಿ ಬಹಳ ಸ್ಪುರರೂಪಿಯಾಗಿದ್ದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜನ ಕೋಟೆಯ ಸಮೀಪವೇ ಒಂದು ದೊಡ್ಡ ಹಾಗು ದಟ್ಟ ಅಡವಿ ಇತ್ತು. ಆ ಅಡವಿಯ ಮದ್ಯೆ ಒಂದು ಆಳವಾದ ಸಂದರವಾದ ಕೊಳ ಇತ್ತು. ರಾಜನ ಸಣ್ಣ ಪುತ್ರಿ ಹೆಚ್ಚಿನ ಭಾರಿ ಆ ಕೊಳದ ಬದಿ ಹೋಗಿ ಆಡುತ್ತಿದ್ದಳು. ಚಿನ್ನದ ಚೆಂಡನ್ನು ಗಾಳಿಗೆ ಎಸೆದು ಅದನ್ನು ಬೊಗಸೆಯಲ್ಲಿ ಹಿಡಿಯುವುದು ಚಂದ್ರಮುಖಿಯ ನೆಚ್ಚಿನ ಆಟವಾಗಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ಬಾರಿ ಆ ರೀತಿ ಆಡುತ್ತಿರುವಾಗ ಆ ಚಿನ್ನದ ಚೆಂಡು ತನ್ನ ಕೈತಪ್ಪಿ ಹತ್ತಿರದ ಕೊಳಕ್ಕೆ ಬಿದ್ದಿತು. ಆ ಕೊಳ ಭಾರೀ ಆಳವಾಗಿದ್ದು, ಯಾರು ಅದರ ತಳವನ್ನು ನೋಡಲು ಸಾದ್ಯವಾಗುವಂತಿರಲಿಲ್ಲ. ಚೆಂಡು ಕೊಳಕ್ಕೆ ಬಿದ್ದದನ್ನು ಕಂಡು ಚಂದ್ರಮುಖಿ ಜೋರಾಗಿ ಅಳಲು ಪ್ರಾರಂಭಿಸಿದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಚಂದ್ರಮುಖಿ ಅಳುತ್ತಿರುವಾಗ ಕೊಳದಿಂದ, ರಾಜಕುಮಾರಿ ನೀವು ಏಕೆ ಅಳುತ್ತಿದ್ದೀರಿ ಎಂಬ ಪ್ರಶ್ನೆ ಹೊರಬಂದಿತು. ಚಂದ್ರಮುಖಿ ಕೊಳದತ್ತ ನೋಡುತ್ತಾಳೆ ಆಗ ಒಂದು ಮಂಡೂಕ ಭಾವಿಯಿಂದ ತನ್ನ ತಲೆ ಹೊರಹಾಕಿದ್ದನ್ನು ನೋಡಿದಳು.ಹಾ ನೀನು ಮುದಿಯ ಜಲ ಜೀವಿ, ಈಗ ಮಾತನಾಡಿದ್ದು ನಿನಾ? ನನ್ನ ಚಿನ್ನದ ಚೆಂಡು ಕೊಳಕ್ಕೆ ಬಿದ್ದಿದೆ ಅದಕ್ಕೆ ನಾನು ಅಳುತ್ತಿದ್ದೇನೆ ಎಂದು ಹೇಳಿದಳು.ಆಗ ಮಂಡೂಕ ನೀನು ಅಳಬೇಡ, ನಾನು ಆ ಚೆಂಡನ್ನು ವಾಪಸುತರುತ್ತೇನೆ. ಆದರೆ ಅದರ ಬದಲಿಗೆ ನೀನು ಏನು ಕೊಡುವಿ? ಎಂದು ಕೇಳಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಕ್ಕೆ ರಾಜಕುಮಾರಿ ಚಂದ್ರಮುಖಿ, ನಿನಗೆ ಏನು ಬೇಕು ನನ್ನ ಚಿನ್ನದ ಕಿರೀಟ, ಮುತ್ತು ರತ್ನಗಳು ಏನು ಬೇಕು ಕೇಳು ಎಂದು ಉತ್ತರಿಸಿದಳು.ಆದಕ್ಕೆ ಪ್ರತಿಕ್ರಿಯಿಸಿದ ಮಂಡೂಕ ನನಗೆ ಬಟ್ಟೆ, ಕಿರೀಟಗಳ ಅಗತ್ಯವಿಲ್ಲ. ಒಂದು ವೇಳೆ ನೀನು ನನ್ನನ್ನು ಪ್ರೀತಿಸುವುದಾದರೆ ನನ್ನ ಸಹವರ್ತಿಯಾಗಿರಬೇಕು. ನನ್ನನ್ನು ನಿನ್ನ ಅರಮನೆಗೆ ಕರೆದುಕೊಂಡು ಹೋಗಿ, ನಿನ್ನೊಂದಿಗೆ ಚಿನ್ನದ ತಟ್ಟೆಯಲ್ಲಿ ಊಟಮಾಡಲು ಬಿಡಬೇಕು ಮತ್ತು ನಿನ್ನ ಹಾಸಿಗೆಯಲ್ಲಿ ಮಲಗಲು ಬಿಡಬೇಕು ಆ ಭರವಸೆ ಕೊಟ್ಟಗೆ ನಾನು ನಿನ್ನ ಚಿನ್ನದ ಚೆಂಡನ್ನು ಕೊಳದಿಂದ ವಾಪಸು ತರುತ್ತೇನೆ ಎಂದು ಹೇಳಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ರಾಜಕುಮಾರಿ ಒಂದು ವೇಳೆ ನೀನು ನನಗೆ ಚೆಂಡನ್ನು ವಾಪಸುಕೊಟ್ಟರೆ ನಾನು ನಿನ್ನ ಬಯಕೆಯನ್ನು ಈಡೇರಿಸುತ್ತೇನೆ ಎಂದು ಹೇಳಿದಳು. ಆದರೆ ತನ್ನ ಮನಸ್ಸಿನಲ್ಲೇ ಈ ಹುಚ್ಚು ಮಂಡೂಕ ಏನು ಮಾತನಾಡುತ್ತಿದೆಯೋ, ಅದು ಬೇರೆ ಮಂಡೂಕದೊಂದಿಗೆ ಇಲ್ಲೇ ಇರಬೇಕು. ಅದು ಮಾನವರ ಜತೆ ಜೀವಿಸಲು ಸಾದ್ಯವಿಲ್ಲ ಎಂದು ಯೋಚಿಸಿದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಚಂದ್ರಮುಖಿ ಭರವಸೆ ಸಿಕ್ಕ ಕೂಡಲೇ ಮಂಡೂಕ ಕೊಳದ ಒಳಕ್ಕೆ ಹೋಗಿ ಆ ಚಿನ್ನದ ಚೆಂಡನ್ನು ಮೇಲಕ್ಕೆ ತಂದು ಹುಲ್ಲಿನ ಮೇಲೆ ಬಿಸಾಕಿತು. ರಾಜಕುಮಾರಿ ತನ್ನ ಚೆಂಡನ್ನು ಮತ್ತೊಮ್ಮೆ ನೋಡಿದ ಖುಷಿಯಲ್ಲಿ ಅದನ್ನು ಹಿಡಿದು ಅರೆಮನೆಯತ್ತ ಓಡುತ್ತಾ ಹೋದಳು. ಈ ಕಡೆ ಮಂಡೂಕ ರಾಜಕುಮಾರಿಯನ್ನು ಎಷ್ಟು ಕರೆದರೂ ಅದು ಕೇಳಿಸಲಿಲ್ಲ.</font><br/></font><font  style='font-size:11pt; color:#000000'>ಮರುದಿನ ರಾಜಕುಮಾರಿ ತನ್ನ ಸಹೋದರಿ ಜತೆಗೂಡಿ ತನ್ನ ಚಿನ್ನದ ತಟ್ಟೆಯಲ್ಲಿ ಊಟಮಾಡುತ್ತಿದ್ದಳು, ಆಗ ಹೊರಗಿನಿಂದ ಶಬ್ದ ಕೇಳಲು ಪ್ರಾರಂಭವಾಯಿತು. ನಂತರ ಬಾಗಿಲು ಬಡಿಯತ್ತಾ ಓ ರಾಜನ ಕೊನೆಯ ಪುತ್ರಿ ಚಂದ್ರಮುಖಿಯೇ ಬಂದು ಬಾಗಿಲು ತೆರೆ ಎಂಬ ಶಬ್ದ ಕೇಳಿಬಂದಿತು.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ರಾಜಕುಮಾರಿ ಯಾರು ನನ್ನನ್ನು ಕರೆಯುತ್ತಿದ್ದಾರೆ ಎಂದು ತಿಳಿಯಲು ಬಾಗಿಲು ತೆರೆಯುತ್ತಾಳೆ. ಆಗ ಆ ಮಂಡೂಕವನ್ನು ನೋಡುತ್ತಾಳೆ. ದಡಾರನೇ ಬಾಗಿಲು ಹಾಕಿ ಪೆಚ್ಚು ಮುಖ ಹಿಡಿದು ಕೊಂಡು ಮೇಜಿನ ಸಮೀಪ ಕೂರುತ್ತಾಳೆ. ಇದನ್ನು ಅರಿತ ರಾಜ ನಿನ್ನನ್ನು ಕರೆದದ್ದು ಯಾರಾದರು ದೈತ್ಯನೇ ಎಂದು ಕೇಳಿದನು. ಅದಕ್ಕೆ ಚಂದ್ರಮುಖಿ ಅಲ್ಲ ಅದು ದೈತ್ಯವಲ್ಲ ಅದು ಒಂದು ಕುರೂಪಿ ಮಂಡೂಕ ಎಂದು ಉತ್ತರಿಸಿದಳು. ಆ ಮಂಡೂಕಕ್ಕೆ ನಿನ್ನಿಂದ ಏನು ಬೇಕು ಎಂದು ರಾಜ ಕೇಳಿದನು. ಆಗ ರಾಜಕುಮಾರಿ ನಿನ್ನೆ ನಡೆದ ಘಟನೆ ಮತ್ತು ತಾನು ಕೊಟ್ಟ ಭರವಸೆಯ ಬಗ್ಗೆ ವಿವರವಾಗಿ ತಂದೆಗೆ ತಿಳಿಸುತ್ತಾಳೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೊಮ್ಮೆ ಹೊರಗಿನಿಂಗ ಆ ಮಂಡೂಕ ಬಾಗಿಲು ತೆಗೆಯುವಂತೆ ರಾಜಕುಮಾರಿಗೆ ಹೇಳುತ್ತದೆ. ಆಗ ರಾಜ ನಿನು ಕೊಟ್ಟ ಭರವಸೆಯನ್ನು ನೀನು ಈಡೇರಿಸಲೇ ಬೇಕು ಹೋಗಿ ಬಾಗಿಲು ತೆರೆ ಎಂದು ಆಗ್ರಹಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಕುಮಾರಿ ಬಾಗಿಲು ತೆರೆದಂತೆ ಮಂಡೂಕ ರಾಜಕುಮಾರಿ ಕುಳಿತಿದ್ದ ಕುರ್ಚಿಯ ಸಮೀಪಕ್ಕೆ ಹಾರಿತು. ಮತ್ತು ತನ್ನನ್ನು ಕುರ್ಚಿಯ ಮೇಲೆ ಎತ್ತಿ ಕೂರಿಸುವಂತೆ ರಾಜಕುಮಾರಿಯಲ್ಲಿ ಕೇಳಿತು. ರಾಜಕುಮಾರಿ ಇದಕ್ಕೆ ಹಿಂಜರಿದಳು ಆಗ ರಾಜ ಮಂಡೂಕವನ್ನು ಮೇಲಕೆತ್ತುವಂತೆ ರಾಜಕುಮಾರಿಗೆ ಆದೇಶ ನೀಡಿದನು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಕುಮಾರಿ ಮಂಡೂಕವನ್ನು ಅರೆಮನ್ನಸ್ಸಿನಿಂದ ಮೇಲಕೆತ್ತಿ ಕುರ್ಚಿಯಲ್ಲಿ ಕೂರಿಸಿದಳು. ಕುರ್ಚಿಯಲ್ಲಿ ಕೂತ ಮಂಡೂಕ ಅವಳ ಚಿನ್ನದ ತಟ್ಟೆಯನ್ನು ತನ್ನತ್ತ ದೂಡುವಂತೆ ಹೇಳಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಕುಮಾರಿ ಮನಸ್ಸಿಲ್ಲದೆ ಹಾಗೆ ಮಾಡಿದಳು. ಮಂಡೂಕ ಆ ತಟ್ಟೆಯಲ್ಲಿ ಊಟಮಾಡಿ, ಸಂತೋಷವಾದಂತೆ ಕಂಡುಬಂತು. ಕೊನೆಗೆ ಮಂಡೂಕ ನನಗೆ ತೃಪ್ತಿಯಾಗಿದೆ ಆದರೆ ಯಾಕೋ ಆಯಾಸ ಎನಿಸುತ್ತಿದೆ. ನನ್ನನ್ನು ನಿನ್ನ ಮಲಗುವ ಕೊಠಡಿಗೆ ಕರೆದುಕೊಂಡು ಹೋಗಿ ನಮಗೆ ಮಲಗಲು ನಿನ್ನ ಹಾಸಿಗೆಯನ್ನು ತಯಾರು ಮಾಡು ಎಂದು ಹೇಳಿತು. ಅದನ್ನು ಕೇಳಿದ ರಾಜಕುಮಾರಿ ಜೋರಾಗಿ ಅಳಲು ಪ್ರಾರಂಭಿಸಿದಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರಿಂದ ಕುಪಿತರಾದ ರಾಜ ನಿನ್ನ ಕಷ್ಟಕಾಲದಲ್ಲಿ ಸಹಾಯಮಾಡಿದವರಿಗೆ ನೀನು ಈಗ ಸಹಾಯ ಮಾಡಲೇ ಬೇಕು ಎಂದು ಆಜ್ಞೆ ಇತ್ತರು. ಬೇರೆ ದಾರಿಕಾಣದ ರಾಜಕುಮಾರಿ ಮಂಡೂಕವನ್ನು ತನ್ನ ಎರಡು ಕೈಬೆರಳುಗಳಿಂದ ಎತ್ತಿ ತನ್ನ ಕೊಠಡಿಯ ಒಂದು ಮೂಲೆಯಲ್ಲಿ ಹಾಕಿ ಮಲಗಲು ಅನುವಾದಾಗ, ನನ್ನನ್ನು ಹಾಸಿಗೆ ಮೇಲೆ ಇಡು ಇಲ್ಲವಾದರೆ ನಾನು ರಾಜನಿಗೆ ಹೇಳುತ್ತೇನೆ ಎಂದು ಮಂಡೂಕ ಗದರಿಸಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರಿಂದ ಕುಪಿತಗೊಂಡ ರಾಜಕುಮಾರಿ ಮಂಡೂಕವನ್ನು ಹಿಡಿದು ಹಿಂಸಾತ್ಮಕವಾಗಿ ಅದನ್ನು ಗೋಡೆಗೆ ಬಿಸಾಕಿದಳು. ಆದರೆ ಕೆಳಗೆ ಬೀಳುತ್ತಿದ್ದಂತೆ ಆ ಮಂಡೂಕ ಒಬ್ಬ ಸುದರವಾದ ರಾಜಕುಮಾರನಾಗಿ ಪರಿವರ್ತಿತನಾದ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ರಾಜ ನನ್ನನ್ನು ಹೇಗೆ ಕ್ರೂರ ಮಾಂತ್ರಿಕ ಮಂಡೂಕನಾಗಿ ಪರಿವರ್ತಿಸಿದ ಮತ್ತು ನಿನ್ನಿಂದಲೇ ನನ್ನನ್ನು ಬಿಡುಗಡೆ ಮಾಡಲು ಸಾದ್ಯವಿತ್ತು ಎಂಬುದರ ಬಗ್ಗೆ ವಿವರವಾಗಿ ಹೇಳುತ್ತಾನೆ.ನಂತರ ಒಂದು ದಿನ ಇಬ್ಬರೂ ಮದುವೆಯಾಗಿ ರಾಜಕುಮಾರನ ಸ್ವಂತ ಅಧಿಪತ್ಯಕ್ಕೆ ಖುಷಿಯಿಂದ ಹೋಗುತ್ತಾರೆ. </font>]]></content:encoded>
      <pubDate>Mon, 23 Feb 2009 16:07:18 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಏಳು ಕಾಗೆಗಳು]]></title>
      <link>https://kannada.webdunia.com/article/kannada-kids-stories/ಏಳು-ಕಾಗೆಗಳು-107052400002_1.htm</link>
      <guid>https://kannada.webdunia.com/article/kannada-kids-stories/ಏಳು-ಕಾಗೆಗಳು-107052400002_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ ಆತನಿಗೆ 7 ಜನ ಗಂಡು ಮಕ್ಕಳು ಇದ್ದರು. ಆದರೆ ಹೆತ್ತವರು ತಮಗೆ ಒಂದು ಹೆಣ್ಣು ಮಗಳು ಇಲ್ಲ ಎಂದು ಬಹಳ ಕೊರಗುತ್ತಿದ್ದರು.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524002_1_1.jpg' Alt='ಕಾಗೆಗಳು' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>vishnu</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ ಆತನಿಗೆ 7 ಜನ ಗಂಡು ಮಕ್ಕಳು ಇದ್ದರು. ಆದರೆ ಹೆತ್ತವರು ತಮಗೆ ಒಂದು ಹೆಣ್ಣು ಮಗಳು ಇಲ್ಲ ಎಂದು ಬಹಳ ಕೊರಗುತ್ತಿದ್ದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂತಿಮವಾಗಿ ಅವರಿಗೆ ಒಂದು ಹೆಣ್ಣು ಮಗು ಹುಟ್ಟಿತು. ಆದರೆ ಆ ಹೆಣ್ಣು ಮಗು ಬಹಳ ದುರ್ಬಲ ಹಾಗು ಸಣ್ಣಗಾತ್ರದ್ದಾಗಿದ್ದುದು ಹೆತ್ತವರನ್ನು ಚಿಂತಾಕ್ರಾಂತರನ್ನಾಗಿ ಮಾಡಿಸಿತು. ನಂತರ ಹೆತ್ತವರು ಅವಳಿಗೆ ಪವಿತ್ರ ಸ್ಥಾನ ಮಾಡಿಸಲು ನಿರ್ಧರಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತರಾತುರಿಯಲ್ಲಿ ತಂದೆ ಒಬ್ಬ ಮಗನನ್ನು ಪವಿತ್ರ ನದಿಯಿಂದ ಸ್ವಲ್ಪ ನೀರು ತರಲು ಕಳುಹಿಸಿದನು. ಆದರೆ ಇವನ ಜತೆಗೆ ಉಳಿದ 6 ಗಂಡು ಮಕ್ಕಳು ಆ ನದಿಯ ಕಡೆ ಹೋದರು. ಪ್ರತಿಯೊಬ್ಬರೂ ಕೊಡಕ್ಕೆ ನೀರು ತಂಬಿಸುವ ಭರದಲ್ಲಿ ಆ ಕೊಡ ನದಿಯಲ್ಲಿ ಬಿದ್ದಿತು. ಇದರಿಂದ ಮಕ್ಕಳಿಗೆ ಹೆದರಿಕೆಯಾಯಿತು. ಮನೆಗೆ ಹೋಗಿ ತಂದೆಯನ್ನು ಹೇಗೆ ಎದುರಿಸವುದು ಎಂದು ಯೋಚಿಸಿ ಭಯಬೀತರಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಕಡೆ ಮಕ್ಕಳು ಬರದಿದ್ದುದನ್ನು ಕಂಡ ತಂದೆ ಸಹನೆ ಕಳೆದು ಕೊಳ್ಳಲಾರಂಭಿಸಿದನು. ತನ್ನ ಮುದ್ದಿನ ಹೆಣ್ಣು ಮಗು ಪವಿತ್ರಸ್ಥಾನವಿಲ್ಲದೆ ಸಾಯುತ್ತದೆ ಎಂಬ ಆತಂಕದಿಂದ ಭಯಗೊಂಡ ತಂದೆ ಕೋಪದಿಂದ ನನ್ನ ಗಂಡು ಮಕ್ಕಳು ಕಾಗೆಗಳಾಗಿ ಪರಿವರ್ತನೆ ಯಾಗಲಿ ಎಂದು ಶಾಪ ಇಟ್ಟನು. ಇದಾದ ಕೂಡಲೇ ಅವನ ಮನೆಯ ಮೇಲಿಂದ 7 ಕಾಗೆಗಳು ಕೂಗಾಡುತ್ತಾ ಹಾರುತ್ತಾ ಇರುದನ್ನು ಕಂಡನು. ತಮ್ಮ ಶಾಪವನ್ನು ಹಿಂತೆಗೆದು ಕೊಳ್ಳಲು ಸಾದ್ಯವಾಗದ ಹೆತ್ತವರು, ಕಳೆದು ಹೋದ ಮಕ್ಕಳಿಗಾಗಿ ಮರುಕ ಪಟ್ಟರು. ಆದರೆ ತಮ್ಮ ಮಗಳು ಬಲಾಡ್ಯವಾಗಿ, ಸುಂದರವಾಗಿ ಬೆಳೆಯುತ್ತಿದ್ದುದನ್ನು ಕಂಡು ಆ ದುಃಖವನ್ನು ಮರೆತರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಹಳ ದಿನದ ವರೆಗೆ ತನಗೆ ಸಹೋದರರು ಇದ್ದಾರೆ ಎಂಬ ಅರಿವಿಲ್ಲದ ಹೆಣ್ಮು ಮಗಳು. ಒಂದು ದಿನ ಜನರು ಅವಳ ಅಣ್ಣಂದಿರ ಕುರಿತು ಮಾತನಾಡುತ್ತಿದ್ದುದು ಕಿವಿಗೆ ಬಿದ್ದಿತು. ಇದರಿಂದ ಬಹಳ ಬೇಸರಗೊಂಡ ಆಕೆ ತನ್ನ ತಂದೆಯಲ್ಲಿ ಅಣ್ಣಂದಿರ ಬಗ್ಗೆ ಕೇಳಿದಳು. ತಂದೆ ಬೇರೆ ದಾರಿ ಕಾಣದೆ ಆ ದುಃಖತಪ್ತ ಕಥೆಯನ್ನು ಹೇಳಿದನು.</font><br/><font  style='font-size:11pt; color:#000000'>ನಂತರ ಆ ಕುಮಾರಿ ತನ್ನ ಅಣ್ಣಂದಿರನ್ನು ಹುಡುಕಿ ತರಲು ನಿರ್ಧರಿಸಿದಳು ಮತ್ತು ಒಂದು ದಿನ ತನ್ನ ಹೆತ್ತವರ ಸ್ಮರಣಾರ್ತವಾಗಿ ಉಂಗುರವನ್ನು ತೆಗೆದು ಕೊಂಡು ತನ್ನ ಅಣ್ಣಂದಿರನ್ನು ಮುಕ್ತವಾಗಿಸಲು ರಹಸ್ಯವಾಗಿ ಮನೆಯಿಂದ ಹೊರ ಬಿದ್ದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಹುಡುಕುತ್ತಾ ಹುಡುಕುತ್ತಾ ಕುಮಾರಿ ಸೂರ್ಯನ ಎದುರಿಗೆ ಬಂದಳು. ಆದರೆ ಅದು ಬಹಳ ಬಿಸಿ ಮತ್ತು ಭಯಾನಕವಾಗಿತ್ತು. ಕೂಡಲೇ ಅವಳು ಅಲ್ಲಿಂದ ಓಡಿ ಚಂದ್ರನ ಎದುರಿಗೆ ಬಂದಳು. ಆದರೆ ಅದು ಬಹಳ ತಂಪು ಮತ್ತು ಕೆಟ್ಟದೃಷ್ಟಿಯಿಂದ ನೋಡುತ್ತಿತ್ತು. ಇದನ್ನು ಕಂಡು ಕೂಡಲೇ ಅಲ್ಲಿಂದ ಕಾಲು ಕಿತ್ತು, ನಕ್ಷತ್ರಗಳ ಹತ್ತಿರ ಹೋದಳು. ನಕ್ಷತ್ರಗಳು ಬಹಳ ಸ್ನೇಹಪೂರ್ವಕಾವಗಿದ್ದವು.  ಬೆಳಗಿನ ನಕ್ಷತ್ರ ಇವಳಿಗೆ ಒಂದು ವಕ್ರ ಮೂಳೆಯನ್ನು ಕೊಡುತ್ತಾ, ಈ ಮೂಳೆ ನಿನ್ನ ಅಣ್ಣಂದಿರು ಇರುವ ಗಾಜಿನ ಕೋಟೆಯ ಬೀಗವನ್ನು ತೆರೆಯಲು ಸಹಕರಿಸುತ್ತದೆ ಎಂದು ಹೇಳಿತು.</font><font  style='font-size:11pt; color:#000000'>ಅದನ್ನು ತನ್ನ ಕರವಸ್ತ್ರದಲ್ಲಿ ಸುತ್ತಿ, ಗಾಜಿನ ಕೋಟೆಯ ಕಡೆ ನಡೆದಳು. ಗಾಜಿನ ಕೋಟೆಯ ಹತ್ತಿರ ತಲುಪಿದ ಕುಮಾರಿ ಅದರ ಬೀಗ ಮುದ್ರಿತ ಬಾಗಿಲನ್ನು ತೆಗೆಯಲು ಆ ಸಣ್ಣ ಮೂಳೆಗಾಗಿ ತನ್ನ ಕರವಸ್ತ್ರವನ್ನು ಬಿಡಿಸಿದಳು. ಆದರೆ ಆ ಕರವಸ್ತ್ರದಲ್ಲಿ ಆ ಸಣ್ಣ ಮೂಳೆ ಕಾಣಲಿಲ್ಲ. ಅದು ಕಳೆದು ಹೋಗಿತ್ತು. ಇದರಿಂದ ಬೇಸರ ಗೊಂಡ ಕುಮಾರಿ ಅಂತಿಮವಾಗಿ ತನ್ನ ಕೈ ಬೆರಳನ್ನು ಆ ಬೀಗದ ರಂದ್ರದೊಳಗೆ ಹಾಕಿದಳು ಅದೃಷ್ಟವಶಾತ್ ಬಾಗಿಲಿನ ಬೀಗ ತೆರೆಯಲ್ಪಟ್ಟಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವಳು ಆ ಕೋಟೆಯೊಳಗೆ ಪ್ರವೇಶಿಸಿದಂತೆ ಒಬ್ಬ ಕುಬ್ಜ ಎದುರಾಗಿ ನಿನಗೆ ಏನು ಬೇಕು? ಎಂದು ಕೇಳುತ್ತಾನೆ. ನನಗೆ ನನ್ನ ಸಹೋದರರು, 7 ಕಾಗೆಗಳು ಬೇಕು ಎಂದು ಕುಮಾರಿ ಉತ್ತರಿಸಿದಳು. ಆಗ ಆ ಕುಬ್ಜ ನನ್ನ ಕಾಗೆಗಳು ಹೊರಗೆ ಹೋಗಿದ್ದಾವೆ. ಅವು ಬರುವವರೆಗೆ ನೀನು ಕಾಯಬಹುದು ಎಂದು ಹೇಳಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಂತರ ಆ ಕುಬ್ಜ 7 ಕಾಗೆಗಳಿಗೆ ತಿನ್ನಲು 7 ತಟ್ಟೆಯಲ್ಲಿ ಮತ್ತು ಲೋಟದಲ್ಲಿ ಆಹಾರ ತಂದಿಟ್ಟಳು. ಕುಮಾರಿ ಪ್ರತಿ ತಟ್ಟೆಯಿಂದ ಸ್ವಲ್ಪ ಆಹಾರ ಸೇವಿಸಿದಳು ಮತ್ತು ಪ್ರತಿ ಲೋಟೆಯಿಂದ ಸ್ವಲ್ಪ ನೀರನ್ನು ಕುಡಿದಳು. ಕೊನೆಯ ಲೋಟೆಯಲ್ಲಿ ತನ್ನ ಜತೆಗೆ ತಂದಿದ್ದ ಉಂಗುರವನ್ನು ಹಾಕಿದಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗ ಕಾಗೆಗಳು ಕೂಗಾಡುವ ಶಬ್ದ ಕೇಳಲು ಪ್ರಾರಂಭಿಸಿತು. ಕೂಡಲೇ ಕುಮಾರಿ ಅಡಗಿ ಕೂತಳು. ಕಾಗೆಗಳು ಬಂದು ತಮ್ಮ ಆಹಾರವನ್ನು ತಿನ್ನಲು ತಯಾರಾದವು. ಆಗ ಒಂದು ಕಾಗೆ ಇನ್ನೊಂದರ ಹತ್ತಿರ ಯಾರೋ ನನ್ನ ಆಹಾರವನ್ನು ಸೇವಿಸುತ್ತಿದ್ದಾರೆ?. ಯಾರೋ ನನ್ನ ಲೋಟದಿಂದ ನೀರು ಕುಡಿಯುತ್ತಿದ್ದಾರೆ? ಇದರಲ್ಲಿ ಮಾನವ ಬಾಯಿಯ ವಾಸನೆ ಇದೆ ಎಂದು ಹೇಳಿತು. </font><br/><font  style='font-size:11pt; color:#000000'></font><br/>7<font  style='font-size:11pt; color:#000000'>ನೇ ಕಾಗೆ ತನ್ನ ಲೋಟದಿಂದ ಕುಡಿಯುತ್ತಿದ್ದಾಗ ಉಂಗುರ ಕೆಳಗೆ ಬಿತ್ತು. ಅದನ್ನು ನೋಡಿದ ಕಾಗೆ ಅದು ತನ್ನ ಹೆತ್ತವರ ಉಂಗುರ ಎಂಬುದನ್ನು ಗುರುತಿಸಿತು ಮತ್ತು ದೇವರೇ ನನ್ನ ತಂಗಿ ಇಲ್ಲಿ ಇರುವಂತೆ ಅನುಗ್ರಹಿಸು ಆಗ ನಾವು ಬಚಾವಾಗುತ್ತೇವೆ ಎಂದು ಹೇಳಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದನ್ನು ಕೇಳಿದ ಕೂಡಲೇ ಅವಿತಿದ್ದ ಕುಮಾರಿ ಎದುರು ಬಂದಳು. ಕೂಡಲೇ ಕಾಗೆಗಳು ತಮ್ಮ ಮಾನವ ರೂಪಕ್ಕೆ ವಾಪಾಸಾದರು ಮತ್ತು ತಮ್ಮ ತಂಗಿಯನ್ನು ಅಪ್ಪಿಕೊಂಡರು. ನಂತರ ಖುಷಿಯಿಂದ ಎಲ್ಲರೂ ಒಟ್ಟಿಗೆ ತಮ್ಮ ಮನೆಗೆ ತೆರಳಿದರು. </font>]]></content:encoded>
      <pubDate>Mon, 23 Feb 2009 16:06:15 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪಂಚತಂತ್ರದ ಕಥೆಗಳು]]></title>
      <link>https://kannada.webdunia.com/article/kannada-kids-stories/ಪಂಚತಂತ್ರದ-ಕಥೆಗಳು-107050700005_1.htm</link>
      <guid>https://kannada.webdunia.com/article/kannada-kids-stories/ಪಂಚತಂತ್ರದ-ಕಥೆಗಳು-107050700005_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg"/>
      <image>https://nonprod-media.webdunia.com/public_html/_media/kn/img/article/2017-12/19/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1513672339-3871.jpg</image>
      <description><![CDATA[ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಇದ್ದ ಕಾಲದಲ್ಲಿ ಮಕ್ಕಳಿಗೆ ಹಿರಿಯರು, ತಾತ-ಅಜ್ಜಿಯರ  ಒಡನಾಟವಿರುತ್ತಿತ್ತು. ಆದರೆ ಇಂದು ಹೆತ್ತವರು ಮಕ್ಕಳು ಮಾತ್ರ ಇರುವ ಸಣ್ಣಕುಟುಂಬಗಳಾದ್ದರಿಂದ ಮಕ್ಕಳಲ್ಲಿ ಕಥೆಕೇಳಿ ಬೆಳೆಯುವ  ಪ್ರವೃತ್ತಿ ಕುಸಿಯುತ್ತಿದೆ.]]></description>
      <content:encoded><![CDATA[<font  style='font-size:11pt; color:#000000'>ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಇದ್ದ ಕಾಲದಲ್ಲಿ ಮಕ್ಕಳಿಗೆ ಹಿರಿಯರು, ತಾತ-ಅಜ್ಜಿಯರ  ಒಡನಾಟ, ಕಥೆಕೇಳುವ ಹವ್ಯಾಸವಿರುತ್ತಿತ್ತು. ಆದರೆ ಇಂದು ಹೆತ್ತವರು ಮಕ್ಕಳು ಮಾತ್ರ ಇರುವ ಸಣ್ಣಕುಟುಂಬಗಳಾದ್ದರಿಂದ ಮಕ್ಕಳಲ್ಲಿ ಕಥೆಕೇಳಿ ಬೆಳೆಯುವ  ಪ್ರವೃತ್ತಿ ಕುಸಿಯುತ್ತಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳು ಕೇಳಲೇ ಬೇಕಾದ ಅಥವಾ ಓದಲೇ ಬೇಕಾದ ಕಥೆಗಳಲ್ಲಿ ಪಂಚತಂತ್ರದ ಕಥೆಗಳು ಪ್ರಮುಖವಾದವುಗಳು. ಬಹಳ ಹಿಂದೆ  ಅರಸನೊಬ್ಬನಿಗೆ ನಾಲ್ಕು ಮಂದಿ ಮಕ್ಕಳಿದ್ದರು. ಕ್ಷಾತ್ರವಿದ್ಯೆ, ವೇದಆಗಮಗಳಲ್ಲಿ ಪರಿಣತಿ ಗಳಿಸಬೇಕಾದ ಅವರು ಯಾವುದೇ ವಿದ್ಯೆ  ಕಲಿಯದೆ ಪುಂಡಪೋಕರಿಗಳಾಗಿ ಬೆಳೆಯತೊಡಗಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಅರಸನ ಪ್ರಯತ್ನವೆಲ್ಲವೂವಿಫಲವಾಯಿತು. ಈ ಹಂತದಲ್ಲಿ ರಾಜನಿಗೆ ಮಕ್ಕಳ ಭವಿಷ್ಯದ ಚಿಂತೆ, ರಾಜ್ಯದ  ಉತ್ತರಾಧಿಕಾರಿಗಳ ಚಿಂತೆ ಕಾಡತೊಡಗಿತು. ಈ ಹಂತದಲ್ಲಿ ಆತನಿಗೆ ವಿಷ್ಣು ಶರ್ಮ ಎಂಬ ಸನ್ಯಾಸಿಯ ಪರಿಚಯವಾಯಿತು. ಸನ್ಯಾಸಿಯು  ಮಕ್ಕಳ ವಿದ್ಯಾಭ್ಯಾಸದ ಹೊರೆ ಹೊರಲು ಸಿದ್ಧನಾದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಕುಮಾರರು ಯಾವುದೇ ವಿದ್ಯೆ ಕಲಿಯಲು ಒಪ್ಪದಿರುವುದರಿಂದ ಆದರೆ ಕಥೆ ಕೇಳುವುದರಲ್ಲಿ ಉತ್ಸುಕರಾಗಿದ್ದುದರಿಂದ ಸನ್ಯಾಸಿಯು  ಕಲಿಸಬೇಕಾದ ರಾಜವಿದ್ಯೆಯನ್ನು ಕಥೆಗಳ ರೂಪದಲ್ಲಿ ಹೆಣೆದು ಮಕ್ಕಳಿಗೆ ಮನದಟ್ಟು ಮಾಡುತ್ತಿದ್ದನು. ಈ ಕಥೆಗಳೇ ಪಂಚತಂತ್ರದ ಕಥೆಗಳು  ಎಂದು ಹೆಸರು ಪಡೆದುವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪಂಚತಂತ್ರದ ಕಥೆಗಳಲ್ಲಿ- ಮಿತ್ರಲಾಭ, ಮಿತ್ರಬೇಧ, ಕಾಕೋಕೋಲೂಕಿಯಾ ಮುಂತಾದ ಐದು ವಿಭಾಗಗಳಲ್ಲಿ  ಜನರೊಡನೆ  ವ್ಯವಹರಿಸುವ ಅಥವಾ ಯಶಸ್ವಿ ಆಡಳಿತ ನಡೆಸುವ ವಿಧಾನವಿದೆ. ಆದರೆ ಇದು ಪ್ರಾಣಿ ಪ್ರಪಂಚದೊಂದಿಗೆ ಬೆಸೆದ ಕಥೆಯಾದ್ದರಿಂದ  ಮಕ್ಕಳು ಖುಷಿ ಪಟ್ಟರು. ರಾಜಪುತ್ರರು ಅವರಿಗರಿವಿಲ್ಲದೆಯೇ ಕಥೆಯ ರೂಪದಲ್ಲಿ ವಿದ್ಯೆಕಲಿಯತೊಡಗಿದರು.</font>]]></content:encoded>
      <pubDate>Mon, 23 Feb 2009 16:05:34 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[Kannada Kids Stories]]></category>
      <authorname>ಇಳಯರಾಜ</authorname>
    </item>
  </channel>
</rss>
