<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಹಿನ್ನೋಟ-08]]></title>
    <link>https://kannada.webdunia.com/retrospection-08</link>
    <description><![CDATA[ಸಂದುಹೋದ 2008ರಲ್ಲಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಆಗುಹೋಗುಗಳ ಸಮಗ್ರ ಹಿನ್ನೋಟ.]]></description>
    <copyright>Copyright webdunia.com</copyright>
    <lastBuildDate>Tue, 16 Jun 2026 08:57:29 +0530</lastBuildDate>
    <language>en-us</language>
    <image>
      <title>ಹಿನ್ನೋಟ-08</title>
      <url>https://kannada.webdunia.com/retrospection-08</url>
      <link>https://kannada.webdunia.com/retrospection-08</link>
    </image>
    <atom:link href="https://kannada.webdunia.com/rss/retrospection-08-1073502.rss" rel="self" type="application/rss+xml"/>
    <item>
      <title><![CDATA[ರೇಖಾ ಕದಿರೇಶ್ ಕೊಲೆ ನಡೆಯೋಕೆ ಕಾರಣವಾದ ಅಂಶಗಳು]]></title>
      <link>https://kannada.webdunia.com/article/retrospection-08/rekha-kadiresh-reasons-for-murder-121062800019_1.html</link>
      <guid>https://kannada.webdunia.com/article/retrospection-08/rekha-kadiresh-reasons-for-murder-121062800019_1.html</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1592277463-3911.jpg</image>
      <description><![CDATA[2018 ರಲ್ಲಿ ಕದಿರೇಶ್ ನ ಕೊಲೆಯಾಗುತ್ತೆ.
ಕದಿರೇಶ್ ಬದುಕಿದ್ದಾಗ ಸರಿಸುಮಾರು 200 ಸ್ಥಳೀಯ ಯುವಕರನ್ನ ಕಟ್ಟುಮಸ್ತಾಗಿ ಸಾಕಿದ್ದ
ಅದರಲ್ಲಿ ಸೆಂಥಿಲ್ ಅಲಿಯಾಸ್ ಕ್ಯಾಪ್ಟನ್,ಸೀನ,ಪೀಟರ್ ಪ್ರಮುಖರಾಗಿದ್ದರು
ಆದ್ರೆ, ಕದಿರೇಶನ ಕೊಲೆಯಲ್ಲಿ ಗಾರ್ಡನ್ ಶಿವ ಹಾಗೂ ಶೋಭನ್ ಬಾಗಿಯಾಗಿರೋದು ...]]></description>
      <content:encoded><![CDATA[<p>
	2018 ರಲ್ಲಿ ಕದಿರೇಶ್ ನ ಕೊಲೆಯಾಗುತ್ತೆ.ಕದಿರೇಶ್ ಬದುಕಿದ್ದಾಗ ಸರಿಸುಮಾರು 200 ಸ್ಥಳೀಯ ಯುವಕರನ್ನ ಕಟ್ಟುಮಸ್ತಾಗಿ ಸಾಕಿದ್ದ ಅದರಲ್ಲಿ ಸೆಂಥಿಲ್ ಅಲಿಯಾಸ್ ಕ್ಯಾಪ್ಟನ್,ಸೀನ,ಪೀಟರ್ ಪ್ರಮುಖರಾಗಿದ್ದರು.<br />
	<p style="float: left;width:100%;text-align:center;">
		<img align="center" alt="" class="imgCont" src="https://nonprod-media.webdunia.com/public_html/_media/kn/img/article/2020-06/16/full/1592277463-3911.jpg" style="border: 1px solid rgb(221, 221, 221); margin-right: 0px; z-index: 0; width: 1158px; height: 651px;" title="" /></p>
</p>
<p>
	ಆದ್ರೆ, ಕದಿರೇಶನ ಕೊಲೆಯಲ್ಲಿ ಗಾರ್ಡನ್ ಶಿವ ಹಾಗೂ ಶೋಭನ್ ಬಾಗಿಯಾಗಿರೋದು ಖಚಿತವಾಗುತ್ತೆ.</p>
<p>
	ಕದಿರೇಶ್ ಕೊಲೆಯಾದ ಒಂದೇ ತಿಂಗಳಿನಲ್ಲಿ ಶೋಭನ್ ನನ್ನ ಕದಿರೇಶನ ಹುಡುಗ್ರೇ ಹೊಡೆದುರುಳಿಸ್ತಾರೆ.</p>
<p>
	ಶೋಭನ್ ಕೊಲೆ ಪ್ರಕರಣದಲ್ಲಿ ಕದಿರೇಶನ ಅಕ್ಕ(ಮಾಲಾ) ಮಗ ಅರುಳ್ ,ಸೂರ್ಯ ಸೇರಿ ಒಟ್ಟು 11 ಮಂದಿ ಜೈಲುಹಾದಿ ಹಿಡೀತಾರೆ.</p>
<p>
	ಯಾವಾಗ ಕದಿರೇಶ ರಸ್ತೆಯಲ್ಲಿ ಹೆಣವಾಗ್ತಾನೋ ಆಗಿನಿಂದಲೇ ರೇಖಾ ಕದಿರೇಶನ ಗ್ಯಾಂಗನ್ನ ದೂರ ಇಡೋದಕ್ಕೆ ಶುರುಮಾಡ್ತಾಳೆ.</p>
<p>
	ರೇಖಾ ಮಗ ಹಾಗೂ ಮಗಳನ್ನ ಡೈರಿಸರ್ಕಲ್ ಬಳಿಯಲ್ಲಿರೋ ಕಾನ್ವೆಂಟ್ ನಲ್ಲೇ ಇರಿಸಿ ಓದಿಸುವಂತಹ ಕೆಲಸವನ್ನ ಮಾಡ್ತಾಳೆ.</p>
<p>
	ರೇಖಾ ಕದಿರೇಶನ ತರಹ ಸಾವಿರಾರು ರೂಪಾಯಿ ಹಣವನ್ನ ಕದಿರೇಶನ ಸಹಚರರಿಗೆ ನೀಡ್ತಿರಲಿಲ್ಲ.</p>
<p>
	ಕದಿರೇಶನ ಕಿರೀತಮ್ಮ ಸುರೇಶ ಹಾಗೂ ಪೀಟರ್ ಗೆ ಗಲಾಟೆಯೊಂದರಲ್ಲಿ ಚಪ್ಪಲಿ ಏಟನ್ನ ರೇಖಾ ನೀಡಿದ್ದಳು.</p>
<p>
	ಕದಿರೇಶ ಸತ್ತ ಬಳಿಕ ಯಾವೊಬ್ಬ ಕ್ರಿಮಿನಲ್ ಬ್ಯಾಗ್ರೌಂಡ್ ಇರೋ ವ್ಯಕ್ತಿಯನ್ನ ಕೂಡ ರೇಖಾ ತನ್ನ ಬಳಿ ಬಿಟ್ಕೊಳ್ತಿರಲಿಲ್ಲ.</p>
<p>
	ಯಾವುದೇ ಹಣಕಾಸಿನ ಸಹಾಯ ಮಾಡದೇ ರೇಖಾ ತನ್ನ ಪಾಡಿಗೆ ತಾನಿದ್ದಳು</p>
<p>
	ಕದಿರೇಶನನ್ನ ಕೊಲೆಗೈದ ಕೆಲ ಆರೋಪಿಗಳನ್ನ ಮುಗಿಸೋಕೆ ರೇಖಾ ಹಣ ನೀಡಿಲ್ಲ ಅನ್ನೋ ವಿಚಾರಕ್ಕೂ ಕದಿರೇಶನ ಗ್ಯಾಂಗ್ ರೇಖಾಳನ್ನ ವಿರೋಧಿಸ್ತಿತ್ತು.</p>
<p>
	ರೇಖಾ ಬೇರೊಬ್ಬರ ಜೊತೆ ಓಡಾಡ್ತಿದ್ದಾಳೆ ನಮ್ಮ ಕದಿರೇಶಣ್ಣನಿಗೆ ಮೋಸ ಆಗ್ತಿದೆ ಎಂದು ಅಪೋಸ್ ಮಾಡೋ ಗ್ಯಾಂಗ್ ಹುಟ್ಟಿಕೊಂಡಿತ್ತು</p>
<p>
	ರಾಜಕೀಯವಾಗಿ ಬೆಳೆದು ನಮ್ಮನ್ನೇ ತುಳೀತಾಳೆ ಎಂಬ ಉದ್ದೇಶದಿಂದ ಸಿಟ್ಟಾಗಿದ್ದ ನಾದಿನಿ ಮಾಲಾ</p>
<p>
	ಕೊಲೆಯ ಒಂದು ವಾರದ ಹಿಂದೆ ಪೀಟರ್ ಜೊತೆ ಅರುಣ ಸೇರಿಕೊಂಡು ರೇಖಾಳ ಕೊಲೆಗೆ ಸ್ಕೆಚ್ ಹಾಕಿದ್ದರು.</p>
<p>
	ಅರುಳ್ ಯಾವಾಗ ರೇಖಾಳ ಕೊಲೆ ವಿಚಾರ ಪ್ರಸ್ತಾಪಿಸಿದ್ನೋ ಆಗ್ಲೇ ಪೀಟರ್ ತಾನೇ ರೇಖಾಳನ್ನ ಮುಗಿಸೋಕೆ ಪ್ಲ್ಯಾನ್ ರೂಪಿಸಿಕೊಂಡಿದ್ದ.</p>
<p>
	ಅದರಂತೆ ಚಿಕ್ಕ ಚಿಕ್ಕ ಹುಡುಗರನ್ನ ಕರೆದುಕೊಂಡು ಹೋಗಿ ರೇಖಾಳನ್ನ ಕೊಲೆಗೈದರಂತೆ.</p>
<p>
	ಆದ್ರೆ, ಕೊಲೆಗೆ ಸ್ಕೆಚ್ ಹಾಕಿ ದಿನ ನಿಗಧಿ ಮಾಡೋಕು ಮುಂಚೆ ರೇಖಾಳನ್ನ ಮುಗಿಸಿಬಿಟ್ರು ಅನ್ನೋ ಹೇಳಿಕೆಯನ್ನ ಇದೀಗ ಮಾಲಾ ಮಗ ಅರುಳ್ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.</p>
<p>
	ಸದ್ಯ ಅರುಳ್ ನನ್ನ ಅರೆಸ್ಟ್ ಮಾಡಿದ ಕಾಟನ್ ಪೇಟೆ ಪೊಲೀಸರು</p>
<p>
	ಅರುಳ್ ನನ್ನು ಕೋರ್ಟ್ ಗೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿರುವ ಖಾಕಿ ಪಡೆ.</p>]]></content:encoded>
      <pubDate>Mon, 28 Jun 2021 13:59:00 +0530</pubDate>
      <updatedDate>Tue, 29 Jun 2021 10:57:17 +0530</updatedDate>
      <category><![CDATA[Retrospection 08]]></category>
      <authorname>rajesh patil</authorname>
    </item>
    <item>
      <title><![CDATA[2008ರಲ್ಲಿ ನಟಮಹಾಶಯರ ಸ್ಕೋರ್ ಕಾರ್ಡ್]]></title>
      <link>https://kannada.webdunia.com/article/retrospection-08/2008ರಲ್ಲಿ-ನಟಮಹಾಶಯರ-ಸ್ಕೋರ್-ಕಾರ್ಡ್-108123000004_1.htm</link>
      <guid>https://kannada.webdunia.com/article/retrospection-08/2008ರಲ್ಲಿ-ನಟಮಹಾಶಯರ-ಸ್ಕೋರ್-ಕಾರ್ಡ್-108123000004_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1592277463-3911.jpg</image>
      <description><![CDATA[ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...]]></description>
      <content:encoded><![CDATA[<font  style='font-size:11pt; color:#0000FF'><b>ರಮ್ಯ ಶೆಟ್ಟಿ  </font><font style=' color:#000000;'></b></font><br/><font  style='font-size:11pt; color:#000000'>ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಅಕ್ಷಯ್ ಕುಮಾರ್:  2007</font><font style=' color:#000000;'></b>ರಲ್ಲಿ ನಾಲ್ಕು ಸಾಲು ಸಾಲು ಹಿಟ್ ಚಿತ್ರ ನೀಡಿದ್ದ ಅಕ್ಷಯ್ ಕುಮಾರ್‌ರ ತಶಾನ್ ಬಹುತಾರಾಗಣ ಚಿತ್ರವಾಗಿತ್ತು. ಇದು ಫ್ಲಾಫ್ ಎಂದು ಘೋಷಿತವಾಗಿದೆ. ಆದರೆ ವರ್ಷದ ಅತಿ ದೊಡ್ಡ ಹಿಟ್ ಚಿತ್ರ ಸಿಂಗ್ ಈಸ್ ಕಿಂಗ್ ಅಕ್ಷಯ್‌ಗೆ ಇನ್ನಿಲ್ಲದ ಖ್ಯಾತಿಯನ್ನು ತಂದುಕೊಟ್ಟಿದ್ದಲ್ಲದೆ, ಶಾರುಖ್ ಖಾನ್‌ರ ಬಾಲಿವುಡ್‌ ಕಿಂಗ್ ಪಟ್ಟವನ್ನು ಅಕ್ಷಯ್ ಅಕ್ರಮಿಸುತ್ತಿದ್ದಾರೆ ಎಂಬ ಮಾತುಗಳು, ಚರ್ಚೆಗಳು ಕೇಳಿಬಂದವು. 2008 ಬಾಲಿವುಡ್‌ ಬಾದ್‌ಶಾರ ದಶಕಗಳ ಕಿಂಗ್ ಪಟ್ಟಕ್ಕೆ ಕುತ್ತು ತರುವಷ್ಟು ಖ್ಯಾತಿಯನ್ನು ಅಕ್ಷಯ್ ಪಡೆದಿದ್ದಾರೆ. ಕತ್ರಿನಾರೊಂದಿಗಿನ ಅಕ್ಷಯ್‌ರ ಎಲ್ಲಾ ಚಿತ್ರಗಳು ಹಿಟ್ ಎನಿಸುವುದರೊಂದಿಗೆ ಪ್ರಸ್ತುತ ಅಕ್ಷಯ್-ಕತ್ರಿನಾ ಬಾಲಿವುಡ್‌ನ ಅತ್ಯಂತ ಯಶಸ್ವಿ ಜೋಡಿ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಶಾರುಖ್ ಖಾನ್: </font><font style=' color:#000000;'></b>ಬಾಲಿವುಡ್ ಬಾದ್ ಶಾ ಈ ವರ್ಷ ಕ್ರೇಜಿ 4 ಮತ್ತು ಬೂತನಾತ್ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದು ಬಿಟ್ಟರೆ ಈ ವರ್ಷ ಬಿಡುಗಡೆಯಾದ ಏಕೈಕ ಚಿತ್ರ ರಬ್ನೆ ಬನಾ ದಿ ಜೋಡಿ ಬಾಕ್ಸ್ ಅಫೀಸ್‌ನಲ್ಲಿ ಉತ್ತಮ ಓಟ ಕಾಣುವುದರೊಂದಿಗೆ ತಮ್ಮ ಜಾಗವನ್ನು ಆಕ್ರಮಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ ಎನ್ನುವುದನ್ನು ಶಾರುಖ್ ಸಾಬೀತು ಪಡಿಸಿದ್ದಾರೆ. ಇದಲ್ಲದೆ ಶಾರುಖ್, ಕತ್ರಿನಾ ಕೈಫ್ ಹುಟ್ಟುಹಬ್ಬದಂದು ಸಲ್ಮಾನ್ ಖಾನ್‌ರೊಂದಿಗಿನ ಜಗಳದಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದರು ಮತ್ತು ಬಚ್ಚನ್ ಕುಟುಂಬ ವಲ್ಡ್ ಟೂರ್ ಕೈಗೊಂಡ ಹಿಂದಯೇ, ತಮ್ಮ ಟೆಂಪ್ಟೇಶನ್ ರಿಲೋಡೆಡ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶಾರುಖ್ ಮಾಲೀಕತ್ವದ ಐಪಿಎಸ್ ಕ್ರಿಕೆಟ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಯಶಸ್ವಿಯಾಗಲಿಲ್ಲ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಅಮೀರ್ ಖಾನ್: </font><font style=' color:#000000;'></b>ಕಳೆದ ವರ್ಷ ವಿಮರ್ಶಕರಿಂದ ಪ್ರಶಂಸಿತ ಅತಿದೊಡ್ಡ ಹಿಟ್ ಚಿತ್ರ ತಾರೇ ಜಮೀನ್ ಪರ್ ನೀಡಿದ ಅಮೀರ್ ಖಾನ್, 2008ರಲ್ಲಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ಸೋದರಳಿಯ ಇಮ್ರಾನ್ ಖಾನ್‌ರನ್ನು ಜಾನೆ ತೂ ಯಾ ಜಾನೆ ನಾ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯಿಸಿದರು. ಚಿತ್ರ ಸೂಪರ್ ಹಿಟ್ ಎನಿಸಿದೆ. ವರ್ಷದ ಕೊನೆಯಲ್ಲಿ ತೆರೆಕಂಡ ಅಮೀರ್ ನಾಯಕತ್ವದ ಗಜನಿ ಚಿತ್ರ ಈಗಾಗಲೇ ಹಿಟ್ ಎನಿಸಿಕೊಳ್ಳುವತ್ತ ಸಾಗಿದೆ. ಚಿತ್ರದಲ್ಲಿನ ಅಮೀರ್‌ರ ಎಯ್ಟ್ ಪ್ಯಾಕ್ ಲುಕ್ ಮತ್ತು ಹೇರ್ ಸ್ಟೈಲ್  ಸಾಕಷ್ಟು ಕ್ರೇಜ್ ಸೃಷ್ಟಿಸಿದೆ. ಆಕ್ಷನ್ ಚಿತ್ರಗಳಲ್ಲೂ ತಾವು ಸೈ ಎನಿಸಿದ್ದಾರೆ ಅಮೀರ್.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_1_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಸಲ್ಮಾನ್ ಖಾನ್: 2008 </font><font style=' color:#000000;'></b>ಬಾಲಿವುಡ್ ಬಾಡ್ ಬಾಯ್‌ಗೆ ಉತ್ತಮವಾಗಿರಲಿಲ್ಲ. ಈ ವರ್ಷದ ಅವರ ಬಿಡುಗಡೆಗಳಾದ ಗಾಡ್ ತೂಸಿ ಗ್ರೇಟ್ ಹೊ, ಹೆಲೊ, ಹಿರೋಸ್ ಮತ್ತು ಯುವರಾಜ್ ಚಿತ್ರಗಳು ಬಾಲಿವುಡ್‌ನಲ್ಲಿ ತೋಪಾಗಿವೆ. ಸಲ್ಮಾನ್ ಮೊದಲ ಬಾರಿಗೆ ಪ್ರೇಯಸಿ ಕತ್ರಿನಾರೊಂದಿಗೆ ರೊಮ್ಯಾಂಟಿಕ್ ಪಾತ್ರವೊಂದರಲ್ಲಿ ಜೋಡಿಯಾಗಿ ಸಾಕಷ್ಟು ಹೈಪ್ ಸೃಷ್ಟಿಸಿದ್ದ ಯುವರಾಜ್ ಚಿತ್ರ ಸಹ ಬಾಕ್ಸ್ ಆಫೀಸಿನಲ್ಲಿ ನೀರಿಕ್ಷಿತ ಯಶಸ್ಸು ಕಾಣಲಿಲ್ಲ. ಜೊತೆಗೆ ಶಾರುಖ್‌ರೊಂದಿಗಿನ ಕದನದ ಕುರಿತು ಸಲ್ಮಾನ್ ಕಣ್ಣೀರಿಟ್ಟಿದ್ದೂ ಸುದ್ದಿಯಾಗಿತ್ತು. ಸಲ್ಮಾನ್ ಕುಟುಂಬ ಸಹಿತರಾಗಿ ಗಣೇಶೊತ್ಸವವನ್ನು ಆಚರಿಸಿದ್ದಕ್ಕೆ, ಅವರ ಮೇಲೆ ಫತ್ವಾ ಜಾರಿ ಮಾಡಲಾಗಿತ್ತು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_1_5.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಅಭಿಷೇಕ್ ಬಚ್ಚನ್: </font><font style=' color:#000000;'></b>ಅಭಿಷೇಕ್‍‌ಗೆ 2008ರಲ್ಲಿ ಮಿಶ್ರಫಲ. ಅವರು ವರ್ಷದ ತುದಿಯಲ್ಲಿ ತಂದೆ ಅಮಿತಾಬ್ ಬಚ್ಚನ್ ಮತ್ತು ಪತ್ನಿ ಐಶ್ವರ್ಯಾರೊಂದಿಗೆ ನಟಿಸಿದ್ದ ಸರ್ಕಾರ್ ರಾಜ್ ಯಶಸ್ವಿಯೆನಿಸಿತ್ತು. ನಂತರದ ಇಸ್ತಾಂಬುಲ್ ಮತ್ತು ಅವರು ಬಹು ನೀರಿಕ್ಷೆ ಇರಿಸಿಕೊಂಡಿದ್ದ ದ್ರೋಣ ಚಿತ್ರಗಳು ಗೆಲ್ಲಲಿಲ್ಲ. ಮತ್ತೆ ವರ್ಷದ ಕೊನೆಗೆ ದೋಸ್ತಾನ ಚಿತ್ರ ಹಿಟ್ ಎನಿಸುವುದರೊಂದಿಗೆ ಅಭಿ ಮೊಗದಲ್ಲಿ ಗೆಲುವಿನ ನಗು ಮೂಡಿಸಿದೆ. ಜೊತೆಗೆ ಅಭಿ, ಬಚ್ಚನ್ ಕುಟುಂಬದ ಅನ್‌ಫಾರ್ಗೆಟೆಬಲ್ ವರ್ಲ್ಡ್ ಟೂರ್‌ನಲ್ಲಿ ಭಾಗವಹಿಸಿದ್ದರು.   </font><font style='font-size:12pt;'></font><br/> <font  style='font-size:11pt; color:#000000'></font><br/><font  style='font-size:12pt; color:#000000'></font><br/> </font><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಸೈಫ್ ಅಲಿ ಖಾನ್ : </font><font style=' color:#000000;'></b>ಈ ವರ್ಷ ಚೋಟೆ ನವಾಬ್ ಸೈಫ್ ಅಲಿ ಖಾನ್‌ರ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು ಕೇವಲ ಒಂದು ಚಿತ್ರ ಯಶಸ್ವಿಯೆನಿಸಿದೆ. ವರ್ಷದ ಮೊದಲ ಬಿಡುಗಡೆ ರೇಸ್ ವರ್ಷದ ಅತಿ ದೊಡ್ಡ ಹಿಟ್‌ಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ತಶಾನ್, ತೋಡಾ ಪ್ಯಾರ್ ತೋಡಾ ಮ್ಯಾಜಿಕ್ ಮತ್ತು ಅವರು ಧ್ವನಿ ನೀಡಿದ್ದ ರೋಡ್‌ಸೈಡ್ ರೋಮಿಯೊ ಚಿತ್ರಗಳು ಸೋತಿವೆ. ಈ ವರ್ಷ ಚೋಟೆ ನವಾಬ್ ಕರೀನಾ ಕಪೂರ್‌ರೊಂದಿಗೆ ಡೇಟಿಂಗ್ ಆರಂಭಿಸಿದ್ದು ತಮ್ಮ ಚಿತ್ರಗಳಿಗಿಂತ ಕರೀನಾ ಹೋದೆಲ್ಲೆಲ್ಲಾ ವಿಶ್ವಪರ್ಯಟನೆ ಮಾಡಿ, ಕೈಯಲ್ಲಿ ಬೆಬೊ ಟ್ಯಾಟು ಅಂಟಿಸಿಕೊಂಡು ನಲವತ್ತರಂಚಿನ ಹುಚ್ಚು ಪ್ರೀತಿ ಮೆರೆದು ಸುದ್ದಿಯಲ್ಲಿದ್ದುದೇ ಹೆಚ್ಚು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಅಮಿತಾಬ್ ಬಚ್ಚನ್: </font><font style=' color:#000000;'></b>ಈ ವರ್ಷ ಬಿಡುಗಡೆ ಕಂಡ ಅಮಿತಾಬ್ ಬಚ್ಚನ್  ಚಿತ್ರಗಳು ಭೂತನಾಥ್, ಗಾಡ್ ತೂಸಿ ಗ್ರೇಟ್ ಹೊ, ದ ಲಾಸ್ಟ್ ಲಿಯರ್, ಸರಕಾರ್ ರಾಜ್. ಈ ವರ್ಷ ಅವರು ಭೂತವೂ ಆದರು ಮತ್ತು ದೇವರೂ ಆದರು ಆದರೆ ಎರಡೂ ಯಶಸ್ಸು ತರಲಿಲ್ಲ. ದ ಲಾಸ್ಟ್ ಲೀಯರ್ ಚಿತ್ರದಲ್ಲಿ ಅವರ ಅಭಿನಯದ ಬಗ್ಗೆ ಉತ್ತಮ ಮಾತುಗಳು ಎಲ್ಲೆಡೆಯಿಂದ ಕೇಳಿಬಂದವು. ಈ ವರ್ಷದ ಅವರ ಏಕೈಕ ಸಫಲ ಚಿತ್ರ ಸರಕಾರ್ ರಾಜ್. ಈ ನಡುವೆ ಬಿಗ್ ಬಿ ತಮ್ಮ ಹುಟ್ಟುಹಬ್ಬದ ದಿನವೇ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದರು. </font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಜಾನ್ ಅಬ್ರಹಾಂ: </font><font style=' color:#000000;'></b>ಈ ವರ್ಷ ಬಿಡುಗಡೆಯಾದ ಜಾನ್‌ರ ಏಕೈಕ ಚಿತ್ರ ದೋಸ್ತಾನ. ಕೆಲವು ಚಿತ್ರಗಳಲ್ಲಿ ನಾಯಕಿಯರನ್ನು ದೇಹಪ್ರದರ್ಶನಕ್ಕೆಂದೇ ಬಳಸಿಕೊಳ್ಳುವುದುಂಟು ಆದರೆ ಈ ಚಿತ್ರದಲ್ಲಿ ನಾಯಕಿ ಪ್ರಿಯಾಂಕ ಜೊತೆ ಅಂಗಪ್ರದರ್ಶನದ ಸ್ಪರ್ಧೆಗೆ ನಿಂತ ಜಾನ್, ಗೆದ್ದಿದ್ದಾರೆ ಎಂದೇ ಹೇಳಬಹುದು. ಚಿತ್ರ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಹಿಟ್ ಎನಿಸಿದೆ. </font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_2_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಅಜಯ್ ದೇವಗನ್: </font><font style=' color:#000000;'></b>ಈ ವರ್ಷ ಅಜಯ್ ದೇವಗನ್‌ ನಟಿಸಿದ ಆರು ಚಿತ್ರಗಳು ಬಿಡುಗಡೆಯಾಗಿದ್ದರೂ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಗೋಲ್‍‌ಮಾಲ್ ರಿಟರ್ನ್ಸ ಚಿತ್ರ ಮಾತ್ರವೇ ಯಶಸ್ವಿಯಾಗಿದೆ. ಉಳಿದಂತೆ ಹಲ್ಲಾ ಬೋಲ್, ಸಂಡೇ, ಮೆಹಬೂಬಾ ಮತ್ತು ನಾಮ್ ಚಿತ್ರಗಳು ಸೋತಿವೆ.  ಪತ್ನಿ ಕಾಜೋಲ್‌ರೊಂದಿಗಿನ ಅಜಯ್‌ರ ಪ್ರಥಮ ನಿರ್ದೇಶನದ ಚಿತ್ರ ಯು ಮಿ ಔರ್ ಹಮ್ ಬಾಕ್ಸ್ ಅಫೀಸನಲ್ಲಿ ತಕ್ಕಮಟ್ಟಿನ ವ್ಯವಹಾರ ನಡೆಸಿದೆ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_2_5.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ರಣ್‌ಬೀರ್ ಕಪೂರ್: </font><font style=' color:#000000;'></b>ಕಳೆದ ವರ್ಷ ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ರಣ್‌ಬೀರ್ ಕಪೂರ್‌ರೆಡೆಗೆ ಚೊಚ್ಚಲ ಚಿತ್ರ ಬಾಕ್ಸ್ ಅಫೀಸನಲ್ಲಿ ಸೋತರು, ಅವರ ಅಭಿನಯಕ್ಕೆ 2008ರಲ್ಲಿ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂತು. ಈ ವರ್ಷ ರಣ್‌ಬೀರ್‌ರ ಎರಡನೇ ಚಿತ್ರ ಬಚನಾ ಎ ಹಸೀನೊ ಚಿತ್ರ ಬಾಕ್ಸ್ ಅಫೀಸಿನಲ್ಲಿ ಗೆದ್ದಿದೆ. ಜೊತೆಗೆ ಕ್ರಿಕೆಟಿಗರನ್ನೆಲ್ಲಾ 'ಡ್ರಾಪ್' ಮಾಡಿರುವ ದೀಪಿಕಾ ಪಡುಕೋಣೆ ರಣ್‌ಬೀರ್ ತೆಕ್ಕೆ ಸೇರಿದ್ದಾರೆ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/30/images/img1081230004_2_6.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#0000FF'><b>ಇಮ್ರಾನ್ ಖಾನ್: </font><font style=' color:#000000;'></b>ಸೂಪರ್ ಸ್ಟಾರ್ ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ಜಾನೆ ತೂ ಯಾ ಜಾನೆ ನಾ ಎಂಬ ಅತ್ಯಂತ ಯಶಸ್ವಿ ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಜೆನಿಲಿಯಾ ಡಿಸೋಜಾ ನಾಯಕಿಯಾಗಿದ್ದ ಈ ಚಿತ್ರ ದೇಶವಿದೇಶಗಳಲ್ಲಿ ಯಶಸ್ವಿಯಾಗಿತ್ತು. ನಂತರ ಚಿತ್ರ ಕಿಡ್ನಾಪ್‌ನಲ್ಲಿ ಇಮ್ರಾನ್ ವಿಲನ್ ಪಾತ್ರದಲ್ಲಿ ನಟಿಸಿದರು. ಕಿಡ್ನಾಪ್ ಬಾಕ್ಸ್ ಅಫೀಸ್‌‌ನಲ್ಲಿ ಸೋಲೊಪ್ಪಿತು. ಚಿತ್ರ ವಿಮರ್ಶಕ ತರಾನ್ ಆದರ್ಶ್ ಕಿಡ್ನಾಪ್ 2008ರ ಅತಿ ಕೆಟ್ಟ ಚಿತ್ರಗಳೊಂದು ಎಂದು ವಿಮರ್ಶಿಸಿದರು ಆದರೆ ಇಮ್ರಾನ್ ನಟನೆಯನ್ನು ಪ್ರಶಂಸಿದರು.</font>]]></content:encoded>
      <pubDate>Sat, 03 Jan 2009 20:39:38 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಎದ್ದು ಬಿದ್ದ ಬಾಲಿವುಡ್ ನಾಯಕಿಯರಾರು?]]></title>
      <link>https://kannada.webdunia.com/article/retrospection-08/ಎದ್ದು-ಬಿದ್ದ-ಬಾಲಿವುಡ್-ನಾಯಕಿಯರಾರು-108122700044_1.htm</link>
      <guid>https://kannada.webdunia.com/article/retrospection-08/ಎದ್ದು-ಬಿದ್ದ-ಬಾಲಿವುಡ್-ನಾಯಕಿಯರಾರು-108122700044_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1592277463-3911.jpg</image>
      <description><![CDATA[2008ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ನೋಟ ನೀಮಗಾಗಿ.]]></description>
      <content:encoded><![CDATA[2008<font  style='font-size:11pt; color:#000000'>ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ನೋಟ ನೀಮಗಾಗಿ.</font><font style='font-size:12pt;'></font><br/> <font  style='font-size:11pt; color:#0000FF'>ಕತ್ರಿನಾ ಕೈಫ್ : </font><font style='font-size:12pt; color:#000000;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/27/images/img1081227044_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಲಂಡನ್ ಮೂಲದ ಕತ್ರಿನಾ ಬಾಲಿವುಡ್ ರಾಣಿಯಾಗಿ ಮೆರೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಕಳೆದ ವರ್ಷದ ಪಾಟನರ್, ವೆಲ್‌ಕಂ, ನಮಸ್ತೆ ಲಂಡನ್ ಮುಂತಾದ ಹಿಟ್ ಚಿತ್ರಗಳ ಪಟ್ಟಿಯನ್ನು 2008ರಲ್ಲೂ ಮುಂದುವರೆಸಿದ ಕತ್ರಿನಾ ವರ್ಷದ ಅತಿ ದೊಡ್ಡ ಹಿಟ್ ಆಗಿ ಮೊದಲನೇ ಸ್ಥಾನದಲ್ಲಿರುವ ಸಿಂಗ್ ಈಸ್ ಕಿಂಗ್ ಮತ್ತು ಎರಡನೇ ಸ್ಥಾನದಲ್ಲಿರುವ ರೇಸ್‌ನಲ್ಲಿ ನಟಿಸಿದ್ದಾರೆ. ಆದರೆ ರಿಯಲ್ ಲೈಫ್ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರೊಂದಿಗೆ ಅವರು ನಟಿಸಿದ ಯುವರಾಜ್ ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ಗೆಲ್ಲುವುದಕ್ಕೆ ವಿಫಲವಾಯಿತು. ಅಲ್ಲದೇ ಈ ವರ್ಷ ಕತ್ರಿನಾರಿಗೆ ಹಲವಾರು ಪ್ರಶಸ್ತಿಗಳೂ ಒಲಿದಿವೆ. ಎಫ್‌ಎಚ್ಎಂನ ಪೋಲ್‌ನಲ್ಲಿ ವಿಶ್ವದಲ್ಲಿ ಭಾರತದ ಸೆಕ್ಸಿ ಮಹಿಳೆಯರ ಪಟ್ಟಿಯಲ್ಲಿ ಕತ್ರಿನಾರಿಗೆ ಮೊದಲ ಸ್ಥಾನ. ಸಿನಿ ಝಿ ಅವಾರ್ಡ್‌ನಲ್ಲಿ ಬ್ರಿಟಿಷ್-ಇಂಡಿಯನ್ ಆಕ್ಟರ್ ಪ್ರಶಸ್ತಿ ಮತ್ತು ಐಐಎಫ್‌ಎ ಅವಾರ್ಡ್‌ನಲ್ಲಿ ಬೆಸ್ಟ್ ಫೀಮೇಲ್ ಸ್ಟೈಲ್ ಐಕಾನ್ ಪ್ರಶಸ್ತಿಗಳು ಕತ್ರಿನಾರ ಗರಿಮೆ ಹೆಚ್ಚಿಸಿವೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಪ್ರಿಯಾಂಕ ಚೋಪ್ರಾ: <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/27/images/img1081227044_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></font><br/><font  style='font-size:11pt; color:#000000'>ಪ್ರಿಯಾಂಕರಿಗೆ 2008ರ ಆರಂಭದ ದಿನಗಳು ಕಹಿ ಎನಿಸಿದರೆ, ಕೊನೆಯ ದಿನಗಳು ಯಶಸ್ಸಿನ ಉತ್ತುಂಗಕ್ಕೇರಿಸಿವೆ. ಮೈ ನೇಮ್ ಈಸ್ ಅಂತೋನಿ ಗಾನ್‌ಸಾಲ್ವೆಸ್, ಲವ್‌ಸ್ಟೋರಿ 2050, ಗಾಡ್ ತೂಸಿ ಗ್ರೇಟ್ ಹೊ, ಚಮಕು, ದ್ರೋಣ, ಫ್ಯಾಶನ್ ಮತ್ತು ದೋಸ್ತಾನ ಪ್ರಿಯಾಂಕರ ಈ ವರ್ಷದ ಬಿಡುಗಡೆಗಳು. ಇವುಗಳಲ್ಲಿ ಫ್ಯಾಶನ್ ಮತ್ತು ದೋಸ್ತಾನ ಅದ್ಭುತ ಯಶಸ್ಸು ಕಂಡರೆ ಉಳಿದೆಲ್ಲಾ ಚಿತ್ರಗಳು ತೋಪಾದವು. ಫ್ಯಾಶನ್ ಚಿತ್ರದಲ್ಲಿ ಪ್ರಿಯಾಂಕರ ಅಭಿನಯ ಕಲೆ ಹೊರಸೂಸಿದರೆ, ದೋಸ್ತಾನ ಚಿತ್ರದಲ್ಲಿ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡರು. ಈ ನಡುವೆ ಲವ್‌ಸ್ಟೋರಿ 2050ಯಲ್ಲಿ ಪ್ರಿಯಾಂಕ ಎದುರು ನಾಯಕರಾಗಿ ಬಾಲಿವುಡ್ ಡೆಬ್ಯೂಟ್ ಮಾಡಿದ ಹರ್‌ಮಾನ್‌ ಬೆವಜಾ ಜೊತೆ ಪ್ರಿಯಾಂಕ ಅಫೇರ್ ಹೊಂದಿರುವುದಾಗಿಯೂ ಗುಸುಗುಸು ಕೇಳಿಬಂದಿತ್ತು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಕರೀನಾ ಕಪೂರ್: </font><font style='font-size:12pt; color:#000000;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/27/images/img1081227044_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಕಳೆದ ವರ್ಷ ಜಬ್ ವಿ ಮೆಟ್ ಮತ್ತು ಶಾಹಿದ್‌ ಕಪೂರ್‌ಗೆ ಕೈ ಕೊಟ್ಟು ಸುದ್ದಿ ಮಾಡಿದ್ದ ಕರೀನಾ ಕಪೂರ್ 2008ರಲ್ಲಿ ತಮ್ಮ ಚಿತ್ರಗಳಿಗಿಂತ ಸೈಫ್ ಅಲಿಖಾನ್ ಕೈ ಹಿಡಿದುಕೊಂಡು ಸುತ್ತುವುದರ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದರು. ಈ ಬಾರಿ ಬಹುತಾರಗಣ ಚಿತ್ರ ಗೋಲ್‌ಮಾಲ್ ರಿಟರ್ನ್ಸ್ ಬಿಟ್ಟರೆ ಹೇಳಿಕೊಳ್ಳವಂತಹ ಯಶಸ್ಸೇನು ಕರೀನಾಗೆ ಒಲಿದಿಲ್ಲ. ತನ್ನ ಒಲವಿನರಸ ಸೈಫ್ ಜೊತೆ ಅವರು ನಟಿಸಿದ ತಶಾನ್ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಈ ವರ್ಷ ಅವರು ನಟಿಸಿದ ಹಲ್ಲಾ ಬೋಲ್ ಮತ್ತು ರೋಡ್‌ಸೈಡ್ ರೋಮಿಯೊ(ಅನಿಮೇಟೆಡ್ ಚಿತ್ರ, ಧ್ವನಿ ನೀಡಿದ್ದರು) ಸಹ ನೆಲಕಚ್ಚಿದವು. ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದರೂ ಕರೀನಾ ಈಗಲೂ ನಿರ್ಮಾಪಕರ ನೆಚ್ಚಿನ ಆಯ್ಕೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಐಶ್ವರ್ಯಾ ರೈ:<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/27/images/img1081227044_1_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></font><br/> 2008<font  style='font-size:11pt; color:#000000'>ರ ವರ್ಷದಲ್ಲಿ ಐಶ್ವರ್ಯ ರೈ ಬಚ್ಚನ್ ನಟಿಸಿದ ಎರಡು ಚಿತ್ರಗಳಷ್ಟೇ ಬಿಡುಗಡೆಯಾಗಿದ್ದು, ಎರಡೂ ಹಿಟ್ ಎನಿಸಿಕೊಂಡಿವೆ. ಜೋಧಾ ಅಕ್ಬರ್‌ ಚಿತ್ರದಲ್ಲಿ ರಜಪೂತ್ ರಾಜಕುಮಾರಿಯ ಪಾತ್ರಕ್ಕೆ ಐಶ್ವರ್ಯ ತಮ್ಮ ನಟನೆ, ಗಾಂಭಿರ್ಯ ಮತ್ತು ಪಾತ್ರಕ್ಕೆ ತಕ್ಕಂತಹ ಸ್ವರಮಾಧುರ್ಯದೊಂದಿಗೆ ಜೀವತುಂಬಿದ್ದರು. ಸರಕಾರ್ ರಾಜ್‌ನಲ್ಲಿ ಮಾವ ಅಮಿತಾಭ್ ಬಚ್ಚನ್ ಮತ್ತು ಪತಿ ಅಭಿಷೇಕ್ ಜೊತೆ ಕಾಣಿಸಿಕೊಂಡರು. ಬಿಗ್ ಬಿ ಕುಟುಂಬ ವಲ್ಡ್ ಟೂರ್ ವಿಷಯದಲ್ಲೂ ಸಾಕಷ್ಟು ಸುದ್ದಿಯಲ್ಲಿತ್ತು. 2007ರಲ್ಲಿ ಜೂನಿಯರ್ ಬಿಯನ್ನು ವರಿಸಿ ಬಚ್ಚನ್ ಕುಟುಂಬ ಸೇರಿದ್ದ ಐಶ್ವರ್ಯ ಬಗ್ಗೆ ಜಯಾ ಮತ್ತು ಅಮಿತಾಬ್ ಹೊಗಳಿಕೆಯ ಹೊಳೆ ಹರಿಸುತ್ತಾರೆ. ಅತ್ತೆ-ಮಾವನ ಮುದ್ದಿನ ಸೊಸೆಯೆನಿಸಿರುವ ಐಶ್ ಚಿತ್ರರಂಗದಲ್ಲೂ ಗೆಲುವಿನ ನಗೆ ಬೀರುವುದನ್ನು ಮುಂದುವರೆಸಿದ್ದಾರೆ.</font><br/></font><font  style='font-size:11pt; color:#0000FF'>ಕಂಗನಾ ರಾಣವತ್: </font><font style='font-size:12pt; color:#000000;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/27/images/img1081227044_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> 2008<font  style='font-size:11pt; color:#000000'>ರಲ್ಲಿ ಬಿಡುಗಡೆಯಾದ ಕಂಗಾನಾರ ಏಕೈಕ ಚಿತ್ರ ಫ್ಯಾಶನ್. ಈ ಚಿತ್ರದಲ್ಲಿ ಕಂಗಾನಾ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ನಡುವೆ ತಮಿಳುನಲ್ಲಿ ಕಾಣಿಸಿಕೊಂಡ ಅವರು ಧಾಮ್‌ಧೂಮ್ ಎಂಬ ಚಿತ್ರದಲ್ಲಿ ನಟಿಸಿದರು, ಈ ಚಿತ್ರವೂ ಹಿಟ್ ಎನಿಸಿಕೊಂಡಿದೆ. ನಟಿಸಿದ ಎರಡೂ ಚಿತ್ರಗಳೂ ಹಿಟ್ ಎನಿಸುವ ಮೂಲಕ ಕಂಗಾನಾಗಿದು ಯಶಸ್ವಿ ವರ್ಷ. ಈ ನಡುವೆ ಕಂಗನಾ ಪ್ರಸ್ತುತ ಚಿತ್ರೀಕರಣ ನಿರತರಾಗಿರುವ ರಾಜ್-ದ ಮಿಸ್ಟರಿ ಕಂಟಿನ್ಯೂಸ್ ಚಿತ್ರದ ನಾಯಕರಲ್ಲಿ ಒಬ್ಬರಾದ, ಈ ಹಿಂದೆ ಹಾಲೆ ದಿಲ್ ಚಿತ್ರದಲ್ಲಿ ನಟಿಸಿದ್ದ ಅಧ್ಯಯನ ಸುಮನ್ ಎಂಬ ನಟನೊಂದಿಗೆ ಕಂಗನಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ವಿದ್ಯಾ ಬಾಲನ್ :<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/27/images/img1081227044_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></font><br/> <font  style='font-size:11pt; color:#000000'>ವಿದ್ಯಾ ಬಾಲನ್‌ ಈ ವರ್ಷ ನಟಿಸಿದ ಎರಡು ಚಿತ್ರಗಳು ಹಲ್ಲಾ ಬೋಲ್ ಮತ್ತು ಕಿಸ್ಮತ್ ಕೊನೆಕ್ಷನ್. ಆದರೆ ಈ ಎರಡೂ ಚಿತ್ರಗಳೂ ಬಾಕ್ಸ್‌ ಅಫೀಸ್‌ನಲ್ಲಿ ಸೋತಿವೆ. ಕಿಸ್ಮಕ್ ಕೊನೆಕ್ಷನ್, ವಿದ್ಯಾ ಎದುರು ನಾಯಕನಾಗಿದ್ದ ಭಗ್ನಪ್ರೇಮಿ ಶಾಹಿದ್ ಕಪೂರ್ ಜೊತೆ ವಿದ್ಯಾ ಹೆಸರು ಕೇಳಿಬಂದಿತ್ತು. ಆದರೆ ವಿದ್ಯಾ ನಟಿಸಿದ ಹೆಚ್ಚಿನ ಎಲ್ಲಾ ನಾಯಕ ನಟರ ಜೊತೆ ಅವರ ಹೆಸರು ಕೇಳಿಬಂದಿರುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ದೀಪಿಕಾ ಪಡುಕೋಣೆ: </font><font style='font-size:12pt; color:#000000;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/27/images/img1081227044_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಓಂ ಶಾಂತಿ ಓಂ ಹುಡುಗಿ ದೀಪಿಕಾ ಪಡುಕೋಣೆಗೆ 2007ರ ಡೆಬ್ಯೂಟ್ ಚಿತ್ರಕ್ಕಾಗಿ ಪ್ರಶಸ್ತಿಗಳ ಮಹಾಪೂರವೇ 2008ರಲ್ಲಿ ಹರಿದು ಬಂತು. ಜೊತೆಗೆ ಅವರು ನಟಿಸಿದ ಬಚನಾ ಎ ಹಸೀನೊ ಚಿತ್ರ ಸಹ ಹಿಟ್ ಎನಿಸಿದೆ. ಬಚ್‌ನಾ ನಾಯಕ ರಣ್‌ಬೀರ್ ಕಪೂರ್‌ರೊಂದಿಗೆ ದೀಪಿಕಾ ಅಫೇರ್ ಹೊಂದಿದ್ದಾರೆ. ಇದೇ ವಿಷಯಕ್ಕೆ ಹೆಚ್ಚು ಸುದ್ದಿಯಲ್ಲಿದ್ದರು.  </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ರಾಣಿ ಮುಖರ್ಜಿ : <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/27/images/img1081227044_2_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></font><br/><font  style='font-size:11pt; color:#000000'>ಬಾಲಿವುಡ್ ಮೇಲೆ ರಾಣಿ ರಾಜ್ಯಭಾರ ಕೊನೆಗೊಂಡಿದೆ. ಈ ವರ್ಷದ ಅವರ ಬಿಡುಗಡೆ ತೋಡಾ ಪ್ಯಾರ್ ತೋಡಾ ಮ್ಯಾಜಿಕ್ ಯಶಸ್ವಿಯಾಗಲಿಲ್ಲ. ರಾಣಿ ಅಷ್ಟರ ಮಟ್ಟಿಗೆ ಪ್ರಚಾರದಲ್ಲೂ ಇಲ್ಲ. ಪ್ರಸ್ತುತ ಶಾಹಿದ್‌ರೊಂದಿಗಿನ ಚಿತ್ರವೊಂದರ ಚಿತ್ರೀಕರಣದಲ್ಲಿ ರಾಣಿ ನಿರತರಾಗಿದ್ದಾರೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಬಿಪಾಶ ಬಸು : </font><font style='font-size:12pt; color:#000000;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/27/images/img1081227044_2_5.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಬಿಪಾಶ ಈ ವರ್ಷ ಎರಡು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ರೇಸ್' ಮತ್ತು 'ಬಚನಾ ಎ ಹಸೀನೊ' ಈ ಎರಡೂ ಚಿತ್ರಗಳೂ ಬಹುತಾರಾಗಣ ಚಿತ್ರಗಳಾಗಿದ್ದರೂ ಬಿಪಾಶಗೆ ಉತ್ತಮ ಪಾತ್ರವಿದ್ದು ತಮ್ಮದೇ ಛಾಪು ಮೂಡಿಸುವಲ್ಲಿ ಅವರು ಯಶಸ್ವಿಯೆನಿಸಿದ್ದಾರೆ. ಬಹುಸಮಯದ ಗೆಳೆಯ ಜಾನ್‌ರೊಂದಿಗಿನ ಸಂಬಂಧವೂ ಮುಂದುವರೆದಿದೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಮಿನಿಶಾ ಲಾಂಬ: <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/27/images/img1081227044_2_6.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></font><br/><font  style='font-size:11pt; color:#000000'>ಮಿನಿಶಾ ಲಾಂಬ ಬಾಲಿವುಡ್‌ನಲ್ಲಿ ಗುರುತಿಸಲ್ಪಟ್ಟಿದ್ದು ಈ ವರ್ಷ(2008).  ವರ್ಷಾರಂಭದಲ್ಲಿ ಶೌರ್ಯ ಮತ್ತು ಅನಾಮಿಕ ಚಿತ್ರಗಳಲ್ಲಿ ಮಿನಿಶಾ ನಟಿಸಿದ್ದು ಈ ಚಿತ್ರಗಳಲ್ಲಿ ಮಿನಿಶಾರಿಗೆ ಹೇಳಿಕೊಳ್ಳುವಂತಹ ಪಾತ್ರವಿರಲಿಲ್ಲ. ಶೌರ್ಯ ಚಿತ್ರ ಬಾಕ್ಸ್‌ ಅಫೀಸ್‌ನಲ್ಲಿ ಸಾಧಾರಣ ಮಟ್ಟಿನ ಯಶಸ್ಸು ಗಳಿಸಿತು. ಆದರೆ ಮಿನಿಶಾ ಹೆಸರು ಹೆಚ್ಚು ಚಾಲ್ತಿಗೆ ಬಂದಿದ್ದು ಬಚನಾ ಎ ಹಸಿನೊ ಮತ್ತು ಕಿಡ್ನಾಪ್ ಚಿತ್ರಗಳ ಮೂಲಕ. ಬಚನಾ ಚಿತ್ರ ಹಿಟ್ ಎನಿಸಿಕೊಂಡಿತು, ಕಿಡ್ನಾಪ್ ಸೋತರು ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡ ಮಿನಿಶಾ ಸುದ್ದಿ ಮಾಡಿದರು. </font><br/></font>]]></content:encoded>
      <pubDate>Sat, 27 Dec 2008 18:30:34 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ]]></title>
      <link>https://kannada.webdunia.com/article/retrospection-08/75ರ-ಸಂಭ್ರಮದಲ್ಲಿ-ಕನ್ನಡ-ಚಿತ್ರರಂಗ-2008ರಲ್ಲಿ-ಗಣನೀಯ-ವೃದ್ಧಿ-108122600063_1.htm</link>
      <guid>https://kannada.webdunia.com/article/retrospection-08/75ರ-ಸಂಭ್ರಮದಲ್ಲಿ-ಕನ್ನಡ-ಚಿತ್ರರಂಗ-2008ರಲ್ಲಿ-ಗಣನೀಯ-ವೃದ್ಧಿ-108122600063_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1592277463-3911.jpg</image>
      <description><![CDATA[ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ಸ್ಪರ್ಧೆಯ ನಡುವೆಯೂ ಇತರ ಚಿತ್ರರಂಗ ಗುರುತಿಸುವ ರೀತಿಯಲ್ಲಿ ಬೆಳೆದಿದೆ. ಕೆಲವೇ ಕೆಲವು ನಟರು ವರ್ಷಾನುಗಟ್ಟಲೆ ಚಾಲ್ತಿಯಲ್ಲಿರುವ ಪದ್ಧತಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಮನಸ್ಥಿತಿಯೂ ...]]></description>
      <content:encoded><![CDATA[<font  style='font-size:11pt; color:#0000FF'><b>ರವಿಪ್ರಕಾಶ್ ರೈ   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226063_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> <font  style='font-size:11pt; color:#000000'>ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ಸ್ಪರ್ಧೆಯ ನಡುವೆಯೂ ಇತರ ಚಿತ್ರರಂಗ ಗುರುತಿಸುವ ರೀತಿಯಲ್ಲಿ ಬೆಳೆದಿದೆ. ಕೆಲವೇ ಕೆಲವು ನಟರು ವರ್ಷಾನುಗಟ್ಟಲೆ ಚಾಲ್ತಿಯಲ್ಲಿರುವ ಪದ್ಧತಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಮನಸ್ಥಿತಿಯೂ ಬದಲಾಗಿದೆ. ಪ್ರೇಕ್ಷಕ ಈಗ ಬರೀ ನಾಯಕನನ್ನು ಆರಾಧಿಸುವುದಿಲ್ಲ. ಬದಲಾಗಿ ಉತ್ತಮ ಚಿತ್ರಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾನೆ. ತನ್ನ ನೆಚ್ಚಿನ ನಟನೇ ಆಗಿರಬಹುದು. ಆತನ ಚಿತ್ರ ಚೆನ್ನಾಗಿಲ್ಲವೆಂದರೆ ಪ್ರೇಕ್ಷಕನ ನಿಯತ್ತು ಬದಲಾಗುತ್ತದೆ. ಹಿಂದಿನಂತೆ ಒಬ್ಬ ನಟನಿಗೆ ನಿಯತ್ತಾಗಿರುವ ಪ್ರೇಕ್ಷಕ ಕಡಿಮೆಯಾಗಿದ್ದಾನೆ. ಒಂದು ಲೆಕ್ಕದಲ್ಲಿ ಇದು ಉತ್ತಮ ಬೆಳವಣಿಗೆ. ಇದರಿಂದ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. </font><br/><font  style='font-size:11pt; color:#000000'></font><br/>2008 <font  style='font-size:11pt; color:#000000'>ವರ್ಷ ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವರ್ಷ ಎಂದರೆ ತಪ್ಪಾಗದು. ಅತಿ ಹೆಚ್ಚು ಚಿತ್ರ ಬಿಡುಗಡೆಯಾಗುವುದರೊಂದಿಗೆ ಅನೇಕ ಹೊಸ ಮುಖಗಳು ಕೂಡಾ ಬೆಳಕಿಗೆ ಬಂದಿದ್ದು, ಇದೇ ವರ್ಷದಲ್ಲಿ. ಇಲ್ಲಿಯವರೆಗೆ ಸುಮಾರು 120 ಕನ್ನಡದಲ್ಲಿ ಚಿತ್ರಗಳು ಬಿಡುಗಡೆಯಾಗಿವೆ. ಇನ್ನಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಇವುಗಳಲ್ಲಿ ಹೊಸ ಹೊಸ ಪ್ರತಿಭೆಗಳದ್ದೆ ಕಾರುಬಾರು. ಹಾಗಾಂತ ಬಿಡುಗಡೆಯಾದ ಚಿತ್ರಗಳು ಹಿಟ್ ಆಗಿವೆ ಎನ್ನುವಂತಿಲ್ಲ. ಇದರಲ್ಲಿ ಹೆಚ್ಚಿನ ಚಿತ್ರಗಳು ಎಡ್ರಸ್ ಇಲ್ಲದೇ ಹೋಗಿವೆ. ಇನ್ನೂ ಕೆಲವು ಕುಂಟುತ್ತಾ 50 ದಿನ ಪೂರೈಸಿವೆ. ಆದರೆ, ಇವೆಲ್ಲ ಉತ್ತಮ ಚಿತ್ರ ಎನ್ನುವಂತಿಲ್ಲ. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226063_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> </font><br/> <font  style='font-size:11pt; color:#000000'></font><br/><font  style='font-size:11pt; color:#000000'>ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಚಿತ್ರಗಳು ಬರಲು ಅದರಲ್ಲೂ ಹೊಸಬರ ಚಿತ್ರಗಳೇ ಹೆಚ್ಚು ಬರಲು ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್ ಆಫೀಸನ್ನೂ ಕೊಳ್ಳೆ ಹೊಡೆದ 'ಮುಂಗಾರು ಮಳೆ', 'ದುನಿಯಾ' ಹಾಗೂ 'ಆ ದಿನಗಳು' ಚಿತ್ರಗಳು ಪ್ರೇರಣೆಯಾಗಿವೆ ಎಂದರೆ ತಪ್ಪಲ್ಲ. ಟಿವಿ ನಿರೂಪಕನಾಗಿದ್ದ ಗಣೇಶ್ ನಟಿಸಿದ ಸಣ್ಣ ಬಜೆಟ್ನಲ್ಲಿ ನಿರ್ಮಾಣವಾದ 'ಮುಂಗಾರು ಮಳೆ' ಚಿತ್ರ ಆ ಪರಿ ಹಿಟ್ ಆಗುತ್ತದೆಂದು ಸ್ವತಃ ನಿರ್ದೇಶಕ ಯೋಗರಾಜ್ ಭಟ್‌ರಿಗೂ ಗೊತ್ತಿರಲಿಲ್ಲ. ಆದರೆ ಈ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಣೇಶ್ ಗೋಲ್ಡನ್ ಸ್ಟಾರ್ ಎಂಬ ಬಿರುದು ಪಡೆಯುವುದರೊಂದಿಗೆ ರಾತ್ರೋರಾತ್ರಿ ಕೋಟಿ ವೀರರಾದರು. ಆ ನಂತರ ಏನಾಯಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದೇ ರೀತಿ ದುನಿಯಾ ಹಾಗೂ ಆ ದಿನಗಳು ಕೂಡಾ ಅಷ್ಟೇ. ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಹಾಗೂ ಏಕಾಏಕಿ ಅಮೆರಿಕಾದಿಂದ ಹಾರಿ ಬಂದು ಆ ದಿನಗಳು ಚಿತ್ರದಲ್ಲಿ ನಟಿಸಿದ ಚೇತನ್ ಚಿತ್ರಗಳು ಭರ್ಜರಿ ಹಿಟ್ ಆಗುವುದರೊಂದಿಗೆ 2008 ರಲ್ಲಿ ಹೊಸ ಹೊಸ ನಿರ್ಮಾಪಕರು ಚಿತ್ರ ನಿರ್ಮಿಸಲು ಆಸಕ್ತಿ ತೋರಿದರು. ಆದರೆ ಇವರೆಲ್ಲಾ ತಮ್ಮ ಸಂಬಂಧಿಕರನ್ನೋ ಅಥವಾ ಮಗನನ್ನೋ ಹೀರೋ ಆಗಿಸಿ ಚಿತ್ರ ತೆಗೆದರು. ಆದರೆ ಇವರ್ಯಾರು ಕಥೆ ಬಗ್ಗೆ ಗಮನ ಕೊಡಲಿಲ್ಲ. ಬದಲಾಗಿ ತಾನೊಬ್ಬ ನಿರ್ಮಾಪಕನಾಗಬೇಕು ಅಥವಾ ನಿರ್ದೇಶಕನಾಗಬೇಕೆಂಬ ಆಸೆ ಹೊತ್ತು ಚಿತ್ರ ನಿರ್ಮಿಸಿದರು. ಪ್ರೇಕ್ಷಕ ಮಾತ್ರ ತುಂಬಾ ಬುದ್ಧಿವಂತ. ಇಂತಹ ಯಾವುದೇ ಡಬ್ಬಾ ಚಿತ್ರಗಳನ್ನು ಕೈ ಹಿಡಿಯಲಿಲ್ಲ. ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿದರು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226063_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> 2008<font  style='font-size:11pt; color:#000000'>ರಲ್ಲಿ ಬಂದ ಹೆಚ್ಚಿನ ಚಿತ್ರಗಳಲ್ಲಿ ಹೊಸಬರೇ ನಾಯಕ-ನಾಯಕಿಯಾಗಿದ್ದರು. ಆದರೆ ಇವರ್ಯಾರು ಶಾಸ್ತ್ರೋಕ್ತವಾಗಿ ಅಭಿನಯ ಕಲಿತು ಬಂದವರಲ್ಲ. ನಿರ್ದೇಶಕರ ವಿಷಯಕ್ಕೆ ಬಂದರೂ ಅಷ್ಟೇ, ಹೆಚ್ಚಿನವರು ಹೊಸಬರೇ. ಒಂದೆರಡು ವರ್ಷ ಸಹಾಯಕ ನಿರ್ದೇಶಕರಾಗಿ ಅಲ್ಪಸ್ವಲ್ಪ ಅನುಭವ ಪಡೆದು ನಿರ್ದೇಶಕರಾದವರು. ಇದರಿಂದ ಹೆಚ್ಚಿನ ಹೊಸ ಚಿತ್ರಗಳು ಮಕಾಡೆ ಮಲಗಿವೆ.</font><br/><font  style='font-size:11pt; color:#000000'></font><br/>2008<font  style='font-size:11pt; color:#000000'>ರಲ್ಲಿ ಬಿಡುಗಡೆಯಾದ ದೊಡ್ಡ ನಿರ್ದೇಶಕರ ಹಾಗೂ ನಟರ ಚಿತ್ರಗಳನ್ನು ಕೂಡಾ ಪ್ರೇಕ್ಷಕ ತಿರಸ್ಕರಿಸಿದ್ದಾನೆ. ಉದಾಹರಣೆಗೆ ದುನಿಯಾ ಚಿತ್ರದ ನಿರ್ದೇಶಕ ಸೂರಿ ನಿರ್ದೇಶಿಸಿದ 'ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ಸಾರಸಗಟಾಗಿ ಪ್ರೇಕ್ಷಕರು ತಿರಸ್ಕರಿಸಿದರು. ಸೂರಿ ಇಲ್ಲಿ ಚಿತ್ರದೊಳಗೆ ಇಡೀ ಬಾರನ್ನೇ ಎಳೆದು ತಂದಿದ್ದರು. ಇದು ಪ್ರೇಕ್ಷಕನಿಗೆ ಇಷ್ಟವಾಗಲಿಲ್ಲ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ 'ಬೊಂಬಾಟ್', ದರ್ಶನ್ ನಾಯಕರಾಗಿದ್ದ ಅರ್ಜುನ, ಇಂದ್ರ ಶಿವರಾಜ್ಕುಮಾರ್ ನಾಯಕರಾಗಿದ್ದ ಮಾದೇಶ ಚಿತ್ರಗಳು ವಾರದೊಳಗೆ ಚಿತ್ರಮಂದಿರದಿಂದ ಎತ್ತಂಗಡಿಯಾದವು. ಜನಾರ್ದನ ಮಹರ್ಷಿಯಿಂದ ಕಥೆ ಪಡೆದು ಬೇರೆ ಬೇರೆ ಭಾಷೆಗಳ ದೃಶ್ಯಗಳನ್ನು ಯಥಾವತ್ತಾಗಿ ನಿರ್ದೇಶಕ ಡಿ. ರಾಜೇಂದ್ರ ಬಾಬು ಬೊಂಬಾಟ್‌ನಲ್ಲಿ ಭಟ್ಟಿ ಇಳಿಸಿದ್ದರು. ಜೊತೆಗೆ ಗಣೇಶ್‌ರಿಂದ ಭರ್ಜರಿ ಫೈಟ್ ಮಾಡಿಸುವ ದುಸ್ಸಾಹಸಕ್ಕೂ ಕೈ ಹಾಕಿದರು. ಪ್ರೇಕ್ಷಕ ಇದನ್ನು ತಿರಸ್ಕರಿಸಿದ.</font><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226063_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage-->  <font  style='font-size:11pt; color:#000000'>ಗಾಳಿಪಟ, ಬುದ್ಧಿವಂತ, ನಂದ ಲವ್ಸ್ ನಂದಿತಾ, ತಾಜ್ಮಹಲ್, ಮೊಗ್ಗಿನ ಮನಸು, ಸತ್ಯ ಇನ್ ಲವ್, ಮುಸ್ಸಂಜೆ ಮಾತು ಹೀಗೆ ಕೆಲವು ಚಿತ್ರಗಳು 2008 ರಲ್ಲಿ  ಹಿಟ್ ಆಗಿ ಶತದಿನ ಆಚರಿಸಿವೆ. ಉಳಿದಂತೆ ಹೆಚ್ಚಿನ ಚಿತ್ರಗಳು ಕುಂಟುತ್ತಾ 50 ದಿನ ಪೂರೈಸಿವೆ. ಚೆಲುವಿನ ಚಿತ್ತಾರದ ಯಶಸ್ಸಿನ ನಂತರ ಎಸ್.ನಾರಾಯಣ್ ಅಮೂಲ್ಯಳ ಡಿಮ್ಯಾಂಡನ್ನು ಎನ್ಕ್ಯಾಶ್ ಮಾಡುವ ಪ್ರಯತ್ನವಾಗಿ ತಮ್ಮ ಮಗ ನಾಯಕನಾಗಿದ್ದ 'ಚೈತ್ರದ ಚಂದ್ರಮ' ತೆಗೆದರು. ಪ್ರೇಕ್ಷಕ ಇದನ್ನು ಜಾಡಿಸಿದ. </font><br/><font  style='font-size:11pt; color:#000000'></font><br/>2008<font  style='font-size:11pt; color:#000000'>ರಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಜಯಮಾಲಾ ಆಯ್ಕೆಯಾದರು. ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದು ಗಮನಾರ್ಹ ಅಂಶ. ಒಂದು ರೀತಿಯಲ್ಲಿ 2008 ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕೆ ಮುನ್ನಡಿ ಹಾಡಿದ ವರ್ಷ ಎಂದರೆ ತಪ್ಪಾಗಲಾರದು. ತಂತ್ರಜ್ಞಾನದ ಜೊತೆಗೆ ಹೊಸ ಥರದ ಕತೆಗಳು ಬರಲಾರಂಭಿಸಿದ್ದೂ ಇತ್ತೀಚಿನ ಆಹ್ಲಾದಕರ ಬೆಳವಣಿಗೆ. ಪ್ರೇಕ್ಷಕರು ಒಂದೇ ಥರದ ಕಥೆಗಳನ್ನು ಇಷ್ಟಪಡಲ್ಲ ಎಂದು ತಿಳಿದ ನಿರ್ದೇಶಕರು ಸ್ವಲ್ಪ ವಿಶಿಷ್ಟವಾದ ಕಥೆಗಳೊಂದಿಗೆ ಚಿತ್ರ ಮಾಡಲು ಮುಂದಾದರು. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226063_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಂಗಾರು ಮಳೆಯ ನಂತರ ಕನ್ನಡ ಚಿತ್ರರಂಗದಲ್ಲಿ ಅತ್ಯಾಧುನಿಕ ಎನ್ನುವಂತಹ ತಂತ್ರಜ್ಞಾನವನ್ನು ಬಳಸುವ ರೂಢಿ ಹೆಚ್ಚಾಯಿತು ಎಂದರೆ ತಪ್ಪಲ್ಲ. ಪರಭಾಷಾ ಚಿತ್ರಗಳ ದೃಶ್ಯಗಳನ್ನು ಕಂಡು ಬಾಯ್ತುಂಬ ಹೊಗಳುತ್ತಿದ್ದ ಪ್ರೇಕ್ಷಕ ಈಗ ಕನ್ನಡದಲ್ಲೂ ಅಂತಹ ಚಿತ್ರಗಳನ್ನು ನೋಡುವಂತಾಗಿದೆ. ಹಾಡುಗಳ ಚಿತ್ರೀಕರಣ, ದೃಶ್ಯ ಸಂಯೋಜನೆ, ಹಿನ್ನೆಲೆ ಸಂಗೀತ, ಸಂಕಲನ, ಸ್ಪೆಷಲ್ ಎಫೆಕ್ಟ್, ಡಿಟಿಎಸ್, ಡಿಜಿಟಲ್ ಇಂಟರ್ ಮೀಡಿಯೇಟ್ ಹಾಗೂ ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸುವ ಟ್ರೆಂಡ್ ಕನ್ನಡದಲ್ಲೂ ಹೆಚ್ಚಾಗಿದೆ. 'ಇಂತಿ ನಿನ್ನ ಪ್ರೀತಿಯ', 'ಗಜ', 'ಸೈಕೋ', 'ಮಿಲನ' ಚಿತ್ರಗಳು ವಿಶಿಷ್ಟ ತಂತ್ರಜ್ಞಾನ ಬಳಕೆಗೆ ಕೆಲವು ಉದಾಹರಣೆಗಳು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226063_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> <font  style='font-size:11pt; color:#000000'>ಕನ್ನಡ ಚಿತ್ರರಂಗದಲ್ಲಿ ಚಿತ್ರ ಸಾಹಿತಿಗಳಿಗೆ ಈ ವರ್ಷ ಹೆಚ್ಚು ಬೇಡಿಕೆ ಬಂದಿದೆ. ಮುಂಗಾರು ಮಳೆಗೆ ಹಿಟ್ ಹಾಡು ಬರೆದ ಜಯಂತ್ ಕಾಯ್ಕಿಣಿ ಚಿತ್ರ ಸಾಹಿತಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕವಿರಾಜ್ ಕೂಡಾ ಸದ್ಯ ಬೇಡಿಕೆಯಲ್ಲಿರುವರು. ಕನ್ನಡ ಚಿತ್ರಗಳಲ್ಲಿ ಈಗ ಹಾಡುಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಚಿತ್ರದ ಹಾಡು ಹಿಟ್ ಆದರೆ ಚಿತ್ರ ಹಿಟ್ ಆದಂತೆ ಎಂಬ ಭಾವನೆ ಗಾಂಧಿನಗರದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಉತ್ತಮವಾಗಿಯೇ ನಡೆದಿದೆ ಎನ್ನುವಂತಿಲ್ಲ. ಅನೇಕ ಮುನಿಸು, ಸಣ್ಣ ಪುಟ್ಟ ಪ್ರತಿಭಟನೆಗಳು ನಡೆದಿವೆ. ಕನ್ನಡದಲ್ಲಿ ಸೋನು ನಿಗಮ್, ಶಂಕರ್ ಮಹದೇವನ್ ಸೇರಿದಂತೆ ಪರಭಾಷಾ ಗಾಯಕರಿಗೆ ಬೇಡಿಕೆ ಹೆಚ್ಚಿದ್ದರಿಂದ ಕನ್ನಡದ ಗಾಯಕರಿಗೆ ಕೆಲಸ ಕಡಿಮೆಯಾಗಿದೆ. ಇದರಿಂದ ಅವರು ಸಿಟ್ಟಾಗಿ ಪ್ರತಿಭಟನೆಗೂ ಇಳಿದಿದ್ದಾರೆ. ಇದರಲ್ಲಿ ಗಾಯಕ ರಾಜೇಶ್ ಕೃಷ್ಣನ್ ತಮ್ಮ ಸಿಟ್ಟನ್ನು ಸ್ವಲ್ಪ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಆಡಿಯೋ ಕಂಪೆನಿಗಳು ಕೂಡಾ ಕನ್ನಡ ಗಾಯಕರು ಹಾಡಿದ್ದರೆ ಆ ಧ್ವನಿ ಸುರುಳಿಯ ಹಕ್ಕು ಪಡೆಯಲು ಹಿಂದೇಟು ಹಾಕುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪರಭಾಷಾ ನಟಿಯರ ಬಗ್ಗೆ ಅಸಮಾಧಾನ: <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226063_2_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> </font><br/><font  style='font-size:11pt; color:#000000'>ಮತ್ತೊಂದೆಡೆ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆ ತರುವುದರಿಂದ ಕನ್ನಡದ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಎಂಬ ಕೂಗು ಬಹು ಕಾಲದಿಂದಲೂ ಕೇಳಿ ಬರುತಿತ್ತು. ಆದರೆ 2008 ನೇ ವರ್ಷದಲ್ಲಿ ಇದು ಹೆಚ್ಚಾಗಿ ಕಂಡು ಬಂದಿದೆ. ಈ ವರ್ಷ ಬಿಡುಗಡೆಯಾದ ದೊಡ್ಡ ಸ್ಟಾರ್‌ಗಳ ಚಿತ್ರಗಳ ನಾಯಕಿಯರೆಲ್ಲ ಬೇರೆ ಭಾಷೆಯವರು. ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್, ದರ್ಶನ್ ಹೀಗೆ ದೊಡ್ಡ ನಟರ ಚಿತ್ರಗಳಿಗೆ ಬಾಲಿವುಡ್ ಅಥವಾ ಟಾಲಿವುಡ್ನಿಂದ ನಾಯಕಿಯರನ್ನು ಕರೆತರುತ್ತಿರುವುದು ಇಲ್ಲಿನ ನಾಯಕಿಯರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತೀಚೆಗೆ ತೆರೆಕಂಡ ಉಪೇಂದ್ರ ಅಭಿನಯದ ಬುದ್ಧಿವಂತ ಚಿತ್ರದಲ್ಲಿನ ಐದು ನಾಯಕಿಯರು ಕೂಡಾ ಪರಭಾಷಿಗರು. ಅಂತೆಯೇ ಸಂಗಮ, ರಾಜ್ ದಿ ಶೊ ಮ್ಯಾನ್, ಸರ್ಕಸ್, ಪರಮೇಶಿ ಪಾನ್ವಾಲಾ, ಮಳೆಯೂ ಬರಲಿ ಮಂಜು ಇರಲಿ, ಅರ್ಜುನ, ವಂಶಿ, ಹೊಡಿಮಗ, ಚೆಲುವೆಯೇ ನಿನ್ನ ನೋಡಲು, ಹೀಗೆ ಅನೇಕ ಚಿತ್ರಗಳಲ್ಲಿನ ನಾಯಕಿಯರೆಲ್ಲ ಬೇರೆ ಭಾಷಿಗರು. ಇದೇ ರೀತಿ ಟ್ರೆಂಡ್ ಮುಂದುವರಿದರೆ ನಾವು ಕೂಡಾ ಪರಭಾಷಾ ಚಿತ್ರಗಳತ್ತ ಹೆಚ್ಚು ಒಲವು ತೋರಿಸಬೇಕಾಗುತ್ತದೆ ಎಂದು ನಟಿ ನೀತು ಹಾಗೂ ಹರಿಪ್ರಿಯಾ ತಮ್ಮ ಅಸಮಾಧಾನವನ್ನು ಸಣ್ಣಗೆ ಹೊರ ಹಾಕಿದ್ದಾರೆ. ಕನ್ನಡದಲ್ಲಿ ರಮ್ಯಾ ಬಿಟ್ಟರೆ ಸೂಕ್ತ ನಾಯಕಿಯರಿಲ್ಲ ಎಂಬುದು ನಿರ್ಮಾಪಕರ ವಾದ. ಆದರೆ ಇದ್ದ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಕನ್ನಡದಲ್ಲಿ ಆಗುತ್ತಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪೈರಸಿ ಹಾವಳಿ: </font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226063_2_5.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> <font  style='font-size:11pt; color:#000000'>ಕನ್ನಡ ಚಿತ್ರರಂಗ ಎದುರಿಸುತ್ತಿರುವ ಮುಖ್ಯ ಸಮಸ್ಯೆ ಎಂದರೆ ಪೈರಸಿ ಹಾವಳಿ. ಹಿಂದಿನಿಂದಲೂ ಈ ಸಮಸ್ಯೆ ಕಾಡುತ್ತಿದ್ದರೂ ಈ ವರ್ಷ ಇದರ ವಿರುದ್ದ ಚಿತ್ರ ಮಂದಿ ಹೆಚ್ಚು ಹೋರಾಟ ನಡೆಸಿದ್ದಾರೆ. ನೆಲಮಂಗಲ ಬಳಿ ನಕಲಿ ಸಿಡಿ ಮಾರಾಟ ಮಾಡುತ್ತಿದ್ದಾತನನ್ನು ಪತ್ತೆ ಹಚ್ಚಿದ ನಿರ್ಮಾಪಕ ಕೆ.ಮಂಜು ಆತನನ್ನು ಮಾಧ್ಯಮದ ಮುಂದೆ ತಂದು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪೈರಸಿ ಹಾವಳಿಯಿಂದ ಬಿಡುಗಡೆಯಾದ ಮರುದಿನ ಆ ಚಿತ್ರದ ಸಿಡಿ ರಸ್ತೆ ಬದಿಯಲ್ಲಿ ಬಿಕರಿಯಾಗುತ್ತಿರುತ್ತವೆ. ಇದರ ವಿರುದ್ಧ ಗೂಂಡಾ ಕಾಯ್ದೆ ತರುವಂತೆ ಅದ್ಯಕ್ಷೆ ಜಯಮಾಲಾ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಒತ್ತಾಯಿಸಿದ್ದಾರೆ.</font><br/><font  style='font-size:12pt; color:#000000'></font><br/>  <font  style='font-size:11pt; color:#000000'>ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಗೆ ತುಮಕೂರು ವಿವಿಯಿಂದ ಡಾಕ್ಟರ್ ಘೋಷಣೆಯಾದುದು ಕೂಡಾ 2008 ರಲ್ಲೇ. ಅವರ ಅಭಿನಯವನ್ನು ಪರಿಗಣಿಸಿ ಈ ಪದವಿ ನೀಡಲಾಗಿದೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಒಟ್ಟು ಏಳು ಮಂದಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226063_2_6.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>MOKSHENDRA</td></tr></table></td></tr></table></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕನ್ನಡ ಚಿತ್ರರಂಗ ಎಷ್ಟೇ ಮುಂದುವರಿದರೂ ಕೆಲವು ಸಮಸ್ಯೆಗಳು ಇದನ್ನು ಬೆಂಬಿಡದೆ ಕಾಡುತ್ತಿವೆ. ಕನ್ನಡದಲ್ಲಿ ಒಂದು ಚಿತ್ರನಗರಿ ನಿರ್ಮಾಣವಾಗಬೇಕೆಂದು ರವಿಚಂದ್ರನ್ ಸೇರಿದಂತೆ ಅನೇಕರ ಕನಸು. ರಾಮೋಜಿ ರಾವ್ ಸ್ಟುಡಿಯೊ ಥರನೇ ಇಲ್ಲೂ ಒಂದು ಸ್ಟುಡಿಯೋ ನಿರ್ಮಾಣವಾಗಬೇಕು. ಈಗಿರುವ ಕೆಲವು ಸ್ಟುಡಿಯೋಗಳನ್ನು ಕಿರುತೆರೆಗಳು ಆಕ್ರಮಿಸಿಕೊಂಡಿವೆ. ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮೊದಲ ಪ್ರಾಶಸ್ತ್ಯ ನೀಡುವಂತಹ ನೀತಿ ಅಳವಡಿಸಬೇಕು. ಇವೆಲ್ಲವೂ ಜಾರಿಯಾದರೆ ಕನ್ನಡ ಚಿತ್ರರಂಗದ ಮೆರುಗೇ ಬೇರೆ. ಆದರೆ ಸರ್ಕಾರ ಹಾಗೂ ಉದ್ಯಮದ ಮಂದಿ ಇದರತ್ತ ಆಸಕ್ತಿ ವಹಿಸಬೇಕು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಏನೇ ಆದರೂ ಕನ್ನಡ ಚಿತ್ರರಂಗ ವರ್ಷದಿಂದ ವರ್ಷಕ್ಕೆ ಏಳಿಗೆ ಕಾಣುತ್ತಿದೆ ಎನ್ನುವುದೇ ಸಂತೋಷದ ಅಂಶ.</font><br/><font  style='font-size:11pt; color:#000000'></font><br/></font>]]></content:encoded>
      <pubDate>Sat, 27 Dec 2008 17:25:10 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು]]></title>
      <link>https://kannada.webdunia.com/article/retrospection-08/ಸಾಧಾರಣ-ಗೆಲುವಿನಲ್ಲಿ-ಬಾಲಿವುಡ್-ಥಳುಕು-108122600061_1.htm</link>
      <guid>https://kannada.webdunia.com/article/retrospection-08/ಸಾಧಾರಣ-ಗೆಲುವಿನಲ್ಲಿ-ಬಾಲಿವುಡ್-ಥಳುಕು-108122600061_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1592277463-3911.jpg</image>
      <description><![CDATA[ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ಬಾಲಿವುಡ್ ಸಾಮಾನ್ಯ ಯಶಸ್ಸು ಕಂಡಿದೆ. ಯಶಸ್ವೀ ಚಿತ್ರಗಳ ಪಟ್ಟಿ ಹೀಗಿದೆ.]]></description>
      <content:encoded><![CDATA[<font  style='font-size:11pt; color:#0000FF'><b>ರಮ್ಯ ಶೆಟ್ಟಿ  </font><font style=' color:#000000;'></b></font><br/><font  style='font-size:11pt; color:#000000'>ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ಬಾಲಿವುಡ್ ಸಾಮಾನ್ಯ ಯಶಸ್ಸು ಕಂಡಿದೆ. ಯಶಸ್ವೀ ಚಿತ್ರಗಳ ಪಟ್ಟಿ ಹೀಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಜೋಧಾ ಅಕ್ಬರ್:  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಜೋಧಾ ಅಕ್ಬರ್ ಚಿತ್ರ ಪೆಬ್ರವರಿ 5, 2008ರಂದು ತೆರಕಕಂಡಿತು. ಈ ಚಿತ್ರವನ್ನು ಅಶಿತೋಷ್ ಗೋವರಿಕರ್ ನಿರ್ದೇಶಿಸಿದ್ದು ಇದು ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ರಜಪೂತ ರಾಜಕುಮಾರಿ ಜೋಧಾಭಾಯಿ ಅವರ ವಿವಾಹ ಮತ್ತು ಪ್ರೇಮ ಪ್ರಸಂಗವನ್ನು ಮುಖ್ಯ ಕಥಾವಸ್ತುವಾಗಿ ಹೊಂದಿತ್ತು. ಈ ಚಿತ್ರ ಐತಿಹಾಸಿಕ ಕಥೆಯನ್ನೊಳಗೊಂಡಿದ್ದು, ಇಲ್ಲಿ ಜೋಧಾ, ಅಕ್ಬರನ ಹೆಂಡತಿ ಅಲ್ಲ ಎಂಬುದಾಗಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ವಿವಾದದ ಕಿಡಿ ಹೊತ್ತಿಕೊಂಡಿತು. ಬಳಿಕ ಹಲವಾರು ಇತಿಹಾಸಕಾರರು ಜೋಧಾ, ಅಕ್ಬರನ ಹೆಂಡತಿ ಎಂಬ ಬಗ್ಗೆ ಸಾಕ್ಷ್ಯಧಾರಗಳ ಸಹಿತ ವಿವರಣೆ ನೀಡಿದ್ದರು. ಈ ವಿವಾದಿಂದಾಗಿ ಚಿತ್ರ ಉತ್ತರಪ್ರದೇಶ, ರಾಜಾಸ್ತಾನ, ಹರಿಯಾಣ ಮತ್ತು ಉತ್ತರಖಂಡಗಳಲ್ಲಿ ನಿಷೇಧಕ್ಕೆ ಒಳಾಗಿತ್ತು. ವಿವಾದದ ಕುರಿತು ಅಶುತೋಷ್ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಗೆಲುವು ಸಾಧಿಸಿದ್ದರು. ಬ್ರಿಟನ್ ಮತ್ತು ಅಮೆರಿಕಗಳಲ್ಲೂ ಪ್ರಶಂಸಿಲ್ಪಟ್ಟ ಈ ಚಿತ್ರ ದೇಶ, ವಿದೇಶಗಳಲ್ಲೂ ಯಶಸ್ವಿಯೆನಿಸಿತು. ಚಿತ್ರದಲ್ಲಿ ಹಾಟ್ ಜೋಡಿ ಎನಿಸಿಕೊಂಡ ಹೃತಿಕ್ ರೋಶನ್ ಮತ್ತು ಐಶ್ವರ್ಯ ರೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಪ್ರಶಸ್ತಿಗಳು:   </font><font style=' color:#000000;'></b></font><br/>32<font  style='font-size:11pt; color:#000000'>ನೇ ಸಾವೊ ಪೌಲೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ- 'ಆಡಿಯನ್ ಅವಾರ್ಡ್' .</font><br/><font  style='font-size:11pt; color:#000000'>ರಷ್ಯಾದಲ್ಲಿ ನಡೆದ ಮುಸ್ಲಿಂ ಸಿನಿಮಾಗಳ ಚಿತ್ರೋತ್ಸವದಲ್ಲಿ- 'ಬೆಸ್ಟ್ ಫಿಲ್ಮ್ ಗ್ರಾಂಡ್ ಫಿಕ್ಸ್'.</font><br/><font  style='font-size:11pt; color:#000000'>ಹೃತಿಕ್ ರೋಶನ್- ಅತ್ಯುತ್ತಮ ನಟ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರೇಸ್ (ಮಾರ್ಚ್ 21):   <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226061_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ರೇಸ್ ಚಿತ್ರದ ನಿರ್ದೇಶಕರು ಅಬ್ಬಾಸ್ ಮಸ್ತಾನ್. ಚಿತ್ರದಲ್ಲಿ ಅನಿಲ್ ಕಪೂರ್, ಅಕ್ಷಯ್ ಖನ್ನಾ, ಬಿಪಾಶ ಬಸು, ಕತ್ರಿನಾ ಕೈಫ್ ಮತ್ತು ಸಮೀರಾ ರೆಡ್ಡಿ ಮುಖ್ಯ ಪಾತ್ರ ವಹಿಸಿದ್ದರು. ರೇಸ್ ಚಿತ್ರಕ್ಕೆ ದ್ವಂಧ್ವ ವಿಮರ್ಶೆಗಳು ದೊರಕಿದ್ದರೂ, ವರ್ಷದ ಎರಡನೇ ಬಹುದೊಡ್ಡ ಹಿಟ್ ಎನಿಸಿಕೊಂಡಿತು. ಮೊದಲ ಸ್ಥಾನವನ್ನು ನಂತರ ಬಿಡುಗಡೆಯಾದ ಸಿಂಗ್ ಈಸ್ ಕಿಂಗ್ ಪಡೆದುಕೊಂಡಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಜನ್ನತ್:  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಜನ್ನತ್ ಚಿತ್ರ ಮೇ 16ರಂದು ಬಿಡುಗಡೆಯಾಗಿದ್ದು, ಇಮ್ರಾನ್ ಹಶ್ಮಿ ಮತ್ತು ಸೋನಲ್ ಚೌಹಾಣ್ ಮುಖ್ಯಪಾತ್ರದಲ್ಲಿದ್ದಾರೆ. ಈ ಚಿತ್ರ ಹಣ ಮಾಡುವ ಹುಮ್ಮಸ್ಸಿನಲ್ಲಿ ಕ್ರಿಕೆಟ್ ಬುಕ್ಕಿಯಾಗುವ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವ ನಾಯಕನ ಕಥೆಯನ್ನು ಹೊಂದಿದೆ. ಸಣ್ಣ ಬಜೆಟ್‌ನ ಈ ಚಿತ್ರ ಬಾಕ್ಸ್ ಅಪೀಸಿನಲ್ಲಿ ಉತ್ತಮ ಕಲೆಕ್ಷನ್ ಗಳಿಸುವುದರೊಂದಿಗೆ ಹಿಟ್ ಎನಿಸಿಕೊಂಡಿತು.  </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸರ್ಕಾರ್ ರಾಜ್ (ಜೂನ್ 6):  <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226061_1_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ಸರಕಾರ್ ರಾಜ್ ಚಿತ್ರ 2005ರ ಹಿಟ್ ಚಿತ್ರ ಸರಕಾರ್‌ನ ಮುಂದುವರಿದ ಭಾಗ. ಈ ಚಿತ್ರ ಜೂನ್ 6ರಂದು ಬಿಡುಗಡೆಯಾಯಿತು. ಬಚ್ಚನ್ ಕುಟುಂಬದ ಮೂವರು ನಟರು(ಅಮಿತಾಬ್ ಬಚ್ಚನ್, ಅಭೀಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್) ಮುಖ್ಯಪಾತ್ರದಲ್ಲಿದ್ದ ಈ ಚಿತ್ರ ರಾಜಕೀಯ ಏಳು-ಬೀಳುಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾಹಂದರವನ್ನು ಹೊಂದಿದೆ. ಸರಕಾರ್ ರಾಜ್‌ನಲ್ಲಿ ಬಾಲಿವುಡ್ ಡೆಬ್ಯೂಟ್ ಮಾಡಿದ ರಾಜೇಶ್ ಶ್ರಿಂಗಾರ್‌ಪೋರ್ ಅವರ ಪಾತ್ರ ಶಿವಸೇನಾ ನಾಯಕ ರಾಜ್ ಠಾಕ್ರೆ ಅವರ ಮೇಲೆ ಅಧರಿತ ಎಂದು ವರದಿಯಾಗಿತ್ತು. ಈ ಚಿತ್ರ 2008ರ ಮೊದಲರ್ಧ ವರ್ಷದಲ್ಲಿ ಹಿಟ್ ಎನಿಸಿಕೊಂಡು ಕೇವಲ ನಾಲ್ಕು ಚಿತ್ರಗಳಲ್ಲಿ ಒಂದೆನಿಸಿದೆ. (ಜೋಧಾ ಅಕ್ಬರ್, ರೇಸ್, ಜನ್ನತ್, ಸರಕಾರ್ ರಾಜ್).</font><font  style='font-size:11pt; color:#0000FF'><b>ಜಾನೆ ತೂ ಯಾ ಜಾನೆ ನಾ (ಜುಲೈ 4): </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಈ ಚಿತ್ರದ ಮೂಲಕ ಅಮೀರ್ ಖಾನ್ ತಮ್ಮದೇ ನಿರ್ಮಾಣದಲ್ಲಿ ತಮ್ಮ ಸೋದರಳಿಯ ಇಮ್ರಾನ್ ಖಾನ್‌ರನ್ನು ಬಾಲಿವುಡ್‌ಗೆ ಪರಿಚಯಿಸಿದರು. ದಕ್ಷಿಣದ ಭಾಷೆಗಳಲ್ಲಿ ನಟಿಸಿದ್ದ ಜೆನಿಲಿಯಾ ಡಿಸೋಜಾ, ಇಮ್ರಾನ್ ಜೊತೆ ಕಾಣಿಸಿಕೊಂಡು ಬಾಲಿವುಡ್‌ನಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರ ಬಿಡುಗಡೆಯಾದ ನಂತರ ತುಂಬಿದ ಮಂದಿರಗಳಲ್ಲಿ ಪ್ರದರ್ಶನ ಕಾಣುವುದರ ಮೂಲಕ ಹಿಟ್ ಎನಿಸಿಕೊಂಡಿತು. ಇಮ್ರಾನ್ ಮತ್ತು ಜೆನಿಲಿಯಾ ತಮ್ಮ ಪ್ರೇಕ್ಷಕರ ಮನದಲ್ಲಿ ಉತ್ತಮ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬಚನಾ ಎ ಹಸೀನೊ (ಅಗಸ್ಟ್ 15) :  <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226061_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ಕಳೆದ ವರ್ಷ ಸಾವರಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಣ್‌ಬೀರ್ ಕಪೂರ್‌ರ ಎರಡನೇ ಚಿತ್ರ 'ಬಚನಾ..' ಅಗಸ್ಟ್ 15ರಂದು ತೆರೆಕಂಡಿತು. ರಣ್‌ಬೀರ್ ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ಮೂರು ಹುಡುಗಿಯರೊಂದಿಗೆ ಪ್ರೇಮಕ್ಕೆ ಸಿಲುಕುವ ಕಥೆಯ್ನನ್ನು ಚಿತ್ರ ಹೊಂದಿದೆ. ಮಿನಿಶಾ ಲಾಂಬ, ಬಿಪಾಶ ಬಸು ಮತ್ತು ದೀಪಿಕಾ ಪಡುಕೋಣೆ ರಣ್‌ಬೀರ್‌ಗೆ ನಾಯಕಿಯರು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಚಿತ್ರ ಸೆಮಿ-ಹಿಟ್ ಎಂದು ಘೋಷಿತವಾಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸಿಂಗ್ ಈಸ್ ಕಿಂಗ್(ಅಗಸ್ಟ್ 8) :  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಪ್ರಸ್ತುತ ಬಾಲಿವುಡ್‌ನ ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಆನೇಕ ದಾಖಲೆಗಳನ್ನು ಪುಡುಗಟ್ಟಿರುವ ಸಿಂಗ್ ಈಸ್ ಕಿಂಗ್ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಮತ್ತು ಭಾರತದಲ್ಲಿ ಸೂಪರ್ ಹಿಟ್(ಚಿತ್ರ ವಿತರಕರಿಗೆ ಮಾರಾಟವಾದ ದೊಡ್ಡ ಮೊತ್ತದಿಂದಾಗಿ ಬ್ಲಾಕ್ ಬಸ್ಟರ್ ಎಂದು ಘೋಷಿಸಲಾಗಿಲ್ಲ) ಎನಿಸಿಕೊಂಡಿದೆ. ಈ ಹಿಂದೆ 2007ರಲ್ಲಿ ಓಂ ಶಾಂತಿ ಓಂ ಚಿತ್ರ ನಿರ್ಮಿಸಿದ್ದ ದಾಖಲೆಗಳನ್ನು ಮುರಿದ ಈ ಚಿತ್ರ ಭಾರತದ ಅತ್ಯಂತ ಹಿಟ್ ಚಿತ್ರ ಎನಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಮೊದಲ ವಾರದಲ್ಲಿ 2 ಕೋಟಿ ಗಳಿಸಿಕೊಂಡ ಸಿಂಗ್ ಈಸ್ ಕಿಂಗ್, ಪಾಕಿಸ್ತಾನದಲ್ಲಿ ಭಾರತೀಯ ಚಿತ್ರವೊಂದು ಹಿಂದೆಂದೂ ನಿರ್ಮಿಸದ ದಾಖಲೆ ನಿರ್ಮಿಸಿತು. ಸಿಂಗ್ ಈಸ್ ಕಿಂಗ್ ಚಿತ್ರ, ಸಿಖ್ ಸಮುದಾಯದ ವಿರೋಧಕ್ಕೆ ಗುರಿಯಾಗುವ ಮೂಲಕ ವಿವಾದಿತವಾಯಿತು. ದೆಹಲಿ ಹೈಕೋರ್ಟ್ ಚಿತ್ರಕ್ಕೆ ಕ್ಲೀನ್ ಚಿಟ್ ಕೊಟ್ಟರೂ, ಬಿಡುಗಡೆಯ ದಿನ ಸಿಖ್ ಪ್ರತಿಭಟನಾಕಾರರು ಚಿತ್ರಮಂದಿರಗಳಿಗೆ ನುಗ್ಗಿ ಗಲಾಟೆ ಮಾಡುವ ಮೂಲಕ ಪ್ರದರ್ಶನಕ್ಕೆ ತೊಂದರೆ ಉಂಟುಮಾಡಿದ್ದರು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರಾಕ್ ಆನ್ (ಅಗಸ್ಟ್ 29): <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226061_2_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ಈ ಚಿತ್ರದ ಮೂಲಕ ನಿರ್ಮಾಪಕ-ನಿರ್ದೇಶಕ ಫರಾನ್ ಅಖ್ತರ್ ನಾಯಕ ಮತ್ತು ಗಾಯಕರಾಗಿ ಡೆಬ್ಯೂಟ್ ಮಾಡಿದರು. ಚಿತ್ರ ರಾಕ್ ಮ್ಯೂಸಿಕ್ ಮೇಲೆ ಅಧರಿತವಾಗಿದೆ. ಚಿತ್ರದ ಕಥಾಹಂದರ ಮತ್ತು ತಾರಾವರ್ಗದ ಅಭಿನಯಗಳ ಬಗ್ಗೆ ವಿಮರ್ಶಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆಗಳು ಹೊರಬಂದವು. ಚಿತ್ರದ ಮುಖ್ಯಪಾತ್ರಗಳಲ್ಲಿ ಫರಾನ್ ಅಖ್ತರ್ ಅವರೊಂದಿಗೆ ನಾಯಕಿಯಾಗಿ ಪ್ರಾಚಿ ದೇಸಾಯಿ, ಅರ್ಜುನ್ ರಾಂಪಾಲ್ ಮತ್ತು ಪ್ರಣಬ್ ಕೊಹ್ಲಿ, ಲ್ಯೂಕ್ ಕೆನ್ನಿ, ಸಹನಾ ಗೋಸ್ವಾಮಿ, ಕೋಯಲ್ ಪುರಿ, ನಿಕೊಲೆಟ್ಟೆ ಬರ್ಡ್ ಅವರು ನಟಸಿದ್ದರು.  ಡೆಬ್ಯೂಟೆಂಟ್ ಪ್ರಾಚಿ ಮತ್ತು ಸಹನಾ ಅಭಿನಯವನ್ನು ಪ್ರಶಂಸಿಲಾಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಎ ವೆಡ್‌ನೆಸ್‌ಡೇ (ಸಪ್ಟೆಂಬರ್ 5) :  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_2_5.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಈ ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ನಾಸಿರುದ್ದೀನ್ ಶಾ 12 ವರ್ಷಗಳ ಸುದೀರ್ಘ ಅಂತರದ ನಂತರ ಜೊತೆಯಾಗಿ ನಟಿಸಿದರು. ಒಂದು ಬುಧವಾರದ 2 ರಿಂದ 6 ಗಂಟೆಗಳವರೆಗೆ ನಡೆವ ಘಟನೆಗಳು ಈ ಚಿತ್ರದ ಕಥಾಹಂದರ. ಚಿತ್ರಕ್ಕೆ ವಿಮರ್ಶಕರಿಂದ ಅತ್ಯುತ್ತಮ ಪ್ರಶಂಸೆ ಹರಿದು ಬಂದಿತ್ತು. ನಾಸಿರುದ್ದೀನ್ ಮತ್ತು ಅನುಪಮ್ ಖೇರ್ ತಮ್ಮ ಅದ್ಭುತ ಅಭಿನಯ ಕಲೆಯನ್ನು ಹೊರತಂದಿದ್ದರು. ಚಿತ್ರವೂ ಜನರಿಂದಲೂ ಉತ್ತಮ ರೀತಿಯಿಂದ ಸ್ವೀಕೃತವಾಗಿವುದರ ಮೂಲಕ ಬಾಕ್ಸ್ ಅಫೀಸ್ ಕಲೆಕ್ಷನ್‌ನಲ್ಲೂ ಸೈ ಎನಿಸಿಕೊಂಡಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಫ್ಯಾಶನ್ (ಅಕ್ಟೋಬರ್ 29): ಪ್ರಿಯಾಂಕಾ ಚೋಪ್ರಾ, ಕಂಗನಾ ರಾಣಾವತ್ ಮತ್ತು ಮುಗ್ಧ ಗೋಡ್ಸೆ ಮತ್ತು ಅರ್ಜುನ್ ಭಾಜ್ವ ಅವರುಗಳನ್ನು ಮುಖ್ಯಪಾತ್ರಗಳಲ್ಲಿ ಹೊಂದಿದೆ. ಈ ಚಿತ್ರದಲ್ಲಿ ನಮ್ಮ ಕಣ್ಣಿಗೆ ಕಟ್ಟುವ ಅದ್ಭುತ ಫ್ಯಾಶನ್ ಲೋಕದ ಕರಾಳ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಧುರ್ ಭಂಡಾರ್ಕರ್. ಚಿತ್ರದಲ್ಲಿನ ಪ್ರಿಯಾಂಕ ಪಾತ್ರ ನಿಜಜೀವನದ ಸೂಪರ್ ಮಾಡೆಲ್ ಶಿವಾನಿ ಕಪೂರ್‌ ಮತ್ತು ಒಂದು ಕಾಲದ ಸೂಪರ್ ಮಾಡೆಲ್, ಜೀವನದಲ್ಲಿ ಕುಸಿತ ಕಂಡು ಬೀದಿಗೆ ಬೀಳುವ ಕಂಗಾನ ರಾಣಾವತ್ ಪಾತ್ರ ಗೀತಾಂಜಲಿ ನಾಗ್‌ಪಾಲ್ ಎಂಬ ಸೂಪರ್ ಮಾಡೆಲ್ ಜೀವನದ ಕಥೆಗಳನ್ನು ಅಧರಿಸಿದೆ.</font><font  style='font-size:11pt; color:#0000FF'><b>ಗೋಲ್‌ಮಾಲ್ ರಿಟರ್ನ್ಸ್ (ಅಕ್ಟೋಬರ್ 29) :  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_3_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಹಿಟ್ ಚಿತ್ರ ಗೋಲ್‌ಮಾಲ್(2006)ನ ಉತ್ತರಾರ್ಧ ಗೋಲ್‌ಮಾಲ್ ರಿಟರ್ನ್ಸ್. ಅಜಯ್ ದೇವಗನ್, ಕರೀನಾ ಕಪೂರ್, ಅರ್ಶದ್ ವರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲಪಾಡೆ, ಸಲೀನಾ ಜೇಟ್ಲಿ, ಅಮೃತಾ ಅರೋರಾ ನಟಿಸಿರುವ ಗೋಲ್‌ಮಾಲ್ ರಿಟರ್ನ್ಸ್ ಬಹುತಾರಗಣ ಚಿತ್ರ. ಇದು ಹಾಸ್ಯ ಚಿತ್ರವಾಗಿದ್ದು, ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಈ ಚಿತ್ರ ಹಳೆಯ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಚಿತ್ರದ ಕಥೆಯನ್ನು ಹೊಂದಿದೆ ಎಂದು ಸ್ವಲ್ಪ ಮಟ್ಟಿನ ವಿವಾದವೆದ್ದಿತ್ತು.  ಈ ಚಿತ್ರ ವಿಮರ್ಶಕರ ಋಣಾತ್ಮಕ ಪ್ರತಿಕ್ರಿಯೆಯ ಹೊರತೂ ಮೊದಲ ದಿನವೇ 22.03 ಲಕ್ಷ ಗಳಿಕೆಯನ್ನು ಮುಟ್ಟುವ ಮೂಲಕ ಓಂ ಶಾಂತಿ ಓಂ ಚಿತ್ರದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮುರಿದಿದೆ. ವಿದೇಶಗಳಲ್ಲೂ ಚಿತ್ರ ಉತ್ತಮ ವ್ಯವಹಾರ ನಡೆಸಿತು. ಉತ್ತಮ ಹಾಸ್ಯ ಚಿತ್ರ ಅತ್ಯುತ್ತಮ ಗಳಿಕೆ ಮಟ್ಟ ತಲುಪಿ, ವರ್ಷದ ಅತಿದೊಡ್ಡ ಹಿಟ್‌ ಚಿತ್ರಗಳಲ್ಲಿ ಒಂದೆನಿಸಿಕೊಂಡಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ದೋಸ್ತಾನ (ನವೆಂಬರ್ 14) :  <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226061_3_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿರುವ ದೋಸ್ತಾನ ಸ್ನೇಹಿತರ ನಡುವಿನ ಕಥೆ. ಜಾನ್ ಮತ್ತು ಅಭಿಷೇಕ್ ಸಲಿಂಗಕಾಮಿಗಳೆಂದು ಹೇಳಿಕೊಳ್ಳುವುದು ಈ ಚಿತ್ರದಲ್ಲಿರುವ ನೂತನ ಅಂಶ. ಜಾನ್ ಮತ್ತು ಪ್ರಿಯಾಂಕರಿಂದ ಸಾಕಷ್ಟು ದೇಹ ಪ್ರದರ್ಶನ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಂದರ ಮೈಮಿ ಬೀಚ್‌ನ ಸುಂದರ ಲೋಕೇಶನ್‌ಗಳಲ್ಲಿ ದೋಸ್ತಾನಕ್ಕೆ ಚಿತ್ರೀಕರಣ ನಡೆಸಲಾಗಿದೆ. ವಿದೇಶಿ ಪ್ರೇಕ್ಷಕರನ್ನು ಹೆಚ್ಚಿನ ಮಟ್ಟದಲ್ಲಿ ಮೆಚ್ಚಿಸಿರುವ ಈ ಚಿತ್ರ ವಿದೇಶಗಳಲ್ಲಿ ಸೂಪರ್ ಹಿಟ್ ಎಂದು ಘೋಷಿತವಾಗಿದೆ. ಭಾರತದಲ್ಲಿ ಮುಂಬಯಿ ದಾಳಿಯ ನಂತರ ಚಿತ್ರಗಳ ಪ್ರದರ್ಶಕ್ಕೆ ಹೊಡೆತ ಬಿದ್ದಿದ್ದರೂ, ದೋಸ್ತಾನ ತನ್ನ ಉತ್ತಮ ನಡೆಯನ್ನು ಮುಂದುವರೆಸಿದೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರಬ್ನೆ ಬನಾ ದಿ ಜೋಡಿ (ಡಿಸೆಂಬರ್ 12):  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/26/images/img1081226061_3_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage--> <font  style='font-size:11pt; color:#000000'>ಶಾರುಖ್ ಖಾನ್‌ರ ರಬ್ನೆ ಬನಾದಿ ಜೋಡಿ ಡಿಸೆಂಬರ್ 12ರಂದು ತೆರೆ ಕಂಡಿದೆ. ತಮ್ಮ ಫ್ಯಾಸನೇಬಲ್ ಲುಕ್‌ನಿಂದ ಹೊರಬಂದಿರುವ ಶಾರುಖ್ ಈ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಮಾತ್ರವಲ್ಲದೆ ಯುರೋಪ್‌ನ ರಾಷ್ಟ್ರಗಳಲ್ಲೂ ಒಂದೇ ದಿನ ತೆರೆಕಣಲಿರುವ ರಬ್ನೆ ಬನಾ ದಿ ಜೋಡಿ ಬಗೆಗೆ ಬಹಳ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಚಿತ್ರದಲ್ಲಿ ಅನೌಷ್ಕಾ ಶರ್ಮ, ಶಾರುಖ್ ಎದುರು ನಾಯಕಿಯಾಗಿ ಬಾಲಿವುಡ್‌ಗೆ ಪಾದಾಪರ್ಣೆ ಮಾಡುತ್ತಿದ್ದಾರೆ. ಮುಂಬಯಿ ದಾಳಿಯ ನಂತರ ಬಿಡುಗಡೆಯಾದ ಎಲ್ಲಾ ಚಿತ್ರಗಳೂ ಸಿನಿಮಾ ಮಂದಿರಗಳಲ್ಲಿ ತೋಪಾಗಿದ್ದರೂ ಬಿಡುಗಡೆ ಕಂಡ ನಂತರ ರಬ್ನೆ ಉತ್ತಮ ಓಟ ಕಂಡಿದ್ದು ಹಿಟ್ ಎನಿಸುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಶಾರುಖ್ ಖಾನ್ ಮತ್ತು ಆದಿತ್ಯ ಚೋಪ್ರಾ 2000ದ ಮೊಹಬ್ಬತೇ ಚಿತ್ರದ ನಂತರ ಇದೇ ಮೊದಲ ಬಾರಿಗೆ ಒಂದಾಗಿ ಯಶ್ ರಾಜ್ ಫಿಲಂಸ್‌ನ ಪ್ರತಿಷ್ಠೆಯನ್ನು ಮರಳಿಸಿದ್ದಾರೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಗಜನಿ:   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/26/images/img1081226061_3_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>IFM</td></tr></table></td></tr></table></p><!--endImage-->  2008<font  style='font-size:11pt; color:#000000'>ರ ಕೊನೆಯ ದಿನಗಳಲ್ಲಿ, ಕ್ರಿಸ್‌ಮಸ್ ವಾರದಲ್ಲಿ ಅಮೀರ್ ಖಾನ್‌ರ ಗಜನಿ ಬಿಡುಡೆಯಾಗಲಿದ್ದು, ಈ ಚಿತ್ರದಲ್ಲಿ ಬಾಲಿವುಡ್‌ ಕ್ರೆಜ್‌ನ ಸಿಕ್ಸ್ ಪ್ಯಾಕ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೀರ್ ಖಾನ್ ಎಂಟು ಪ್ಯಾಕ್‌ಗಳಲ್ಲಿ ತಮ್ಮ ದೇಹದಾರ್ಢ್ಯ ಬೆಳೆಸಿಕೊಂಡಿದ್ದಾರೆ. ದಕ್ಷಿಣದ ನಟಿ ಆಸಿನ್ ಅಮೀರ್ ಎದುರು ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಆರಂಭಿಕ ಪ್ರತಿಕ್ರಿಯೆ ಚಿತ್ರ ಯಶಸ್ಸಿನತ್ತ ಸಾಗುತ್ತಿದೆ ಎಂಬ ಸೂಚನೆ ನೀಡಿದೆ.</font><br/><font  style='font-size:11pt; color:#000000'></font><br/></font>]]></content:encoded>
      <pubDate>Sat, 27 Dec 2008 17:21:09 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಅಣುವಿನಿಂದ ಚಂದಿರನೂರಿಗೆ; ವಿಕೋಪಗಳ ನಡುವೆ ಭರವಸೆಯ ಒಸಗೆ]]></title>
      <link>https://kannada.webdunia.com/article/retrospection-08/ಅಣುವಿನಿಂದ-ಚಂದಿರನೂರಿಗೆ-ವಿಕೋಪಗಳ-ನಡುವೆ-ಭರವಸೆಯ-ಒಸಗೆ-108122000064_1.htm</link>
      <guid>https://kannada.webdunia.com/article/retrospection-08/ಅಣುವಿನಿಂದ-ಚಂದಿರನೂರಿಗೆ-ವಿಕೋಪಗಳ-ನಡುವೆ-ಭರವಸೆಯ-ಒಸಗೆ-108122000064_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1592277463-3911.jpg</image>
      <description><![CDATA[ಭಾರತ ದೇಶವು 2008ರಲ್ಲಿ ಚಂದ್ರಯಾನದಂತಹ ಮಹತ್ವದ ಸಾಧನೆಯನ್ನು ಕಂಡು ಚಪ್ಪಾಳೆ ಹೊಡೆದಿದೆ. ಅಂತೆಯೇ ಮುಂಬೈಯಲ್ಲಿ ಉಗ್ರರು ಕೆನೆದ ಭಯೋತ್ಪಾದನೆಯ ಹೇಷಾರವವನ್ನು ಕಂಡು ಕಣ್ಣೀರು ಸುರಿಸಿದೆ. ವೋಟಿಗಾಗಿ ನೋಟಿನ ಮೂಲಕ ಪ್ರಜಾಪ್ರಭುತ್ವದ ಅಣಕ, ಸರಣಿ ಬಾಂಬ್ ಸ್ಫೋಟಗಳ ಅನುರಣನ, ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ...]]></description>
      <content:encoded><![CDATA[<font  style='font-size:11pt; color:#0000FF'><b><i>ಚಂದ್ರಾವತಿ ಬಡ್ಡಡ್ಕ  </font><font style=' color:#000000;'></b></i></font><br/><font  style='font-size:11pt; color:#000000'>ಭಾರತ ದೇಶವು 2008ರಲ್ಲಿ ಚಂದ್ರಯಾನದಂತಹ ಮಹತ್ವದ ಸಾಧನೆಯನ್ನು ಕಂಡು ಚಪ್ಪಾಳೆ ಹೊಡೆದಿದೆ. ಅಂತೆಯೇ ಮುಂಬೈಯಲ್ಲಿ ಉಗ್ರರು ಕೆನೆದ ಭಯೋತ್ಪಾದನೆಯ ಹೇಷಾರವವನ್ನು ಕಂಡು ಕಣ್ಣೀರು ಸುರಿಸಿದೆ. ವೋಟಿಗಾಗಿ ನೋಟಿನ ಮೂಲಕ ಪ್ರಜಾಪ್ರಭುತ್ವದ ಅಣಕ, ಸರಣಿ ಬಾಂಬ್ ಸ್ಫೋಟಗಳ ಅನುರಣನ, ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪಗಳು ಪರಸ್ಪರ ಸ್ಫರ್ಧೆಗೆ ಒಡ್ಡಿಕೊಂಡಿವೆ. ಆಗಿ ಹೋದ ವರ್ಷದ ಒಳಿತು-ಕೆಡುಕುಗಳನ್ನು ತಕ್ಕಡಿಗೆ ಹಾಕಿ ನೋಡಿದರೆ ರಾಜತಾಂತ್ರಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಒಳಿತುಗಳಿಗಿಂತ ಕೆಡುಕುಗಳೇ ಹೆಚ್ಚು ತೂಗುತ್ತವೆ ಎಂಬುದು ವಿಷಾದನೀಯ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220064_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'><b>ಸ್ವಲ್ಪಸಿಹಿ  </b></font><br/><font  style='font-size:11pt; color:#000000'>ಚಂದ್ರಲೋಕಕ್ಕೆ ಮಾನವರಹಿತ ಉಪಗ್ರಹ ಚಂದ್ರಯಾನ-1ರ ಉಡಾವಣೆ, ಏಕಕಾಲಕ್ಕೆ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ದೇಶೀಯ ಉಪಗ್ರಹವಾಹಕ ನೌಕೆ ಪಿಎಸ್ಎಲ್‌ವಿ ಒಯ್ದಿರುವುದು, ಅಣುವ್ಯಾಪಾರ ಒಕ್ಕೂಟದಲ್ಲಿ 30 ವರ್ಷಗಳ ಅಸ್ಪಶೃತೆಯಿಂದ ಹೊರಬಂದಿರುವುದು, ಕನ್ನಡ, ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ, ಅರವಿಂದ ಅಡಿಗರಿಗೆ ಬೂಕರ್ ಪ್ರಶಸ್ತಿ, ಭಿಮಸೇನ್ ಜೋಷಿಯವರಿಗೆ ಭಾರತ ರತ್ನ, ಭಾರತ-ಅಮೆರಿಕ ಅಣು ಒಪ್ಪಂದ, ಒಲಿಂಪಿಕ್ಸ್‌ನಲ್ಲಿ ಪ್ರಥಮ ಚಿನ್ನ, ವಿಶ್ವಮಟ್ಟದಲ್ಲಿ ಬಲಿಷ್ಠವಾದ ಭಾರತದ ಕ್ರಿಕೆಟ್,.... ಎಲ್ಲವೂ 2008 ರಾಷ್ಟ್ರಕ್ಕೆ ನೀಡಿದ ಗರಿಗಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ತುಂಬ ಹುಳಿ  </b></font><br/><font  style='font-size:11pt; color:#000000'>ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂಬಂತೆ ಸಂಸತ್ತಿನಲ್ಲಿ ಝಣಝಣಿಸಿದ ನೋಟಿನ ಕಂತೆಗಳು, ವರ್ಷ ಪೂರ್ತಿ ದೇಶದ ವಿವಿಧೆಡೆ ನಡೆದ ಬಾಂಬ್ ಸ್ಫೋಟಗಳು, ಅಣು ಒಪ್ಪಂದ ಮೂಲಕ ರಾಷ್ಟ್ರದ ಅಮೂಲ್ಯ ಹಕ್ಕುಗಳನ್ನು ಅಮೆರಿಕಕ್ಕೆ ಒತ್ತೆಯಿಟ್ಟದ್ದು, ಆಮ್ ಆದ್ಮಿ ತೇಕಲಾಗದಂತೆ ಉಬ್ಬರಿಸಿ ಅಬ್ಬರಿಸಿದ ಹಣದುಬ್ಬರ, ಆಕಾಶಕ್ಕೇರಿದ ಅಗತ್ಯವಸ್ತುಗಳ ಬೆಲೆ, ಪಾತಾಳಕ್ಕಿಳಿದ ಶೇರು ಸೂಚ್ಯಂಕ, ಹಿಂದೂ ಭಯೋತ್ಪಾದನೆ ಎಂಬ ಪರಿಕಲ್ಪನೆ,  ಅಮರನಾಥ್ ಮಂದಿರ ಮಂಡಳಿಗೆ ಭೂ ಹಸ್ತಾಂತರದ ಪಶ್ಚಾತ್ ಕಂಪನಗಳ ಗೋಲಿಬಾರ್, ಗುಜ್ಜಾರ್ ಚಳುವಳಿಗಾರರ ಮೇಲೆ ಪೋಲೀಸರ ಗುಂಡು, ಬಿಹಾರಕ್ಕೆ ಅಕ್ಷರಶಃ ದುಃಖವಾದ ಕೋಸಿ ನದಿ ಹುಟ್ಟಿಸಿದ ಅವಾಂತರ, ಈಶಾನ್ಯ ರಾಜ್ಯಗಳಲ್ಲಿ ಹರಿದ ಪ್ರವಾಹ, ಮುಂದುವರಿದ ರೈತರ ಆತ್ಮಹತ್ಯೆ ಎಂಬ ಧಾರಾವಾಹಿ, ಮುಂಬೈಯಲ್ಲಿ ಮೆರೆದಾಡಿದ ಉತ್ತರಭಾರತೀಯರ ವಿರುದ್ಧದ ದಂಗೆ, ಒರಿಸ್ಸಾ, ಕರ್ನಾಟಕಗಳಲ್ಲಿ ನಡೆದ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ, ಇವೆಲ್ಲವುಗಳಿಗೆ ಮುಕುಟವಿಟ್ಟಂತೆ ಉಗ್ರರು 26/11ರಂದು ಮುಂಬೈಯಲ್ಲಿ ನಡೆಸಿದ ಅತ್ಯಂತ ಅಮಾನವೀಯ ಪಾಶವೀ ದಾಳಿಗಳಿಂದ ದೇಶ ಅಕ್ಷರಶಃ ನಲುಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಾಗೆ ನೋಡಿದರೆ 2008 ಎಂಬ ವಿಕೋಪಗಳ ವರ್ಷದ ಆರಂಭ ಮುಂಬೈನ ಜುಹು ಬೀಚಿನ ಪಕ್ಕದ ಹೋಟೇಲೊಂದರಲ್ಲಿ ನಡೆದ ಹೊಸ ವರ್ಷದ ಮೋಜಿನ ಕೂಟದಲ್ಲಿ ಯುವತಿಯರಿಬ್ಬರ ಮೇಲಿನ ಲೈಂಗಿಕ ಕಿರುಕುಳದ ಸುದ್ದಿಯೊಂದಿಗೆ ಆರಂಭವಾಗಿದೆ. ಕಳೆದ ಹನ್ನೆರಡು ತಿಂಗಳತ್ತ ಒಂದು ಹಿನ್ನೋಟ ಹರಿಸಿದರೆ ಘಟನೆಗಳು ತಾಮುಂದು, ನಾಮುಂದು ಎಂಬಂತೆ ಕುಣಿಯುತ್ತವೆ. ಎಲ್ಲವನ್ನೂ ಸಂಘಟಿತವಾಗಿ ನೀಡುವ ನಿಟ್ಟಿನಲ್ಲಿ ನಾಲ್ಕೈದು ವಿಭಾಗಳದೊಳಗೆ ಹುದುಗಿಸಿ ನಮ್ಮ ಪ್ರೀತಿಯ ಓದುಗಮಿತ್ರರ ಮುಂದಿಡುವ ಪ್ರಯತ್ನ ಮಾಡಲಾಗಿದೆ ಒಪ್ಪಿಸಿಕೊಳ್ಳುವಂಥವರಾಗಿ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ವೋಟಿಗಾಗಿ ನೋಟು   </font><font style=' color:#000000;'></b></font><br/><font  style='font-size:11pt; color:#000000'>ರಾಜಕೀಯವಾಗಿ ರಾಷ್ಟ್ರವು ಈ ವರ್ಷ ಹಲವು ಏರುಪೇರುಗಳನ್ನು ಕಂಡಿದೆ. ಅಣುಒಪ್ಪಂದದಲ್ಲಿ ಯುಪಿಎ ಸರಕಾರ ಮುಂದುವರಿದಾಗ, ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟುಮಾಡುವಂತಹ ಒಪ್ಪಂದದಲ್ಲಿ ಕಾರ್ಯಗತವಾಗಲು ಅವಕಾಶ ನೀಡೆವು ಎಂದ ಎಡಪಕ್ಷಗಳು ಬೆಂಬಲ ಹಿಂತೆಗೆದಾಗ, ಯುಪಿಎ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಸಂಸದೀಯ ಬಲದಲ್ಲಿ ಅಲ್ಪಸಂಖ್ಯಾತವಾಯಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ಮತಯಾಚಿಸಿದಾಗ ನಡೆದ ನಾಟಕಗಳು ಮತ್ತು ನಾಚಿಕೆಗೇಡುಗಳು ಪಕ್ಷಾತೀತವಾಗಿತ್ತು. ಪಕ್ಷದ ವಿಪ್ ಉಲ್ಲಂಘಿಸಿ ವಿವಿಧ ಪಕ್ಷಗಳ ಸದಸ್ಯರು ಸರ್ಕಾರದ ಪರವಾಗಿ ಅಥವಾ ವಿರೋಧವಾಗಿ ಮತ ಚಲಾಯಿಸಿದ ಮತ್ತು ತಟಸ್ಥ ನಿಲುವು ತಳೆದ ಘಟನೆಗಳು ನಡೆಯಿತು. ಸಿಕ್ಕ ಅವಕಾಶವನ್ನು ದಕ್ಕಿಸಿಕೊಂಡ ಅತೃಪ್ತ ಸಂಸದರು ಎದುರುಪಕ್ಷಗಳತ್ತ ಕುಡಿನೋಟ ಬೀರಿ, ಅವರ ಪ್ರೀತಿಗೆ ಪಾತ್ರರಾಗಿ ಸೂಟ್‌ಕೇಸ್‌ ಪಡೆದುಕೊಂಡರು. ಇದಾದ ಬಳಿಕ ಕೆಲವರು ಪಕ್ಷಕ್ಕೆ ರಾಜೀನಾಮೆ ಬಿಸಾಡಿದರೆ, ಮತ್ತೆ ಕೆಲವರು ಉಚ್ಚಾಟಿಸಿಕೊಂಡರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220064_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲ ಲೆಕ್ಕಾಚಾರವನ್ನು ಮೀರಿ, ಅತ್ಯಂತ ಸಾತ್ವಿಕ ರಾಜಕಾರಣಿ ಎಂದು ಕರೆಸಿಕೊಂಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ಮತ ಗೆಲ್ಲುವಲ್ಲಿ ಕಾಣದ ಕೈಗಳು ಕೆಲಸಮಾಡಿದ್ದವು ಎಂಬುದನ್ನು ಸಂಖ್ಯಾ ಲೆಕ್ಕಾಚಾರಗಳು ತೋರಿಸಿಕೊಟ್ಟವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಶ್ವಾಸ ಮತದ ಗೊತ್ತುವಳಿ ಮೇಲೆ ಚರ್ಚೆ ನಡೆಸಿದಾಗ ಪ್ರಮುಖ ವಿರೋಧ ಪಕ್ಷ ಎನ್‌ಡಿಎ, ಆಡಳಿತಾರೂಢ ಯುಪಿಎ ಸರ್ಕಾರದ ಪರ ಮತಚಲಾಯಿಸಲು ಕುದುರೆ ವ್ಯಾಪಾರ ಮಾಡಿದೆ ಎಂಬ ಆರೋಪ ಹೊರಿಸಿತು. ಈ ಆರೋಪಕ್ಕೆ ಆಡಳಿತ ಪಕ್ಷ ಪುರಾವೆ ಕೇಳಿತು. ಪುರಾವೆ ಒದಗಿಸಲು ಮುಂದಾದ ಬಿಜೆಪಿ ಸಂಸದರು, ಲಂಚ ನೀಡಿದ ಹಣವೆಂದು ನೋಟಿನ ಕಂತೆಗಳನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದರು. ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಒಂದು ಕ್ಷಣ ಏನಾಗುತ್ತಿದೆ ಎಂಬುದೇ ಗೊತ್ತಾಗದ ಪರಿಸ್ಥಿತಿ. ಮೂವರು ಬಿಜೆಪಿ ಸದಸ್ಯರನ್ನು ಒಲಿಸಿಕೊಳ್ಳಲು ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರು ನೀಡಿದ ಒಂದು ಕೋಟಿ ರೂಪಾಯಿ ಇದೆಂದೂ, ಈ ಹಣವನ್ನು ನೀಡುವಾಗ ಸಿಎನ್ಎನ್-ಐಬಿಎನ್ ವಾಹಿನಿಯು ಕುಟುಕು ಕಾರ್ಯಾಚರಣೆ ನಡೆಸಿದೆ ಎಂದೂ ಹೇಳಲಾಯಿತು. </font><br/><font  style='font-size:11pt; color:#000000'>ಅದೇನೇ ಇದ್ದರೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ತಿನಲ್ಲಿ ನಡೆದ ಈ ಘಟನೆ ಪ್ರಜಾಸತ್ತೆಯ ಕಪ್ಪುಚುಕ್ಕೆ. ಈ ದೃಶ್ಯಗಳು ದೂರದರ್ಶನಗಳಲ್ಲಿ ನೇರಪ್ರಸಾರವಾಗುತ್ತಿದ್ದು, ವಿಶ್ವದ ಮುಂದೆ ಲಂಗೋಟಿ ಬಿಚ್ಚಿ ನಿಂತಂತಹ ಮುಜುಗರದ ಪರಿಸ್ಥಿತಿಯನ್ನು ರಾಷ್ಟ್ರ ಎದುರಿಸಿದ್ದು 2008ರ ಘೋರ ದುರಂತಗಳಲ್ಲಿ ಒಂದು. ಆಮೇಲೆ ಸಂಸದರು ಆರೋಪಮುಕ್ತವಾಗಿದ್ದೂ ಆಗಿ ಹೋಯಿತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಉತ್ತರಭಾರತೀಯರು </font><font style='font-size:11pt;'>V/s </font><font style='font-size:11pt;'>ಮರಾಠಿಗರು  </font><font style=' color:#000000;'></b></font><br/><font  style='font-size:11pt; color:#000000'>ಮಹಾರಾಷ್ಟ್ರದಲ್ಲಿ ಅದರಲ್ಲೂ ವಿಶೇಷವಾಗಿ ಮುಂಬೈಯಲ್ಲಿ ಉತ್ತರಭಾರತೀಯರೇ ತುಂಬಿದ್ದು ತಮ್ಮ ನೆಲದಲ್ಲೇ ಮರಾಠಿಗರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ನಡೆಸಿದ ಚಳುವಳಿ ಮತ್ತು ತದನಂತರದ ಪಕ್ಕಾ ರಾಜಕೀಯಗಳಿಂದಾಗಿ ಮುಂಬೈಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳು ತೀವ್ರ ತೊಂದರೆ ಎದುರಿಸುವಂತಾಯಿತು. ಮರಾಠಿಗರ ಕಣ್ಣಲ್ಲಿ ರಾಜ್‌ಠಾಕ್ರೆ ಹೀರೋ ಆಗ ಹೊರಟರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಂಬೈಯಲ್ಲಿ ನಡೆದ ರೈಲ್ವೇ ಮಂಡಳಿ ಪರೀಕ್ಷೆಯಲ್ಲಿ ಮರಾಠಿಗರಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಪರೀಕ್ಷೆಗೆ ಬಂದ ಬಿಹಾರಿಗಳನ್ನು  ಎಂಎನ್ಎಸ್ ಮತ್ತು ಶಿವಸೇನಾದ ಕಾರ್ಯಕರ್ತರು ಚೆನ್ನಾಗಿ ಥಳಿಸಿದರು. ಪರೀಕ್ಷೆಗೆ ಬಂದ ಓರ್ವ ಅಭ್ಯರ್ಥಿ ಸಾವನ್ನಪ್ಪಿದ, ಈತ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಕಾಲುಜಾರಿ ಬಿದ್ದನೆಂದು ರೈಲ್ವೇ ನಿಲ್ದಾಣದ ಸಿಸಿಟಿವಿ ಹೇಳುತ್ತದೆ ಎಂದು ಬಳಿಕ ಸಾರಲಾಯಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಿಹಾರಿಗಳಿಗೆ ನಾವು ಬಡಿದೆವು ಎಂದು ಶಿವ ಸೇನೆ ಹೇಳಿಕೊಂಡಿತು. 'ಮರಾಠಿಗರ ರಕ್ಷಣೆ' ಎಂಬ ಮರಾಠಿ ಸೆಂಟಿಮೆಂಟಿನ ನಮ್ಮ ಚಳುವಳಿಯನ್ನು ಎಂಎನ್ಎಸ್ ಹೈಜಾಕ್ ಮಾಡುತ್ತದೆ ಎಂದು ಶಿವಸೇನೆ ದೂರಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಾದ ಬಳಿಕ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಹಾರ ಮತ್ತು ಉತ್ತರ ಭಾರತದ ರಾಜಕಾರಣಿಗಳು ಠಾಕ್ರೆ ವಿರುದ್ಧ ದಂಗೆ ಎದ್ದರು. ಬಿಹಾರಿಗಳ ವಿಚಾರವೆಂದು ಬಿಹಾರದ ರಾಜಕಾರಣಿಗಳೆಲ್ಲ ಒಗ್ಗಟ್ಟು ಪ್ರದರ್ಶಿಸಿದರೂ, ವಿವಿಧ ಪಕ್ಷಗಳ ರಾಜಕಾರಣಿಗಳು (ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್‌ರಂತಹ) ತಾಕತ್ತಿದ್ದರೆ ರಾಜೀನಾಮೆ ನೀಡುವ ಸವಾಲುಗಳನ್ನು ಪರಸ್ಪರ ಹಾಕಿಕೊಂಡರು. ಕೊನೆಗೆ ಯಾರೂ ರಾಜೀನಾಮೆ ನೀಡಿಲ್ಲ, ಅಥವಾ ಸಂಸದರು ನೀಡಿದ ರಾಜೀನಾಮೆ ಸ್ವೀಕೃತವಾಗಲಿಲ್ಲ ಎಂಬುದು ಬೇರೆ ವಿಚಾರ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220064_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಈ ಮಧ್ಯೆ, ರಾಹುಲ್ ರಾಜ್ ಎಂಬ 21ರ ಹರೆಯದ ಉನ್ಮತ್ತ ಯುವಕನೊಬ್ಬ ಏಕಾಂಗಿಯಾಗಿ ಸಶಸ್ತ್ರ ದಂಗೆ ದಾಖಲಿಸಿ ಪೊಲೀಸರ ಗುಂಡಿಗೆ ಬಲಿಯಾದ ಘಟನೆಯೂ 2008ರ ಕಾಲಗರ್ಭದಲ್ಲಿ ಸೇರಿದೆ. ಮುಂಬೈಗೆ ಆಗಮಿಸಿದ್ದ ಈ ಹುಡುಗ, ಕೈಯಲ್ಲಿ ಪಿಸ್ತೂಲು ಹಿಡಿದು ಬೆಸ್ಟ್ ಬಸ್ಸೊಂದರಲ್ಲೇರಿ, ಬಸ್ಸನ್ನು ಒತ್ತೆಯಾಗಿಸಿಕೊಳ್ಳಲು ಪ್ರಯತ್ನಿಸಿದ್ದ. ಬಸ್ಸಿನ ನಿರ್ವಾಹಕ ಮತ್ತು ಪ್ರಯಾಣಿಕರೊಡನೆ ದುಂಡಾವರ್ತನೆ ತೋರಿದ್ದು, ತಾನು ರಾಜ್ ಠಾಕ್ರೆಯನ್ನು ಕೊಲ್ಲಲು ಬಂದಿದ್ದೇನೆ ಎನ್ನುತ್ತಾ ದಾಂಧಲೆ ಎಬ್ಬಿಸಿ ಸಾರ್ವಜನಿಕರಿಗೆ ಸಂಕಟ ನೀಡಿದ್ದ. ಕೈಯಲ್ಲಿ ಪಿಸ್ತೂಲು ಹಿಡಿದಿದ್ದ ಈತನ ಮೇಲೆ ಪೊಲೀಸರು ಗುಂಡು ಹಾರಿಸಿದಾಗ, ಈತ ಸಾವನ್ನಪ್ಪಿದ್ದ. ಈ ಘಟನೆಯೂ ಸಾಕಷ್ಟು ವಿವಾದಕ್ಕೀಡಾಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಲೋಕಲ್ ರೈಲಿನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಯುವಕನೊಬ್ಬನ ಮೇಲೆ ನಡೆದ ಹಲ್ಲೆಯಿಂದಾಗಿ ಆತ ಅಸುನೀಗಿದ ಘಟನೆಯೂ ವಿವಾದಕ್ಕೆಡೆ ಮಾಡಿತ್ತು. ನಾಲ್ಕು ಮಂದಿ ಉತ್ತರ ಪ್ರದೇಶದ ಯುವಕರು ಹಬ್ಬಕ್ಕೆ ಊರಿಗೆ ತೆರಳುತ್ತಿದ್ದರು. ರೈಲಿನಲ್ಲಿದ್ದ ಸುಮಾರು ಹನ್ನೊಂದು ಮಂದಿಯಿದ್ದ ಮರಾಠಿ ಭಾಷಿಕರ ತಂಡಕ್ಕೂ ಇವರಿಗೂ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಹಿಂದಿ ಮಾತನಾಡುತ್ತಿದ್ದ ಇವರು ಹೊಂದಿದ್ದ ಸೂಟ್‌ಕೇಸ್‌ಗಳನ್ನು ಕಂಡ ಮರಾಠಿ ಯುವಕರು, ಊರಿಗೆ ಹೋದ ನೀವು ಅಲ್ಲೇ ಇರಿ ಮತ್ತೆ ಮರಳಬೇಡಿರೆಂದರಂತೆ. ಹೀಗೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದು, ಆಯಕಟ್ಟಿನ ಜಾಗಕ್ಕೆ ಏಟು ಬಿದ್ದಿದ್ದ ಯುವಕನೊಬ್ಬ ಸಾವನ್ನುಪ್ಪಿದ್ದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆಲ್ಲ ಮರಾಠಿಗರ ಹಿತಕಾಪಾಡಲು ಮುಂದಾದ ಎಂಎನ್ಎಸ್ ಮುಖ್ಯಸ್ಥರು ಮತ್ತು ಕಾರ್ಯಕರ್ತರ ಕೆಂಗಣ್ಣಿಗೆ ಬಿದ್ದ ಅಮಿತಾಭ್ ಬಚ್ಚನ್ ಕುಟುಂಬ, ಹಿಂದಿಮಾತಾಡುತ್ತೇನೆಂದು ಸಿನಿಮಾ ಸಮಾರಂಭದಲ್ಲಿ ಜಯಾಬಚ್ಚನ್ ನೀಡಿದ್ದ ಹೇಳಿಕೆಗೆ ರಾಜಕೀಯ ಲೇಪನವಾಯಿತು. ಕೊನೆಗೆ ಅಮಿತಾಭ್ ಬಚ್ಚನ್ ಕ್ಷಮೆಯನ್ನೂ ಯಾಚಿಸಿದರು. ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಸವಾಲು ಹಾಕಿದ ರಾಜ್ ಠಾಕ್ರೆ ಎರಡೆರಡು ಬಾರಿ ಬಂಧನಕ್ಕೀಡಾಗಿ ಜಾಮೀನು ಪಡೆದರು. ಉದ್ರೇಕಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ  ಆದೇಶ ಹೊರಡಿಸಿದ್ದರೂ, ಪತ್ರಿಕಾಗೋಷ್ಠಿಗಳನ್ನು ಕರೆದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನವೆಂಬರ್ 26ರಂದು ಮುಂಬೈ ಮೇಲೆ ಉಗ್ರರು ಹಿಂದೆಂದೂ ಕಾಣದಂತಹ ಘೋರ ರೀತಿಯ ದಾಳಿ ನಡೆಸಿ, ಮುಂಬೈಯ ತಾಜ್, ಒಬೇರಾಯ್ ಹೋಟೇಲುಗಳು ಮತ್ತು ನಾರಿಮನ್ ಹೌಸ್‌ಗಳನ್ನು ಒತ್ತೆಯಾಗಿಸಿ, ಯದ್ವಾತದ್ವಾ ಗುಂಡುಹಾರಿಸಿದರು. ಈ ವೇಳೆ ಬಂದ ಎನ್ಎಸ್‌ಜಿ ಕಮಾಂಡೋಗಳು ಉಗ್ರರ ಹೆಡೆಮುರಿ ಕಟ್ಟಿದರು. ಈ ಘಟನೆಯ ಬಳಿಕ ಮರಾಠಿಗರ ರಕ್ಷಣೆಯ ನೆಪ ಇಟ್ಟು ರಾಜಕೀಯ ಮಾಡಿದ ರಾಜ್ ಠಾಕ್ರೆ ತೀವ್ರ ಟೀಕೆಗೊಳಗಾದರು. ಮುಂಬೈಯನ್ನು ಉಗ್ರರ ಹಿಡಿತದಿಂದ ಮರಳಿ ಪಡೆಯಲು ಪ್ರಾಣದ ಹಂಗುತೊರೆದು ಕಾದಾಡಿದ ಎನ್ಎಸ್‌ಜಿಯಲ್ಲಿ ರಾಷ್ಟ್ರದ ಎಲ್ಲ ಭಾಗದ ಕಮಾಂಡೋಗಳು ಇದ್ದರು, ಈಗೇನು ಹೇಳುತ್ತೀರಿ ರಾಜ್ ಠಾಕ್ರೆ ಎಂಬ ಪ್ರಶ್ನೆಗಳು ಕೇಳಲ್ಪಟ್ಟವು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಘಟನೆಯ ಬಳಿಕ ಮಾತ್ರ ರಾಜ್ ಠಾಕ್ರೆ ಮಾಧ್ಯಮಗಳ ಮುಂದೆ ಕಾಣಲೂ ಇಲ್ಲ; ಕಮಕ್-ಕಿಮಕ್ ಅನ್ನಲೂ ಇಲ್ಲ!</font><font  style='font-size:11pt; color:#0000FF'><b>ನಕ್ಸಲ್ ರಗಳೆ    </font><font style=' color:#000000;'></b></font><br/><font  style='font-size:11pt; color:#000000'>ಒರಿಸ್ಸಾ, ಛತ್ತೀಸ್‌ಗಢ ಮತ್ತು ಕರ್ನಾಟಕಗಳಲ್ಲಿ ನಕ್ಸಲರು ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಪೊಲೀಸರ ಗಸ್ತು ವಾಹನದ ಮೇಲೆ ನಕ್ಸಲರು ನಡೆಸಿರುವ ಹೊಂಚು ದಾಳಿಯಲ್ಲಿ 15 ಪೊಲೀಸರು ಸಾವನ್ನಪ್ಪಿದ್ದರು. ಅಂತೆಯೇ ಕರ್ನಾಟಕ ಮತ್ತು ಛತ್ತೀಸ್‌ಗಢವೂ ನಕ್ಸಲ್‌ಬಾರಿ ಚಳುವಳಿಯಿಂದ ಮುಕ್ತವಾಗಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ಮೂವರು ನಕ್ಸಲರು ಪೊಲೀಸರೊಂದಿಗೆ ನಡೆಸಿರುವ ದಾಳಿಯಲ್ಲಿ ಸಾವನ್ನಪ್ಪಿದ ನೆನಪಿನ್ನೂ ಹಸಿಹಸಿ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ  </font><font style=' color:#000000;'></b></font><br/><font  style='font-size:11pt; color:#000000'>ನಕ್ಸಲ್ ಹಿಂಸೆಯಂತೆಯೇ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಒರಿಸ್ಸಾ ಮತ್ತು ಕರ್ನಾಟಕದಲ್ಲಿ ದಾಳಿಗಳು ನಡೆದಿದ್ದು, ಈ ಪ್ರಕರಣವು ಸಂಸತ್ತಿನಲ್ಲಿ ಧ್ವನಿಸಿದ್ದವು. ಒರಿಸ್ಸಾದಲ್ಲಿ ಕಳೆದ ಕ್ರಿಸ್‌ಮಸ್ ಆಚರಣೆ ವೇಳೆಗೆ ಹಿಂದೂ ಸಂಘಟನೆಗಳು ಮತ್ತು ಕ್ರೈಸ್ತರ ನಡುವೆ ಘರ್ಷಣೆಗಳಾಗಿದ್ದು ಹಲವಾರು ಕೈಸ್ತ ಪ್ರಾರ್ಥನಾ ಮಂದಿರಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ಆಶ್ರಮವಾಸಿಯಾಗಿದ್ದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹಾಗೂ ಇತರ ನಾಲ್ವರ ಹತ್ಯೆಯಾಗಿರುವುದು ಈ ಎರಡು ಸಮುದಾಯದ ನಡುವಿನ ಘರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿತ್ತು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220064_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಅಂತೆಯೇ ಕರ್ನಾಟಕದ ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಿಂದೂ ದೇವರುಗಳ ವಿರುದ್ಧ ಅವಹೇಳನ ಬರಹಗಳನ್ನು ಪ್ರಕಟಿಸಿ, ಬಲವಂತದ ಮತಾಂತರ ನಡೆಯುತ್ತದೆ ಎಂಬ ಅರೋಪಗಳೊಂದಿಗೆ ಕೆಲವು ಅನಧಿಕೃತ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಲಾಗಿತ್ತು. ಸಾಂಕ್ರಾಮಿಕ ಎಂಬಂತೆ ಈ ಘಟನೆ ಪಕ್ಕದ ಪ್ರದೇಶಗಳಿಗೂ ವ್ಯಾಪಿಸಿ ಗಲಭೆ, ಘರ್ಷಣೆಗಳಿಗೆ ನಾಂದಿಯಾಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒರಿಸ್ಸಾದಲ್ಲಿ ಚರ್ಚುಗಳ ಮೇಲೆ ನಡೆದ ದಾಳಿಯ ವೇಳೆಗೆ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪವು ಸಾರ್ವಜನಿಕ ಖಂಡನೆಗೀಡಾಗಿತ್ತು. ಪೊಲೀಸರು ಸನ್ಯಾಸಿನಿಯ ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪಗಳು ವಿವಾದಕ್ಕೆಡೆ ಮಾಡಿದ್ದವು. ಆದರೆ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಯಿತು, ಠಾಣೆಗೆ ದೂರು ನೀಡಲು ತೆರಳಿದಾಗ ಹಾಕಿಕೊಳ್ಳಲು ಬಟ್ಟೆಯನ್ನೂ ನೀಡಿಲ್ಲ, ತಾನು ಪೆಟ್ಟಿಕೋಟಿನಲ್ಲೇ ತೆರಳಬೇಕಾಯಿತು ಎಂದೆಲ್ಲ ಪತ್ರಿಕಾಗೋಷ್ಠಿಯಲ್ಲಿ ಬರೆದು ತಂದ ಹೇಳಿಕೆಯನ್ನು ಓದಿದ್ದ ಅದೇ ಸನ್ಯಾಸಿನಿ, ಪೊಲೀಸರಿಗೆ ಹೇಳಿಕೆ ನೀಡಿದಾಗ ಇದಕ್ಕೆ ವ್ಯತಿರಿಕ್ತ ಎಂಬಂತಹ ಹೇಳಿಕೆ ನೀಡಿದ್ದರು. "ತನ್ನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ, ತಾನು ಆತನಿಂದ ತಪ್ಪಿಸಿಕೊಳ್ಳಲು ಸೆಣಸಾಡಿದೆ. ಬಳಿಕ ಮತ್ತಿಬ್ಬರು ಅತ್ಯಾಚಾರ ಎಸಗಲು ಮುಂದಾದಾಗ ಹಿಂದೂ ಒಬ್ಬ ನನ್ನನ್ನು ರಕ್ಷಿಸಿದ್ದು, ಸಾಮೂಹಿಕ ಅತ್ಯಾಚಾರವಾಗುವುದನ್ನು ತಪ್ಪಿಸಿದ" ಎಂಬ ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಯನ್ನು ಗಮನಿಸಿದಾಗ ಒಟ್ಟಾರೆ ಘಟನೆಯ ಮೇಲೆಯೇ ಸಂಶಯ ಹುಟ್ಟಿಕೊಳ್ಳುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಉಗ್ರರ ದಾಳಿಗಳು   </font><font style=' color:#000000;'></b></font><br/><font  style='font-size:11pt; color:#000000'>ರಾಷ್ಟ್ರವು ವರ್ಷವಿಡೀ ಭಯೋತ್ಪಾದನಾ ದಾಳಿಯಿಂದ ನಲುಗಿ ಹೋಗಿದೆ. ದೆಹಲಿ, ಮುಂಬೈ, ಬೆಂಗಳೂರು, ಗುವಾಹತಿ, ಅಹಮದಾಬಾದ್, ಲಕ್ನೋ, ಜೈಪುರ ಸೇರಿದಂತೆ ರಾಷ್ಟ್ರದ ಉದ್ದಗಲದಲ್ಲಿ ಉಗ್ರರು ದಾಳಿ ನಡೆಸುತ್ತಲೇ ಹೋದರು. (ಭಯೋತ್ಪಾದನಾ ದಾಳಿಯ ಕುರಿತೇ ಈ ವಿಶೇಷ ಪುಟದಲ್ಲಿ ಮತ್ತೊಂದು ಲೇಖನವಿದೆ) ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಆಗದ ಷಂಡತನ, ಕೊಳಕು ರಾಜಕೀಯದಿಂದಾಗಿ ಅದೆಷ್ಟೋ ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿರುವುದು 2008ರ ಇನ್ನೊಂದು ವಿಪರ್ಯಾಸ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220064_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಯಾವತ್ತೋ ಸತ್ತುಹೋಗಿರುವ ಬಾಬರನೆಂಬೋ ಮುಸ್ಲಿಮ, ರಾಮ ಹುಟ್ಟಿದ ಅಯೋಧ್ಯೆಯಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿದ ಎಂಬ ಕಾರಣಕ್ಕೆ ಸದರೀ ಬಾಬರನ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹೊರಟು, ಈಗ್ಗೆ ಹದಿನಾರು ವರ್ಷದ ಹಿಂದೆ ಅಲ್ಲಿದ್ದ ಪುರಾತನ ಮಸೀದಿಯನ್ನು ಕೆಡವಿರುವುದು, ಕಾಂದಹಾರ್ ವಿಮಾನ ಅಪಹರಣವಾದಾಗ, ಒತ್ತೆಯಾಳುಗಳಾಗಿದ್ದ ಪ್ರಯಾಣಿಕರ ಸುರಕ್ಷೆಯ ಹಿನ್ನೆಲೆಯಲ್ಲಿ ಅಪಹರಣಕಾರರ ಬೇಡಿಕೆಗೆ ತಲೆಬಾಗಿ ಸೆರೆಯಲ್ಲಿದ್ದ ಉಗ್ರ ಮಸೂದ್‍‌ನನ್ನು ಬಿಡುಗಡೆ ಮಾಡಿರುವುದು, ಸಂಸತ್ ಮೇಲೆ ದಾಳಿ ನಡೆಸಿರುವ ರೂವಾರಿ ಅಫ್ಜಲ್ ಗುರು ಎಂಬಾತನ ವಿರುದ್ಧ ಸರ್ವೋಚ್ಛ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಜಾರಿಗೆ ತರಲು ಆತ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ನೆಪ ಒಡ್ಡುತ್ತಿರುವುದು, ವಿಧ್ವಂಸಕ ಕಾರ್ಯಗಳನ್ನು ನಡೆಸಿರುವ ದುರುಳರ ಮಾನವಹಕ್ಕುಗಳ ಸಂರಕ್ಷಣೆಯ ಬಗ್ಗೆ ವ್ಯಕ್ತವಾಗುವ ಪ್ರತಿಭಟನೆಗಳು ಮತ್ತು ಒಟ್ಟಾರೆಯಾಗಿ ವೋಟ್‌ಬ್ಯಾಂಕ್ ರಾಜಕೀಯ - ಈ ಎಲ್ಲವುಗಳ ಫಲ ಎಂಬಂತೆ ಈ ವರ್ಷದ ನವೆಂಬರ್ 26ರಂದು ಮುಂಬೈಯಲ್ಲಿ ಹಿಂದೆಂದೂ ನಡೆಯದಿರುವಂತೆ ದಾಳಿ ನಡೆದು ಹೋಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಚೆನ್ನಾಗಿ ಅಭ್ಯಾಸ ನಡೆಸಿದ ಕ್ರೀಡಾಪಡುಗಳು ಆಟದ ಅಂಗಳಕ್ಕೆ ಇಳಿದಷ್ಟೇ ಸಲೀಸಾಗಿ ಮುಂಬೈಯನ್ನು ತಮ್ಮ ಆಡುಂಬೊಲವಾಗಿ ಮಾಡಿಕೊಂಡ ತರಬೇತುಗೊಂಡ ಬೆರಳೆಣಿಕೆಯ ಹತ್ತು ಮಂದಿ ಉಗ್ರರು ಸಲೀಸಾಗಿ ಎಲ್ಲೆಂದರಲ್ಲಿ ನುಗ್ಗಿ ಗುಂಡು, ಗ್ರೆನೇಡುಗಳನ್ನು ಹಾರಿಸಿದ ಪರಿ ಇಷ್ಟುದೊಡ್ಡ ರಾಷ್ಟ್ರದ ಭದ್ರತಾ ವ್ಯವಸ್ಥೆಯನ್ನು ಅಣಕಿಸಿ ಅಣಕಿಸಿ ನಕ್ಕಿತು. ದಾಳಿಕೋರರ ದೇಹಭಾಷೆಯು ಇಲ್ಲಿ ಏನೂಮಾಡಿದರೂ ದಕ್ಕಿಸಿಕೊಂಡೇವೂ ಎಂಬಂತಿತ್ತು. ಪ್ರತಿಯೊಂದು ವಿಚಾರವನ್ನು, ತಮ್ಮ ದಾಳಿಯ ಗುರಿಗಳನ್ನು ಚೆನ್ನಾಗಿ ಅಭ್ಯಸಿಸಿದ್ದ ಉಗ್ರ ಹುಡುಗರು ಅತ್ಯಂತ ಹರ್ಷದಿಂದ, ಲವಲವಿಕೆಯಿಂದ, ಆತ್ಮವಿಶ್ವಾಸದಿಂದ ಲೀಲಾಜಾಲವಾಗಿ ತಮ್ಮ ದುಷ್ಕೃತ್ಯವನ್ನು ನಡೆಸುತ್ತಿದ್ದರು ಎಂದು ಇವರ ದಾಳಿಯಿಂದ ಪಾರಾದವರು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಭದ್ರತಾ ಮತ್ತು ಬೇಹುಗಾರಿಕಾ ವ್ಯವಸ್ಥೆಯು ಈ ಉಗ್ರರ ಭಯೋತ್ಪಾದನಾ ಬದ್ಧತೆಯಿಂದ ಕಲಿಯಬೇಕಿರುವುದು ಬಹಳಷ್ಟಿದೆ ಎಂಬ ಸಂದೇಶ ರವಾನೆಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಲು ಹಾಕಲು ಹೊರಟಿರುವ ನಮ್ಮ ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ಛೀ..ಥೂ ಎಂಬುದಾಗಿ ಉಗಿಸಿಕೊಂಡಿದ್ದಾರೆ. ಇದೀಗ ಜ್ಞಾನೋದಯವಾದಂತೆ ಸರಕಾರವೂ ಉಗ್ರರ ವಿರುದ್ಧ ಉಗ್ರ ಕ್ರಮಕೈಗೊಳ್ಳಲು ಮುಂದಾಗಿದೆ ಮತ್ತು ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿವೆ. ಕಾನೂನು ಕಠಿಣಗೊಳಿಸಿದೆ, ರಾಷ್ಟ್ರೀಯ ತನಿಖಾ ಏಜೆನ್ಸಿ ಹುಟ್ಟು ಪಡೆದಿದೆ. ಪಾಕಿಸ್ತಾನದೊಂದಿಗಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಎಲ್ಲ ಘಟನೆಗಳನ್ನು ಕಂಡ ಜನಸಾಮಾನ್ಯನಿಗೆ ಉಗ್ರವಾದ, ಭಯೋತ್ಪಾದನೆ ಅಥವಾ ಆತಂಕವಾದವೆಂಬ ಶಬ್ದ ಈಗ ಅತ್ಯುಗ್ರವಾಗಿ ಕೇಳಿ ಭಯ ಇಲ್ಲವೇ ಆತಂಕ ಹುಟ್ಟಿಸದೇ, ಅತ್ಯಂತ ಸಹಜ ಶಬ್ದ ಎಂಬಂತೆ ಕಿವಿಯ ತಮಟೆಗೆ ಅಪ್ಪಳಿಸುತ್ತದೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಹಿಂದೂ ಭಯೋತ್ಪಾದನೆ   </font><font style=' color:#000000;'></b></font><br/><font  style='font-size:11pt; color:#000000'>ಮಾಲೆಗಾಂವ್‌ನಲ್ಲಿ ಸೆಪ್ಟೆಂಬರ್ 29ರಂದು ನಡೆಸಿರುವ ಬಾಂಬ್ ದಾಳಿಯ ಹಿಂದೆ ಹಿಂದೂ ಸಂಘಟನೆ ಅಭಿನವ್ ಭಾರತ್ ಎಂಬುದರ ಕೈವಾಡ ಇದೆ ಎಂಬುದಾಗಿ ತನಿಖೆಯಲ್ಲಿ ಪತ್ತೆಯಾಗಿರುವುದು ಭಯೋತ್ಪಾದನೆಯ ಪಟ್ಟಿಗೆ ಹಿಂದೂ ಭಯೋತ್ಪಾದನೆ ಎಂಬ ಹೆಸರು ಸೇರಿಕೊಂಡಿತು. ಸಾಧ್ವಿ ಪ್ರಜ್ಞಾ (ಪ್ರಗ್ಯಾ) ಸಿಂಗ್ ಠಾಕೂರ್ ಎಂಬಾಕೆಯ ದ್ವಿಚಕ್ರವಾಹನವನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ತಿಳಿದ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದರ ಎಳೆಯನ್ನು ಹಿಡಿದು ಸುಮಾರು ಹನ್ನೊಂದು ಜನರನ್ನು ಬಂಧಿಸಿದೆ. ಬಂಧಿತರಲ್ಲಿ ದಯಾನಂದ ಪಾಂಡೆ ಎಂಬ ಸ್ವಯಂ ಘೋಷಿತ ಸ್ವಾಮೀಜಿ, ಸೇವಾನಿರತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಅಭಿನವ ಭಾರತ್‌ನ ಇತರ ಕಾರ್ಯಕರ್ತರು ಸೇರಿದ್ದಾರೆ. ಸ್ಫೋಟಕ್ಕೆ ಬಳಸಿರುವ ಈ ದ್ವಿಚಕ್ರವಾಹನವನ್ನು ತಾನು ಮಾರಾಟ ಮಾಡಿದ್ದೇನೆ ಎಂಬುದು ಸಾಧ್ವಿ ಹೇಳಿಕೆ. </font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220064_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಬೇರಾವ ಬಾಂಬ್ ಸ್ಫೋಟ ಪ್ರಕರಣಕ್ಕಿಂತ ಹೆಚ್ಚಿನ ಆಸಕ್ತಿಯಿಂದ, ಚುರುಕಿನಿಂದ ಪ್ರಕರಣದ ಹಿಂದೆ ಪೊಲೀಸರು ಮುರಕ್ಕೊಂಡು ಬಿದ್ದಿರುವುದು, ತನಿಖೆಯ ವೇಗ, ಮಾಧ್ಯಮಗಳಿಗೆ ಸೋರುತ್ತಿದ್ದ ವಿಚಾರಗಳು, ನ್ಯಾಯಾಲಯಗಳಲ್ಲಿ ನೀಡುತ್ತಿದ್ದ ಹೇಳಿಕೆಗಳು, ಈ ಪ್ರಕರಣದ ಆರೋಪಿಗಳ ಮಾನವಹಕ್ಕುಗಳ ಬಗ್ಗೆ ಯಾರೂ ವಹಿಸದ ಕಾಳಜಿ ಎಲ್ಲವುಗಳೂ ಪ್ರಕರಣವನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆ ನೀಡುವ ಧಾವಂತದ ಹಿಂದೆ ಬೇರೇನೋ ಇದೆ ಎಂಬ ವಾಸನೆ ಹೊರಡುವಂತೆ ಮಾಡಿತ್ತು. ಪೋಟಾ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿದ್ದ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿರುವ ಮಹಾರಾಷ್ಟ್ರದ ಪೋಲೀಸರು ಈ ಆರೋಪಿಗಳ ಮೇಲೆ ಪೋಟಾ ಕಾಯ್ದೆಯಂತಹ ಮೋಕೋ ಕಾನೂನನ್ನು ಹೇರಿದ್ದಾರೆ. ಈ ಮೂಲಕ ಬಿಜೆಪಿಗೆ 'ಹೆಂಗೆ?' ಎಂಬ ಲುಕ್ ಕೊಟ್ಟಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಮುಂಬೈ ದಾಳಿಯು ರಾಷ್ಟ್ರವನ್ನೇ ನಡುಗಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಸದ್ಯಕ್ಕೀಗ ಮಾಲೆಗಾಂವ್ ಸ್ಫೋಟ ಪ್ರಕರಣ ಸುದ್ದಿಯಲ್ಲಿಲ್ಲ. ಈ ಪ್ರಕರಣದ ಬೆನ್ನುಬಿದ್ದು, ಎದ್ದುಬಿದ್ದು ವರದಿ ಮಾಡುತ್ತಿದ್ದ ಮಾಧ್ಯಮಗಳೂ ಈ ಪ್ರಕರಣವನ್ನು ಸದ್ಯದ ಮಟ್ಟಿಗೆ ಮರೆತಂತಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಯಾರೇ ಆಗಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ಮೂಲಕ ಯಾವುದೇ ಸುಧಾರಣೆ ತರಲು ಸಾಧ್ಯವಿಲ್ಲ. ಉಗ್ರರು ಎಲ್ಲರೂ ಉಗ್ರರೇ. ಅವರು ಜಾತಿ, ಮತ, ಧರ್ಮಗಳನ್ನು ಮೀರಿದವರು. ಎಲ್ಲರ ವಿರುದ್ಧವೂ ಉಗ್ರ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅನಿವಾರ್ಯ ಮತ್ತು ಅವಶ್ಯಕ ಕೂಡ. ಕೆಲವರ ಮೇಲೆ ಮೃದು ಧೋರಣೆ ಮತ್ತು ಇನ್ನು ಕೆಲವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಈ ಕುರಿತು ಜನಸಾಮಾನ್ಯರು ಏನೆಂದು ಅರ್ಥೈಸಿಕೊಳ್ಳಬೇಕು?</font><font  style='font-size:11pt; color:#0000FF'><b>ಉಗ್ರರಿಗೆ ಜೀವತೆತ್ತ ರಾಷ್ಟ್ರಯೋಧರು  </font><font style=' color:#000000;'></b></font><br/><font  style='font-size:11pt; color:#000000'>ಮುಂಬೈದಾಳಿಕೋರರ ವಿರುದ್ಧ ಹೋರಾಡುವ ವೇಳೆಗೆ, ರಾಷ್ಟ್ರವು ಧೀರ ಯೋಧರನ್ನು ಕಳೆದು ಕೊಂಡಿದೆ. ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ, ಎನ್‌ಕೌಂಟರ್ ತಜ್ಞ ವಿಜಯ್ ಸಾಲಸ್ಕರ್, ಧೀರ ಪೊಲೀಸ್ ಅಧಿಕಾರಿ ಅಶೋಕ್ ಕಾಮ್ಟೆ, ಎನ್ಎಸ್‌ಜಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗಜೇಂದ್ರ ಸಿಂಗ್ ಪೊಲೀಸ್ ಪೇದೆಗಳಾದ ಪ್ರಕಾಶ್ ಮೋರೆ, ಅಂಬಾದಾಸ್ ಪವಾರ್, ಎಂ,ಸಿ ಚೌಧರಿ, ಶಶಾಂಕ್ ಶಿಂಧೆ, ಬಾಪುಸಾಹೇಬ್ ದುರ್ಗುಡೆ, ಬಾಬಾಸಾಹೇಬ್ ಭೋಂಸ್ಲೆ, ಅರುಣ್ ಚಿಟ್ಟೆ, ಜಯಂತ್ ಪಾಟೀಲ್, ಯೋಗೇಶ್ ಪಾಟಿಲ್, ಅಂಬಾದಾಸ್ ಪವಾರ್, ವಿಜಯ್ ಖಾಂಡೇಕರ್, ರಾಹುಲ್ ಶಿಂಧೆ, ಮುಖೇಶ್ ಜಾಧವ್ ಇವರುಗಳು ಉಗ್ರರೊಂದಿಗೆ ಹೋರಾಡುವ ವೇಳೆ ವೀರಮರಣವನ್ನಪ್ಪಿದ್ದು, ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಲ್ಲದೆ, ದೆಹಲಿಯ ಜಾಮಿಯಾ ನಗರದಲ್ಲಿ ಅಗಡಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸಧಿಕಾರಿ ಮೋಹನ್ ಚಂದ್ರಾ ಶರ್ಮಾ ಎಂಬವರು ಸಾವನ್ನಪ್ಪಿದ್ದರು. ಇವರೆಲ್ಲರ ಸಾವು ನಿಜ ಅರ್ಥದಲ್ಲಿ  ತುಂಬಲಾರದ ನಷ್ಟ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಅಣುಒಪ್ಪಂದ   </font><font style=' color:#000000;'></b></font><br/><font  style='font-size:11pt; color:#000000'>ಅಣುಒಪ್ಪಂದ ಕಾರ್ಯಗತವಾಗಿರುವುದು 2008ರಲ್ಲಿ ಯುಪಿಎ ಸರ್ಕಾರ ತಲುಪಿದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು. ಭಾರತ- ಅಮೆರಿಕ ಅಣು ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿಹಾಕಿದ್ದು ಭಾರತ ಅಮೆರಿಕದ ಸಹಾಯದೊಂದಿಗೆ ಅಣುಶಕ್ತಿ ಉತ್ಪಾದಿಸಲು ಶಕ್ತ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತವು 30 ವರ್ಷಗಳ ಅಸ್ಪಶೃತೆಯಿಂದ ಹೊರಬಂದಿದೆ. ಐಎಇಎಯು ಅಣು ಒಪ್ಪಂದಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಭಾರತವು ಇತರ ಅಣುಶಕ್ತಿ ರಾಷ್ಟ್ರಗಳೊಂದಿಗೆ ಅಣು ವಹಿವಾಟು ನಡೆಸಬಹುದಾಗಿದೆ. ಆದರೆ ಈ ಒಪ್ಪಂದ ಆರೋಪ ವಿರೋಧಗಳಿಂದ ಮುಕ್ತವಾಗಿಲ್ಲ. ರಾಷ್ಟ್ರದ ಸಾರ್ವಭೌಮತೆಯನ್ನು ಯುಪಿಎ ಸರ್ಕಾರ ಅಮೆರಿಕದ ಮುಂದೆ ಒತ್ತೆ ಇರಿಸಿತು ಎಂಬ ಆರೋಪವನ್ನು ಮನಮೋಹನ್ ಸಿಂಗ್ ಎದುರಿಸುತ್ತಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬಿಹಾರ, ಅಸ್ಸಾಂ ಪ್ರವಾಹ  </font><font style=' color:#000000;'></b></font><br/><font  style='font-size:11pt; color:#000000'>ಕೋಸಿ ನದಿಗೆ ನೇಪಾಳದಲ್ಲಿ ಕಟ್ಟಿದ ಅಣೆಕಟ್ಟೆಯ ಸ್ವಲ್ಪ ದೂರದಲ್ಲಿರುವ ಕಟ್ಟೆ ಒಡೆದು ಹರಿದ ನೀರು ಬಿಹಾರದ ಎಂಟು ಜಿಲ್ಲೆಗಳನ್ನು ಕೊಚ್ಚಿಕೊಂಡೇ ಹೋಯಿತು. ಲಕ್ಷಾಂತರ ಮಂದಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತೆಯೇ ಅಸ್ಸಾಮಿನಲ್ಲಿ ಉಕ್ಕಿಹರಿದ ಪ್ರವಾಹವೂ ಸಾಕಷ್ಟು ವಿಪತ್ತನ್ನು ತಂದಿರಿಸಿದೆ. ಎಲ್ಲವನ್ನೂ ಕಳಕೊಂಡವರು ಸರ್ಕಾರಿ ಶಿಬಿರಗಳಲ್ಲಿ ಅನಿವಾರ್ಯವಾಗಿ ತಂಗಿದ್ದು, ಹೊಸಬೆಳಕಿಗಾಗಿ ಎದುರು ನೋಡುತ್ತಿದ್ದಾರೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಇತರ  </font><font style=' color:#000000;'></b></font><br/><font  style='font-size:11pt; color:#000000'>ಕಳೆದ ವರ್ಷ ಸರಣಿ ಕೊಲೆಗಳಿಂದಾಗಿ ಸುದ್ದಿಯಲ್ಲಿದ್ದ ಉತ್ತರ ಪ್ರದೇಶದ ನೋಯ್ಡಾ ಈ ವರ್ಷವೂ ಸುದ್ದಿಯಲ್ಲಿತ್ತು. ಹದಿನಾಲ್ಕು ವರ್ಷದ ಬಾಲಕಿ ಅರುಷಿ ತಲ್ವಾರ್ ಮತ್ತು ಆಕೆಯ ಮನೆಗೆಲಸ ಮಾಡಿಕೊಂಡಿದ್ದ ಹೇಮಂತ್ ಎಂಬಾತನ ಸಾವು ರಾಷ್ಟ್ರಾದ್ಯಂತ ಸಂಚಲನ ಮೂಡಿಸಿತ್ತು. ಈ ಪ್ರಕರಣ ಹಲವು ತಿರುವುಗಳನ್ನು ಪಡೆದಿದ್ದು, ರಂಗುರಂಗಿನ ಕಥೆಗಳು ಬಿತ್ತರವಾಗಿದ್ದವು. ಇವುಗಳನ್ನು ಯಾವುದು ನಿಜ, ಯಾವುದು ಸುಳ್ಳು ಎಂಬುದು ಸತ್ತವರಿಗಷ್ಟೇ ಗೊತ್ತು. ಸಾವನ್ನಪ್ಪಿರುವ ಹುಡುಗಿ ಅರುಷಿ ತಲ್ವಾರ್‌ಳ ತಂದೆ ರಾಕೇಶ್ ತಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಸುಮಾರು ಒಂದುವರೆ ತಿಂಗಳು ಜೈಲಿನಲ್ಲಿದ್ದರು. ಜೂನ್ ಒಂದರಂದು ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆಯಾದರೂ, ಕೊಲೆಗಾರನ್ಯಾರು ಎಂಬುದನ್ನು ಇನ್ನೂ ಭೇದಿಸಲಾಗಿಲ್ಲ. ಮತ್ತು ಈ ಸಂಬಂಧ ಬಂಧನಕ್ಕೀಡಾವರೆಲ್ಲ ಜಾಮೀನು ಪಡೆಯುವಲ್ಲಿ ಸಫಲರಾಗಿದ್ದಾರೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಚಂದ್ರಯಾನ ಎಂಬ ಯಶಸ್ಸಿನ ಕಾವ್ಯ  </font><font style=' color:#000000;'></b></font><br/>2008<font  style='font-size:11pt; color:#000000'>ರ ಅಕ್ಟೋಬರ್ 22ರ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಆ ದಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಒಂದು ನವ ಇತಿಹಾಸ ಬರೆಯಿತು. ಖಂಡಿತ, ಇದರ ಹಿಂದೆ ನಮ್ಮ ವಿಜ್ಞಾನಿಗಳ ಕನಸಿದೆ, ವರ್ಷಗಳಕಾಲದ ಶ್ರಮವಿದೆ. ಇದೆಲ್ಲವೂ ಸಾಕಾರಗೊಂಡ ಆ ಅನಿರ್ವಚನೀಯ ಆನಂದದ ಕ್ಷಣದಲ್ಲಿ ವಿಜ್ಞಾನಿಗಳ ಹರ್ಷ ಮುಗಿಲು ಮುಟ್ಟಿತ್ತು, ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ದೇಶೀ ತಂತ್ರಜ್ಞಾನದ ಮಾನವ ರಹಿತ ಈ ಚಂದ್ರಯಾನ ಉಪಗ್ರಹದ ತನ್ನ ಯಾನ ಆರಂಭಿಸಿದಾಗ ಸಹಸ್ರ ಸಹಸ್ರ ಕಣ್ಣುಗಳು ಕುತೂಹಲದಿಂದ ವೀಕ್ಷಿಸಿದವು.</font><br/><font  style='font-size:11pt; color:#000000'></font><br/>1,380 <font  style='font-size:11pt; color:#000000'>ಕೆಜಿ ತೂಕದ ಚಂದ್ರಯಾನವು 11 ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಉಪಗ್ರಹ ಉಡಾವಣೆಯ ಬಳಿಕದ ಎರಡು ವಾರಗಳ ಸರಣಿ ಪ್ರಕ್ರಿಯೆಯ ಬಳಿಕ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಿದ್ದು ಚಂದ್ರನ ಮೇಲ್ಮೈಗಿಂತ 100 ಕಿಲೋಮೀಟರ್ ಮೇಲ್ಗಡೆಗೆ ತಲುಪಿ ಕಾರ್ಯಾಚರಣೆ ಆರಂಭಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಚಂದ್ರಯಾನವು ಒಯ್ದಿರುವ 11 ಪೇಲೋ‌ಡ್‌ಗಳಲ್ಲಿ ಐದನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲಾಗಿದ್ದರೆ, ಮೂರನ್ನು ಯೂರೋಪ್ ಬಾಹ್ಯಾಕಾಶ ಏಜೆನ್ಸಿ ಹಾಗೂ ಒಂದು ಬಲ್ಗೇರಿಯಾ ಮತ್ತು ಎರಡು ಅಮೆರಿಕದಲ್ಲಿ ವೃದ್ಧಿಯಾಗಿದೆ. ಇವುಗಳು ಸುಮಾರು ಎರಡು ವರ್ಷಗಳ ಕಾಲ ಚಂದ್ರನ ಮೈಲೈಯ ಸಮಗ್ರ ವಿಚಾರಗಳ ಮಾಹಿತಿ ಸಂಗ್ರಹಿಸಲಿವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಇನ್ನುಳಿದಂತೆ  </b></font><br/><font  style='font-size:11pt; color:#000000'>* ವರ್ಷದ ಆದಿಯಲ್ಲಿ ಬೆಳಕಿಗೆ ಬಂದ ಕಿಡ್ನಿ ಹಗರಣದ ರೂವಾರಿ ಡ</font><font style='font-size:11pt;'>ಾ| </font><font style='font-size:11pt;'>ಅಮಿತ್ ನೇಪಾಳದಲ್ಲಿ ಬಂಧನ</font><br/><font  style='font-size:11pt; color:#000000'>* ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಕೇಶ್ ಶರ್ಮಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ.</font><br/><font  style='font-size:11pt; color:#000000'>* ಓಬಿಸಿ ಮೀಸಲಾತಿಗೆ ಅಸ್ತು.</font><br/><font  style='font-size:11pt; color:#000000'>* ನಟ ಸಂಜಯ್ ದತ್ ಮೂರನೇ ವಿವಾಹ ಮತ್ತು ಅದಕ್ಕೆ ಕಾನೂನು ತೊಡಕು.</font><br/><font  style='font-size:11pt; color:#000000'>* ಜೋಧಪುರ ಚಾಮುಂಡ ದೇವಾಲಯದಲ್ಲಿ ಕಾಲ್ತುಳಿತದಿಂದಾಗಿ 224 ಮಂದಿ ಸಾವು</font><br/><font  style='font-size:11pt; color:#000000'>* ತನ್ನ ಮಗನಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿಯಾಗಿದ್ದ ಮಾರ್ಗರೆಟ್ ಆಳ್ವ ರಾಜೀನಾಮೆ, ಸರಣಿ ಸರಣಿ ದಾಳಿಗಳಿಂದಾಗಿ ರಾಜೀನಾಮೆ ನೀಡಬೇಕಾಗಿ ಬಂದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಹಾಗೂ ಮತ್ತಿತರ ಪ್ರಕರಣಗಳು ಮಾಧ್ಯಮಗಳ ಹೆಡ್‌ಲೈನ್ ಹಿಟ್ ಮಾಡಿದ್ದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಟ್ಟಿನಲ್ಲಿ 2008 ಸಿಹಿ ಕಹಿಗಳ ಮಿಶ್ರಣ. ಮುಂಬೈ ದಾಳಿ, ಬಿಹಾರದಲ್ಲಿ ಉಕ್ಕಿ ಹರಿದ ಪ್ರವಾಹ ಮುಂತಾದವುಗಳು ಈ ವರ್ಷ ನಮಗೆ ಮರೆಯಾಗಲಾರದ ಪಾಠಗಳನ್ನು ಕಲಿಸಿದೆ. 2009 ಎಲ್ಲರಿಗೂ ಶಾಂತಿಯ, ಸೌಹಾರ್ದದ, ಅಭ್ಯುದಯದ ಆರೋಗ್ಯಕರ ವರ್ಷವಾಗಲಿ ಎಂಬ ಹಾರೈಕೆಯೊಂದಿಗೆ,</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮಸ್ಕಾರ.</font>]]></content:encoded>
      <pubDate>Fri, 26 Dec 2008 20:19:53 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಟಾಟಾದ ಸಣ್ಣಕಾರಿನ ದೊಡ್ಡ ಕನಸು]]></title>
      <link>https://kannada.webdunia.com/article/retrospection-08/ಟಾಟಾದ-ಸಣ್ಣಕಾರಿನ-ದೊಡ್ಡ-ಕನಸು-108122300049_1.htm</link>
      <guid>https://kannada.webdunia.com/article/retrospection-08/ಟಾಟಾದ-ಸಣ್ಣಕಾರಿನ-ದೊಡ್ಡ-ಕನಸು-108122300049_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[ನ್ಯಾನೋ ಕಾರೆಂಬ ಪುಟ್ಟ ಕಾರಿನ ಪರಿಕಲ್ಪನೆ ಅತಿ ದೊಡ್ಡ ಉದ್ಯಮಿ ರತನ್ ಟಾಟಾ ಅವರ ಕನಸಿನ ಕೂಸು. ಆದರೆ, ಮಧ್ಯಮ ವರ್ಗದವರ ಆಶಾಕಿರಣವಾಗಿ ಹೊರಹೊಮ್ಮಿದ್ದ ನ್ಯಾನೋ ಕಾರು ರಸ್ತೆಗಿಳಿಯಲು ಉಂಟಾಗಿರುವ ಅಡೆತಡೆಗಳು ಹಲವಾರು.]]></description>
      <content:encoded><![CDATA[<font  style='font-size:11pt; color:#0000FF'><b>ರಾಜೇಶ್ ಪಾಟೀಲ್  </font><font style=' color:#000000;'></b></font><br/><font  style='font-size:11pt; color:#000000'>ನ್ಯಾನೋ ಕಾರೆಂಬ ಪುಟ್ಟ ಕಾರಿನ ಪರಿಕಲ್ಪನೆ ಅತಿ ದೊಡ್ಡ ಉದ್ಯಮಿ ರತನ್ ಟಾಟಾ ಅವರ ಕನಸಿನ ಕೂಸು. ಆದರೆ, ಮಧ್ಯಮ ವರ್ಗದವರ ಆಶಾಕಿರಣವಾಗಿ ಹೊರಹೊಮ್ಮಿದ್ದ ನ್ಯಾನೋ ಕಾರು ರಸ್ತೆಗಿಳಿಯಲು ಉಂಟಾಗಿರುವ ಅಡೆತಡೆಗಳು ಹಲವಾರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/23/images/img1081223049_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಅಕ್ಟೋಬರ್ 11 ರಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಕಾರು ನೀಡುವುದಾಗಿ ಘೋಷಿಸಿದಾಗ ಭಾರತ ಸೇರಿದಂತೆ ಜಗತ್ತೇ ಅಚ್ಚರಿಯಿಂದ ಬೆಚ್ಚಿತ್ತು. ಕನಸಿನಲ್ಲೂ ಒಂದು ಲಕ್ಷ ರೂಪಾಯಿ ದರದ ಕಾರು ನೀಡಲು ಸಾಧ್ಯವಿಲ್ಲ ಎಂದು ಜಾಗತಿಕ ವಾಹನೋದ್ಯಮ ಟಾಟಾಗೆ ಸವಾಲೆಸೆಯಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸವಾಲನ್ನು ಸ್ವಿಕರಿಸಿದ ಟಾಟಾ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನ್ಯಾನೋ ಮಾಡೆಲ್ ಕಾರನ್ನು ಪ್ರದರ್ಶನದಲ್ಲಿ ಬಿಡುಗಡೆಗೊಳಿಸಿದಾಗ ಬೆರಗಿನಿಂದ ನೋಡಿದ ಜಗತ್ತು, ರತನ್ ಟಾಟಾ ಅವರನ್ನು ಹಾಡಿ ಹೊಗಳಿತು. ಪಶ್ಚಿಮ ಬಂಗಾಳವು ವಿಶೇಷ ಆರ್ಥಿಕವಲಯ ಯೋಜನೆಯಡಿ ಸಿಂಗೂರಿನಲ್ಲಿ ಕಾರು ತಯಾರಿಕಾ ಘಟಕಕ್ಕಾಗಿ 800 ಎಕರೆ ಭೂಮಿಯನ್ನು ನೀಡಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಮರೋಪಾದಿಯಲ್ಲಿ ಘಟಕದ ಕಾರ್ಯವನ್ನು ಟಾಟಾ ಸಂಸ್ಥೆ ಆರಂಭಿಸಿತು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಧರಣಿ ಕುಳಿತಿತು. ಘಟಕಕ್ಕಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿರುವ ಸರಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ ತೃಣಮೂಲ ಕಾಂಗ್ರೆಸ್ ಭೂಮಿಯನ್ನು ಮರಳಿಸುವಂತೆ ಒತ್ತಡ ತಂದಿದ್ದಲ್ಲದೇ ಭಾರಿ ಪ್ರಮಾಣದ ಪ್ರತಿಭಟನೆಯನ್ನು ಆರಂಭಿಸಿತು. ನ್ಯಾನೋ ಕಾರ್ಖಾನೆಯ ಮುಂದೆ ನಡೆಸಿದ ಪ್ರತಿಭಟನಾ  ಹಿಂಸಾಚಾರವು ಹಲವಾರು ಜೀವ ಬಲಿತೆಗೆದುಕೊಂಡಿದ್ದು, ಹಲವು ಆತಂಕಗಳನ್ನು ಸೃಷ್ಟಿಸಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪಶ್ಚಿಮ ಬಂಗಾಳ ಸರಕಾರ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ತೃಣ ಮೂಲ ಕಾಂಗ್ರೆಸ್ ನೇತೃತ್ವದ ಭೂಮಿ ಉಚ್ಚಡ್ ಪ್ರತಿರೋಧ್ ಸಮಿತಿ ರಚನೆಯಾಯಿತು. ಆಡಳಿತಾರೂಢ ಕಮ್ಯೂನಿಸ್ಟ್ ಕಾರ್ಯಕರ್ತರು ಮತ್ತು ಭೂಮಿ ಉಚ್ಚಡ್ ಸಮಿತಿಯ ನಡುವೆ ಅಕ್ಷರಶಃ ಕದನವೇ ನಡೆದು ಹೋಯಿತು. ಕೊಲೆ, ಅತ್ಯಾಚಾರ, ಅನಾಚಾರಗಳು ನಡೆದವು. ತತ್ಪರಿಣಾಮ ನ್ಯಾನೋ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತೃಣಮೂಲ ಪಕ್ಷದ ಕಾರ್ಯಕರ್ತರಿಂದ ಬೆದರಿಕೆ, ಹಲ್ಲೆ , ನಿರ್ಬಂಧ ವಿಧಿಸುವಂತಹ ಘಟನೆಗಳು ರತನ್ ಟಾಟಾ ಮನವನ್ನು ವಿಚಲಿತಗೊಳಿಸಿದವು.</font><br/>  <font  style='font-size:11pt; color:#000000'></font><br/><font  style='font-size:11pt; color:#000000'>ಸಿಂಗೂರಿನಲ್ಲಿರುವ ಟಾಟಾ ಮೋಟಾರ್ಸ್‌ನ ನ್ಯಾನೋ ಸ್ಥಾವರದ ಪ್ರವೇಶವನ್ನು ತೃಣಮೂಲ ಕಾಂಗ್ರೆಸ್ ಪ್ರತಿಭಟನಾಕಾರರು ನಿರ್ಬಂಧಿಸಿ, ನ್ಯಾನೋ ಸ್ಥಾವರದ ಸುತ್ತಲಿನ ಪ್ರದೇಶವನ್ನು ಮಮತಾ ಬ್ಯಾನರ್ಜಿ ಬೆಂಬಲಿಗರು ಸುತ್ತುವರಿದು ನ್ಯಾನೋ ನೌಕರರನ್ನು ಘಟಕದೊಳಗೆ ಪ್ರವೇಶಿಸಲು  ಅಡ್ಡಿಯಾದರು. ಹಿಂಸಾಚಾರಕ್ಕೆ ಬೆದರಿದ ನ್ಯಾನೋ ನೌಕರರು ಘಟಕದಿಂದ ದೂರ ಉಳಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಟಾಟಾ ನ್ಯಾನೋ ಕಾರು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ 400 ಎಕರೆ ಜಮೀನನ್ನು ರೈತರಿಗೆ ಹಿಂತಿರುಗಿಸಲು ಸಾಧ್ಯವಿಲ್ಲದಿದ್ದರೆ, ನ್ಯಾನೋ ಯೋಜನೆ ಸಿಂಗೂರಿನಿಂದ ತೆರಳಲಿ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಬೆಂಕಿಚೆಂಡು ಮಮತಾ ಬ್ಯಾನರ್ಜಿ ಒತ್ತಡದ ತಂತ್ರ ಅನುಸರಿಸಿದರು.</font><br/><font  style='font-size:11pt; color:#000000'></font><br/>"400 <font  style='font-size:11pt; color:#000000'>ಎಕರೆ ಜಮೀನನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಒಂದು ವೇಳೆ ಅದನ್ನು ಹಿಂತಿರುಗಿಸಿದಲ್ಲಿ, ಟಾಟಾ ಮೋಟಾರ್ಸ್ ಯೋಜನೆಯು ಸ್ಥಗಿತಗೊಳ್ಳುತ್ತದೆ. ಹಾಗಾಗುವುದು ನನಗೆ ಇಷ್ಟವಿಲ್ಲ" ಎಂಬುದಾಗಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಮಮತಾ ಹೇಳಿಕೆಗೆ ಪಟ್ಟುಹಿಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಕ್ಕೆ ಜಗ್ಗದ ಮಮತಾ, ನ್ಯಾನೋ ಕಾರು ಪ್ರಾರಂಭಗೊಳ್ಳಬೇಕು ಮತ್ತು ಕೃಷಿ ಭೂಮಿ ಉಳಿಯಬೇಕು ಇಲ್ಲವಾದಲ್ಲಿ, ನ್ಯಾನೋ ಸ್ಥಗಿತಗೊಳ್ಳಬೇಕು ಮತ್ತು ಕೃಷಿ ಭೂಮಿ ಉಳಿಯಬೇಕು ಎಂದು ಮಮತಾ ಹಠಹಿಡಿದು ಧರಣಿ ಕುಳಿತರು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರೈತರ ಬೆಂಬಲ  </font><font style=' color:#000000;'></b></font><br/><font  style='font-size:11pt; color:#000000'>ಪ್ರತಿಭಟನೆ ಹಾಗೂ ಹಿಂಸಾಚಾರ ನಿರಂತರವಾಗಿ ಮುಂದುವರಿದರೆ ನ್ಯಾನೊ ಕಾರು ಉತ್ಪಾದಕ ಘಟಕವನ್ನು ಸ್ಥಳಾಂತರಿಸುವುದಾಗಿ ರತನ್ ಟಾಟಾ ಹೇಳಿಕೆ ನೀಡಿದ ನಂತರ ರೈತರು ನ್ಯಾನೋ ಘಟಕವನ್ನು ಸ್ಥಳಾಂತರಿಸುವುದು ಬೇಡ ಎಂದು ಕೋರಿದರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/23/images/img1081223049_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಕೃಷಿ ಜಮಿನ್ ರಕ್ಷಾ ಸಮಿತಿಯ ಕಾರ್ಯಕರ್ತರು ನ್ಯಾನೊ ಕಾರು ಘಟಕಕ್ಕೆ ಬೆಂಬಲ ಸೂಚಿಸಿದರು. ಘಟಕ ಕಾರ್ಯಾರಂಭ ಮಾಡಿದಲ್ಲಿ ನಮ್ಮ ಸ್ಥಿತಿಗತಿ ಸುಧಾರಿಸುತ್ತದೆ. ಟಾಟಾ ಮೋಟಾರ್ಸ್ ನಿರ್ಗಮಿಸಿದಲ್ಲಿ ಜನತೆಗೆ ನಷ್ಟ ಎಂದು ರೈತ ಮುಖಂಡರು  ಹೇಳಿಕೆ ನೀಡಿದರು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಮಮತಾ ಗಡವು  </font><font style=' color:#000000;'></b></font><br/><font  style='font-size:11pt; color:#000000'>ಸೆಪ್ಟೆಂಬರ್ 22 ರಂದು ಸಿಂಗೂರ್‌‌ನ ಟಾಟಾ ನ್ಯಾನೋ ಘಟಕಕ್ಕಾಗಿ ವಶಪಡಿಸಿಕೊಂಡ ಭೂಮಿಯಲ್ಲಿ 400ಎಕರೆ ಭೂಮಿಯನ್ನು ಸೆಪ್ಟೆಂಬರ್ 7ರ ಒಪ್ಪಂದದಂತೆ ರೈತರಿಗೆ ವಾಪಸು ನೀಡಲು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಪಶ್ಚಿಮಬಂಗಾಳ ಸರ್ಕಾರಕ್ಕೆ 7ದಿನಗಳ ಅಂತಿಮ ಗಡುವು  ನೀಡಿ ಗಡುವಿನೊಳಗೆ ಭೂಮಿಯನ್ನು ಮರಳಿಸದಿದ್ದಲ್ಲಿ ಹೋರಾಟವನ್ನು ಮುಂದುವರಿಸುವುದಾಗಿ ರತನ್ ಟಾಟಾ ಹಾಗೂ ಪಶ್ಚಿಮ ಬಂಗಾಳ ಸರಕಾರಕ್ಕೆ ಎಚ್ಚರಿಕೆ ನೀಡಿದರು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸಿಂಗೂರ್‌ಗೆ ಟಾಟಾ   </font><font style=' color:#000000;'></b></font><br/><font  style='font-size:11pt; color:#000000'>ಪ್ರತಿದಿನ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಗಳಿಂದ ಬೇಸತ್ತ ರತನ್ ಟಾಟಾ ಅಕ್ಟೋಬರ್ 4 ರಂದು 1500 ಕೋಟಿ ವೆಚ್ಚದ ನ್ಯಾನೋ  ಘಟಕವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಅವರ ಮಧ್ಯೆ ನಡೆದ ಮಾತುಕತೆ ವಿಫಲವಾದ ನಂತರ  ಕಂಪೆನಿಯ ಉದ್ಯೋಗಿಗಳ ಭದ್ರತೆಗಾಗಿ ಸಿಂಗೂರ್‌ನಿಂದ ನ್ಯಾನೊ ಘಟಕವನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಎಂದು ರತನ್ ಟಾಟಾ ಹೇಳಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಟಾಟಾ ಮೋಟಾರ್ಸ್‌ನ ನ್ಯಾನೋ ಸಿಂಗೂರಿಗೆ 'ಟಾಟಾ' ಹೇಳಿರುವ ಸುದ್ದಿ ತಿಳಿದು ಆಕ್ರೋಶಗೊಂಡ, ಸಣ್ಣ ಕಾರು ತಯಾರಿಕಾ ಯೋಜನೆಗಾಗಿ ಇಷ್ಟಪಟ್ಟು ಜಮೀನು ಮಾರಾಟ ಮಾಡಿದ ರೈತರು, ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ತಡೆ ನಡೆಸುವುದರೊಂದಿಗೆ ಸಿಂಗೂರಿನಲ್ಲಿ 12 ಗಂಟೆಗಳ ಬಂದ್ ಆರಂಭಿಸಿ ರೈಲು ತಡೆ, ರಸ್ತೆ ತಡೆ ಪ್ರತಿಭಟನೆಗಳನ್ನು ಹಮ್ಮಿಕೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಮೀನು ಮಾರಾಟ ಮಾಡಿರುವ ರೈತರೀಗ, ನಾವೀಗ ಜಮೀನನ್ನೂ, ಜೀವನಾಂಶವಾದ ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂದು ಹತಾಶೆ ವ್ಯಕ್ತಪಡಿಸಿದರು. ನ್ಯಾನೋ ಯೋಜನೆ ಪಶ್ಚಿಮ ಬಂಗಾಳದಿಂದಲೇ ಹೊರ ಹೊರಟಾಗ, ಟಾಟಾ ಕಾರು ಸ್ಥಾವರದಲ್ಲಿ ಉದ್ಯೋಗ ಪಡೆದಿದ್ದ ಉದ್ಯೋಗಿಗಳು ನಿರಾಶೆಯ ರೋಧನಗೈದರು.   </font><br/><font  style='font-size:11pt; color:#000000'></font><br/><font  style='font-size:11pt; color:#000000'>ನ್ಯಾನೋವನ್ನು ಸಿಂಗೂರಿನಿಂದ ಹಿಂತೆಗೆಯುವ ನಿರ್ಧಾಕ ಹೊರಬೀಳುತ್ತಿರುವಂತೆ ವಿವಿಧ ರಾಜ್ಯಗಳು ಟಾಟಾಗೆ ತಮ್ಮ ರಾಜ್ಯದಲ್ಲಿ ಸ್ಥಾವರ ಸ್ಥಾಪಿಸುವಂತೆ ಆಹ್ವಾನ ನೀಡಿದವು. ಇದರನ್ವಯ ಗುಜರಾತ್ ಮತ್ತು ಕರ್ನಾಟಕದಲ್ಲಿ ನ್ಯಾನೊ ಕಾರು ಘಟಕವನ್ನು ಸ್ಥಳಾಂತರಗೊಳಿಸಲು ನಿರ್ಧರಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ್ ಮೋದಿಯವರೊಂದಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಟಾಟಾ ಮೋಟಾರ್ಸ್ ಅಧಿಕಾರಿಗಳು ಮಾತುಕತೆ ನಡೆಸಿ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದರು.  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಿಂಗೂರಿಗೆ ಟಾಟಾ ಹೇಳಿರುವ ರತನ್ ಟಾಟಾ ಕಂಪೆನಿಗೆ ಕರ್ನಾಟಕ ರತ್ನಗಂಬಳಿ ಹಾಸುವ ಮೂಲಕ ಆಹ್ವಾನ ನೀಡಿದ ನಂತರ ಟಾಟಾ ಅಧಿಕಾರಿಗಳು ಕರ್ನಾಟಕದ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದರು. ಹುಬ್ಬಳ್ಳಿ ಹಾಗೂ ಧಾರವಾಡ ಸಮೀಪ ಘಟಕ ಸ್ಥಾಪಿಸಲು ಸರ್ಕಾರ ನೀಡಿರುವ ನೀಲನಕ್ಷೆಗಳನ್ನು ಪಡೆದುಕೊಂಡಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಕ್ಟೋಬರ್ 7 ರಂದು  ಗುಜರಾತ್ ಮುಖ್ಯಮಂತ್ರಿ ನರೇಂದ್ರ್ ಮೋದಿಯವರನ್ನು ಭೇಟಿ ಮಾಡಿದ ಟಾಟಾ ಮೋಟಾರ್ಸ್‌ನ ಅಧಿಕಾರಿಗಳು ವಡೋದರಾ ಬಳಿಯಿರುವ ಚರೋಡಿಯ ಸನ್ನದ್ ಬಳಿ ಭೂಮಿ ನೀಡುವಂತೆ ಕೋರಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಟಾಟಾ ನ್ಯಾನೋ ಕಾರು ಘಟಕ ಸ್ಥಾಪನೆಗಾಗಿ ಗುಜರಾತ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ 1050 ಎಕರೆ ಭೂಮಿಯನ್ನು ನೀಡಲು ಒಪ್ಪಿಗೆ ಸೂಚಿಸಿ, ಸರ್ಕಾರ ಅಧಿಕೃತವಾಗಿ ಭೂಮಿಯನ್ನು ಟಾಟಾಗೆ ಹಸ್ತಾಂತರಿಸಲು ಸಿದ್ಧವಿರುವುದಾಗಿ ತಿಳಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಟಾಟಾ ಮೋಟಾರ್ಸ್ ಸಂಸ್ಥೆ ರತನ್ ಟಾಟಾ ಅವರ 61ನೇ ಜನ್ಮ ದಿನದಂದು ಟಾಟಾ ಇಂಡಿಕಾ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಒಂದು ದಶಕದ ನಂತರ ಮತ್ತೆ ರತನ್ ಟಾಟಾ 71ನೇ ಜನ್ಮದಿನ ಅಂಗವಾಗಿ 'ನ್ಯಾನೋ' ಕಾರು ಮಾರುಕಟ್ಟೆಗೆ ಬರುತ್ತಿರುವುದು ಇತಿಹಾಸ ಮರುಕಳಿಸಿದಂತಾಗಿದೆ ಎಂದು ಟಾಟಾ ಮೋಟಾರ್ಸ್ ಸಂಸ್ಥೆ ಪ್ರಕಟಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ, ಡಿಸೆಂಬರ್ 28ರಂದು ತಮ್ಮ 71ನೆ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವುದರಿಂದ ಬಹುನಿರೀಕ್ಷೆಯ ಜಗತ್ತಿನ ಅತಿ ಕಡಿಮೆ ದರದ ನ್ಯಾನೋ ಕಾರು ಜಾಗತಿಕ ಮಾರುಕಟ್ಟೆಯಲ್ಲಿ  ಹೊಸ ಅಲೆಯೊಂದನ್ನು ಸೃಷ್ಟಿಸಿ ಮಧ್ಯಮ ವರ್ಗದವರ ಕಾರುಕೊಳ್ಳುವ ಕನಸು ಶೀಘ್ರದಲ್ಲಿ ನನಸಾಗಲಿದೆ.</font><br/></font>]]></content:encoded>
      <pubDate>Tue, 23 Dec 2008 17:02:28 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಕಾಂಗರೂಗಳ ಸೊಕ್ಕು ಮುರಿದು ಮೆರೆದ ಭಾರತ]]></title>
      <link>https://kannada.webdunia.com/article/retrospection-08/ಕಾಂಗರೂಗಳ-ಸೊಕ್ಕು-ಮುರಿದು-ಮೆರೆದ-ಭಾರತ-108122000058_1.htm</link>
      <guid>https://kannada.webdunia.com/article/retrospection-08/ಕಾಂಗರೂಗಳ-ಸೊಕ್ಕು-ಮುರಿದು-ಮೆರೆದ-ಭಾರತ-108122000058_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[2008ರ ವರ್ಷ ಭಾರತಕ್ಕೆ ಕ್ರೀಡೆಯಲ್ಲಿ ಸುಗ್ಗಿಯೆಂದೇ ಹೇಳಬಹುದು. ಅದು ಕ್ರಿಕೆಟ್ ಅಥವಾ ಇನ್ನ್ಯಾವುದೇ ಕ್ರೀಡೆಯಾಗಿರಬಹುದು. ಪಡೆದ ಬಹುಮಾನಗಳಿಗೆ ಗಿಟ್ಟಿಸಿದ ಹೆಗ್ಗಳಿಕೆಗಳಿ ಅಗಣ್ಯ - ರಾಷ್ಟ್ರೀಯ ಕ್ರೀಡೆ ಹಾಕಿಯೊಂದನ್ನು ಹೊರತುಪಡಿಸಿ.]]></description>
      <content:encoded><![CDATA[<font  style='font-size:11pt; color:#0000FF'><b>ಭುವನ್ ಪುದುವೆಟ್ಟು   </font><font style=' color:#000000;'></b></font><br/>2008<font  style='font-size:11pt; color:#000000'>ರ ವರ್ಷ ಭಾರತಕ್ಕೆ ಕ್ರೀಡೆಯಲ್ಲಿ ಸುಗ್ಗಿಯೆಂದೇ ಹೇಳಬಹುದು. ಅದು ಕ್ರಿಕೆಟ್ ಅಥವಾ ಇನ್ನ್ಯಾವುದೇ ಕ್ರೀಡೆಯಾಗಿರಬಹುದು. ಪಡೆದ ಬಹುಮಾನಗಳಿಗೆ ಗಿಟ್ಟಿಸಿದ ಹೆಗ್ಗಳಿಕೆಗಳಿ ಅಗಣ್ಯ - ರಾಷ್ಟ್ರೀಯ ಕ್ರೀಡೆ ಹಾಕಿಯೊಂದನ್ನು ಹೊರತುಪಡಿಸಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕ್ರಿಕೆಟಿನಲ್ಲಿ ದಿಗ್ಗಜ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿ, ಇಂಗ್ಲೆಂಡಿಗೆ ವರ್ಷಾಂತ್ಯ ಕಹಿ ನೆನಪುಗಳನ್ನು ಉಣಬಡಿಸಿ ನಂಬರ್ ವನ್ ಸ್ಥಾನದತ್ತ ಹೆಜ್ಜೆ, ಸಚಿನ್‌ ಲಾರಾ ದಾಖಲೆಯನ್ನು ಮೀರಿಸಿದ್ದು, ಐಪಿಎಲ್ ಟ್ವೆಂಟಿ-20 ಪಂದ್ಯಗಳು ಹುಚ್ಚೆಬ್ಬಿಸಿದ್ದು ಪ್ರಮುಖ ಉತ್ತಮ ಬೆಳವಣಿಗೆಗಳು. ಅನಿಲ್ ಕುಂಬ್ಳೆ ಮತ್ತು ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು, ಹರಭಜನ್-ಸೈಮಂಡ್ಸ್ ಮಂಗನಾಟ ವಿವಾದ, ಸಚಿನ್ ಬಗ್ಗೆ ಹೇಡನ್ ಹೇಳಿಕೆಗಳು, ಸೆಹ್ವಾಗ್-ಮುನಾಫ್, ಗಂಭೀರ್-ವಾಟ್ಸನ್ ವಿವಾದ ಮುಂತಾದುವು ಕಹಿ ನೆನಪುಗಳನ್ನು ಕೊಟ್ಟವುಗಳು. ವರ್ಷವಿಡೀ ಕಂಡು-ಕೇಳಿ-ಬಿಟ್ಟವುಗಳ ಬಗ್ಗೆ ಒಂದು ಸುತ್ತಿನ ಪಕ್ಷಿನೋಟ ಇಲ್ಲಿದೆ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220058_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸೌರವ್ ಗಂಗೂಲಿ ಬಾಯ್ ಬಾಯ್...  </font><font style=' color:#000000;'></b></font><br/><font  style='font-size:11pt; color:#000000'>ಭಾರತೀಯ ಕ್ರಿಕೆಟ್ ತಂಡ ಕಂಡ ಧೀಮಂತ ನಾಯಕ ಎಂಬ ಬಿರುದು ಇವರಿಂದ ಯಾವತ್ತೂ ಅಳಿಸಿ ಹೋಗದಷ್ಟು ಅಚ್ಚುಗಳನ್ನು ಕ್ರೀಸಿನಲ್ಲೇ ಗಂಗೂಲಿ ಉಳಿಸಿ ಹೋಗಿದ್ದಾರೆ. ಇವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡದ್ದು ಆಸ್ಟ್ರೇಲಿಯಾದೆದುರು 2008ರ ನವೆಂಬರ್ 6ರಂದು. 36ರ ಹರೆಯದ ಗಂಗೂಲಿ ಒಟ್ಟು 113 ಟೆಸ್ಟ್ ಆಡಿದ್ದು 7,212 ರನ್ ದಾಖಲಿಸಿದ್ದಾರೆ. 16 ಶತಕ, 35 ಅರ್ಧ ಶತಕ ಇವರ ಹೆಸರಿನಲ್ಲಿದೆ. 311 ಏಕದಿನ ಪಂದ್ಯಗಳಲ್ಲಿ 22 ಶತಕ ಹಾಗೂ 72 ಅರ್ಧ ಶತಕ ಇವರು ದಾಖಲಿಸಿದ್ದರು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಅನಿಲ್ ಕುಂಬ್ಳೆ ನಿವೃತ್ತಿ...  </font><font style=' color:#000000;'></b></font><br/><font  style='font-size:11pt; color:#000000'>ಅಭಿಮಾನಿ ಗೆಳೆಯರಿಂದ ಜಂಬೋ ಎಂದೇ ಕರೆಸಲ್ಪಡುತ್ತಿದ್ದ ಅಚ್ಚ ಕನ್ನಡಿಗ ಸ್ವಚ್ಛ ಕ್ರಿಕೆಟಿಗ ಅನಿಲ್ ಕುಂಬ್ಳೆ. ಟೀಮ್ ಇಂಡಿಯಾದಲ್ಲಿ ಬೌಲರ್ ಹಾಗೂ ಕಪ್ತಾನನಾಗಿ ಪ್ರಮುಖ ಪಾತ್ರ ವಹಿಸಿದ್ದವರು. ಸ್ಪಿನ್ ಬೌಲಿಂಗ್‌ನಲ್ಲಿ ಇವರಷ್ಟು ಮೆರೆದವರು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾರೂ ಇಲ್ಲ. ಮ‌ೂಲತಃ ಕಾಸರಗೋಡು ತಾಲೂಕಿನವರಾದ ಇವರು ಒಟ್ಟು 132 ಟೆಸ್ಟ್ ಹಾಗೂ 271 ಏಕದಿನಗಳಲ್ಲಿ ಆಡಿದ್ದರು. ಟೆಸ್ಟ್‌ನಲ್ಲಿ 619 ವಿಕೆಟ್ ಕೀಳುವ ಮ‌ೂಲಕ ಅತಿ ಹೆಚ್ಚು ವಿಕೆಟ್ ಕಿತ್ತವರ ಸಾಲಿನಲ್ಲಿ ಮ‌ೂರನೇ ಸ್ಥಾನ ಇವರದ್ದು. ಏಕದಿನದಲ್ಲಿ 337 ವಿಕೆಟ್ ಪಡೆದಿದ್ದರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220058_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಆಡಂ ಗಿಲ್‌ಕ್ರಿಸ್ಟ್ ನಿವೃತ್ತಿ...  </font><font style=' color:#000000;'></b></font><br/>37<font  style='font-size:11pt; color:#000000'>ರ ಹರೆಯದ ಆಸೀಸ್ ಕ್ರಿಕೆಟಿಗ 2008ರ ಜನವರಿ 26ರಂದು ತಾನು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದರು. ಅವರು ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದು ಭಾರತದ ವಿರುದ್ಧ 2008ರ ಮಾರ್ಚ್ ನಾಲ್ಕರಂದು. ಒಟ್ಟು 287 ಏಕದಿನ ಪಂದ್ಯಗಳನ್ನಾಡಿರುವ ಇವರು 9619 ರನ್ ಕಲೆ ಹಾಕಿದ್ದರು. ಗರಿಷ್ಠ 172 ರನ್, 16 ಶತಕ ಇತರಲ್ಲಿ ಸೇರಿತ್ತು. ಅದೇ ರೀತಿ 96 ಟೆಸ್ಟ್ ಆಡಿದ್ದ ಇವರು 5570 ರನ್ ಪೇರಿಸಿದ್ದರು. ಅದರಲ್ಲಿ ಅಜೇಯ 204 ಗರಿಷ್ಠ ರನ್ ಹಾಗೂ 17 ಶತಕ ದಾಖಲಿಸಿದ್ದರು. ತನ್ನ ಬ್ಯಾಟಿಂಗ್ ಸರಾಸರಿಯನ್ನು 40ರ ಆಸುಪಾಸಿನಲ್ಲಿ ಕೊಂಡೊಯ್ದದ್ದು ಅವರ ವಿಶೇಷತೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಸ್ಟೀಫನ್ ಫ್ಲೆಮಿಂಗ್ ಮುಕ್ತಾಯ...   </font><font style=' color:#000000;'></font><br/><font  style='font-size:11pt; color:#000000'>ನ್ಯೂಜಿಲ್ಯಾಂಡಿನ ಈ ಖ್ಯಾತ ಕ್ರಿಕೆಟಿಗ 2008ರಲ್ಲಿ ನಿವೃತ್ತಿಯಾದ ಪ್ರಮುಖರಲ್ಲಿ ಒಬ್ಬರು. ಹಲವು ವರ್ಷಗಳ ಕಾಲ ತಂಡದ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದ ಇವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು ಇಂಗ್ಲೆಂಡ್ ಎದುರು 2008ರ ಮಾರ್ಚ್ 22ರಂದು. 111 ಟೆಸ್ಟ್ ಹಾಗೂ 280 ಏಕದಿನ ಪಂದ್ಯಗಳನ್ನಾಡಿರುವ ಇವರು ಕ್ರಮವಾಗಿ 9 ಹಾಗೂ 8 ಶತಕಗಳನ್ನು ಕೂಡ ಸಿಡಿಸಿದ್ದರು. ಬ್ಯಾಟಿಂಗ್ ಸರಾಸರಿ 35ರ ಆಸುಪಾಸಿನಲ್ಲಿತ್ತು. ಅತಿ ಹೆಚ್ಚು ಅಂದರೆ 218 ಏಕದಿನ ಪಂದ್ಯಗಳಲ್ಲಿ ಕಪ್ತಾನನಾಗಿದ್ದ ದಾಖಲೆ ಇವರ ಹೆಸರಿನಲ್ಲಿದೆ.</font><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220058_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'><b>ಸಚಿನ್ ತೆಂಡೂಲ್ಕರ್ ದಾಖಲೆ...  </font><font style=' color:#000000;'></b></font><br/><font  style='font-size:11pt; color:#000000'>ಈ ಮಾಸ್ಟರ್ ಬ್ಲಾಸ್ಟರ್ ದಾಖಲೆಗಳ ಬಗ್ಗೆ ಹೇಳಿದಷ್ಟು ಮುಗಿಯದು. ಆದರೂ ಈ ವರ್ಷದ ಪ್ರಮುಖ ದಾಖಲೆಯೆಂದರೆ ವೆಸ್ಟ್‌ಇಂಡೀಸ್‌ ಆಟಗಾರ ಬ್ರಿಯಾನ್ ಲಾರಾ ಅವರು ಟೆಸ್ಟ್ ಕ್ರಿಕೆಟಿನಲ್ಲಿ ದಾಖಲಿಸಿದ್ದ ಮೊತ್ತವನ್ನು ಮೀರಿಸಿದ್ದು. ಅಕ್ಟೋಬರ್ 17ರಂದು ಈ ಸಾಧನೆ ಮಾಡುವ ಮ‌ೂಲಕ ಸಚಿನ್ ಟೆಸ್ಟ್ ಮತ್ತು ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ದಾಖಲೆ ಮಾಡಿದ್ದು ಆಸ್ಟ್ರೇಲಿಯಾದೆದುರು ಮೊಹಾಲಿ ಕ್ರೀಡಾಂಗಣದಲ್ಲಿ. ಈ ವರ್ಷ ಅವರು ಏಕದಿನದಲ್ಲಿ 16 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದರು. ಅವರ ಪುರಸ್ಕಾರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಭಾರತ ಸರಕಾರದ ಪದ್ಮ ವಿಭೂಷಣ ಪ್ರಶಸ್ತಿ. ಇದನ್ನು 2008ರ ಮೇ 5ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರದಾನ ಮಾಡಿದರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220058_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಭಜ್ಜಿ-ಸೈಮಂಡ್ಸ್ ಮಂಗನಾಟ ವಿವಾದ...  </font><font style=' color:#000000;'></b></font><br/>2008<font  style='font-size:11pt; color:#000000'>ರಲ್ಲಿ ಕ್ರಿಕೆಟಿನಲ್ಲಿ ಅತಿ ದೊಡ್ಡ ವಿವಾದವೆಂದರೆ ಮಂಗನಾಟ ಪ್ರಕರಣ. ಸಿಡ್ನಿಯಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್‌ ಪಂದ್ಯವೊಂದರಲ್ಲಿ ಜನವರಿ 7ರಂದು ಆಂಡ್ರ್ಯೂ ಸೈಮಂಡ್ಸ್‌ರನ್ನು ಹರಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದರೆಂಬುದು ದೂರು. ಮಂಗನಾಟ ಪ್ರಕರಣ ಬಿಸಿಸಿಐಯನ್ನೂ ಮುಜುಗರಕ್ಕೀಡು ಮಾಡಿತ್ತು. ತನ್ನ ಪ್ರಾಬಲ್ಯವನ್ನು ಐಸಿಸಿಯಲ್ಲೂ ತೋರಿಸಿದ ಭಾರತೀಯ ಕ್ರಿಕೆಟ್ ಮಂಡಳಿ ಹರಭಜನ್ ರಕ್ಷಣೆಗೆ ನಿಂತಿತ್ತು. ಕೊನೆಗೂ ಐಸಿಸಿ ಭಜ್ಜಿ ಮೇಲೆ ಹೇರಿದ್ದ ನಿಷೇಧವನ್ನು ವಾಪಸು ತೆಗೆದುಕೊಂಡು, ಇದಕ್ಕೆ ಯಾವುದೇ ಪುರಾವೆಯಿಲ್ಲ ಎಂಬ ತತ್ವಕ್ಕೆ ಬದ್ಧವಾಯಿತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಹರಭಜನ್ ಸಾಧನೆ...  </font><font style=' color:#000000;'></b></font><br/><font  style='font-size:11pt; color:#000000'>ವಿವಾದಗಳನ್ನು ಹೊರತು ಪಡಿಸಿ ನೋಡಿದಾಗ ಹರಭಜನ್ ಸಾಧನೆಯೇನೂ ಕ್ಷುಲ್ಲಕವಲ್ಲ. ಈ ವರ್ಷ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 300 ವಿಕೆಟ್ ಪಡೆದ ದಾಖಲೆಯನ್ನೂ ಬರೆದಿದ್ದಾರೆ. ನವೆಂಬರ್ 7ರಂದು ಆಸ್ಟ್ಟೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ವಿಕೆಟ್ ಪಡೆಯುವ ಮ‌ೂಲಕ 300 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ಭಾರತದ ಮ‌ೂರನೇ ಹಾಗೂ ವಿಶ್ವದ 22ನೇ ಕ್ರಿಕೆಟಿಗ ಎಂಬ ಖ್ಯಾತಿಗೊಳಗಾದರು. ಜತೆಗೆ ತಾಯ್ನೆಲದಲ್ಲೇ 200 ವಿಕೆಟ್ ಪಡೆದ ದಾಖಲೆ ಕೂಡ ಅಂದೇ ನಡೆಯಿತು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220058_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬೆರಳೆತ್ತಲು ಕಷ್ಟಪಟ್ಟ ಸ್ಟೀವ್ ಬಕ್ನರ್...   </font><font style=' color:#000000;'></b></font><br/>2008<font  style='font-size:11pt; color:#000000'>ರ ಆಸ್ಟ್ರೇಲಿಯಾ-ಭಾರತ ನಡುವಿನ ಸಿಡ್ನಿ ಟೆಸ್ಟ್‌ನಲ್ಲಿ ವಿವಾದಾಸ್ಪದ ತೀರ್ಪುಗಳನ್ನು ನೀಡಿ ಭಾರತೀಯರಿಂದ ಟೀಕೆಗೊಳಗಾಗಿದ್ದ ಬಕ್ನರ್, ನಂತರ ಸರಣಿಯಿಂದ ಕಿತ್ತೆಸೆಯಲ್ಪಟ್ಟಿದ್ದರು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್‌ರಿಗೆ ಎರಡು ಬಾರಿ ಔಟಾದಾಗಲೂ ತೀರ್ಪು ಕೊಡದಿದ್ದ ಬಕ್ನರ್, ಭಾರತದ ರಾಹುಲ್ ದ್ರಾವಿಡ್‌ಗೆ ವಿನಾ ಕಾರಣ ಔಟ್ ತೀರ್ಪು ಕೊಟ್ಟ ನಂತರ ಭಾರತೀಯ ಕ್ರಿಕೆಟ್ ಮಂಡಳಿ ಸಿಡಿದೆದ್ದಿತ್ತು. ಪ್ರಕರಣ ಬಿಸಿಯೇರುತ್ತಿರುವುದನ್ನು ಕಂಡ ಐಸಿಸಿ ಬಕ್ನರ್ ಅವರ ಬದಲಿಗೆ ಬಿಲ್ಲಿ ಬೌಡೆನ್ ಅವರನ್ನು ಮುಂದಿನ ಪಂದ್ಯಗಳಿಗೆ ನಿಯೋಜಿಸಿತ್ತು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಶ್ರೀಶಾಂತ್ ಕಪಾಳಮೋಕ್ಷ ಪ್ರಕರಣ...  </font><font style=' color:#000000;'></b></font><br/><font  style='font-size:11pt; color:#000000'>ಐಪಿಎಲ್ ಪಂದ್ಯವೊಂದರಲ್ಲಿ ಬೌಲರ್ ಶ್ರೀಕಾಂತ್ ಕಪಾಳಕ್ಕೆ ಬಾರಿಸಿದ್ದು ಮತ್ತೊಂದು ಭಜ್ಜಿಯ ವಿವಾದ. 2008ರ ಏಪ್ರಿಲ್‌ನಲ್ಲಿ ಈ ಪ್ರಕರಣ ಬಿಸಿಸಿಐ ಕಟಕಟೆಯೇರಿ ಭಾರೀ ಸುದ್ದಿ ಮಾಡಿತ್ತು. ಹರಭಜನ್ ಕ್ಷಮೆ ಕೇಳುವುದರ ಜತೆ ಐದು ಏಕದಿನ ಪಂದ್ಯಗಳ ನಿಷೇಧ ಹೇರಲಾಯಿತು. ಮುಂದೆ ಇಂತಹ ವರ್ತನೆ ಪುನರಾವರ್ತನೆಯಾದಲ್ಲಿ ಜೀವಾವಧಿ ನಿಷೇಧ ಹೇರುವುದಾಗಿ ಬೆದರಿಕೆ ಕೂಡ ಭಜ್ಜಿಗೆ ಬಂತು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220058_2_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಟ್ವೆಂಟಿ-20 ಚಾಂಪಿಯನ್...  </font><font style=' color:#000000;'></b></font><br/><font  style='font-size:11pt; color:#000000'>ಕ್ರಿಕೆಟ್ ಜಗತ್ತಿನ ಹೊಸ ಆವಿಷ್ಕಾರ ಟ್ವೆಂಟಿ-20ಯ ಉದ್ಘಾಟನಾ ವಿಶ್ವಕಪ್‌ನ್ನು ಭಾರತ ಒಲಿಸಿಕೊಂಡದ್ದು 2008ರಲ್ಲಿ ಭಾರತದ ಮತ್ತೊಂದು ಸಾಧನೆ. ಹಳಬರನ್ನು ಬದಿಗಿಕ್ಕಿ ಯುವ ಪಡೆಯನ್ನು ಕಣಕ್ಕಿಳಿಸಿದ ಭಾರತ ಅದರಲ್ಲಿ ಯಶಸ್ಸನ್ನೂ ಕಂಡಿತ್ತು. ಒಂದು ಓವರಿನ ಎಲ್ಲಾ ಎಸೆತಗಳನ್ನು ಸಿಕ್ಸರ್ ಬಾರಿಸುವ ಮ‌ೂಲಕ ಯುವರಾಜ್ ಸಿಂಗ್, ಕೊನೆಯ ಓವರಿನಲ್ಲಿ ಜಯ ದೊರಕಿಸಿಕೊಟ್ಟ ಜೋಗಿಂದರ್ ಶರ್ಮಾ ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಣಿಕೆಯ ಮ‌ೂಲಕ ಕ್ರಿಕೆಟ್ ಜಗತ್ತನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದು 2008ರ ಮಾರ್ಚ್‌ ತಿಂಗಳ ಫೈನಲ್ ಪಂದ್ಯದಲ್ಲಿ. ಬಿಸಿಸಿಐ ಕೂಡ ಚಾಂಪಿಯನ್ ತಂಡಕ್ಕೆ ಭಾರೀ ಬಹುಮಾನವನ್ನೇ ಘೋಷಿಸಿತು. ಜೊತೆಗೆ ಅದ್ಧೂರಿಯ ಸ್ವಾಗತವನ್ನು ನೀಡಲಾಗಿತ್ತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕಿರಿಯರ ವಿಶ್ವಕಪ್...  </font><font style=' color:#000000;'></b></font><br/>19<font  style='font-size:11pt; color:#000000'>ರೊಳಗಿನವರ ವಿಶ್ವಕಪ್ ಭಾರತದ ಪಾಲಾಗಿದ್ದು 2008ರ ವಿಶೇಷಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ. 16 ತಂಡಗಳು ಭಾಗವಹಿಸಿದ್ದ ಈ ವಿಶ್ವಕಪ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾದೆದುರು 12 ರನ್‌ಗಳ ಜಯ ಸಾಧಿಸಿತ್ತು. 2008ರ ಮಾರ್ಚ್ 2ರಂದು ಮಲೇಷ್ಯಾದ ಕೌಲಲಂಪುರದಲ್ಲಿ ಈ ಫೈನಲ್ ಪಂದ್ಯ ನಡೆದಿತ್ತು. ಆ ಮ‌‍ೂಲಕ ಬೆಳಕಿಗೆ ಬಂದ 19ರೊಳಗಿನ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಂತರ ಐಪಿಎಲ್ ತಂಡಕ್ಕೂ ಆಯ್ಕೆಯಾಗಿದ್ದರು. ಕಿರಿಯರ ವಿಶ್ವಕಪ್ ಗೆದ್ದದ್ದಕ್ಕಾಗಿ ಪ್ರತಿ ಆಟಗಾರರಿಗೂ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220058_2_5.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/>1983<font  style='font-size:11pt; color:#0000FF'><b>ರ ವಿಶ್ವಕಪ್‌ಕ್ಕೆ ರಜತ ಮಹೋತ್ಸವ...  </font><font style=' color:#000000;'></b></font><br/>1983<font  style='font-size:11pt; color:#000000'>ರಲ್ಲಿ ಭಾರತಕ್ಕೆ ವಿಶ್ವ ಕಪ್ ಗೆದ್ದು ತಂದುಕೊಟ್ಟ ಕಪಿಲ್ ದೇವ್ ತಂಡದ ಸದಸ್ಯರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು 2008ರ ಜೂನ್ 22ರಂದು ರಾತ್ರಿ ದೆಹಲಿಯಲ್ಲಿ. ಅಂದಿನ ಟೀಮ್ ಇಂಡಿಯಾ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್‌ಗೆ ಸವಾಲೊಡ್ಡಿ, ಲಾರ್ಡ್ಸ್‌ನಲ್ಲಿ 1983ರ ಜೂನ್ 25ರಂದು ನಡೆದ ಫೈನಲ್ ಪಂದ್ಯದಲ್ಲಿ ಪ್ರುಡೆನ್ಷಿಯಲ್ ವಿಶ್ವಕಪ್ ಕಿರೀಟ ಧರಿಸಿತ್ತು. ಈ ದಿಗ್ವಿಜಯದ 25ನೇ ವರ್ಷದ ವರ್ಷಾಚಣೆಯಲ್ಲಿ ಅಂದಿನ ತಂಡದಲ್ಲಿದ್ದ 14 ಮಂದಿ ಕ್ರಿಕೆಟಿಗರು ಮತ್ತು ಅಂದಿನ ಮ್ಯಾನೇಜರ್ ಪಿ.ಆರ್.ಮಾನ್‌ಸಿಂಗ್ ಅವರನ್ನು ದೆಹಲಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಭಾವ ತುಂಬಿ ಮಾತನಾಡಿದ ವಿಶ್ವವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು, ಅಂದಿನ ವಿಜಯಕ್ಕೆ ತನ್ನೆಲ್ಲಾ ತಂಡಸದಸ್ಯರೇ ಕಾರಣರಾಗಿದ್ದು, ಅವರ ಒಗ್ಗಟ್ಟಿನ ಪರಿಶ್ರಮವನ್ನು ನೆನಪಿಸಿಕೊಂಡರು.</font><font  style='font-size:11pt; color:#0000FF'><b>ಅಬ್ಬರದ ಐಪಿಎಲ್...  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220058_3_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಪ್ರತಿಸ್ಫರ್ಧಿಯಾಗಿ ಹುಟ್ಟಿಕೊಂಡ ಬಿಸಿಸಿಐ ಪ್ರಾಯೋಜಿತ ಇಂಡಿಯನ್ ಪ್ರೀಮಿಯರ್ ಲೀಗ್ ಪೆಬ್ರವರಿಯಲ್ಲಿ ಕ್ರಿಕೆಟ್ ಆಟಗಾರರನ್ನು ಹರಾಜಿಗೆ ಹಾಕುವ ಪದ್ಧತಿಯನ್ನೂ ಹುಟ್ಟು ಹಾಕಿತು. ಇಲ್ಲಿ ಅತೀ ಹೆಚ್ಚು ರೇಟಿಗೆ ಮಾರಾಟವಾದವರು ಮಹೇಂದ್ರ ಸಿಂಗ್ ಧೋನಿ. ಅವರ ರೇಟು ಒಂದೂವರೆ ಕೋಟಿ; ಪಡೆದುಕೊಂಡ ತಂಡ ಚೆನ್ನೈ ಸೂಪರ್‌ಕಿಂಗ್ಸ್. ನಂತರದ ಸ್ಥಾನ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್. ಇಶಾಂತ್ ಶರ್ಮಾ, ಇರ್ಫಾನ್ ಪಠಾಣ್, ಬ್ರೆಟ್ ಲೀ ಕೂಡ 9 ಲಕ್ಷಕ್ಕೆ ಹರಾಜಾದರು. ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತಕ್ಕೆ ಅಂತಿಮ ಓವರಿನಲ್ಲಿ ಜಯ ತಂದುಕೊಟ್ಟ ಜೋಗಿಂದರ್ ಶರ್ಮಾ ಕೇವಲ ಒಂದು ಲಕ್ಷಕ್ಕೆ ಮಾರಾಟವಾಗಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಐಪಿಎಲ್‌ನ ಮೊದಲ ಪಂದ್ಯ ನಡೆದದ್ದು ಏಪ್ರಿಲ್ 18ರಂದು. ಸರಣಿ ಕೊನೆಯಾದದ್ದು ಜೂನ್ 1ರಂದು. ಮುಂಬೈ ಇಂಡಿಯನ್ಸ್ (ಮುಖೇಶ್ ಅಂಬಾನಿ), ಬೆಂಗಳೂರು ರಾಯಲ್ ಚಾಲೆಂಜರ್ಸ್ (ವಿಜಯ ಮಲ್ಯ), ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ (ಡೆಕ್ಕನ್ ಕ್ರಾನಿಕಲ್), ಚೆನ್ನೈ ಸೂಪರ್‌ಕಿಂಗ್ಸ್ (ಇಂಡಿಯನ್ ಸಿಮೆಂಟ್ಸ್- ಎನ್. ಶ್ರೀನಿವಾಸನ್), ಡೆಲ್ಲಿ ಡೇರ್‌ಡೆವಿಲ್ಸ್ (ಜಿಎಂಆರ್ ಹೋಲ್ಡಿಂಗ್ಸ್), ಕಿಂಗ್ಸ್ </font><font style='font-size:11pt;'>XI </font><font style='font-size:11pt;'>ಪಂಜಾಬ್ (ಪ್ರೀತಿ ಝಿಂಟಾ, ನೆಸ್ ವಾಡಿಯಾ), ಕೊಲ್ಕತ್ತಾ ನೈಟ್ ರೈಡರ್ಸ್ (ಶಾರೂಖ್ ಖಾನ್, ಜೂಹಿ ಚಾವ್ಲಾ), ರಾಜಸ್ತಾನ್ ರಾಯಲ್ಸ್ (ಎ.ಆರ್. ಝಾ) ಎಂಬ ಒಟ್ಟು ಎಂಟು ತಂಡಗಳನ್ನು ಐಪಿಎಲ್ ಹುಟ್ಟು ಹಾಕಿತ್ತು. ಇಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ತಂಡ ಮುಂಬೈ ರೈಡರ್ಸ್. ಇದು 111.9 ಮಿಲಿಯನ್ ಡಾಲರ್‌ಗೆ ಮಾರಾಟವಾಗಿತ್ತು. ಅತಿ ಕಡಿಮೆ ರಾಜಸ್ತಾನ್ ರಾಯಲ್ಸ್(67 ಮಿಲಿಯನ್ ಡಾಲರ್).</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಲ್ಲಿ ಚಾಂಪಿಯನ್ ಆದ ತಂಡ ರಾಜಸ್ತಾನ್ ರಾಯಲ್ಸ್. ರನ್ನರ್ ಅಪ್ ಎನಿಸಿದ್ದು ಚೆನ್ನೈ ಸೂಪರ್ ಕಿಂಗ್ಸ್. ಕಿಂಗ್ಸ್ </font><font style='font-size:11pt;'>XI </font><font style='font-size:11pt;'>ಪಂಜಾಬ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದವು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸಪ್ಪೆಯಾದ ಐಸಿಎಲ್...   </font><font style=' color:#000000;'></b></font><br/><font  style='font-size:11pt; color:#000000'>ಎಸ್ಸೆಲ್ ಗ್ರೂಪ್ ಪ್ರೈವೆಟ್ ಲಿಮಿಟೆಡ್ ಸ್ಥಾಪಿಸಿದ ಇಂಡಿಯನ್ ಕ್ರಿಕೆಟ್ ಲೀಗ್ ಬಿಸಿಸಿಐಯ ಐಪಿಎಲ್ ಸ್ಥಾಪನೆಯಾಗುವುದಕ್ಕಿಂತ ಮೊದಲೇ ಅಂದರೆ 2007ರಲ್ಲೇ ಹುಟ್ಟಿಕೊಂಡಿತ್ತು. ಮೊದಲು ಆರು ತಂಡಗಳನ್ನು ಹೊಂದಿದ್ದ ಐಸಿಎಲ್ ಈ ವರ್ಷ ಒಂಬತ್ತು ತಂಡಗಳೊಂದಿಗೆ ಆಡುತ್ತಿದೆ. ಒಂದು ಕಾಲದ ಕ್ರಿಕೆಟ್ ಹೀರೋಗಳಾದ ಕಪಿಲ್ ದೇವ್, ಕಿರಣ್ ಮೋರೆ, ಟೋನಿ ಗ್ರೆಗ್, ಡೀನ್ ಜೋನ್ಸ್ ಮುಂತಾದವರು ಐಸಿಎಲ್ ಕ್ರಿಕೆಟ್ ಮಂಡಳಿಯಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಆದರೂ ಐಪಿಎಲ್ ಅಬ್ಬರದೆದುರು ಐಸಿಎಲ್ ಕುಬ್ಜವಾದಂತಾಗಿದೆ. ತನ್ನ ಹಣ ಬಲದಿಂದ ಮೆರೆಯುತ್ತಿರುವ ಬಿಸಿಸಿಐ ಐಸಿಎಲ್‌ನ್ನು ಮಟ್ಟ ಹಾಕಲು ಇನ್ನಿಲ್ಲದ ಯತ್ನ ನಡೆಸುತ್ತಿದ್ದು, ಐಸಿಸಿಯಲ್ಲೂ ತನ್ನ ಪ್ರಭಾವ ಬೀರಿ ರಾಷ್ಟ್ರೀಯ ತಂಡದ ಯಾವುದೇ ಆಟಗಾರ ಐಸಿಎಲ್‌ನಲ್ಲಿ ಆಡದಂತೆ ತಡೆ ಹಿಡಿಯುವಲ್ಲಿ ಯಶಸ್ಸು ಕಂಡಿದೆ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220058_3_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಹೇಡನ್ ಪುಸ್ತಕ ಗದ್ದಲ...   </font><font style=' color:#000000;'></b></font><br/><font  style='font-size:11pt; color:#000000'>ತನ್ನ ಆತ್ಮಚರಿತ್ರೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಗ್ಗೆ ಇಲ್ಲ ಸಲ್ಲದ ಬರಹಗಳನ್ನು ಬರೆದು ಅವಹೇಳನಕ್ಕೆ ಗುರಿಯಾದವರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್. ಮಂಗನಾಟ ಪ್ರಕರಣದ ಬಗ್ಗೆ ಬರೆಯುತ್ತಾ ಸಚಿನ್‌ರನ್ನು ಹೀಗಳೆಯಲಾಯಿತು. ಸಚಿನ್ ಕ್ರೀಡಾಸ್ಫೂರ್ತಿ ಬಗ್ಗೆಯೂ ಪ್ರಶ್ನಿಸಿ ನಂತರ ಕ್ಷಮೆ ಕೇಳಿದ ಘಟನೆಯೂ ಇದರ ನಡವೆ ನಡೆದು ಹೋಯಿತು. ಪುಸ್ತಕ ಮಾರಾಟಕ್ಕೆ ಆಸ್ಟ್ರೇಲಿಯನ್ ಕ್ರಿಕೆಟಿಗರು ಈ ರೀತಿ ಮಾಡುತ್ತಿದ್ದಾರೆ ಎಂಬ ಉತ್ತರಗಳು ಹಿರಿಯ ಕ್ರಿಕೆಟಿರಿಂದ ಬಂದ ನಂತರ ಎಲ್ಲವೂ ತಣ್ಣಗಾಯಿತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಆಸೀಸ್ ಸೊಕ್ಕು ಮುರಿದ ಭಾರತ...   </font><font style=' color:#000000;'></b></font><br/><font  style='font-size:11pt; color:#000000'>ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮಂಗನಾಟ ಪ್ರಕರಣದಿಂದ ಭಾರತಕ್ಕೆ ಸಾಕಷ್ಟು ಲಾಭವೇ ಆಗಿತ್ತು. ಆ ಟೆಸ್ಟ್ ಸರಣಿಯಲ್ಲಿ ವಿಲನ್ ಆಗಿ ಕಾಡಿದ್ದ ಅಂಪೈರ್ ಸ್ಟೀವ್ ಬಕ್ನರ್ ಅವರನ್ನು ಕೂಡ ಅರ್ಧದಲ್ಲೇ ಐಸಿಸಿ ಕಿತ್ತು ಹಾಕಿತ್ತು. ಸರಣಿ ಸೋತರೂ ಆಸೀಸ್‌ಗೆ ಭಾರತ ನಡುಕ ಹುಟ್ಟಿಸಿತ್ತು. ಜತೆಗೆ ತನ್ನ ಸತತ 17ನೇ ವಿಜಯದ ಸರಪಳಿಯನ್ನು ಕೂಡ ಮುರಿದು ಹಾಕಿತ್ತು. ಈ ಹಿಂದೆ ಕೂಡ ಆಸೀಸ್‌ನ ಸತತ ಜಯವನ್ನು ಭಾರತವೇ ಮುರಿದಿತ್ತು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220058_3_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/>2008<font  style='font-size:11pt; color:#000000'>ರ ನವೆಂಬರ್‌ನಲ್ಲಿ ನಡೆದ ಗವಾಸ್ಕರ್-ಬಾರ್ಡರ್ ಟ್ರೋಫಿಯನ್ನು ಮರಳಿ ಪಡೆದದ್ದು ಮತ್ತೊಂದು ಇತಿಹಾಸ ಸೃಷ್ಟಿಗೆ ಕಾರಣವಾಯಿತು. ಜತೆಗೆ ಆಸ್ಟ್ರೇಲಿಯಾದ ಬೆನ್ನು ಹುರಿಗೆ ಛಲಕ್ ಹುಟ್ಟಿಸಲು ಭಾರತವೇ ಬೇಕು ಎಂಬು ಸಂದೇಶವನ್ನು ಇತರ ರಾಷ್ಟ್ರಗಳಿಗೆ ಈ ಸರಣಿ ಗೆಲುವು ರವಾನಿಸಿತು. ನಾಲ್ಕು ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದುಕೊಂಡದ್ದು ಆಸೀಸ್‌ಗೆ ನುಂಗಲಾರದ ತುತ್ತಾಗಿತ್ತು. ಅವಮಾನದಿಂದ ಕಂಗೆಟ್ಟಿದ್ದ ಅಲ್ಲಿನ ಮಾಧ್ಯಮ ಮತ್ತು ಆಟಗಾರರು ನಿಧಾನಗತಿಯ ಓವರ್ ರೇಟ್ ವಿಚಾರದಲ್ಲಿ ಕಪ್ತಾನ ಪಾಂಟಿಂಗ್ ಕೈಗೊಂಡ ನಿರ್ಧಾರದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದವು. ಒಟ್ಟಾರೆ ಭಾರತ ಈ ಸರಣಿ ಗೆಲುವಿನಿಂದ ಜಗತ್ತಿನ ನಂಬರ್ ವನ್ ತಂಡವಾಗುವತ್ತ ದಾಪುಗಾಲು ಹಾಕಿತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಗಂಭೀರ್-ವಾಟ್ಸನ್ ವಿವಾದ...  </font><font style=' color:#000000;'></b></font><br/><font  style='font-size:11pt; color:#000000'>ನವೆಂಬರ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವೊಂದರಲ್ಲಿ ಶೇನ್ ವಾಟ್ಸನ್‌ರ ಎದೆಗೆ ಗೌತಮ್ ಗಂಭೀರ್ ಮೊಣಕೈಯಿಂದ ತಿವಿದಿದ್ದರು ಎಂಬುದು ದೊಡ್ಡ ವಿವಾದವಾಗಿತ್ತು. ವಾದ-ವಿವಾದಗಳ ನಂತರ ಗಂಭೀರ್ ಆರೋಪಿ ಎಂಬುದು ಸಾಬೀತಾದ ಕಾರಣ ಒಂದು ಟೆಸ್ಟ್ ನಿಷೇಧ ಹೇರಲಾಯಿತು. ಮಾತಿನ ಚಕಮಕಿ ನಡೆಸಿದ ಆರೋಪಕ್ಕಾಗಿ ವಾಟ್ಸನ್‌ರಿಗೆ ಪಂದ್ಯದ ಶುಲ್ಕದಲ್ಲಿ ಕಡಿತ ಮಾಡುವ ಮ‌ೂಲಕ ದಂಡನೆ ವಿಧಿಸಲಾಗಿತ್ತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಇಂಗ್ಲೆಂಡ್‌ನ್ನು ಅಡ್ಡಡ್ಡ ಮಲಗಿಸಿದ್ದು...  </font><font style=' color:#000000;'></b></font><br/><font  style='font-size:11pt; color:#000000'>ಆಸೀಸ್ ಸರಣಿ ಮುಗಿದ ತಕ್ಷಣ ಆರಂಭವಾಗಿದ್ದು ಇಂಗ್ಲೆಂಡ್ ವಿರುದ್ಧದ ತಾಯ್ನೆಲದ ಏಕದಿನ ಸರಣಿ. ಏಳು ಏಕದಿನ ಪಂದ್ಯಗಳಲ್ಲಿ ಕೊನೆಯ ಎರಡು ಪಂದ್ಯಗಳು ಮುಂಬೈ ಉಗ್ರರ ದಾಳಿ ಹಿನ್ನಲೆಯಲ್ಲಿ ರದ್ದಾಗಿತ್ತು. ಉಳಿದ ಐದು ಪಂದ್ಯಗಳನ್ನು ಕೂಡ ಗೆದ್ದು ಕೊಂಡ ಭಾರತ ಆಂಗ್ಲರ ಮುಖಕ್ಕೆ ಮಸಿ ಬಳಿದಿತ್ತು. ಸರಣಿಗೆ ವಾಪಸಾಗಿದ್ದ ಯುವರಾಜ್ ಸಿಂಗ್ ಅದ್ಭುತ ಪ್ರದರ್ಶನ ಆರಂಭಿಕ ಯಶಸ್ಸುಗಳಿಗೆ ಪ್ರಮುಖ ಕಾರಣ. ಯುವಿ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220058_3_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ರ‌್ಯಾಂಕಿಂಗ್‌ನಲ್ಲಿ ಭಾರತ...  </font><font style=' color:#000000;'></b></font><br/><font  style='font-size:11pt; color:#000000'>ಟೆಸ್ಟ್ ಹಾಗೂ ಏಕದಿನ ಹೀಗೆ ಎರಡೂ ತೆರನಾದ ಕ್ರಿಕೆಟಿನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದ್ದು, ರ‌್ಯಾಂಕಿಂಗ್ ಪಟ್ಟಿಯಲ್ಲೂ ಅಗ್ರ ಸ್ಥಾನದತ್ತ ದಾಪುಗಾಲು ಹಾಕುತ್ತಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟಿನಲ್ಲಿ ಮ‌ೂರನೇ ಸ್ಥಾನದಲ್ಲಿರುವ ಶೀಘ್ರದಲ್ಲೇ ಎರಡನೇ ಸ್ಥಾನಕ್ಕೇರಲಿದೆ. ನಂಬರ್ ವನ್ ಪಟ್ಟವನ್ನು ಆಸ್ಟ್ರೇಲಿಯಾ ಕೈಯಿಂದ ಕಸಿದುಕೊಳ್ಳುವುದು ಟೀಮ್ ಇಂಡಿಯಾ ಎದುರಿಗಿರುವ ಗುರಿ. ಯುವ ಕ್ರೀಡಾಳುಗಳನ್ನು ತುಂಬಿಕೊಂಡಿರುವ ಭಾರತ ಕ್ರಿಕೆಟ್ ತಂಡ ಆ ಸಾಧನೆಗೆ ಪಾತ್ರವಾಗುವ ಸಾಧ್ಯತೆಯಿದೆಯಾದರೂ ಸ್ಥಿರ ಪ್ರದರ್ಶನದ ಅಗತ್ಯವಿರುವುದು ಅಷ್ಟೇ ಸತ್ಯ.</font>]]></content:encoded>
      <pubDate>Mon, 22 Dec 2008 18:36:56 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕಾಮ್]]></title>
      <link>https://kannada.webdunia.com/article/retrospection-08/ಬಾಕ್ಸಿಂಗ್-ವಿಶ್ವ-ಚಾಂಪಿಯನ್-ಮೇರಿ-ಕಾಮ್-108122000063_1.htm</link>
      <guid>https://kannada.webdunia.com/article/retrospection-08/ಬಾಕ್ಸಿಂಗ್-ವಿಶ್ವ-ಚಾಂಪಿಯನ್-ಮೇರಿ-ಕಾಮ್-108122000063_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[ಮಣಿಪುರದ ಕುಗ್ರಾಮದಲ್ಲಿ ಎಮ್. ತೊಂಪು ಕಾಮ್ ಮತ್ತು ಸನೈಖಾಮ್ ಕಾಮ್ ದಂಪತಿಗಳಿಗೆ 1983ರ ಮಾರ್ಚ್ 1ರಂದು ಹುಟ್ಟಿದವರು ಮೇರಿ ಕಾಮ್. ಮಣಿಪುರದ ಮೊಯಿರಾಂಗ್ ಲಾಂಖಾಯ್ ಎಂಬಲ್ಲಿನ ಕಾಂಗತ್ತೈ ಗ್ರಾಮದಲ್ಲಿ ವಾಸಿಸುತ್ತಿರುವ ಮೇರಿಯ ಪೂರ್ಣ ಹೆಸರು ಮಾಂಗ್ಟೆ ಚುಂಗ್‌ನೆಜಾಂಗ್ ಮೇರಿ ಕಾಮ್.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220063_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PR</td></tr></table></td></tr></table></p><!--endImage--> <font  style='font-size:11pt; color:#000000'>ಮಣಿಪುರದ ಕುಗ್ರಾಮದಲ್ಲಿ ಎಮ್. ತೊಂಪು ಕಾಮ್ ಮತ್ತು ಸನೈಖಾಮ್ ಕಾಮ್ ದಂಪತಿಗಳಿಗೆ 1983ರ ಮಾರ್ಚ್ 1ರಂದು ಹುಟ್ಟಿದವರು ಮೇರಿ ಕಾಮ್. ಮಣಿಪುರದ ಮೊಯಿರಾಂಗ್ ಲಾಂಖಾಯ್ ಎಂಬಲ್ಲಿನ ಕಾಂಗತ್ತೈ ಗ್ರಾಮದಲ್ಲಿ ವಾಸಿಸುತ್ತಿರುವ ಮೇರಿಯ ಪೂರ್ಣ ಹೆಸರು ಮಾಂಗ್ಟೆ ಚುಂಗ್‌ನೆಜಾಂಗ್ ಮೇರಿ ಕಾಮ್.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಡ ಕುಟುಂಬದಲ್ಲೇ ಹುಟ್ಟಿದವರು ಮೇರಿ. ಆಕೆಯ ತಂದೆ ಒಬ್ಬ ರೈತ. ತೊಂಪು ಅವರಿಗೆ ಮೇರಿಯೂ ಸೇರಿದಂತೆ ಮ‌ೂರು ಮಂದಿ ಹೆಣ್ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದ. ಶಾಲಾ ದಿನಗಳಲ್ಲಿ ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿಯಿಂದ ಆಡುತ್ತಿದ್ದ ಮೇರಿಯ ಒಲವು ಬಾಕ್ಸಿಂಗ್ ಕಡೆಗಿತ್ತು. ಅದಕ್ಕೆ ಸ್ಪೂರ್ತಿ ಕೊಟ್ಟದ್ದು ಮಣಿಪುರದ ಡಿಂಗೋ ಸಿಂಗ್ ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಬಾಕ್ಸರ್. ಮಹಮ್ಮದ್ ಆಲಿಯನ್ನು ಕೂಡ ಆಕೆ ಬಹುವಾಗಿ ಮೆಚ್ಚುತ್ತಿದ್ದರು.</font><br/><font  style='font-size:11pt; color:#000000'></font><br/>2000 <font  style='font-size:11pt; color:#000000'>ಇಸವಿಯ ಒಂದು ದಿನ ಆಕೆ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರನ್ನು ಭೇಟಿಯಾಗಿ ತನ್ನ ಬಾಕ್ಸಿಂಗ್ ಪ್ರೀತಿಯನ್ನು ತೋಡಿಕೊಂಡರು. ಕೋಚ್ ಮೇರಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಡುವ ಭರವಸೆ ನೀಡಿದರು. ಪುರುಷರಿಗೆ ತರಬೇತಿ ನೀಡುವ ರೀತಿಯಲ್ಲಿಯೇ ಆಕೆಗೂ ತರಬೇತಿ ನೀಡಲಾಯಿತು. ಆದರೂ ಇವ್ಯಾವುದೇ ವಿಚಾರಗಳು ಮನೆಯವರಿಗೆ ತಿಳಿಯದಂತೆ ನಿಭಾಯಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಠಿಣ ಶ್ರಮವಹಿಸಿದ ಆಕೆ ಅದೇ ವರ್ಷ ಮಣಿಪುರ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಿಜಯಿಯಾದರು. ಅದರ ಫೋಟೋ ಕೂಡ ಪತ್ರಿಕೆಗಳಲ್ಲಿ ಬಂತು. ಮಗಳು ಬಾಕ್ಸಿಂಗ್‌ನಲ್ಲಿದ್ದಾಳೆ ಎಂದು ತಿಳಿದುಕೊಂಡ ತಂದೆ ಕೆಂಡಾಮಂಡಲವಾದರು. ನಿನ್ನ ಮುಖ ಜಜ್ಜಿ ಹೋದರೆ ಯಾರು ಮದುವೆಯಾಗುತ್ತಾರೆ ಎಂದು ಹಿಗ್ಗಾಮುಗ್ಗ ಬೈಯ್ದಿದ್ದರು. ನಂತರ ಮೇರಿಯ ಹಿತೈಷಿಗಳು ತಂದೆಯ ಮನವೊಲಿಸುವಲ್ಲಿ ಸಫಲರಾದ ಮೇಲೆ ಆಕೆಯ ಓಟಕ್ಕೆ ಕಡಿವಾಣ ಹಾಕುವವರು ಯಾರೂ ಇರಲಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತನ್ನ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕೆಂಬ ಆಕೆಯ ತುಡಿತಕ್ಕೆ ಸಾಕಷ್ಟು ಪ್ರೋತ್ಸಾಹವೂ ದೊರಕಿತ್ತು. ಅದೇ ಹೊತ್ತಿಗೆ ಸಾಲು ಸಾಲಾಗಿ ಗೆಲುವು ಆಕೆಯ ಬೆನ್ನು ತಟ್ಟಲು ಸದಾ ಕಾತರಿಸುತ್ತಿತ್ತು. ಗೆಲುವಿನ ರುಚಿ ಕಂಡ ಮೇರಿ ನಂತರ ನಿಲ್ಲಲೇ ಇಲ್ಲ. ಹೋದ ಕಡೆಯಲ್ಲೆಲ್ಲಾ ಗೆಲುವಿನ ಬುತ್ತಿ ಮೇರಿಯ ತುತ್ತಾಗುತ್ತಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಕ್ಕೆ ಉತ್ತಮ ಉದಾಹರಣೆ ಸಿಗುವುದು ಬಾಕ್ಸಿಂಗ್ ಕಲಿತ ನಾಲ್ಕೇ ವರ್ಷಗಳಲ್ಲಿ ಆಕೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದು. ಈ ನಡುವೆ ಹಿಸ್ಸಾರ್ ಮತ್ತು ತೈವಾನ್‌ನಲ್ಲಿ ನಡೆದ ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿಗಳನ್ನು ಪಡೆದರು. ಮಹತ್ವದ ತಿರುವು ಲಭಿಸಿದ್ದು 2004ರಲ್ಲಿ ಟರ್ಕಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪಡೆದದ್ದು. ನಂತರ ಆಕೆ ಸೋಲು ಕಾಣಲೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಯಿತು. 2005ರಲ್ಲಿ ರಷ್ಯಾ, 2007ರಲ್ಲಿ ದೆಹಲಿ, 2008ರಲ್ಲಿ ಚೀನಾ ಹೀಗೆ ಒಟ್ಟು ನಾಲ್ಕು ಬಾರಿ ಸತತ ವಿಶ್ವ ಚಾಂಪಿಯನ್ ಪಟ್ಟ ಆಕೆಗೆ ದೊರಕಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ಕಾಲದಲ್ಲಿ ಪ್ರಶಸ್ತಿ ಜತೆ ಬಂದ ಹಣದಲ್ಲೇ ಜೀವನ ಸಾಗಿಸಬೇಕಾದ, ತರಬೇತಿಯ ಖರ್ಚುವೆಚ್ಚಗಳನ್ನು ಕೂಡ ಅದರಲ್ಲೇ ಭರಿಸಬೇಕಾದ ಅನಿವಾರ್ಯತೆ ಆಕೆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಣಕ್ಕಾಗಿ ಪರದಾಟ ನಡೆಸುತ್ತಿದ್ದ ಮೇರಿ ಕಾಮ್ ಈಗ ಮಣಿಪುರದ ಪ್ರತಿಷ್ಠಿತ ಪೊಲೀಸ್ ಅಧಿಕಾರಿ. ಜತೆಗೆ ಆಕೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಆಯೋಜಕರಾಗಿ ಹಲವು ಕಂಪನಿಗಳು ಪೈಪೋಟಿಯಿಂದ ಮುಂದೆ ಬರುತ್ತಿವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗಲೂ ಆಕೆ ದಿನಕ್ಕೆ ಸುಮಾರು ಐದರಿಂದ ಆರು ಗಂಟೆ ಕಠಿಣ ಅಭ್ಯಾಸ ನಡೆಸುತ್ತಾರೆ. ಜತೆಗೆ ತರಬೇತಿ ನೀಡುವ ಕಾರ್ಯದಲ್ಲೂ ಮುಂಚೂಣಿಯಲ್ಲಿದ್ದಾರೆ. ಮಣಿಪುರದಲ್ಲಿ ಬಾಕ್ಸಿಂಗ್ ಅಕಾಡೆಮಿ ಸ್ಥಾಪಿಸಬೇಕೆನ್ನುವುದು ಆಕೆಯ ಕನಸು. ಕೆಲ ವರ್ಷಗಳ ಹಿಂದೆ ಮದುವೆಯಾಗಿರುವ ಮೇರಿ ಕಾಮ್ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಒಂದೆರಡು ವರ್ಷ ಮಾತ್ರ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದರು. ಈಗ ಮತ್ತೆ ಆಖಾಡಕ್ಕಿಳಿದು ಚೀನಾದಲ್ಲಿ ನಡೆದ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೇರಿಯ ಸಾಧನೆಗಾಗಿ ಭಾರತ ಸರಕಾರ ಆಕೆಗೆ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೂ ಖೇಲ್ ರತ್ನ ಪ್ರಶಸ್ತಿ ಸಿಕ್ಕಿಲ್ಲವೆಂಬ ನೋವು ಆಕೆಯನ್ನು ಬೆಂಬಿಡದೆ ಇನ್ನೂ ಕಾಡುತ್ತಿದೆ. ಮೊನ್ನೆ ಚೀನಾದ ನಿಂಗ್ಬೊ ಸಿಟಿಯಲ್ಲಿ ನಡೆದ ಐದನೇ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಬಾರಿ ಚಿನ್ನದ ಪದಕ ಗೆದ್ದ ನಂತರ ಮತ್ತೆ ಆಕೆಗೆ ಖೇಲ್ ರತ್ನ ಪ್ರಶಸ್ತಿಯ ಹಿಂದಿನ ರಾಜಕೀಯ ನೆನಪಾಗಿ ಪತ್ರಕರ್ತರೆದುರು ತನ್ನ ಅಳಲು ತೋಡಿಕೊಂಡಿದ್ದಾರೆ. ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಮಿಲ್ಖಾ ಸಿಂಗ್‌ರವರು "ಮೇರಿ ಕಾಮ್ ಯಾರು? ಆಕೆ ಯಾವ ಆಟವನ್ನು ಆಡುತ್ತಿದ್ದಾರೆ?" ಎಂದು ಕೇಳಿ ಅವಮಾನಿಸಿದ್ದರು ಎಂದು ತನ್ನ ನೋವನ್ನು ಹೊರಗೆಡವಿದ್ದಾರೆ. ಇದೀಗ ಮೇರಿಯ ಕೂಗನ್ನು ಕೇಳಿಸಿಕೊಂಡಿರುವ ಕ್ರೀಡಾ ಸಚಿವ ಗಿಲ್ ಪರಿಹಾರದ ಭರವಸೆ ನೀಡಿರುವುದರಿಂದ ಆಕೆ ಕೂಡ ಸಂಭ್ರಮದ ಕ್ರಿಸ್‌ಮಸ್ ತನ್ನದಾಗುವುದೆಂಬ ಆಸೆಯನ್ನು ಹೊತ್ತು ಮಣಿಪುರಕ್ಕೆ ಮರಳಿದ್ದಾರೆ.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಒಲಿಂಪಿಕ್ಸ್‌ನಲ್ಲಿ ವಿಶ್ವಚಾಂಪಿಯನ್ ಆಗಬೇಕೆನ್ನುವುದು ಕೂಡ ಮೇರಿ ಆಸೆ. ಆದರೆ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ. ಹಾಗಾಗಿ ಅದು ಸದ್ಯದ ಮಟ್ಟಿಗೆ ದೂರದ ಮಾತು. ಆದರೂ ಒಲಿಂಪಿಕ್ಸ್‌ಗೆ ಮಹಿಳೆಯರ ಬಾಕ್ಸಿಂಗ್ ಸೇರಿಸುವ ಬಗ್ಗೆ ಒತ್ತಾಯಗಳು ಕೇಳಿ ಬರುತ್ತಿರುವುದರಿಂದ ಮನದಾಳದಲ್ಲಿ ಆಕೆಗೆ ಭರವಸೆ ಮ‌ೂಡುತ್ತಿದೆ.</font><br/><font  style='font-size:11pt; color:#000000'></font><br/>"<font  style='font-size:11pt; color:#000000'>ದೇವರಿಂದ ನನ್ನ ಸ್ಫೂರ್ತಿಯನ್ನು ಹೀಗೆಯೇ ಉಳಿಸಿಕೊಳ್ಳುತ್ತೇನೆ. ನನ್ನ ಕುಟುಂಬದ ಸಹಕಾರ ಮತ್ತು ದೇವರ ಆಶೀರ್ವಾದದೊಂದಿಗೆ 2012ರವರೆಗೆ ಯಶಸ್ಸನ್ನು ಮುಂದುವರಿಸುವ ಭರವಸೆ ನನಗಿದೆ" ಎಂದು ಮೇರಿ ಆಶಾವಾದ ವ್ಯಕ್ತಪಡಿಸುತ್ತಾರೆ. ಅದಕ್ಕಿಂತ ಮೊದಲು ಆಕೆಗೆ ಖೇಲ್ ರತ್ನ ಪ್ರಶಸ್ತಿ ಸಿಗಲಿ ಎಂಬ ಹಾರೈಕೆ ಬಾಕ್ಸಿಂಗ್ ಪ್ರಿಯರಿಂದ.</font>]]></content:encoded>
      <pubDate>Sat, 20 Dec 2008 20:03:07 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಆಕೆಯ ಹೆಸರು ಸೈನಾ ನೆಹ್ವಾಲ್....]]></title>
      <link>https://kannada.webdunia.com/article/retrospection-08/ಆಕೆಯ-ಹೆಸರು-ಸೈನಾ-ನೆಹ್ವಾಲ್-108122000062_1.htm</link>
      <guid>https://kannada.webdunia.com/article/retrospection-08/ಆಕೆಯ-ಹೆಸರು-ಸೈನಾ-ನೆಹ್ವಾಲ್-108122000062_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ 2008ರ ವರ್ಷ ಭರಪೂರ ಸಂಭ್ರಮ. ಚೈನೀಸ್ ತೈಪೇ ಓಪನ್‌ ಗೆದ್ದುಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ. ವಿಶ್ವ ಕಿರಿಯರ ಬ್ಯಾಡ್ಮಿಂಟನ್ ಮತ್ತು ಪುಣೆಯಲ್ಲಿ ನಡೆದ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡ ಖ್ಯಾತಿ. ...]]></description>
      <content:encoded><![CDATA[<font  style='font-size:11pt; color:#000000'>ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ 2008ರ ವರ್ಷ ಭರಪೂರ ಸಂಭ್ರಮ. ಚೈನೀಸ್ ತೈಪೇ ಓಪನ್‌ ಗೆದ್ದುಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ. ವಿಶ್ವ ಕಿರಿಯರ ಬ್ಯಾಡ್ಮಿಂಟನ್ ಮತ್ತು ಪುಣೆಯಲ್ಲಿ ನಡೆದ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡ ಖ್ಯಾತಿ. ಜತೆಗೆ ಸೈನಾ ಖ್ಯಾತಿ ಗಗನಚುಂಬಿ ಎನಿಸಿದ್ದು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ. ಪ್ರಪ್ರಥಮ ಬಾರಿಗೆ ಭಾರತೀಯ ಮಹಿಳೆಯೊಬ್ಬಳು ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹೆಗ್ಗುರುತು ಮ‌ೂಡಿಸಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಶ್ವ ಬ್ಯಾಡ್ಮಿಂಡನ್ ರ‌್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಕಾಣಿಸಿಕೊಂಡ ಖುಷಿಯಲ್ಲಿರುವಾಗಲೇ ಸೈನಾ ನೆಹ್ವಾಲ್‌ರವರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕೊಡ ಮಾಡುವ ವರ್ಷದ ಭರವಸೆಯ ಆಟಗಾರ್ತಿ ಎಂಬ ಬಿರುದಿಗೆ ಮೊತ್ತ ಮೊದಲ ಬಾರಿಗೆ ಭಾರತೀಯ ಆಟಗಾರ್ತಿ ಆಯ್ಕೆಯಾದ ಸಂಭ್ರಮವನ್ನು ಶಟ್ಲ್ ಪ್ರಿಯರಿಗೆ ಉಣಬಡಿಸಿದ್ದಾರೆ ಸೈನಾ.</font><br/><font  style='font-size:11pt; color:#000000'></font><br/>18<font  style='font-size:11pt; color:#000000'>ರ ಹರೆಯದ ಸೈನಾ ನೆಹ್ವಾಲ್ ಜತೆಗೆ ಇತರ ಮ‌ೂವರು ಬ್ಯಾಡ್ಮಿಂಟನ್ ಆಟಗಾರ್ತಿಯರ ಹೆಸರು ಕೂಡ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಟೇಬಲ್ ಮುಂದಿತ್ತು. ಅಂತಿಮವಾಗಿ ಸೈನಾ ನೆಹ್ವಾಲ್ 2008ರ ಅತ್ಯಂತ ಭರವಸೆಯ ಆಟಗಾರ್ತಿ ಎಂದು ಘೋಷಿಸಿದೆ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220062_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಇದೀಗ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಗೌರವಕ್ಕೆ ಪಾತ್ರವಾಗಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, "ಈ ಗೌರವ ಪಡೆದಿರುವುದರಿಂದ ನಾನು ರೋಮಾಂಚನಗೊಂಡಿದ್ದೇನೆ ಮತ್ತು ತುಂಬಾ ಸಂತಸವಾಗಿದೆ. ಈ ರೀತಿಯ ಅವಾರ್ಡನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ಆದರೆ ಈಗ ಅದನ್ನು ಪಡೆದಿದ್ದೇನೆ. ಇದರಿಂದ ನನಗೆ ಸ್ಪೂರ್ತಿಯ ಜತೆಗೆ ಸಾಕಷ್ಟು ಬಲ ಸಿಕ್ಕಂತಾಗಿದೆ. ಇನ್ನಷ್ಟು ಕಠಿಣ ಶ್ರಮವಹಿಸಿ ಉತ್ತಮ ಫಲಿತಾಂಶ ಪಡೆಯಲು ಯತ್ನಿಸುತ್ತೇನೆ" ಎಂದಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಕೆ ಹೈದರಾಬಾದ್ ಚೆಲುವೆ. ಟೆನಿಸ್‌ನಲ್ಲಿ ಮಿಂಚಿ ಸದ್ಯ ಮರೆಯಲ್ಲಿರುವ ಸಾನಿಯಾ ಮಿರ್ಜಾ ಕೂಡ ಇದೇ ಊರಿನವರು. ಇಂತಿಪ್ಪ ಸೈನಾ ಹುಟ್ಟಿದ್ದು ಹರ್ಯಾಣದ ಹಿಸಾರ್ ಎಂಬಲ್ಲಿ 1990ರ ಮಾರ್ಚ್ 17ರಂದು. ಸೈನಾ ನೆಹ್ವಾಲ್ ತಂದೆ-ತಾಯಿ ಮ‌ೂಲತಃ ಹರ್ಯಾಣದ ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್‌ಗಳು. ಉದ್ಯೋಗದಲ್ಲಿ ತಂದೆ ಡಾ. ಹರ್ವೀರ್ ಸಿಂಗ್ ವಿಜ್ಞಾನಿ. ತಾಯಿ ಉಷಾ ನೆಹ್ವಾಲ್‌‍ರಿಂದ ಸೈನಾ ಕಲಿತದ್ದು ಕೂಡ ಬಹಳ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೈನಾ ಬಾಲ್ಯಾವಸ್ಥೆಯಲ್ಲಿರುವಾಗಲೇ ಹೈದರಾಬಾದಿಗೆ ಸ್ಥಳಾಂತರಗೊಂಡ ಕುಟುಂಬ ಆಕೆಯನ್ನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿಸಬೇಕೆಂದು ಮಾಡಿದ ಖರ್ಚು ಅಷ್ಟಿಷ್ಟಲ್ಲ. ತನ್ನ ಉಳಿತಾಯ ಮತ್ತು ಭವಿಷ್ಯನಿಧಿಯಿಂದ ಹಣ ತೆಗೆದು ಮಗಳನ್ನು ತರಬೇತಿಗೊಳಿಸಿದ ತಂದೆ ಹರ್ವೀರ್‌ಗೆ ಆರಾಮ ಎನಿಸಿದ್ದು 2002ರ ನಂತರ. ಆ ಹೊತ್ತಿಗೆ ಸೈನಾ ಪ್ರತಿಭೆಯನ್ನು ಗುರುತಿಸಿ ಕೆಲ ಕಂಪನಿಗಳು ಪ್ರೋತ್ಸಾಹ ನೀಡಲು ಮುಂದೆ ಬಂದವು. ಯಶಸ್ಸನ್ನು ಬೆನ್ನಿಗೇರಿಸಿಕೊಂಡಿರುವ ಸೈನಾ ಹಿಂದೆ ಈಗ ಕಂಪನಿಗಳು ಸಾಲುಗಟ್ಟಿ ನಿಂತಿವೆ. ಈಕೆಗೆ ತರಬೇತಿ ನೀಡುತ್ತಿರುವವವರು ಬ್ಯಾಡ್ಮಿಂಟನ್ ದಂತಕತೆ ಪುಲ್ಲೇಲಾ ಗೋಪಿಚಂದ್.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬ್ಯಾಡ್ಮಿಂಟನ್‌ನಲ್ಲಿ ಗೈದ ಸಾಧನೆ...  </font><font style=' color:#000000;'></b></font><br/>- 2003<font  style='font-size:11pt; color:#000000'>ರಲ್ಲಿ ಝಕೊಸ್ಲಾವಿಯಾ ಜೂನಿಯರ್ ಓಪನ್ ಗೆಲುವು</font><br/>- 2004<font  style='font-size:11pt; color:#000000'>ರ ಕಾಮನ್‌ವೆಲ್ತ್ ಯೂತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ</font><br/>- 2005<font  style='font-size:11pt; color:#000000'>ರ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಗೆಲುವು</font><br/>- 2006 <font  style='font-size:11pt; color:#000000'>ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರನ್ನರ್ ಅಪ್</font><br/>- 2006<font  style='font-size:11pt; color:#000000'>ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ</font><br/>- 2006<font  style='font-size:11pt; color:#000000'>ರ ಫಿಲಿಫೈನ್ಸ್ ಬ್ಯಾಡ್ಮಿಂಟನ್ ಓಪನ್ ಗೆಲುವು</font><br/>- 2006<font  style='font-size:11pt; color:#000000'>ರ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಗೆಲುವು</font><br/>- 2007<font  style='font-size:11pt; color:#000000'>ರ ಇಂಡಿಯನ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವು</font><br/>- 2007 <font  style='font-size:11pt; color:#000000'>ನ್ಯಾಷನಲ್ ಗೇಮ್ಸ್ ಆಫ್ ಇಂಡಿಯಾದಲ್ಲಿ ಸ್ವರ್ಣ ಪದಕ</font><br/>- 2008<font  style='font-size:11pt; color:#000000'>ರ ಯೊನೆಕ್ಸ್ ಚೈನೀಸ್ ತೈಪೈ ಓಪನ್ ಗೆಲುವು</font><br/>- 2008<font  style='font-size:11pt; color:#000000'>ರ ಇಂಡಿಯನ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವು</font><br/>- 2008<font  style='font-size:11pt; color:#000000'>ರ ಕಾಮನ್‌ವೆಲ್ತ್ ಯೂತ್ ಗೇಮ್ಸ್ ಚಿನ್ನದ ಪದಕ</font><br/>- 2008<font  style='font-size:11pt; color:#000000'>ರ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವು</font>]]></content:encoded>
      <pubDate>Sat, 20 Dec 2008 19:58:44 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಒಲಿಂಪಿಕ್ಸ್‌ನಲ್ಲಿ ಚಿನ್ನದ ದಾಖಲೆ ಬರೆದ 2008]]></title>
      <link>https://kannada.webdunia.com/article/retrospection-08/ಒಲಿಂಪಿಕ್ಸ್‌ನಲ್ಲಿ-ಚಿನ್ನದ-ದಾಖಲೆ-ಬರೆದ-2008-108122000061_1.htm</link>
      <guid>https://kannada.webdunia.com/article/retrospection-08/ಒಲಿಂಪಿಕ್ಸ್‌ನಲ್ಲಿ-ಚಿನ್ನದ-ದಾಖಲೆ-ಬರೆದ-2008-108122000061_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[ಒಲಿಂಪಿಕ್ಸ್‌ನಲ್ಲಿ ರಾಷ್ಟ್ರ ಪಡೆದ ಮೊದಲ ಚಿನ್ನ, ಕಂಚಿನ ಪದಕಗಳು, ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ತನ್ನ ಸ್ಥಾನವನ್ನು  ಭದ್ರಪಡಿಸಿಕೊಂಡದ್ದು, ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಅಗ್ರ 10ರೊಳಗೆ ಪ್ರವೇಶ ಪಡೆದದ್ದು, ಸ್ಕ್ವಾಷ್‌ನಲ್ಲಿ ಯುವ ಪ್ರತಿಭೆ  ಜೋಶ್ನಾ ಚಿನ್ನಪ್ಪ ಮಿಂಚು, ಬಾಕ್ಸಿಂಗ್‌ ...]]></description>
      <content:encoded><![CDATA[<font  style='font-size:11pt; color:#0000FF'><b>ಭುವನ್ ಪುದುವೆಟ್ಟು   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220061_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಒಲಿಂಪಿಕ್ಸ್‌ನಲ್ಲಿ ರಾಷ್ಟ್ರ ಪಡೆದ ಮೊದಲ ಚಿನ್ನ, ಕಂಚಿನ ಪದಕಗಳು, ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ತನ್ನ ಸ್ಥಾನವನ್ನು  ಭದ್ರಪಡಿಸಿಕೊಂಡದ್ದು, ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಅಗ್ರ 10ರೊಳಗೆ ಪ್ರವೇಶ ಪಡೆದದ್ದು, ಸ್ಕ್ವಾಷ್‌ನಲ್ಲಿ ಯುವ ಪ್ರತಿಭೆ  ಜೋಶ್ನಾ ಚಿನ್ನಪ್ಪ ಮಿಂಚು, ಬಾಕ್ಸಿಂಗ್‌ ವಿಶ್ವಚಾಂಪಿಯನ್‌ಶಿಪ್ ಪಡೆದು ಕ್ರೀಡಾ ಇಲಾಖೆಯನ್ನು ಎಚ್ಚರಿಸಿದ ಮೇರಿ ಕಾಮ್  ಮುಂತಾದುವು ಸಾಧನೆ. ಅದೇ ರೀತಿ ನೀರಸವಾಗಿ ಕಂಡು ಬೇಸರ ಹುಟ್ಟಿಸಿದ್ದು ರಾಷ್ಟ್ರೀಯ ಕ್ರೀಡೆ ಹಾಕಿ, ಸಾನಿಯಾ ಮಿರ್ಜಾ  ಆಡದೇ ಇದ್ದದ್ದು, ಶ್ರೀಶಾಂತ್ ಶೈಲಜಾ ಪೂಜಾರಿ-ಮೋನಿಕಾ ವಿವಾದ ಹೀಗೆ ಪಟ್ಟಿ ಉದ್ದುದ್ದ ಬೆಳೆಯುತ್ತಲೇ ಹೋಗುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಟೆನಿಸ್...  </font><font style=' color:#000000;'></b></font><br/><font  style='font-size:11pt; color:#000000'><b>ಸಾನಿಯಾ ಮಿರ್ಜಾ:  </b>ಭಾರತದ ಪಾಲಿಗೆ ಸಾನಿಯಾ ಮಿರ್ಜಾ ಈ ಬಾರಿ ಗಗನ ಕುಸುಮವಾಗುಳಿದದ್ದು ಟೆನಿಸ್ ಪ್ರೇಮಿಗಳಿಗೆ ಬೇಸರ  ಹುಟ್ಟಿಸಿತು. ಒಲಿಂಪಿಕ್ಸ್‌ನಲ್ಲೂ ನಿರಾಶಾದಾಯಕ ಪ್ರದರ್ಶನ ತೋರಿದ ಆಕೆ ನಂತರ ಯಾವ ಟೂರ್ನಮೆಂಟುಗಳಲ್ಲೂ  ಕಾಣಿಸಿಕೊಳ್ಳಲಿಲ್ಲ. ವಿವಾದಗಳಿಂದ ಬೇಸತ್ತು ಬೆಂಗಳೂರು ಓಪನ್‌ನಿಂದಲೂ ಹೊರಗುಳಿದ ಆಕೆ ನಂತರ ಗಾಯಾಳುವಾಗಿ ಚಿಕಿತ್ಸೆ  ಪಡೆಯುವ ಕಾರಣ ಹೇಳಿ ಮ‌ೂರ್ನಾಲ್ಕು ತಿಂಗಳು ಮಾಯವಾದರು. ಇದೀಗ ಅಭ್ಯಾಸ ನಿರತರಾಗಿದ್ದು, ಮುಂದಿನ ಹಾಂಕಾಂಗ್  ಓಪನ್‌ನಲ್ಲಿ ಆಡುವ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ರ‌್ಯಾಂಕಿಂಗ್‌ನಲ್ಲಿ ಕೂಡ ಆಕೆ ಬಹಳಷ್ಟು ಹಿನ್ನಡೆ ಕಂಡಿದ್ದಾರೆ. ಬೀಜಿಂಗ್  ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದರಾದರೂ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಗಮನೀಯ ಪ್ರದರ್ಶನ ತೋರದೆ ಆರಂಭಿಕ  ಹಂತದಲ್ಲೇ ಹೊರ ಬಿದ್ದರು. ಆದರೂ ವರ್ಷಾಂತ್ಯದಲ್ಲಿ ಚೆನ್ನೈಯ ಎಂಜಿಆರ್ ಯ‌ೂನಿವರ್ಸಿಟಿಯಿಂದ ಡಾಕ್ಟರೇಟ್ ಗೌರವವನ್ನು  ಪಡೆದುಕೊಂಡಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಲಿಯಾಂಡರ್ ಪೇಸ್: </b>ಲಿಯಾಂಡರ್ ಪೇಸ್ ಯುಎಸ್ ಓಪನ್‌ನಲ್ಲಿ ಕಾರಾ ಬ್ಲ್ಯಾಕ್ ಜತೆಗೂಡಿ ಮಿಕ್ಸ್‌ಡ್ ಡಬಲ್ಸ್ ವಿಭಾಗದ  ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಲುಕಾಸ್ ದ್ಲೋಹಿ ಜತೆಗೂಡಿ ಎಟಿಪಿ ಥಾಯ್ಲೆಂಡ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಕೂಡ  ಗೆದ್ದುಕೊಂಡಿದ್ದಾರೆ. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಬೀಜಿಂಗ್ ಒಲಿಂಪಿಕ್ಸ್‌ನ ಡಬಲ್ಸ್ ವಿಭಾಗದಲ್ಲಿ ಪ್ರಬಲ  ಹೋರಾಟ ನೀಡಿತ್ತಾದರೂ ಸೆಮಿ ಫೈನಲ್ ಪ್ರವೇಶ ಪಡೆಯಲು ಸಫಲವಾಗಿರಲಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಮಹೇಶ್ ಭೂಪತಿ: </b>ಮತ್ತೊಬ್ಬ ಡಬಲ್ಸ್ ಆಟಗಾರ ಮಹೇಶ್ ಭೂಪತಿಯವರು ತನ್ನ ಜತೆಗಾರ ಮಾರ್ಕ್ ನೋವ್ಲ್‌ ಜತೆಗೂಡಿ  ಬಾಸೆಲ್ ಓಪನ್ ಟೈಟಲ್ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ. ಉಳಿದಂತೆ ಮಿಯಾಮಿ ಓಪನ್, ಮೊನಾಕೊ, ನ್ಯೂ ಹವೆನ್  ಯು.ಎಸ್., ವಿಯೆನ್ನಾ ಹಾಗೂ ಮ್ಯಾಡ್ರಿಡ್ ಓಪನ್‌ಗಳಲ್ಲಿ ಜತೆಗಾರ ಮಾರ್ಕ್ ನೋವ್ಲ್ ಜತೆಗೂಡಿ ರನ್ನರ್-ಅಪ್ ಆಗಿದ್ದಾರೆ. ಹಳೆ  ಗೆಳೆಯ ಲಿಯಾಂಡರ್ ಪೇಸ್ ಜತೆಗೂಡಿ ನೆದರ್‌ಲ್ಯಾಂಡ್‌ನಲ್ಲಿ ರನ್ನರ್ ಅಪ್ ಎನಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಸೋಮದೇವ್: </b>ಭಾರತದ ನಂಬರ್ ವನ್ ಸಿಂಗಲ್ಸ್ ಆಟಗಾರ ಸೋಮದೇವ್ ಈ ವರ್ಷದ ಸಾಧನೆ ಮೆಚ್ಚುವಂತದ್ದೇ. ತನ್ನ  ಕ್ರೀಡಾಜೀವನದ ಅತ್ಯುತ್ತಮ ಸಾಧನೆಯಿಂದ ಟೆನಿಸ್ ರ‌್ಯಾಂಕಿಂಗ್‌ನಲ್ಲಿ 201ನೇ ಸ್ಥಾನಕ್ಕೆ ಬಂದಿದ್ದು, ಆ ಮ‌ೂಲಕ ಭಾರತದ ನಂಬರ್  1 ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಇವರು 574ನೇ ಸ್ಥಾನ ಇವರದ್ದಾಗಿದೆ. ಇತ್ತೀಚಿನ ನಾಶ್‌ವಿಲ್ಲೆ  ಚಾಲೆಂಜರ್‌ನಲ್ಲಿ ಸೋಮದೇವ್ ಹಲವು ಟಾಪ್ 100ರೊಳಗಿನ ಆಟಗಾರರನ್ನು ಮಣಿಸಿದ್ದರಿಂದ ರ‌್ಯಾಂಕಿಂಗ್‌ನಲ್ಲಿ ಸುಮಾರು  40ರಷ್ಟು ಮೇಲೇರಿ ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ನಾಶ್‌ವಿಲ್ಲೆ ಚಾಲೆಂಜರ್‌ನ ಫೈನಲ್‌ನಲ್ಲಿ  ಸೋಮದೇವ್ ಅವರು ರಾಬರ್ಟ್ ಕೆಂಡ್ರಿಕ್ ಎದುರು ಪರಾಭವ ಅನುಭವಿಸಿದ್ದರೂ ಕೂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೇಲೇರಿದ್ದರು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸ್ಕ್ವಾಷ್...  </font><font style=' color:#000000;'></b></font><br/><font  style='font-size:11pt; color:#000000'>ಇಲ್ಲಿ ಭಾರತದಿಂದ ಹೆಸರು ಮಾಡಿದವರು ಇತ್ತೀಚಿನ ದಿನಗಳಲ್ಲಿ ಜೋಶ್ನಾ ಚಿನಪ್ಪ ಮಾತ್ರ. ಎರಡನೇ ಬಾರಿಗೆ ವಿಸ್ಪಾ  ಪ್ರಶಸ್ತಿಯನ್ನು ಮಲೇಷ್ಯಾದಲ್ಲಿ ಈ ವರ್ಷ ಮಡಿಲಿಗೆ ಹಾಕಿಕೊಂಡದ್ದು ಹೆಗ್ಗಳಿಕೆ. ಜತೆಗೆ ಎನ್‌ಎಸ್‌ಸಿ ಸೂಪರ್ ಸ್ಯಾಟಲೈಟ್ ನಂ.4  ಟೂರ್ನಮೆಂಟಿನಲ್ಲಿ ಕೂಡ ಚಾಂಪಿಯನ್ ಆಗಿದ್ದಾರೆ. ಆಕರ್ಷಕವಾಗಿ ಕಾಣುವ ಈಕೆ ಆಟದಲ್ಲೂ ಹಿಂದಿಲ್ಲ. ಹಾಗಾಗಿ ಭಾರತದ  ಮುಂದಿನ ಭರವಸೆಯ ಆಟಗಾರ್ತಿ ಎಂದೇ ಹೇಳಬಹುದು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬ್ಯಾಡ್ಮಿಂಟನ್...  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220061_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಸೈನಾ ನೆಹ್ವಾಲ್: ಈಕೆ ಈಗ ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ವಿಶ್ವ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿ  ಗುರುತಿಸಿಕೊಂಡವರು. ಒಲಿಂಪಿಕ್ಸ್‌‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮ‌ೂಲಕ ಈ ಸಾಧನೆ ಮೊದಲ ಭಾರತೀಯ ಆಟಗಾರ್ತಿ  ಎಂಬ ಹೆಗ್ಗಳಿಕೆ. ಜತೆಗೆ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್, ಈ ವರ್ಷದ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನ,  ಇಂಡಿಯನ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಹಾಗೂ ಯೊನೆಕ್ಸ್ ಚೈನೀಸ್ ತೈಪೆ ಓಪನ್ ಗೆದ್ದುಕೊಂಡ  ಸಾಧನೆ ಕೂಡ ಈ ವರ್ಷ ಮಾಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕೊಡ ಮಾಡುವ '2008ರ ಅತ್ಯಂತ ಭರವಸೆಯ  ಆಟಗಾರ್ತಿ' ಎಂಬ ಬಿರುದು ಕೂಡ ಆಕೆಯ ಸಾಧನೆಯ ಪಟ್ಟಿಯಲ್ಲಿ ದಪ್ಪ ಅಕ್ಷರಗಳಲ್ಲಿ ಕಾಣಿಸಿದೆ. ಬಿಡಬ್ಲ್ಯೂಎಫ್ ಸೂಪರ್ ಸಿರೀಸ್  ಮಾಸ್ಟರ್ಸ್‌ನ ಸೆಮಿಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಸಾಧಿಸಿದ್ದು  ವರ್ಷಾಂತ್ಯದಲ್ಲಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬ್ಯಾಡ್ಮಿಂಟನ್‌ನಲ್ಲಿ ಇನ್ನಿತರ ಉತ್ತಮ ಸಾಧನೆ ತೋರುತ್ತಿರುವವರೆಂದರೆ ಅಧಿತಿ ಮುತಾತ್ಕರ್ ಮತ್ತು ನೇಹಾ ಪಂಡಿತ್. ಪುರುಷರ  ವಿಭಾಗದಲ್ಲಿ ಚೇತನ್ ಆನಂದ್ ಭಾರತದಲ್ಲೇ ನಂಬರ್ ವನ್ ಹಾಗೂ ವಿಶ್ವ ರ‌್ಯಾಂಕಿಂಗ್‌ನಲ್ಲಿ 15ನೇ ಸ್ಥಾನ. ಅರವಿಂದ್ ಭಟ್,  ಅನೂಪ್ ಶ್ರೀಧರ್, ಪರುಪಲ್ಲಿ ಕಶ್ಯಪ್, ಆನಂದ್ ಪವಾರ್ ಹಾಗೂ ಜಯರಾಮ್ ಉತ್ತಮ ಸಾಧನೆ ತೋರಿಸಿದ್ದಾರೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಶೂಟಿಂಗ್...  </font><font style=' color:#000000;'></b></font><br/><font  style='font-size:11pt; color:#000000'>ಅಭಿನವ್ ಬಿಂದ್ರಾ: ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅತ್ಯದ್ಭುತ ಪ್ರದರ್ಶನದ ಮ‌ೂಲಕ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ  ಗೆದ್ದುಕೊಂಡದ್ದು ಇಡೀ ದೇಶವೇ ಹೆಮ್ಮೆಪಡುವಂತಾಗಿತ್ತು. 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಪಡೆಯುವ ಮ‌ೂಲಕ  ವೈಯಕ್ತಿಕ ವಿಭಾಗದಲ್ಲಿ ಈ ಪದಕ ಗಳಿಸಿದ ಮೊದಲ ಭಾರತೀಯ ಹಾಗೂ 1980ರ ಪುರುಷರ ಹಾಕಿ ತಂಡದ ಚಿನ್ನದ ನಂತರ  ಪಡೆದ ಮೊದಲ ಚಿನ್ನದ ಪದಕ ಎಂಬ ದಾಖಲೆ ಬರೆದರು. ಜತೆಗೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ ಬಿಡುಗಡೆ  ಮಾಡಿರುವ ವಿಶ್ವ ರ‌್ಯಾಂಕಿಂಗ್ ಪಟ್ಟಿಯ ಅಗ್ರ ಹತ್ತರಲ್ಲಿ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ತನ್ನ ಎರಡನೇ ಸ್ಥಾನವನ್ನು  ಉಳಿಸಿಕೊಂಡಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಳಿದಂತೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ ಬಿಡುಗಡೆ ಮಾಡಿರುವ ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ  ಕಾಣಿಸಿಕೊಂಡಿರುವರು ಇಬ್ಬರು ಭಾರತೀಯರು ಮಾತ್ರ. ಗಗನ್ ನಾರಂಗ್ ಮ‌ೂರು ಸ್ಥಾನ ಮೇಲಕ್ಕೇರಿದ್ದು, ಪುರುಷರ 10 ಮೀಟರ್  ಏರ್ ರೈಫಲ್ ವಿಭಾಗದಲ್ಲಿ ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪುರುಷರ ಡಬಲ್ ಟ್ರಾಪ್ ಇವೆಂಟ್‌ ವಿಭಾಗದಲ್ಲಿ ರೊಂಜನ್  ಸಿಂಗ್ ಸೋಧಿ ತನ್ನ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್, ಸಮರೇಶ್ ಜಂಗ್,  ರಾಜವರ್ಧನ್ ಸಿಂಗ್ ರಾಥೋಡ್ ಶೂಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದೆ ನಿರಾಸೆ ಮ‌ೂಡಿಸಿದ್ದರು.</font><br/></font><font  style='font-size:11pt; color:#0000FF'><b>ಬಾಕ್ಸಿಂಗ್...  </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220061_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'>ವಿಜೇಂದರ್ ಕುಮಾರ್: ವಿಜೇಂದರ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮಿಡ್ಲ್‌ವೈಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದದ್ದು  ಜೀವಮಾನದ ಶ್ರೇಷ್ಠ ಸಾಧನೆ ಹಾಗೂ ಭಾರತೀಯರಿಗೆ ಸಂಭ್ರಮಿಸಲು ಹುರಿದುಂಬಿಸಿದವರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಳಿದಂತೆ ಅಖಿಲೇಶ್ ಕುಮಾರ್, ಜಿತೇಂದರ್ ಕುಮಾರ್, ದಿನೇಶ್ ಕುಮಾರ್, ಎ.ಎಲ್. ಲಾಕ್ರಾ ಮುಂತಾದವರು ಉತ್ತಮ  ಪ್ರದರ್ಶನ ತೋರಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಮೇರಿ ಕಾಮ್:   </b>ಈಕೆ ಬಾಕ್ಸಿಂಗ್‌ನಲ್ಲಿ ಸಾಧಿಸಿದ್ದು ಅಪಾರ. ಅದರಲ್ಲೂ ಈ ವರ್ಷ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ  ನಾಲ್ಕನೇ ಬಾರಿ ಚಾಂಪಿಯನ್ ಆಗಿದ್ದು ಹೆಮ್ಮೆ. 2004ರಲ್ಲಿ ಟರ್ಕಿ, 2005ರಲ್ಲಿ ರಷ್ಯಾ, 2007ರಲ್ಲಿ ದೆಹಲಿ, 2008ರಲ್ಲಿ ಚೀನಾ ಹೀಗೆ  ಒಟ್ಟು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಪಟ್ಟ ಆಕೆಗೆ ದೊರಕಿತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕುಸ್ತಿ...  </font><font style=' color:#000000;'></b></font><br/><font  style='font-size:11pt; color:#000000'>ಸುಶೀಲ್ ಕುಮಾರ್: ಇವರು ಪುರುಷರ 66 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚು ಪಡೆದು ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 2008ರ  ಮೊತ್ತ ಮ‌ೂರಾಗುವಂತೆ ನೋಡಿಕೊಂಡವರು. 60 ಕೆ.ಜಿ. ವಿಭಾಗದಲ್ಲಿ ಯೋಗೇಶ್ವರ್ ದತ್ ಮತ್ತು 120 ಕೆ.ಜಿ. ವಿಭಾಗದಲ್ಲಿ  ರಾಜೀವ್ ತೊಮರ್ ಭಾಗವಹಿಸಿದ್ದರಾದರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220061_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಹಾಕಿ...  </font><font style=' color:#000000;'></b></font><br/><font  style='font-size:11pt; color:#000000'>ಈ ವರ್ಷ ಬೇಸರ ಹುಟ್ಟಿಸಿದ್ದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ. ಒಲಿಂಪಿಕ್ಸ್ ಇತಿಹಾಸದಲ್ಲಿ ಒಟ್ಟು ಎಂಟು ಚಿನ್ನದ ಪದಕ, ಒಂದು  ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದಿದ್ದ ಭಾರತೀಯ ಒಲಿಂಪಿಕ್ಸ್ ತಂಡ ಈ ಬಾರಿ ಅರ್ಹತಾ ಸುತ್ತಿನಲ್ಲೇ ಹೊರಬಿದ್ದು  ಅವಮಾನಕ್ಕೊಳಗಾಗುವ ಪ್ರಸಂಗಾವಧಾನತೆ ಒದಗಿ ಬಂದದ್ದು ದುರದೃಷ್ಟವೆನಿಸಿತು. ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆಯನ್ನೇ  ಕಳೆದುಕೊಂಡ ತಂಡ ತವರಿನಲ್ಲೇ ಉಳಿಯಬೇಕಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂಡಿಯನ್ ಹಾಕಿ ಫೆಡರೇಷನ್ ಅಮಾನತಿಗೊಳಗಾದದ್ದು ಈ ವರ್ಷದ ಮತ್ತೊಂದು ದುರಂತ. ತನ್ನ ಭ್ರಷ್ಟಾಚಾರಗಳಿಂದಾಗಿ   ಹೆಸರು ಕೆಡಿಸಿಕೊಂಡ ಇಂಡಿಯನ್ ಹಾಕಿ ಫೆಡರೇಷನ್‌ನನ್ನು ಇಂಡಿಯನ್ ಒಲಿಂಪಿಕ್ ಅಸೋಷಿಯೇಷನ್ ಏಪ್ರಿಲ್ 28ರಂದು  ಅಮಾನತುಗೊಳಿಸಿ ತಾತ್ಕಾಲಿಕ ಸಮಿತಿಯನ್ನು ನೇಮಿಸಿತು. ಜತೆಗೆ ಕೆ.ಪಿ.ಎಸ್. ಗಿಲ್ ಅವರನ್ನು ಕೂಡ ವಜಾಗೊಳಿಸಿತ್ತು.  ಯಾವುದೇ ಗಮನಾರ್ಹ ಗೆಲುವುಗಳನ್ನು ದಾಖಲಿಸದ ಭಾರತೀಯ ಹಾಕಿ ಗಮನ ಸೆಳೆದದ್ದು, ಕೇವಲ ತನ್ನ ವಿವಾದಗಳಿಂದಾಗಿ  ಮಾತ್ರ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಚೆಸ್...  </font><font style=' color:#000000;'></b></font><br/><font  style='font-size:11pt; color:#000000'>ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನ್ನ ಪಟ್ಟಕ್ಕೆ ತೊಂದರೆಯಾಗದಂತೆ ನೋಡಿಕೊಂಡದ್ದು ಈ ವರ್ಷದ ಅವರ  ಸಾಧನೆ. ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ಅವರನ್ನು ಸೋಲಿಸುವ ಮ‌ೂಲಕ ವಿಶ್ವ ಚಾಂಪಿಯನ್‌ಶಿಪ್ ತನ್ನಲ್ಲೇ ಇರುವಂತೆ  ಮಾಡಿದರು. ಆ ಮ‌ೂಲಕ ಚೆಸ್‌ನ ಎಲ್ಲಾ ವಿಧದ ಆಟಗಳಲ್ಲಿ ಚಾಂಪಿಯನ್ ಆದ ದಾಖಲೆಯನ್ನೂ ಅವರು ನಿರ್ಮಿಸಿದ್ದಾರೆ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220061_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ವೈಟ್‌ಲಿಫ್ಟಿಂಗ್...  </font><font style=' color:#000000;'></b></font><br/><font  style='font-size:11pt; color:#000000'>ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕಾಗಿದ್ದ ಮೋನಿಕಾ ದೇವಿಯವರನ್ನು ಬೀಜಿಂಗ್‌ಗೆ ಹೊರಡುವ ಕೇವಲ 30 ನಿಮಿಷಗಳ ಮೊದಲು  ಉದ್ದೀಪನಾ ದ್ರವ್ಯ ಸೇವನೆಯ ಕಾರಣವೊಡ್ಡಿ ಪ್ರವಾಸವನ್ನು ತಡೆ ಹಿಡಿಯಲಾಯಿತು. ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ  ಸುರಿಸಿದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ತನ್ನ ತೀಟೆ ತೀರಿಸಿಕೊಂಡಿತ್ತು. ನಂತರ ಅಲ್ಲಿ ನಡೆದ ರಾಜಕೀಯ ನಡೆಗಳ  ಬಗ್ಗೆ ಪ್ರತಿಭಟನೆಗಳು ಹೆಚ್ಚಾದಂತೆ ಮೋನಿಕಾ ನಿರ್ದೋಷಿ ಎಂದು ಘೋಷಿಸಿ, ಇಂದೇ ಆಕೆ ಬೀಜಿಂಗ್‌ಗೆ ತೆರಳಲಿದ್ದಾರೆ ಎಂದು  ಹೇಳಲಾಯಿತು. ಆದರೆ ಮರುದಿನ ಅಸೋಸಿಯೇಷನ್ ಹೇಳಿಕೆಯೇ ಬೇರೆಯಾಗಿತ್ತು. ಆಯ್ಕೆ ಪ್ರಕ್ರಿಯೆಗಳು ಮುಗಿದ ಕಾರಣ  ಮೋನಿಕಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿತು. ಮಣಿಪುರ ಮುಖ್ಯಮಂತ್ರಿಯವರು  ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ನಂತರವೂ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಏಪ್ರಿಲ್-ಮೇ ತಿಂಗಳಿನಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತದ ವೈಟ್ ಲಿಫ್ಟರುಗಳು ಒಂದು  ಬೆಳ್ಳಿ ಮತ್ತು ಎರಡು ಕಂಚಿನ ಪದಕ ಪಡೆಯುವ ಮ‌ೂಲಕ ಐದನೇ ಸ್ಥಾನ ಗಳಿಸಿದ್ದರು. ಆದರೆ ಇಲ್ಲಿ ಕೂಡ ಭಾರತಕ್ಕೆ ಕಾಡಿದ್ದು  ಅದೇ ಉದ್ದೀಪನಾ ದ್ರವ್ಯ ಪರೀಕ್ಷೆ. 75 ಕೆ.ಜಿ. ವಿಭಾಗದ ಕವಿತಾ ದೇವಿ ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾರಣ  ಆಕೆಯನ್ನು ಕ್ರೀಡಾಕೂಟಕ್ಕೆ ಸೇರಿಸಿಕೊಳ್ಳದೆ ಭಾರತಕ್ಕೆ ವಾಪಸು ಕಳುಹಿಸಲಾಗಿತ್ತು.</font>]]></content:encoded>
      <pubDate>Sat, 20 Dec 2008 19:54:55 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಹೇಸಿಗೆ ರಾಜಕೀಯದ ಆಡುಂಬೊಲದಲ್ಲಿ ಅರಳಿದ ಶಾಸ್ತ್ರೀಯತೆ]]></title>
      <link>https://kannada.webdunia.com/article/retrospection-08/ಹೇಸಿಗೆ-ರಾಜಕೀಯದ-ಆಡುಂಬೊಲದಲ್ಲಿ-ಅರಳಿದ-ಶಾಸ್ತ್ರೀಯತೆ-108122000049_1.htm</link>
      <guid>https://kannada.webdunia.com/article/retrospection-08/ಹೇಸಿಗೆ-ರಾಜಕೀಯದ-ಆಡುಂಬೊಲದಲ್ಲಿ-ಅರಳಿದ-ಶಾಸ್ತ್ರೀಯತೆ-108122000049_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[2008 ಭಯೋತ್ಪಾದಕರ ಅಟ್ಟಹಾಸ, ನಕ್ಸಲೀಯರ ರಕ್ತದಾಹ, ರಾಜ್ಯರಾಜಕಾರಣ ಹಿಂದೆಂದೂ ಕಾಣದಂತಹ ಹೇವರಿಕೆ ಹುಟ್ಟಿಸುವ ರಾಜಕಾರಣ ಸೇರಿದಂತೆ ಹಲವಾರು ಬೀಭತ್ಸ ಘಟನೆಗಳಿಗೆ ಸಾಕ್ಷಿಯಾಗುವ ಮೂಲಕ ನಮ್ಮನ್ನು ಹೊಸವರ್ಷದತ್ತ ಕೊಂಡೊಯ್ದಿದೆ. ಜನತಾಪರಿವಾರ ಸರಕಾರದ ನಂತರ ರಾಜ್ಯರಾಜಕಾರಣದಲ್ಲಿ ಅದರಲ್ಲೂ ದಕ್ಷಿಣಭಾರತದಲ್ಲಿ ...]]></description>
      <content:encoded><![CDATA[<font  style='font-size:11pt; color:#0000FF'><b>ನಾಗೇಂದ್ರ ತ್ರಾಸಿ   </font><font style=' color:#000000;'></b></font><br/>2008 <font  style='font-size:11pt; color:#000000'>ಭಯೋತ್ಪಾದಕರ ಅಟ್ಟಹಾಸ, ನಕ್ಸಲೀಯರ ರಕ್ತದಾಹ, ರಾಜ್ಯರಾಜಕಾರಣ ಹಿಂದೆಂದೂ ಕಾಣದಂತಹ ಹೇವರಿಕೆ ಹುಟ್ಟಿಸುವ ರಾಜಕಾರಣ ಸೇರಿದಂತೆ ಹಲವಾರು ಬೀಭತ್ಸ ಘಟನೆಗಳಿಗೆ ಸಾಕ್ಷಿಯಾಗುವ ಮೂಲಕ ನಮ್ಮನ್ನು ಹೊಸವರ್ಷದತ್ತ ಕೊಂಡೊಯ್ದಿದೆ. ಜನತಾಪರಿವಾರ ಸರಕಾರದ ನಂತರ ರಾಜ್ಯರಾಜಕಾರಣದಲ್ಲಿ ಅದರಲ್ಲೂ ದಕ್ಷಿಣಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರಿರುವುದು ರಾಜ್ಯದ ಪ್ರಮುಖ ಬೆಳವಣಿಗೆಯಲ್ಲಿ ಒಂದಾಗಿದೆ. ಅದರಂತೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗರಿ ಹೀಗೆ ಹಲವು ಸಿಹಿ-ಕಹಿ ಘಟನಾವಳಿಗಳ ಹಿನ್ನೋಟ ಇಲ್ಲಿದೆ.....</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220049_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಉಗ್ರರು ಬಾಯ್ಬಿಟ್ಟ ಸ್ಫೋಟ ನಂಟು:  </font><font style=' color:#000000;'></b></font><br/><font  style='font-size:11pt; color:#000000'>ದಾವಣಗೆರೆ ಸಮೀಪದ ಹೊನ್ನಾಳಿಯಲ್ಲಿ ಬೈಕ್ ಕಳ್ಳತನದ ಮೇಲೆ ಪೊಲೀಸರಿಗೆ ಸೆರೆಸಿಕ್ಕ ಮಹಮ್ಮದ್ ಗೌಸ್ ಅಲಿಯಾಸ್ ರಿಯಾಸುದ್ದೀನ್ ನಾಸೀರ್ ಮತ್ತು ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ತನಿಖೆ ವೇಳೆ ಬಹಿರಂಗ ಪಡಿಸಿದ ನಗ್ನ ಸತ್ಯಗಳು ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು.ಧಾರವಾಡದ ಕಲಘಟಗಿ ಬಳಿ ಅರಣ್ಯದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡಿರುವ ಬಗ್ಗೆಯೂ ವಿವರ ನೀಡಿದ್ದರು. ಕರ್ನಾಟಕದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸಲು ದಾರ್ ಇ ರಿಬಾತ್ ಎಂಬ ಸಂಘಟನೆ ಮೂಲಕ ತರಬೇತಿ ಪಡೆದಿರುವುದಾಗಿ ಗೌಸ್ ತಿಳಿಸಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಕಿಮ್ಸ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಆಸೀಫ್‌‌ನನ್ನು ಬಂಧಿಸುವ ಮೂಲಕ ಮತ್ತಷ್ಟು ಸ್ಫೋಟಕ ವಿವರಗಳು ಬಯಲಾಗಿದ್ದವು.ಹುಬ್ಬಳ್ಳಿ ಸಿಮಿ ಸಂಘಟನೆಯ ನಾಯಕನಾಗಿರುವ ಆಸೀಫ್ ಕರ್ನಾಟಕ ಮತ್ತು ಗೋವಾದ ಒಟ್ಟು 11 ಪ್ರಮುಖ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸುವ ಸಂಚು ಕೂಡ ಬಯಲಾಗಿತ್ತು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಅಧಿಕಾರದ ಗದ್ದುಗೆ ಏರಿದ ಬಿಜೆಪಿ:  </font><font style=' color:#000000;'></b></font><br/><font  style='font-size:11pt; color:#000000'>ಕರ್ನಾಟಕ ರಾಜ್ಯರಾಜಕಾರಣದಲ್ಲಿ ಅತಿ ಹೆಚ್ಚು ಆಳ್ವಿಕೆ ನಡೆಸಿದ್ದು ಕಾಂಗ್ರೆಸ್ ಬಳಿಕ ಜನತಾ ಪರಿವಾರ ಸಡ್ಡು ಹೊಡೆಯುವ ಮೂಲಕ 1983ರಲ್ಲಿ ಕಾಂಗ್ರೆಸ್ಸೇತರ ಸರಕಾರ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಭಾರತೀಯ ಜನತಾ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕನಸು ಕೊನೆಗೂ ನನಸಾಗಿದ್ದು, 2008ರಲ್ಲಿ. ಅದು ಭಾಜಪದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ಪ್ರಮುಖ ಘಟನೆಯಾಗಿತ್ತು. ಯಾಕೆಂದರೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಏರಿದ ಕೀರ್ತಿಗೆ ಭಾಜನಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ , ಬಳಿಕ ಜೆಡಿಎಸ್-ಬಿಜೆಪಿ ಮೈತ್ರಿ, ರಾಷ್ಟ್ರಪತಿ ಆಳ್ವಿಕೆ, ವಚನಭ್ರಷ್ಟತೆಯೊಂದಿಗೆ ಕೆಳಮಟ್ಟದ ರಾಜಕೀಯದಿಂದ ಮತದಾರರಲ್ಲಿ ಅಸಮಾಧಾನ ಹುಟ್ಟು ಹಾಕುವ ಮೂಲಕ, ಕೊನೆಗೂ ಬಿಜೆಪಿ ಚುನಾವಣೆಯಲ್ಲಿ ಜಯಬೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿದಿತ್ತು. ಈ ಯಶಕ್ಕೆ ಕಾರಣರಾದವರು ಬೂಕನಕೆರೆ ಎಸ್. ಯಡಿಯೂರಪ್ಪ. ಬಿಜೆಪಿ ಅಧಿಕಾರದೊಂದಿಗೆ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸುವ ಮೂಲಕ ಭಾಜಪ ತನ್ನ ಛಾಪು ಮೂಡಿಸಿತ್ತು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220049_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ರಸಗೊಬ್ಬರ ಮತ್ತು ಗೋಲಿಬಾರ್:   </font><font style=' color:#000000;'></b></font><br/><font  style='font-size:11pt; color:#000000'>ರೈತ ಹೆಸರಲ್ಲಿ ಹಸಿರು ಶಾಲು ಹೊದ್ದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾರೂಢ ಸರಕಾರ ಕೊನೆಗೂ ರಾಜ್ಯದಲ್ಲಿ ರಸಗೊಬ್ಬರದ ಅಭಾವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗುವ ಮೂಲಕ ರೈತರ ಆಕ್ರೋಶಕ್ಕೆ ಸಿಲುಕಿತ್ತು. ಧಾರವಾಡ-ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ರೈತರ ಆಕ್ರೋಶ ಹಿಂಸಾಚಾರಕ್ಕೆ ತಿರುಗಿತ್ತು. ಕೊನೆಗೂ ಹಾವೇರಿಯಲ್ಲಿ ಉದ್ರಿಕ್ತ ರೈತರ ಗುಂಪಿನ ಮೇಲೆ ಪೊಲೀಸರು ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ರೈತನೋರ್ವ ಬಲಿಯಾಗಬೇಕಾಯಿತು. ಈ ಘಟನೆ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರಿಗೆ ಕಳಂಕ ತಂದಿತ್ತು. ಅಲ್ಲದೇ ಪ್ರತಿಪಕ್ಷಗಳ, ರೈತರ ತೀವ್ರ ಟೀಕೆಗೆ ಒಳಗಾಗಬೇಕಾಗಿದ್ದು ವಿಪರ್ಯಾಸ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಆಪರೇಶನ್ ಕಮಲ:   </font><font style=' color:#000000;'></b></font><br/><font  style='font-size:11pt; color:#000000'>ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಪಟ್ಟ ಅಲಂಕರಿಸಿದ್ದ ಬಿಜೆಪಿ ತನ್ನ ಸರಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಿದ 'ಆಪರೇಶನ್ ಕಮಲ'ದ ತಂತ್ರಗಾರಿಕೆ ಎಲ್ಲ ನೀತಿ, ನಿಯಮ, ತತ್ವಬದ್ದ ರಾಜಕಾರಣಕ್ಕೆ ತಿಲಾಂಜಲಿ (ಈ ಮೊದಲು ಕಾಂಗ್ರೆಸ್ , ಜನತಾಪರಿವಾರದಿಂದ ಆಗಿತ್ತಾದರೂ ಈ ಪ್ರಮಾಣದಲ್ಲಿ ಆಗಿರಲಿಲ್ಲ) ನೀಡುವ ಮೂಲಕ ಕೊಳಕು ರಾಜಕೀಯಕ್ಕೆ ಇಳಿದ ಅಪವಾದಕ್ಕೆ ಗುರಿಯಾಗಬೇಕಾಯಿತು. ಕ್ಷಿಪ್ರ ರಾಜಕೀಯ ಬೆಳವಣಿಗೆ ಎಂಬಂತೆ ಜೆಡಿಎಸ್‌ನ ಇಬ್ಬರು ಕಾಂಗ್ರೆಸ್‌ನ ಇಬ್ಬರು ಶಾಸಕರು ಜನಾದೇಶವನ್ನು ದಿಕ್ಕರಿಸಿ, ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಮತ್ತೆ ಕಾಂಗ್ರೆಸ್‌ನ ಓರ್ವ ಹಾಗೂ ಜೆಡಿಎಸ್‌ನ ಇಬ್ಬರು ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. </font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220049_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಜೆಡಿಎಸ್‌ನ ಮಧುಗಿರಿ ಕ್ಷೇತ್ರದ ಗೌರಿಶಂಕರ್, ಹುಕ್ಕೇರಿಯ ಉಮೇಶ್ ಕತ್ತಿ, ದೇವದುರ್ಗದ ಶಿವನಗೌಡ, ಅರಬಾವಿಯ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್‌ನ ಕಾರವಾರದ ಆನಂದ ಅಸ್ನೋಟಿಕರ್, ಜಗ್ಗೇಶ್-ತುರುವೇಕೆರೆ, ದೊಡ್ಡಬಳ್ಳಾಪುರ ನರಸಿಂಹ ಸ್ವಾಮಿ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ, ರಾಜ್ಯದ ಏಳು ಕ್ಷೇತ್ರಗಳಲ್ಲಿ ಮತ್ತೆ ಉಪಚುನಾವಣೆ ನಡೆಸುವ ಹೊರೆಯನ್ನು ಹೊರಿಸಿದ್ದಾರೆ. ಆ ನಿಟ್ಟಿನಲ್ಲಿ ಜನಾದೇಶ ದಿಕ್ಕರಿಸಿ, ಅಧಿಕಾರದ ಆಸೆಗಾಗಿ ಬಿಜೆಪಿ ಸೇರ್ಪಡೆಗೊಂಡ ಶಾಸಕರಿಗೆ ಉಪಚುನಾವಣೆಯಲ್ಲಿ ಯಾವ ಪಕ್ಷದ ಪರ ತೀರ್ಪು ನೀಡುತ್ತಾನೆ ಎಂಬುದು ರಾಜಕಾರಣಗಳಿಗೆ ತಕ್ಕ ಪಾಠವಾಗಲಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಹೊಗೇನಕಲ್ ವಿವಾದ:   </font><font style=' color:#000000;'></b></font><br/><font  style='font-size:11pt; color:#000000'>ತಮಿಳುನಾಡಿನ  ಫ್ಲೈ ಓವರ್ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರು, ಹೊಗೇನಕಲ್ ನೀರಾವರಿ ಯೋಜನೆ ಬಗ್ಗೆ ಮಾತನಾಡುತ್ತ, ಜೀವ ತೆತ್ತಾದರೂ ಹೊಗೇನಕಲ್ ಯೋಜನೆ ಮಾಡಿಯೇ ಸಿದ್ದ ಎಂಬ ಹೇಳಿಕೆ, ಕರ್ನಾಟಕದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದಲ್ಲದೇ, ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಅದರ ಪರಿಣಾಮ ಎಂಬಂತೆ ತಮಿಳುನಾಡಿನಲ್ಲೂ ಕೆಲವು ಕನ್ನಡಿಗರ ಸಂಸ್ಥೆ, ಹೋಟೆಲುಗಳ ಮೇಲೂ ದಾಳಿ ನಡೆದಿತ್ತು. ತಮಿಳು ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿ. ಬಳಿಕ ಬೆಂಗಳೂರಿನ ತಮಿಳಿಗರಿಗೆ ಒತ್ತಡ, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮಧ್ಯಸ್ಥಿಕೆಯಿಂದಾಗಿ, ಕರುಣಾನಿಧಿಯವರು ಕರ್ನಾಟಕದಲ್ಲಿ ನೂತನ ಸರಕಾರ ಬರುವವರೆಗೆ ಹೊಗೇನಕಲ್ ಯೋಜನೆ ಮುಂದುವರಿಸುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ತಣ್ಣಗಾಗಿತ್ತು.</font><font  style='font-size:11pt; color:#0000FF'><b>ನಕ್ಸಲರ ಅಟ್ಟಹಾಸ:  </font><font style=' color:#000000;'></b></font><br/><font  style='font-size:11pt; color:#000000'>ಕುದುರೆಮುಖ, ಉಡುಪಿ, ಶೃಂಗೇರಿ ಅಭಯಾರಣ್ಯಗಳಲ್ಲಿ ತಳವೂರಿದ್ದ ನಕ್ಸಲೀಯರು, ಸಾಕೇತ್ ರಾಜನ್,ಶಿವಲಿಂಗು, ಹಾಜೀಮಾ ಹತ್ಯೆಯ ಬಳಿಕ ಸ್ವಲ್ಪ ತಟಸ್ಥವಾಗಿದ್ದರು. ಆಗಾಗ ಪಶ್ಚಿಮಘಟ್ಟಗಳಲ್ಲಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದ ನಕ್ಸಲ್ ತಂಡದ ವಿರುದ್ಧ ಪೊಲೀಸ್ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಮೇ.16ರಂದು ಸೋಮೇಶ್ವರ ಸಮೀಪದ ಹೆಬ್ರಿಯ ಶಿಕ್ಷಕ ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಎಂಬಿಬ್ಬರು ನಕ್ಸಲ್‌ರ ಗುಂಡಿಗೆ ಬಲಿಯಾಗುವ ಮೂಲಕ, ಮತ್ತೆ ನಕ್ಸಲ್ ರಕ್ತದಾಹದ ಬಗ್ಗೆ ಪಶ್ಚಿಮಘಟ್ಟ ಬೆಚ್ಚಿಬಿದ್ದಿತ್ತು. ತದನಂತರ ನಕ್ಸಲ್ ಚಟುವಟಿಕೆ ಮತ್ತೆ ತಣ್ಣಗಾದಂತೆ ಕಂಡು ಬಂದಿದ್ದರೂ ಕೂಡ, ಪಶ್ಚಿಮಘಟ್ಟದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಬಂಧಿಸಲಾಗಿತ್ತು, ಎನ್‌ಕೌಂಟರ್ ಮಾಡಲಾಯಿತು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಸ್ವತಃ ಬಿಜಿಕೆಯೇ ಹೇಳಿಕೆ ನೀಡಿದ ನಂತರ ಊಹಾಪೋಹಗಳಿಗೆ ತೆರೆಬಿದ್ದಿತ್ತು. ಹಾಗೆ ಶೃಂಗೇರಿಯ ಬಿಜೆಪಿ ಪ್ರಮುಖ ನಾಯಕರೊಬ್ಬರು ಸೇರಿದಂತೆ ಎಂಟು ಮಂದಿಯನ್ನು ನಕ್ಸಲ್ ತಂಡವೊಂದು ರಹಸ್ಯವಾಗಿ ಮಾತುಕತೆ ನಡೆಸಿ,ಅವರನ್ನು ಸುರಕ್ಷಿತವಾಗಿ ಬಿಟ್ಟಿತ್ತು. ಇದು ಪೊಲೀಸ್ ಇಲಾಖೆಗೆ ತಲೆನೋವು ತಂದ ವಿಚಾರವಾಗಿತ್ತು. ಕೂಡಲೇ ರಹಸ್ಯವಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಪಡೆ ಹೊರನಾಡಿನ ಮಾವಿನಹೊಲದ ಬಳಿ ನಕ್ಸಲರು ಹಾಗೂ ಪೊಲೀಸ್ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲೀಯರು, ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಬಲಿಯಾಗಿದ್ದರು.ಇವೆಲ್ಲ ಘಟನೆ ನಡೆಯುತ್ತಿದ್ದಂತೆಯೇ ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲಿ ಭೂಮಾಲೀಕ ಕೇಶವ ಯಡಿಯಾಳರನ್ನು ಮರಕ್ಕೆ ಕಟ್ಟಿಹಾಕಿ ಗುಂಡು ಹಾರಿಸಿ ಹತ್ಯೆಗೈಯುವ ಮೂಲಕ ನಕ್ಸಲೀಯರ ಅಟ್ಟಹಾಸ ಮುಂದುವರಿಯುವ ಮುನ್ಸೂಚನೆ ನೀಡುವ ಮೂಲಕ, ಪಶ್ಚಿಮಘಟ್ಟದ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220049_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕಳ್ಳಭಟ್ಟಿ ದುರಂತ:  </font><font style=' color:#000000;'></b></font><br/><font  style='font-size:11pt; color:#000000'>ಸಾರಾಯಿ ನಿಷೇಧ ಮಾಡುವ ಮೂಲಕ ತಮ್ಮ ಸರಕಾರ ಘನಂದಾರಿ ಕೆಲಸ ಮಾಡಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವಾಗಲೇ, ಬಿಜೆಪಿ ಸರಕಾರಕ್ಕೆ ತ್ಸುನಾಮಿಯಂತೆ ಬಂದರೆಗಿದ್ದು, ಕಳ್ಳಭಟ್ಟಿ ದುರಂತ. ಬೆಂಗಳೂರಿನ ಆನೇಕಲ್, ನೆರೆಯ ಧರ್ಮಪುರಿ, ಕೃಷ್ಣಗಿರಿ ಸೇರಿದಂತೆ ಕೆಲವೆಡೆ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, ಆ ನಂತರ ನಡೆದು ಕೇವಲ ರಾಜಕೀಯ ಕೆಸರೆಚಾಟ. ಇದು ಮುಖ್ಯಮಂತ್ರಿಯ ವಿರುದ್ದ ವಿರೋಧ ಪಕ್ಷಗಳು ನಡೆಸಿದ ಸಂಚು ಎಂಬುದಾಗಿ ಯಡಿಯೂರಪ್ಪ ಅವರು ತಿಪ್ಪೆ ಸಾರಿದರು. 1981ರಲ್ಲಿ ದೇವರಜೀವನಹಳ್ಳಿಯಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 323ಮಂದಿ ಬಲಿಯಾಗಿದ್ದರು, ಆಗ ದುರಂತದ ಕುರಿತು ನ್ಯಾಯಾಂಗ ತನಿಖೆ ನಡೆಸಿದ ನ್ಯಾ.ಆರ್.ಜಿ.ದೇಸಾಯಿ, ಅವರು ಮಾರಿಮುತ್ತು ಮತ್ತು ಅಮೀರ್ ಸುಲ್ತಾನ್ ಎಂಬಿಬ್ಬರೇ ಕಾರಣ ಎಂದು ವರದಿ ಸಲ್ಲಿಸಿದ್ದರು. ಆದರೆ ಅವರಿಬ್ಬರ ವಿರುದ್ಧದ ಆರೋಪ ಸಾಬೀತಾಗಿಲ್ಲ. ಆದರೆ ಇಂತಹ ಖದೀಮರ ಅಟ್ಟಹಾಸದಿಂದ ಜನಸಾಮಾನ್ಯರ ಬದುಕು ಚಿಂದಿಯಾಗುತ್ತಿದ್ದರೂ, ಆರೋಪಿಗಳು ಮಾತ್ರ ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಮತ್ತೊಂದು ದೊಡ್ಡ ದುರಂತ ! </font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220049_2_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬೆಂಗಳೂರು ಸರಣಿ ಸ್ಫೋಟ:  </font><font style=' color:#000000;'></b></font><br/><font  style='font-size:11pt; color:#000000'>ಉದ್ಯಾನನಗರಿ ನೆಮ್ಮದಿ ಜೀವನಕ್ಕೆ ಪ್ರಸಕ್ತ ತಾಣ ಎಂದೇ ಜನರು ಭಾವಿಸಿದ್ದರು, ಆದರೆ ಯಾವತ್ತು ಐಐಎಎಸ್ಸಿ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸುವ ಮೂಲಕ ಓರ್ವ ವಿಜ್ಞಾನಿಯೂ ಬಲಿಯಾದರೋ ಆವಾಗ (ಇದಕ್ಕೂ ಮುನ್ನ ರಾಜೀವ್ ಗಾಂಧಿ ಹಂತಕರು ನಗರದ ಕೋಣನಕುಂಟೆಯಲ್ಲೇ ವಾಸ್ತವ್ಯ ಹೂಡಿದ್ದ ವಿಷಯವೇ ದೇಶವನ್ನು ಬೆಚ್ಚಿಬೀಳಿಸಿತ್ತು.) ರಾಜ್ಯದ ರಾಜಧಾನಿ ಉಗ್ರರ ಅಡಗುತಾಣವಾಗಿದೆ ಎಂಬ ಅಂಶ ಸ್ಪಷ್ಟವಾಗತೊಡಗಿತ್ತು. ಆದರೆ ಗುಪ್ತಚರ ಇಲಾಖೆಯ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದ್ದು, ಜುಲೈ 25ರಂದು ಸರಣಿ ಬಾಂಬ್‌ಗಳು ಸ್ಫೋಟಿಸುವ (ಮಡಿವಾಳದಲ್ಲಿ 1.20ಕ್ಕೆ, ನಾಯಂಡನಹಳ್ಳಿಯಲ್ಲಿ 1.25, ಆಡುಗೋಡಿ-1.40ಕ್ಕೆ, ಕೋರಮಂಗಲ ಈಗಲ್ ಸ್ಟ್ರೀಟ್‌ನಲ್ಲಿ 2.10, ಮಲ್ಯ ಆಸ್ಪತ್ರೆ ಸಮೀಪ 2.25, ಲಾಂಗ್ ಫೋರ್ಡ್ ರಸ್ತೆ 2.35ಕ್ಕೆ ಸ್ಫೋಟ ಸಂಭವಿಸಿದ್ದವು.) ಮೂಲಕ ರಾಜ್ಯವೇ ತಲ್ಲಣಿಸಿಹೋಗಿತ್ತು. ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ನಗರ ಪೊಲೀಸರು 3ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದರು. ಸ್ಫೋಟಕ್ಕೆ ಬಳಸಿದ ರಾಸಾಯನಿಕ ಗ್ರೆನೇಡ್‌ಗೆ ಸಮನಾದದ್ದು ಎಂಬ ಅಂಶ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತ್ತು. ಆದರೆ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ತನಿಖೆ ಮಾತ್ರ ಸಮಾಧಿ ಸೇರಿದ ಶವದಂತಾಗಿದೆ.....</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಚರ್ಚ್ ಮೇಲೆ ದಾಳಿ:  </font><font style=' color:#000000;'></b></font><br/><font  style='font-size:11pt; color:#000000'>ಒರಿಸ್ಸಾದಲ್ಲಿ ಸಂಘ-ಪರಿವಾರ ಕ್ರೈಸ್ತ ಸಮುದಾಯದ ಮೇಲೆ ಹೊತ್ತಿಸಿದ ದ್ವೇಷಾಗ್ನಿ, ಕರ್ನಾಟಕದಲ್ಲೂ ಪ್ರತಿಧ್ವನಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಅಲ್ಪ ಸಮಯದಲ್ಲೇ ಮುಖಭಂಗ ಅನುಭವಿಸುವಂತಾಗಿದ್ದು. ಸೆಪ್ಟೆಂಬರ್ 21ರಂದು ನಗರದ ಮರಿಯಣ್ಣನಪಾಳ್ಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಚರ್ಚ್‌‌ಗಳ ಮೇಲೆ ದಾಳಿ ನಡೆಯುವ ಮೂಲಕ, ಸರಕಾರ ಪ್ರತಿಪಕ್ಷ ಸೇರಿದಂತೆ ಸಾರ್ವಜನಿಕವಾಗಿ ತೀವ್ರ ಟೀಕೆಗೆ ಒಳಗಾಯಿತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಇದು ಪ್ರತಿಪಕ್ಷಗಳ ಷಡ್ಯಂತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಏತನ್ಮಧ್ಯೆ ಬಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರು ಖಾಸಗಿ ಟಿವಿ ಚಾನೆಲ್‌ವೊಂದರ ಮುಖಾಮುಖಿ ಕಾರ್ಯಕ್ರಮವೊಂದರಲ್ಲಿ ಈ ದಾಳಿಗೆ ಬಜರಂಗದಳವೇ ಹೊಣೆ ಎಂದು ಹೇಳುವ ಮೂಲಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಆ ನಂತರ ಒತ್ತಡ, ಆರೋಪ-ಪ್ರತ್ಯಾರೋಪದ ಗೊಂದಲದಲ್ಲಿಯೇ ಮಹೇಂದ್ರ ಕುಮಾರ್ ಬಂಧನ, ಮತ್ತೆ ರಾಜ್ಯದ ಹಲವೆಡೆ ಪ್ರಾರ್ಥನಾ ಮಂದಿರ, ಚರ್ಚ್ ಮೇಲೆ ದಾಳಿ. ಪ್ರಧಾನಿ ಕಳವಳ, ಬಿಷಪ್‌ರಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಮಂಗಳಾರತಿ. ಪ್ರಕರಣ ಸಿಬಿಐ ತನಿಖೆಗೆ ವಹಿಸಲಾಯಿತು. ಆದರೂ ಚರ್ಚ್ ಮೇಲಿನ ದಾಳಿ ಬಿಜೆಪಿ ಸರಕಾರಕ್ಕೊಂದು ಕಪ್ಪು ಚುಕ್ಕೆಯಾಯಿತು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗರಿ:  </font><font style=' color:#000000;'></b></font><br/><font  style='font-size:11pt; color:#000000'>ಸಾವಿರದ ಐನೂರು ವರ್ಷಗಳ ಇತಿಹಾಸ ಇರುವ ಕನ್ನಡಕ್ಕೆ 'ಅಭಿಜಾತ' ಸ್ಥಾನಮಾನ ನೀಡಬೇಕೆಂದು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಕೇಂದ್ರ ಸರಕಾರ ಅಕ್ಟೋಬರ್ 31ರಂದು ಅಧಿಕೃತವಾಗಿ ಘೋಷಿಸಿತ್ತು. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಎಚ್ಚೆತ್ತುಕೊಂಡ ಕನ್ನಡಿಗರು ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಸಾಹಿತಿಗಳು, ಕನ್ನಡಪರ ಸಂಘಟನೆಗಳು ಚಳವಳಿ ನಡೆಸಿದ್ದವು. ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಲೇಬೇಕು ಎಂಬ ನಿಟ್ಟಿನಲ್ಲಿ ಕನ್ನಡಿಗರ ಕೂಗು ಬಲವಾಗತೊಡಗಿತ್ತು. ಅದಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ನಂತರ, ಕೇಂದ್ರ ಸರಕಾರ ದಿಢೀರನೆ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ಗೌರವ ನೀಡಿರುವ ಬಗ್ಗೆ ಘೋಷಣೆ ಹೊರಡಿಸಿತ್ತು. ಆದರೆ ಕನ್ನಡಕ್ಕೆ ಶಾಸ್ತ್ರೀಯ ನೀಡಿರುವ ಆಯ್ಕೆ ಸಮಿತಿಯನ್ನೇ ಪ್ರಶ್ನಿಸಿ ತಮಿಳುನಾಡಿನ ಆರ್.ಗಾಂಧಿ ಎಂಬವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಮಾನದಂಡದ ಬಗ್ಗೆ ವಿವರ ನೀಡುವಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೀಗ ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನ ಕೋರ್ಟ್ ಕಟಕಟೆಯಲ್ಲಿದೆ.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220049_2_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#0000FF'></font><br/><font  style='font-size:11pt; color:#0000FF'><b>ಗಾನಗಂಧರ್ವ ಭೀಮಸೇನ ಜೋಶಿಗೆ ಭಾರತ ರತ್ನ:  </font><font style=' color:#000000;'></b></font><br/><font  style='font-size:11pt; color:#000000'>ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್ ಭೀಮಸೇನ ಜೋಶಿ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿಕ ಈ ಅತ್ಯುನ್ನತ ಪ್ರಶಸ್ತಿಯನ್ನು ಭೀನಸೇನ ಜೋಶಿ ಅವರನ್ನು ಗುರುತಿಸಿ ಭಾರತ ರತ್ನ ನೀಡಿರುವುದು ಕನ್ನಡ ಸಂಗೀತಲೋಕಕ್ಕೆ ಸಂದ ಮುಕುಟವಾಗಿದೆ. ಜೋಶಿಯವರು 1922ರಲ್ಲಿ ಫೆಬ್ರುವರಿ 4ರಂದು ಗದಗದಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲಿಯಲೆಂದು ಮನೆ ಬಿಟ್ಟು ಧಾರವಾಡದ ಕುಂದಗೋಳಕ್ಕೆ ತೆರಳಿದ ಅವರು, ಸುಪ್ರಸಿದ್ಧ ಗಾಯಕ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದೂಸ್ತಾನಿ ಸಂಗೀತ ಕಿರಾಣಾ ಘರಾಣದಲ್ಲಿ ಪರಿಣತಿ ಸಾಧಿಸಿದರು. ಇದೀಗ 86ರ ಹರೆಯಕ್ಕೆ ಕಾಲಿಟ್ಟಿರುವ ಗಾನಗಂಧರ್ವನಿಗೆ ಈಗಾಗಲೇ ಪದ್ಮವಿಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮಡಿಲು ಸೇರಿದ್ದವು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಪದ್ಮಪ್ರಿಯಾ ಪ್ರಕರಣ:  </font><font style=' color:#000000;'></b></font><br/><font  style='font-size:11pt; color:#000000'>ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ನಿಗೂಢ ಕಣ್ಣರೆ ಹಾಗೂ ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶವವಾಗಿ ಅವರು ಪತ್ತೆಯಾದ ಘಟನೆ ರಾಜ್ಯಾದ್ಯಂತ ಕುತೂಹಲ ಕೆರಳಿಸಿದ ಪ್ರಕರಣವಾಗಿತ್ತು. ಆರಂಭದಲ್ಲಿ ಪದ್ಮಪ್ರಿಯಾ ಅವರನ್ನು ಸುರಕ್ಷಿತವಾಗಿದ್ದಾರೆ ಅವರನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಹೇಳಿಕೆ ಮಧ್ಯೆಯೇ, ಪದ್ಮಪ್ರಿಯಾ ಅವರು ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೇಣಿಗೆ ಶರಣಾಗುವ ಮೂಲಕ ಗೃಹಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಪೊಲೀಸ್ ಇಲಾಖೆ ಕೂಡ ತಲೆತಗ್ಗಿಸುವಂತಾಗಿತ್ತು. ವಿರೋಧಪಕ್ಷಗಳು ಬಿಜೆಪಿ ಸರಕಾರವನ್ನು ಸಾಕಷ್ಟು ಹರಿದೆಳೆದಿದ್ದವು. ಮನೆಯ ಆಪ್ತರಾಗಿದ್ದ ಅತುಲ್ ಕುಮಾರ್ ತನ್ನ ಪತ್ನಿಯ ಅಪಹರಣ ಮತ್ತು ಸಾವಿನ ಹಿಂದಿನ ರೂವಾರಿ ಎಂದು ಶಾಸಕ ಭಟ್ ಆರೋಪಿಸಿ ದೂರು ದಾಖಲಿಸಿದ್ದರು. ಅತುಲ್ ಬಂಧನ ಬಿಡುಗಡೆಯ ಕೆಲವು ದಿನಗಳ ನಂತರ ಪದ್ಮಪ್ರಿಯಾ ಪ್ರಕರಣ ತೆರೆಯಮರೆಗೆ ಸರಿದಿತ್ತು.</font><br/><font  style='font-size:11pt; color:#000000'></font><br/></font>]]></content:encoded>
      <pubDate>Sat, 20 Dec 2008 19:38:36 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ರಾಜಕೀಯ - ಭಯೋತ್ಪಾದನೆಯ 'ವರ್ಷ'ವಾದ 2008]]></title>
      <link>https://kannada.webdunia.com/article/retrospection-08/ರಾಜಕೀಯ-ಭಯೋತ್ಪಾದನೆಯ-ವರ್ಷ-ವಾದ-2008-108122000059_1.htm</link>
      <guid>https://kannada.webdunia.com/article/retrospection-08/ರಾಜಕೀಯ-ಭಯೋತ್ಪಾದನೆಯ-ವರ್ಷ-ವಾದ-2008-108122000059_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[2008ರತ್ತ ಹಿಂತಿರುಗಿ ನೋಡಲೂ ಭಯವಾಗುತ್ತಿದೆ. ಅಷ್ಟೊಂದು ರಕ್ತ-ಸಿಕ್ತವಾಗಿತ್ತು. ಭಯೋತ್ಪಾದನೆಯೇ ಪಾರಮ್ಯ ಮೆರೆದ ಈ ವರ್ಷದಲ್ಲಿ, ಸ್ಫೋಟಗಳಿಗಿಂತಲೂ ದೇಶವನ್ನು ಬಹುವಾಗಿ ಕಾಡಿದ ಅಂಶವೇನು ಎಂದು ಕೇಳಿದರೆ, ಬರಬಹುದಾದ ಉತ್ತರ 'ಓಟು ಬ್ಯಾಂಕು ರಾಜಕಾರಣ'. ಹಾದಿ ತಪ್ಪಿದ, ಬಾಲ್ಯದಿಂದಲೇ ದುರ್ಬೋಧನೆಗೊಳಗಾದ ...]]></description>
      <content:encoded><![CDATA[<font  style='font-size:11pt; color:#0000FF'><i>ಅವಿನಾಶ್ ಬಿ. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220059_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></i>ಮೊದಲೇ ಹೇಳಿಬಿಡುತ್ತೇನೆ, 2008ರತ್ತ ಹಿಂತಿರುಗಿ ನೋಡಲೂ ಭಯವಾಗುತ್ತಿದೆ. ಅಷ್ಟೊಂದು ರಕ್ತ-ಸಿಕ್ತವಾಗಿತ್ತು. ಭಯೋತ್ಪಾದನೆಯೇ ಪಾರಮ್ಯ ಮೆರೆದ ಈ ವರ್ಷದಲ್ಲಿ, ಸ್ಫೋಟಗಳಿಗಿಂತಲೂ ದೇಶವನ್ನು ಬಹುವಾಗಿ ಕಾಡಿದ ಅಂಶವೇನು ಎಂದು ಕೇಳಿದರೆ, ಬರಬಹುದಾದ ಉತ್ತರ 'ಓಟು ಬ್ಯಾಂಕು ರಾಜಕಾರಣ'. ಹಾದಿ ತಪ್ಪಿದ, ಬಾಲ್ಯದಿಂದಲೇ ದುರ್ಬೋಧನೆಗೊಳಗಾದ ಮತಾಂಧ ಭಯೋತ್ಪಾದಕರು ಮುಗ್ಧ ಜನರನ್ನು ಮನಬಂದಂತೆ, ಪಟಾಕಿ ಸಿಡಿಸಿದಷ್ಟೇ ಸುಲಭವಾಗಿ ಬಾಂಬ್‌ಗಳನ್ನು ಇರಿಸಿ ಸಿಡಿಸುತ್ತಿದ್ದರೆ, ಓಟು ಬ್ಯಾಂಕು ರಾಜಕಾರಣಿಗಳು ತಮ್ಮ ರಕ್ತ ಸಿಕ್ತ ಕೈಯನ್ನು ತೊಳೆದುಕೊಳ್ಳಲೂ ಪುರುಸೊತ್ತಿಲ್ಲದಂತೆ ಬೆಚ್ಚಿ ಬೀಳಬೇಕಾಯಿತು, ಮತ್ತು ಜನರು ಜಾಗೃತರಾಗಿದ್ದಾರೆ. ಆದುದರಿಂದ ಮಾತಿಗಿಂತ ಕೃತಿಯೇ ಈಗಿನ ಅನಿವಾರ್ಯತೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಓಟು ಬ್ಯಾಂಕು ರಾಜಕಾರಣದ ಬೆಂಬಲ ಒಂದೆಡೆಯಾದರೆ, ಭಾರತದಲ್ಲಿ ಏನು ಮಾಡಿದರೂ ಅಲ್ಲಿನ ಬೇಹುಗಾರಿಕಾ ಇಲಾಖೆ ಮತ್ತು ರಕ್ಷಣಾ ಪಡೆಗಳ ನಡುವೆ ಇಲ್ಲದ ಸಾಮರಸ್ಯವು ತಮಗೆ ವರದಾನವಾಗುತ್ತದೆ, ಮಾನವ ಹಕ್ಕುಗಳ ಹೋರಾಟಗಾರರ ಧೋರಣೆ ನಮ್ಮ ನೆರವಿಗಿದೆ ಎಂಬುದನ್ನು ಹಲವಾರು ಪ್ರಕರಣಗಳಿಂದ ಅರಿತುಕೊಂಡಿರುವ ಭಯೋತ್ಪಾದಕರು ಎಗ್ಗಿಲ್ಲದೆ ತಮ್ಮ ಕೆಲಸ ಮಾಡುತ್ತಲೇ ಹೋದರು. ವಿದೇಶೀ ಬೇಹುಗಾರಿಕಾ ಸಂಸ್ಥೆಗಳು ಇಂಥದ್ದೊಂದು ದಾಳಿಯಾಗುತ್ತದೆ ಎಂದು ಭಾರತವನ್ನು ಎಚ್ಚರಿಸಿದರೂ, ಆ ಎಚ್ಚರಿಕೆಯ ಸೂಚನೆಯನ್ನು ಕುರ್ಚಿಯಡಿ ಇರಿಸಿದ ಅಧಿಕಾರಿಗಳು ನಿದ್ದೆಹೋದರು. ಎಚ್ಚೆತ್ತುಕೊಳ್ಳುವಾಗ ಎಲ್ಲವೂ ಆಯೋಮಯ. ದೇಶದಲ್ಲಿ ಭಾರತ-ಪಾಕ್ ಯುದ್ಧದ ವಾತಾವರಣವು ಅದಾಗಲೇ ಮೂಡಿ ಆಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಹಿಂದಿನ ಎನ್‌ಡಿಎ ಸರಕಾರ ಜಾರಿಗೊಳಿಸಿದ್ದ ಭಯೋತ್ಪಾದಕ ಚಟುವಟಿಕೆ ನಿಯಂತ್ರಣ ಕಾಯ್ದೆ (ಪೋಟಾ) ರದ್ದುಗೊಳಿಸಿದ್ದು. ಅದರ ನಂತರ ದೇಶದೆಲ್ಲೆಡೆ ಪಾಕಿಸ್ತಾನಿ ಮೂಲದ ಉಗ್ರಗಾಮಿಗಳ ಆಟಾಟೋಪ ಹೆಚ್ಚಾಗಿದ್ದು ಕಾಕತಾಳೀಯವೋ, ಅಥವಾ ಇದರ ಪರಿಣಾಮವೋ ಎಂಬುದಿನ್ನೂ ಚರ್ಚೆಯಾಗುತ್ತಿದೆ. ಯುಪಿಎ ಸರಕಾರದ ಆಳ್ವಿಕೆಯ ಕೊನೆಯ ವರ್ಷವಾಗಿರುವ 2008, ಹಿಂದೆಂದೂ ಕಂಡು ಕೇಳರಿಯದ ರಕ್ತಪಾತವನ್ನು ಕಂಡಿದ್ದಂತೂ ಸತ್ಯ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆರು ತಿಂಗಳ ಅವಧಿಯಲ್ಲಿ ದೇಶದೆಲ್ಲೆಡೆ ಸುಮಾರು 65ಕ್ಕೂ ಸ್ಫೋಟ ಪ್ರಕರಣಗಳು, ಅವುಗಳಲ್ಲಿ ಹಲವು ಸರಣಿ ಬಾಂಬ್ ಸ್ಫೋಟಗಳು, ಸಂಭವಿಸಿ ದೇಶದ ಜನರಲ್ಲಿ ಆತಂಕದ ವಾತಾವರಣ ಮೂಡಿಸಿತು. ಆದರೆ, ಇವೆಲ್ಲವುಗಳಲ್ಲಿ ಅತ್ಯಂತ ಭೀಕರವಾದುದೆಂದರೆ ನವೆಂಬರ್ ತಿಂಗಳ 26ರಂದು ವಾಣಿಜ್ಯ ರಾಜಧಾನಿ ಮುಂಬಯಿ ಮೇಲೆ ನಡೆದ ಉಗ್ರಗಾಮಿಗಳ ದಾಳಿ. ಈ ಘಟನೆಯಲ್ಲಿ ನಾಗರಿಕರ ಆಕ್ರೋಶಕ್ಕೆ ರಾಜಕಾರಣಿಗಳು ನೇರವಾಗಿ ಗುರಿಯಾದಾಗ ಅವರು ಎಚ್ಚೆತ್ತುಕೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದುವರೆಗೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಉಗ್ರವಾದವನ್ನು ಖಂಡಿಸುತ್ತೇವೆ, ಭಯೋತ್ಪಾದನೆಗೆ ಅವಕಾಶವಿಲ್ಲ, ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸುತ್ತೇವೆ ಎಂಬುದಷ್ಟೇ ರಾಜಕಾರಣಿಗಳ ಬಾಯಲ್ಲಿ ಮೊಳಗುತ್ತಿದ್ದ ಮೂಲ ಮಂತ್ರವಾಗಿದ್ದರೆ, ಮುಂಬಯಿ ದಾಳಿಯು ನಿಜಕ್ಕೂ ನಮ್ಮನ್ನಾಳುವವರು ಮಾತಿಗಿಂತ ಕೃತಿಗೆ ಹೆಚ್ಚು ಗಮನ ನೀಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು. ಪ್ರತಿ ಬಾರಿ ದಾಳಿಯಾದಾಗಲೂ ಅದೇ ರಾಗ ಹಾಡುತ್ತಿದ್ದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಲೆದಂಡವೂ ಆಯಿತು. ಮಹಾರಾಷ್ಟ್ರ ಸರಕಾರದಲ್ಲಿಯೂ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ರಾಜೀನಾಮೆ ತೆತ್ತರು. ಬಳಿಕ ಸಂಸತ್ತಿನಲ್ಲಿ ರಾಜಕಾರಣಿಗಳೆಲ್ಲರೂ ಪಕ್ಷಭೇದ ಮರೆತು, ಭಯೋತ್ಪಾದನೆ ವಿರುದ್ಧ ಹೋರಾಡುವ ಪಣ ತೊಟ್ಟರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತತ್ಪರಿಣಾಮವಾಗಿ, ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ರಚನೆಗೆ, ಮತ್ತು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಗೆ (ಯುಎಪಿಎ) ಮತ್ತಷ್ಟು ಕಠಿಣ ರೂಪ ನೀಡಲು ಸಂಸತ್ತಿನಲ್ಲಿ ಒಮ್ಮತ ದೊರೆಯಿತು. ಭಯೋತ್ಪಾದಕ ಚಟುವಟಿಕೆ ತಡೆಗೆ ಪೋಟಾದಂತಹ ಕಾನೂನಿನ ಅಗತ್ಯವಿದೆ ಎಂಬುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ತಡವಾಗಿಯಾದರೂ ಮನವರಿಕೆಯಾಗಿದ್ದು, ಮುಂಬಯಿ ದಾಳಿ ಪ್ರಕರಣದ ಪ್ರಧಾನ ಪರಿಣಾಮ. ಬಹುಶಃ ವರ್ಷವಿಡೀ ನಡೆದ ಭಯೋತ್ಪಾದಕರ ದಾಳಿಯ ಧನಾತ್ಮಕ ಪರಿಣಾಮ ಇದು ಎಂದು ವ್ಯಾಖ್ಯಾನಿಸಬಹುದಾದರೂ, ಪ್ರತಿಯೊಂದರಲ್ಲೂ ದ್ವೇಷ ರಾಜಕಾರಣದಲ್ಲಿ ತೊಡಗುತ್ತಲೇ ಇದ್ದ ರಾಜಕಾರಣಿಗಳು ತಮ್ಮ ಮಾತಿಗೆ ಎಷ್ಟರ ಮಟ್ಟಿಗೆ ಬದ್ಧರಾಗುತ್ತಾರೆ ಎಂಬುದು ಕಾದು ನೋಡಬೇಕಷ್ಟೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಕ್ಕೆ ಮೊದಲು, ಮಾಲೆಗಾಂವ್‌ನಲ್ಲಿ ಸೆಪ್ಟೆಂಬರ್ 29ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಿಂದೂ ಉಗ್ರಗಾಮಿಗಳ ಕೈವಾಡವಿದೆ ಎಂಬೊಂದು ಸುದ್ದಿ ಸ್ಫೋಟವಾಯಿತು. ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಸ್ವಘೋಷಿತ ಶಂಕರಾಚಾರ್ಯ ದಯಾನಂದ ಪಾಂಡೆ ಮತ್ತಿತರ "ಅಭಿನವ ಭಾರತ" ಹಿಂದೂ ಸಂಘಟನೆಯ 11 ಮಂದಿ ಬಂಧನಕ್ಕೀಡಾಗಿ ಅವರ ಕೈವಾಡದ ಬಗ್ಗೆ ಸಾಕ್ಷ್ಯಾಧಾರ ಸಂಗ್ರಹಣೆ ಚುರುಕು ಪಡೆದಿತ್ತು. ರಾಷ್ಟ್ರಾದ್ಯಂತ ಇದು ಸಂಚಲನ ಮೂಡಿಸಿತು. ಪ್ರಜ್ಞಾ ಸಿಂಗ್ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿರುವ ಬೈಕಿನಲ್ಲಿ ಸ್ಫೋಟ ಸಂಭವಿಸಿದೆ ಎಂಬ ವಿಚಾರ ತಿಳಿದಿದ್ದರೂ, ತನಿಖೆಯನ್ನು ಚುರುಕುಗೊಳಿಸುತ್ತಿರುವುದರ ಹಿಂದೆ, ಹಲವು ರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿದೆ ಮತ್ತು ಲೋಕಸಭಾ ಚುನಾವಣೆಯೂ ಎದುರಿಗಿದೆ ಎಂಬ ಅಂಶವೂ ಎದ್ದುಕಾಣತೊಡಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನೂರಾರು ಸಾವು-ನೋವು ಸಂಭವಿಸಿದ ಸರಣಿ ಸ್ಫೋಟ ಪ್ರಕರಣಗಳ ಬದಲಾಗಿ, ಐವರ ಸಾವಿಗೆ ಕಾರಣವಾದ ಪ್ರಕರಣವೊಂದರ ತನಿಖೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಷ್ಟೊಂದು ಧಾವಂತ ತೋರಿದ್ದೇಕೆ ಎಂಬ ಸಂಶಯವೊಂದು ಬಹುಸಂಖ್ಯಾತ ಸಮುದಾಯದಲ್ಲಿ ಸುಳಿದಾಡುತ್ತಾ, ಇದರ ಹಿಂದೆ ಕಾಣದ ಕೈಗಳ ಶಕ್ತಿ ಇದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಾಗ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ಹಿಂದೂ ಸಂಘಟನೆಗಳು ತೊಡೆ ತಟ್ಟಿ ಘರ್ಜಿಸಿದವು. ಓಟ್ ಬ್ಯಾಂಕ್ ರಾಜಕಾರಣ ಎಲ್ಲೆಡೆಯಿಂದ ತೀವ್ರ ಟೀಕೆಗೆ ಗುರಿಯಾಯಿತು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ಕಂದಕವನ್ನು ಮತ್ತಷ್ಟು ಆಳವಾಗಿಸುವ ಲಕ್ಷಣಗಳು ಕಂಡುಬಂದಾಗ... ನಡೆಯಿತು ಮುಂಬಯಿಯಲ್ಲಿ ರಕ್ತದೋಕುಳಿ...</font><font style=' color:#0000FF;'></font></p><p align=center><font  style='font-size:11pt; color:#0000FF'><b>ಬಟಾ ಬಯಲಾದ ಪಾಕಿಸ್ತಾನ </font><font style=' color:#000000;'></b></font></p><font  style='font-size:11pt; color:#000000'>ದೇಶದ ಹೆಗ್ಗುರುತಾಗಿದ್ದ ಮುಂಬಯಿ ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್, ಮತ್ತು ನಾರಿಮನ್ ಹೌಸ್‌ಗಳಲ್ಲಿ ಪಾಕಿಸ್ತಾನದಿಂದ ಬಂದ ಉಗ್ರರು ದಾಂಧಲೆ ಎಬ್ಬಿಸಿ ಸುಮಾರು 180ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡರು. ಒಬ್ಬ ಉಗ್ರಗಾಮಿ -ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ಪ್ರದೇಶದ ಅಜ್ಮಲ್ ಅಮೀರ್ ಕಸಬ್ - ಸಿಕ್ಕಿಬಿದ್ದ. ಅವನೀಗ ಭಾರತ-ಪಾಕಿಸ್ತಾನ ನಡುವಣ ಸಂಬಂಧದ ಬಲವಾದ ಕೊಂಡಿಯಾಗಿ ಮಾರ್ಪಟ್ಟಿದ್ದಾನೆ. ಅವನು ಬಾಯಿಬಿಡುತ್ತಿರುವ ವಿಷಯಗಳೆಲ್ಲವೂ ಅಂತಾರಾಷ್ಟ್ರೀಯ ಸ್ತರದಲ್ಲಿ ಪಾಕಿಸ್ತಾನದ ಮಾನವನ್ನು ಮೂರಾಬಟ್ಟೆ ಮಾಡುತ್ತಿದೆ. ದಾವೂದ್ ಇಬ್ರಾಹಿಂ ಮೊದಲಾದ ಉಗ್ರಗಾಮಿಗಳು ನಮ್ಮಲ್ಲಿಲ್ಲ, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿರುವುದು ನಮ್ಮವರಲ್ಲ, ಭಾರತದ ವಿರುದ್ಧ ಕತ್ತಿ ಮಸೆಯಲು ನಮ್ಮ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದೆಲ್ಲ ಬೊಗಳೆ ಬಿಡುತ್ತಿದ್ದ ಪಾಕಿಸ್ತಾನ ಸರಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗುತ್ತಲೇ ಬಂತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಗ್ರವಾದ ಮಟ್ಟ ಹಾಕುವ ನಿಟ್ಟಿನಲ್ಲಿ ಭಾರತದೊಂದಿಗೆ ಕೈಜೋಡಿಸಬೇಕಾಗಿದ್ದ ಅಲ್ಲಿನ ಸರಕಾರ, ಕ್ಷಣ ಕ್ಷಣಕ್ಕೂ ತನ್ನ ಹೇಳಿಕೆ ಬದಲಾಯಿಸುತ್ತಾ, ಜಾಗತಿಕವಾಗಿ ನಗೆಪಾಟಲಿಗೀಡಾಯಿತು. ಚುನಾಯಿತ ಸರಕಾರವೊಂದರ ಬದಲಾಗುತ್ತಿರುವ ಹೇಳಿಕೆಗೆ ಐಎಸ್ಐ ಮತ್ತು ಪಾಕ್ ಸೇನೆಯ ತೆರೆಮರೆಯ ಅಟ್ಟಹಾಸವೇ ಕಾರಣ ಎಂಬ ಶಂಕೆಗೆ ಪುಷ್ಟಿಯೂ ದೊರೆಯತೊಡಗಿತು. ಉಗ್ರರೆಲ್ಲರೂ ಪಾಕಿಸ್ತಾನದವರೇ ಎಂದು ದೇಶ-ವಿದೇಶದ ಬೇಹುಗಾರಿಕಾ ಸಂಸ್ಥೆಗಳು ತನಿಖೆಯ ಆಧಾರದಲ್ಲಿ ಸಾರಿ ಸಾರಿ ಹೇಳಿದರೂ, ನಮಗೆ ಸಾಕ್ಷ್ಯ ಕೊಡಿ ಅಂತಲೇ ಪಾಕಿಸ್ತಾನ ಪಟ್ಟು ಹಿಡಿಯತೊಡಗಿತು. ಅಲ್ಲಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತೊಮ್ಮೆ ಮಿಸ್ಟರ್ 10% ಎಂದು ಸಾಬೀತುಮಾಡಿಕೊಂಡರು. ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆ ಅಲ್ಲಿಗೇ ಸ್ಥಗಿತವಾಯಿತು.</font><font style=' color:#0000FF;'></font></p><p align=center><font  style='font-size:11pt; color:#0000FF'><b>ಮುಂಬಯಿ ಕಲಿಸಿದ ಪಾಠ </font><font style=' color:#000000;'></b></font></p><font  style='font-size:11pt; color:#000000'>ಮುಂಬಯಿ ದಾಳಿ ಪ್ರಕರಣ ಮುಖ್ಯವಾಗಿ ಐದು ಅಂಶಗಳ ಮೇಲೆ ಬೆಳಕು ಚೆಲ್ಲಿತು. ಒಂದನೆಯದು ಆಳುವವರು ಓಟು ಬ್ಯಾಂಕ್ ರಾಜಕಾರಣ ಬಿಟ್ಟು ಉಗ್ರವಾದದ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮನ ಮಾಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎರಡನೆಯದು, ದೇಶದ ಮುಸಲ್ಮಾನ ಬಂಧುಗಳು ಭಯೋತ್ಪಾದನೆಯಿಂದ ನಲುಗಿದವರ ಪರವಾಗಿ ನಿಂತು, ಹಿಂದೂಗಳೊಂದಿಗೆ ಏಕತೆ ಪ್ರದರ್ಶಿಸಿದರು. ಈ ಮೂಲಕ ಪ್ರತಿಯೊಂದು ಘಟನೆಯಲ್ಲಿಯೂ ಕೋಮು ಎಂಬ ಅಂಶ ಎಲ್ಲಿ ಹೆಕ್ಕಿಕೊಳ್ಳಲು ಸಿಗುತ್ತದೆ ಎಂದು ಕೆದಕಿ ನೋಡುವ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಿದರು. ಭಯೋತ್ಪಾದನೆಯನ್ನು ಇಸ್ಲಾಂ ಬೋಧಿಸುವುದಿಲ್ಲ ಎಂದು ಸಾರಿ ಸಾರಿ ಹೇಳಿದರಲ್ಲದೆ, ಹಿಂದೂಗಳ ದುಃಖದೊಂದಿಗೆ ಸಹಭಾಗಿಗಳಾದರು. ದೇಶದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿರುವುದು ಒಳಗಿನವರಲ್ಲ, ಹೊರಗಿನವರು ಎಂಬುದು ಭಾರತೀಯರೆಲ್ಲರ ಅರಿವಿಗೆ ಬರತೊಡಗಿದೆ. ಖುರಾನ್ ಯಾವತ್ತಿಗೂ ಉಗ್ರವಾದವನ್ನು ಬೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಸಲ್ಮಾನ ಧಾರ್ಮಿಕ ಮುಂದಾಳುಗಳು, ಭಯೋತ್ಪಾದನಾ ಕೃತ್ಯವನ್ನು ಖಂಡಿಸಿದ್ದಾರಲ್ಲದೆ, ಹಿಂದೂ ಸಹೋದರರ ಜತೆಗೆ ಕೈಜೋಡಿಸಿದ್ದಾರೆ, ಸಾಂತ್ವನ ಹೇಳಿದ್ದಾರೆ. ಜನ ಎಚ್ಚೆತ್ತುಕೊಂಡಿದ್ದಾರೆ. ಇದು ಕೂಡ ಶುಭ ಲಕ್ಷಣ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೂರನೇ ಪರಿಣಾಮವೆಂದರೆ ಭಾರತ-ಪಾಕಿಸ್ತಾನ ಸಂಬಂಧದ ಮೇಲೆ. ಪಾಕಿಸ್ತಾನದಲ್ಲಿ ಬಹು-ಅಧಿಕಾರ ಕೇಂದ್ರಗಳಿರುವವರೆಗೆ ಅದನ್ನು ಎಳ್ಳಷ್ಟೂ ನಂಬಬಾರದು ಎಂಬುದು ಭಾರತಕ್ಕೆ ಮನವರಿಕೆಯಾಯಿತು.ಪಾಕಿಸ್ತಾನ ಸುಳ್ಳು ಹೇಳುತ್ತಿರುವುದೆಲ್ಲ ಸಾಬೀತಾಯಿತು. ಪಾಕಿಸ್ತಾನ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಾ, <a href='http://kannada.webdunia.com/newsworld/news/current/0812/19/1081219030_1.htm' target=_blank>ತಿಪ್ಪರಲಾಗ ಪ್ರವೀಣ</a> ಎಂದೇ ಗುರುತಿಸಲ್ಪಟ್ಟಿತು. ಇದೀಗ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಪಾಕಿಸ್ತಾನಕ್ಕೆ ಅಮೆರಿಕ, ಬ್ರಿಟನ್, ಜರ್ಮನಿ, ರಷ್ಯಾ ಮತ್ತಿತರ ದೇಶಗಳಿಂದ ಒತ್ತಡವೂ ಬರತೊಡಗಿತು. ವಿಶ್ವಸಂಸ್ಥೆಯೂ ಛೀಮಾರಿ ಹಾಕಿತು. ಪಾಕಿಸ್ತಾನವು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲ್ಪಡುವಷ್ಟರ ಮಟ್ಟಿಗೆ ತಲುಪಿ ಅದರ ಮಾನ ಹರಾಜಾಯಿತು. ಭಾರತ-ಪಾಕ್ ನಡುವೆ ಮತ್ತದೇ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾಲ್ಕನೇ ವಿಚಾರವೆಂದರೆ, ನಮ್ಮ ಪೊಲೀಸ್ ಪಡೆಗಳು, ಭದ್ರತಾ ಪಡೆಗಳನ್ನು ಇನ್ನಾದರೂ ಆಧುನೀಕರಣಗೊಳಿಸಬೇಕಾದ ವಿಷಯವೂ ಮನದಟ್ಟಾಗಿದೆ. ಉಗ್ರಗಾಮಿಗಳು ಜಿಪಿಎಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನದ ನೆರವು ಪಡೆಯುತ್ತಿದ್ದರೆ, ನಮ್ಮ ಪೊಲೀಸರು ಅದೇ ಹಳೇ ಕಾಲದ ಮಣಭಾರದ ಬಂದೂಕು ಎತ್ತಿ, ಲಾಠಿ ಬೀಸುತ್ತಿರುತ್ತಾರೆ. ಅವರಿಗೂ ಆಧುನಿಕ ತಂತ್ರಜ್ಞಾನದ ಪರಿಚಯ ಮಾಡಿಸಬೇಕು, ಅವರಿಗೆ ಮತ್ತಷ್ಟು ಬಲ ತುಂಬಬೇಕು ಎಂಬ ವಿಚಾರವು ಈಗ ಚರ್ಚೆಯಾಗುತ್ತಿರುವುದು ಶುಭ ಸೂಚನೆಗಳಲ್ಲೊಂದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಐದನೇ ವಿಚಾರವಂತೂ ಮೋಸ್ಟ್ ಡೇಂಜರಸ್. ಪಾಕಿಸ್ತಾನದಿಂದ 10 ಮಂದಿ ಉಗ್ರಗಾಮಿಗಳು ಭಾರತೀಯ ಮೀನುಗಾರಿಕಾ ಬೋಟ್ 'ಕುಬೇರ'ವನ್ನು ಅಪಹರಿಸಿ ಮುಂಬಯಿಗೆ ಕಾಲಿಟ್ಟರು. ಶಸ್ತ್ರಾಸ್ತ್ರ, ಗ್ರೆನೇಡ್‌ಗಳ ಸಮೇತ ಬೋಟಿನಲ್ಲಿ ಬಂದಿದ್ದರವರು. ತಟ ರಕ್ಷಣಾ ಪಡೆಯಿತ್ತು, ನಮ್ಮ ಬೇಹುಗಾರಿಕಾ ಸಂಸ್ಥೆಗಳಿದ್ದವು, ಭಯೋತ್ಪಾದನಾ ನಿಗ್ರಹ ದಳವಿತ್ತು, ರಾಷ್ಟ್ರೀಯ ಭದ್ರತಾ ದಳವಿತ್ತು, ನೌಕಾಪಡೆಯೂ ಇತ್ತು. ಹಾಗಿದ್ದರೆ, ಇವರ್ಯಾರಿಗೂ ಗೊತ್ತಾಗದಂತೆ ಈ ಉಗ್ರಗಾಮಿಗಳು ನುಸುಳಿದ್ದು ಹೇಗೆ? ಇಲ್ಲಿ ಈ ಪಡೆಗಳ ನಡುವೆ ಸಾಮರಸ್ಯವಿಲ್ಲ ಎಂಬುದು ಒಂದೆಡೆ ಬಯಲಾದರೆ, ಸೌಲಭ್ಯಹೀನ ತಟರಕ್ಷಣಾ ಪಡೆಯ ಸಾಮರ್ಥ್ಯ ಯಾವ ಮಟ್ಟಿಗಿರುತ್ತದೆ ಎಂಬ ಹುಳುಕೂ ಹೊರಬಿತ್ತು. ಇನ್ನಾದರೂ ಅದು ಸುಧಾರಣೆಯಾಗುತ್ತದೆ ಎಂಬ ಆಶಯ ಬಡ ಪ್ರಜೆಗಳದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಂದಿನ ಪುಟದಲ್ಲ</font><font style='font-size:11pt;'>ಿ: <a href='http://kannada.webdunia.com/miscellaneous/special08/review08/0812/20/1081220059_2.htm' target=_blank>2008 - ಭಯೋತ್ಪಾದಕರು ಮೇಳೈಸಿದ ವರ್ಷ </a></font>2008 - <font  style='font-size:11pt; color:#0000FF'><b>ಭಯೋತ್ಪಾದಕರು ಮೇಳೈಸಿದ ವರ್</font><font style='font-size:11pt;'>ಷ </font><font style='font-size:11pt; color:#000000;'></b></font><br/><font  style='font-size:11pt; color:#000000'>ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಆಗಿ-ಹೋದ ಉಗ್ರಗಾಮಿ-ಭಯೋತ್ಪಾದನೆ-ಹಿಂಸಾಚಾರ ಪ್ರಕರಣಗಳನ್ನು ಪಟ್ಟಿ ಮಾಡುವುದಾದರೆ, ಕಳೆದೊಂದು ವರ್ಷದಲ್ಲಿ 800ಕ್ಕೂ ಹೆಚ್ಚು ಮಂದಿ ಭಯೋತ್ಪಾದನೆಗೆ ಬಲಿಯಾಗಿದ್ದರೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿ ಸಲವೂ, ಉಗ್ರಗಾಮಿಗಳು ತಮ್ಮ ಉದ್ದೇಶ ಈಡೇರಲು ಬಿಡುವುದಿಲ್ಲ, ಭಯೋತ್ಪಾದನೆ ಮಟ್ಟ ಹಾಕುತ್ತೇವೆ ಎಂಬ ಚರ್ವಿತ ಚರ್ವಣ ಹೇಳಿಕೆ ನೀಡುತ್ತಿದ್ದ ಗೃಹ ಮಂತ್ರಿ ಶಿವರಾಜ್ ಪಾಟೀಲ್, ಮುಂಬಯಿ ದಾಳಿ ಬಳಿಕ, ದೇಶದ ಗುಪ್ತಚರ ಇಲಾಖೆಯ ಮತ್ತು ಭದ್ರತಾ ವೈಫಲ್ಯಕ್ಕೆ 'ಬಲಿ ಪಶು'ವಾದರು.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220059_2_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಉಗ್ರವಾದಿ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಅಂಕೆಗೆ ಸಿಗದಷ್ಟು ಮೇಳೈಸುತ್ತಿದ್ದರೆ ಕೇಂದ್ರ ಸರಕಾರವು ಜನರಿಂದ ವ್ಯಾಪಕ ಟೀಕೆಗೊಳಗಾಯಿತು. ಕಟ್ಟುನಿಟ್ಟಿನ ನಿಯಂತ್ರಣ ಕ್ರಮ, ಕಾನೂನು ಇಲ್ಲದಿರುವುದೇ ಎಲ್ಲದಕ್ಕೂ ಕಾರಣ. ಭಯೋತ್ಪಾದನೆ ಮಟ್ಟ ಹಾಕುವಲ್ಲಿ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂಬುದೂ ಮತ್ತೊಂದು ಅಂಶ. ಹೀಗಾಗಿ ಜನಾಕ್ರೋಶವು ಅತಿರೇಕಕ್ಕೆ ಹೋಗುವ ಮೊದಲು ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಮತ್ತು ರಾಜಕಾರಣಿಗಳು, ಸಂಸತ್ತಿನಲ್ಲಿ ಕೊನೆಗೂ ನಿರ್ಣಯ ಕೈಗೊಂಡಿದ್ದಾರೆ. ಇದು ಶುಭ ಲಕ್ಷಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ನವೆಂಬರ್ 26, 2008: ಮುಂಬಯಿಯಲ್ಲಿ ಉಗ್ರರ ದಾಳಿ, ನವೆಂಬರ್ 26ರಂದು ಪಾಕಿಸ್ತಾನದ ಲಷ್ಕರ್-ಇ-ತೋಯ್ಬಾ ಸಂಘಟನೆಯ 10 ಉಗ್ರಗಾಮಿಗಳು ಹೋಟೆಲ್ ತಾಜ್, ಒಬೆರಾಯ್ ಟ್ರೈಡೆಂಟ್, ನಾರಿಮನ್ ಹೌಸ್‌ಗಳಿಗೆ ನುಗ್ಗಿ, ವಿದೇಶೀಯರೂ ಸೇರಿದಂತೆ 181 ಮಂದಿಯನ್ನು ಗುಂಡಿಟ್ಟು ಕೊಂದರು. ರೈಲ್ವೇ ನಿಲ್ದಾಣ, ಕೆಫೆ, ಸಿನಿಮಾ ಮಂದಿರ, ವಸತಿ ನಿಲಯದಲ್ಲಿ ಓಡಾಡಿದ ಉಗ್ರಗಾಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸುತ್ತಾ ಬಂದರು. ಹೋಟೆಲುಗಳಲ್ಲಿ ಗ್ರಾಹಕರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಹಲವರನ್ನು ಕ್ರೂರವಾಗಿ ಚಿತ್ರ ಹಿಂಸೆ ನೀಡಿ, ಗುಂಡಿಟ್ಟು ಕೊಂದರು. ಭದ್ರತಾ ಪಡೆಗಳ ಕಮಾಂಡೋ ಕಾರ್ಯಾಚರಣೆಯಲ್ಲಿ 9 ಮಂದಿ ಪಾಕಿಸ್ತಾನಿ ಉಗ್ರರು ಹತರಾಗಿದ್ದು, ಒಬ್ಬಾತ, ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ. ಭಾರತದ ವೀರ ಯೋಧರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಚಕಮಕಿ ಚತುರ ವಿಜಯ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ಮೇಜರ್ ಉಣ್ಣಿಕೃಷ್ಣನ್ ಮುಂತಾದವರು ವೀರ ಮರಣವನ್ನಪ್ಪಿದರು. ಸತತ 62 ಗಂಟೆಗಳ ಕಾಲ ನಡೆದ ನಿರಂತರ ಹೋರಾಟದ ಬಳಿಕ ಹೋಟೆಲುಗಳಲ್ಲಿ ಅವಿತಿದ್ದ ಉಗ್ರಗಾಮಿಗಳನ್ನು ತೆರವುಗೊಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಅಸ್ಸಾಂ, ಅಕ್ಟೋಬರ್ 30, 2008: 13 ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 77 ಮಂದಿ ಸಾವು ಮತ್ತು ಇನ್ನೂರಕ್ಕೂ ಹೆಚ್ಚು ಮಂದಿಗೆ ಗಾಯ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಇಂಫಾಲ, ಅಕ್ಟೋಬರ್ 21, 2008: ಮಣಿಪುರ ಕಮಾಂಡೋ ಸಂಕೀರ್ಣದದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಕ್ಕೆ 17 ಬಲಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಕಾನ್ಪುರ, ಅಕ್ಟೋಬರ್ 14, 2008: ಕರ್ನಲ್ ಗಂಜ್ ಮಾರುಕಟ್ಟೆಯಲ್ಲಿ ಬಾಡಿಗೆ ಸೈಕಲ್‌ನಲ್ಲಿ ಇರಿಸಿದ ಬಾಂಬ್ ಸ್ಫೋಟಿಸಿ 8 ಮಂದಿಗೆ ಗಾಯ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಮಾಲೆಗಾಂವ್, ಮಹಾರಾಷ್ಟ್ರ, ಸೆಪ್ಟೆಂಬರ್ 29, 2008: ಜನನಿಬಿಡ ಮಾರುಕಟ್ಟೆಯಲ್ಲಿ ಮೋಟಾರು ಬೈಕಿನಲ್ಲಿ ಇರಿಸಿದ ಬಾಂಬ್ ಸ್ಫೋಟಿಸಿ 5 ಮಂದಿ ಸಾವು.</font><br/>.<font  style='font-size:11pt; color:#000000'></font><br/><font  style='font-size:11pt; color:#000000'>* ನವದೆಹಲಿ, ಸೆಪ್ಟೆಂಬರ್ 27, 2008: ಮೆಹ್ರೌಲಿಯ ಜನನಿಬಿಡ ಮಾರುಕಟ್ಟೆಯತ್ತ ಎಸೆದ ಕಚ್ಚಾ ಬಾಂಬ್ ಸ್ಫೋಟಿಸಿ ಮೂರು ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ನವದೆಹಲಿ, ಸೆಪ್ಟೆಂಬರ್ 13, 2008: ನಗರದ ವಿವಿಧೆಡೆ ಆರು ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 26 ಜನರ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಅಹಮದಾಬಾದ್, ಜುಲೈ 26, 2008: ಎರಡು ಗಂಟೆಗಳ ಅವಧಿಯಲ್ಲಿ 20 ಕಡೆ ಬಾಂಬ್‌ಗಳು ಒಂದರ ಮೇಲೊಂದರಂತೆ ಸ್ಫೋಟಿಸಿ 57 ಜನರ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಬೆಂಗಳೂರು, ಜುಲೈ 25, 2008: ಆರು ಕಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಒಬ್ಬ ಮಹಿಳೆ ಸಾವು, ಹಲವರಿಗೆ ಗಾಯ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಜೈಪುರ, ಮೇ 13, 2008: ಸರಣಿ ಬಾಂಬ್ ಸ್ಫೋಟಗಳಲ್ಲಿ 68 ಜನರ ದುರಂತ ಮರಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೇಲಿನವು 2008ರಲ್ಲಿ ನಡೆದ ಭಯೋತ್ಪಾದನಾ ದಾಳಿಗಳು. ಸ್ವಲ್ಪ ಹಿಂದಕ್ಕೆ ನೋಟ ಹರಿಸಿದರೆ ಮತ್ತಷ್ಟು ದಾಳಿಗಳು ನಡೆದಿವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಹೈದರಾಬಾದ್, ಆಗಸ್ಟ್ 25, 2007: ಎರಡು ಕಡೆ ನಡೆದ ಸ್ಫೋಟಗಳಲ್ಲಿ 42 ಮಂದಿ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಸಂಜೋತಾ ಎಕ್ಸ್‌ಪ್ರೆಸ್, ಫೆಬ್ರವರಿ 19, 2007: ಭಾರತ-ಪಾಕಿಸ್ತಾನ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಬಾಂಬ್ ಸ್ಫೋಟಿಸಿ 66 ಮಂದಿ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಮಾಲೆಗಾಂವ್, ಮಹಾರಾಷ್ಟ್ರ, ಸೆಪ್ಟೆಂಬರ್ 8, 2006: ಎರಡು ಕಡೆ ನಡೆದ ಸ್ಫೋಟಗಳಲ್ಲಿ 40 ಮಂದಿಯ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಮುಂಬಯಿ, ಜುಲೈ 11, 2006: ಉಪನಗರೀಯ ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಏಳು ಸ್ಫೋಟಗಳು ನಡೆದು 209 ಮಂದಿಯ ದುರ್ಮರಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ವಾರಾಣಸಿ, ಮಾರ್ಚ್ 7, 2006: ಮಂದಿರ, ರೈಲು ನಿಲ್ದಾಣ ಸೇರಿದಂತೆ ಮೂರು ಕಡೆ ನಡೆದ ಸ್ಫೋಟಗಳಲ್ಲಿ 21 ಮಂದಿ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ನವದೆಹಲಿ, ಅಕ್ಟೋಬರ್ 29, 2005: ದೀಪಾವಳಿ ಮುನ್ನಾ ದಿನ ನಡೆದ ಮೂರು ಸ್ಫೋಟಗಳಿಗೆ 61 ಮುಗ್ಧ ಜನರ ಸಾವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಮುಂಬಯಿ, ಆಗಸ್ಟ್ 25, 2003: ಗೇಟ್ ವೇ ಆಫ್ ಇಂಡಿಯಾ ಸಮೀಪ ಸೇರಿದಂತೆ ಎರಡು ಕಡೆ ಸಂಭವಿಸಿದ ಸ್ಫೋಟಗಳಲ್ಲಿ 46 ಜನರ ದುರಂತ ಮೃತ್ಯು.</font><br/><font  style='font-size:11pt; color:#000000'></font><br/><font  style='font-size:11pt; color:#000000'>* ಗಾಂಧಿನಗರ, ಸೆಪ್ಟೆಂಬರ್ 24, 2002: ಅಕ್ಷರಧಾಮ ಮಂದಿರದ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ 34 ಭಕ್ತರ ಹತ್ಯೆ.</font>]]></content:encoded>
      <pubDate>Sat, 20 Dec 2008 19:14:25 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[2009ರಲ್ಲಿರೋ ರಜಾದಿನಗಳು ಯಾವುವು?]]></title>
      <link>https://kannada.webdunia.com/article/retrospection-08/2009ರಲ್ಲಿರೋ-ರಜಾದಿನಗಳು-ಯಾವುವು-108122000054_1.htm</link>
      <guid>https://kannada.webdunia.com/article/retrospection-08/2009ರಲ್ಲಿರೋ-ರಜಾದಿನಗಳು-ಯಾವುವು-108122000054_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[2009ನೇ ಸಾಲಿನ ಸಾರ್ವತ್ರಿಕ ಮತ್ತು ಸೀಮಿತ ರಜಾ ದಿನಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗಣೇಶ ಚತುರ್ಥಿ, ಆಯುಧಪೂಜೆ, ಕರ್ನಾಟಕ ರಾಜ್ಯೋತ್ಸವ- ಇವುಗಳು ಭಾನುವಾರ ಬಂದಿರುವುದರಿಂದ ಹಲವರಿಗೆ ನಿರಾಶೆ.]]></description>
      <content:encoded><![CDATA[2009<font  style='font-size:11pt; color:#000000'>ನೇ ಸಾಲಿನ ಸಾರ್ವತ್ರಿಕ ಮತ್ತು ಸೀಮಿತ ರಜಾ ದಿನಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗಣೇಶ ಚತುರ್ಥಿ, ಆಯುಧಪೂಜೆ, ಕರ್ನಾಟಕ ರಾಜ್ಯೋತ್ಸವ- ಇವುಗಳು ಭಾನುವಾರ ಬಂದಿರುವುದರಿಂದ ಹಲವರಿಗೆ ನಿರಾಶೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸಾರ್ವತ್ರಿಕ ರಜಾ ದಿನಗಳು   </font><font style=' color:#000000;'></b></font><br/><font  style='font-size:11pt; color:#000000'>ಜನವರಿ 8 - ಮೊಹರಂ ಕಡೆ ದಿನ - ಗುರುವಾರ </font><br/><font  style='font-size:11pt; color:#000000'>ಜನವರಿ 14 - ಮಕರಸಂಕ್ರಾಂತಿ - ಬುಧವಾರ </font><br/><font  style='font-size:11pt; color:#000000'>ಜನವರಿ 26 - ಗಣರಾಜ್ಯೋತ್ಸವ - ಸೋಮವಾರ </font><br/><font  style='font-size:11pt; color:#000000'>ಫೆಬ್ರವರಿ 23 - ಮಹಾ ಶಿವರಾತ್ರಿ - ಸೋಮವಾರ </font><br/><font  style='font-size:11pt; color:#000000'>ಮಾರ್ಚ್ 10 - ಈದ್ ಮಿಲಾದ್ - ಮಂಗಳವಾರ </font><br/><font  style='font-size:11pt; color:#000000'>ಮಾರ್ಚ್ 27 - ಚಾಂದ್ರಮಾನ ಯುಗಾದಿ - ಶುಕ್ರವಾರ </font><br/><font  style='font-size:11pt; color:#000000'>ಏಪ್ರಿಲ್ 7 - ಮಹಾವೀರ ಜಯಂತಿ - ಮಂಗಳವಾರ </font><br/><font  style='font-size:11pt; color:#000000'>ಏಪ್ರಿಲ್ 10 - ಗುಡ್ ಫ್ರೈಡೆ - ಶುಕ್ರವಾರ </font><br/><font  style='font-size:11pt; color:#000000'>ಏಪ್ರಿಲ್ 14 - ಅಂಬೇಡ್ಕರ್ ಜಯಂತಿ - ಮಂಗಳವಾರ </font><br/><font  style='font-size:11pt; color:#000000'>ಏಪ್ರಿಲ್ 27 - ಬಸವೇಶ್ವರ ಜಯಂತಿ - ಸೋಮವಾರ </font><br/><font  style='font-size:11pt; color:#000000'>ಮೇ 1 - ಕಾರ್ಮಿಕರ ದಿನಾಚರಣೆ - ಶುಕ್ರವಾರ </font><br/><font  style='font-size:11pt; color:#000000'>ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ - ಶನಿವಾರ </font><br/><font  style='font-size:11pt; color:#000000'>ಸೆಪ್ಟೆಂಬರ್ 18 - ಮಹಾಲಯ ಅಮಾವಾಸ್ಯೆ - ಶುಕ್ರವಾರ </font><br/><font  style='font-size:11pt; color:#000000'>ಸೆಪ್ಟೆಂಬರ್ 21 - ರಂಜಾನ್ - ಸೋಮವಾರ </font><br/><font  style='font-size:11pt; color:#000000'>ಸೆಪ್ಟೆಂಬರ್ 28 - ವಿಜಯದಶಮಿ - ಸೋಮವಾರ </font><br/><font  style='font-size:11pt; color:#000000'>ಅಕ್ಟೋಬರ್ 2 - ಗಾಂಧಿ ಜಯಂತಿ - ಶುಕ್ರವಾರ </font><br/><font  style='font-size:11pt; color:#000000'>ಅಕ್ಟೋಬರ್ 17 - ನರಕ ಚತುರ್ದಶಿ - ಶನಿವಾರ </font><br/><font  style='font-size:11pt; color:#000000'>ಅಕ್ಟೋಬರ್ 19 - ಬಲಿಪಾಡ್ಯಮಿ - ಸೋಮವಾರ </font><br/><font  style='font-size:11pt; color:#000000'>ನವೆಂಬರ್ 5 - ಕನಕದಾಸ ಜಯಂತಿ - ಗುರುವಾರ </font><br/><font  style='font-size:11pt; color:#000000'>ಡಿಸೆಂಬರ್ 09 - ಬಕ್ರಿದ್ - ಮಂಗಳವಾರ</font><br/><font  style='font-size:11pt; color:#000000'>ಡಿಸೆಂಬರ್ 25 - ಕ್ರಿಸ್ಮಸ್ - ಶುಕ್ರವಾರ </font><br/><font  style='font-size:11pt; color:#000000'>ಡಿಸೆಂಬರ್ 28 - ಮೊಹರಂ ಕಡೆ ದಿನ - ಸೋಮವಾರ</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸೀಮಿತ ರಜಾ ದಿನಗಳು   </font><font style=' color:#000000;'></b></font><br/><font  style='font-size:11pt; color:#000000'>ಜನವರಿ 1 - ನೂತನ ವರ್ಷಾರಂಭ - ಗುರುವಾರ </font><br/><font  style='font-size:11pt; color:#000000'>ಫೆಬ್ರವರಿ 4 - ಮಧ್ವ ನವಮಿ - ಬುಧವಾರ </font><br/><font  style='font-size:11pt; color:#000000'>ಏಪ್ರಿಲ್ 3- ಶ್ರೀರಾಮನವಮಿ - ಶುಕ್ರವಾರ </font><br/><font  style='font-size:11pt; color:#000000'>ಏಪ್ರಿಲ್ 29 - ಶಂಕರಾಚಾರ್ಯ/ರಾಮಾನುಜ ಜಯಂತಿ - ಬುಧವಾರ </font><br/><font  style='font-size:11pt; color:#000000'>ಜುಲೈ 31 - ವರ ಮಹಾಲಕ್ಷ್ಮಿವ್ರತ - ಶುಕ್ರವಾರ </font><br/><font  style='font-size:11pt; color:#000000'>ಆಗಸ್ಟ್ 5- ಉಪಕರ್ಮ - ಬುಧವಾರ </font><br/><font  style='font-size:11pt; color:#000000'>ಆಗಸ್ಟ್ 7 - ಷಬ್ - ಎ-ಬರಾತ್ - ಶುಕ್ರವಾರ </font><br/><font  style='font-size:11pt; color:#000000'>ಆಗಸ್ಟ್ 13 - ಶ್ರೀಕೃಷ್ಣ ಜನ್ಮಾಷ್ಟಮಿ - ಗುರುವಾರ </font><br/><font  style='font-size:11pt; color:#000000'>ಸೆಪ್ಟೆಂಬರ್ 2 - ತಿರು ಓಣಂ - ಬುಧವಾರ </font><br/><font  style='font-size:11pt; color:#000000'>ಸೆಪ್ಟೆಂಬರ್ 3 - ಅನಂತ ಪದ್ಮನಾಭ ವ್ರತ - ಗುರುವಾರ </font><br/><font  style='font-size:11pt; color:#000000'>ಸೆಪ್ಟೆಂಬರ್ 17 - ಷಬ್ - ಎ-ಖಾದರ್ - ಗುರುವಾರ </font><br/><font  style='font-size:11pt; color:#000000'>ನವೆಂಬರ್ 2- ಗುರುನಾನಕ್ ಜಯಂತಿ - ಸೋಮವಾರ </font><br/><font  style='font-size:11pt; color:#000000'>ಡಿಸೆಂಬರ್ 3 - ಹುತ್ತರಿ ಹಬ್ಬ - ಗುರುವಾರ </font><br/><font  style='font-size:11pt; color:#000000'>ಡಿಸೆಂಬರ್ 24 - ಕ್ರಿಸ್ಮಸ್ ಈವ್ - ಗುರುವಾರ</font>]]></content:encoded>
      <pubDate>Sat, 20 Dec 2008 18:43:38 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಹುಬ್ಬೇರಿಸಿದ ಒಬಾಮ, ಪ್ರಚಂಡ ಆಯ್ಕೆ- ಬಿಕ್ಕಟ್ಟಿನ ತಾಕಲಾಟ....]]></title>
      <link>https://kannada.webdunia.com/article/retrospection-08/ಹುಬ್ಬೇರಿಸಿದ-ಒಬಾಮ-ಪ್ರಚಂಡ-ಆಯ್ಕೆ-ಬಿಕ್ಕಟ್ಟಿನ-ತಾಕಲಾಟ-108122000048_1.htm</link>
      <guid>https://kannada.webdunia.com/article/retrospection-08/ಹುಬ್ಬೇರಿಸಿದ-ಒಬಾಮ-ಪ್ರಚಂಡ-ಆಯ್ಕೆ-ಬಿಕ್ಕಟ್ಟಿನ-ತಾಕಲಾಟ-108122000048_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[ಪ್ರಸಕ್ತ 2008ರ ಸಾಲಿನಲ್ಲಿ ಅಂತಾರಾಷ್ಟ್ರೀಯವಾಗಿ ಗಮನಸೆಳೆದ ಪ್ರಮುಖ ಅಂಶಗಳೆಂದರೆ ಮಿಲಿಟರಿ ಆಡಳಿತ, ಮುಶರ್ರಫ್ ಅಧಿಕಾರದಿಂದ ನಲುಗಿ ಹೋಗಿದ್ದ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮೂಲಕ ದಿವಂಗತ ಬೇನಜೀರ್ ಭುಟ್ಟೋ ಅವರ ಪಿಪಿಪಿ ಹಾಗೂ ಮಾಜಿ ಪ್ರಧಾನಿ ನವಾಜ್ ...]]></description>
      <content:encoded><![CDATA[<font  style='font-size:11pt; color:#0000FF'><b>ನಾಗೇಂದ್ರ ತ್ರಾಸಿ  </font><font style=' color:#000000;'></b></font><br/><font  style='font-size:11pt; color:#000000'>ಪ್ರಸಕ್ತ 2008ರ ಸಾಲಿನಲ್ಲಿ ಅಂತಾರಾಷ್ಟ್ರೀಯವಾಗಿ ಗಮನಸೆಳೆದ ಪ್ರಮುಖ ಅಂಶಗಳೆಂದರೆ ಮಿಲಿಟರಿ ಆಡಳಿತ, ಮುಶರ್ರಫ್ ಅಧಿಕಾರದಿಂದ ನಲುಗಿ ಹೋಗಿದ್ದ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮೂಲಕ ದಿವಂಗತ ಬೇನಜೀರ್ ಭುಟ್ಟೋ ಅವರ ಪಿಪಿಪಿ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್‌‌(ಎನ್) ಬಹುಪಾಲು ಜಯಸಾಧಿಸುವ ಮೂಲಕ ಮತದಾರನಿಂದ ಅತಂತ್ರ ತೀರ್ಪು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220048_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>ND</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಕೊನೆಗೂ ಹಲವಾರು ಬಿಕ್ಕಟ್ಟುಗಳ ನಂತರ ಪಿಪಿಪಿ-ಪಿಎಂಎಲ್‌ಎನ್ ಕೈ ಜೋಡಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದು. ತದನಂತರ ಅಸಿಫ್ ಅಲಿ ಜರ್ದಾರಿ ಅಧ್ಯಕ್ಷರಾಗಿಯೂ, ಯೂಸೂಫ್ ರಾಜಾ ಗಿಲಾನಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು. ಆದರೂ ಮುಷರ್ರಫ್ ಆಡಳಿತಾವಧಿಯಲ್ಲಿ ವಜಾಗೊಂಡ ಪಾಕ್ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮರು ನೇಮಕಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಮೈತ್ರಿ ಪಕ್ಷಗಳ ನಡುವೆ ಅಸಮಾಧಾನ ಭುಗಿಲೇಳುವ ಮೂಲಕ ಪಿಎಂಎಲ್‌ಎನ್‌ನ ಸಂಸದರು ಬೆಂಬಲ ಹಿಂತೆಗೆದುಕೊಂಡ ಘಟನೆ ನಡೆಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೊಂದು ಪ್ರಮುಖ ಘಟನೆ ಯಾವುದೆಂದರೆ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಗೆ ಭಾಜನವಾಗಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಕಪ್ಪು ಜನಾಂಗದ ವ್ಯಕ್ತಿಯೊಬ್ಬ ಶ್ವೇತಭವನವನ್ನು ಪ್ರವೇಶಿಸುವಂತಾಗಿದ್ದು, ಅಮೆರಿಕದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಪ್ರಮುಖ ಅಂಶವಾಯಿತು. ರಿಪಬ್ಲಿಕ್ ಪಕ್ಷದ ಮೆಕೈನ್ ಅವರನ್ನು ಸೋಲಿಸುವ ಮೂಲಕ ಡೆಮೋಕ್ರಟ್ ಪಕ್ಷದ ಬರಾಕ್ ಹುಸೇನ್ ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ವಿಶ್ವದಾದ್ಯಂತ ಅಭಿನಂದನೆಗೆ ಭಾಜನರಾದರು.</font><font style='font-size:12pt;'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0812/20/images/img1081220048_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಮೂರನೇ ಘಟನೆ ಎರಡು ಶತಮಾನಕ್ಕಿಂತಲೂ ಹೆಚ್ಚು ಅರಸೊತ್ತಿಗೆ ಆಡಳಿತಕ್ಕೆ ಒಳಗಾಗಿದ್ದ ನೇಪಾಳದಲ್ಲಿ, ಪ್ರಜಾಸತ್ತಾತ್ಮಕವಾಗಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯುವ ಮೂಲಕ ನೇಪಾಳ ಮಾವೋವಾದಿ ಪಕ್ಷದ ಜಯಭೇರಿ. ಆ ನಿಟ್ಟಿನಲ್ಲಿ ದಶಕಗಳಿಂದ ರಾಜಾಡಳಿತದ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಾ ಬಂದಿದ್ದ ಮಾವೋವಾದಿಗಳಿಗೆ ಜಯ ದೊರೆಯುವಂತಾಯಿತು. ಬಳಿಕ ಮಾವೋವಾದಿ ನಾಯಕ ಪ್ರಚಂಡ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೂ ಮಾವೋವಾದಿಗಳಿಗೆ ಸಂಪೂರ್ಣ ಬಹುಮತ ದೊರೆಯದಿದ್ದ ಪರಿಣಾಮ ನೇಪಾಳಿ ಕಾಂಗ್ರೆಸ್ ಸಾಕಷ್ಟು ಹಾವು-ಏಣಿ ಆಟ ಆಡಿಸುವ ಮೂಲಕ ಕೊನೆಗೂ ಸರಕಾರ ರಚಿಸಿತ್ತು. ಮಾಜಿ ಪ್ರಧಾನಿ ಸೂರ್ಯ ಬಹದ್ದೂರ್ ಥಾಪಾ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಯಿತು.<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220048_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಮೆರಿಕಕ್ಕೆ ಸಿಂಹ ಸ್ವಪ್ನವಾಗಿದ್ದ ಪುಟ್ಟ ರಾಷ್ಟ್ರ ಕ್ಯೂಬಾವನ್ನು 50ವರ್ಷಗಳ ಕಾಲ ಆಳಿದ್ದ ಸರ್ವಾಧಿಕಾರಿ  ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರು ತಮ್ಮ ಪದವಿಗೆ ರಾಜೀನಾಮೆ ನೀಡುವ ಮೂಲಕ, ಸಹೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರ ಹಸ್ತಾಂತರಿಸಿದ್ದರು. ಅದೇ ತೆರನಾಗಿ ರಷ್ಯಾದ ಅಧ್ಯಕ್ಷರಾಗಿ ಡಿಮಿಟ್ರಿ ಮೆಡ್ವೆಡೇವ್ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವೆಲ್ಲ ಘಟನೆಗಳ ನಡುವೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಚಂಡಮಾರುತಕ್ಕೆ ಲಕ್ಷಾಂತರ ಜನರು ಬಲಿಯಾಗಬೇಕಾಯಿತು.</font>]]></content:encoded>
      <pubDate>Sat, 20 Dec 2008 18:16:00 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಚುನಾವಣೆಗಳಲ್ಲಿ ಬಿದ್ದು ಬಿದ್ದು ಎದ್ದ ಕಾಂಗ್ರೆಸ್]]></title>
      <link>https://kannada.webdunia.com/article/retrospection-08/ಚುನಾವಣೆಗಳಲ್ಲಿ-ಬಿದ್ದು-ಬಿದ್ದು-ಎದ್ದ-ಕಾಂಗ್ರೆಸ್-108122000047_1.htm</link>
      <guid>https://kannada.webdunia.com/article/retrospection-08/ಚುನಾವಣೆಗಳಲ್ಲಿ-ಬಿದ್ದು-ಬಿದ್ದು-ಎದ್ದ-ಕಾಂಗ್ರೆಸ್-108122000047_1.htm</guid>
      <media:thumbnail url="https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg"/>
      <image>https://nonprod-media.webdunia.com/public_html/_media/kn/img/article/2020-06/16/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1592277463-3911.jpg</image>
      <description><![CDATA[2004ರಲ್ಲಿ ಮಿತ್ರರು ಮತ್ತು ಚಿತ್ರ ವಿಚಿತ್ರ ಧೋರಣೆಯ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್ ಪಕ್ಷವು 2008ರಲ್ಲಿ ವಿವಿಧ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಆಘಾತಕಾರಿ ಸೋಲನುಭವಿಸಿದ್ದರೂ, ವರ್ಷಾಂತ್ಯದಲ್ಲಿ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಂಡಿದ್ದಲ್ಲದೆ, ...]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0812/20/images/img1081220047_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> 2004<font  style='font-size:11pt; color:#000000'>ರಲ್ಲಿ ಮಿತ್ರರು ಮತ್ತು ಚಿತ್ರ ವಿಚಿತ್ರ ಧೋರಣೆಯ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್ ಪಕ್ಷವು 2008ರಲ್ಲಿ ವಿವಿಧ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಆಘಾತಕಾರಿ ಸೋಲನುಭವಿಸಿದ್ದರೂ, ವರ್ಷಾಂತ್ಯದಲ್ಲಿ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಂಡಿದ್ದಲ್ಲದೆ, ರಾಜಸ್ಥಾನ, ಮಿಜೋರಾಂನಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ನಿಟ್ಟುಸಿರು ಬಿಟ್ಟಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದು ಮುಂಬರುವ ಲೋಕಸಭಾ ಚುನಾವಣೆಗಳನ್ನು ಎದುರಿಸಲು ಅದಕ್ಕೆ ಆತ್ಮವಿಶ್ವಾಸದ ಆಮ್ಲಜನಕವನ್ನೂ ನೀಡಿದೆ. 26/11 ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ತನ್ನ ಭಯೋತ್ಪಾದನಾ-ವಿರೋಧಿ ನೀತಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಆತಂಕದಲ್ಲಿದ್ದ ಕಾಂಗ್ರೆಸ್, ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಮುಳುಗುತ್ತಿರುವ ಹಡಗು ಎಂದೇ ವಿರೋಧಿಗಳಿಂದ ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಗೆಲುವು ನೈತಿಕ ಬಲವನ್ನು ತುಂಬಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಹಾಗೂ ಅದಕ್ಕೂ ಮುನ್ನ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಕಂಡಿತ್ತು. ಗುಜರಾತಿನಲ್ಲಿ ನರೇಂದ್ರ ಮೋದಿ ವಿರುದ್ಧ ಸ್ವತಃ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯೇ ಅಬ್ಬರದ ಪ್ರಚಾರಕ್ಕೆ, ನೇರ ವಾಗ್ದಾಳಿಗೆ ಇಳಿದಿದ್ದರೂ ಮುಖ ಉಳಿಸಿಕೊಳ್ಳಲಾಗದಿದ್ದುದು ಅದರ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿತ್ತು. ಅಂತೆಯೇ ಕರ್ನಾಟಕದಲ್ಲಿ ಅದು ಮುಂದೊತ್ತಿ ಬರುತ್ತಿದ್ದ ಬಿಜೆಪಿಯ ಬಿಸಿ ತಾಳಲಾರದೆ, ಒಡೆದ ಮನೆಯಾಯಿತು. 2004ರ ಮಹಾಚುನಾವಣೆಗಳ ಬಳಿಕ ಅದರ ಗೆಲುವು ಹರ್ಯಾಣ ಮತ್ತು ಅಸ್ಸಾಂಗಳಿಗಷ್ಟೇ ಸೀಮಿತವಾಗಿತ್ತು. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬೆಂಬಲದೊಂದಿಗೆ ಸರಕಾರ ರಚಿಸಬೇಕಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಮಧ್ಯೆ ಅದು, ಉತ್ತರಾಖಂಡ, ಪಂಜಾಬ್ ಮತ್ತು ಕೇರಳಗಳಲ್ಲಿ ಅಧಿಕಾರ ಕಳೆದುಕೊಂಡಿತು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದೀಗ ವರ್ಷಾಂತ್ಯ ದೊರೆತ ಗೆಲುವು ಕುಸಿಯುತ್ತಿದ್ದ ಆತ್ಮವಿಶ್ವಾಸವನ್ನು ಹೆಚ್ಚಿಸಿದಂತಾಗಿದೆ.</font><br/><font  style='font-size:11pt; color:#000000'></font><br/></font>]]></content:encoded>
      <pubDate>Sat, 20 Dec 2008 18:10:15 +0530</pubDate>
      <updatedDate>Tue, 15 Apr 2014 06:47:41 +0530</updatedDate>
      <category><![CDATA[Retrospection 08]]></category>
      <authorname>ಇಳಯರಾಜ</authorname>
    </item>
  </channel>
</rss>
