<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಉತ್ಸವಗಳು]]></title>
    <link>https://kannada.webdunia.com/festivals</link>
    <description><![CDATA[religious Articles in kannada, kannada Astrology, Dharmika Yatre, Religious Destinations, Religious Calendar, Indian Festivals, Believe it or not]]></description>
    <copyright>Copyright webdunia.com</copyright>
    <lastBuildDate>Sun, 19 Jul 2026 20:58:50 +0530</lastBuildDate>
    <language>en-us</language>
    <image>
      <title>ಉತ್ಸವಗಳು</title>
      <url>https://nonprod-media.webdunia.com/public_html/_media/kn/img/category/article/religion-festivals.png</url>
      <link>https://kannada.webdunia.com/festivals</link>
    </image>
    <atom:link href="https://kannada.webdunia.com/rss/festivals-10906.rss" rel="self" type="application/rss+xml"/>
    <item>
      <title><![CDATA[ಬುಧವಾರ ದೇಶಾದ್ಯಂತ ಗಣೇಶೋತ್ಸವ ಸಂಭ್ರಮ]]></title>
      <link>https://kannada.webdunia.com/article/festivals/ಬುಧವಾರ-ದೇಶಾದ್ಯಂತ-ಗಣೇಶೋತ್ಸವ-ಸಂಭ್ರಮ-112091800025_1.htm</link>
      <guid>https://kannada.webdunia.com/article/festivals/ಬುಧವಾರ-ದೇಶಾದ್ಯಂತ-ಗಣೇಶೋತ್ಸವ-ಸಂಭ್ರಮ-112091800025_1.htm</guid>
      <media:thumbnail url="http:"/>
      <image>http:</image>
      <description><![CDATA[ಗಣಪತಿ ಹಿಂದೂ ಧರ್ಮದ ಎಲ್ಲಾ ಅನುಯಾಯಿಗಳಲ್ಲೂ ಬಹಳ ಜನಪ್ರಿಯವಾದ ದೇವತೆ. ಬದುಕಿನ ವಿಘ್ನಗಳನ್ನು ನಿವಾರಿಸುವ ದೇವನಾಗಿರುವುದರಿಂದ ಎಲ್ಲಾ ವರ್ಗದ ಜನಕ್ಕೂ ಬೇಕಾದವನು. ಜನ ಗಣಪತಿಯನ್ನು ಪೂಜಿಸುವುದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ವರಪ್ರದಾತ ಎಂದು ಹಾಗೂ ತಮ್ಮ ಎಲ್ಲಾ ವ್ಯವಹಾರಗಳಲ್ಲೂ ಜಯ ಅಥವಾ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1209/18/images/img1120918025_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಗಣಪತಿ ಹಿಂದೂ ಧರ್ಮದ ಎಲ್ಲಾ ಅನುಯಾಯಿಗಳಲ್ಲೂ ಬಹಳ ಜನಪ್ರಿಯವಾದ ದೇವತೆ. ಬದುಕಿನ ವಿಘ್ನಗಳನ್ನು ನಿವಾರಿಸುವ ದೇವನಾಗಿರುವುದರಿಂದ ಎಲ್ಲಾ ವರ್ಗದ ಜನಕ್ಕೂ ಬೇಕಾದವನು. ಜನ ಗಣಪತಿಯನ್ನು ಪೂಜಿಸುವುದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ವರಪ್ರದಾತ ಎಂದು ಹಾಗೂ ತಮ್ಮ ಎಲ್ಲಾ ವ್ಯವಹಾರಗಳಲ್ಲೂ ಜಯ ಅಥವಾ ಸಿದ್ದಿಯನ್ನು ಕರುಣಿಸುವ ಸಿದ್ದಿ ಎಂದು ಯಾವ ಕಾರ್ಯದ ಆರಂಭ ಮಾಡುವಾಗಲೂ, ಗಣಪತಿಗೆ ಅಗ್ರಪೂಜೆ, ಸಮಗ್ರಜ್ಞಾನವನ್ನೂ ವಿವೇಕವನ್ನೂ, ಸಾಹಿತ್ಯಲಲಿತ ಕಲೆಗಳಲ್ಲಿ ಕುಶಲತೆಯನ್ನು ನೀಡುವ ದೇವನೂ ಕೂಡ ಗಣಪತಿ. ಆದುದರಿಂದಲೇ ಗಣಪತಿ ಚತುರ್ಥಿ ವ್ರತ ಅಥವಾ ಗಣೇಶೋತ್ಸವಕ್ಕೆ ಅತ್ಯಂತ ಮುಖ್ಯ ಸ್ಥಾನವಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರತೀ ವರ್ಷ ಬಾದ್ರಪದಮಾಸದ ಶುಕ್ಲ ಚತುರ್ಥಿಯಿಂದ, ಚತುರ್ದಶಿವರೆಗೆ (ಅನಂತ ಪದ್ಮನಾಭ ವ್ರತ) ದೇಶಾದಾದ್ಯಂತ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಿಜಬಾದ್ರಪದ ಶುಕ್ಲ ಚತುರ್ಥಿ, ಸೆಪ್ಟೆಂಬರ್ 19 ರಂದು ಬುದವಾರ ಬಂದಿದ್ದು, ಗಣಪತಿ ವ್ರತ ಪ್ರಾರಂಭವಾಗಲಿದ್ದು, ಚತುರ್ದಶಿ (ಅನಂತ ಪದ್ಮನಾಭ ವ್ರತ) ಸೆಪ್ಟೆಂಬರ್ 29ನೇ ಶನಿವಾರ ದವರೆಗೆ ಒಟ್ಟು 11 ದಿವಸಗಳು ವ್ರತನಡೆಯುತ್ತದೆ. ಮುಖ್ಯವಾಗಿ ಈ ಪವಿತ್ರ 11 ದಿನವಸಗಳವರೆಗೆ ಗಣಪತಿಯ ಪೂಜಾವಿಧಿಗಳನ್ನು ಮಾಡಿದಾಗ, ವಿಘ್ನಗಳನ್ನು ನಿವಾರಿಸಿ, ಸುಖ-ಸಂತೋಷವನ್ನು ನೀಡುತ್ತಾನೆ. ಈ 11 ದಿವಸಗಳಲ್ಲೂ ಪೂಜಾವಿಧಿಗಳನ್ನು ಮಾಡಲು ಕೆಲಸದ ಒತ್ತಡಗಳಿಂದ, ಸಮಯದ ಅಭಾವದಿಂದ, ತಾಳ್ಮೆ ಇಲ್ಲದಿರುವುದರಿಂದ ಹಾಗೂ ಇತರೆ ಕಾರಣಗಳಿಂದ ಸಾಧ್ಯವಾಗುವುದಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದ್ದರಿಂದ ಕನಿಷ್ಟ 2 ದಿವಸಗಳಾದರೂ ಈ ವಿಶೇಷ ದಿವಸಗಳಲ್ಲಿ ಪೂಜಾ ವಿಧಿಗಳನ್ನು ಮಾಡಿದರೆ. ಸಾಕಾಗುವುದು. ಜ್ಯೋತಿಷ್ಯದ ಪ್ರಕಾರ. ಕುಂಡಲಿಯಲ್ಲಿ ಲಗ್ನದಿಂದ ಅಷ್ಟಮಸ್ಥಾನ ವಿಘ್ನವನ್ನುಂಟುಮಾಡುವ ರಾಶಿ, ಚತುರ್ಥಸ್ಥಾನ ಸುಖ. ಸಂತೋಷ ಸ್ಥಾನವಾಗಿದೆ. ವಿಘ್ನವನ್ನು ಹೋಗಲಾಡಿಸಿ, ಸುಖ ಸಂತೋಷವನ್ನು ವೃದ್ದಿಮಾಡಲು, ಆಯಾಯವ್ಯಕ್ತಿಗಳ ಕುಂಡಲಿಯಲ್ಲಿ ಲಗ್ನದಿಂದ ಅಷ್ಟಮ ಸ್ಥಾನಾಧಿಪತಿಯ ವಾರದ ದಿವಸ ಸಕಲವಿಘ್ನಗಳನ್ನು ನಿವಾರಿಸಲು ಮತ್ತು ಚತುರ್ಥ ಸ್ಥಾನದಪತಿಯ ವಾರದ ದಿವಸ, ಹೆಚ್ಚಿನ ಸುಖ, ಸಂತೋಷವನ್ನು ನೀಡಲು ಈ 2 ದಿವಸಗಳಾದರೂ ಗಣಪತಿಯ ಪೂಜಾವಿಧಿಗಳನ್ನು ಮಾಡಲೇಬೇಕಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉದಾಹರಣೆಗೆ ಮೇಷಲಗ್ನದವರಿಗೆ, ಸುಖ ಸಂತೋಷವನ್ನು ನೀಡುವ ಚತುರ್ಥರಾಶಿ ಕಟಕರಾಶಿಯಾಗಿದ್ದು ಅಧಿಪತಿ ಚಂದ್ರನಾಗಿರುವುದರಿಂದ ಚಂದ್ರನ ವಾರ ಸೋಮವಾರ ಮತ್ತು ಅಷ್ಟಮಸ್ಥಾನ ವಿಘ್ನವನ್ನುಂಟುಮಾಡುವ ರಾಶಿ ವೃಶ್ಚಿಕ ರಾಶಿಯಾಗಿದ್ದು, ಅಧಿಪತಿ ಕುಜನಾಗಿರುವುದರಿಂದ ಕುಜನವಾರ ಮಂಗಳವಾರವಾಗಿರುವುದರಿಂದ ಈ ಮೇಷಲಗ್ನದವರು ಸೋಮವಾರ ದಿವಸ, ಸುಖ ಸಂತೋಷ ವೃದ್ದಿಗಾಗಿ ಮತ್ತು ಮಂಗಳವಾರದ ದಿವಸ ವಿಘ್ನಗಳನ್ನು ನಿವಾರಿಸಲು ಈ ಎರಡು ದಿವಸಗಳಲ್ಲಿ ಗಣಪತಿಯ ಪೂಜಾವಿಧಿಗಳನ್ನು ಮಾಡಬೇಕು. ಕ್ರಮವಾಗಿ 12 ಲಗ್ನದವರ ಚತುರ್ಥಸ್ಥಾನ ಮತ್ತು ಅಷ್ಟಮ ಸ್ಥಾನದ ಅಧಿಪತಿಗಳ ವಾರಗಳನ್ನು ಸುಲಭವಾಗಿ ತಿಳಿದು ಈ 2 ದಿವಸಗಳಂದು ಗಣಪತಿ ಪೂಜಾವಿಧಿಗಳನ್ನು ನೆರವೇರಿಸಲು ಈ ಕೆಳಗೆ ಕೊಡಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಮೇಷ ಲಗ್ನ:	ಸೋಮವಾರ - ಮಂಗಳವಾರ </b></font><br/><font  style='font-size:11pt; color:#000000'><b>ವೃಷಭ ಲಗ್ನ:	ಭಾನುವಾರ - ಗುರುವಾರ</b></font><br/><font  style='font-size:11pt; color:#000000'><b>ಮಿಥುನ ಲಗ್ನ:	ಬುಧವಾರ - ಶನಿವಾರ</b></font><br/><font  style='font-size:11pt; color:#000000'><b>ಕಟಕ ಲಗ್ನ:	ಶುಕ್ರವಾರ - ಶನಿವಾರ</b></font><br/><font  style='font-size:11pt; color:#000000'><b>ಸಿಂಹ ಲಗ್ನ:	ಮಂಗಳವಾರ - ಗುರುವಾರ</b></font><br/><font  style='font-size:11pt; color:#000000'><b>ಕನ್ಯಾ ಲಗ್ನ:	ಗುರುವಾರ - ಮಂಗಳವಾರ</b></font><br/><font  style='font-size:11pt; color:#000000'><b>ತುಲ ಲಗ್ನ:	ಶನಿವಾರ - ಶುಕ್ರವಾರ</b></font><br/><font  style='font-size:11pt; color:#000000'><b>ವೃಶ್ಚಿಕ ಲಗ್ನ:	ಶನಿವಾರ - ಬುಧವಾರ</b></font><br/><font  style='font-size:11pt; color:#000000'><b>ಧನ ಲಗ್ನ:	ಗುರುವಾರ - ಸೋಮವಾರ</b></font><br/><font  style='font-size:11pt; color:#000000'><b>ಮಕರ ಲಗ್ನ:	ಮಂಗಳವಾರ - ಭಾನುವಾರ</b></font><br/><font  style='font-size:11pt; color:#000000'><b>ಕುಂಭ ಲಗ್ನ:	ಶುಕ್ರವಾರ - ಬುಧವಾರ</b></font><br/><font  style='font-size:11pt; color:#000000'><b>ಮೀನ ಲಗ್ನ:	ಬುಧವಾರ - ಶುಕ್ರವಾರ</b></font><br/><font  style='font-size:11pt; color:#000000'><b></b></font><br/><font  style='font-size:11pt; color:#000000'><b>ಆರ್. ಸೀತಾರಾಮಯ್ಯ,</b></font><br/><font  style='font-size:11pt; color:#000000'><b>ಜೋತೀಷ್ಕರು,</b></font><br/><font  style='font-size:11pt; color:#000000'><b>ಮೋ: 94490 48340</b></font><br/><font  style='font-size:11pt; color:#000000'><b>ಪೋನ್: 08182-227344</b></font>]]></content:encoded>
      <pubDate>Tue, 18 Sep 2012 12:30:17 +0530</pubDate>
      <updatedDate>Tue, 15 Apr 2014 18:21:35 +0530</updatedDate>
      <category><![CDATA[festivals]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಈಶಾ ಫೌಂಡೇಶನ್ - ಮಹಾ ಶಿವರಾತ್ರಿ ಭಕ್ತರಿಗೆ ಭಾವಪರಾವಶ ರಾತ್ರಿ]]></title>
      <link>https://kannada.webdunia.com/article/festivals/ಈಶಾ-ಫೌಂಡೇಶನ್-ಮಹಾ-ಶಿವರಾತ್ರಿ-ಭಕ್ತರಿಗೆ-ಭಾವಪರಾವಶ-ರಾತ್ರಿ-112021900017_1.htm</link>
      <guid>https://kannada.webdunia.com/article/festivals/ಈಶಾ-ಫೌಂಡೇಶನ್-ಮಹಾ-ಶಿವರಾತ್ರಿ-ಭಕ್ತರಿಗೆ-ಭಾವಪರಾವಶ-ರಾತ್ರಿ-112021900017_1.htm</guid>
      <media:thumbnail url="http:"/>
      <image>http:</image>
      <description><![CDATA[ವೆಲೈನ್‌ಗಿರಿ: ಇಲ್ಲಿನ ವೆಲೈನ್‌ಗಿರಿ ಪರ್ವತದಲ್ಲಿರುವ ಈಶಾ ಯೋಗ ಕೇಂದ್ರವು ಮಹಾಶಿವರಾತ್ರಿಯ ಪ್ರಯುಕ್ತ (ಸೋಮವಾರ) ಫೆ.20 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮಕ್ಕೆ ವಿಶ್ವದ ಎಲ್ಲಾ ಕಡೆಗಳಿಂದ 8 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ. ...]]></description>
      <content:encoded><![CDATA[<!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1202/19/images/img1120219017_1_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#000000'>ಇಲ್ಲಿನ ವೆಲೈನ್‌ಗಿರಿ ಪರ್ವತದಲ್ಲಿರುವ ಈಶಾ ಯೋಗ ಕೇಂದ್ರವು ಮಹಾಶಿವರಾತ್ರಿಯ ಪ್ರಯುಕ್ತ (ಸೋಮವಾರ) ಫೆ.20 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮಕ್ಕೆ ವಿಶ್ವದ ಎಲ್ಲಾ ಕಡೆಗಳಿಂದ 8 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ. ಮಹಾಶಿವರಾತ್ರಿಯ ರಾತ್ರಿಯಾದ್ಯಂತ ಸದ್ಗುರುವಿನೊಂದಿಗೆ ಸತ್ಸಂಗ, ಶಕ್ತಿಯುತ ಧ್ಯಾನವನ್ನು ಮಾಡಲಾಗುತ್ತದೆ ಎಂದು ಈಶಾ ಫೌಂಡೇಶನ್ ಹೇಳಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಲ್ಲದೇ ಹಿಂದೂಸ್ತಾನಿ ದೃಪದ್ ಗಾಯಕ ಪದ್ಮಶ್ರೀ ವಾಸಿಫುದ್ದೀನ್ ಡಾಗರ್‌ರಿಂದ ಹಿಂದೂಸ್ತಾನಿ ಗಾಯನ, ಬಾಲಿವುಡ್‌ನಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ ಗಮನ ಸೆಳೆದಿರುವ ಕೈಲಾಶ್ ಖೇರ್ ಭಕ್ತಿಗೀತೆ ಹಾಡುವ ಮೂಲಕ ಭಕ್ತಾಧಿಗಳನ್ನು ರಂಜಿಸಲಿದ್ದಾರೆ.  ಕೈಲಾಶ್ ಖೇರ್‌ರೊಂದಿಗೆ ಕಲೋನಿಯಲ್ ಕಸಿನ್ಸ್ ಎಂದು ಹೆಸರಾಗಿರುವ ಹರಿಹರನ್ ಮತ್ತು ಲೆಸ್ಲಿ ಲೆವೀಸ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಈಶಾ ಫೌಂಡೇಶನ್ ವಿವರಿಸಿದೆ.</font><!--Image--><p class="wdp_articleLImg"><p><img src='/kn/articles/1202/19/images/img1120219017_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಮಹಾಶಿವರಾತ್ರಿ ಕಾರ್ಯಕ್ರಮವು ಸಂಜೆ 5.40ಕ್ಕೆ ಧ್ಯಾನಲಿಂಗ ಯೋಗಿಕ್ ಟೆಂಪಲ್‌ನಲ್ಲಿ ಸದ್ಗುರುಗಳ ಪಂಚಭೂತ ಆರಾಧನೆಯ ಮೂಲಕ ಆರಂಭವಾಗುತ್ತದೆ. ನಂತರ ಶಕ್ತ ಧ್ಯಾನದಿಂದ ಕಾರ್ಯಕ್ರಮ ಮುಂದುವರಿಯುತ್ತದೆ. ಶಿವನ ಆರಾಧನೆಗೆ ಆಗಮಿಸಿದ ಭಕ್ತರನ್ನು ರಂಜಿಸುವುದಕ್ಕಾಗಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಈಶಾ ಫೌಂಡೇಶನ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಹಾಶಿವರಾತ್ರಿಯು ಭಾರತದ ಪ್ರಮುಖ ಮತ್ತು ಹೆಚ್ಚು ಜನರು ಆಚರಿಸುವಂತಹ ಹಬ್ಬವಾಗಿದೆ ಎಂದು ಈಶಾ ಫೌಂಡೇಶನ್ ಹೇಳುತ್ತಾ, ಇಂದಿನ ರಾತ್ರಿಯಂದು ಪರಮಶಿವನ ಧ್ಯಾನ ಮತ್ತು ಪೂಜೆಯಲ್ಲಿ ಭಕ್ತಾಧಿಗಳು ತೊಡಗುವರೆಂದು ಹೇಳಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಶಾ ಫೌಂಡೇಶನ್ ವತಿಯಿಂದ ಭಕ್ತಾಧಿಗಳಿಗಾಗಿ ಶಕ್ತ ಧ್ಯಾನವನ್ನು ಮತ್ತು ಶಿವಭಜನೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದೆ. ಆಗಮಿಸುವ ಭಕ್ತ ಸಮೂಹಕ್ಕೆ ಉಚಿತ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಾಶಿವರಾತ್ರಿಯ ಕಾರ್ಯಕ್ರಮಗಳು ಮರುದಿನ ಮುಂಜಾನೆ 6 ಗಂಟೆಗೆ ಅಂತ್ಯಗೊಳ್ಳುತ್ತವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಚಾರ ಮಾಡಿದೆ.</font>]]></content:encoded>
      <pubDate>Sun, 19 Feb 2012 12:28:27 +0530</pubDate>
      <updatedDate>Tue, 15 Apr 2014 17:48:05 +0530</updatedDate>
      <category><![CDATA[festivals]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಮಹಾ ಶಿವರಾತ್ರಿ ಮಹಾನ್ ಯಕ್ಷ ಕಲಾವಿದರು...]]></title>
      <link>https://kannada.webdunia.com/article/festivals/ಮಹಾ-ಶಿವರಾತ್ರಿ-ಮಹಾನ್-ಯಕ್ಷ-ಕಲಾವಿದರು-112021900016_1.htm</link>
      <guid>https://kannada.webdunia.com/article/festivals/ಮಹಾ-ಶಿವರಾತ್ರಿ-ಮಹಾನ್-ಯಕ್ಷ-ಕಲಾವಿದರು-112021900016_1.htm</guid>
      <media:thumbnail url="http:"/>
      <image>http:</image>
      <description><![CDATA[ಪಂದನಲ್ಲೂರ್ ಶೈಲಿಯ ಭರತನಾಟ್ಯದ ಅನುಪಮ ನೃತ್ಯ ಕಲಾವಿದೆಯಾದ ಅಲರ್‌ಮೇಲ್ ವಲ್ಲಿ ತಮ್ಮ ವಿಶಿಷ್ಟ ನೃತ್ಯ ಶೈಲಿ ಹಾಗೂ ನಾಟ್ಯ ಸಂಯೋಜನೆಗೆ ಹೆಸರುವಾಸಿಯಾದವರು. 1991ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕಲಾವಿದೆ. 2001ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ...]]></description>
      <content:encoded><![CDATA[<font  style='font-size:11pt; color:#FF8000'><b>ಅಲರ್‌ಮೇಲ್ ವಲ್ಲಿ: </font><font style=' color:#000000;'></b>ಪಂದನಲ್ಲೂರ್ ಶೈಲಿಯ ಭರತನಾಟ್ಯದ ಅನುಪಮ ನೃತ್ಯ ಕಲಾವಿದೆಯಾದ ಅಲರ್‌ಮೇಲ್ ವಲ್ಲಿ ತಮ್ಮ ವಿಶಿಷ್ಟ ನೃತ್ಯ ಶೈಲಿ ಹಾಗೂ ನಾಟ್ಯ ಸಂಯೋಜನೆಗೆ ಹೆಸರುವಾಸಿಯಾದವರು. 1991ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕಲಾವಿದೆ. 2001ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ಇವರಿಗೆ, 2004 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನಿತ್ತು ಭಾರತ ಸರಕಾರ ಸನ್ಮಾನಿಸಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಿ.ಬಿ.ಸಿ. ಯ ಸ್ಪಿರಿಟ್ ಆಫು್ ಏಷಿಯ, ನೆದರ್ಲ್ಯಾಂಡ್ಸ್ ಪ್ರಸರಣ ಸಂಸ್ಥೆ, ಜಪಾನಿನ ರಾಷ್ಟ್ತ್ರೀಯ ದೂರದರ್ಶನ, ಮತ್ತು ಭಾರತೀಯ ಚಲನಚಿತ್ರ ವಿಭಾಗದ ಅನೇಕ ಸಾಕ್ಷ್ಯ ಚಿತ್ರಗಳ ಮೂಲಕ ದೇಶ ವಿದೇಶಗಳಲ್ಲಿ ಭರತನಾಟ್ಯವನ್ನು ಪರಿಚಯಿಸಿದ ಶ್ರೇಯಸ್ಸು ಇವರಿಗೆ ಸಲ್ಲುವುದು. ಚೆನ್ನೈನಲ್ಲಿ 'ದೀಪಶಿಖಾ' ಎಂಬ ಲಲಿತಕಲಾಸಂಸ್ಥೆಯನ್ನು ಸ್ಥಾಪಿಸಿ, ಅದರ ಭರತನಾಟ್ಯ ವಿಭಾಗದ ಕಾರ್ಯ ನಿರ್ವಹಿಸುತ್ತಿರುವರು. </font><br/><font  style='font-size:11pt; color:#FF8040'></font><br/><font  style='font-size:11pt; color:#FF8040'><b>ಚನ್ನುಲಾಲ್ ಮಿಶ್ರ: </font><font style=' color:#000000;'></b>ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಕಿರಾನ ಘರಾನದ ಪ್ರಖ್ಯಾತ ಗಾಯಕರು. ಪದ್ಮಭೂಷಣರಾದ ಚನ್ನುಲಾಲರಿಗೆ ಉತ್ತರಪ್ರದೇಶ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ನೌಷಾದ್ ಪ್ರಶಸ್ತಿಯನ್ನಿತ್ತು ಉತ್ತರಪ್ರದೇಶ ಸರಕಾರ ಗೌರವಿಸಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬನಾರಸ್ ಗಾಯಕಿ ಮತ್ತು ಪಂಜಾಬ್ ಗಾಯಕಿಯ ಶೈಲಿಗಳ ಮಿಶ್ರ ರೀತಿಯ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಖಯಾಲ್, ದಾದ್ರ, ಠುಮ್ರಿ ಮತ್ತು ಭಜನ್‌ಗಳನ್ನು ಹಾಡುವ ಇವರಿಗೆ ತಂದೆ ಪಂಡಿತ್ ಬದ್ರಿಪ್ರಸಾದ್ ಮಿಶ್ರರೇ ಮೊದಲ ಗುರು. ನಂತರ ಕಿರಾನ ಘರಾನದ ಅಬ್ದುಲ್ ಘನೀ ಖಾನ್‌ರಲ್ಲಿ ಶಿಕ್ಷಣ. ಕೇವಲ ಗಾಯನವಷ್ಟೇ ಅಲ್ಲದೆ ಸಂಗೀತ ಶಾಸ್ತ್ರದ ಆಳವಾದ ಅಧ್ಯಯನ, ಅದರ ಕಲಾವಂತಿಕೆಯ ಸೂಕ್ಷ್ಮಮತೆಯ ಶೋಧನೆಯನ್ನು ಠಾಕುರ್ ಜಯದೇವ್ ಸಿಂಗ್ ಅವರಲ್ಲಿ ಕಲಿತಿದ್ದರು.</font><br/> <font  style='font-size:11pt; color:#FF8000'></font><br/><font  style='font-size:11pt; color:#FF8000'><b>ಶುಭ ಮುದ್ಗಲ್: </font><font style=' color:#000000;'></b>ಸಂಗೀತದ ಪರಿಸರದಲ್ಲಿ ಹುಟ್ಟಿ ಬೆಳೆದ ಶುಭ ಅವರಿಗೆ ಭಾರತದ ಅನೇಕ ಶ್ರೇಷ್ಠ ಸಂಗೀತ ವಿದ್ವಾಂಸರಲ್ಲಿ ಶಿಕ್ಷಣ ಲಭಿಸಿದೆ. ಪಂಡಿತ್ ರಾಮ್ ಆಶ್ರೇಯ ಝಾ, ಪಂಡಿತ್ ವಿನಯಚಂದ್ರ ಮೌದ್ಗಲ್ಯ, ಪಂಡಿತ್ ವಿನಯ್ ಥಾಕರ್ ಮೊದಲಾದವರು ಇವರ ಗುರುಗಳು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಖಯಾಲ್, ದಾದ್ರ, ಠುಮ್ರಿ, ಜನಪ್ರಿಯ ಪಾಪ್, ಹೀಗೆ ಎಲ್ಲ ಬಗೆಯಲ್ಲಿ ಪ್ರಸಿದ್ದಿ ಪಡೆದ ಶುಭ ಮುದ್ಗಲ್ ಹೆಸರು ಮನೆಮಾತಾಗಿದೆ. ಸಂಗೀತ ರಚನಕಾರರಾಗಿಯೂ ಪ್ರಸಿದ್ದಿ ಪಡೆದಿರುವ ಶುಭ ಹಲವು ಪ್ರಶಸ್ತಿಗಳ ವಿಜೇತೆ. 1998ರಲ್ಲಿ 34ನೇ ಚಿಕಾಗೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶಿಷ್ಟ ಸಾಧನೆಗೆಂದು ಗೋಲ್ಡನ್ ಪ್ಲೇಕ್ ಅವಾರ್ಡ್ ಗಳಿಸಿದ ಶುಭ 2000ರ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು. ಮಧ್ಯಕಾಲೀನ ಆಧ್ಯಾತ್ಮಿಕ, ಸೂಫಿಸಿ ಹಾಡುಗಳ ಅದರಲ್ಲೂ ವಿರಳವಾಗಿ ಕೇಳಿಬರುವ ವೈಶ್ಣವ ಪುಷ್ಟಿಮಾರ್ಗದ ಕವಿಗಳ, ನಿರ್ಗುಣಿ ಕಬೀರರ, ನಾಮದೇವರ, ಅಮೀರ್ ಖುಸ್ರುವಿನ ಹಾಡುಗಳನ್ನು ಇವರು ಹಾಡುವ ಪರಿ ಅನನ್ಯ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರವಿಕಿರಣ್: </font><font style=' color:#000000;'></b>ಕರ್ಣಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಕಲಾವಿದ ರವಿಕಿರಣ್ ಅವರು ಬಾಲ್ಯದಿಂದಲೇ ತಮ್ಮ ಪ್ರತಿಭೆ ಮೆರೆದವರು. 5 ವರ್ಷದ ಎಳೆಯ ಬಾಲಕನಾಗಿದ್ದಾಗಲೇ ತಮ್ಮ ಮೊದಲ ಕಛೇರಿ ನಡೆಸಿಕೊಟ್ಟ ಈ ಕಲಾವಿದ 10ನೇ ವಯಸಿನಲ್ಲಿಯೇ 21 ತಂತಿಗಳ ಚಿತ್ರವೀಣೆಯ ಅಭ್ಯಾಸಕ್ಕೆ ತೊಡಗಿದರು. 1999ರಿಂದಲೂ ಗಾಯನ-ವಾದನ ಎರಡರಲ್ಲೂ ಪಾಂಡಿತ್ಯಪೂರ್ಣ ಸಂಗೀತ ನೀಡುತ್ತಿರುವರು. ಕೇವಲ ಸಂಗೀತ ಪ್ರದರ್ಶನಕ್ಕೆ ಸೀಮಿತಗೊಳ್ಳದೆ ಶಾಸ್ತ್ರೀಯ ಸಂಗೀತವನ್ನು ಕುರಿತ ಅಪ್ರಿಶಿಯೇಟಿಂಗ್ ಕರ್ನಾಟಿಕ್ ಮ್ಯೂಸಿಕ್, ಪರ್ಫೆಕ್ಟಿಂಗ್ ಕರ್ನಾಟಿಕ್ ಮ್ಯೂಸಿಕ್- ಲೆವೆಲ್ 1-11 ಎಂಬ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂಟರ್ನ್ಯಾಶನಲ್ ಫೌಂಡೇಶನ್ ಫಾರ್ ಕರ್ನಾಟಿಕ್ ಮ್ಯೂಸಿಕ್ ಎಂಬ ಸೇವಾಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಧ್ಯೇಯ- ಲಿಸಂಗೀತದ ಸೇವೆ- ಸಂಗೀತದಿಂದ ಸೇವೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ತರುಣ್ ಭಟ್ಟಾಚಾರ್ಯ: </font><font style=' color:#000000;'></b>ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಷ್ಟೇ ಅಲ್ಲದೆ, ಸಂತೂರ್ ವಾದಕರೂ ಆದ ತರುಣ್, ಸಂತೂರ್ ವಾದನದಲ್ಲಿ ಬದಲಾವಣೆ ತಂದ ಮೊದಲಿಗರೆಂದೇ ಪ್ರಸಿದ್ಧರು. ಅಪರೂಪದ ಮೈಹರ್ ಘರಾನದ ಕೆಲವೇ ಸಂಗೀತಗಾರರಲ್ಲಿ ಒಬ್ಬರು. ತಂದೆ ರಬಿ ಭಟ್ಟಾಚಾರ್ಯ, ದುಲಾಲ್ ರಾಯ್, ಸಿತಾರ್ ವಿದ್ವಾಂಸ ಪಂಡಿತ್ ರವಿಶಂಕರ್ ಇವರಲ್ಲಿ ಶಿಕ್ಷಣ ಪಡೆದವರು. ಬಹುಮುಖಪ್ರತಿಭೆಗೆ ಪ್ರಸಿದ್ಧರಾದ ತರುಣ್, ಸಹಪಾಠಿಯಾದ ರವಿಕಿರಣ್ ಅವರೊಂದಿಗೆ ಅನೇಕ ಜುಗಲ್ಬಂದಿಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಕರ್ಣಾಟಕ ಸಂಗೀತದ ಅನೇಕ ರಾಗಗಳಲ್ಲೂ ಪ್ರವೀಣರು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಡಾ. ಎಲ್ ಸುಬ್ರಹ್ಮಣ್ಯಮ್: </font><font style=' color:#000000;'></b>ಭಾರತೀಯ ಸಂಗೀತ ಶಾಸ್ತ್ರದ ಪಾಗನಿನಿ ಎಂದು ಹೆಸರು ಪಡೆದಿರುವ ಸುಬ್ರಹ್ಮಣ್ಯಮ್ ರನ್ನು ಭಾರತೀಯ ವೈಲಿನ್ ದೇವತೆ ಎಂದೂ ಕರೆಯುವರು. ಕರ್ಣಾಟಕ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ  ಶಾಸ್ತ್ರೀಯಸಂಗೀತ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದಿರುವ ವಿದ್ವಾಂಸರಿವರು. ಹಲವು ಕರ್ಣಾಟಕೀ ರಚನೆಗಳ ಜೊತೆಗೆ ಕೆಲವು ಸಿಂಫೋನಿಗಳನ್ನು ರಚಿಸಿರುವ ಸುಬ್ರಹ್ಮಣ್ಯಮ್ ಅನೇಕ ಸಂಗೀತ ಸಂಬಂಧಿ ಪುಸ್ತಕಗಳನ್ನೂ ಬರೆದಿರುವರು. ಇವರ ಸಂಗೀತ ರಚನೆಗಳನ್ನು ವಿಶ್ವಖ್ಯಾತ ರಂಗಭೂಮಿಗಳಲ್ಲಿ ನಾಟ್ಯ ಸಂಸ್ಥೆಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಅದರಲ್ಲೊಂದನ್ನು ಗ್ರ್ಯಾಮಿ ಪ್ರಶಸ್ತಿಗೂ ಹೆಸರಿಸಲಾಗಿತು.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಸುಬ್ರಹ್ಮಣ್ಯಮ್‌ಗೆ ಪಾಶ್ಚಾತ್ಯ ದೇಶಗಳಿಂದಷ್ಟೇ ಅಲ್ಲದೆ ಭಾರತದಲ್ಲೂ ಪ್ರಶಂಸೆ ಹರಿದು ಬಂದಿದೆ. ಚೆನ್ನೈ ಗವರ್ನರ್ ವೈಲಿನ್ ಚಕ್ರವರ್ತಿ ಎಂಬ ಬಿರುದು ಕೊಟ್ಟರೆ ಭಾರತ ಸರಕಾರವು 1988ರಲ್ಲಿ ಲಿಪದ್ಮಶ್ರ್ತ್ರೀಳಿ ಮತ್ತು 2001ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಸನ್ಮಾನಿಸಿದೆ. </font><font  style='font-size:11pt; color:#FF8000'><b>ಉಸ್ತಾದ್ ಅಮ್ಜದ್ ಅಲಿ ಖಾನ್ : </font><font style=' color:#000000;'></b>ವಿಶ್ವವಿಖ್ಯಾತ ಉಸ್ತಾದ್ ಅಮ್ಜದ್ ಅಲಿ ಖಾನರ ಹೆಸರು ಸರೋದ್ ವಾದ್ಯದೊಂದಿಗೆ ಹೆಣೆದುಕೊಂಡುಬಿಟ್ಟಿದೆ. ಸರೋದ್ ವಾದನದ ನವೀನ ರೀತಿಯ ಬಳಕೆಗೆ, ಅದರಲ್ಲಿ ವಿವಿಧ ಪ್ರಯೋಗಗಳಿಗೆ ಪ್ರಸಿದ್ಧರಾಗಿರುವ ಅಮ್ಜದ್‌ರವರು ಬಂಗೇಶ್ ಪರಂಪರೆಯಲ್ಲಿ 6ನೇ ತಲೆಮಾರಿನವರು. ಇವರ ವಂಶದ ಪೂರ್ವಿಕರು ಸರೋದ್ ವಾದ್ಯವನ್ನು ರಚಿಸಿದವರೆಂದು ಪ್ರತೀತಿ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಂದಿನ ಗ್ವಾಲಿಯರ್ ಸಂಸ್ಥಾನದ ಲಿಆಸ್ಥಾನ ವಿದ್ವಾನ್ಳಿರಾಗಿದ್ದ ತಂದೆಯವರಲ್ಲಿ ಅಮ್ಜದರ ಬಾಲ್ಯದ ಸಂಗೀತ ಶಿಕ್ಷಣ ನಡೆದಿತ್ತು. ಭಾರತದ ಉನ್ನತ ಪ್ರಶಸ್ತಿಗಳು- ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಇವಷ್ಟೇ ಅಲ್ಲದೆ ಇತರ ಖ್ಯಾತ ಪ್ರಶಸ್ತಿಗಳು-ಯುನೆಸ್ಕೊ ಪ್ರಶಸ್ತಿ, ಯುನಿಸೆಫು್ನ ನ್ಯಾಶನಲ್ ಅಂಬಾಸಿಡರ್ ಪದವಿ, ವರ್ಲ್ಡ್ ಎಕನಾಮಿಕ್ ಫೋರಮ್‌ನ ಕ್ರಿಸ್ಟಲ್ ಅವಾರ್ಡ್ ಇವರಿಗೆ ಸಂದಿವೆ. </font><br/><font  style='font-size:11pt; color:#FF8000'></font><br/><font  style='font-size:11pt; color:#FF8000'><b>ನೈವೆಲಿ ಸಂತಾನಗೋಪಾಲನ್: </font><font style=' color:#000000;'></b>ಕರ್ಣಾಟಕ ಸಂಗೀತ ವಲಯದಲ್ಲಿ ತಮ್ಮದೇ ವಿಶಿಷ್ಟ ಸ್ಥಾನ ಗಳಿಸಿರುವ ಈ ವಿದ್ವಾಂಸರದು ಬಹುಮುಖ ಪ್ರತಿಭೆ. ಭಕ್ತಿ-ಭಾವಪೂರ್ಣ ಹಾಡುಗಾರಿಕೆಗೆ ಹೇಳಿಮಾಡಿಸಿದಂತೆ ಇವರ ಸಂಗೀತ ಮನೋಧರ್ಮ. ಸಂಗೀತದ ಹೊಸಹೊಸ ಆಯಾಮಗಳನ್ನು ಹುಡುಕಿ ತೋರಿಸುವ ಇವರ ಪ್ರತಿಭೆ ಅನುಪಮ. ಇದರಿಂದಾಗಿ ಜಗತ್ತಿನ ಸಂಗೀತ ಪ್ರೇಮಿಗಳ ಮನದಲ್ಲಿ ಮನೆಮಾಡಿರುವ ಸಂತಾನಗೋಪಾಲನ್ ಅನೇಕ ಪ್ರಸಸ್ತಿಗಳನ್ನು ಗಳಿಸಿರುವುದಲ್ಲದೆ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಆಸ್ಥಾನ ವಿದ್ವಾನ್‌ರಾಗಿ ನಿಯುಕ್ತರಾಗಿದ್ದಾರೆ. </font><br/><font  style='font-size:11pt; color:#FF8000'></font><br/><font  style='font-size:11pt; color:#FF8000'><b>ಮಹಾಶಿವರಾತ್ರಿ ಕಲಾವಿದರು </font><font style=' color:#000000;'></b></font><br/><font  style='font-size:11pt; color:#000000'>ಕೈಲಾಶ್ ಖೇರ್: ಜನಪ್ರಿಯ ಹಿನ್ನೆಲೆ ಗಾಯಕ, ಪಾಪ್ ಸಂಗೀತಕಾರ ಕೈಲಾಶ್ ಖೇರ್ 2002ರಲ್ಲಿ, ತಮ್ಮ ಗಾಯಕವೃತ್ತಿ ಆರಂಭಿಸಿದಾಗಿನಿಂದಲೂ ಭಾರತೀಯ ಜನತೆಗೆ ಪ್ರೀತಿಪಾತ್ರರಾಗಿದ್ದಾರೆ. ಅವರ ಅಲ್ಲಾ ಕೆ ಬಂದೇ ಹಾಡಿನ ಸುಮಧುರ ಸಂಗೀತ ಇವತ್ತಿಗೂ ಜನಾದರ ಕಾಯ್ದುಕೊಂಡಿದೆ. ಹಲವು ಹಿಂದಿ ಚಲಚಿತ್ರಗಳಲ್ಲಿ ಹಾಡಿರುವ 50ಕ್ಕೂ ಮೀರಿದ ಗೀತೆಗಳ ಈ ಗಾಯಕ ಎ.ಆರ್. ರೆಹಮಾನ್ ರಂತಹ ಸಂಗೀತ ನಿರ್ದೇಶಕರ ಅಚ್ಚುಮೆಚ್ಚಿನ ಹಿನ್ನೆಲೆ ಗಾಯಕ. ಇವರು ಹಾಡಿರುವ ಹಾಡುಗಳು ಹಿಂದಿನ ಸೂಫಿ ಗಾಯನ ಶೈಲಿಯ ಮನೋಹರತೆ ಹೊಂದಿದ್ದು, ನೇರ ಅಂತರಾತ್ಮಕ್ಕೇ ಇಳಿಯುವ ಭಾವತೀವ್ರತೆಯುಳ್ಳವು.</font><br/> <font  style='font-size:11pt; color:#FF8000'></font><br/><font  style='font-size:11pt; color:#FF8000'><b>ಕಲೋನಿಯಲ್ ಕಸಿನ್ಸ್: </font><font style=' color:#000000;'></b>ಖ್ಯಾತ ಗಾಯಕ-ಸಂಗೀತರಚನಕಾರರಾದ ಹರಿಹರನ್- ಲೆಸ್ಲಿ ಲೆವಿಸ್ ಜೋಡಿಯು ಎರಡು ದಶಕದಿಂದಲೂ ಸಂಗೀತ ಜಗತ್ತಿನಲ್ಲಿ ತನ್ನ ಜನಪ್ರಿಯತೆ ಕಾಯ್ದುಕೊಂಡಿದೆ. ಹರಿಹರನ್ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದು ಅನೇಕ ಚಲನಚಿತ್ರ ಗೀತೆಗಳನ್ನು, ಗಜಲ್‌ಗಳನ್ನು ಹಾಡಿದ್ದಾರೆ. ಹಲವಾರು ಗಜಲ್ ಅಲ್ಬಮ್‌ಗಳನ್ನು ಹೊರತಂದಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಲೆಸ್ಲಿ ಸಂಗೀತ ರಚನಕಾರರು ಮತ್ತು ಗಿಟಾರ್ ವಾದಕರು. ಆಶಾ ಭೊಸ್ಲೆ ಹಾಗೂ ಆಲಿಶ ಚಿನಾಯ್ ಸಂಗಡ ಕೆಲಸ ಮಾಡಿದ್ದಾರೆ. ಪಾಶ್ಚಾತ್ಯ ಮತ್ತು ಶಾಸ್ತ್ರೀಯ ಸಂಗೀತವನ್ನು ಮೇಳೈಸಿ ರಚಿಸಿರುವ ಫ್ಯೂಶನ್ ರೀತಿಯ ಗೀತೆಗಳು ಇಂದಿಗೂ ಕೇಳಿಬರುತ್ತವೆ. 1996ರ ಅಕ್ಟೌಬರ್ನಲ್ಲಿ ಹೊರಬಂದ ಅವರದೇ ಹೆಸರಿನ ಲಿಕಲೋನಿಯಲ್ ಕಸಿನ್ಸ್ಳಿ ಗೆ ಲಿಎಮ್ ಟಿ ವಿ ಏಶಿಯಾ ವ್ಯೂಯರ್ಸ್ ಛಾಯ್ಸ್ ಮತ್ತು ಯು ಎಸ್ ಬಿಲ್ಬೋರ್ಡ್ಸ್ ವ್ಯೂಯರ್ಸ್ ಅವಾರ್ಡ್ ಸಿಕ್ಕಿತು. ಅಂದಿನ ದಾಖಲೆಗಳನ್ನು ಮುರಿದ ಈ ಆಲ್ಬಮ್‌ನ ಹಿಂದೆಯೇ ಮತ್ತೆರಡು ಆಲ್ಬಮ್‌ಗಳು -ವೇ ವಿ ಡು ಇಟ್ ವಿತ್ ಯು ಮತ್ತು ಆತ್ಮ -ರಚಿತವಾದವು.</font><br/> <font  style='font-size:11pt; color:#FF8000'></font><br/><font  style='font-size:11pt; color:#FF8000'><b>ಉಸ್ತಾದ್ ವಾಸಿಫುದ್ದೀನ್ ದಾಗರ್:</font><font style=' color:#000000;'></b>ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಧ್ರುಪದ್ ಗಾಯನ ಕಲಾವಿದ ಉಸ್ತಾದ್ ವಾಸಿಫುದ್ದೀನ್ ದಾಗರ್ ತಾನಸೇನರಿಗೆ ಗುರುವಾಗಿದ್ದ ಸ್ವಾಮಿ ಹರಿದಾಸ್ ದಾಗರ್ ಅವರ ದೀರ್ಘ ಪರಂಪರೆಗೆ ಸೇರಿದವರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಸ್ತಾದ್ ದಾಗರರ ಸಂಗೀತ ಶಿಕ್ಷಣ ಅವರ ತಂದೆ ಹಾಗೂ ಚಿಕ್ಕಪ್ಪನವರಲ್ಲಿ ನಡೆದು, ಇಬ್ಬರ ಶೈಲಿಯೂ ಇವರಲ್ಲಿ ಕೂಡಿ, ಎರಡನ್ನೂ ಮೀರಿಸುವ ಹೊಸದೊಂದು ಶೈಲಿ ಇವರದಾಯಿತು. ಇವರ ಎಲ್ಲ ಸಂಗೀತ ಕಾರ್ಯಕ್ರಮಗಳಲ್ಲಿ ಈ ನವೀನತೆ ವಿಜೃಂಭಿಸಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಸ್ತಾದ್ ವಾಸಿಫುದ್ದೀನ್ ದಾಗರ್ ದೇಶ ವಿದೇಶಗಳಲ್ಲಿ ತಮ್ಮ ಗಾಯನ ಪ್ರಸ್ತುತಪಡಿಸಿದ್ದಾರೆ. ಯುನೆಸ್ಕೊ ಪರವಾಗಿ ಫ್ರಾನ್ಸ್‌ನಲ್ಲಿ 2001ರಲ್ಲಿ ವರ್ಲ್ಡ್ ಫೆಸ್ಟಿವಲ್ ಆಫ್ ಸೇಕ್ರೆಡ್ ಮ್ಯೂಸಿಕ್‌ನ ಅಂಗವಾಗಿ ದಲೈಲಾಮಾದಲ್ಲಿ ಭಾಗವಹಿಸಿದ್ದರು.</font>]]></content:encoded>
      <pubDate>Sun, 19 Feb 2012 12:21:04 +0530</pubDate>
      <updatedDate>Tue, 15 Apr 2014 17:48:05 +0530</updatedDate>
      <category><![CDATA[festivals]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಭಕ್ತಾಧಿಗಳೇ ಬನ್ನಿ...ಕೊಟ್ಟೂರ ಜಾತ್ರೆಗೆ ಹೋಗಾಣು]]></title>
      <link>https://kannada.webdunia.com/article/festivals/ಭಕ್ತಾಧಿಗಳೇ-ಬನ್ನಿ-ಕೊಟ್ಟೂರ-ಜಾತ್ರೆಗೆ-ಹೋಗಾಣು-112021500075_1.htm</link>
      <guid>https://kannada.webdunia.com/article/festivals/ಭಕ್ತಾಧಿಗಳೇ-ಬನ್ನಿ-ಕೊಟ್ಟೂರ-ಜಾತ್ರೆಗೆ-ಹೋಗಾಣು-112021500075_1.htm</guid>
      <media:thumbnail url="http:"/>
      <image>http:</image>
      <description><![CDATA["ಕೊಟ್ಟೂರ ದೊರೆಯೇ, ನಿನಗಾರು ಸರಿಯೇ, ಸರಿಯೆಂದವರ ಹಲ್ಲು ಮುರಿಯೇ, ಬೋಪರಾಕ್" ಎನ್ನುವ ಭಕ್ತರ ಕೂಗು ಮುಗಿಲು ಮುಟ್ಟುತ್ತಿದೆ. ಫೆಬ್ರವರಿ 17 ರಂದು ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ. ಗಣಿಧಣಿಗಳ ನಾಡೆಂದು ಕರೆಯುವ ಬಳ್ಳಾರಿಯ ಜಿಲ್ಲೆಯ ಕೊಟ್ಟೂರು ಪ್ರಮುಖ ಧಾರ್ಮಿಕ ಕ್ಷೇತ್ರ. ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1202/15/images/img1120215075_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#0000FF'><b>ಕೊಟ್ಟೂರ ಸ್ವಾಮಿ. ಎಂ.ಎಸ್.</font><font style=' color:#000000;'></b></font><br/><font  style='font-size:11pt; color:#000000'></font><br/>"<font  style='font-size:11pt; color:#000000'>ಕೊಟ್ಟೂರ ದೊರೆಯೇ, ನಿನಗಾರು ಸರಿಯೇ, ಸರಿಯೆಂದವರ ಹಲ್ಲು ಮುರಿಯೇ, ಬೋಪರಾಕ್" ಎನ್ನುವ ಭಕ್ತರ ಕೂಗು ಮುಗಿಲು ಮುಟ್ಟುತ್ತಿದೆ. ಫೆಬ್ರವರಿ 17 ರಂದು ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ. ಗಣಿಧಣಿಗಳ ನಾಡೆಂದು ಕರೆಯುವ ಬಳ್ಳಾರಿಯ ಜಿಲ್ಲೆಯ ಕೊಟ್ಟೂರು ಪ್ರಮುಖ ಧಾರ್ಮಿಕ ಕ್ಷೇತ್ರ. ಹನ್ನೆರಡನೇ ಶತಮಾನದ ಬಸವಕ್ರಾಂತಿಯ ನಂತರದಲ್ಲಿ ಅಸಮಾನತೆ, ಜಾತಿ ವರ್ಗ ವ್ಯವಸ್ಧೆಯ ವಿರುದ್ಧ ಬಂಡೆದ್ದು ತನ್ನದೇ ಪರಂಪರೆಯನ್ನು ಕಟ್ಟಿ ಬೆಳೆಸಿದ ಕೊಟ್ಟೂರು ಗುರು ಬಸವೇಶ್ವರರು ಪ್ರಮುಖ ಸಂತ ಶರಣರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜೀವನದುದ್ದಕ್ಕೂ ಮರುಳನಂತೆ (ಹುಚ್ಚನಂತೆ) ವರ್ತಿಸುತ್ತಾ ತನ್ನ ಸಾಧನೆ, ಸಮಾನತೆ, ಕಾಯಕ ಪ್ರೇಮದಿಂದಲೇ ಲೋಕದ ಜನರ ಪ್ರೀತಿಗಳಿಸಿದ ಕೊಟ್ಟೂರೇಶ್ವರ ಕೊಟ್ಟೂರು ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವೆಂದರೆ ತಪ್ಪಾಗದು. ಮಾನವತೆಗೆ ಹೊಸ ಮೆರುಗನಿತ್ತ ಕೊಟ್ಟೂರೇಶ್ವರರು ತಮಿಳುನಾಡು ಮೂಲದ ಧರ್ಮಪುರಿ ಜಿಲ್ಲೆಯ ಹೊಸೂರಿನವರೆಂದು ಪುರಾಣದಲ್ಲಿನ ಇತಿಹಾಸ ತಿಳಿಸುತ್ತದೆ. ಅಲ್ಲಿಂದ ಪಯಣಿಸಿದ ಕೊಟ್ಟೂರೇಶ್ವರರು ಯೆಡೆಯೂರಿನ ಯತಿಗಳ ಶಿಷ್ಯತ್ವ ಪಡೆದು ನಂತರ ಚಾಮರಾಜನಗರ, ಹಂಪಿ ಮಾರ್ಗವಾಗಿ ಕೊಟ್ಟೂರಿಗೆ ಬಂದು ನೆಲೆಸಿದರೆಂದು ಹಿರಿಯರು ಹೇಳುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಸವಧರ್ಮದ ಷಟ್‌ಸ್ಥಳ ಮತ್ತು ಅಷ್ಟಾವರಣಗಳನ್ನು ಸತತ ಸಾಧನೆ ಮಾಡಿದ ಗುರುಬಸವೇಶ್ವರರು ತಮ್ಮ ಪವಾಡಗಳಿಂದಾಗಿ, ಸಮಾನತಾವಾದದಿಂದಾಗಿ ಧರ್ಮಾತೀತವಾಗಿ ಜನರನ್ನು ಆಕರ್ಶಿಸುತ್ತಾ ಸಾಗಿದ ಕತೆಯನ್ನು ಎಲ್ಲರೂ ಕೇಳಬಹುದಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊಟ್ಟೂರೇಶನ ಭಕ್ತನಾಗಿದ್ದ ದೆಹಲಿಯ ಸುಲ್ತಾನ ಅಕ್ಬರ್ ಬಾದಶಹ ಕೊಟ್ಟೂರಿಗೆ ಭೇಟಿ ನೀಡಿದ ಸಮಯದಲ್ಲಿ ತನ್ನ ಕೊಡುಗೆಯಾಗಿ ನೀಡಿದ ಮಣಿಮಂಚ ಮತ್ತು ಖಡ್ಗವನ್ನು ಈಗಲೂ ನೋಡಬಹುದಾಗಿದೆ. ಲೀಲಾ ವಿನೋದಿಯಾಗಿದ್ದ ಕೊಟ್ಟೂರೇಶ್ವರ ತೊಟ್ಟಿಲ ಮಠ, ಮೂರ್ಕಲ್ ಮಠ, ಹಿರೇ ದರ್ಬಾರ್ ಮಠ,ಗಚ್ಚಿನ ಮಠ ಹಾಗೂ ಮರಿಕೊಟ್ಟೂರೇಶ್ವರನ ಮಠಗಳನ್ನು ತನ್ನ ಸ್ಥಾನಗಳನ್ನಾಗಿ ಮಾಡಿಕೊಂಡಿದ್ದನೆಂದು ಪೂರ್ವಿಕರು ಹೇಳುತ್ತಾರೆ.</font><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1202/15/images/img1120215075_2_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#000000'>ಮೂರ್ಕಲ್ ಮಠ ಊಟದ ಮನೆಯಾಗಿತ್ತು, ತೊಟ್ಟಿಲು ಮಠ ತನ್ನ ಬಾಲ್ಯದ ಸ್ಥಳವಾಗಿತ್ತು ಅಂತೆಯೇ ಜೀವನವನ್ನು ದರ್ಬಾರ್ ಮಠದಲ್ಲಿ ಕಳೆದ ಕೊಟ್ಟೂರೇಶ್ವರರು ತಮ್ಮ ಸಾಧನೆಯ ಅಂತಿಮ ಹಂತಕ್ಕಾಗಿ ಗಚ್ಚಿನ ಮಠವನ್ನು ಆಯ್ಕೆ ಮಾಡಿಕೊಂಡರೆಂದು ಹೇಳುವರು. ಗಚ್ಚಿನ ಮಠದಲ್ಲಿ ಜೀವಂತ ಸಮಾಧಿ ಸ್ಥಿತಿಗೆ ತಲುಪಿದರೆಂದು ಇತಿಹಾಸ ತಿಳಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲರೂ ಸಾಮಾನ್ಯವಾಗಿ ಭಯಬೀಳುವಂತಹ ಮೂಲಾ ನಕ್ಷತ್ರದಲ್ಲಿ ಜನಿಸಿದ ಶರಣರ ರಥೋತ್ಸವ ಸಹ ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಯಾಗಿದೆ. ತನ್ನ ಸಮಾನತೆಯ ಪ್ರತಿಬಿಂಬವಾಗಿ ದಲಿತರ ಕೇರಿಯ ಮುತ್ತೈದೆ ಮಹಿಳೆಯಿಂದ ಗಿಣ್ಣದ ಪ್ರಸಾದ ಮತ್ತು ಆರತಿಯೆತ್ತಿದ ನಂತರವೇ ರಥವನ್ನೆಳೆಯುವ ಕಾರ್ಯ ಆರಂಭವಾಗುವುದು ವಿಶೇಷದ್ದಾಗಿದೆ. ಅದರಲ್ಲೂ ಸರಿಸುಮಾರು ಕಳೆದ 500 ವರ್ಷಗಳಿಂದ ದಲಿತರ ಕೇರಿಯಲ್ಲಿ ಹಸು ಇಲ್ಲವೇ ಎಮ್ಮೆಯೊಂದು ಕೊಟ್ಟೂರ ತೇರಿನ ಹಿಂದಿನ ದಿನಗಳಂದು ಕರು ಹಾಕುತ್ತಿರುವುದು ನಿಜಕ್ಕೂ ಪಾವಡವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಾತ್ರೆ ಸಮಯದಲ್ಲಿ ರಾಜ್ಯದ ಹಲವು ಕಡೆಗಳಿಂದ ಭಕ್ತರು ತಂಡೋಪ ತಂಡವಾಗಿ ಪಾದಯಾತ್ರೆಯಲ್ಲಿ ಕೊಟ್ಟೂರಿಗೆ ಆಗಮಿಸುತ್ತಿರುವ ದೃಷ್ಯ ನಿಜಕ್ಕೂ ಸ್ಮರಣೀಯ. ಪಾದಯಾತ್ರಿಗಳ ಸಹಾಯ-ಸೇವೆಗೆಂದು ಕೊಟ್ಟೂರಿನ ನಾಗರೀಕರು ಟೊಂಕಕಟ್ಟಿ ನಿಂತಿರುವರು. ದಾರಿಯುದ್ದಕ್ಕೂ ಪಾದಯಾತ್ರಿಗಳನ್ನು ಸತ್ಕರಿಸುತ್ತಾ, ಅವರಿಗೆ ಊಟ, ಉಪಹಾರ, ವೈದ್ಯಕೀಯ ಸಹಾಯವನ್ನು ಸೇವೆಯ ರೂಪದಲ್ಲಿ ನೀಡುತ್ತಿರುವುದನ್ನು ಎಲ್ಲರೂ ಮೆಚ್ಚಬೇಕಾಗಿದೆ.</font><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1202/15/images/img1120215075_3_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#000000'>ಜಾತ್ರೆಯು ಸರಿಸುಮಾರು ಎಂಟರಿಂದ ಹತ್ತು ದಿನಗಳ ತನಕ ನಡೆಯುತ್ತದೆ, ಹತ್ತಾರು ಕಡೆಗಳ ಜನರು ಜಾತ್ರೆಗೆ, ಕೊಟ್ಟೂರೇಶನ ದರ್ಶನಕ್ಕೆ ಆಗಮಿಸುತ್ತಿರುವುದು ವರ್ಷ ವರ್ಷಕ್ಕೂ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗು ಶೈಕ್ಷಣಿಕ ಕೇಂದ್ರವಾಗಿರುವ ಕೊಟ್ಟೂರು ಸರಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು ಸುಳ್ಳಲ್ಲ. ಒಂದು ನೂರು ವರ್ಷ ಇತಿಹಾಸವಿದ್ದ ಹೊಸಪೇಟೆ-ಕೊಟ್ಟೂರು ರೈಲು ಮಾರ್ಗವನ್ನು ಉನ್ನತೀಕರಿಸುವ ನೆಪದಲ್ಲಿ ಮತ್ತು ಇಲ್ಲಿನ ನಾಗರೀಕರ ಬಹುದಿನದ ಬೇಡಿಕೆಯಾಗಿದ್ದ ಹೊಸಪೇಟೆ-ಕೊಟ್ಟೂರು-ಹರಿಹರ ರೈಲು ಮಾರ್ಗ ನಿರ್ಮಾಣ ಸಂಪೂರ್ಣವಾಗಿದ್ದರೂ ಪ್ರಯಾಣಿಕರಿಗೆ ರೈಲು ಮಾತ್ರ ಮರೀಚಿಕೆಯಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಳ್ಳಾರಿ ಜಿಲ್ಲೆಯಲ್ಲಿನ ಬಳ್ಳಾರಿ ಮತ್ತು ಹೊಸಪೇಟೆಗಳನ್ನು ಹೊರತು ಪಡಿಸಿದರೆ ಅತ್ಯುತ್ತಮ ಶಿಕ್ಷಣಕ್ಕೆಂದು ಹೆಸರಾಗಿರುವ ಕೊಟ್ಟೂರಿನಲ್ಲಿ ಹತ್ತಾರು ಶಾಲಾ ಕಾಲೇಜುಗಳು ತಲೆಯೆತ್ತಿವೆ. ಆದರೆ ಕೇವಲ ಹೋಬಳಿ ಕೇಂದ್ರವಾಗಿರುವ ಕೊಟ್ಟೂರನ್ನು ತಾಲೂಕು ಕೇಂದ್ರವಾಗಿಸುವಂತೆ ರಾಜ್ಯ ಸರಕಾರವನ್ನು ಬಹು ಹಿಂದಿನಿಂದ ಕೇಳುತ್ತಿದ್ದರೂ ರಾಜ್ಯ ಸರಕಾರ ನಿರ್ಲಕ್ಷಿಸಿದೆ. ಇನ್ನಾದರೂ ಸೌಲಭ್ಯವಂಚಿತ ಶ್ರೀಕ್ಷೇತ್ರವನ್ನು ಅಭಿವೃದ್ಧಿಪಡಿಸುವತ್ತ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂಬುದು ನಮ್ಮೆಲ್ಲರ ಬಯಕೆ...</font>]]></content:encoded>
      <pubDate>Wed, 15 Feb 2012 20:15:36 +0530</pubDate>
      <updatedDate>Tue, 15 Apr 2014 17:48:05 +0530</updatedDate>
      <category><![CDATA[festivals]]></category>
      <authorname>ನಾಗೇಂದ್ರ ತ್ರಾಸಿ</authorname>
    </item>
    <item>
      <title><![CDATA[ಶ್ರೀ ಕ್ಷೇತ್ರ ಸುತ್ತೂರಿನ ವಿಶಿಷ್ಟ ಜಾತ್ರೆಗೆ ನೀವೂ ಬನ್ನಿ]]></title>
      <link>https://kannada.webdunia.com/article/festivals/ಶ್ರೀ-ಕ್ಷೇತ್ರ-ಸುತ್ತೂರಿನ-ವಿಶಿಷ್ಟ-ಜಾತ್ರೆಗೆ-ನೀವೂ-ಬನ್ನಿ-112011900021_1.htm</link>
      <guid>https://kannada.webdunia.com/article/festivals/ಶ್ರೀ-ಕ್ಷೇತ್ರ-ಸುತ್ತೂರಿನ-ವಿಶಿಷ್ಟ-ಜಾತ್ರೆಗೆ-ನೀವೂ-ಬನ್ನಿ-112011900021_1.htm</guid>
      <media:thumbnail url="http:"/>
      <image>http:</image>
      <description><![CDATA[ಇತರೆಡೆಗಳಲ್ಲಿ ಆಚರಿಸುವ ಜಾತ್ರೆಗೆ ಹೋಲಿಸಿದರೆ ಮೈಸೂರಿನ ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1201/19/images/img1120119021_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಇತರೆಡೆಗಳಲ್ಲಿ  ಆಚರಿಸುವ ಜಾತ್ರೆಗೆ ಹೋಲಿಸಿದರೆ ಮೈಸೂರಿನ ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.</font><br/><font  style='font-size:11pt; color:#000000'></font><br/><a href='http://kannada.webdunia.com' target=_blank> <b>ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ</b></a><font  style='font-size:11pt; color:#000000'></font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಾಗೆ ನೋಡಿದರೆ ಸುತ್ತೂರಿನಲ್ಲಿ ನಡೆಯುವ ಜಾತ್ರೆ ಬರೀ ಜಾತ್ರೆಯಾಗಿರದೆ ಇದೊಂದು ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ಕತಿಕ ಮಹೋತ್ಸವಗಳ  ಸಂಗಮದೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನ ಎಂದರೆ ತಪ್ಪಾಗಲಾರದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಪಿಲಾ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ. ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕ್ಕತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತ, ಯಕ್ಷಗಾನ...... ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಆರು ದಿನಗಳ ಜಾತ್ರೆ: </b>ಸುತ್ತೂರು ಜಾತ್ರೆಯು ಸುಮಾರು ಆರು ದಿನಗಳ ಕಾಲ(ಪ್ರಸಕ್ತ ವರ್ಷ ಜನವರಿ 19ರಿಂದ 24ರವರೆಗೆ) ನಡೆಯಲಿದ್ದು, ಒಂದೊಂದು ದಿನವೂ ಒಂದೊಂದು ರೀತಿಯ ವಿಶೇಷತೆಯಿರುತ್ತದೆ. ಸುತ್ತೂರಿನ ಶ್ರೀಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವಮೂರ್ತಿಯನ್ನು ಕರ್ತೃಗದ್ದುಗೆಗೆ ತರುವುದರೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಾತ್ರೆಯ ಎರಡನೇ ದಿನ ಸಹಸ್ರ ಕುಂಭೋತ್ಸವ ನಡೆದರೆ,  ಮೂರನೇ ದಿನದಂದು ಬೆಳಿಗ್ಗೆ ರಥೋತ್ಸವ ನಡೆಯುತ್ತದೆ.  ನಾಲ್ಕನೇ ದಿನದಂದು ಸಂಜೆ ನಡೆಯುವ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಗಮನಸೆಳೆಯುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಐದನೇ ದಿನ ರಾತ್ರಿ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವ, ಆರನೇ ದಿನ ಅನ್ನ ಬ್ರಹ್ಮೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳು ನಡೆಯುತ್ತವೆ. ಜಾತ್ರೆಯ ಸಂದರ್ಭ ನಡೆಯುವ ಕಲಾತಂಡಗಳ ಮೆರವಣಿಗೆ ಛತ್ರಿ, ಚಾಮರ, ಸೂರಾಪಾನಿ, ಗಾರುಡಿಗೊಂಬೆ, ಮರಗಾಲು ಕುಣಿತ, ನೃತ್ಯ, ವೀರಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿ ಮೇಳ, ನಾದಸ್ವರ ಸೇರಿ ವಿವಿಧ ಜನಪದ ಕಲಾತಂಡಗಳೊಂದಿಗೆ ಸಾಗುತ್ತಿದ್ದರೆ ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ಜಾತ್ರೆಯ ಸಂದರ್ಭ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ಶಂಕರನಾರಾಯಣ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ತ್ರಿಕಾಲ ಪೂಜೆ, ಮಹಾರುದ್ರಾಭಿಷೇಕ, ನವನೀತಾಲಂಕಾರ, ಹಸಿರುವಾಣಿ ಅಲಂಕಾರ ಹಾಗೂ ಗುರುಪರಂಪರೆಯ ಸಂಸ್ಮರಣೋತ್ಸವಗಳು ಕೂಡ ನಡೆಯುತ್ತವೆ. </font><br/></font><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1201/19/images/img1120119021_2_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#000000'><b>ಶಾಂತಿ, ಸಂಯಮದ ಪುಣ್ಯಕ್ಷೇತ್ರ: </b>ಇನ್ನು ಸುತ್ತೂರಿನ ಇತಿಹಾಸದ ಬಗ್ಗೆ ನೋಡುವುದಾದರೆ ಇಲ್ಲಿನ ಶ್ರೀ ಮಠಕ್ಕೆ ಸುಮಾರು ಹತ್ತು ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು. ಈ ಕ್ಷೇತ್ರ ಶಾಂತಿ, ಸಂಯಮ, ಸಹಬಾಳ್ವೆಯನ್ನು ನಾಡಿಗೆ ಸಾರಿದ ಕ್ಷೇತ್ರವೂ ಹೌದು.  ಇದಕ್ಕೆ ಪೂರಕವಾದ ಕಥೆಯೊಂದು ಪ್ರಚಲಿತದಲ್ಲಿರುವುದನ್ನು ನಾವು ಕಾಣಬಹುದು. ಅದು ಸುಮಾರು ಒಂದು ಸಾವಿರ ವರ್ಷಗಳ ಹಿಂದಿನ ಕಾಲಾವಧಿ. ರಾಜರ ಆಡಳಿತವಿದ್ದ ದಿನಗಳು. ಎಲ್ಲೆಡೆಯೂ ರಾಜ್ಯ ವಿಸ್ತರಣೆಗಾಗಿ ರಾಜರುಗಳ ನಡುವೆ ಹೋರಾಟ ನಡೆಯುತ್ತಿತ್ತು. ಆಗಾಗ್ಗೆ ರಾಜರುಗಳು ದಂಡೆಯಾತ್ರೆ ಕೈಗೊಳ್ಳುತ್ತಿದ್ದರು. ಒಬ್ಬ ರಾಜನ ಮೇಲೆ ಮತ್ತೊಬ್ಬ ರಾಜ ಯುದ್ಧ ಸಾರುತ್ತಾ ಯುದ್ದ ಮಾಡುವುದರಲ್ಲಿಯೇ ದಿನಕಳೆಯುತ್ತಿದ್ದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರಂತೆ ಆಗಿನ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರೂ ವೈರಿಗಳಾಗಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು.  ಒಮ್ಮೆ ಇವರಿಬ್ಬರು ಭಾರೀ ಸೈನ್ಯದೊಂದಿಗೆ ಯುದ್ಧಕ್ಕೆ ಸಜ್ಜಾಗುತ್ತಾರೆ. ಆಗ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತುಗುರಿಯಿಲ್ಲದೆ ಓಡತೊಡಗಿತ್ತು. ಏನೇ  ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹಾಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಗೆ ಪ್ರದಕ್ಷಿಣೆ ಹಾಕಿ ನಿಂತಿತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರಿಂದ ಅಚ್ಚರಿಗೊಂಡ ರಾಜಾ  ರಾಜೇಂದ್ರ ಚೋಳ ಕುದುರೆಯಿಂದಿಳಿದು  ಧ್ಯಾನದಲ್ಲಿ ನಿರತರಾಗಿದ್ದ  ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪಾದಕ್ಕೆರಗುತ್ತಾನೆ. ಅದೇ ವೇಳೆಗೆ ರಾಜೇಂದ್ರ ಚೋಳನ ಕುದುರೆಯನ್ನು ಹಿಂಬಾಲಿಸಿಕೊಂಡು ರಾಚಮಲ್ಲನೂ ಅಲ್ಲಿಗೆ ಬರುತ್ತಾನೆ.  ತನ್ನ ಮುಂದೆ ಬಂದು ನಿಂತ ರಾಜರಿಬ್ಬರನ್ನು ಕಂಡ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಅವರಿಬ್ಬರಿಗೆ ವೈರತ್ವವನ್ನು ಬಿಟ್ಟು ಸಹಬಾಳ್ವೆ ನಡೆಸುವಂತೆಯೂ ಅಲ್ಲದೆ ಯುದ್ಧದಿಂದ ಆಗುವ ಸಾವು ನೋವುಗಳ ಬಗ್ಗೆ ಬೋಧಿಸುತ್ತಾರೆ. ಅವರ ಬೋಧನೆಯಿಂದ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮುಂದೆ ಅವರು ಯುದ್ಧವನ್ನು ಬಿಟ್ಟು ಆ ಪುಣ್ಯಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಅಂತಹವೊಂದು ಪುಣ್ಯಕ್ಷೇತ್ರವೇ  ಸುತ್ತೂರು ಶ್ರೀ ಕ್ಷೇತ್ರವಾಗಿದೆ.</font><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1201/19/images/img1120119021_3_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>WD</p></td></tr></table><!--endImage--> <font  style='font-size:11pt; color:#000000'>ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳಿಂದ ಆರಂಭವಾದ ಸುತ್ತೂರು ವೀರಸಿಂಹಾಸನ ಮಠವು ಹತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದ್ದು  ಅವರ ವಿವರ ಹೀಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀ ಈಶಾನೇಶ್ವರ ಒಡೆಯರು (1030-1090), ಶ್ರೀ ನಿಜಲಿಂಗಶಿವಾಚಾರ್ಯರು (1090-1170), ಶ್ರೀ ಸಿದ್ಧನಂಜ ದೇಶಿಕೇಂದ್ರರು (1170-1240), ಶ್ರೀ ಕಪನಿ ನಂಜುಂಡದೇಶಿಕೇಂದ್ರರು (1240-1310), ಶ್ರೀ ಚೆನ್ನವೀರದೇಶಿಕೇಂದ್ರರು (1310-1380), ಶ್ರೀ ಸಿದ್ದಮಲ್ಲ ಶಿವಾಚಾರ್ಯರು (1380-1470), ಶ್ರೀ ಪರ್ವತೇಂದ್ರ ಶಿವಾಚಾರ್ಯರು (1470-1490), ಶ್ರೀ ಭಂಡಾರಿ ಬಸಪ್ಪ ಒಡೆಯರು (1490-1515), ಶ್ರೀ ಕೂಗಲೂರು ಶ್ರೀ ನಂಜುಂಡ ದೇಶೀಕೇಂದ್ರರು (1515-1530), ಶ್ರೀ ಘನಲಿಂಗದೇವರು (1530-1550), ಶ್ರೀ ಇಮ್ಮಡಿ ಶ್ರೀ ಶಿವರಾತ್ರೀಶ್ವರ ಸ್ವಾಮಿಗಳು (1550-1590), ಶ್ರೀ ಚೆನ್ನಬಸವದೇಶೀಕೇಂದ್ರರು (1590-1608).</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀ ಗುರುನಂಜ ದೇಶೀಕೇಂದ್ರರು (1608-1641), ಶ್ರೀ ಚೆನ್ನಬಸವ ದೇವಾಚಾರ್ಯರು (1641-1713), ಶ್ರೀ ಪಂಚಾಕ್ಷರ ದೇಶೀಕೇಂದ್ರರು (1713-1730), ಶ್ರೀ ಚಿದ್ಘನ ಶಿವಾಚಾರ್ಯರು (1730-1750), ಶ್ರೀ ಚೆನ್ನವೀರ ದೇಶಿಕೇಂದ್ರರು (1750-1801), ಶ್ರೀ ಮಹಾಂತ ದೇಶೀಕೇಂದ್ರರು (1801-1842), ಶ್ರೀ ಸಿದ್ಧಮಲ್ಲ ಶಿವಾಚಾರ್ಯರು (1842-1884), ಶ್ರೀ ಶಿವರಾತ್ರಿ ದೇಶೀಕೇಂದ್ರರು (1884-1902), ಶ್ರೀ ಮಂತ್ರಮಹರ್ಷಿ ಪಟ್ಟದ ಶ್ರೀ ಶಿವರಾತ್ರಿ ಮಹಾಸ್ವಾಮಿಗಳು (1902-1926), ರಾಜಗುರುತಿಲಕ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು (1926-1986) ಸೇರಿದಂತೆ ಇಪ್ಪತ್ಮೂರು ಜಗದ್ಗುರುಗಳ ಸೇವೆಯಿಂದ ಶ್ರೀಮಠವು ಅಭಿವೃದ್ದಿ ಪಥದಲ್ಲಿ ಸಾಗುತ್ತಾ ರಾಜ್ಯ, ರಾಷ್ಟ್ತ್ರ ಹಾಗೂ ಅಂತರರಾಷ್ಟ್ತ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಅಭಿವೃದ್ದಿಯತ್ತ ಕೊಂಡೊಯ್ಯವಲ್ಲಿ 1986 ರಿಂದ 24ನೇ ಪೀಠಾಧಿಕಾರಿಗಳಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮುಂದಾಗಿದ್ದು, ಅವರ ಸಾರಥ್ಯದಲ್ಲಿ ಸುತ್ತೂರು ಜಾತ್ರೆ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತಿದೆ.</font><br/><font  style='font-size:11pt; color:#000000'></font><br/>-<font  style='font-size:11pt; color:#000000'><b>ಬಿ.ಎಂ.ಲವಕುಮಾರ್ </b></font><br/><font  style='font-size:11pt; color:#000000'><b>ಮೈಸೂರು</b></font>]]></content:encoded>
      <pubDate>Thu, 19 Jan 2012 12:28:50 +0530</pubDate>
      <updatedDate>Tue, 15 Apr 2014 17:40:51 +0530</updatedDate>
      <category><![CDATA[festivals]]></category>
      <authorname>ಗಿರಿಧರ್</authorname>
    </item>
    <item>
      <title><![CDATA[ಅಷ್ಟಮಿ ವಿಶೇಷ: ಕೃಷ್ಣಂ ವಂದೇ ಜಗದ್ಗುರುಂ...]]></title>
      <link>https://kannada.webdunia.com/article/festivals/ಅಷ್ಟಮಿ-ವಿಶೇಷ-ಕೃಷ್ಣಂ-ವಂದೇ-ಜಗದ್ಗುರುಂ-108082300027_1.htm</link>
      <guid>https://kannada.webdunia.com/article/festivals/ಅಷ್ಟಮಿ-ವಿಶೇಷ-ಕೃಷ್ಣಂ-ವಂದೇ-ಜಗದ್ಗುರುಂ-108082300027_1.htm</guid>
      <media:thumbnail url="http:"/>
      <image>http:</image>
      <description><![CDATA[ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ...]]></description>
      <content:encoded><![CDATA[<font  style='font-size:11pt; color:#0000FF'><b>ಅವಿನಾಶ್ ಬಿ.</font><font style=' color:#000000;'></b></font><br/><font  style='font-size:11pt; color:#000000'>ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇ</font><br/><font  style='font-size:11pt; color:#000000'>ದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇ</font><br/><font  style='font-size:11pt; color:#000000'>ಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇ</font><br/><font  style='font-size:11pt; color:#000000'>ಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||</font><br/><font  style='font-size:12pt; color:#000000'></font><br/><!--Image--><p class="wdp_articleLImg"><p><img src='/kn/articles/0808/23/images/img1080823027_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಸಾರ: ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ... ನಿನಗೆ ನಮಸ್ಕಾರಗಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಶಾವತಾರಗಳನ್ನು ತಳೆದು "ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಂ ಅಧರ್ಮಸ್ಯ, ತದಾತ್ಮಾನಾಂ ಸೃಜಾಮ್ಯಹಂ" ಎನ್ನುತ್ತಾ "ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಕೃತಾಮ್, ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ"  (ಎಲ್ಲಿ ಧರ್ಮಕ್ಕೆ ಗ್ಲಾನಿಯಾಗುತ್ತದೋ, ಅಧರ್ಮವು ಹೆಚ್ಚಾಗುತ್ತದೋ, ಸಾಧುಗಳ ಉದ್ಧಾರಕ್ಕಾಗಿ, ದುಷ್ಕೃತ್ಯಗಳ ವಿನಾಶದ ಮೂಲಕ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗದಲ್ಲೂ ಅವತರಿಸುತ್ತೇನೆ) ಎಂಬ ಗೀತೋಪದೇಶಗೈದ ತುಂಟ ಬಾಲ ಕೃಷ್ಣನಿಗೆ ಇದು ಜನ್ಮಾಷ್ಟಮಿಯ ಸಂಭ್ರಮ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಡಿಸಿದಳು ಯಶೋದೆ, ಜಗದೋದ್ಧಾರನಾ... ಎಂಬ ಪುರಂದರದಾಸರ ಹಾಡು ಜನಜನಿತ. ಈ ಜಗತ್ತನ್ನೇ ಪೊರೆಯುವ ತುಂಟ ಕೃಷ್ಣನನ್ನು ಆಡಿಸುವ ಯಶೋದೆ ಅದೆಷ್ಟು ಪುಣ್ಯವಂತಳು! ಎಂಬ ಉದ್ಗಾರ ಮನದೊಳಗೆ ಅಭಿವ್ಯಕ್ತವಾಗುವುದರೊಂದಿಗೆ ಈ ಸಾಲುಗಳು ಭಕ್ತಿ ಭಾವವನ್ನು ಸ್ಫುರಿಸುತ್ತವೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕೃಷ್ಣಾವತಾರ ವಿವರಿಸುವ ಸ್ತೋತ್ರ </font><font style=' color:#000000;'></b></font><br/><font  style='font-size:11pt; color:#000000'>ಜಗತ್ತಿನ ಉದ್ಧಾರಕ್ಕಾಗಿ ಮಹಾವಿಷ್ಣುವು ತಳೆದ ಹತ್ತು ಅವತಾರಗಳಲ್ಲಿ ಶ್ರೇಷ್ಠವೂ, ಜನಜನಿತವೂ, ಮತ್ತು ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇರುವುದೆಂದರೆ ಎಂಟನೇ ಅವತಾರವಾದ ಶ್ರೀಕೃಷ್ಣಾವತಾರ. ದ್ವಾಪರ ಯುಗದಲ್ಲಿ ಶ್ರೀಹರಿಯು ಮಾಡಿದ ಮುಖ್ಯ ಕಾರ್ಯಗಳನ್ನು ಪುಣ್ಯ ಪುರುಷರು ಈ ಕೆಳಗಿನ ಶ್ಲೋಕದಲ್ಲಿ ಸಂಕ್ಷಿಪ್ತವಾಗಿ ವರ್ಣಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆದೌ ದೇವಕೀ ಗರ್ಭ ಜನನಂ</font><br/><font  style='font-size:11pt; color:#000000'>ಗೋಪೀ ಗೃಹೇ ವರ್ಧನಂ</font><br/><font  style='font-size:11pt; color:#000000'>ಮಾಯಾ ಪೂತನಿ ಜೀವಿತಾಪಹರಣಂ</font><br/><font  style='font-size:11pt; color:#000000'>ಗೋವರ್ಧನೋದ್ಧಾರಣಂ |</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಂಸಚ್ಛೇದನ ಕೌರವಾದಿ ಮಥನಂ</font><br/><font  style='font-size:11pt; color:#000000'>ಕುಂತೀ ಸುತಃ ಪಾಲನಂ</font><br/><font  style='font-size:11pt; color:#000000'>ಶ್ರೀಮದ್ಭಾಗವತ ಪುರಾಣ ಪುಣ್ಯ ಕಥಿತಂ</font><br/><font  style='font-size:11pt; color:#000000'>ಶ್ರೀ ಕೃಷ್ಣ ಲೀಲಾಮೃತಂ ||</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಎಂಟು ಸಾಲುಗಳು ಶ್ರೀಕೃಷ್ಣನ ಎಂಟನೇ ಅವತಾರದ ಲೀಲೆಗಳನ್ನೆಲ್ಲಾ ವಿವರಿಸುತ್ತವೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಅಧರ್ಮಿಗಳಿಗೆ ಬಂಧು ಮೋಹ ಸಲ್ಲದು...</font><font style=' color:#000000;'></b></font><br/><font  style='font-size:11pt; color:#000000'>ಶ್ರೀಕೃಷ್ಣಾವತಾರದಲ್ಲಿ ಗಮನಿಸಬೇಕಾದ ಒಂದು ಮಹತ್ವಪೂರ್ಣ ಅಂಶವೆಂದರೆ ಇಲ್ಲಿ ಮಾನವೀಯ ಸಂಬಂಧಗಳಿಗೆ ಎಡೆಯಿಲ್ಲ, ಅಧರ್ಮ ಮಾಡಿದವರು ಬಂಧುಗಳೇ ಆದರೂ ಅವರಿಗೆ ಶಿಕ್ಷೆ ಶತಃಸಿದ್ಧ ಎಂಬ ಸಂದೇಶ. ಬಹುಶಃ ಕಲಿಯುಗದಲ್ಲಿ ಮಾನವೀಯ ಸಂಬಂಧಗಳು ಸಂಪೂರ್ಣವಾಗಿ ಛಿದ್ರವಿಚ್ಛಿದ್ರವಾಗುವ ಮುನ್ಸೂಚನೆಯೂ ಇದಾಗಿತ್ತೇನೋ ಎಂಬಂತೆಯೂ ವಿಶ್ಲೇಷಿಸಬಹುದಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀಕೃಷ್ಣ ಹುಟ್ಟಿದ್ದು ದೇವಕೀ ಗರ್ಭದಲ್ಲಿ, ಬೆಳೆದದ್ದು ಯಶೋದೆಯ ಮಡಿಲಲ್ಲಿ. ಇಂದಿಗೂ ಕೃಷ್ಣನ ತಾಯಿಯಾಗಿ ಹೆಚ್ಚು ಗುರುತಿಸಲ್ಪಡುವವಳು ಯಶೋದೆ. ಶ್ರೀಕೃಷ್ಣನ ಬಾಲ ಲೀಲೆಗಳೆಲ್ಲವನ್ನೂ ಈ ಮಹಾತಾಯಿ ಯಶೋದೆಯೇ ಸೈರಿಸಿಕೊಂಡು ಬಂದವಳು! ಇಂಥ ಪೋಕರಿ ಪೋರನನ್ನು, ಜಗದೋದ್ಧಾರನನ್ನು ಸಹಿಸಿಕೊಳ್ಳುವುದೆಂದರೆ ಅದೇನು ಸುಲಭದ ಮಾತಾಗಿತ್ತೇ? ಯಾಕೆಂದರೆ ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ಕಾರ್ಯವೂ ವಾದ-ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಉದ್ದೇಶವಂತೂ ಎದ್ದು ಕಾಣುತ್ತಿತ್ತು. ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಕೃಷ್ಣಾವತಾರದ ಪೂರ್ವಾರ್ಧ </font><font style=' color:#000000;'></b></font><br/><font  style='font-size:11pt; color:#000000'>ಇನ್ನು ಕೃಷ್ಣಾವತಾರದ ಪೂರ್ವಭಾಗದಲ್ಲಿ ಶ್ರೀಕೃಷ್ಣನು ಪ್ರಮುಖವಾಗಿ ಗುರುತಿಸಿಕೊಳ್ಳುವುದು ತನ್ನ ಸೋದರ ಮಾವನಾದ, ಮಥುರಾಧಿಪತಿ ಕಂಸನ ವಧೆಗೆ. ಎಂಟನೇ ಅವತಾರದಲ್ಲಿ, ದೇವಕಿಯ ಎಂಟನೇ ಗರ್ಭದಿಂದ ದುಷ್ಟನಾದ ಕಂಸನಿಗೆ ಮರಣ ಎಂಬುದು ನಿಶ್ಚಯವಾಗಿತ್ತು. ಇದರಿಂದಾಗಿ ತನ್ನ ತಂಗಿ ದೇವಕಿಯನ್ನು, ಭಾವನಾದ ವಸುದೇವ ಸಹಿತವಾಗಿ ಸೆರೆಮನೆಗೆ ತಳ್ಳಿದ. ಮೊದಲ ಆರು ಶಿಶುಗಳನ್ನೂ ಹುಟ್ಟಿದ ತಕ್ಷಣವೇ ಕಂಸನು ಸಾಯಿಸಿದ. ಏಳನೇ ಮಗುವಾಗುವ ಹೊತ್ತಿಗೆ ದೇವಕೀ ಗರ್ಭದಲ್ಲಿರುವ ಶೇಷಾಂಶವನ್ನು ಆ ಜಗನ್ನಿಯಾಮಕನ ಇಚ್ಛಾನುಸಾರ ಯೋಗಮಾಯೆಯು ನಂದಗೋಕುಲದಲ್ಲಿ ರೋಹಿಣಿದೇವಿಯ ಗರ್ಭದಲ್ಲಿರಿಸಿದಳು. ರೋಹಿಣಿಯು ಪುತ್ರನಿಗೆ ಜನ್ಮವಿತ್ತಳು. ಆ ಮಗುವಿಗೆ ಬಲರಾಮ ಎಂದು ಹೆಸರಿರಿಸಲಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಂಟನೇ ಬಾರಿ ದೇವಕಿಯು ಮಗುವಿಗೆ ಜನ್ಮವಿತ್ತಳು. ಶ್ರೀಮನ್ನಾರಾಯಣನು ಆಕೆಯ ಗರ್ಭದಲ್ಲಿ ಸೇರಿಕೊಂಡ ಬಳಿಕ ವಿಜಯ ಸಂವತ್ಸರದ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮೀ ದಿನದಂದು ಅನರ್ಘ್ಯ ಪುತ್ರ ರತ್ನಕ್ಕೆ ದೇವಕಿ ಜನ್ಮ ನೀಡಿದಳು. ತಕ್ಷಣವೇ ಭಗವಾನ್ ವಿಷ್ಣುವು ವಸುದೇವ-ದೇವಕಿಗೆ ದರ್ಶನ ನೀಡಿ, ಮುಂದೇನು ಮಾಡಬೇಕೆಂದು ಸೂಚಿಸಿದನು. ಆ ಪ್ರಕಾರವಾಗಿ, ಅರ್ಧರಾತ್ರಿ, ಘೋರ ಮಳೆ, ಕಾವಲುಗಾರರೆಲ್ಲರೂ ಭರ್ಜರಿ ನಿದ್ರೆಯಲ್ಲಿದ್ದಾಗ ವಸುದೇವನು ಈ ಶಿಶುವನ್ನು ಹೊತ್ತು ಆದಿಶೇಷನ ಛತ್ರ ರಕ್ಷಣೆಯೊಂದಿಗೆ ನಂದಗೋಕುಲಕ್ಕೆ ತೆರಳಿದ. ನಂದಗೋಪನ ಮನೆಯಲ್ಲಿ ಯಶೋದಾ ದೇವಿಯ ಮಡಿಲಲ್ಲಿದ್ದ ಹೆಣ್ಣು ಮಗುವಿನ ಸ್ಥಾನದಲ್ಲಿ ಶ್ರೀಕೃಷ್ಣನನ್ನಿರಿಸಿದ ವಸುದೇವ, ಆ ಹೆಣ್ಣು ಮಗುವನ್ನು ಮರಳಿ ಮಥುರೆಯ ಕಾರಾಗೃಹಕ್ಕೆ ತಂದ ತಕ್ಷಣ ಹೆಣ್ಣು ಮಗುವಿನ ಧ್ವನಿ ಕೇಳಿತು. ಕಾವಲುಗಾರರು ಮಗು ಹುಟ್ಟಿತೆಂದು ಕಂಸನಿಗೆ ಸುದ್ದಿ ಮುಟ್ಟಿಸಿದರು. ಕಂಸ ಬಂದು ಮಗುವನ್ನು ಕೊಲ್ಲಲೆತ್ನಿಸಿದಾಗ, ಮಗು ರೂಪದಲ್ಲಿರುವ ಯೋಗ ಮಾಯೆ ಮೇಲಕ್ಕೆ ಜಿಗಿದು, ನಿನ್ನನ್ನು ಕೊಲ್ಲುವ ಮಗು ನಂದಗೋಕುಲದಲ್ಲಿ ಬೆಳೆಯುತ್ತಿದೆ ಎಂದು ಹೇಳಿ ಮಾಯವಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಂಸನು ಶ್ರೀಕೃಷ್ಣನನ್ನು ಕೊಲ್ಲಲು ಅದೆಷ್ಟೋ ದಾನವರನ್ನು, ದೈತ್ಯರನ್ನು ಕಳುಹಿಸುತ್ತಾನೆ. ಬಕ, ಶಕಟ, ಧೇನುಕ, ತೃಣೀಕೃತ ತೃಣಾವರ್ತ, ಪೂತನಿ ಮುಂತಾದವರೆಲ್ಲರೂ ಶ್ರೀಕೃಷ್ಣನ ಬಾಲ ಲೀಲೆಗಳಿಂದಲೇ ಮೋಕ್ಷ ಮುಖಿಗಳಾದರು. ಆ ಮೇಲೆ ಗೋವರ್ಧನೋದ್ಧಾರ, ಕಾಳೀಯ ಮರ್ದನ, ಗೋಪಿಕಾ ವಸ್ತ್ರಾಪಹರಣ, ಗೊಲ್ಲರೊಂದಿಗೆ ಸೇರಿಕೊಂಡು ಲೀಲಾ ವಿನೋದ, ಚಾಣೂರ-ಮುಷ್ಟಿಕಾಸುರ ಸಂಹಾರ, ಕಂಸ ವಧೆ, ಮಾಗಧ (ಜರಾಸಂಧ) ಸಂಹಾರ, ಕಾಲಯವ ಸಂಹಾರ, ಶಿಶುಪಾಲ-ದಂತವಕ್ತ್ರರಿಗೆ ಮೋಕ್ಷ, ರುಕ್ಮಿಣೀ ವಿವಾಹ, ಶ್ಯಮಂತಕೋಪಾಖ್ಯಾನ, ಮುರಾಸುರ-ನರಕಾಸುರ ವಧೆ, ಹದಿನಾರು ಸಾವಿರ ಸುಂದರಿಯರ ವಿವಾಹ, ಪೌಂಡ್ರಕ ಸಂಹಾರ, ಆನಂತರ ವಿಶ್ವವಿಖ್ಯಾತವಾದ ಮತ್ತು ಪ್ರತಿಯೊಬ್ಬರ ಬಾಯಲ್ಲೂ ಸದಾ ಕುಣಿದಾಡುತ್ತಿರುವ ಮಹಾಭಾರತ ಕಥಾನಕಗಳು ಶ್ರೀಕೃಷ್ಣಾವತಾರದ, ಕಪಟನಾಟಕ ಸೂತ್ರದಾರಿ ಬಿರುದಾಂಕಿತ ಕೃಷ್ಣ ಲೀಲೆಗಳ ಪಕ್ಷಿನೋಟ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಹಾಭಾರತಾವಧಿಯಲ್ಲಿ ದ್ರೌಪದಿಗೆ ಅಕ್ಷಯ ವಸನವನ್ನಿತ್ತು ಸಲಹಿದ ಶ್ರೀಕೃಷ್ಣ, ದ್ರೌಪದಿಗೆ ಅಕ್ಷಯ ಪಾತ್ರೆಯ ಮಹಿಮೆ ಪ್ರದರ್ಶನ, ವಿದುರನ ಭಕ್ತಿಯಲ್ಲಿ ಮಿಂದು ಹಾಲಿನ ಹೊಳೆ ಹರಿಸಿದ್ದು, ಬಂಧುಗಳನ್ನು ಕೊಲ್ಲಲು ಹಿಂದೇಟು ಹಾಕಿದ ಅರ್ಜುನನಿಗೆ ಗೀತೋಪದೇಶ ಮಾಡಿ, ಕುರುಕ್ಷೇತ್ರ ಯುದ್ಧದ ನಿರ್ವಹಣೆ, ಹಲವು ತಂತ್ರೋಪಾಯಗಳಿಂದ ಎದುರಾಳಿಗಳನ್ನು ಮಟ್ಟ ಹಾಕುವಲ್ಲಿ ಶ್ರೀಕೃಷ್ಣ ಪ್ರದರ್ಶಿಸಿದ ಬುದ್ಧಿಮತ್ತೆ... "ಮಮ ಪ್ರಾಣಾಹಿ ಪಾಂಡವಃ" ಎನ್ನುತ್ತಾ ಧರ್ಮ ಸಂಸ್ಥಾಪನಾರ್ಥವಾಗಿ ಧರ್ಮಭೀರುಗಳಾದ ಪಾಂಡವರ ರಕ್ಷಣೆ... ಇತ್ಯಾದಿಗಳೆಲ್ಲವೂ ಭಾಗವತ ಪುರಾಣ ಪುಣ್ಯಪಠಣದಿಂದ ಈಗಲೂ ಭಕ್ತಿಯ ಹೊಳೆ ಹರಿಸುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದೇ, ಮಾನವೀಯ ಸಂಬಂಧಗಳ ಬಗ್ಗೆ ಬಂದಾಗ, ಶ್ರೀಕೃಷ್ಣನು ತನ್ನ ಮಾವನನ್ನೇ ಕೊಂದಿದ್ದು, ಪಾಂಡವರು ತಮ್ಮ ಸಹೋದರರನ್ನು, ಅಜ್ಜ, ಗುರು ಮತ್ತಿತರ ಬಂಧು ಬಾಂಧವರನ್ನು ಕೊಲ್ಲಲು ಪ್ರೇರಣೆಯಾಗಿದ್ದು, ಅತ್ಯಂತ ಆತ್ಮೀಯರು, ಭಕ್ತರು ಎನಿಸಿಕೊಂಡ ಹನುಮಂತ, ಭೀಮ, ಅರ್ಜುನ... ಮುಂತಾದವರೆಲ್ಲರ ಗರ್ವ ಭಂಗ ಮಾಡಿದ್ದು...ಇವೆಲ್ಲವುಗಳನ್ನು ಗಮನಿಸಿದರೆ, ಧರ್ಮೋದ್ಧಾರವೇ ಏಕೈಕ ಗುರಿಯಾಗಿತ್ತು ಎಂಬುದು ವೇದ್ಯವಾಗುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಅಧರ್ಮಿಗಳಿಗೆ ಸರ್ವನಾಶದ ಸಂದೇಶ </font><font style=' color:#000000;'></b></font><br/><font  style='font-size:11pt; color:#000000'>ಅಲ್ಲದೆ, ದೇವರು ಏನನ್ನಾದರೂ ಪ್ರೀತಿಯಿಂದ, ಭಕ್ತಿಯಿಂದ ಕೊಟ್ಟರೆ ಸಂಪ್ರೀತನಾಗುತ್ತಾನೆ ಎಂಬುದಕ್ಕೆ ಸುಧಾಮ ಚರಿತ್ರೆಯ ಮೂಲಕ ತೋರಿಸಿಕೊಟ್ಟಿದ್ದಾನೆ ಭಗವಾನ್ ಶ್ರೀಕೃಷ್ಣ. ಮದ-ಮತ್ಸರಾದಿಗಳು, ಅಧರ್ಮ ಅನ್ಯಾಯಗಳು ಹೆಚ್ಚಾದರೆ ಒಂದು ಕುಲವೇ ಸರ್ವವಾಶವಾಗುತ್ತದೆ ಎಂಬುದನ್ನು ಎಚ್ಚರಿಕೆ ನೀಡುವುದಕ್ಕಾಗಿಯೇ, ಯದು ವಂಶವು ಪರಸ್ಪರ ಹುಲ್ಲಿನಿಂದ ಹೊಡೆದಾಡಿಕೊಂಡು ನಾಶವಾಗುವಲ್ಲಿ ಶ್ರೀಕೃಷ್ಣನ ಇಚ್ಛೆಯೂ ಉಲ್ಲೇಖನೀಯ. ಗರ್ಗ ಮುನಿಯಿಂದ ಯದುವಂಶೀಯರು ಶಾಪಗ್ರಸ್ತವಾದವಾದಂತೆ, ಅದೇ ಒನಕೆಯ ಭಾಗವಿದ್ದ ಬಾಣವು ಕಾಲಿಗೆ ತಗುಲಿದ ನೆಪದೊಂದಿಗೆ ಯದುವಂಶಜನಾದ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಗೊಳಿಸಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ, ಒಳ್ಳೆಯ ತುಂಟ ಮಗುವಾಗಿ, ಹೊಣೆಯರಿತ ಅಣ್ಣನಾಗಿ, ಹಿರಿಯರನ್ನು ಗೌರವಿಸುವ ತಮ್ಮನಾಗಿ, ಮಿತ್ರನಿಗಾಗಿ ಏನು ಮಾಡಲೂ ಸಿದ್ಧವಿರುವ ಗೆಳೆಯನಾಗಿ, ರಾಜಕೀಯದಲ್ಲಿ ಚತುರನೂ, ಪರಾಕ್ರಮಿಯೂ ಆಗಿ ಅವತಾರ ಪೂರ್ಣಗೊಳಿಸಿದ ಶ್ರೀಕೃಷ್ಣನ ಉಪದೇಶಗಳು ಇಂದಿಗೂ ಪ್ರಸ್ತುತ. ಭಗವದ್ಗೀತೆಯಲ್ಲಿ ಸಮಾಜದ ಪ್ರತಿಯೊಂದು ಆಗು ಹೋಗುಗಳಿಗೂ, ಸಮಸ್ಯೆಗಳಿಗೂ ಪರಿಹಾರ ದೊರೆಯತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂತಿಪ್ಪ ಶ್ರೀಕೃಷ್ಣನ ನಾಮಸ್ಮರಣೆಯೊಂದಿಗೆ ಬದುಕು ಮಂಗಳವಾಗುತ್ತದೆ. ಅರ್ಘ್ಯಪ್ರಿಯನಾದ, ಅರಳೆಲೆ ಮಾಂಗಾಯಿ, ಅವಲಕ್ಕಿ ಪ್ರಿಯನಾದ, ನವನೀತ ಚೋರನಾದ ಶ್ರೀಕೃಷ್ಣನನ್ನು ನಮಿಸೋಣ, ಜನ್ಮಾಷ್ಟಮಿ ಸಂಭ್ರಮ ಎಲ್ಲೆಡೆ ಪಸರಿಸಲಿ. ಶ್ರೀಕೃಷ್ಣನ ಆಶಯದಂತೆ ಲೋಕದಲ್ಲಿ ಧರ್ಮ ಸಂಸ್ಥಾಪನೆಯಾಗಲಿ.</font>]]></content:encoded>
      <pubDate>Sat, 20 Aug 2011 16:36:52 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[festivals]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಮಾಹೇಶ್ವರದಲ್ಲಿ ಮಹಾಮೃತ್ಯುಂಜಯ ರಥ ಯಾತ್ರೆ]]></title>
      <link>https://kannada.webdunia.com/article/festivals/ಮಾಹೇಶ್ವರದಲ್ಲಿ-ಮಹಾಮೃತ್ಯುಂಜಯ-ರಥ-ಯಾತ್ರೆ-111010800042_1.htm</link>
      <guid>https://kannada.webdunia.com/article/festivals/ಮಾಹೇಶ್ವರದಲ್ಲಿ-ಮಹಾಮೃತ್ಯುಂಜಯ-ರಥ-ಯಾತ್ರೆ-111010800042_1.htm</guid>
      <media:thumbnail url="http:"/>
      <image>http:</image>
      <description><![CDATA[ಮಾಹೇಶ್ವರ (ಮ.ಪ್ರ.): ಐತಿಹಾಸಿಕವಾದ ಮಹಾಬಲೇಶ್ವರದಲ್ಲಿ ಭಾನುವಾರ (ಜ.9) ಖ್ಯಾತ ಮಹಾಮೃತ್ಯುಂಜಯ ರಥ ಯಾತ್ರೆ ನಡೆಯಲಿದೆ. ಇದು ರಥಯಾತ್ರೆ ಮಹೋತ್ಸವದ ಯಶಸ್ವೀ ಐದನೇ ವರ್ಷವಾಗಿದೆ.]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1101/08/images/img1110108042_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಐತಿಹಾಸಿಕವಾದ ಮಹಾಬಲೇಶ್ವರದಲ್ಲಿ ಭಾನುವಾರ (ಜ.9) ಖ್ಯಾತ ಮಹಾಮೃತ್ಯುಂಜಯ ರಥ ಯಾತ್ರೆ ನಡೆಯಲಿದೆ. ಇದು ಇಲ್ಲಿ ನಡೆಯುತ್ತಿರುವ ರಥಯಾತ್ರೆ ಮಹೋತ್ಸವದ ಯಶಸ್ವೀ ಐದನೇ ವರ್ಷವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಥ ಯಾತ್ರೆಯು ಸ್ವಾಧ್ಯಾಯ ಭವನ (ಮಹಾಲಕ್ಷ್ಮೀ ನಗರ ಕಾಲನಿ)ದಿಂದ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದ್ದು, ಪವಿತ್ರ ನರ್ಮದಾ ನದಿ ತಟದಲ್ಲಿ ಸಾಯಂಕಾಲ 5.30ರ ವೇಳೆಗೆ ಕೊನೆಗೊಳ್ಳಲಿದೆ. ಪ್ರತಿವರ್ಷ ನಡೆಯುವ ಈ ಅವಿಸ್ಮರಣೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೋಳ್ಕರ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಮಾಹೇಶ್ವರ ನಗರಿ. ಇದನ್ನು ಪ್ರಖ್ಯಾತ ರಾಣಿ ದೇವಿ ಅಹಿಲ್ಯಾ ಹೋಳ್ಕರ್ ಹಲವಾರು ವರ್ಷಗಳ ಕಾಲ ಆಳಿದ್ದರು.</font><br/><font  style='font-size:11pt; color:#000000'></font><br/>||<font  style='font-size:11pt; color:#000000'>ಮೃತ್ಯುಂಜಯ ಮಹಾರುದ್ರ ತ್ರಾಹಿಮಾಂ ಶರಣಾಗತಂ ಜನಂ ಮೃತ್ಯು ಜರಾ ವ್ಯಾಧಿ ಪೀಡನಂ ಕರ್ಮ ಬಂಧನ</font><font style='font-size:11pt;'>ೇ||</font>]]></content:encoded>
      <pubDate>Sat, 08 Jan 2011 19:11:18 +0530</pubDate>
      <updatedDate>Tue, 15 Apr 2014 16:37:17 +0530</updatedDate>
      <category><![CDATA[festivals]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಬಾಬಾ ಜನ್ಮದಿನ: ಸತ್ಯ ಸಾಯಿ ವಿದ್ಯಾ ವಾಹಿನಿ ಯೋಜನೆ ಜಾರಿ]]></title>
      <link>https://kannada.webdunia.com/article/festivals/ಬಾಬಾ-ಜನ್ಮದಿನ-ಸತ್ಯ-ಸಾಯಿ-ವಿದ್ಯಾ-ವಾಹಿನಿ-ಯೋಜನೆ-ಜಾರಿ-110112400063_1.htm</link>
      <guid>https://kannada.webdunia.com/article/festivals/ಬಾಬಾ-ಜನ್ಮದಿನ-ಸತ್ಯ-ಸಾಯಿ-ವಿದ್ಯಾ-ವಾಹಿನಿ-ಯೋಜನೆ-ಜಾರಿ-110112400063_1.htm</guid>
      <media:thumbnail url="http:"/>
      <image>http:</image>
      <description><![CDATA[ಪುಟ್ಟಪರ್ತಿ: ಶ್ರೀ ,ಸತ್ಯ ಸಾಯಿಬಾಬಾ  85ನೇ ಜನ್ಮದಿನಾಚರಣೆ ಅಂಗವಾಗಿ ನವೆಂಬರ್ 15ರಿಂದ ನವೆಂಬರ್ 23ರವರೆಗೆ ನಡೆದ  'ಫೆಸ್ಟಿವಲ್ ಆಫ್ ಡಿವೈನ್ ಲವ್' ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಬಾಬಾ ಆಶೀರ್ವಾದ ಪಡೆದರು ಎಂದು  ಮೂಲಗಳು ತಿಳಿಸಿವೆ.]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1011/24/images/img1101124063_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> <font  style='font-size:11pt; color:#000000'>ಶ್ರೀ ,ಸತ್ಯ ಸಾಯಿಬಾಬಾ  85ನೇ ಜನ್ಮದಿನಾಚರಣೆ ಅಂಗವಾಗಿ ನವೆಂಬರ್ 15ರಿಂದ ನವೆಂಬರ್ 23ರವರೆಗೆ ನಡೆದ  'ಫೆಸ್ಟಿವಲ್ ಆಫ್ ಡಿವೈನ್ ಲವ್' ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಬಾಬಾ ಆಶೀರ್ವಾದ ಪಡೆದರು ಎಂದು  ಮೂಲಗಳು ತಿಳಿಸಿವೆ.   </font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಾಬಾ ಜನ್ಮದಿನಾಚರಣೆ ಅಂಗವಾಗಿ ಪುಟ್ಟಪರ್ತಿ ಪಟ್ಟಣದಾದ್ಯಂತ ತಳಿರು ತೋರಣಗಳಿಂದ ಸಿಂಗರಿಸಿ ಸಂಭ್ರಮಾಚರಣೆಯಲ್ಲಿ ಭಕ್ತಾದಿಗಳು  ತೊಡಗಿದ್ದರು.ಕಳೆದ ಒಂದು ವಾರದ ಅವಧಿಯಲ್ಲಿ ಸಾವಿರಾರು ಸಂಖ್ಯೆಯ ದೇಶ ವಿದೇಶಗಳ ಭಕ್ತರು ಪುಟ್ಟಪರ್ತಿಗೆ ಆಗಮಿಸಿದ್ದರು. ದೇಶದ  16 ರಾಜ್ಯಗಳಲ್ಲಿ ದೂರದರ್ಶನ ನೇರ ಪ್ರಸಾರ ಮಾಡಿತ್ತು.ವಿಶ್ವದಾದ್ಯಂತ 62 ರಾಷ್ಟ್ರಗಳಲ್ಲಿ ಪ್ರಸಾರ ಕಾರ್ಯಕ್ರಮವನ್ನು ಬಿತ್ತರಿಸಲಾಗಿದೆ.   </font><br/><font  style='font-size:11pt; color:#000000'></font><br/><font  style='font-size:11pt; color:#000000'>ಖ್ಯಾತ ಸಂಗೀತಕಾರರಾದ ಹರಿಹರನ್, ಶಂಕರ್ ಮಹಾದೇವನ್ ಮತ್ತು ಸುರೇಶ್ ವಾಡೇಕರ್ ತಮ್ಮ ಸಂಗೀತ ಪ್ರತಿಭೆಯನ್ನು  ಪರಿಚಯಿಸಿದರು ಎಂದು ಆಶ್ರಮದ ಅಧಿಕಾರಿಗಳು ತಿಳಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಾರ್ಯಕ್ರಮದಲ್ಲಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಎಸ್.ಕೃಷ್ಣ, ಕೇಂದ್ರದ ಉಕ್ಕು ಖಾತೆ ಸಚಿವ ವೀರಭದ್ರಸಿಂಗ್,  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್,ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ, ಆಂಧ್ರಪ್ರದೇಶ  ರಾಜ್ಯಪಾಲ ನರಸಿಂಹನ್, ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್,ತಮಿಳುನಾಡು ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಹಾರಾಷ್ಟ್ರ  ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್, ರತನ್ ಟಾಟಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.   </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸತ್ಯ ಸಾಯಿಬಾಬಾ ಅವರ 85ನೇ ಜನ್ಮದಿನಾಚರಣೆ ಅಂಗವಾಗಿ, ಅಖಿಲ ಭಾರತ ಸತ್ಯ ಸಾಯಿ ಸಂಸ್ಥೆಯ ಅಧ್ಯಕ್ಷರಾದ ವಿ.ಶ್ರೀನಿವಾಸನ್  ಕೆಲ ಯೋಜನೆಗಳನ್ನು ಘೋಷಿಸಿದರು. ಪುಟ್ಟಪರ್ತಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರಿ ಆಸ್ಪತ್ರೆಯ ಸೇವೆಯನ್ನು ಪಡೆಯುತ್ತಿರುವ  ಗ್ರಾಮಸ್ಥರಿಗೆ ಉಚಿತವಾಗಿ ಪ್ರತಿನಿತ್ಯ ಪೋಷ್ಟಿಕಾಂಶ ಆಹಾರ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.   </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀ ಸತ್ಯ ಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಎಸ್‌.ವಿ.ಗಿರಿ ಮಾತನಾಡಿ,  ಶ್ರೀ ಸತ್ಯ ಸಾಯಿ ವಿದ್ಯಾ ವಾಹಿನಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ನಡತೆಯನ್ನು ಕಲಿಸಿಕೊಡಲಾಗುತ್ತದೆ.  ತಂತ್ರಜ್ಞಾನವನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾಗಿದೆ ಎಂದರು.  </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿದ್ಯಾವಾಹಿನಿ ಯೋಜನೆಯನ್ನು ರತನ್ ಟಾಟಾ, ಎಸ್‌.ವಿ.ಗಿರಿ ಮತ್ತು ಟಿಸಿಎಸ್ ಮುಖ್ಯಸ್ಥ ಎನ್‌.ಚಂದ್ರಶೇಖರ್ ವಿದ್ಯಾವಾಹಿನಿ  ಯೋಜನೆಯನ್ನು ಜಾರಿಗೊಳಿಸಿದರು.</font>]]></content:encoded>
      <pubDate>Wed, 24 Nov 2010 17:42:42 +0530</pubDate>
      <updatedDate>Tue, 15 Apr 2014 16:20:31 +0530</updatedDate>
      <category><![CDATA[festivals]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA[ಯುವಕರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿಕೆ ಅಗತ್ಯ:ಪ್ರಧಾನಿ]]></title>
      <link>https://kannada.webdunia.com/article/festivals/ಯುವಕರಿಗೆ-ಮೌಲ್ಯಾಧಾರಿತ-ಶಿಕ್ಷಣ-ನೀಡಿಕೆ-ಅಗತ್ಯ-ಪ್ರಧಾನಿ-110112200059_1.htm</link>
      <guid>https://kannada.webdunia.com/article/festivals/ಯುವಕರಿಗೆ-ಮೌಲ್ಯಾಧಾರಿತ-ಶಿಕ್ಷಣ-ನೀಡಿಕೆ-ಅಗತ್ಯ-ಪ್ರಧಾನಿ-110112200059_1.htm</guid>
      <media:thumbnail url="http:"/>
      <image>http:</image>
      <description><![CDATA[ಪುಟ್ಟಪರ್ತಿ: ಯುವಕರು ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಯಶಸ್ವಿನತ್ತ ಪಯಣ ಬೆಳೆಸಲು ಸಾಧ್ಯ.ಸತ್ಯ ಸಾಯಿ ಸಂಸ್ಥೆ ಶಿಕ್ಷಣದ ಜೊತೆಗೆ  ಚಾರಿತ್ರ್ಯಶುದ್ದಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಸಂತಸದ ಸಂಗತಿ. ಇತರ ಶಿಕ್ಷಣ ಸಂಸ್ಥೆಗಳು ಮೌಲ್ಯಾಧಾರಿತ ಶಿಕ್ಷಣವನ್ನು  ನೀಡಬೇಕು ಎಂದು ಪ್ರಧಾನಮಂತ್ರಿ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1011/22/images/img1101122059_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> <font  style='font-size:11pt; color:#000000'>ಯುವಕರು ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಯಶಸ್ವಿನತ್ತ ಪಯಣ ಬೆಳೆಸಲು ಸಾಧ್ಯ.ಸತ್ಯ ಸಾಯಿ ಸಂಸ್ಥೆ, ಶಿಕ್ಷಣದ ಜೊತೆಗೆ  ಚಾರಿತ್ರ್ಯಶುದ್ದಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಸಂತಸದ ಸಂಗತಿ. ಇತರ ಶಿಕ್ಷಣ ಸಂಸ್ಥೆಗಳು ಮೌಲ್ಯಾಧಾರಿತ ಶಿಕ್ಷಣವನ್ನು  ನೀಡಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕರೆ ನೀಡಿದ್ದಾರೆ.  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀ ಸತ್ಯ ಸಾಯಿ ಬಾಬಾ ಅವರ 85ನೇ ಹುಟ್ಟುಹಬ್ಬದ ಅಂಗವಾಗಿ ಸಂಸ್ಥೆ ಆಯೋಜಿಸಿದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ  ಡಾ.ಸಿಂಗ್ ಮಾತನಾಡುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಂದ್ರಪ್ರದೇಶದ ಜಿಲ್ಲೆಗಳಲ್ಲಿರುವ ಬರಗಾಲ ಪೀಡಿತ ಸುಮಾರು 731 ಗ್ರಾಮಗಳಲ್ಲಿ ಬಡವರಿಗೆ ನೆರವಾಗಲು ಹಮ್ಮಿಕೊಂಡ  ಕಾರ್ಯಕ್ರಮಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಗೋದಾವರಿ ಜಿಲ್ಲೆಗಳಲ್ಲಿ ನೀರು ಸರಬರಾಜು ವ್ಯವಸ್ಥೆ, ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ,  ಬಡ ರೋಗಿಗಳಿಗಾಗಿ ತುರ್ತುವಾಹನ ವ್ಯವಸ್ಥೆಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಳೆದ 1981ರ ನವೆಂಬರ್ 22 ರಂದು ಆರಂಭವಾದ ಶ್ರೀ ಸತ್ಯ ಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಪ್ರಶಾಂತಿ ನಿಲಯಂ  ಡೀಮ್ಡ್ ಯುನಿವರ್ಸಿಟಿಯಾಗಿದ್ದು, ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಶನ್‌(ಯುಜಿಸಿ) ಇಲಾಖೆಯಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಡೀಮ್ಡ್ ಯುನಿವರ್ಸಿಟಿಯಡಿ ಅನಂತ್‌ಪುರ್‌ ಜಿಲ್ಲೆಯಲ್ಲಿ ಮೂರು ಕಾಲೇಜ್‌ಗಳು, ವೈಟ್‌ಫಿಲ್ಟ್ (ಕರ್ನಾಟಕ) ಮತ್ತು ಪ್ರಶಾಂತಿ  ನಿಲಯಂ(ಆಂಧ್ರಪ್ರದೇಶ)ನಲ್ಲಿ ತಲಾ ಒಂದೊಂದು ಕಾಲೇಜ್‌ಗಳ ಉಸ್ತುವಾರಿಯನ್ನು ವಹಿಸಿಕೊಂಡಿವೆ.ಪ್ರಶಾಂತಿ ನಿಲಯಂ ಕಾಲೇಜಿನಲ್ಲಿ  ಪುರಾತನ 'ಗುರುಕುಲ' ಶಿಕ್ಷಣವಾದ ಸತ್ಯ, ಶಾಂತಿ, ಕರ್ತವ್ಯ, ಧರ್ಮ, ಶಿಸ್ತು, ಏಕತೆ, ಗೌರವ, ದಯಾಪರತೆ ಮತ್ತು ಅಹಿಂಸೆಯ ಶಿಕ್ಷಣವನ್ನು  ನೀಡುತ್ತಿದೆ.  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸತ್ಯ ಸಾಯಿಬಾಬಾ ನಾಳೆ ತಮ್ಮ 85ನೇ ಹುಟ್ಟುಹಬ್ಬದ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳಲಿರುವುದರಿಂದ, ಪುಟ್ಟಪರ್ತಿಯಾದ್ಯಂತ  ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ವಿಶ್ವದಲ್ಲಿರುವ ಎಲ್ಲಾ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ  ಅಧಿಕಾರಿಗಳು ತಿಳಿಸಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಘಟಿಕೋತ್ವವ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಸಯ್ಯ ಸೇರಿದಂತೆ  ಹಲವಾರು ಗಣ್ಯರು ಉಪಸ್ಥಿತರಿದ್ದರು. </font>]]></content:encoded>
      <pubDate>Mon, 22 Nov 2010 17:58:01 +0530</pubDate>
      <updatedDate>Tue, 15 Apr 2014 16:20:31 +0530</updatedDate>
      <category><![CDATA[festivals]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA[ಸತ್ಯ ಸಾಯಿಬಾಬಾ 85ನೇ ಜನ್ಮದಿನ, 85 ಜೋಡಿಗೆ ವಿವಾಹ]]></title>
      <link>https://kannada.webdunia.com/article/festivals/ಸತ್ಯ-ಸಾಯಿಬಾಬಾ-85ನೇ-ಜನ್ಮದಿನ-85-ಜೋಡಿಗೆ-ವಿವಾಹ-110111900069_1.htm</link>
      <guid>https://kannada.webdunia.com/article/festivals/ಸತ್ಯ-ಸಾಯಿಬಾಬಾ-85ನೇ-ಜನ್ಮದಿನ-85-ಜೋಡಿಗೆ-ವಿವಾಹ-110111900069_1.htm</guid>
      <media:thumbnail url="http:"/>
      <image>http:</image>
      <description><![CDATA[ಪುಟ್ಟಪರ್ತಿ: ಶ್ರೀ ಸತ್ಯಸಾಯಿಬಾಬಾ ಅವರ 85ನೇ ಹುಟ್ಟು ಹಬ್ಬ ಪ್ರಯುಕ್ತ ನವೆಂಬರ್ 15ರಿಂದ ಆರಂಭವಾಗಿರುವ ಕಾರ್ಯಕ್ರಮಗಳಲ್ಲಿ ಶುಕ್ರವಾರ ಪಾಲ್ಗೊಂಡ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸತ್ಯಸಾಯಿ ಬಾಬಾ ಅವರ ದೃಷ್ಟಿಕೋನವು ಪ್ರಗತಿಪರವಾಗಿದೆ ಎಂದು ಶ್ಲಾಘಿಸಿದರು.

ಮಾಜಿ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1011/19/images/img1101119069_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'>ಪುಟ್ಟಪರ್ತಿ: ಶ್ರೀ ಸತ್ಯಸಾಯಿಬಾಬಾ ಅವರ 85ನೇ ಹುಟ್ಟು ಹಬ್ಬ ಪ್ರಯುಕ್ತ ನವೆಂಬರ್ 15ರಿಂದ ಆರಂಭವಾಗಿರುವ ಕಾರ್ಯಕ್ರಮಗಳಲ್ಲಿ ಶುಕ್ರವಾರ ಪಾಲ್ಗೊಂಡ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸತ್ಯಸಾಯಿ ಬಾಬಾ ಅವರ ದೃಷ್ಟಿಕೋನವು ಪ್ರಗತಿಪರವಾಗಿದೆ ಎಂದು ಶ್ಲಾಘಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನವಾದ ಶುಕ್ರವಾರ ಈಶ್ವರಮ್ಮ ಮಹಿಳಾ ಸಂಕ್ಷೇಮ ಟ್ರಸ್ಟ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಅವರು ಭಾಗವಹಿಸಿ, ಮಹಿಳಾ ಸಬಲೀಕರಣಕ್ಕೆ ಶ್ರೀ ಸತ್ಯ ಸಾಯಿ ಬಾಬಾ ಮತ್ತು ಅವರ ಸಂಘಟನೆ ಮಾಡುತ್ತಿರುವ ಶ್ರಮವನ್ನು ಶ್ಲಾಘಿಸಿದರು. ಆಂಧ್ರ ಪ್ರದೇಶದ ಮಾಹಿತಿ ಸಚಿವೆ ಜೆ.ಗೀತಾ ರೆಡ್ಡಿ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.</font><br/><font  style='font-size:11pt; color:#000000'></font><br/><a href='http://kannada.webdunia.com' target=_blank>ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ</a><font  style='font-size:11pt; color:#000000'></font><br/><font  style='font-size:11pt; color:#0000FF'></font><br/>85<font  style='font-size:11pt; color:#0000FF'>ನೇ ಹುಟ್ಟು ಹಬ್ಬಕ್ಕೆ 85 ಜೋಡಿಗಳಿಗೆ ವಿವಾಹ </font><font style='font-size:12pt; color:#000000;'></font><br/><!--Image--><p class="wdp_articleRImg"><p><img src='/kn/articles/1011/19/images/img1101119069_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'>ಇದಕ್ಕೆ ಮೊದಲು ಬುಧವಾರ, ಸತ್ಯ ಸಾಯಿ ಬಾಬಾ ಆಶ್ರಮದಲ್ಲಿ 85 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ನವೆಂಬರ್ 23ರಂದು ಶ್ರೀ ಸತ್ಯ ಸಾಯಿ ಬಾಬಾ ಅವರ 85ನೇ ಜನ್ಮದಿನದ ಅಂಗವಾಗಿ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ 85 ಜೋಡಿಗಳಿಗೆ ವಿವಾಹ ಏರ್ಪಡಿಸಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಸಂದರ್ಭ ಮಾತನಾಡಿದ ಉದ್ಯಮಿ ರತನ್ ಟಾಟಾ, ಸಾಯಿ ವಿಶ್ವವಿದ್ಯಾಲಯ ಮತ್ತು ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಂತಾದ ಸಾಯಿ ಟ್ರಸ್ಟ್‌ನ ಸೌಲಭ್ಯಗಳು ಅತ್ಯದ್ಭುತ. ಸಿಬ್ಬಂದಿಯ ವೃತ್ತಿಪರತೆ ಮತ್ತು ಗುಣಮಟ್ಟವು ನನ್ನನ್ನು ಆಕರ್ಷಿಸಿದೆ ಎಂದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಾಯಂಕಾಲ ಪ್ರಖ್ಯಾತ ಕೊಳಲು ವಾದಕ ಪಂಡಿತ್ ರೋನು ಮುಜುಂದಾರ್ ಅವರಿಂದ ಕೊಳಲು ವಾದನ, ಬಳಿಕ ಸಿಕ್ಕಿಲ್ ಗುರುಚರಣ್ ಅವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಿತು.</font>]]></content:encoded>
      <pubDate>Fri, 19 Nov 2010 18:02:26 +0530</pubDate>
      <updatedDate>Tue, 15 Apr 2014 16:20:31 +0530</updatedDate>
      <category><![CDATA[festivals]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ]]></title>
      <link>https://kannada.webdunia.com/article/festivals/ಮನೆ-ಮನಸು-ಬೆಳಗಲಿ-ಶ್ರೀ-ವರ-ಮಹಾಲಕ್ಷ್ಮೀ-110081900085_1.htm</link>
      <guid>https://kannada.webdunia.com/article/festivals/ಮನೆ-ಮನಸು-ಬೆಳಗಲಿ-ಶ್ರೀ-ವರ-ಮಹಾಲಕ್ಷ್ಮೀ-110081900085_1.htm</guid>
      <media:thumbnail url="http:"/>
      <image>http:</image>
      <description><![CDATA[ಹಬ್ಬದಾಚರಣೆಗೆ ನೆಪಗಳು ಬೇಕೇ? ದಿನಗಳೆದಂತೆ ಸಂಬಂಧಗಳು ಯಾಂತ್ರಿಕವಾಗುತ್ತಿರುವ ಈ ದಿನಗಳಲ್ಲಿ, ವರಮಹಾಲಕ್ಷ್ಮೀ ವ್ರತವು ಇತ್ತೀಚೆಗೆ ಸಾಮೂಹಿಕ ಆಚರಣೆಯಾಗುತ್ತಿರುವುದು, ಕಳೆದು ಹೋದ ಮಾನವೀಯ ಬಾಂಧವ್ಯಗಳ ಬೆಸುಗೆಗೂ ಪೂರಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಬ್ಬಗಳ ಸಾರ್ವತ್ರಿಕ ಆಚರಣೆಯ ಧ್ಯೇಯವೂ ಇದೇ ...]]></description>
      <content:encoded><![CDATA[<font  style='font-size:11pt; color:#0000FF'><i>ಅವಿನಾಶ್ ಬಿ. <!--Image--><p class="wdp_articleLImg"><p><img src='/kn/articles/1008/19/images/img1100819085_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> </i></font><br/><font  style='font-size:11pt; color:#0000FF'><i>ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ </i></font><br/><font  style='font-size:11pt; color:#0000FF'><i>ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ || </font><font style=' color:#000000;'></i></font><br/><font  style='font-size:11pt; color:#000000'>ಎಂಬ ಮಂತ್ರದೊಂದಿಗೆ ಹೆಚ್ಚಿನವರು ತಮ್ಮ ಕರಗಳೆರಡನ್ನೂ ಕಂಗಳಲ್ಲಿ ತುಂಬಿಕೊಂಡು ದಿನವನ್ನಾರಂಭಿಸುತ್ತಾರೆ. ಕರದ ಅಗ್ರ ಸ್ಥಾನದಲ್ಲಿರುವವಳಾದ್ದರಿಂದ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿ ಸಂತೃಪ್ತಿ ಕಾಣುವ ಜನರೆಂದರೆ ಲಕ್ಷ್ಮೀದೇವಿಗೆ ಅಚ್ಚುಮೆಚ್ಚು. ನಾವೆಷ್ಟು ಕೊಡುತ್ತೇವೆಯೋ, ಅದಕ್ಕಿಂತ ದುಪ್ಪಟ್ಟನ್ನು ಶ್ರೀ ಮಹಾಲಕ್ಷ್ಮಿಯು ನಮಗೆ ಕರುಣಿಸುತ್ತಾಳೆ ಎಂಬುದು ಆಸ್ತಿಕರ ನಂಬಿಕೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರತಿಯೊಬ್ಬ ಪುರುಷನ ಏಳಿಗೆಯ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ಎಂಬ ಮಾತಿಗನುಗುಣವಾಗಿ, ಸ್ಥಿತಿ ಕಾರಕನಾದ ಶ್ರೀ ಮಹಾವಿಷ್ಣುವಿನ ಶಕ್ತಿಯೇ ಆಗಿರುವ ಶ್ರೀ ಮಹಾಲಕ್ಷ್ಮಿಯನ್ನು ಒಲಿಸಿಕೊಂಡರೆ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಆಸ್ತಿಕರ ನಂಬುಗೆ. ಹೀಗಾಗಿ ಪರಮಾತ್ಮನ ಒಲುಮೆ ಗಳಿಸಲು ಮಹಾಲಕ್ಷ್ಮೀ ಪೂಜೆಯು ಸನ್ಮಾರ್ಗವಿದ್ದಂತೆ. ನಾಗರಪಂಚಮಿಯಿಂದ ಆರಂಭವಾಗುವ ಹಬ್ಬಗಳ ಸಾಲಿನಲ್ಲಿ ಪ್ರತಿ ವರುಷವೂ ಹೆಂಗಳೆಯರ ಮನಸ್ಸು ಉಬ್ಬಿಸುವ ಹಬ್ಬಗಳಲ್ಲೊಂದು ಇದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರತಿ ವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸುವ ಮೂಲಕ ದೀರ್ಘ ಮಾಂಗಲ್ಯ ಭಾಗ್ಯವನ್ನು ಕೋರುವುದಲ್ಲದೆ, ತಮ್ಮ ಕುಟುಂಬಕ್ಕೆ ಸಂಪತ್ತು, ಸುಖ ಸಮೃದ್ಧಿ ಕೋರುವ ಸುಮಂಗಳೆಯರು, ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವ್ರತವಿದು. ಹೀಗಾಗಿ, ತಾವೇ ಮಾಡುವ ಪೂಜೆ ಎಂಬ ಹೆಮ್ಮೆ ಈ ಹೆಂಗಳೆಯರಿಗೆ. ಜ್ಯೋತಿಷ್ಯದ ಪ್ರಕಾರ ಸಂಪತ್ತಿನ ಅಧಿಪತಿಯಾದ ಶುಕ್ರ ಗ್ರಹದ (ಶುಕ್ರ ದೆಸೆ ಎಂದರೆ ಶ್ರೀಮಂತಿಕೆ ಬಂದಿದೆ ಎಂಬ ವಾದ ಕೇಳಿದ್ದೀರಲ್ಲ...) ವಾರದಲ್ಲಿಯೇ ಈ ವ್ರತಾಚರಣೆ ನಡೆಯುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ಹಬ್ಬದಾಚರಣೆಗೆ ನೆಪಗಳು ಬೇಕೇ? ದಿನಗಳೆದಂತೆ ಸಂಬಂಧಗಳು ಯಾಂತ್ರಿಕವಾಗುತ್ತಿರುವ ಈ ದಿನಗಳಲ್ಲಿ, ವರಮಹಾಲಕ್ಷ್ಮೀ ವ್ರತವು ಇತ್ತೀಚೆಗೆ ಸಾಮೂಹಿಕ ಆಚರಣೆಯಾಗುತ್ತಿರುವುದು, ಕಳೆದು ಹೋದ ಮಾನವೀಯ ಬಾಂಧವ್ಯಗಳ ಬೆಸುಗೆಗೂ ಪೂರಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಬ್ಬಗಳ ಸಾರ್ವತ್ರಿಕ ಆಚರಣೆಯ ಧ್ಯೇಯವೂ ಇದೇ ಅಲ್ಲವೇ...?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಯಾವುದೇ ಧಾರ್ಮಿಕ ಆಚರಣೆಗಳಲ್ಲೂ ಒಂದು ಸಂದೇಶವಂತೂ ಸುಸ್ಪಷ್ಟ. ಅದೆಂದರೆ ಮನೆಯು ಚಿಕ್ಕದಾಗಿದ್ದರೂ, ಮನಸು ದೊಡ್ಡದಾಗಿರಬೇಕು. ಮನಸ್ಸು ಶುಭ್ರವಾಗಿರಬೇಕು, ಶುದ್ಧಿಯಾಗಿರಬೇಕು. ಆಗಲೇ ಮಾನವ ಧರ್ಮಕ್ಕೆ ಬೆಲೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದಕ್ಕೇ ಅಲ್ಲವೇ ದಾಸರು ಹೇಳಿದ್ದು - "ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು; ಘನವಾಗಿ ಮನೆಯನ್ನು ಬಳಿದು, ಅಲ್ಲಿ ಮಿನುಗುವ ತ್ರಿಗುಣದ ಒಲೆಗುಂಡ ನೆಡೆದು" ಅಂತ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅವರವರ ಧರ್ಮಾಚರಣೆಯು ಅವರವರಿಗೇ ಶ್ರೇಷ್ಠ. ಅನ್ಯ ಧರ್ಮವನ್ನು ನಿಂದಿಸುವುದಕ್ಕೆ ಯಾವುದೇ ಧರ್ಮವೂ ಬೋಧಿಸುವುದಿಲ್ಲ. ಪರಧರ್ಮ ನಿಂದಿಸುತ್ತಾರೆಂದರೆ, ತಮ್ಮದೇ ಧರ್ಮವನ್ನು ದೂಷಿಸಿದಂತೆ ಎಂಬ ಸಂದೇಶದೊಂದಿಗೆ, ಭಾರತೀಯರು ಪರಧರ್ಮ ಸಹಿಷ್ಣುಗಳು ಎಂಬ ಮಾತನ್ನು ಉಳಿಸಿಕೊಳ್ಳೋಣ, ನಾವೆಲ್ಲರೂ ಮೊದಲು ಭಾರತೀಯರಾಗೋಣ, ಭಾರತೀಯತೆಯನ್ನು ಮೆರೆಯೋಣ. <a href='http://kannada.webdunia.com/' target=_blank><b>ವೆಬ್‌‍ದುನಿಯಾ ಕನ್ನಡ </b></a>ತಾಣದ ಸಮಸ್ತ ಓದುಗ ಬಂಧುಗಳಿಗೆ, ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಶ್ರೀ ಮಹಾಲಕ್ಷ್ಮೀ ಧ್ಯಾನ </font><font style=' color:#000000;'></font><br/><font  style='font-size:11pt; color:#000000'><i>ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಂ </i></font><br/><font  style='font-size:11pt; color:#000000'><i>ದಾಸೀಭೂತ ಸಮಸ್ತ ದೇವವನಿತಾಂ ಲೋಕೈಕ ದೀಪಾಂಕುರಾ</font><font style='font-size:11pt;'>ಂ| </font><font style='font-size:11pt;'></i></font><br/><font  style='font-size:11pt; color:#000000'><i>ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ </i></font><br/><font  style='font-size:11pt; color:#000000'><i>ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ</font><font style='font-size:11pt;'>್|| </i></font>]]></content:encoded>
      <pubDate>Thu, 19 Aug 2010 21:01:37 +0530</pubDate>
      <updatedDate>Tue, 15 Apr 2014 15:50:22 +0530</updatedDate>
      <category><![CDATA[festivals]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಗುರುವ ಗೌರವಿಸೋಣ - ಗುರು ಪೂರ್ಣಿಮಾ]]></title>
      <link>https://kannada.webdunia.com/article/festivals/ಗುರುವ-ಗೌರವಿಸೋಣ-ಗುರು-ಪೂರ್ಣಿಮಾ-110072200041_1.htm</link>
      <guid>https://kannada.webdunia.com/article/festivals/ಗುರುವ-ಗೌರವಿಸೋಣ-ಗುರು-ಪೂರ್ಣಿಮಾ-110072200041_1.htm</guid>
      <media:thumbnail url="http:"/>
      <image>http:</image>
      <description><![CDATA[ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಇದೇ ಭಾನುವಾರ (ಜು.25, 2010) ಗುರು ಪೂರ್ಣಿಮಾ ದಿವಸವಾಗಿದೆ.]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1007/22/images/img1100722041_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> <font  style='font-size:11pt; color:#000000'>ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಇದೇ ಭಾನುವಾರ (ಜು.25, 2010) ಗುರು ಪೂರ್ಣಿಮಾ ದಿವಸವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದು ಋಷಿಗಳಿಗೆ ಮಾತ್ರವಲ್ಲದೇ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಸ್ಥಾನವಿರುವುದರಿಂದ ಗುರು ಪೂರ್ಣಿಮಾ ಸರ್ವರಿಗೂ ಪವಿತ್ರವಾಗಿದೆ. ಈ ದಿವಸ ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಬೇಕಾದುದು ಧಾರ್ಮಿಕ ಕರ್ತವ್ಯವಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ದಿವಸ ವೇದವ್ಯಾಸರ ಜಯಂತಿ. ‘ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಅವರು ಆಧ್ಯಾತ್ಮ, ಇತಿಹಾಸ, ಜ್ಞಾನ, ವಿಜ್ಞಾನಗಳ ಕಣಜವಾಗಿದ್ದರು. ವ್ಯಾಸ ಮಹರ್ಷಿ ಎಂದು ಪ್ರಸಿದ್ಧರಾದ ಕೃಷ್ಣ ದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು. ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ ಎಂಬ ಬಿರುದಾಂಕಿತರಾದರು. ಈ ಮಹತ್ಕಾರ್ಯದ ಸಲುವಾಗಿ ಅವರು ಮಹಾಗುರು ಎಂಬ ಕೀರ್ತಿಗೆ ಪಾತ್ರರಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿ, ತಾಯಿ ಸತ್ಯವತಿ. ಒಮ್ಮೆ ಮಹರ್ಷಿ ಪರಾಶರರು ಯಾತ್ರೆಯ ಸಲುವಾಗಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಕೆಟ್ಟ ವಾಸನೆ ಬರುತ್ತಿತ್ತು. ಆ ದ್ವೀಪಕ್ಕೆ ಹೋಗಿ ನೋಡಿದಾಗ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಈ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ, ಬಳಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ. ಬೆಸ್ತರ ಮಗಳು. ವಸುದೇವರಿಂದ ಶಾಪಗ್ರಸ್ತಳಾಗಿ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು. ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ತನ್ನ ಶಾಪ ವಿಮೋಚನೆ ಮಾಡಬೇಕೆಂದು ಪ್ರಾರ್ಥಿಸಿದಾಗ, ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವಂತಾದಳು. ನಂತರ, ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ, ಗಾಂಧರ್ವ ರೀತಿಯಲ್ಲಿ ಆಕೆಯ ವಿವಾಹವಾದರು. ಇವರಿಂದ ಜನಿಸಿದ ಮಗುವೇ ಕೃಷ್ಣ ದ್ವೈಪಾಯನ. ಕೃಷ್ಣ ಎಂದರೆ ಕಪ್ಪು, ಕತ್ತಲೆ; ದ್ವೈಪ ಎಂದರೆ ದ್ವೀಪ. ಆಯನ ಎಂದರೆ ಸುತ್ತಲೂ ನೀರಿನಿಂದ ಆವೃತವಾದ ಪ್ರವೇಶವಾಗಿರುವುದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಆರ್. ಸೀತಾರಾಮಯ್ಯ,</b></font><br/><font  style='font-size:11pt; color:#000000'><b>ಜ್ಯೋತಿಷ್ಕರು,</b></font><br/><font  style='font-size:11pt; color:#000000'><b>ಶಿವಮೊಗ್ಗ.</b></font>]]></content:encoded>
      <pubDate>Thu, 22 Jul 2010 14:50:22 +0530</pubDate>
      <updatedDate>Tue, 15 Apr 2014 15:40:49 +0530</updatedDate>
      <category><![CDATA[festivals]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA[ಬಾಳು ಬದಲಾವಣೆಯ ಪರ್ವಕಾಲ - ಸಂಕ್ರಾತಿ]]></title>
      <link>https://kannada.webdunia.com/article/festivals/ಬಾಳು-ಬದಲಾವಣೆಯ-ಪರ್ವಕಾಲ-ಸಂಕ್ರಾತಿ-110011300077_1.htm</link>
      <guid>https://kannada.webdunia.com/article/festivals/ಬಾಳು-ಬದಲಾವಣೆಯ-ಪರ್ವಕಾಲ-ಸಂಕ್ರಾತಿ-110011300077_1.htm</guid>
      <media:thumbnail url="http:"/>
      <image>http:</image>
      <description><![CDATA[ಹಲವರು, `ಇಂದು ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬೇಕು ಎಂದುಕೊಳ್ಳುವುದು ನಮ್ಮ ಹೆಮ್ಮೆಯ ಹಬ್ಬ "ಸಂಕ್ರಾಂತಿ ದಿನದಂದು. ಜನರಲ್ಲಿ ಹೊಸ ಬದಲಾವಣೆ ಮತ್ತು ಆಚರಣೆ ತರುವ `ಸಂಕ್ರಾಂತಿ ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ. ಎಲ್ಲರೂ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಅದರಂತೆ ಈ ವರ್ಷವೂ ಮತ್ತೆ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1001/13/images/img1100113077_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> <font  style='font-size:11pt; color:#000000'>ಹಲವರು, 'ಇಂದು ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬೇಕ</font><font style='font-size:11pt;'>ು' </font><font style='font-size:11pt;'>ಎಂದುಕೊಳ್ಳುವುದು ನಮ್ಮ ಹೆಮ್ಮೆಯ ಹಬ್ಬ "ಸಂಕ್ರಾಂತಿ ದಿನದಂದು. ಜನರಲ್ಲಿ ಹೊಸ ಬದಲಾವಣೆ ಮತ್ತು ಆಚರಣೆ ತರುವ `ಸಂಕ್ರಾಂತಿ ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ. ಎಲ್ಲರೂ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಅದರಂತೆ ಈ ವರ್ಷವೂ ಮತ್ತೆ ಮರಳಿ ಬಂದಿದೆ  ಸಡಗರದ ಸಂಕ್ರಾಂತಿ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೂರ್ಯದೇವ ತನ್ನ ಪಥ ಬದಲಾಯಿಸಿ ಒಂದು ರಾಶಿಯಿಂದ ಮತ್ತೊಂದು ರಾಶಿಯತ್ತ ತನ್ನ ಕಿರಣ ಬೀರುತ್ತಾನೆ. ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ಅರ್ಧ ವರ್ಷ ಪಯಣ ಮಾಡಿ ಮಕರ ರಾಶಿಗೆ ಆಗಮಿಸುತ್ತಾನೆ ಎಂಬುದು ನಮ್ಮ ಧಾರ್ಮಿಕ ನಂಬಿಕೆ. ಈ ನಂಬಿಕೆಗೆ ಮತ್ತೊಂದು ಹೆಸರೇ `ಸಂಕ್ರಾಂತಿ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೂರ್ಯನ ಪಥ ಬದಲಾವಣೆಯಲ್ಲದೇ ಹವಾಮಾನದಲ್ಲಿ ಏರಿಳಿತಗಳು ಕಂಡುಬರುತ್ತದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೆವ ಚಳಿ ಮಂದವಾಗುತ್ತಾ ಹೋಗುತ್ತದೆ. ಹಗಲು ದೀರ್ಘವಾಗುವುದು. ಸಂಕ್ರಾಂತಿ ಆಚರಿಸುವ ದಿನವನ್ನು ಹಿಂದೂ ಸಂಸ್ಕೃತಿಯಲ್ಲಿ ಉತ್ತರಾಯಣದ ಪುಣ್ಯಕಾಲ ಎಂದು ಕರೆಯಲಾಗುತ್ತದೆ. ಅಂದರೆ ಈ ದಿನದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ. ಆದ್ದರಿಂದಲೇ ಭೀಷ್ಮ ಉತ್ತರಾಯಣದ ಕಾಲದವರೆಗೂ ಕೊನೆ ಉಸಿರನ್ನು ಬಿಡಲಿಲ್ಲ ಎಂದು ನಮ್ಮ ಧರ್ಮಗ್ರಂಥಗಳು ಸಾರಿ ಹೇಳುತ್ತವೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಗ್ರಾಮಗಳಲ್ಲಿ ಸಂಕ್ರಾಂತಿ: <!--Image--><p class="wdp_articleRImg"><p><img src='/kn/articles/1001/13/images/img1100113077_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>WD</p></p><!--endImage--> </font><font style=' color:#000000;'></font><br/><font  style='font-size:11pt; color:#000000'>ಸಂಕ್ರಾಂತಿ ಎಂದರೆ ಹಳ್ಳಿಗಳಲ್ಲಿ ಬೆಳೆದ ಬೆಳಗಳ ಸುಗ್ಗಿ. ಮನಕ್ಕೆ ಮುದ ನೀಡುವ ಪರಿಸರ ಸೃಷ್ಟಿಯಾಗುವ ಈ ಹಳ್ಳಿಗಳಲ್ಲಿ ರಾಗಿ, ಭತ್ತ, ಜೋಳ ಮತ್ತಿತರ ಬೆಳೆಗಳು ರೈತನ ಮಡಿಲು ಸೇರಿ ರಾಶಿಯಾಗಿರುತ್ತದೆ. ಉಳಿದ ಅವರೆಕಾಯಿ, ಗೆಣಸು, ಕುಂಬಳಕಾಯಿ ಬೆಳೆಗಳು ಸಮೃದ್ಧವಾಗಿ ಸಿಗುವ ಕಾಲ. ಆದ್ದರಿಂದಲೇ ಸಂಕ್ರಾಂತಿ ಎಂದರೆ ಹಳ್ಳಿಗರ ಮನಸ್ಸಿನಲ್ಲಿ ಸುಗ್ಗಿ ಹಬ್ಬ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಾಗತೀಕರಣ ಇಡೀ ಜಗತ್ತನ್ನೇ ಬದಲಾಯಿಸಬಹುದು. ಆದರೆ ಹಿಂದೂ ಸಂಸ್ಕ್ರತಿಯ ಮಡಿಲಲ್ಲಿ-ಹುಟ್ಟಿ ಬೆಳೆದ ಆಚರಣೆಗಳನ್ನು ಬದಲಾಯಿಸುವ ಶಕ್ತಿ ಅದಕ್ಕಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಂಕ್ರಾಂತಿ, ಹಳ್ಳಿ ಜನರಿಗೆ ಸಂಭ್ರಮಿಸುವ ದಿನ. ಹೆಂಗಳೆಯರು ಆ ದಿನದಂದು ಶೃಂಗಾರಗೊಂಡು ಎಳ್ಳು - ಬೆಲ್ಲವನ್ನು ಹಂಚುತ್ತಾರೆ. ಸೂರ್ಯ ಹುಟ್ಟುವ ಮುನ್ನವೇ ಮನೆಯನ್ನು "ನವ ವಧು" ವಿನಂತೆ ಶೃಂಗಾರ ಮಾಡುತ್ತಾರೆ. ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ನೋಡುಗರ ಕಣ್ಣಿಗೆ ಚಿತ್ರಲೋಕವನ್ನೇ ಕಟ್ಟಿ ಕೊಡುತ್ತಾರೆ.</font><br/> <font  style='font-size:11pt; color:#000000'></font><br/><font  style='font-size:11pt; color:#000000'>ಅಂದು ತಾವು ಸಾಕಿರುವ ಜಾನುವಾರುಗಳಿಗೆ ರೈತರು ಬೆಚ್ಚನೆ ನೀರಿನ ಸ್ನಾನ ಮಾಡಿಸಿ, ಶೃಂಗಾರ ಮಾಡುತ್ತಾರೆ. ಸ್ವಲ್ಪ ಸಿರಿವಂತರಾದರೆ ಅವುಗಳಿಗೆ ಸುಗಂಧ ದ್ರವ್ಯ ಲೇಪನ ಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಶೃಂಗರಿಸುತ್ತಾರೆ. ಬೇಕಾದಷ್ಟು ಮೇವು ಕೊಟ್ಟು ಸಾಧು ಪ್ರಾಣಿಗಳನ್ನು ತಮ್ಮ ಬಂಧುಗಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ನೋವು ನೀಡಬಾರದೆಂಬ ಕಾರಣದಿಂದ ಆ ದಿನದಂದು ಪ್ರಾಣಿಗಳಿಗೆ ಕೆಲಸವಿಲ್ಲ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂತಹ ಸಡಗರದ ಹಬ್ಬದ ದಿನದಂದು ಹಳ್ಳಿ ಜನ ಸುಳ್ಳು ಹೇಳದೆ ಪ್ರಾಮಾಣಿಕ ಮಾತುಗಳನ್ನು ಆಡುತ್ತಾರೆ. ಇಂತಹ ಹಬ್ಬವನ್ನು ದೇಶದ ಹಲವೆಡೆ ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಾರೆ. ರಾಮಾಯಣದಲ್ಲಿ ಶ್ರೀರಾಮಚಂದ್ರ ರಾವಣನನ್ನು ಸಂಹಾರ ಮಾಡಿ, ಸೀತೆಯನ್ನು ಅಯೋಧ್ಯೆಗೆ ಕರೆ ತಂದನೆಂಬ ಭಾವನೆಯಲ್ಲಿ ಆಂಧ್ರ ಪ್ರದೇಶದಲ್ಲಿ ರಾವಣನ ಪ್ರತಿಕೃತಿ ದಹನ ಮಾಡಿ ಆಚರಿಸಲಾಗುತ್ತದೆ. ಅದೇ ತಮಿಳುನಾಡಿನಲ್ಲಿ ಸೂರ್ಯ ದೇವನಿಗೆ ನೈವೇದ್ಯ ಸಮರ್ಪಿಸಿ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವೆಬ್‌ದುನಿಯಾ ಓದುಗರೆಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.</font>]]></content:encoded>
      <pubDate>Wed, 13 Jan 2010 21:29:56 +0530</pubDate>
      <updatedDate>Tue, 15 Apr 2014 14:40:47 +0530</updatedDate>
      <category><![CDATA[festivals]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA['ನಾಡ ಹಬ್ಬ'ವಾಗಿ ಶ್ರೀಕೃಷ್ಣ ಜಯಂತಿ]]></title>
      <link>https://kannada.webdunia.com/article/festivals/ನಾಡ-ಹಬ್ಬ-ವಾಗಿ-ಶ್ರೀಕೃಷ್ಣ-ಜಯಂತಿ-109080300081_1.htm</link>
      <guid>https://kannada.webdunia.com/article/festivals/ನಾಡ-ಹಬ್ಬ-ವಾಗಿ-ಶ್ರೀಕೃಷ್ಣ-ಜಯಂತಿ-109080300081_1.htm</guid>
      <media:thumbnail url="http:"/>
      <image>http:</image>
      <description><![CDATA[ಉಡುಪಿ: ಆಗೋಸ್ಟ್ 13ರಿಂದ ಸೆಪ್ಟೆಂಬರ್‌ವರೆಗೆ ನಡೆಯಲಿರುವ ಶ್ರೀಕೃಷ್ಣ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಉತ್ಸವಕ್ಕಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಪೂರ್ವಸಿದ್ಧತಾ ಕಾರ್ಯದೊಂದಿಗೆ ಉತ್ಸವದ ವಿಧಿ-ವಿಧಾನಗಳು ಆರಂಭಗೊಂಡಿದೆ.

ಆಗೋಸ್ಟ್ 13ರ ಶ್ರೀಕೃಷ್ಣ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/0908/03/images/img1090803081_1_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'>ಆಗೋಸ್ಟ್ 13ರಿಂದ ಸೆಪ್ಟೆಂಬರ್‌ವರೆಗೆ ನಡೆಯಲಿರುವ ಶ್ರೀಕೃಷ್ಣ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಉತ್ಸವಕ್ಕಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಪೂರ್ವಸಿದ್ಧತಾ ಕಾರ್ಯದೊಂದಿಗೆ ಉತ್ಸವದ ವಿಧಿ-ವಿಧಾನಗಳು ಆರಂಭಗೊಂಡಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆಗೋಸ್ಟ್ 13ರ ಶ್ರೀಕೃಷ್ಣ ಜಯಂತಿಯನ್ನು ಚಾಂದ್ರಮಾನ ಹಾಗೂ ಸೆಪ್ಟೆಂಬರ್ 11ರ ಉತ್ಸವವನ್ನು ಸೌರಮಾನ ವ್ಯವಸ್ಥೆಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ವಿವರಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಗರದಲ್ಲಿನ ಶ್ರೀಕೃಷ್ಣ ದೇವಾಲಯದಲ್ಲಿ ತಿಂಗಳು ಕಾಲ ನಡೆಯಲಿರುವ ಈ ಎರಡೂ ಪ್ರಸಿದ್ಧ ಉತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸಲು ಪರ್ಯಾಯ ಮಠ ನಿರ್ಧರಿಸಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಬಾರಿಯ ಉತ್ಸವದಲ್ಲಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ಹಾಗೂ ರಾಜ್ಯದ ಸಚಿವರುಗಳೂ ಭಾಗವಹಿಸಲಿದ್ದಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀಕೃಷ್ಣಮಠದಲ್ಲಿ ನಡೆಯಲಿರುವ ಉತ್ಸವದಲ್ಲಿ ಹಲವಾರು ಸಂಗೀತಗಾರರು, ಕಲಾವಿದರು ತಮ್ಮ ಕಾರ್ಯಕ್ರಮದ ಪ್ರದರ್ಶನ ನೀಡಲಿದ್ದಾರೆ. ಅಲ್ಲದೇ ಹೆಸರಾಂತ ಸಂಗೀತಗಾರ ಆರ್.ಕೆ.ಪದ್ಮನಾಭನ್ ಅವರಿಗೆ ಸೆಪ್ಟೆಂಬರ್ 11ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಠದ ವತಿಯಿಂದ 'ಆಸ್ಥಾನ್ ವಿದ್ವಾನ್'‌ ಬಿರುದಿನೊಂದಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೆಪ್ಟೆಂಬರ್ 12ರಂದು ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಶ್ರೀಕೃಷ್ಣನಿಗೆ ಸಂಬಂಧಿಸಿದಂತೆ ಪ್ರಬಂಧ, ರಂಗೋಲಿ, ಛದ್ಮವೇಷ ಸೇರಿದಂತೆ ಹಲವಾರು ಸ್ಪರ್ಧೆಗಳು ನಡೆಯಲಿದೆ.</font><br/></font>]]></content:encoded>
      <pubDate>Mon, 03 Aug 2009 20:02:43 +0530</pubDate>
      <updatedDate>Tue, 15 Apr 2014 13:45:26 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA['ವಿರೋಧಿ'ಗಾಗಿ ಪ್ರಣಾಳಿಕೆ ಸಿದ್ಧಪಡಿಸೋಣ!]]></title>
      <link>https://kannada.webdunia.com/article/festivals/ವಿರೋಧಿ-ಗಾಗಿ-ಪ್ರಣಾಳಿಕೆ-ಸಿದ್ಧಪಡಿಸೋಣ-109032600093_1.htm</link>
      <guid>https://kannada.webdunia.com/article/festivals/ವಿರೋಧಿ-ಗಾಗಿ-ಪ್ರಣಾಳಿಕೆ-ಸಿದ್ಧಪಡಿಸೋಣ-109032600093_1.htm</guid>
      <media:thumbnail url="http:"/>
      <image>http:</image>
      <description><![CDATA[ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ.

ಮತ್ತೆ ಬಂದಿದೆ ನವ ಯುಗ. ಪ್ರತೀ ಹೊಸ ಯುಗದ ಆದಿಯಲ್ಲಿ ನಾವು ಹೇಳೋದು "ಕಳೆದ ವರ್ಷ ತೀರಾ ...]]></description>
      <content:encoded><![CDATA[<font  style='font-size:11pt; color:#0000FF'><b><i>ಅವಿನಾಶ್ ಬಿ. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Middle><tr><td valign='top'><img src='/kn/articles/0903/26/images/img1090326093_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></b></i>ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೆ ಬಂದಿದೆ ನವ ಯುಗ. ಪ್ರತೀ ಹೊಸ ಯುಗದ ಆದಿಯಲ್ಲಿ ನಾವು ಹೇಳೋದು "ಕಳೆದ ವರ್ಷ ತೀರಾ ಚಿಂತಾಜನಕವಾಗಿತ್ತು. ಸಿಹಿಗಿಂತ ಕಹಿಯೇ ಹೆಚ್ಚಿತ್ತು"!. ಈ ಬಾರಿಯೂ ಹೇಳುವುದು ಅದನ್ನೇ. ಬೇಕಿದ್ದರೆ ಒಂದಷ್ಟು ಜೋರಾಗಿಯೇ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಯಾಕೆ? ಸರ್ವಧಾರಿ ಸಂವತ್ಸರದತ್ತ ಕಣ್ಣು ಹಾಯಿಸಲು ಭಯಾತಂಕ. ಉಗ್ರರ ದಾಳಿಗಳು, ಹಿಂಸೆ, ಸಾವು ನೋವಿನ ಜೊತೆಗೆ ಈ ಬಾರಿ ಬಂದೆರಗಿತಲ್ಲ... ಬುಡಕ್ಕೇ ಕೊಡಲಿಯೇಟು! ಅದೇ ಆರ್ಥಿಕ ಹಿಂಜರಿತವೆಂಬ ಮಹಾಮಾರಿ. ಅದೆಷ್ಟು ಮಂದಿ ಉದ್ಯೋಗ ಕಳೆದುಕೊಂಡರು, ಅದೆಷ್ಟು ಮಂದಿಯ ವೇತನ ಕಡಿತವಾಯಿತು, ಅದೆಷ್ಟು ನಷ್ಟವಾಯಿತು! ಛೆ, ಛೆ... ಇದ್ದದ್ದೇ ಇದೆಲ್ಲಾ...ಮರೆತು ಬಿಡೋಣ ಅವನ್ನು...</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪರಸ್ಪರ ಸಂಘರ್ಷಮಯ, ತದ್ವಿರುದ್ಧ ಗುಣಗಳ ಪ್ರತೀಕವಾಗಿರುವ ಬೇವು ಮತ್ತು ಬೆಲ್ಲದ ಬಗ್ಗೆ ಒಂದು ಮಾತು. ಬೇವನ್ನು ನೋವು ಎಂದೂ ಬೆಲ್ಲವನ್ನು ಗೆಲುವೆಂದೂ ನಿಜಜೀವನದಲ್ಲಿ ಪರಿಗಣಿಸಿ ನೋಡಿದರೆ, ಬೆಲ್ಲದ ಪಕ್ಕದಲ್ಲಿ ಬೇವು ಇದ್ದಾಗ ಮಾತ್ರವಷ್ಟೇ ಬಲ್ಲವನೇ ಬಲ್ಲ ಬೆಲ್ಲದಾ ರುಚಿ</font><font style='font-size:11pt;'>ಯ! </font><font style='font-size:11pt;'>ಹಂದಿಯಿದ್ದರಷ್ಟೇ ಕೇರಿ ಎನಿತು ಶುದ್ಧಿಯೋ ಹಾಗೆ, ಶುದ್ಧಾಚಾರಕ್ಕೆ ಮಹತ್ವ ಬರುವುದು ಅಲ್ಲೇ ಎಂದು ದಾಸರು ಹೇಳಿದ್ದೂ ಇದೇ ಕಾರಣಕ್ಕೆ. ಯುಗಾದಿಯ ಬೇವು-ಬೆಲ್ಲ, ವಿರಸ-ಸರಸದ ಪ್ರತೀಕವೂ ಹೌದು. ಅದಕ್ಕಲ್ಲವೇ ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂದಿದ್ದು ತಿಳಿದವರು!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಯುಗದ ಆದಿಯ ದಿನ ಕೆಟ್ಟ ಘಳಿಗೆಗಳನ್ನೆಲ್ಲಾ ಬೇವು ಎಂಬಂತೆ ಮರೆತು ವಿರೋಧಿಯನ್ನು ಸ್ವಾಗತಿಸಲು ಸಿದ್ಧರಾಗೋಣ. ವಾಸ್ತವಿಕ ಪ್ರಪಂಚದಲ್ಲಿಯೂ ನಿಜ ವೈರಿಗಳನ್ನು ಪ್ರೀತಿಯಿಂದಲೇ ಗೆಲ್ಲಬಹುದಲ್ಲವೇ? ಸ್ವಾಗತಿಸೋಣವಂತೆ. ಆ ಒಂದು ಅನರ್ಘ್ಯ ನಿಯಮವನ್ನು ಅನುಸರಿಸಲು ಸಿದ್ಧರಾಗಬೇಕಿದೆ ಜನ. ಹೊಸ ವರ್ಷ, ಹೊಸ ಹರ್ಷ, ಹೊಸ ಆಶಾವಾದ, ನವ ಭರವಸೆಗಳ ಒಸಗೆ, ಸರ್ವರ ಜೀವನದಲ್ಲಿಯೂ ಚಿಗುರೊಡೆಯಬೇಕು. ಆಶಾವಾದವೇ ಮನುಷ್ಯನ ಜೀವನೋತ್ಸಾಹಕ್ಕೆ, ಬೆಟ್ಟದಷ್ಟು ಕನವರಿಕೆಗಳಿಗೆ ಮೂಲ ಪ್ರೇರಣೆಯಾಗುತ್ತದೆ. ಹೀಗಿರಲು, ಯುಗಾದಿ ಹಬ್ಬದಂದು ನೋವ ಮರೆತು ನಲಿವಿಗಾಗಿ ಕಾತರಿಸೋಣ. ಈ ಮೂಲಕ ತುಕ್ಕು ಹಿಡಿದಂತಿರುವ ಮನಸ್ಸಿಗೆ ಒರೆ ಹಚ್ಚಿ ಶುಭ್ರಗೊಳಿಸಿ, ಹೊಸ ಸಂವತ್ಸರಕ್ಕೆ ಸಿದ್ಧಗೊಳಿಸೋಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೇವು ಬೆಲ್ಲವು ಬೇಕು ಸುಖದ ಬಾಳುವೆಗೆ, ಬಾಳುವೆಯಾ ಆ ಸುಖಕೆ. ಅನಿವಾರ್ಯವೆನಿಸೋ ಕಹಿಯೊಡಗೂಡಿ ಬಾಳಲು ಕಲಿತು, ಸಿಹಿಯ ಬಾಳುವೆಗಾಗಿ ಹಂಬಲಿಸೋಣ. ಎಲ್ಲಕ್ಕೂ ಮಿಗಿಲಾಗಿ, ನವ ನವೋನ್ಮೇಷಕ್ಕಾಗಿ ಕಾತರಿಸುತ್ತಾ, ಹೊಸ ವರುಷದಲ್ಲಿ ಏನೆಲ್ಲಾ ಮಾಡಬಹುದೆಂಬುದರ ಪ್ರಣಾಳಿಕೆ ಸಿದ್ಧಪಡಿಸಿ, 'ವಿರೋಧಿ'ಯನ್ನು ಎದುರುಗೊಳ್ಳೋಣ...</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿರೋಧಿ ಸಂವತ್ಸರವು ವಿರೋಧಿಗಳ ಮನ ಗೆಲ್ಲುವಲ್ಲಿ ಪೂರಕವಾಗಿರಲಿ, ಸಂಭ್ರಮ ಪಡುವ ಹೊಸ ಅವಕಾಶಗಳನ್ನು ಹೆಚ್ಚಿಸಲಿ. ಸಂತಸವುಳ್ಳ ಪ್ರತಿ ದಿನವೂ ಹೊಸ ಯುಗವಾಗಲಿ, ಆದರೆ ಬೇಸರವಿರುವ ಪ್ರತಿ ದಿನ ಮಾತ್ರ ಯುಗವಾಗಿ ಭಾಸವಾಗದಿರಲಿ..!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊರಡು ಕೊನರಲಿ, ಬರಡು ಹಯನು ಆಗಲಿ... ಸರ್ವರಿಗೂ ಒಳಿತಾಗಲಿ...</font>]]></content:encoded>
      <pubDate>Thu, 26 Mar 2009 20:26:01 +0530</pubDate>
      <updatedDate>Tue, 15 Apr 2014 12:45:26 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಎಳ್ಳು ಬೆಲ್ಲವ ಬೀರಿ ಒಳ್ಳೆಯ ಮಾತನಾಡಿ...]]></title>
      <link>https://kannada.webdunia.com/article/festivals/ಎಳ್ಳು-ಬೆಲ್ಲವ-ಬೀರಿ-ಒಳ್ಳೆಯ-ಮಾತನಾಡಿ-109011200016_1.htm</link>
      <guid>https://kannada.webdunia.com/article/festivals/ಎಳ್ಳು-ಬೆಲ್ಲವ-ಬೀರಿ-ಒಳ್ಳೆಯ-ಮಾತನಾಡಿ-109011200016_1.htm</guid>
      <media:thumbnail url="http:"/>
      <image>http:</image>
      <description><![CDATA[ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿ ರಾತ್ರಿ ಕಡಿಮೆ ಇದ್ದರೆ, ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು, ಹಗಲಿನ ಅವಧಿ ಕಡಿಮೆ. ಸೌರಮಾನವೋ, ಚಾಂದ್ರಮಾನವೋ, ಸಾಯನವೋ... ನಿರಯನವೋ...ಒಟ್ಟಿನಲ್ಲಿ ಸೂರ್ಯ ಉತ್ತರಾಭಿಮುಖ ಚಲನೆ ಆರಂಭಿಸಿದ ಬಳಿಕ ಮೊದಲು ಬರುವ ಸಂಕ್ರಮಣವಿದು. ದೇವಾನುದೇವತೆಗಳ ರಾತ್ರಿ ಕಳೆದು ಹಗಲಾಗುವ ...]]></description>
      <content:encoded><![CDATA[<font  style='font-size:11pt; color:#0000FF'><i>ಅವಿನಾಶ್ ಬಿ. <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0901/12/images/img1090112016_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></i>ಗಡಗಡ ನಡುಗಿಸುವ ಚಳಿಯು ದೂರವಾಗಿ, ವಸಂತನ ಆಗಮನವಾಗುತ್ತಲೇ, ಪ್ರಕೃತಿ ದೇವಿಯ ಕಣ್ಣಲ್ಲಿ ಹೊಸ ಕಳೆ, ಹೊಸ ಹೊಳಹು. ಗಿಡಮರಗಳೆಲ್ಲಾ ಹೂಬಿಟ್ಟು ತನ್ನನ್ನು ನೆಚ್ಚಿಕೊಂಡಿರುವ ಸಮಸ್ತ ಜೀವರಾಶಿಗೆ ಫಲ-ಪುಷ್ಪಗಳೊಂದಿಗೆ ಪೋಷಣೆ ನೀಡುವ ಕಾಯಕಕ್ಕೆ ಅಡಿಯಿಡುವ, ಹಚ್ಚ ಹಸಿರಿನೊಂದಿಗೆ ದಷ್ಟಪುಷ್ಟಗೊಳ್ಳುವ ಪ್ರಕೃತಿದೇವಿಯನ್ನು ಆದರಿಸುವ ಸಂಕ್ರಾಂತಿಯ ಸಡಗರವಿದು. ಹೊಸ ವರ್ಷದ ಆಚರಣೆಯ ನಂತರ ದೇಶವು ಸಂಭ್ರಮ ಪಡುವ ಸುಗ್ಗಿಯ ಪರ್ವವೇ ಈ ಮಕರ ಸಂಕ್ರಮಣ. ಭೂಮಿಯನ್ನು ಹಸನಾಗಿಸಿ ನಮ್ಮ ಜೀವನವನ್ನೂ ಹಸನಾಗಿಸುವ ಪ್ರಕೃತಿ ಮಾತೆಗೆ ನಮಿಸಿ ಸಂಭ್ರಮಿಸುವ ಪರ್ವವಿದು. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೆಯುಟ್ಟು, ಮೈಮನಗಳ ಕೊಳೆ ನಿವಾರಿಸಿಕೊಳ್ಳುವ ಸಂಕೇತವೂ ಅಹುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ವಾಸ್ತವಿಕವಾಗಿ, ಸೂರ್ಯನ ಚಲನೆಯ ಆಧಾರದಲ್ಲಿರುವ ಮೇಷ-ಮೀನಾದಿ ತಿಂಗಳುಗಳನ್ನು ಸೂರ್ಯನು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎಂಬುದರ ಆಧಾರದಲ್ಲಿ ಗುರುತಿಸಲಾಗುತ್ತದೆಯಾದರೂ, ಸೂರ್ಯನು ಮಕರ ರಾಶಿಗೆ ಕಾಲಿಡುವ ದಿನಕ್ಕೆ ಅದೇನೋ ವಿಶೇಷತೆ, ಸಡಗರ, ಸಂಭ್ರಮ. ಇತರ 11 ರಾಶಿಗಳಿಗೂ ಸೂರ್ಯ ಪ್ರವೇಶಿಸುತ್ತಾನೆ. ಹೀಗಿರುವಾಗ ಧನುವಿನ ಮನೆಯನ್ನು ತೊರೆದು ಆತನ ಮಕರ ರಾಶಿ ಪ್ರವೇಶವೇ ವಿಶೇಷವಾಗುವುದೇಕೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಇದು ಮುಂಬರುವ ಪ್ರಖರ ಬೆಳಕಿನ ಬೆಚ್ಚಗಿನ ವಾತಾವರಣದ ಆರಂಭಕ್ಕೆ ಮುನ್ನುಡಿಯಿಡುವ ದಿನ. ನಮಗೆ ಹೆಚ್ಚು ಸಮಯ ದೊರೆಯುತ್ತದೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಸಂದೇಶದೊಡನೆ ಅಂದಿನಿಂದ ಹಗಲು ದೀರ್ಘವಾಗುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ತಂದೆ-ಮಕ್ಕಳ ಬಂಧದ ಕುರುಹು <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0901/12/images/img1090112016_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></b>ಪುರಾಣಗಳನ್ನು ಓದುತ್ತಾ ಹೋದರೆ, ಸೂರ್ಯನಿಗೆ ಛಾಯಾ ದೇವಿಯ ಗರ್ಭದಲ್ಲಿ ಜನಿಸಿದ ಮಗ ಶನಿ. ಶನಿ ಮತ್ತು ಸೂರ್ಯ ಇಬ್ಬರ ಗುಣಗಳು ತದ್ವಿರುದ್ಧವಾದರೂ, ಸೂರ್ಯನು ವರ್ಷಕ್ಕೊಂದು ಬಾರಿ ತನ್ನ ಪುತ್ರನಾದ ಶನಿಯ ಮನೆಯಾಗಿರುವ ಮಕರ ರಾಶಿಗೆ ಬಂದೇ ಬರುತ್ತಾನೆ. ಒಂದು ರೀತಿಯಲ್ಲಿ ತಂದೆ-ಮಕ್ಕಳ ಬಾಂಧವ್ಯದ ಸಂಕೇತವಾಗಿಯೂ ಭಕ್ತಿಯ ಸಂಕೇತವಾಗಿಯೂ ಮಕರ ಸಂಕ್ರಾಂತಿಯು ಮಾನವ ಜೀವನದ ಬಾಂಧವ್ಯದ ಬೆಸುಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ನಾಲ್ಕು ದಿನಗಳ ಸಂಕ್ರಾಂತಿ ಸಡಗರ <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0901/12/images/img1090112016_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></b>ಸಂಕ್ರಾಂತಿ ಎಂದ ತಕ್ಷಣ ಕರ್ನಾಟಕದಲ್ಲಿ ನೆನಪಿಗೆ ಬರುವುದು ಎಳ್ಳು-ಬೆಲ್ಲ ಮತ್ತು ಕಬ್ಬು. ವಾಸ್ತವದಲ್ಲಿ ಮಕರ ಸಂಕ್ರಮಣ ಹಬ್ಬವು ನಾಲ್ಕು ದಿನಗಳ ಪರ್ಯಂತ ನಡೆಯುತ್ತದೆ. ಭೋಗಿ ಹಬ್ಬ, ಪೊಂಗಲ್, ಮಾಟ್ಟು ಪೊಂಗಲ್ ಮತ್ತು ಕೊನೆಯ ದಿನ ಕಾಣುಂ ಪೊಂಗಲ್. ಇದರ ಆಚರಣೆ ಭಿನ್ನವಾಗಿರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊದಲನೆಯ ದಿನ ಭೋಗಿ ಹಬ್ಬ, ಅಂದು ಮನೆ-ಮನಸಿನ ಕತ್ತಲು-ಕಲ್ಮಶ ತೊಳೆಯುವ ದಿನ. ಮನೆಯನ್ನು ಶುಭ್ರವಾಗಿಸಿ, ಮನಸ್ಸನ್ನೂ ಶುಚಿಗೊಳಿಸಿ, ಇಳೆಯಲ್ಲಿ ಬೆಳೆಯ ಸಮೃದ್ಧಿಗೆ ಮಳೆ ಸುರಿಸುವ ಹೊಣೆ ಹೊತ್ತಿರುವ ಇಂದ್ರನಿಗೆ ನಮಿಸುವ ದಿನ. ಕೆಲವೆಡೆ, ಮನೆಯ ಹೊರಗೆ ಕಟ್ಟಿಗೆ-ಬೆರಣಿಯಿಂದ ಅಗ್ನಿ ರಚಿಸಿ, ಅದರಲ್ಲಿ ಬೇಡವಾದ (ಮುರಿದ ಕುರ್ಚಿ ಇತ್ಯಾದಿ ಪೀಠೋಪಕರಣ ಮತ್ತಿತರ ಹಳೆಯ, ಬೇಡವಾದ ಸಾಮಗ್ರಿ) ವಸ್ತುಗಳನ್ನು ಸುಟ್ಟುಹಾಕಿ, ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಪ್ರತೀಕವಾಗಿ ಆಚರಣೆ ನಡೆಯುತ್ತದೆ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0901/12/images/img1090112016_1_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಎರಡನೇ ದಿನ ಪೊಂಗಲ್. ಬಾಳು ಬೆಳಗುವ ಸೂರ್ಯನ ಆರಾಧನೆಯ ದಿನ. ಮನೆಯ ಹೊರಗೆ ಒಲೆ ಹಾಕಿ ಅಕ್ಕಿ-ಹಾಲು-ಹೆಸರುಬೇಳೆ ಒಳಗೊಂಡ, ಸಿಹಿ ಪೊಂಗಲ್ (ಸಕ್ಕರೆ ಪೊಂಗಲ್) ಅಥವಾ ಹುಗ್ಗಿ ತಯಾರಿಸಿ ಸೂರ್ಯನಿಗೆ ಅರ್ಪಿಸುವುದು, ಮನೆಯೆದುರು ರಂಗವಲ್ಲಿ ಹಾಕುವುದು ಕಂಡುಬರುತ್ತದೆ. ಸುಖ ಸಮೃದ್ಧಿ, ಸದಾಶಯಗಳು ಜೀವನದಲ್ಲಿ ಉಕ್ಕಿ ಬರಲಿ ಎಂಬುದನ್ನು ಪ್ರತಿನಿಧೀಕರಿಸುವ ನಿಟ್ಟಿನಲ್ಲಿ ಈ ಸಕ್ಕರೆ ಪೊಂಗಲ್ ಅನ್ನು ಒಲೆಯಲ್ಲಿ ಉಕ್ಕಿಸಲಾಗುತ್ತದೆ. ಇದನ್ನು ಪರಸ್ಪರ ಹಂಚಿ ತಿಂದು ಸಂಭ್ರಮಿಸುವ ದಿನವೂ ಇದೇ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೂರನೇ ದಿನ ಮಾಟ್ಟುಂ ಪೊಂಗಲ್. ಅಂದರೆ ಗೋವುಗಳನ್ನು ಆರಾಧಿಸುವ ದಿನ. ಗದ್ದೆ ಉಳುಮೆಗೆ ನೆರವಾಗುವ ಎತ್ತುಗಳು, ಕೃಷಿಕನಿಗೆ ನೆರವಾಗುವ ಹಸುಗಳನ್ನು ಸಿಂಗರಿಸಿ, ಆರತಿ ಮಾಡಿ, ಕಿಚ್ಚು ಹಾಯಿಸುವ ಸಂಪ್ರದಾಯಗಳನ್ನು ಹಲವೆಡೆ ನಾವು ಕಾಣಬಹುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾಲ್ಕನೇ ದಿನ ಕಾಣುಂ ಪೊಂಗಲ್. ಅಂದರೆ ನೋಡುವ ಪೊಂಗಲ್ ಹಬ್ಬ ಎಂದರ್ಥ. ಮನೆ ಮನೆಗೆ ತೆರಳಿ "ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ" ಎಂದು ಹಾರೈಸುತ್ತಾ, ಎಳ್ಳು, ಬೆಲ್ಲ, ಸಕ್ಕರೆಯಚ್ಚು, ಕೊಬ್ಬರಿ, ಸಕ್ಕರೆಬೊಂಬೆ, ಜತೆಗೆ ಹುರಿಗಡಲೆ, ನೆಲಗಡಲೆ ಸೇರಿಸಿ, ಕಬ್ಬು ಕೂಡ ಪರಸ್ಪರ ವಿನಿಮಯ ಮಾಡುತ್ತಾ, ನೆರೆಕರೆಯ ಬಾಂಧವ್ಯ ವೃದ್ಧಿಯಾಗಿಸಿಕೊಳ್ಳುವ ಆಚರಣೆ. ಇದಕ್ಕೆ ಎಳ್ಳುಬೀರುವುದು ಎನ್ನುತ್ತಾರೆ. ಇಲ್ಲಿ ಎಳ್ಳು ಶನಿಯ ಪ್ರತೀಕ ಮತ್ತು ಬೆಲ್ಲ ಸೂರ್ಯನ ಪ್ರತೀಕ. ಶನಿ-ಸೂರ್ಯನ ಅಂದರೆ ತಂದೆ-ಮಕ್ಕಳ ಬಾಂಧವ್ಯದ ಸಂಕೇತವೂ ಹೌದು. ಆದರೆ, ಇತ್ತೀಚೆಗಿನ ಅವಸರದ ಯುಗದಲ್ಲಿ ಎಲ್ಲ ಆಚರಣೆಗಳೂ ಒಂದೇ ದಿನಕ್ಕೆ ಸೀಮಿತವಾಗುತ್ತಿರುವುದು ನಾವು ಕಾಣುತ್ತಿರುವ ಸತ್ಯ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ವಿವಿಧತೆಯಲ್ಲಿ ಏಕತೆ </font><font style=' color:#000000;'></b></font><br/><font  style='font-size:11pt; color:#000000'>ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಆಚರಣೆಯಿದೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವೆಂದು ಕರೆಸಿಕೊಳ್ಳುವ ಇದು ಈ ವರ್ಷದಿಂದ ತಮಿಳು ಹೊಸ ವರ್ಷಾರಂಭ ದಿನವಾಗಿಯೂ ಅಧಿಕೃತವಾಗಿ ಮಾನ್ಯವಾಗಿದೆ. ಸಿಹಿ ಪೊಂಗಲ್ ಈ ದಿನದ ವಿಶೇಷ. ಕೇರಳ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಮಹಾರಾಷ್ಟ್ರದಲ್ಲಿ ತಿಲ-ಗುಳ್ (ಎಳ್ಳುಂಡೆ) ಹಬ್ಬವಾಗಿ, ಆಂಧ್ರ ಪ್ರದೇಶದಲ್ಲಿ ಪೆದ್ದ ಪಂಡುಗ (ದೊಡ್ಡ ಹಬ್ಬ), ಅಸ್ಸಾಂನಲ್ಲಿ ಭೋಗಲಿ ಬಿಹು/ಮಾಘ ಬಿಹು, ಬಿಹಾರದಲ್ಲಿ ತಿಲ ಸಂಕ್ರಾಂತಿ, ಗುಜರಾತಿನಲ್ಲಿ ಗಾಳಿಪಟ ಉತ್ಸವವನ್ನೊಳಗೊಂಡ ಉತ್ತರಾಯಣ, ಮಧ್ಯಪ್ರದೇಶದಲ್ಲಿ ಸುಕಾರತ್/ಸಕಾರತ್, ಪಂಜಾಬ್ ಮತ್ತು ಹರ್ಯಾಣದಲ್ಲಿ ಲೋಹ್ರಿ, ಉತ್ತರ ಪ್ರದೇಶದಲ್ಲಿ ಕಿಚಿಡಿ/ಕಿಚಿರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಮೇಳದ ಮೂಲಕ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಗುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಉತ್ತರಾಯಣ ಪುಣ್ಯಕಾಲವೇ ಇದು? </font><font style=' color:#000000;'></b></font><br/><font  style='font-size:11pt; color:#000000'>ಉತ್ತರಾಯಣ ಪುಣ್ಯಕಾಲಕ್ಕೂ ಮಕರ ಸಂಕ್ರಾಂತಿಗೂ ಸಂಬಂಧ ಕಲ್ಪಿಸಲಾಗುತ್ತದೆಯಾದರೂ, ಅದರ ಬಗೆಗಿನ್ನೂ ವಾದ-ವಿವಾದಗಳಿವೆ. ನಮ್ಮ ದೇಶದಲ್ಲಿ ಚಾಂದ್ರಮಾನ (ಚಂದ್ರನ ಚಲನೆ ಆಧರಿಸಿದ) ಮತ್ತು ಸೌರಮಾನ (ಸೂರ್ಯನ ಚಲನೆ ಆಧರಿಸಿದ) ಎರಡು ಪಂಚಾಂಗಗಳನ್ನು ಅನುಸರಿಸಲಾಗುತ್ತದೆ. ಹೆಚ್ಚಾಗಿ ಹಬ್ಬ ಹರಿದಿನಗಳ ದಿನಗಳನ್ನು ನಿರ್ಣಯಿಸುವುದು ಚಾಂದ್ರಮಾನ ಅಥವಾ ನಿರಯನ ಪಂಚಾಂಗದ ಪ್ರಕಾರ. ಆದರೆ, ಮಕರ ಸಂಕ್ರಾಂತಿ ಮಾತ್ರ ಇದಕ್ಕೆ ಹೊರತಾಗಿದೆ. ಅದು ಸೂರ್ಯನ ಪರಿಭ್ರಮಣೆಯ ಆಧಾರದ ಸೌರಮಾನ ಅಥವಾ ಸಾಯನ ಪಂಚಾಗ ಆಧರಿತವಾಗಿದೆ. ಯಾಕೆಂದರೆ ಚಂದ್ರನ ಚಲನೆಯನ್ನು ಆಧರಿಸಿ (ಚಾಂದ್ರಮಾನ ಪದ್ಧತಿ ಪ್ರಕಾರದ ಪಂಚಾಂಗ ಅನುಸರಿಸಿ) ನೋಡಿದರೆ, ಉತ್ತರಾಯನ ಅಂದರೆ ಸೂರ್ಯನ ಉತ್ತರಾಭಿಮುಖ ಚಲನೆ ಆರಂಭವಾಗುವುದು ಡಿಸೆಂಬರ್ 22ರ ಆಸುಪಾಸಿನಲ್ಲಿ ಬರುವ ವೈಕುಂಠ ಏಕಾದಶಿಯಂದು. ಅಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಕಾರಣಕ್ಕೇ ಶರಶಯ್ಯೆಯಲ್ಲಿದ್ದ 'ಇಚ್ಛಾಮರಣಿ' ಭೀಷ್ಮಾಚಾರ್ಯರು ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗಕ್ಕಾಗಿ ಕಾದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೂರ್ಯನು ಉತ್ತರಾಭಿಮುಖವಾಗಿ ಪರಿಭ್ರಮಣ ನಡೆಸುವ ಈ ಉತ್ತರಾಯಣದ ಆರು ತಿಂಗಳ ಕಾಲವು ಅತ್ಯಂತ ಶ್ರೇಷ್ಠವಾದ ಶುಭ ದಿನಗಳನ್ನು ಹೊಂದಿರುತ್ತವೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ವಿವಾಹವೇ ಮೊದಲಾದ ಮಂಗಳ ಕಾರ್ಯಗಳು ಜರುಗುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಮಗೆ ಹಿರಿಯರು ಹೇಳಿದ್ದಿದೆ- ಮಗೂ... ನಮಗೆ ಒಂದು ವರ್ಷ ಎಂದರೆ, ದೇವ ದೇವತೆಗಳಿಗೆ ಒಂದು ದಿನ ಇದ್ದ ಹಾಗೆ ಎಂಬುದಾಗಿ. ಅದನ್ನೇ ನೆನಪಿಸಿಕೊಂಡು ಹೇಳಬಹುದಾದರೆ, ಆ ದೇವ ದೇವತೆಗಳ ಒಂದು ದಿನದಲ್ಲಿ ಆರು ತಿಂಗಳ ಹಗಲು ಆರಂಭವಾಗುವುದು ಉತ್ತರಾಯನ (ಉತ್ತರಾಯಣ) ಪುಣ್ಯಕಾಲದಲ್ಲಿ. ಕೊನೆಗೊಳ್ಳುವುದು ದಕ್ಷಿಣಾಯನದಲ್ಲಿ (ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಿದಾಗ - ಕರ್ಕ ಸಂಕ್ರಮಣ). ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿ ರಾತ್ರಿ ಕಡಿಮೆ ಇದ್ದರೆ, ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು, ಹಗಲಿನ ಅವಧಿ ಕಡಿಮೆ. ಸೌರಮಾನವೋ, ಚಾಂದ್ರಮಾನವೋ, ಸಾಯನವೋ... ನಿರಯನವೋ...ಒಟ್ಟಿನಲ್ಲಿ ಸೂರ್ಯ ಉತ್ತರಾಭಿಮುಖ ಚಲನೆ ಆರಂಭಿಸಿದ ಬಳಿಕ ಮೊದಲು ಬರುವ ಸಂಕ್ರಮಣವಿದು. ದೇವಾನುದೇವತೆಗಳ ರಾತ್ರಿ ಕಳೆದು ಹಗಲಾಗುವ ದಿನ ಈ ಮಕರ ಸಂಕ್ರಮಣ. ಅದೇ ರೀತಿ ನಮ್ಮ ಜೀವನದಲ್ಲೂ ಕತ್ತಲು ಕಳೆಯಲಿ, ಬೆಳಕು ಮೆರೆಯಲಿ... ಎಳ್ಳು ಬೆಲ್ಲವ ತಿಂದು ನಾಲ್ಕು ಒಳ್ಳೆಯ ಮಾತಾಡುವಂತಾಗಲಿ...</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b><i>ಶುಭಂ </b></i></font>]]></content:encoded>
      <pubDate>Mon, 12 Jan 2009 12:21:45 +0530</pubDate>
      <updatedDate>Tue, 15 Apr 2014 12:24:29 +0530</updatedDate>
      <category><![CDATA[festivals]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಬ್ರಹ್ಮೋತ್ಸವ: ಏಳುಬೆಟ್ಟದೊಡೆಯನ ಮೋಹಿನಿ ಅವತಾರ]]></title>
      <link>https://kannada.webdunia.com/article/festivals/ಬ್ರಹ್ಮೋತ್ಸವ-ಏಳುಬೆಟ್ಟದೊಡೆಯನ-ಮೋಹಿನಿ-ಅವತಾರ-108100600027_1.htm</link>
      <guid>https://kannada.webdunia.com/article/festivals/ಬ್ರಹ್ಮೋತ್ಸವ-ಏಳುಬೆಟ್ಟದೊಡೆಯನ-ಮೋಹಿನಿ-ಅವತಾರ-108100600027_1.htm</guid>
      <media:thumbnail url="http:"/>
      <image>http:</image>
      <description><![CDATA[ತಿರುಪತಿ ತಿರುಮಲ ಬೆಟ್ಟದಲ್ಲಿ ಬ್ರಹ್ಮಾಂಡದೊಡೆಯನಿಗೆ ಬ್ರಹ್ಮೋತ್ಸವ ವೈಭವವು ಭರದಿಂದ ನಡೆಯುತ್ತಿದ್ದು, ಶ್ರೀ ವಾರಿ ಬ್ರಹ್ಮೋತ್ಸವದ ಐದನೇ ದಿನವಾದ ಭಾನುವಾರ ಮೋಹಿನಿ ಅವತಾರ ಅಲಂಕಾರದಲ್ಲಿ ವೆಂಕಟೇಶ್ವರ ಸ್ವಾಮಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.]]></description>
      <content:encoded><![CDATA[<font  style='font-size:11pt; color:#000000'>ತಿರುಪತಿ ತಿರುಮಲ ಬೆಟ್ಟದಲ್ಲಿ ಬ್ರಹ್ಮಾಂಡದೊಡೆಯನಿಗೆ ಬ್ರಹ್ಮೋತ್ಸವ ವೈಭವವು ಭರದಿಂದ ನಡೆಯುತ್ತಿದ್ದು, ಶ್ರೀ ವಾರಿ ಬ್ರಹ್ಮೋತ್ಸವದ ಐದನೇ ದಿನವಾದ ಭಾನುವಾರ ಮೋಹಿನಿ ಅವತಾರ ಅಲಂಕಾರದಲ್ಲಿ ವೆಂಕಟೇಶ್ವರ ಸ್ವಾಮಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಲಂಕಾರ ಪ್ರಿಯ ವೆಂಕಟೇಶ್ವರನು ಮೋಹಿನಿ ಅವತಾರದಲ್ಲಿ ಮಾತ್ರವಲ್ಲದೆ, ಮೈಸೂರು ಮಹಾರಾಜರು ಕೊಡುಗೆ ನೀಡಿದ ದಂತ ಮತ್ತು ತೇಗದ ಮರದಿಂದ ನಿರ್ಮಿಸಿದ ಪಲ್ಲಕ್ಕಿಯಲ್ಲಿ ಬಾಲ ಕೃಷ್ಣನಾಗಿಯೂ ಕಂಗೊಳಿಸಿ, ಭಕ್ತರನ್ನು ಮಂತ್ರಮುಗ್ಧಗೊಳಿಸಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಮುದ್ರಮಥನ ಕಾಲದಲ್ಲಿ ಅಮೃತ ಸುಧೆಯನ್ನು ಸುರರಿಗೆ ಸಿಗುವಂತಾಗಲು ಅಸುರರನ್ನು ಮೋಡಿ ಮಾಡಿದ ಮೋಹಿನಿ ರೂಪವು, ಇಡೀ ವಿಶ್ವವೇ ಮಾಯಾ ಮೋಹಿನಿಯಿಂದ ಆವೃತವಾಗಿದೆ. ಈ ಜಗತ್ತಿನ ನಾಟಕಕ್ಕೆ ತಿರುಮಲಾಧಿಪತಿಯು ಸೂತ್ರದಾರನಾಗಿದ್ದಾನೆ ಎಂಬುದರ ಸಂಕೇತ. ಉತ್ಸವ ಮೂರುತಿಯ ಸೌಂದರ್ಯ, ಆಭರಣ ಮತ್ತು ಶ್ರೀಮಂತಿಕೆಯನ್ನು ಕಣ್ಣಾರೆ ಕಂಡ ಭಕ್ತರು ಪುನೀತ ಭಾವ ಪ್ರದರ್ಶಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀ ವಾರಿ (ಶ್ರೀ ವೆಂಕಟೇಶ್ವರ) ಮೋಹಿನಿ ರೂಪದಲ್ಲಿ ಸಾಲಂಕೃತನಾಗಿರುವುದು ಮತ್ತು ಶುಭ್ರವಾದ ರಜತ-ದಂತ ಪಲ್ಲಕ್ಕಿಯಲ್ಲಿ ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆ ದೇವಾಲದ ಮುಖ್ಯ ಅರ್ಚಕ ಡಾ.ಎ.ವಿ.ರಮಣ ದೀಕ್ಷಿತರು. ಮೋಹಿನಿ ಅವತಾರದಲ್ಲಿ ದೇವರ ಮೆರವಣಿಗೆ ವೀಕ್ಷಿಸುವುದು ಪುಣ್ಯಪ್ರದವಾಗಿದ್ದು, ನಂಬಿಕೆ ಇಲ್ಲದವರು ಕೂಡ ಮೋಹಿನಿಯ ಸೌಂದರ್ಯಕ್ಕೆ ಮಾರುಹೋಗಿ, ದೇವಾಧಿದೇವನ ಭಕ್ತರಾಗುತ್ತಾರೆ ಎಂಬುದು ಶ್ರದ್ಧಾಳುಗಳ ವಿಶ್ಲೇಷಣೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇವಾಲಯದ ನಾಲ್ಕೂ ರಥಬೀದಿಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ)ಯು, ಈ ಬ್ರಹ್ಮೋತ್ಸವ ವೀಕ್ಷಣೆಗಾಗಿ ಭಕ್ತರ ಅನುಕೂಲಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಸನ ವ್ಯವಸ್ಥೆಯನ್ನೂ ಮಾಡಿತ್ತು.</font>]]></content:encoded>
      <pubDate>Mon, 06 Oct 2008 16:21:24 +0530</pubDate>
      <updatedDate>Tue, 15 Apr 2014 12:10:16 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ತಿರುಪತಿಯಲ್ಲಿ ಸರ್ವ ಭೂಪಾಲ ವಾಹನೋತ್ಸವ]]></title>
      <link>https://kannada.webdunia.com/article/festivals/ತಿರುಪತಿಯಲ್ಲಿ-ಸರ್ವ-ಭೂಪಾಲ-ವಾಹನೋತ್ಸವ-108100600026_1.htm</link>
      <guid>https://kannada.webdunia.com/article/festivals/ತಿರುಪತಿಯಲ್ಲಿ-ಸರ್ವ-ಭೂಪಾಲ-ವಾಹನೋತ್ಸವ-108100600026_1.htm</guid>
      <media:thumbnail url="http:"/>
      <image>http:</image>
      <description><![CDATA[ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಶನಿವಾರ (ಅ.4) ಶ್ರೀ ಸ್ವಾಮಿಗೆ ರಾಜರ ರಾಜ ಅಂದರೆ ಸರ್ವಭೂಪಾಲ ವಾಹನೋತ್ಸವವು ವಿಜೃಂಭಣೆಯಿಂದ ಜರುಗಿತು.]]></description>
      <content:encoded><![CDATA[<font  style='font-size:11pt; color:#000000'>ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಶನಿವಾರ (ಅ.4) ಶ್ರೀ ಸ್ವಾಮಿಗೆ ರಾಜರ ರಾಜ ಅಂದರೆ ಸರ್ವಭೂಪಾಲ ವಾಹನೋತ್ಸವವು ವಿಜೃಂಭಣೆಯಿಂದ ಜರುಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭೂಮಿ, ನೀರು ಮತ್ತು ಆಕಾಶದ ರಾಜರುಗಳೇ ಭೂಪಾಲರು. ಅವರೆಲ್ಲರೂ ಶ್ರೀ ಸ್ವಾಮಿಯನ್ನು ವಾಹನ ಸೇವೆ ನಡೆಸುತ್ತಾರೆ. ಸರ್ವಭೂಪಾಲರಲ್ಲದೆ, ಅಷ್ಟ ದಿಕ್ಪಾಲಕರೂ ಈ ವೈಭವದ ಸೇವೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂಬುದು ನಂಬಿಕೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಷ್ಟ ದಿಕ್ಪಾಲರು ಶ್ರೀ ವೆಂಕಟೇಶ್ವರನ ಸೇವಾ ಕೈಂಕರ್ಯದಲ್ಲಿ ಬದ್ಧರಾಗಿದ್ದು, ಅವರೆಲ್ಲರೂ ಶ್ರೀ ಸ್ವಾಮಿಗೆ ಅಧೀನವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಸರ್ವಭೂಪಾಲ ವಾಹನ ಸೇವೆಯು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ದೇವಸ್ಥಾನದ ಮುಖ್ಯ ಅರ್ಚಕ ಡಾ.ಎ.ವಿ.ರಮಣ ದೀಕ್ಷಿತರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಷ್ಟ ದಿಕ್ಪಾಲಕರೆಂದರೆ ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ ಹಾಗೂ ಪರಮೇಶ್ವರ. ಇವರೆಲ್ಲರನ್ನೂ ನಿಯಂತ್ರಿಸುವ ಶ್ರೀ ವೆಂಕಟೇಶ್ವರನು ಸರ್ವಭೂಪಾಲ ವಾಹನದಲ್ಲಿ ಆಸೀನನಾಗುವುದು, ಇಡೀ ಜಗತ್ತೇ ಆತನ ನಿಯಂತ್ರಣದಲ್ಲಿದೆ, ಜಗತ್ತಿನ ಜನರು ಸಕಾಲದಲ್ಲಿ, ಮಳೆ, ಬೆಳೆ ಪಡೆದು ಸಮೃದ್ಧಿ ಹೊಂದುತ್ತಾರೆ ಎಂಬುದರ ಸಂಕೇತ.</font>]]></content:encoded>
      <pubDate>Mon, 06 Oct 2008 16:17:46 +0530</pubDate>
      <updatedDate>Tue, 15 Apr 2014 12:10:16 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ತಿರುಪತಿ ಬ್ರಹ್ಮೋತ್ಸವ: ಕಲ್ಪವೃಕ್ಷ ವಾಹನೋತ್ಸವ]]></title>
      <link>https://kannada.webdunia.com/article/festivals/ತಿರುಪತಿ-ಬ್ರಹ್ಮೋತ್ಸವ-ಕಲ್ಪವೃಕ್ಷ-ವಾಹನೋತ್ಸವ-108100600025_1.htm</link>
      <guid>https://kannada.webdunia.com/article/festivals/ತಿರುಪತಿ-ಬ್ರಹ್ಮೋತ್ಸವ-ಕಲ್ಪವೃಕ್ಷ-ವಾಹನೋತ್ಸವ-108100600025_1.htm</guid>
      <media:thumbnail url="http:"/>
      <image>http:</image>
      <description><![CDATA[ಶ್ರೀ ವಾರಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಶನಿವಾರ ತಿರುಮಲ ಬೆಟ್ಟಗಳೊಡೆಯ ವೆಂಕಟೇಶ್ವರನನ್ನು ಕಲ್ಪ ವೃಕ್ಷ ವಾಹನದಲ್ಲಿ ವಿರಾಜಮಾನನಾಗಿ ರಾಜಪಥದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಾಗ ನೆರೆದಿದ್ದ ಜನತೆ ಗೋವಿಂದಾ ಗೋವಿಂದಾ ಎನ್ನುತ್ತಾ ಭಕ್ತಿ ಭಾವದಲ್ಲಿ ಮಿಂದು ಪುಳಕಗೊಂಡರು.]]></description>
      <content:encoded><![CDATA[<font  style='font-size:11pt; color:#000000'>ಶ್ರೀ ವಾರಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಶನಿವಾರ ತಿರುಮಲ ಬೆಟ್ಟಗಳೊಡೆಯ ವೆಂಕಟೇಶ್ವರನನ್ನು ಕಲ್ಪ ವೃಕ್ಷ ವಾಹನದಲ್ಲಿ ವಿರಾಜಮಾನನಾಗಿ ರಾಜಪಥದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಾಗ ನೆರೆದಿದ್ದ ಜನತೆ ಗೋವಿಂದಾ ಗೋವಿಂದಾ ಎನ್ನುತ್ತಾ ಭಕ್ತಿ ಭಾವದಲ್ಲಿ ಮಿಂದು ಪುಳಕಗೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಲ್ಪವೃಕ್ಷ ವಾಹನದಲ್ಲಿ ವಿರಾಜಮಾನನಾದ ಶ್ರೀ ವೆಂಕಟೇಶ್ವರನು ನಾಲ್ಕೂ ಬೀದಿಗಳಲ್ಲಿ ದರುಶನ ನೀಡಿದಾಗ ನೆರೆದಿದ್ದ ಭಕ್ತ ಸಮೂಹದ ಕಣ್ಮನ ತುಂಬಿಕೊಂಡು ಪುನೀತ ಭಾವ ತಳೆದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇವಾಸುರರ ಸಮುದ್ರ ಮಥನ ಕಾಲದಲ್ಲಿ ಅಮೃತ ಉತ್ಪತ್ತಿಯಾದ ಸಂದರ್ಭದಲ್ಲಿ ಮಂದರ ಪರ್ವತದ ಮೇಲೆ ಆದಿಶೇಷನು ತನ್ನ ಹಿಡಿತ ಬಿಗಿಗೊಳಿಸಿದಾಗ ಕಲ್ಪವೃಕ್ಷವು ಉದಿಸಿತು. ಕಲ್ಪವೃಕ್ಷದ ಕೆಳಗೆ ಆಶ್ರಯ ಪಡೆದವರೆಲ್ಲರೂ ಯಾವುದೇ ರೀತಿಯ ತೊಂದರೆ, ಬಡತನದಿಂದ ಮುಕ್ತರಾಗಿರುತ್ತಾರೆ ಎನ್ನುತ್ತದೆ ಭಾಗವತ ಪುರಾಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಲ್ಪವೃಕ್ಷ ವಾಹನೋತ್ಸವವು ಪರಿಸರ, ಹಸಿರು ಕಾಡು, ಮಾಲಿನ್ಯ ನಿವಾರಣೆಗೆ ನಾವು ನೀಡಬೇಕಾಗಿರುವ ಮಹತ್ವದ ಸಂಕೇತವಾಗಿದೆ. ಕಲ್ಪಿಸಿದ್ದನ್ನು ಕೊಡಬಲ್ಲ ಸಾಮರ್ಥ್ಯವಿರುವ ದೇವರು ಎಂದೇ ವೆಂಕಟೇಶ್ವರನನ್ನು ನುತಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಲ್ಪವೃಕ್ಷ ವಾಹನವು ಹಚ್ಚ ಹಸಿರಿನಿಂದ ಕೂಡಿ ಭಕ್ತರ ಮನದಲ್ಲಿ ವಿದ್ಯುತ್ ಸಂಚಾರವುಂಟು ಮಾಡುತ್ತದೆ. ಇದರಲ್ಲಿ ಕಲ್ಪವೃಕ್ಷ ಮಾತ್ರವಲ್ಲದೆ, ಕಾಮಧೇನು ಮತ್ತು ಚಿಂತಾಮಣಿಯ ಅಲಂಕಾರಗಳೂ ಕಂಗೊಳಿಸುತ್ತವೆ.</font>]]></content:encoded>
      <pubDate>Mon, 06 Oct 2008 16:01:27 +0530</pubDate>
      <updatedDate>Tue, 15 Apr 2014 12:10:16 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪೂವಿಳಿ ಪೂವಿಳಿ ಪೊನ್ನೋಣ.....]]></title>
      <link>https://kannada.webdunia.com/article/festivals/ಪೂವಿಳಿ-ಪೂವಿಳಿ-ಪೊನ್ನೋಣ-108091000024_1.htm</link>
      <guid>https://kannada.webdunia.com/article/festivals/ಪೂವಿಳಿ-ಪೂವಿಳಿ-ಪೊನ್ನೋಣ-108091000024_1.htm</guid>
      <media:thumbnail url="http:"/>
      <image>http:</image>
      <description><![CDATA[ಓಣಂ ದಿನಗಳಲ್ಲಿ ಕೇರಳ ನಾಡು ತನ್ನ ಸಾಂಪ್ರದಾಯಿಕತೆಯಲ್ಲಿ ಮುಳುಗೇಳುತ್ತದೆ. ಬಲಿ ಚಕ್ರವರ್ತಿಯ ಓಣಂ ದಿನಗಳಲ್ಲಿ ಭೂಮಿಗೆ ಬರುತ್ತಾನೆಂಬುದು ಇಲ್ಲಿನವರ ನಂಬಿಕೆ.]]></description>
      <content:encoded><![CDATA[<font  style='font-size:11pt; color:#0000FF'><b>ಕೃಷ್ಣವೇಣಿ ಕುಂಜಾರು</b></font></p><p align=center><font  style='font-size:11pt; color:#0000FF'><b>ಪೂವಿಳಿ ಪೂವಿಳಿ ಪೊನ್ನೋಣವನ್ನು </b></font></p><p align=center><font  style='font-size:11pt; color:#0000FF'><b>ನೀ ವರು ನೀವರು ಪೊನ್ನೋಣ ತುಂಬಿ... </font><font style=' color:#000000;'></b></font></p><font  style='font-size:11pt; color:#000000'>ಹೀಗೆಂದು ಕೇರಳಕ್ಕೆ ಕೇರಳವೇ ಹಾಡಿ ಕುಣಿದು ಸಂಭ್ರಮಿಸುವ ಓಣಂ ನಾಳ್‌ಗಳ್ (ದಿನಗಳು) ಕೇರಳೀಯರನ್ನು ಕೈ ಬೀಸಿ ಕರೆಯುತ್ತಿರೆ ಅಲ್ಲಿನ ಪ್ರತಿಯೊಬ್ಬನೂ ಜಾತಿ ಮತ ಭೇದವಿಲ್ಲದೆ ಎದುರುಗೊಳ್ಳಲು ಸಿದ್ಧವಾಗಿದ್ದಾನೆ. </font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0809/10/images/img1080910024_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಓಣಂ ವಿಶೇಷತೆಯೇ ಅದು. ಈ ದಿನಗಳಲ್ಲಿ ಕೇರಳ ನಾಡು ತನ್ನ ಸಾಂಪ್ರದಾಯಿಕತೆಯಲ್ಲಿ ಮುಳುಗೇಳುತ್ತದೆ. ಬಲಿ ಚಕ್ರವರ್ತಿಯ ಓಣಂ ದಿನಗಳಲ್ಲಿ ಭೂಮಿಗೆ ಬರುತ್ತಾನೆಂಬುದು ಇಲ್ಲಿನವರ ನಂಬಿಕೆ. ಅದರ ಪ್ರತೀಕವಾಗಿ ಬಲಿ ಚಕ್ರವರ್ತಿ, ವಾಮನ ವೇಷಧಾರಿಗಳು ಮನೆಮನೆಗೆ ಬಂದು "ತಿರುಮೇನೀ...." ಎಂದು ಕೂಗು ಹಾಕಿದೊಡನೆ ಮನೆಯ ಯಜಮಾನ ಆತನಿಗೆ ಫಲಾಹಾರಗಳನ್ನು ಕೊಟ್ಟು ಸತ್ಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ 'ಮಾವೇಲಿ' ಬಹುಮಾನವಿತ್ತು ವೇಷಧಾರಿ ಹಿಂದಿರುಗುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜತೆಗೆ ಮನೆ ಯಜಮಾನ ಮನೆಯವರಿಗೆಲ್ಲಾ ಉಡುಗೊರೆಗಳನ್ನಿತ್ತು ಸಂಭ್ರಮಿಸುವ ಕಾಲವಿದು.  </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನು ಓಣಂ 'ಸದ್ಯ' ಅಂದರೆ ಓಣಂ ಹಬ್ಬದೂಟ ಅತ್ಯಂತ ಜನಪ್ರಿಯವಾದುದು. ಸಾಂಪ್ರದಾಯಿಕ ರೀತಿಯಲ್ಲಿ ಬಾಳೆಯ ಎಲೆಯ ಮೇಲೆ ಕುಚ್ಚಿಲು ಅಕ್ಕಿ ಅನ್ನ, ಕಾಳನ್, ಪುಳಿಶ್ಶೇರಿ (ಮೇಲೋಗರ), ಹಪ್ಪಳ, ತುಪ್ಪದ ಪಾಯಸ (ನೈ ಪಾಯಸಂ) ಇತ್ಯಾದಿಗಳನ್ನೊಳಗೊಂಡ ಭಕ್ಷ್ಯ ಭೋಜ್ಯಗಳು ಎಂಥವರ ಬಾಯಲ್ಲೂ ನೀರೂರಿಸುವಂತದ್ದು. ಇದಲ್ಲದೆ ಓಣಂ ಹಬ್ಬದ ಸಮಯದಲ್ಲಿ ಕೇರಳೀಯರ ಮನೆಗೆ ಭೇಟಿ ನೀಡಿದರೆ ಬೇಯಿಸಿದ ನೇಂದ್ರ ಬಾಳೆಹಣ್ಣು, ನೇಂದ್ರ ಬಾಳೆಕಾಯಿ ಚಿಪ್ಸ್ ಸವಿಯುವ ಭಾಗ್ಯ ಒದಗಬಹುದು. </font><br/><font  style='font-size:11pt; color:#000000'></font><br/>'<font  style='font-size:11pt; color:#000000'>ಪೂಕಳಂ' ಅಂದರೆ ರಂಗೋಲಿ ಇಡುವ ಕಾರ್ಯಕ್ರಮ ಅತ್ಯಂತ ಜನಪ್ರಿಯವಾದುದು. ಮನೆ ಮುಂದೆ ಸುಂದರ ರಂಗೋಲಿಯಿಟ್ಟು ಮಾವೇಲಿಯನ್ನು ಸ್ವಾಗತಿಸುವುದು ಇದರ ಉದ್ದೇಶ ಎಂದೂ ನಂಬಲಾಗುತ್ತದೆ.<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0809/10/images/img1080910024_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಲ್ಲದೆ ನಾಡಿನ ಸಾಂಪ್ರದಾಯಿಕ ಕಲೆಗಳಾದ ತಿರುವಾದಿರ ನೃತ್ಯ, ವೋಟ್ಟಂ ತುಳ್ಳಲ್, ದೋಣಿಯಾಟ, ಓಣಂ ಪಾಟ್(ಓಣಂ ಹಾಡು), ಮುಂತಾದವುಗಳು ಗರಿಬಿಚ್ಚಿಕೊಳ್ಳುತ್ತವೆ ಮತ್ತು ಮುದನೀಡುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಾಸರಗೋಡಿನಂತಹ ಗಡಿ ಪ್ರದೇಶದಿಂದ ದಕ್ಷಿಣ ಕೇರಳಕ್ಕೆ ಹೋಗುತ್ತಿದ್ದರೆ ಓಣಂ ಸಮಯದ ಮನಮೋಹಕ ಸಂದರ್ಭವನ್ನು ಸವಿಯಬಹುದು. ಹಾಗಾಗಿ ಇದು ಅಚ್ಚ ಮಲಯಾಳಿ ಹಬ್ಬವೆಂಬ ಅಭಿಪ್ರಾಯವೂ ಇದೆ. ಅದೇನೇ ಇದ್ದರೂ ಇದು ಕೇರಳೀಯರೆಲ್ಲರೂ ತಮ್ಮ ಸಾಂಪ್ರದಾಯಿಕತೆಯನ್ನು ಒರೆಗೆ ಹಚ್ಚಿಕೊಳ್ಳುವ ಹಬ್ಬ. ಈ ಹಬ್ಬದ ವಿಶೇಷತೆಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಟ್ಟಾರೆಯಾಗಿ ಹೇಳುವುದಾದರೆ ಜಗತ್ತಿನೆಲ್ಲೆಡೆಯಿರುವ ಕೇರಳೀಯರು ತಮ್ಮ ಜಾತಿ ಮತ ಅಂತಸ್ತು ಬದಿಗೊತ್ತಿ ಸಮಾನತೆಯಿಂದ, ಸಂಭ್ರಮದಿಂದ ಆಚರಿಸುವ ಒಂದೇ ಹಬ್ಬ ಓಣಂ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಲ್ಲರಿಗೂ ಓಣಂ ಶುಭಾಶಯಗಳು....</font>]]></content:encoded>
      <pubDate>Wed, 10 Sep 2008 18:43:50 +0530</pubDate>
      <updatedDate>Tue, 15 Apr 2014 12:03:34 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ರಾಜ್ಯಾದ್ಯಂತ ಗೌರಿ - ಗಣೇಶ ಹಬ್ಬದ ಸಂಭ್ರಮ]]></title>
      <link>https://kannada.webdunia.com/article/festivals/ರಾಜ್ಯಾದ್ಯಂತ-ಗೌರಿ-ಗಣೇಶ-ಹಬ್ಬದ-ಸಂಭ್ರಮ-108090200023_1.htm</link>
      <guid>https://kannada.webdunia.com/article/festivals/ರಾಜ್ಯಾದ್ಯಂತ-ಗೌರಿ-ಗಣೇಶ-ಹಬ್ಬದ-ಸಂಭ್ರಮ-108090200023_1.htm</guid>
      <media:thumbnail url="http:"/>
      <image>http:</image>
      <description><![CDATA[ಬೆಂಗಳೂರು:ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಒಂದೆಡೆಯಾದರೆ,ಮತ್ತೊಂದೆಡೆ ಬುಧವಾರ ನಡೆಯಲಿರುವ ಗಣೇಶನ ಹಬ್ಬಕ್ಕೆ ಬೀದಿ-ಬೀದಿಗಳಲ್ಲಿ ಅಲಂಕಾರಗೊಂಡ ಗಣೇಶನ ಮೂರ್ತಿ ಖರೀದಿ ಭರಾಟೆ ನಡೆದಿದೆ.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0809/02/images/img1080902023_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> <font  style='font-size:11pt; color:#000000'>ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಬುಧವಾರ ನಡೆಯಲಿರುವ ಗಣೇಶನ ಹಬ್ಬಕ್ಕೆ ಬೀದಿ-ಬೀದಿಗಳಲ್ಲಿ ಅಲಂಕಾರಗೊಂಡ ಗಣೇಶನ ಮೂರ್ತಿ ಖರೀದಿ ಭರಾಟೆ ನಡೆದಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೆಣ್ಣುಮಕ್ಕಳು ತವರಿನ ನೆನಪಿಗೆ ಆಚರಿಸುವ ಹಬ್ಬ ಎನ್ನುವುದು ಸಂಪ್ರದಾಯದ ಮಾತು. ಹೆಣ್ಮಕ್ಕಳನ್ನು ತವರಿನತ್ತ ಆಕರ್ಷಿಸುವುದರೊಂದಿಗೆ ತಾಯಿ-ಮಗಳು ಇಬ್ಬರು ಪರಸ್ಪರ ಕಾಣುವ, ಬಾಗಿನ ಕೊಡುವ ತವಕ. ಅಲ್ಲದೆ, ಈ ದಿನ ಕೆಲವರು ಸ್ವರ್ಣಗೌರಿ ವ್ರತ ಕೂಡ ಆಚರಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಆಚರಣೆಯ ಪೌರಾಣಿಕ ಹಿನ್ನೆಲೆಯತ್ತ ಗಮನ ಹರಿಸಿದರೆ ಇದು ಪಾರ್ವತಿಯ ಕಥೆ. ಪರಮೇಶ್ವರನೊಂದಿಗೆ ವಿವಾಹವಾದ ಬಳಿಕ ಪಾರ್ವತಿ ತಂದೆ ಪರ್ವತರಾಜ, ಮಗಳನ್ನು ತವರಿಗೆ ಕರೆದುಕೊಂಡಲು ಬರುತ್ತಾನೆ. ಆದರೆ ಶಿವನಿಗಿದು ಇಷ್ಟವಿಲ್ಲ. ಆದರೂ ಶಂಕರ ಪತ್ನಿಯನ್ನು ಕಳುಹಿಸಲು ಒಪ್ಪುತ್ತಾನ</font><font style='font-size:12pt;'>ೆ<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0809/02/images/img1080902023_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> .</font><font style='font-size:11pt;'></font><br/><font  style='font-size:11pt; color:#000000'></font><br/><font  style='font-size:11pt; color:#000000'>ಬಹಳ ದಿನಗಳಾದರೂ ಪಾರ್ವತಿ ಬರದಿದ್ದಾಗ, ಮಗ ಗಣೇಶನನ್ನು ಕಳುಹಿಸುತ್ತಾನೆ ಶಿವ. ಅಲ್ಲಿ ತದಿಗೆಯಂದು ತವರಿನಲ್ಲಿ ಗೌರಿಗೆ ಸಿಹಿಯೂಟವಾದರೆ, ತಿಂಡಿಪೋತ ಗಣೇಶನಿಗೂ ಮರುದಿನ ಮೃಷ್ಟಾನ್ನ ಭೋಜನ. ಬಳಿಕ ಪಂಚಮಿಯಂದು ಅಮ್ಮನೊಂದಿಗೆ ವಾಪಸ್ ಹೊರಡುತ್ತಾನೆ ಗಣೇಶ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಬ್ಬ ಹರಿದಿನಗಳನ್ನು ಆಚರಿಸುವುದರಲ್ಲಿ ಬೆಂಗಳೂರಿನ ಜನತೆ ಎತ್ತಿದ ಕೈ. ಬೆಳಗ್ಗಿನಿಂದಲೇ ಎಲ್ಲಾ ಮನೆಗಳಲ್ಲಿ ಗೌರಿ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಭಕ್ಷ್ಯಗಳನ್ನಿಟ್ಟು ಸಂಭ್ರಮಿ ಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಈ ನಡುವೆ ಹಣದುಬ್ಬರದ ಬಿಸಿ ಗೌರಿ-ಗಣೇಶ ಹಬ್ಬಕ್ಕೂ ತಟ್ಟಿದೆ.ಮುದ್ದು ಗೌರಿ ಮೂರ್ತಿಗಳ ಹಿಂದೆ ಸಾಲಾಗಿ ಕುಳಿತ ಗಣಪನ ವಿಗ್ರಹಗಳು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿದೆ.</font>]]></content:encoded>
      <pubDate>Tue, 02 Sep 2008 13:38:14 +0530</pubDate>
      <updatedDate>Tue, 15 Apr 2014 12:03:34 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಅಣ್ಣ ತಂಗಿಯರ ಭಾವ ಸಂಬಂಧದ ನಾಗಪಂಚಮಿ]]></title>
      <link>https://kannada.webdunia.com/article/festivals/ಅಣ್ಣ-ತಂಗಿಯರ-ಭಾವ-ಸಂಬಂಧದ-ನಾಗಪಂಚಮಿ-108080600049_1.htm</link>
      <guid>https://kannada.webdunia.com/article/festivals/ಅಣ್ಣ-ತಂಗಿಯರ-ಭಾವ-ಸಂಬಂಧದ-ನಾಗಪಂಚಮಿ-108080600049_1.htm</guid>
      <media:thumbnail url="http:"/>
      <image>http:</image>
      <description><![CDATA[ಬೆಂಗಳೂರು: ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. ಬುಧವಾರ ನಾಡಿನಾದ್ಯಂತ ಸಂಭ್ರಮ ಸಂತೋಷದಿಂದ ಮನೆಯವರೆಲ್ಲಾ ಜೊತೆಗೂಡಿ ನಾಗರ ಪಂಚಮಿ ಆಚರಿಸಿದರು.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0808/06/images/img1080806049_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> <font  style='font-size:11pt; color:#000000'>ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. ಬುಧವಾರ ನಾಡಿನಾದ್ಯಂತ ಸಂಭ್ರಮ ಸಂತೋಷದಿಂದ ಮನೆಯವರೆಲ್ಲಾ ಜೊತೆಗೂಡಿ ನಾಗರ ಪಂಚಮಿ ಆಚರಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬೆಳಿಗ್ಗಿನಿಂದಲೇ ಮನೆಯವರೆಲ್ಲಾ ಸೇರಿ ನಾಗನ ಹುತ್ತಕ್ಕೆ ಹಾಲು ಎರೆಯುವ ಮೂಲಕ ಪೂಜೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಾಗರ ಪಂಚಮಿ ಎರಡು ಆಚರಣೆಗಳಲ್ಲಿ ಒಂದು ನಾಗರಪೂಜೆ ಇನ್ನೊಂದು ಸಹೋದರ ಸಹೋದರಿಯರ ಭಾವ ಸಂಬಂಧಗಳು ಮುಖ್ಯವಾದವು. ಸಹೋದರಿಯರು ಸಹೋದರರ ಬೆನ್ನಿಗೆ ಹಾಲು, ನೀರು ಎರೆಯುವ ಮೂಲಕ ತವರು ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸುತ್ತಾರೆ. </font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0808/06/images/img1080806049_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>NRB</td></tr></table></td></tr></table></p><!--endImage--> <font  style='font-size:11pt; color:#000000'>ಉತ್ತರ ಭಾರತದಲ್ಲಿ ರಕ್ಷಾ ಬಂಧನ ವೇದಿಕೆಯಾದರೆ, ದಕ್ಷಿಣ ಭಾರತದಲ್ಲಿ ನಾಗರ ಪಂಚಮಿ. ಅಲ್ಲದೆ, ಮಗಳು ಬಂದ ಸಂಭ್ರಮದಲ್ಲಿ ತವರು ಮನೆಯಲ್ಲಿ ಹಬ್ಬದ ರಂಗೇರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತೀಯ ಪರಂಪರೆಯಲ್ಲಿ ನಾಗರ ಹಾವನ್ನು ದೈವಸ್ವರೂಪವೆಂದು ನಂಬಲಾಗುತ್ತಿದೆ. ಅಂತೆಯೇ ನಾಗರವು ಆದಿಶೇಷನ ಅವತಾರ ಎಂದು ಪುರಾಣ ತಿಳಿಸುತ್ತದೆ. ಆದರೆ ಹಾವಿನ ಹುತ್ತಕ್ಕೆ ಹಾಲೆರೆಯುವುದರಿಂದ ಹಾವು ಸಂತತಿ ನಾಶಗೊಳ್ಳುತ್ತದೆ ಎಂಬುದು ಹಾವು ತಜ್ಞರ ಅಭಿಪ್ರಾಯ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅರಶಿಣ, ಕುಂಕುಮಗಳ ವಾಸನೆಯಿಂದ ಹಾವುಗಳು ಸಾವನ್ನಪ್ಪುತ್ತದೆ ಎಂಬುದು ಅವರ ಅಂಬೋಣ. ಅಂತೂ ನಾಗರ ಪಂಚಮಿ ಇಂದು ಎಲ್ಲ ಕಡೆ ಸಡಗರದಿಂದ ಆಚರಿಸುತ್ತಿದ್ದಾರೆ.</font><br/></font>]]></content:encoded>
      <pubDate>Wed, 06 Aug 2008 18:21:46 +0530</pubDate>
      <updatedDate>Tue, 15 Apr 2014 11:56:34 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಬಿಲ್ವಪ್ರಿಯ ಪರಶಿವನಿಗೆ ಜಾಗರಣೆ ಪೂಜೆ - ಶಿವರಾತ್ರಿ]]></title>
      <link>https://kannada.webdunia.com/article/festivals/ಬಿಲ್ವಪ್ರಿಯ-ಪರಶಿವನಿಗೆ-ಜಾಗರಣೆ-ಪೂಜೆ-ಶಿವರಾತ್ರಿ-108030400039_1.htm</link>
      <guid>https://kannada.webdunia.com/article/festivals/ಬಿಲ್ವಪ್ರಿಯ-ಪರಶಿವನಿಗೆ-ಜಾಗರಣೆ-ಪೂಜೆ-ಶಿವರಾತ್ರಿ-108030400039_1.htm</guid>
      <media:thumbnail url="http:"/>
      <image>http:</image>
      <description><![CDATA[ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಇದರ ಆಚರಣೆ ಮಾರ್ಚ್ 5ರಂದು.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0803/04/images/img1080304039_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಇದರ ಆಚರಣೆ ಮಾರ್ಚ್ 5ರಂದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಉತ್ತರ ಭಾರತ ಹಾಗೂ ನೇಪಾಳದಲ್ಲಿ  ಶಿವನ  ಆರಾಧಕರು ಭಂಗ ಮತ್ತು ಲಸ್ಸಿಯನ್ನು ಕುಡಿಯುತ್ತಾರೆ (ಮಹಾರಾಷ್ಟ್ರದಲ್ಲಿ ಇದನ್ನು ಕಡ್ಡಾಯವಾಗಿ ಕುಡಿದು ಹಬ್ಬವನ್ನು ಆಚರಿಸುತ್ತಾರೆ, ಇದು ಅಮಲು ಪದಾರ್ಥವಾಗಿದೆ) ಇದು ಶಿವನಿಗೆ ತುಂಬಾ ಪ್ರೀತಿಯೆಂದು ಹೇಳುತ್ತಾರೆ. ಮಹಾಶಿವರಾತ್ರಿ ಹಬ್ಬದ ಆಚರಣೆ ಕುರಿತಂತೆ ಅನೇಕ ದಂತಕಥೆಗಳನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸಮುದ್ರ ಮಥನ:  </font><font style=' color:#000000;'></b></font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇವತೆಗಳ ಮತ್ತು ರಾಕ್ಷಸರ ಮಧ್ಯೆ ನಡೆದ ಸಮುದ್ರ ಮಥನದ ಸಂದರ್ಭದಲ್ಲಿ ಸಮುದ್ರದಿಂದ ಹಾಲಾಹಲ ಹೊರಬಂದು ಸೃಷ್ಟಿಯನ್ನು ಅಲ್ಲೋಲ ಕಲ್ಲೋಲ ಮಾಡುವ ಸಾಧ್ಯತೆಗಳನ್ನು ಕಂಡು ದೇವತೆಗಳು ವಿಷ್ಣುವಿನ ಮೊರೆ ಹೋಗಿ ಇಂತಹ ಭಯಾನಕ ವಿಷದಿಂದ ಪಾರುಮಾಡಲು ಬೇಡಿಕೊಂಡರು. ವಿಷ್ಣು ದೇವತೆಗಳ ಸಂಕಷ್ಟವನ್ನು ಆಲಿಸಿ ಶಿವನನ್ನು ಭೇಟಿಯಾಗುವಂತೆ ಸಲಹೆ ನೀಡಿದರು. ನಂತರ ದೇವತೆಗಳು ಶಿವನ ಬಳಿಗೆ ತೆರಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ದೇವತೆಗಳ ಕಷ್ಟವನ್ನು ಅರಿತ ಶಿವ ಹಾಲಾಹಲ ಕುಡಿದು ಅದು ಹೊರಗೆ ಬರದಂತೆ ಹಾವಿನಿಂದ ಸುತ್ತಿಕೊಂಡನೆಂದು ಹೇಳಲಾಗುತ್ತದೆ. ಆದುದರಿಂದ ಶಿವನ ಕಂಠ ನೀಲಿಯಾಗಿರುತ್ತದೆ. (ಶಿವನನ್ನು ನೀಲಕಂಠನೆಂದು ಕರೆಯುತ್ತಾರೆ)</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಜಲಪ್ರಳಯ:   </font><font style=' color:#000000;'></b></font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0803/04/images/img1080304039_1_2.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಜಗತ್ತು ಪ್ರಳಯದ ಬಿಕ್ಕಟ್ಟು ಎದುರಿಸುವ ಸಂದರ್ಭದಲ್ಲಿ ಪಾರ್ವತಿ ಜಗತ್ತನ್ನು ಉಳಿಸಲು ಜೀವಂತ ಆತ್ಮಗಳನ್ನು ಪೂಜಿಸಿದ್ದಲ್ಲದೇ ಕಷ್ಟದಿಂದ ಪಾರು ಮಾಡುವಂತೆ  ಶಿವನನ್ನು ಬೇಡಿಕೊಂಡಳು. ಪಾರ್ವತಿಯ ಬೇಡಿಕೆಯನ್ನು ಶಿವನು ಪೂರ್ತಿಗೊಳಿಸಿದನು. ಶಿವನು ಪ್ರಳಯದಿಂದ ಜೀವಸಂಕುಲವನ್ನು ಪಾರು ಮಾಡಿದ ರಾತ್ರಿಯನ್ನು ಮಹಾ ಶಿವರಾತ್ರಿ ಎಂದು ಪಾರ್ವತಿ ಹೆಸರಿಟ್ಟಿರುವುದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಳಯದಿಂದ ತಡೆದ ನಂತರ ಪಾರ್ವತಿ ನಿಮಗೆ ಯಾವ ದಿನದ ಪೂಜೆ ಇಷ್ಟವಾಯಿತು ಎಂದು ಕೇಳಿದಾಗ, ಮಾಘ ತಿಂಗಳಿನ 14ರ ರಾತ್ರಿ ನನ್ನ ಇಷ್ಟದ ರಾತ್ರಿಯಾಗಿದ್ದು, ಅದನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಎಂದು ಶಿವನು ಹೇಳಿದನು. ಶಿವನು ಹೇಳಿದ ಶಿವರಾತ್ರಿಯ ಬಗ್ಗೆ ಪಾರ್ವತಿ ತನ್ನ ಗೆಳತಿಯರಿಗೆ ಪ್ರಚುರಪಡಿಸಿದಳು. ತನ್ಮೂಲಕ ಶಿವರಾತ್ರಿಯ ಬಗ್ಗೆ ಎಲ್ಲೆಡೆ ಪ್ರಚಾರ ಮಾಡಲಾಯಿತು. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಬೇಡರ ಕಣ್ಣಪ್ಪ:  </font><font style=' color:#000000;'></b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಂದು ದಿನ ಕಣ್ಣಪ್ಪನೆಂಬ ಬೇಟೆಗಾರ ಬಿಲ್ವ ಪತ್ರೆ ಮರದ ಮೇಲೆ ಕುಳಿತು, ದಿನವಿಡೀ ಉಪವಾಸವಿದ್ದು, ಅಕಸ್ಮಿಕವಾಗಿ ಶಿವರಾತ್ರಿಯಂದು ಬಿಲ್ವದ ಎಲೆಗಳನ್ನು ಕೆಳಗಿದ್ದ ಶಿವಲಿಂಗಕ್ಕೆ ಹಾಕುತ್ತಿದ್ದನು. ಈ ಮೂಲಕ ಶಿವಪೂಜೆ ನಡೆಸಿದನು. ಆತನ ಭಕ್ತಿಗೆ ಮಾರುಹೋದ ಶಿವನು ಆತನ ಎಲ್ಲ ಪಾಪ ಕರ್ಮಗಳನ್ನು ಕ್ಷಮಿಸಿ ಮುಕ್ತಿ ದೊರಕಿಸಿದನು. ಆದ್ದರಿಂದ ಶಿವನ ಪೂಜೆಯಲ್ಲಿ ಬಿಲ್ವಪತ್ರೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಿವಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರಾಜಾ ಚಿತ್ರಭಾನು:  </font><font style=' color:#000000;'></b></font><br/><font  style='font-size:11pt; color:#000000'></font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0803/04/images/img1080304039_1_3.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಒಂದಾನೊಂದು ಕಾಲದಲ್ಲಿ ಇಕ್ಷ್ವಾಕು ರಾಜವಂಶದ ರಾಜ ಚಿತ್ರಭಾನು ಜಂಬೂದ್ವೀಪವನ್ನು ಆಳುತ್ತಿದ್ದನು. ಶಿವರಾತ್ರಿ ನಿಮಿತ್ತ ರಾಜನು ಪತ್ನಿ ಸಮೇತನಾಗಿ ಉಪವಾಸವನ್ನು ಆಚರಿಸಿದ್ದನು. ರಾಜನನ್ನು ಭೇಟಿಯಾಗಲು ಋಷಿಗಳಾದ ಅಷ್ಟಾವಕ್ರ ರಾಜಧಾನಿಗೆ ಆಗಮಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಋಷಿಗಳು ರಾಜ ಉಪವಾಸವಿರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು. ಆಗ ರಾಜನು ನನಗೆ ಹಿಂದಿನ ಜನ್ಮದ ಬಗ್ಗೆ  ತುಂಬಾ ವಿವರವಾಗಿ ನೆನಪಿದೆ ಎಂದು ಹೇಳಿದರು.</font><br/><font  style='font-size:12pt; color:#000000'></font><br/> <font  style='font-size:11pt; color:#000000'>ರಾಜಾ ಚಿತ್ರಭಾನು ತನ್ನ ಹಿಂದಿನ ಜನ್ಮದ ವೃತ್ತಾಂತ ಕುರಿತಂತೆ ವಿವರವಾಗಿ ಋಷಿಗಳಿಗೆ ತಿಳಿಸಲು ಆರಂಭಿಸಿದನು. ಹಿಂದಿನ ಜನ್ಮದಲ್ಲಿ ವಾರಾಣಸಿಯಲ್ಲಿ ಬೇಟೆಗಾರನಾಗಿದ್ದೆ. ನನ್ನ ಹೆಸರು ಸುಸ್ವರ ಎಂದಾಗಿತ್ತು. ನನ್ನದು ಬೇಟೆಗಾರನ ವೃತ್ತಿಯಾಗಿತ್ತು. ಪಶುಪಕ್ಷಿಗಳನ್ನು ಬೇಟೆಯಾಡಿ ಅವುಗಳನ್ನು ಮಾರುವುದೆ ನನ್ನ ಕಸುಬಾಗಿತ್ತು. ಒಂದು ದಿನ ಅರಣ್ಯದಲ್ಲಿ ಬೇಟೆಗಾಗಿ  ಹುಡುಕುತ್ತಿರುವಾಗ ರಾತ್ರಿಯವರೆಗೂ ಯಾವುದೇ ಪಶು-ಪಕ್ಷಿಗಳು ದೊರೆಯದೆ ಘೋರಾರಣ್ಯದೊಳಗೆ ರಾತ್ರಿಯನ್ನು ಕಳೆಯಬೇಕಾಗಿ ಬಂತು. ಬಿಲ್ವ ಪತ್ರೆಯ ಮರವನ್ನು ಹತ್ತಿ ರಾತ್ರಿಯನ್ನು ಕಳೆಯಲು ನಿರ್ಧರಿಸಿದೆ. ಅಂದು ಜಿಂಕೆ ಎದುರಿಗೆ ಬಂದರೂ ಜಿಂಕೆಯ ದುಃಖಿತ ಪರಿವಾರವನ್ನು ನೋಡಿ ಹತ್ಯೆ ಮಾಡಲು ಮನಸ್ಸಾಗಲಿಲ್ಲ. ಹಸಿವು ನೀರಡಿಕೆಯಿಂದ ಬಳಲಿದ್ದರಿಂದ ರಾತ್ರಿಯಿಡಿ ನಿದ್ರೆ ಬಾರದೆ ಜಾಗರಣೆ ಮಾಡಿದೆ. ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಹಸಿವಿನಿಂದ ಬಳಲಿ ತನ್ನ ಆಗಮನವನ್ನು ನೆನೆದು ಕಣ್ಣೀರು ಸುರಿಸುತ್ತಾ ಇರುವುದನ್ನು ಜ್ಞಾಪಿಸಿಕೊಂಡು, ತಾನೂ ಕಣ್ಣೀರುಗೆರೆಯುತ್ತಾ ನಿದ್ರೆ ಬಾರದೆ ಬಿಲ್ವಪತ್ರೆಗಳನ್ನು ಒಂದೊಂದಾಗಿ ಗಿಡದಿಂದ ಕೆಳಗೆ ಹಾಕುತ್ತಾ ರಾತ್ರಿಯನ್ನು ಕಳೆದಿರುವುದಾಗಿ ತಿಳಿಸಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮರುದಿನ ಒಂದಷ್ಟು ಅಹಾರವನ್ನು ತನ್ನ ಕುಟುಂಬಕ್ಕಾಗಿ ತಗೆದುಕೊಂಡು ಹೋಗಿದ್ದು, ಊಟ ಮಾಡಲು ಕುಳಿತಿರುವಾಗ ಅಪರಿಚಿತನೊಬ್ಬನು ಹಸಿವಿನಿಂದ ಬಳಲಿದ್ದು, ಅಹಾರವನ್ನು ನೀಡುವಂತೆ ಬೇಡಿದನು. ತಾನು ತಂದ ಅಹಾರದಲ್ಲಿ ಸಮನಾಗಿ ಅಪರಿಚಿತನಿಗೆ ಮೊದಲು ಹಂಚಿ ನಂತರ ಉಳಿದ ಅಹಾರವನ್ನು ಸೇವಿಸಿದ್ದೆವು ಎಂದು ಆತ ವಿವರಿಸಿದ.</font><br/><font  style='font-size:12pt; color:#000000'></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Right><tr><td valign='top'><img src='/kn/articles/0803/04/images/img1080304039_1_4.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> <font  style='font-size:11pt; color:#000000'>ಸುಸ್ವರನು ಸತ್ತಾಗ ಶಿವನು ಕಳುಹಿಸಿದ ಇಬ್ಬರು ಸಂದೇಶಕಾರರನ್ನು ನೋಡಿದನು. ಸುಸ್ವರನ ಆತ್ಮವನ್ನು ಶಿವನ ಬಳಿಗೆ ಕರೆದೊಯ್ಯಲು ಸಂದೇಶಕಾರರು ಬಂದಿದ್ದರು. ಅಂದು ರಾತ್ರಿ ತನಗರಿವಿಲ್ಲದಂತೆ ಶಿವಪೂಜೆಯ ಕಾರ್ಯ ನೇರವೇರಿರುವುದು ಗಮನಕ್ಕೆ ಬಂತು. ಸಂದೇಶಕಾರರು ಬೇಟೆಗಾರ ಸುಸ್ವರನಿಗೆ ಹೇಳಿದರು- "ಅಂದು ರಾತ್ರಿ  ನೀನು ಅರಿವಿಲ್ಲದೇ ಬಿಲ್ವಪತ್ರೆ ಮರದ ಮೇಲೆ ಹತ್ತಿ, ಕೆಳಗೆ ಹಾಕಿದ ಬಿಲ್ವಪತ್ರೆಗಳು ಮರದ ಅಡಿಯಲ್ಲಿದ್ದ ಶಿವಲಿಂಗದ ಅರ್ಚನೆಗೈದಿದ್ದು, ನೀನು ಹಾಕಿದ ಕಣ್ಣೀರು ಲಿಂಗವನ್ನು ಶುದ್ದಿಗೊಳಿಸಿದೆ. ಅಂದೇ ನೀನು ಉಪವಾಸ ವ್ರತ ಆಚರಿಸಿದ್ದರಿಂದ ಶಿವನು ಪ್ರಸನ್ನರಾಗಿ ತಮ್ಮನ್ನು ಕಳುಹಿಸಿದ್ದಾರೆ" ಎಂದು ಹೇಳಿದರು.   </font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜಾ ಚಿತ್ರಭಾನು ಅಷ್ಟಾವಕ್ರ ಋಷಿಗಳಿಗೆ ತನ್ನ ಹಿಂದಿನ ಜನ್ಮದ ವೃತ್ತಾಂತವನ್ನು ಹೇಳಿ, ಶಿವನ ಸ್ಮರಣೆಯಿಂದ ನಾನು ರಾಜನಾಗಿ ಜನ್ಮತಾಳಿದ್ದೇನೆ ಎಂದು ವಿವರಿಸಿದನು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ, ಶಿವಪೂಜೆಗೆ ಬಿಲ್ವಪತ್ರೆ ಅತ್ಯಂತ ಮಹತ್ವದ್ದೆಂದು ಭಾವಿಸಲಾಗುತ್ತಿದೆ.</font>]]></content:encoded>
      <pubDate>Tue, 04 Mar 2008 19:28:08 +0530</pubDate>
      <updatedDate>Tue, 15 Apr 2014 11:26:46 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಹಿಳೆಯರಿಂದ ಅಟ್ಟುಕಲ್ ದೇವಿಯ ದರ್ಶನ]]></title>
      <link>https://kannada.webdunia.com/article/festivals/ಮಹಿಳೆಯರಿಂದ-ಅಟ್ಟುಕಲ್-ದೇವಿಯ-ದರ್ಶನ-108022200029_1.htm</link>
      <guid>https://kannada.webdunia.com/article/festivals/ಮಹಿಳೆಯರಿಂದ-ಅಟ್ಟುಕಲ್-ದೇವಿಯ-ದರ್ಶನ-108022200029_1.htm</guid>
      <media:thumbnail url="http:"/>
      <image>http:</image>
      <description><![CDATA[ಅಟ್ಟುಕಲ್ ಭಗವತಿ ಮಂದಿರದಲ್ಲಿ ಕಳೆದ  ಹತ್ತು ದಿನಗಳ ಕಾಲ ನಿರಂತರವಾಗಿ ನಡೆದ ಹಬ್ಬದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಮಹಿಳಾ ಭಕ್ತರು ಅಟ್ಟುಕಲ್ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.]]></description>
      <content:encoded><![CDATA[<font  style='font-size:11pt; color:#000000'>ಅಟ್ಟುಕಲ್ ಭಗವತಿ ಮಂದಿರದಲ್ಲಿ ಕಳೆದ  ಹತ್ತು ದಿನಗಳ ಕಾಲ ನಿರಂತರವಾಗಿ ನಡೆದ ಹಬ್ಬದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಮಹಿಳಾ ಭಕ್ತರು ಅಟ್ಟುಕಲ್ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪೊಂಗಲಾ ಆರಂಭಕ್ಕೆ ಮುಂಚೆ ಮಂದಿರದಲ್ಲಿ ಅರ್ಚಕರು ದೇವಿಯ ಭಕ್ತಿ ಗೀತೆಗಳನ್ನು ಹಾಡುವದರೊಂದಿಗೆ ಪಂಡರಾ- ಅಡಪ್ಪು ಪೂಜೆಯನ್ನು ಆರಂಭಿಸಿದರು. ನಂತರ ನಗರಾದ್ಯಂತ ಮೆರವಣಿಗೆ ನಡೆಸಿದ ಭಕ್ತರು  ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇಶದ ಇತರ ರಾಜ್ಯಗಳಿಂದ, ಜಿಲ್ಲೆಗಳಿಂದ, ಗ್ರಾಮೀಣ ಭಾಗಗಳಿಂದ ಬೆಳಗಿನ ಜಾವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ  ಭಕ್ತರು ಮಂದಿರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.ದೇವಾಲಯದ ಐದು ಕಿ.ಮಿ ಸುತ್ತಲಿನ ಪ್ರದೇಶ ಭಕ್ತರಿಂದ ತುಂಬಿ ತುಳಕುತ್ತಿತ್ತು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿದೇಶಿಯರು ದೇಶದ ಪ್ರಮುಖ ಚಿತ್ರನಟಿಯರು, ರಾಜಕಾರಣಿಗಳು ಹಾಗು ಅಧಿಕಾರಿಗಳು ಕಂಪೆನಿಗಳ ಮುಖ್ಯಸ್ಥರು ಅಟ್ಟುಕಲ್ ದೇವಿಯ ದರ್ಶನ ಪಡೆಯುತ್ತಿದ್ದು, ಹೆಚ್ಚಿನ ಮಹಿಳೆಯರು ಒಂದೇಡೆಸೇರುವ ಸ್ಥಳವೆಂದು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.  </font><br/><font  style='font-size:11pt; color:#000000'></font><br/></font>]]></content:encoded>
      <pubDate>Fri, 22 Feb 2008 15:35:31 +0530</pubDate>
      <updatedDate>Tue, 15 Apr 2014 11:21:26 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಭೂಮಿಯ ಸಮೃದ್ಧಿಯ ಸಂಕೇತ ಸಂಕ್ರಾಂತಿ]]></title>
      <link>https://kannada.webdunia.com/article/festivals/ಭೂಮಿಯ-ಸಮೃದ್ಧಿಯ-ಸಂಕೇತ-ಸಂಕ್ರಾಂತಿ-108011400008_1.htm</link>
      <guid>https://kannada.webdunia.com/article/festivals/ಭೂಮಿಯ-ಸಮೃದ್ಧಿಯ-ಸಂಕೇತ-ಸಂಕ್ರಾಂತಿ-108011400008_1.htm</guid>
      <media:thumbnail url="http:"/>
      <image>http:</image>
      <description><![CDATA[ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ರೈತರು ತಾವು ಬೆಳೆದ ಪೈರುಗಳನ್ನು ತೆಗೆಯುವ ಸಂದರ್ಭದಲ್ಲಿ ಸಂತಸ ಸಂಭ್ರಮಗಳ ಮಧ್ಯೆ ಆಚರಿಸುವ ಹಬ್ಬ ಸಮೃದ್ಧಿಯ ಸಂಕೇತ. ಒಂದು ಕಡೆ ಶ್ರಮವಹಿಸಿದ ಬೆಳೆದ ಪೈರು ಉತ್ತಮವಾಗಿ...]]></description>
      <content:encoded><![CDATA[<font  style='font-size:11pt; color:#0000FF'><b>ರಾಜೇಶ್ ಪಾಟೀಲ್ <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0801/14/images/img1080114008_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></b></font><br/><font  style='font-size:11pt; color:#000000'>ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ರೈತರು ತಾವು ಬೆಳೆದ ಪೈರುಗಳನ್ನು ತೆಗೆಯುವ ಸಂದರ್ಭದಲ್ಲಿ ಸಂತಸ ಸಂಭ್ರಮಗಳ ಮಧ್ಯೆ ಆಚರಿಸುವ ಹಬ್ಬ ಸಮೃದ್ಧಿಯ ಸಂಕೇತ. ಒಂದು ಕಡೆ ಶ್ರಮವಹಿಸಿದ ಬೆಳೆದ ಪೈರು ಉತ್ತಮವಾಗಿ ಫಸಲು ನೀಡಿದ ಸಂತಸ. ಮತ್ತೊಂದೆಡೆ ಬಂಧು ಬಾಂಧವರು ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬದ ಸಡಗರ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಾಜ್ಯದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು". ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು ನೀಡುವುದು ಮತ್ತು ಸ್ನೇಹಿತರು- ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಮತ್ತು ಕಬ್ಬಿನ ತುಂಡುಗಳನ್ನು ಸಹ ನೀಡುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೆಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಂಕ್ರಾಂತಿ ಹಬ್ಬ ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಿನ ಸಡಗರದಿಂದ ಆಚರಿಸುತ್ತಾರೆ. ರೈತರಿಗೆ ತಮ್ಮ  ಅನ್ನ ನೀಡುವ ಭೂಮಿಯನ್ನು ಪೂಜಿಸುವ ತವಕ. ಮಹಿಳೆಯರು ಪುರುಷರು ಎನ್ನುವ ಭೇದಭಾವವಿಲ್ಲದೇ ತಾವು ಮಾಡಿದ ಅಡುಗೆಯನ್ನು ಎತ್ತಿನ ಬಂಡಿಯಲ್ಲಿ ಇಟ್ಟು ಕುಟುಂಬ ಸಮೇತ ಹೊರಟ ರೈತರ ಮುಖಗಳಲ್ಲಿ ಒಂಥರಾ ನೆಮ್ಮದಿ ಸಂತೃಪ್ತಿ ಸಂತೋಷ, ಉಲ್ಲಾಸ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎತ್ತಿನ ಬಂಡಿ ಹೊಲವನ್ನು ಪ್ರವೇಶಿಸಿದ ಕೂಡಲೇ ಹೊಲದಲ್ಲಿ ಕಬ್ಬಿನಿಂದ ತ್ರಿಕೋನಾಕಾರದಲ್ಲಿ  ರಚಿಸಲಾದ ಗೋಪುರದಲ್ಲಿ ತಮ್ಮ ಆರಾಧ್ಯದೈವದ ಮೂರ್ತಿಗೆ ಪ್ರಸಾದ ಸಿಂಪಡಿಸಿದ ನಂತರ ರೈತರು ಹೊಲದ ನಾಲ್ಕು ದಿಕ್ಕುಗಳಿಗೂ ಪ್ರಸಾದವನ್ನು ತೋರುತ್ತಾ ಉಧೋ..ಉಧೋ.. ಎನ್ನುತ್ತಾ ತಮಗೆ ಅನ್ನ ನೀಡಿದ ಭೂಮಿತಾಯಿಗೆ ಮೊದಲ ಪ್ರಸಾದವನ್ನು  ಅರ್ಪಿಸುತ್ತಾರೆ.  ಕುಟುಂಬದ ಮಹಿಳೆಯರು ಹೊಲಗಳಲ್ಲಿ ದುಡಿದ ಆಳುಮಕ್ಕಳಿಗೆ ಮೊದಲು ಊಟ ನೀಡಿ ಅವರು ತೃಪ್ತಿಯಾದ ನಂತರವೇ ಹೊಲದ ಮಾಲೀಕರಿಗೆ ಊಟ ನೀಡುತ್ತಾರೆ. ಸುತ್ತಲಿನ ಹೊಲಗಳ ನೆರೆಹೊರೆಯ ರೈತರು ಪರಸ್ಪರ ಆತ್ಮೀಯತೆಯಿಂದ ಆಲಂಗಿಸಿ ಮಕರ ಸಂಕ್ರಮಣ ಸುಖಶಾಂತಿ ನೆಮ್ಮದಿ ತರಲಿ ಎಂದು ಶುಭಕೋರುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಧ್ಯಾಹ್ನದ ಇಳಿಹೊತ್ತಿಗೆ ಗ್ರಾಮಗಳಿಗೆ ಮರಳಿ ನಂತರ ಹೊಸ, ಹೊಸ ಬಣ್ಣದ ಉಡುಗೆಗಳನ್ನು ಧರಿಸಿ ಕೈಯಲ್ಲೊಂದು ಕುಸರಿಕಾಳು, ಎಳ್ಳು ಬೆಲ್ಲ, ಕಬ್ಬಿನ ತುಂಡು, ಹುರಿಗಡಲೆ, ಹುರಿದ ಎಳ್ಳು ಸಕ್ಕರೆಯ ಬಟ್ಟಲನ್ನು ಹಿಡಿದುಕೊಂಡು ಆತ್ಮೀಯರ ಮನೆಗೆ ತೆರಳಿ ಎಳ್ಳು ಬೆಲ್ಲ ತಗೊಂಡು ಶುಭನುಡಿಗಳನ್ನಾಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೊಲದ ಕೆಲಸಗಳಿಂದ ವಿರಾಮ ಪಡೆಯುವ ರೈತರು ಸಂಕ್ರಮಣದ ನಿಮಿತ್ತ ಅನೇಕ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ಹಮ್ಮಿಕೊಂಡು ಸಂತಸದಿಂದ ಭಾಗವಹಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪರಸ್ಪರರು ಆತ್ಮೀಯತೆಯಿಂದ ಆಲಂಗಿಸುವುದನ್ನು ನೋಡಿದಲ್ಲಿ  ಶತ್ರುತ್ವವನ್ನು ಮರೆಸಿ ಮಿತ್ರತ್ವಕ್ಕೆ ನಾಂದಿ ಹಾಡುವ ಹಬ್ಬವಾಗಿದೆ ಎನ್ನಿಸದೇ ಇರದು.  </font>]]></content:encoded>
      <pubDate>Mon, 14 Jan 2008 12:06:55 +0530</pubDate>
      <updatedDate>Tue, 15 Apr 2014 11:16:25 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ದೀಪಾರಾಧನೆಯ ಕಾರ್ತಿಕ ದೀಪೋತ್ಸವ]]></title>
      <link>https://kannada.webdunia.com/article/festivals/ದೀಪಾರಾಧನೆಯ-ಕಾರ್ತಿಕ-ದೀಪೋತ್ಸವ-107112300022_1.htm</link>
      <guid>https://kannada.webdunia.com/article/festivals/ದೀಪಾರಾಧನೆಯ-ಕಾರ್ತಿಕ-ದೀಪೋತ್ಸವ-107112300022_1.htm</guid>
      <media:thumbnail url="http:"/>
      <image>http:</image>
      <description><![CDATA[ಬೆಳಕಿನ ಹಬ್ಬವಾದ ಕಾರ್ತಿಕ ದೀಪೋತ್ಸವವು ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಹುಣ್ಣಿಮೆಯ ದಿನದಂದು ಆಚರಿಸಲ್ಪಡುತ್ತದೆ. ಇದೇ ತಿಂಗಳ 24 ನೇ ತಾರೀಕು "ತೃಕ್ಕಾರ್ತಿಕ "ಅಥವಾ "ಕಾರ್ತಿಗೈ ದೀಪಂ" ಎಂದು ಕರೆಯಲ್ಪಡುವ ಕಾರ್ತಿಕ ದೀಪೋತ್ಸವ. ದೀಪಾವಳಿಯ ಮುಂದುವರಿದ ಭಾಗದಂತೆ ಆಚರಿಸಲ್ಪಡುವ...]]></description>
      <content:encoded><![CDATA[<font  style='font-size:11pt; color:#0000FF'>ರಶ್ಮಿ ಪೈ <!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0711/23/images/img1071123022_1_1.jpg' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>PTI</td><td width='8'></td></tr></table></td></tr></table></p><!--endImage--> </font><font style=' color:#000000;'>ಬೆಳಕಿನ ಹಬ್ಬವಾದ ಕಾರ್ತಿಕ ದೀಪೋತ್ಸವವು ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಹುಣ್ಣಿಮೆಯ ದಿನದಂದು ಆಚರಿಸಲ್ಪಡುತ್ತದೆ. ಇದೇ ತಿಂಗಳ 24 ನೇ ತಾರೀಕು "ತೃಕ್ಕಾರ್ತಿಕ "ಅಥವಾ "ಕಾರ್ತಿಗೈ ದೀಪಂ" ಎಂದು ಕರೆಯಲ್ಪಡುವ ಕಾರ್ತಿಕ ದೀಪೋತ್ಸವ. ದೀಪಾವಳಿಯ ಮುಂದುವರಿದ ಭಾಗದಂತೆ ಆಚರಿಸಲ್ಪಡುವ ಈ ಹಬ್ಬವು ತೈಲ ದೀಪಗಳ ಶೋಭೆಯೊಂದಿಗೆ ಮನೆ ಮನಗಳನ್ನು ಬೆಳಗಿಸಿ ಐಶ್ವರ್ಯ ದೇವತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಸಾಲು ಹಣತೆಗಳನ್ನಿರಿಸಿ ಆಚರಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕರ್ನಾಟಕದಾದ್ಯಂತ ಹಿಂದೂ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸದ ಆಚರಣೆ ಭಕ್ತಿ ಸಂಭ್ರಮದಿಂದ ನಡೆಯುತ್ತದೆ. ದೀಪಾವಳಿಯಂದಿನಿಂದ ತೊಡಗಿ ಆಚರಿಸಲ್ಪಡುವ ಈ ದೀಪೋತ್ಸವದಲ್ಲಿ ದೀಪಗಳ ಸಂಖ್ಯೆ ವರ್ಧಿಸುತ್ತಾ ಬರುವುದನ್ನು ಕಾಣಬಹುದು. ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳಾದ ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳ ಮೊದಲಾದ ದೇವಾಲಯಗಳಲ್ಲಿ ಇದು ಆಚರಿಸಲ್ಪಡುತ್ತಿದ್ದು, ದೀಪಾರಾಧನೆ ಹೆಚ್ಚಿನ ಮಹತ್ವವನ್ನು ಪಡೆದಿದೆ. ಮಂಗಳೂರಿನ ಶ್ರೀ ವೆಂಕಟ್ರಮಣ ದೇವಾಲಯ, ಶೃಂಗೇರಿ ಶಾರದಾಂಬಾ ದೇವಾಲಯ, ಕಲ್ಯಾಣ ಪುರದ ಶ್ರೀ ವೆಂಕಟ್ರಮಣ ದೇವಾಲಯ ದೇವಾಲಯಗಳಲ್ಲಿ ಇದು ಅತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೆಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ಅಕ್ಟೋಬರ್ 26 ರಿಂದ ನವಂಬರ್ 24ರವರೆಗೆ ನಡೆಯುವ ದೀಪೋತ್ಸವವು ಬೆಂಗಳೂರಿನ ದೀಪೋತ್ಸವದ ಕೇಂದ್ರ ಬಿಂದು. ಇಲ್ಲಿ ಭಕ್ತರು ರಾಧಾಕೃಷ್ಣರನ್ನು ಭಜಿಸಿ ಸಂಜೆಯ ವೇಳೆ ಝಗಝಗಿಸುವ ದೀಪಗಳಿಂದ ದೇವಾಲಯವನ್ನು ಬೆಳಗುತ್ತಾರೆ. ಭಕ್ತಿಸಾಂದ್ರವಾದ ಸಂಗೀತದೊಂದಿಗೆ, ಅಬ್ಬರದ ಪಟಾಕಿಗಳನ್ನು ಸಿಡಿಸಿ ವೃಂದಾವನ ದೀಪೋತ್ಸವ ಎಂದು ಕರೆಯಲ್ಪಡುವ ಈ ಆಚರಣೆಯು ಹೆಚ್ಚು ರಂಜನೀಯವಾಗಿರುತ್ತದೆ. ಕರ್ನಾಟಕದಲ್ಲಿ ಈ ಆಚರಣೆಯು ಪ್ರಧಾನವಾಗಿ ದೇವಾಲಯಗಳಲ್ಲಿ ಮಾತ್ರ ಸೀಮಿತವಾಗಿರುತ್ತದೆ. ಅಂದು ದೇವಾಲಯಗಳಲ್ಲಿ ಭಕ್ತರು ತೈಲದೀಪಗಳನ್ನು ಬೆಳಗಿಸಿ ತಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಭಕ್ತಿಯಿಂದ ಕೊಂಡಾಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೇರಳದ ಹೆಚ್ಚಿನ ದೇವೀ ದೇವಾಲಯಗಳಲ್ಲಿ ಈ ದಿನದಂದು ಪ್ರಧಾನ ಉತ್ಸವವು ನೆರವೇರುತ್ತದೆ. "ಕಾರ್ತಿಕ ವಿಳಕ್ಕ್" ಅಥವಾ "ತೃಕ್ಕಾರ್ತಿಕ" ಎಂದು ಕರೆಯಲ್ಪಡುವ ಈ ದಿನದಂದು ಮಣ್ಣಿನ ಹಣತೆಗಳಲ್ಲಿ ಸಾಲು ದೀಪಗಳನ್ನುರಿಸಿ ಐಶ್ವರ್ಯ ದೇವತೆಯ ಸ್ವಾಗತಕ್ಕಾಗಿ ಮನೆ ಮಂದಿರಗಳನ್ನು ಅಣಿಗೊಳಿಸಲಾಗುತ್ತದೆ. ತಮ್ಮ ಹೊಲಗದ್ದೆಗಳಲ್ಲಿ ತೆಂಗಿನ ಗರಿಯನ್ನು ಬಳಸಿ ಒಲೆ ಉರಿಸಿ ನೈವೇದ್ಯವನ್ನು ಸ್ವೀಕರಿಸಿದ ನಂತರ ಮಕ್ಕಳೆಲ್ಲರೂ ಉಲ್ಲಾಸದಿಂದ  'ಅರಿಕೋರರಿಕೊರಿಕೋರೆ' ಎಂದು ಬೊಬ್ಬೆ ಹಾಕಿ ಆಚರಿಸುವ ಪದ್ಧತಿ ದಕ್ಷಿಣ ಕೇರಳದಲ್ಲಿ ಕಂಡು ಬರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವಾದ ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಈ ದಿನದಂದು ಶಿವ ದೇವಾಲಯ ಮತ್ತು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಪ್ರತ್ಯೇಕ ಪೂಜೆ, ಬಲಿವಾಡುಗಳು ನೆರವೇರಿಸಲ್ಪಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇತರ ರಾಜ್ಯಗಳೊಂದಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ  ಇದು ಹೆಚ್ಚು ಅದ್ದೂರಿಯಿಂದ ಆಚರಿಸಲ್ಪಡುತ್ತದೆ. ಇಲ್ಲಿನ ತಿರುವನ್ನಾಮಲೈಯಲ್ಲಿ ಇದರ ಆಚರಣೆಯು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಇದರ ಐತಿಹ್ಯ ಇಂತಿದೆ. ಒಮ್ಮೆ  ಬ್ರಹ್ಮ ಮತ್ತು ವಿಷ್ಣು ತಮ್ಮಲ್ಲಿ ಯಾರು ಪ್ರಬಲರು ಎಂದು ಪ್ರಶ್ನಿಸಿ ವಾಗ್ವಾದ ನಡೆಸಿದಾಗ ಶಿವನು ಬೃಹದಾಕಾರದ ಅಗ್ನಿ ಕಂಬದಂತೆ ಪ್ರತ್ಯಕ್ಷನಾಗಿ ಬ್ರಹ್ಮ ಮತ್ತು ವಿಷ್ಣುವಿನೊಡನೆ ತನ್ನ ಶಿರ ಮತ್ತು ಪಾದದ ಸ್ಥಾನವನ್ನು ಕಂಡು ಹಿಡಿಯುವಂತೆ ಕೇಳಿಕೊಳ್ಳುತ್ತಾನೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬ್ರಹ್ಮನು ರಾಜಹಂಸವಾಗಿ ಶಿವನ ಶಿರವನ್ನು ಕಂಡು ಹಿಡಿಯಲು ಮೇಲಕ್ಕೆ ಹೋದರೆ, ವಿಷ್ಣುವು ವರಾಹ ಅವತಾರ ತಾಳಿ ಭೂಲೋಕವನ್ನು ಕೊರೆದು ಶಿವ ಪಾದವನ್ನು ಅನ್ವೇಷಿಸಲು ತೊಡಗುತ್ತಾನೆ .ಆದರೆ ಶಿವನ ಅಪ್ರತಿಮ ಆಕಾರದಿಂದಾಗಿ ಇವರಿಬ್ಬರಿಗೆ ಶಿವನ ಶಿರ, ಪಾದಗಳನ್ನು ಕಂಡು ಹಿಡಿಯಲು ಅಸಾಧ್ಯವಾಗುತ್ತದೆ. ಅಲ್ಲಿ ಅವರ ಒಣಜಂಭ ಮುರಿದು ಈ ಅಗ್ನಿ ಪರ್ವತವು ಶಿವನೆಂದು ಅರಿವಿಗೆ ಬರುತ್ತದೆ. ಈ ಪರ್ವತವು ತಮಿಳುನಾಡಿನಲ್ಲಿ ಅರುಣಾಚಲ (ಪೂಜನೀಯ ಅಗ್ನಿ ಬೆಟ್ಟ) ಅಥವಾ ತಿರುವನ್ನಾಮಲೈ ಎಂದು ಪ್ರಸಿದ್ಧಿ ಹೊಂದಿದೆ. ಇಲ್ಲಿನ ದೇವಾಲಯದ ಶಿವಲಿಂಗವು ಅಗ್ನಿ ಲಿಂಗವಾಗಿದ್ದು  ಕಾರ್ತಿಕ ದಿನದಂದು ಈ ಲಿಂಗದಿಂದ ಬೆಳಕು ಹೊರಬಂದು ಶಿವನ ಅಸ್ತಿತ್ವವನ್ನು ತೋರಿಸುತ್ತದೆ ಎಂಬ ನಂಬಿಕೆಯು ಇದರಲ್ಲಿದೆ. ಆದುದರಿಂದಲೇ ಇಲ್ಲಿ ಕಾರ್ತಿಕ ದೀಪೋತ್ಸವವು (ಕಾರ್ತಿಗೈ ದೀಪಂ) ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ. ಈ ಸುಪ್ರಸಿದ್ಧ ಬೆಟ್ಟದ ದೇವಾಲಯವು ಚೆನ್ನೈ ನಗರದಿಂದ ಸುಮಾರು 187 ಕಿ.ಮೀ ದೂರದಲ್ಲಿದ್ದು ಸಮುದ್ರ ತಳದಿಂದ 266 ಅಡಿ(79.80 ಮೀ) ಎತ್ತರದಲ್ಲಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದರೊಂದಿಗೆ ಸುಬ್ರಹ್ಮಣ್ಯ ಸ್ವಾಮಿ (ಮುರುಗನ್) ಆರು ಶಿಶುಗಳ ರೂಪದಲ್ಲಿ "ಸರವಣ ಪೋಯ್ಗೈ" ಎಂಬ ಸರೋವರದಲ್ಲಿ ಅವತಾರವೆತ್ತಿದ್ದು, ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿಯು ತನ್ನ ಅಮ್ಮ ಪಾರ್ವತಿಯೊಂದಿಗೆ ಸಂಯುಕ್ತವಾದನು ಎಂಬ ನಂಬುಗೆಯಿಂದ ಸುಬ್ರಹ್ಮಣ್ಯ ಸ್ವಾಮಿಯ ಆರು ರೂಪಗಳಿಗೆ ಈ ದಿನದಂದು ಪೂಜೆ ಸಲ್ಲಿಸುವ ಆಚರಣೆಯು ತಮಿಳುನಾಡಿನಲ್ಲಿ ಕಂಡುಬರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ದಿನದಂದು ಜನರು ಮನೆ ಪರಿಸರಗಳನ್ನು ಶುಚಿಗೊಳಿಸಿ, ಸಂಜೆಯ ವೇಳೆ ಮನೆಯ ಮುಂದೆ ರಂಗೋಲಿ (ಕೋಲಂ)ಯನ್ನು ರಚಿಸಿ, ಸಾಲು ಸಾಲಾಗಿ ಹಣತೆಗಳನ್ನು ಬೆಳಗಿಸುತ್ತಾರೆ. ದೀಪಾರಾಧನೆ ಮುಗಿದ ನಂತರ ದೀಪಗಳನ್ನು ಮನೆಯ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಾಗುತ್ತದೆ. ಹೀಗೆ ಕಾರ್ತಿಕ ದೀಪವು ಸುಖ ಸಮೃದ್ದಿಯ, ಐಶ್ವರ್ಯದ ದ್ಯೋತಕವಾಗಿ ಆಚರಿಸಲ್ಪಡುತ್ತದೆ.</font>]]></content:encoded>
      <pubDate>Fri, 23 Nov 2007 15:43:03 +0530</pubDate>
      <updatedDate>Tue, 15 Apr 2014 11:03:45 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಥುರೆಯಲ್ಲಿ ಕೃಷ್ಣಾಷ್ಟಮಿ ಸಡಗರ]]></title>
      <link>https://kannada.webdunia.com/article/festivals/ಮಥುರೆಯಲ್ಲಿ-ಕೃಷ್ಣಾಷ್ಟಮಿ-ಸಡಗರ-107090300009_1.htm</link>
      <guid>https://kannada.webdunia.com/article/festivals/ಮಥುರೆಯಲ್ಲಿ-ಕೃಷ್ಣಾಷ್ಟಮಿ-ಸಡಗರ-107090300009_1.htm</guid>
      <media:thumbnail url="http:"/>
      <image>http:</image>
      <description><![CDATA[ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಬೆಳೆದ ಮಥುರೆಯಲ್ಲಿ ಕೃಷ್ಣಾಷ್ಟಮಿಯ ದಿನದಂದು ಆಚರಣೆಗಳು ಉತ್ತುಂಗಕ್ಕೇರುತ್ತವೆ. ದೆಹಲಿಯಿಂದ 145 ಕಿ.ಮೀ. ದೂರವಿರುವ ಮಥುರೆಯಲ್ಲಿ ಎಲ್ಲೆಂದರಲ್ಲಿ ಸಡಗರದ ಸಂಭ್ರಮ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಅಸುರರ ಅಟ್ಟಹಾಸಕ್ಕೆ ಅಂತ್ಯಹಾಡಲು ಇಲ್ಲಿ ಕೃಷ್ಣ ಪರಮಾತ್ಮ...]]></description>
      <content:encoded><![CDATA[<font  style='font-size:11pt; color:#0000FF'>ಸ್ನೇಹ</font><font style=' color:#000000;'>ಾ</font><font style='font-size:12pt;'></font><br/><!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0709/03/images/img1070903009_1_1.jpg' Border=0 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಬೆಳೆದ ಮಥುರೆಯಲ್ಲಿ ಕೃಷ್ಣಾಷ್ಟಮಿಯ ದಿನದಂದು ಆಚರಣೆಗಳು ಉತ್ತುಂಗಕ್ಕೇರುತ್ತವೆ. ದೆಹಲಿಯಿಂದ 145 ಕಿ.ಮೀ. ದೂರವಿರುವ ಮಥುರೆಯಲ್ಲಿ ಎಲ್ಲೆಂದರಲ್ಲಿ ಸಡಗರದ ಸಂಭ್ರಮ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಅಸುರರ ಅಟ್ಟಹಾಸಕ್ಕೆ ಅಂತ್ಯಹಾಡಲು ಇಲ್ಲಿ ಕೃಷ್ಣ ಪರಮಾತ್ಮ ಜನ್ಮತಾಳಿದನೆಂಬ ಪ್ರತೀತಿ ಇದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ ಜನ್ಮ ತಾಳಿದ ನೈಜ ಸ್ಥಳದಲ್ಲಿ ಪ್ರಮುಖ ಆಚರಣೆ ಜರುಗುತ್ತದೆ. ಆ ಜಾಗದಲ್ಲಿಂದು ಬಹುದೊಡ್ಡ ದೇವಸ್ಥಾನ ನಿರ್ಮಾಣವಾಗಿದೆ. ಕೃಷ್ಣ ಜನ್ಮಭೂಮಿ ಮಂದಿರವೆಂದು ಕರೆಯಲ್ಪಡುವ ಈ ಮಂದಿರದಲ್ಲಿ ಭಗವಂತನ ಮೂರ್ತಿಯನ್ನು ಗರ್ಭಗೃಹದಲ್ಲಿ ಇರಿಸಲಾಗಿದೆ. ಅಷ್ಟಮಿಯ ದಿನದಂದು ಭಕ್ತರು ದಿನಪೂರ್ತಿ ಉಪವಾಸವಿದ್ದು ಮಧ್ಯರಾತ್ರಿ ಕೃಷ್ಣ ಹುಟ್ಟಿದ ಸಮಯದ ಬಳಿಕ ಉಪವಾಸ ಮುರಿಯುತ್ತಾರೆ. ಭಕ್ತರು ದಿನಪೂರ್ತಿ ದೇವರ ಶ್ಲೋಕ, ಮಂತ್ರಗಳನ್ನು ಪಠಿಸುತ್ತಾರೆ. ಇದಲ್ಲದೆ ದೇವರನಾಮಗಳನ್ನು ಹಾಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೃಷ್ಣ ಜನಿಸಿದ ಮಧ್ಯರಾತ್ರಿಯಲ್ಲಿ ಪೂಜೆ ಮತ್ತು ಇತರ ಕಾರ್ಯಕ್ರಮಗಳು ನೆರವೇರುತ್ತದೆ. ಕೃಷ್ಣನ ಮೂರ್ತಿಯನ್ನು ಹಾಲು, ಮೊಸರಿನಲ್ಲಿ ಮೀಯಿಸಿ ತೊಟ್ಟಿಲಲ್ಲಿ ಮಲಗಿಸಿ ತೂಗುತ್ತಾರೆ. ಈ ದಿನದಂದು ಕೃಷ್ಣನ ತೊಟ್ಟಿಲು ತೂಗುವ ವೇಳೆಗಿನ ಮನದಿಚ್ಛೆ ಅಥವಾ ಮಾಡಿಕೊಂಡ ಹರಕೆ ಪೂರೈಸುತ್ತದೆ ಎಂಬ ಜನಪ್ರಿಯ ನಂಬುಗೆಯಿದೆ. ಜನ್ಮಾಷ್ಟಮಿಯಂದು ಮಧುರೆ ಇಡೀ ಶಂಖನಾದ ಮತ್ತು ಜಾಗಟೆಗಳ ಮೊಳಗುವಿಕೆಯಿಂದ ಪ್ರತಿಧ್ವನಿಸುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಜೈ ಶ್ರೀ ಕೃಷ್ಣ ಎಂಬ ಘೋಷಣೆಗಳನ್ನು ಮೊಳಗಿಸುವ ಮೂಲಕ ದೇವರನ್ನು ಆಹ್ವಾನಿಸಲಾಗುತ್ತಾರೆ. ಪೂಜೆಯ ಬಳಿಕ ಭಕ್ತರಿಗೆ ಪಂಚಾಮೃತದ ವಿತರಣೆ. ದೇವರಿಗೆ ಸಾಂಪ್ರದಾಯಿಕ ಪ್ರಸಾದ ಚಪ್ಪನ್ ಭೋಗ್ (56 ತಿನಿಸುಗಳು) ಉಣಿಸಲಾಗುತ್ತದೆ. ಹಾಲು ಮತ್ತು ಹಾಲಿನಿಂದ ತಯಾರಿಸಿದ ಬಹಳಷ್ಟು ತಿಂಡಿ ಪದಾರ್ಥಗಳನ್ನು ಭಕ್ತರು ಸವಿಯುತ್ತಾರೆ. ಪ್ರಸಾದ ಸ್ವೀಕರಿಸುವುದರೊಂದಿಗೆ ಭಕ್ತರ ಉಪವಾಸ ಕೊನೆಗೊಳ್ಳುತ್ತದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ರಾಸಲೀಲೆ:</font><font style='font-size:12pt; color:#000000;'></b></font><br/><!--Image--><p><table cellspacing='0' cellpadding='0' border='0'  Align=Right><tr><td valign='top'><img src='/kn/articles/0709/03/images/img1070903009_1_2.jpg' Border=0 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಕೃಷ್ಣ ಜನಿಸಿದ ದಿನದಂದು ಗೀತನಾಟಕದಂತಹ ರಾಸಲೀಲೆ ಕಾರ್ಯಕ್ರಮಗಳು ಮಥುರಾ ನಗರದ ಎಲ್ಲೆಡೆ ಪ್ರದರ್ಶಿಸಲಾಗುತ್ತದೆ. ಸುಮಾರು 10ರಿಂದ 13 ವರ್ಷಗಳ ಬಾಲಕರು ರಾಸಲೀಲೆಯನ್ನು ಪ್ರದರ್ಶಿಸುತ್ತಾರೆ. ಕೃಷ್ಣನ ಪಾತ್ರಮಾಡಿದ ಬಾಲಕನನ್ನು ದೇವರೆಂದು ಭಾವಿಸುವ ಭಕ್ತಾದಿಗಳು ಬಾಲಕನ ಪಾದಮುಟ್ಟಿ ನಮಸ್ಕರಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದಲ್ಲದೆ ಮಥುರೆಯಾದ್ಯಂತ ಎಲ್ಲೆಡೆ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಕೃಷ್ಣನ ಬಾಲ್ಯದಿಂದ ಹಿಡಿದು ಕೊನೆಯ ತನಕದ ಪ್ರಮುಖ ಘಟನೆಗಳ ಸ್ತಬ್ಧಚಿತ್ರಗಳು ಪ್ರದರ್ಶಿಸಲ್ಪಡುತ್ತವೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಜೋಕಾಲಿಗಳು:</font><font style=' color:#000000;'></b></font><br/><font  style='font-size:11pt; color:#000000'>ಕೃಷ್ಣಾಷ್ಟಮಿಯ ವೇಳೆ ಮಥುರಾದ ಇನ್ನೊಂದು ಆಕರ್ಷಣೆ ಎಂದರೆ ರಂಗು ರಂಗಿನ ಜೋಕಾಲಿಗಳು. ದೇವಾಲಯಗಳ ಅಂಗಣಗಳಲ್ಲಿ  ಮತ್ತು ಮನೆಗಳಲ್ಲಿ ಕೃಷ್ಣನ ಜನನವನ್ನು ಸ್ವಾಗತಿಸಲು ಸಾಲಂಕೃತ ಜೋಕಾಲಿಗಳನ್ನು ತೂಗಾಡಿಸಲಾಗುತ್ತದೆ. ಇದು ಕೃಷ್ಣನನ್ನು ತೂಗುವ ಸಂಕೇತ. ಜೋಕಾಲಿಗಳ ಹಗ್ಗವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗುತ್ತಿದ್ದು ಇದು ಹಬ್ಬದ ನೋಟವನ್ನು ಒದಗಿಸುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶ್ರೀ ಕೃಷ್ಣ ಪರಮಾತ್ಮನನ್ನು ಬರಮಾಡಿಕೊಳ್ಳಲು ಜನತೆ ದೇವಾಲಯಗಳು ಮತ್ತು ಮನೆಗಳನ್ನು ಸಿಂಗಾರ ಮಾಡಲು ತಮ್ಮ ತನು ಮನದ ಪ್ರಯತ್ನಮಾಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೃಷ್ಣಾಷ್ಟಮಿಯ ವೇಳೆ ಮಥುರೆಗೆ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಏರುತ್ತಲೇ ಹೋಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜೈ ಶ್ರೀ ಕೃಷ್ಣ!</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಪೂರಕ ಓದು:</font><font style='font-size:11pt; color:#000000;'></b></font><br/><a href='http://kannada.webdunia.com/religion/hinduism/godgoddess/0709/03/1070903003_1.htm' target=_blank>ಭಕ್ತರ ಪ್ರೀತಿಯ ದೇವ - ಶ್ರೀ ಕೃಷ್ಣ</a><font  style='font-size:11pt; color:#000000'></font><br/><a href='http://kannada.webdunia.com/religion/hinduism/godgoddess/0709/03/1070903008_1.htm' target=_blank>ಬಾಲ ಲೀಲೆ: ದುಷ್ಟಶಕ್ತಿ ದಮನವೇ ಮಕ್ಕಳಾಟ</a><font  style='font-size:11pt; color:#000000'></font><br/><a href='http://kannada.webdunia.com/religion/hinduism/festivals/0709/03/1070903005_1.htm' target=_blank>ತನು-ಮನವರಳಿಸುವ ಜನ್ಮಾಷ್ಟಮಿ ಆಚರಣೆ</a></font>]]></content:encoded>
      <pubDate>Mon, 03 Sep 2007 15:59:50 +0530</pubDate>
      <updatedDate>Tue, 15 Apr 2014 01:16:47 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ತನು-ಮನವರಳಿಸುವ ಜನ್ಮಾಷ್ಟಮಿ ಆಚರಣೆ]]></title>
      <link>https://kannada.webdunia.com/article/festivals/ತನು-ಮನವರಳಿಸುವ-ಜನ್ಮಾಷ್ಟಮಿ-ಆಚರಣೆ-107090300005_1.htm</link>
      <guid>https://kannada.webdunia.com/article/festivals/ತನು-ಮನವರಳಿಸುವ-ಜನ್ಮಾಷ್ಟಮಿ-ಆಚರಣೆ-107090300005_1.htm</guid>
      <media:thumbnail url="http:"/>
      <image>http:</image>
      <description><![CDATA[ಶ್ರಾವಣದ ಕೃಷ್ಣಪಕ್ಷದ 8ನೇ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ದ್ವಾಪರಯುಗದಲ್ಲಿ ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನ ಜನನದ ಸ್ಮರಣೆಯಿದು. ಕೃಷ್ಣಾಷ್ಟಮಿಯ ದಿನ ಧಾರ್ಮಿಕ ಉತ್ಸವ ಮತ್ತು ಭಕ್ತಿ ಪರಾಕಾಷ್ಠೆಯನ್ನು ಮುಟ್ಟುತ್ತದೆ. ರಾಕ್ಷಸರನ್ನು ನಿರ್ದಯವಾಗಿ ದಮನ ಮಾಡಿ]]></description>
      <content:encoded><![CDATA[<font  style='font-size:11pt; color:#0000FF'>ಗುಣವರ್ಧನ ಶೆಟ್ಟ</font><font style=' color:#000000;'>ಿ</font><font style='font-size:12pt;'></font><br/><!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0709/03/images/img1070903005_1_1.jpg' Border=0 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಶ್ರಾವಣದ ಕೃಷ್ಣಪಕ್ಷದ 8ನೇ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ದ್ವಾಪರಯುಗದಲ್ಲಿ ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನ ಜನನದ ಸ್ಮರಣೆಯಿದು. ಕೃಷ್ಣಾಷ್ಟಮಿಯ ದಿನ ಧಾರ್ಮಿಕ ಉತ್ಸವ ಮತ್ತು ಭಕ್ತಿ ಪರಾಕಾಷ್ಠೆಯನ್ನು ಮುಟ್ಟುತ್ತದೆ. ರಾಕ್ಷಸರನ್ನು ನಿರ್ದಯವಾಗಿ ದಮನ ಮಾಡಿ ಸಕಲ ದುಷ್ಟಶಕ್ತಿಗಳಿಂದ ಮಾನವಕುಲರಕ್ಷಣೆಗೆ  ಭಗವಾನ್ ಕೃಷ್ಣ ಭೂಮಿಯ ಮೇಲೆ ಅವತಾರವೆತ್ತಿದ. ಅತಿಶಯ ಗುಣಗಳ ಸಂಪನ್ನನಾದ ಕೃಷ್ಣ ಅತ್ಯಂತ ಪ್ರೀತಿಪಾತ್ರ ದೇವರಾಗಿ ಜನಮೆಚ್ಚುಗೆ ಗಳಿಸಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪೌರಾಣಿಕ ಕಥೆಯ ಪ್ರಕಾರ, ಭಗವಾನ್ ಕೃಷ್ಣನ ಜನನದ ಕಥೆ ಸ್ವಾರಸ್ಯಕರವಾಗಿದೆ. ತನ್ನ ತಂದೆ ಉಗ್ರಸೇನನಿಂದ ರಾಜ್ಯವನ್ನು ಕಸಿದುಕೊಂಡು ಮಥುರಾವನ್ನು ಆಳುತ್ತಿದ್ದ ಕಂಸ ದುಷ್ಟ ರಾಜನಾಗಿದ್ದ. ಅವನ ದುರಾಚಾರಗಳಿಂದ ರಕ್ಷಿಸಿಕೊಳ್ಳಲು ಯಾರಿಗೂ ಸಾಧ್ಯವಾಗಲಿಲ್ಲ. ಕಂಸನ ಸೋದರಿ ದೇವಕಿ ಮತ್ತು ವಸುದೇವನ ವಿವಾಹದ ಬಳಿಕ ಕಂಸ ರಥವನ್ನು ಮುನ್ನಡೆಸುವಾಗ ಅಶರೀರವಾಣಿಯೊಂದು ಕೇಳಿಬರುತ್ತದೆ. ದೇವಕಿಯ ಎಂಟನೆ ಮಗ ನಿನ್ನನ್ನು ಕೊಂದು ನಿನ್ನ ದುರಾಚಾರಕ್ಕೆ ತೆರೆ ಎಳೆಯುತ್ತದೆಂದು ಅಶರೀರವಾಣಿ ಎಚ್ಚರಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತೀವ್ರ ಕ್ಷೋಭೆಗೊಳಗಾದ ಕಂಸ ತನ್ನ ಸೋದರಿ ಮತ್ತು ಭಾವನನ್ನು ಮಥುರಾದ ಯುಮುನಾ ನದಿ ದಂಡೆಗೆ 8 ಮೈಲು ದೂರದ ಗ್ರಾಮದಲ್ಲಿ ಬಂಧಿಯಾಗಿಟ್ಟನು. ದೇವಕಿಗೆ ಪ್ರಥಮ ಪುತ್ರನ ಜನನವಾದ ಕೂಡಲೇ ಕಂಸ ಅದನ್ನು ಬಲಿಕೊಟ್ಟ. ದೇವಕಿಗೆ ಹುಟ್ಟಿದ ಮಕ್ಕಳೆಲ್ಲವಕ್ಕೂ ಅದೇ ಗತಿಯಾಯಿತು. 8ನೇ ಮಗು ಜನನಕ್ಕೆ ಮುಂಚೆ ಅಶರೀರವಾಣಿಯೊಂದು ಕೇಳಿಸಿ, ಅವನ ಸ್ನೇಹಿತ ನಂದನ ಪತ್ನಿಗೆ ಹುಟ್ಟುವ ಮಗು ಮತ್ತು ದೇವಕಿಗೆ ಹುಟ್ಟಲಿರುವ ಮಗುವನ್ನು ವಿನಿಮಯ ಮಾಡುವಂತೆ ಆದೇಶಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇವಕಿಗೆ 8ನೇ ಮಗು ಜನಿಸಿದ ಕೂಡಲೇ ದೈವನಿಯಾಮಕವೋ ಎಂಬಂತೆ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗುತ್ತದೆ. ಮಗುವಿನ ಆಕ್ರಂದನ ಗುಡುಗಿನ ಶಬ್ದದಲ್ಲಿ ಮುಚ್ಚಿಹೋಗುತ್ತದೆ. ವಸುದೇವ ಮಗುವನ್ನು ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹಿಡಿದು,ತುಂಬಿಹರಿಯುವ ಯುಮುನೆಯಲ್ಲಿ ಸಾಗುತ್ತಾನೆ. ಪವಾಡಸದೃಶವೋ ಎಂಬಂತೆ ಆದಿಶೇಷ ಪ್ರತ್ಯಕ್ಷನಾಗಿ ಮಗುವಿಗೆ ಹೆಡೆಯ ಆಸರೆ ನೀಡಿ ಪ್ರವಾಹದಿಂದ ರಕ್ಷಿಸಿತ್ತಾನೆ. ವಸುದೇವ ಗೋಕುಲಕ್ಕೆ ಮುಟ್ಟಿದಾಗ ಯಶೋದಾ ಆಗತಾನೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು.</font><br/><font  style='font-size:11pt; color:#000000'>ಗೋಕುಲದ ರಾಜ ನಂದ ವಸುದೇವನ ಪುತ್ರನನ್ನು ಸ್ವೀಕರಿಸಿ ಬದಲಿಗೆ ತನ್ನ ಪುತ್ರಿಯನ್ನು ಒಪ್ಪಿಸಿದ. ವಸುದೇವ  ಹಿಂತಿರುಗಿದ ಕೂಡಲೇ ಚಂಡಮಾರುತದ ಪ್ರಕೋಪ ತಗ್ಗಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೆಳಕು ಹರಿಯುತ್ತಲೇ, ನವಜಾತ ಶಿಶುವಿನ ಆಕ್ರಂದನ ಗಾಳಿಯಲ್ಲಿ ತೇಲಿಬರುತ್ತದೆ. ಕಂಸ ನೇರವಾಗಿ ಕಾರಾಗೃಹಕ್ಕೆ ಆಗಮಿಸಿ ಮಗುವನ್ನು ಕಂಡ ಕೂಡಲೇ ಮೈಯ ರಕ್ತ ಕುದಿಯುತ್ತದೆ. ಮಗುವನ್ನು ಎತ್ತಿ ಎಸೆಯುತ್ತಾನೆ. ಮಾಯೆಯ ಸ್ವರೂಪಿಯಾದ ಮಗು ಆಕಾಶದಲ್ಲಿ ಅದೃಶ್ಯವಾಗಿ ಗುಡುಗಿನಂಥ ಧ್ವನಿ ಕೇಳಿಬರುತ್ತದೆ. ಕಂಸನ ವಿನಾಶಕಾಲ ಸಮೀಪಿಸಿದೆಯೆಂದು ಎಚ್ಚರಿಸುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರತಿ ಬಾರಿಯೂ ಕೃಷ್ಣ  ತನ್ನ ಅವತಾರದ ಉದ್ದೇಶವನ್ನು ಸಾರ್ಥಕಗೊಳಿಸುತ್ತಾನೆ. ಕಂಸನನ್ನು ಕೊಲ್ಲುತ್ತಾನೆ. ಬೃಂದಾವನದ ಜನರನ್ನು ಅನೇಕ ವಿಘ್ನಗಳಿಂದ ರಕ್ಷಿಸುತ್ತಾನೆ.   ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಗಳ ಗೆಲುವಿಗೆ ರೂವಾರಿಯಾಗುತ್ತಾನೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಹಬ್ಬದ ವಾತಾವರ</font><font style=' color:#000000;'>ಣ:</b></font><br/><font  style='font-size:12pt; color:#000000'></font><br/><!--Image--><p><table cellspacing='0' cellpadding='0' border='0'  Align=Right><tr><td valign='top'><img src='/kn/articles/0709/03/images/img1070903005_1_2.jpg' Border=0 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>WD</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಕೃಷ್ಣನ ಜನನದ ಆಚರಣೆಯ ಸಂಕೇತವಾಗಿದೆ. ಮಾನವಕುಲದ ಪಾಪಗಳನ್ನು ತೊಳೆಯಲು ಕೃಷ್ಣ ಜನ್ಮವೆತ್ತಿದ. ಕೃಷ್ಣ ಜನ್ಮಾಷ್ಟಮಿಯನ್ನು ಮಥುರಾ ಮತ್ತು ಬೃಂದಾವನದಲ್ಲಿ ಅತ್ಯಂತ ನಲಿವು ಮತ್ತು ಹರ್ಷದಿಂದ ಆಚರಿಸಲಾಗುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ ನಗರಗಳಲ್ಲಿ ಹಬ್ಬದ ವಾತಾವರಣ ಮೂಡುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಥುರಾ ಮತ್ತು ಬೃಂದಾವನದ ದೇವಸ್ಥಾನಗಳು ಹೂವುಗಳಿಂದ ಅಲಂಕೃತವಾಗಿ ಭಗವಾನ್ ಕೃಷ್ಣ ಆಭರಣಗಳಿಂದ ಶೋಭಿಸುತ್ತಾನೆ. ಸಂಜೆ ಆರಂಭವಾದ ಕಾರ್ಯಕ್ರಮ ಕೃಷ್ಣನ ಜನನಾವಧಿಯಾದ ಮಧ್ಯರಾತ್ರಿಯ ವೇಳೆ ತಾರಕಕ್ಕೇರುತ್ತದೆ. ಭಜನೆಗಳು , ಹರೆ ರಾಮ ಹರೆ ಕೃಷ್ಣ ಜಪಗಳು ಮಾರ್ದನಿಸುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಕ್ಷಿಣ ಭಾರತದಲ್ಲಿ ಪ್ರಾರ್ಥನೆಗಳಿಂದ, ಭಗ್ತಿಗೀತೆಗಳಿಂದ ಮತ್ತು ಹೂವುಹಣ್ಣುಗಳನ್ನು, ವಿಶೇಷ ಪ್ರಸಾದಗಳನ್ನು ಭಗವಾನ್ ಕೃಷ್ಣನಿಗೆ ಅರ್ಪಿಸುವ ಮೂಲಕ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಆ ದಿನ ಜನರಿಗೆ ಉಪವಾಸ, ಮನೆಗಳ ಬಾಗಿಲಿಗೆ ಮಾವಿನ ಎಲೆಗಳ ತೋರಣ ಅಲಂಕರಿಸಿರುತ್ತದೆ. ಮುಂಭಾಗದ ಅಂಗಳದಲ್ಲಿ ಹೂವಿನ ವಿನ್ಯಾಸಗಳನ್ನು ಬಿಡಿಸಲಾಗುತ್ತದೆ. ಮನೆಯೊಳಗೆ ಸಣ್ಣ ಮಂಟಪದಲ್ಲಿ ಕೃಷ್ಣನ ಬೆಳ್ಳಿ ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತದೆ. ಅಕ್ಕಿ ಹಿಟ್ಟು ಮತ್ತು ನೀರು ಮಿಶ್ರಣದಿಂದ ಕೃಷ್ಣನ ಪುಟ್ಟ ಪುಟ್ಟ ಹೆಚ್ಚೆಯ ಗುರುತುಗಳನ್ನು ಮೂಡಿಸಿ ಕೃಷ್ಣನ ಆಗಮನವನ್ನು ಸಾಂಕೇತಿಕವಾಗಿ ಸೃಷ್ಟಿಸಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಪುರೋಹಿತರು ಭಗವದ್ಗೀತೆ ಮತ್ತಿತರ ಪವಿತ್ರ ಗ್ರಂಥಗಳನ್ನು ಪಠಿಸುತ್ತಾರೆ. ಮಧ್ಯರಾತ್ರಿ ಚಂದ್ರ ಮೂಡಿದ ಕೂಡಲೇ ಚಕ್ಕುಲಿ, ಮತ್ತು ಉಂಡೆಗಳನ್ನು ಮೂರ್ತಿಗೆ ಅರ್ಪಿಸಲಾಗುತ್ತದೆ. ಭಕ್ರರು ಶಂಖದಿಂದ ಜಲ, ಕ್ಷೀರಾಭಿಷೇಕ ಮಾಡುತ್ತಾರೆ. ಸಮೀಪದ ಗ್ರಾಮಗಳ ದನಗಾಹಿಗಳು ಕೃಷ್ಣನ ಮೂರ್ತಿಗೆ  ಜಲ ಮತ್ತು ಕ್ಷೀರದ ಅರ್ಘ್ಯವನ್ನು ಅರ್ಪಿಸುತ್ತಾರೆ. ಮರುದಿನ ನಸುಕಿನ ಜಾವದ ತನಕ ಆಚರಣೆ ನಡೆಯುತ್ತದೆ. ಮರುದಿನ ಶ್ರೀಕೃಷ್ಣ ಲೀಲೋತ್ಸವ. ಅಂದರೆ ಮೊಸರು ಕುಡಿಕೆ ಹಬ್ಬ. ಗೊಲ್ಲರು ಸೇರಿ ಮೊಸರು ಕುಡಿಕೆ ಒಡೆಯುವ ದೃಶ್ಯಾವಳಿಗಳನ್ನು ಎಲ್ಲೆಲ್ಲೂ ಕಾಣಬಬಹುದಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೀಗೆ ಎರಡು ದಿನ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಭಕ್ತರ ಮನೆ-ಮನದಲ್ಲಿ ಶ್ರೀಕೃಷ್ಣನ ಲೀಲಾ ಸ್ವರೂಪವನ್ನು ಚಿರಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ.</font>]]></content:encoded>
      <pubDate>Mon, 03 Sep 2007 13:22:31 +0530</pubDate>
      <updatedDate>Tue, 15 Apr 2014 01:16:47 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಗೌರಿ ಹಬ್ಬ]]></title>
      <link>https://kannada.webdunia.com/article/festivals/ಗೌರಿ-ಹಬ್ಬ-107052800015_1.htm</link>
      <guid>https://kannada.webdunia.com/article/festivals/ಗೌರಿ-ಹಬ್ಬ-107052800015_1.htm</guid>
      <media:thumbnail url="http:"/>
      <image>http:</image>
      <description><![CDATA[ಕರ್ನಾಟಕದಲ್ಲಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಎರಡೂ ಜತೆ ಜತೆಯಲ್ಲಿಯೇ ಆಚರಿಸಲಾಗುತ್ತಿದೆ. ಇದು ದೇವಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.]]></description>
      <content:encoded><![CDATA[<font  style='font-size:11pt; color:#000000'>ಕರ್ನಾಟಕದಲ್ಲಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಎರಡೂ ಜತೆ ಜತೆಯಲ್ಲಿಯೇ ಆಚರಿಸಲಾಗುತ್ತಿದೆ. ಇದು ದೇವಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮದುವೆಯಾಗಿರುವ ಹೆಣ್ಣು ಮಕ್ಕಳನ್ನು ಪ್ರೀತ್ಯಾದರದಿಂದ ತಂದೆ ತಾಯಿಗಳು ತವರು ಮನೆಗೆ ಬರ ಮಾಡಿಕೊಳ್ಳುವ ಒಂದು ವಿಶೇಷ ಸಡಗರದ ಹಬ್ಬ ಇದಾಗಿದೆ. ಇದನ್ನು  ಕರ್ನಾಟಕದ ಹಿಂದೂಗಳು ಮಾತ್ರವಲ್ಲದೆ ಜೈನ ಮತದವರೂ ಆಚರಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಹಾಮಾತೆ ಪಾರ್ವತೀದೇವಿ ತನ್ನ ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಈ ಹಬ್ಬ ಭಾದ್ರಪದ ತೃತೀಯಾ ದಿನದಂದು ಬರುತ್ತದೆ.ಮೂರನೆಯ ದಿನ ಚೌತಿ ಎಂದರೆ ವಿನಾಯಕ ಚೌತಿ .ಆ ದಿನ ಆಕೆಯ ಮಗ ಗಣಪ(ವಿನಾಯಕ)ಬಂದು ಆಕೆಯನ್ನು ಗಂಡನ ಮನೆಗೆ ಕರೆದೊಯ್ಯುತ್ತಾನೆ ಎಂಬುದು ಪೌರಾಣಿಕ ಹಿನ್ನಲೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಹಬ್ಬದ ಆಚರಣೆಗೆ ಮುಂಚಿತವಾಗಿಯೇ ಅನೇಕ ಸಿದ್ಧತೆಗಳು ನಡೆಯುತ್ತವೆ.  'ಬಳಕೆ ತೆಗೆಯುವುದು' ಎಂದರೆ ಮನೆಯನ್ನು ಶುದ್ಧಗೊಳಿಸುವುದು,ಸಿಂಗರಿಸುವುದು ನಡೆಯುತ್ತದೆ. ಹಬ್ಬದ ಹಿಂದಿನ ದಿನ ಯಾವುದಾದರೂ ನದೀ ತೀರಕ್ಕೆ ಅಥವಾ ಕೊಳದ ಬಳಿ ಹೋಗಿ ಗೌರಿಯ ವಿಗ್ರಹವನ್ನು ಸಿದ್ಧಪಡಿಸಿಕೊಂಡು ಮಂಗಳವಾದ್ಯ ಹಾಗೂ ಸುಮಂಗಲಿಯರು ಪೂಜೆ ಮಾಡುತ್ತಾ ಊರಿನ ಮುಖ್ಯ ಸ್ಥಳಕ್ಕೆ ತಂದು ತಳಿರು ತೋರಣಗಳಿಂದ ಅಲಂಕರಿಸಿದ ಸ್ಥಳದಲ್ಲಿ ವಿಗ್ರಹವನ್ನು ಸ್ಥಾಪಿಸುತ್ತಾರೆ.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಈ ವಿಗ್ರಹವು ಜೇಡಿಮಣ್ಣಿನಿಂದ  ತಯಾರಿಸಲಾಗಿದ್ದು ಅದನ್ನು ಅನೇಕ ಬಗೆಯ ವಸ್ತ್ರಾಭರಣಗಳಿಂದ ಅಲಂಕರಿಸಲಾಗುತ್ತದೆ. ಇಂತಹ ಪೂಜೆ ಪ್ರತ್ಯೇಕವಾಗಿ ಮನೆಗಳಲ್ಲಿ,ದೇವಾಲಯಗಳಲ್ಲಿ ಮತ್ತು ಸಾರ್ವಜನಿಕ ಕಲ್ಯಾಣಮಂಟಪಗಳಲ್ಲಿ  ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಆಚರಿಲಾಗುತ್ತದೆ.  </font><br/><font  style='font-size:11pt; color:#000000'>ಗೌರಿಪೂಜೆಯಲ್ಲಿ ಮುಖ್ಯವಾಗಿ ಮದುವೆಯಾದ ಸುಮಂಗಲಿಯರು ಮುಖ್ಯ ಪಾತ್ರ ವಹಿಸಿದರೂ  ಮದುವೆಯಾಗದ ಹೆಣ್ಣು ಮಕ್ಕಳು ಕೂಡ ಭಾಗವಹಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿವಿಧ ರೀತಿಯ ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ದೇವಿಯನ್ನು ಗಂಡನ ಮನೆಗೆ ಕಳುಹಿಸುವ ಸಂಕೇತವಾಗಿ ಹೂವು ,ವೀಳ್ಯದೆಲೆ,ಫಲ,ವಿವಿಧ ಪದಾರ್ಥಗಳನ್ನು ನೀರಿನಲ್ಲಿ ತೇಲಿ ಬಿಡುವ ರೂಢಿ ಇದೆ. ಇದು ಗಂಡನ ಮನೆಗೆ ಕಳುಹಿಸುವ ಒಂದು ಸಂಕೇತ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಮಂಗಲಿಯರು ಪರಸ್ಪರ ಬಾಗಿನವನ್ನು ಹಂಚಿಕೊಳ್ಳುತ್ತಾರೆ. ಮೊರದ ಜೊತೆಯಲ್ಲಿ ಫಲ ತಾಂಬೂಲದೊಂದಿಗೆ ಗಾಜಿನ ಬಳೆ,ಕನ್ನಡಿ,ಅರಶಿನ ಕುಂಕುಮ,ಬಿಚ್ಚೋಲೆ,ವಸ್ತ್ರ ಮುಂತಾದವುಗಳನ್ನು ಇರಿಸಿ ಸುಮಂಗಲಿಯ ಸಂಕೇತವಾಗಿ ಪರಸ್ಪರ ಕೊಟ್ಟು ತೆಗೆದುಕೊಳ್ಳುತ್ತಾರೆ. ದೂರದ ಊರಿನಲ್ಲಿರುವ ಹೆಣ್ಣು ಮಕ್ಕಳು ತವರು ಮನೆಗೆ ಬರಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಮನೆಯಿಂದ ಅವರಿಗೆ ಬಾಗಿನ ಮುಂಚಿತವಾಗಿಯೇ ತಲುಪಿಸುತ್ತಾರೆ. ಹಾಗೆ ಸಾಧ್ಯವಿಲ್ಲದ ಸಂದರ್ಭದಲ್ಲಿ ಹಣವನ್ನು ಕಳುಹಿಸುವ ಮೂಲಕ ತವರು ಮನೆಯ ಬಾಗಿನವನ್ನು ತಲುಪಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೂರನೆಯ ದಿನ(ಕೆಲವು ಸಂದರ್ಭದಲ್ಲಿ ಅದೇ ದಿನವೇ ಆಗಬಹುದು)ವಿನಾಯಕನ ಆಗಮನವಾಗುತ್ತದೆ.ಸಕಲ ಮರ್ಯಾದೆಯೊಂದಿಗೆ ಹೆಣ್ಣು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂಭ್ರಮ ಅದ್ದೂರಿಯಾಗಿ ನಡೆಯುತ್ತದೆ. ತಾಯಿಯ ಹಾಗೂ ಮಗನ ವಿಗ್ರಹಗಳನ್ನು ಸಾಮಾನ್ಯವಾಗಿ ಹೆಚ್ಚು ನೀರು ಇರುವ ಸ್ಥಳಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ.ಇದು ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದಾರಿಯುದ್ದಕ್ಕೂ ಮನೆ,ಮಠ,ದೇವಾಲಯ ಮುಂತಾದೆಡೆಯಲ್ಲಿರುವ ಎಲ್ಲಾ ವಿಗ್ರಹಗಳನ್ನು ಒಂದು ಜಾಗದಲ್ಲಿ ವಿಸರ್ಜಿಸುವ ಕಾರ್ಯಕ್ರಮವಿರುತ್ತದೆ. ಈ ಮಧ್ಯ ದಿನಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. </font>]]></content:encoded>
      <pubDate>Sun, 03 Jun 2007 19:23:27 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸಂಕ್ರಾಂತಿ ಹಬ್ಬ]]></title>
      <link>https://kannada.webdunia.com/article/festivals/ಸಂಕ್ರಾಂತಿ-ಹಬ್ಬ-107052800014_1.htm</link>
      <guid>https://kannada.webdunia.com/article/festivals/ಸಂಕ್ರಾಂತಿ-ಹಬ್ಬ-107052800014_1.htm</guid>
      <media:thumbnail url="http:"/>
      <image>http:</image>
      <description><![CDATA[ಸಂಕ್ರಾಂತಿ ಹಬ್ಬ ದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ.]]></description>
      <content:encoded><![CDATA[<font  style='font-size:11pt; color:#000000'>ಸಂಕ್ರಾಂತಿ ಹಬ್ಬ ದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ ವಿದೇಶಗಳಲ್ಲಿಯೂ ವಿಶೇಷವಾಗಿ ಪೌರ್ವಾತ್ಯ ದೇಶಗಳಲ್ಲಿ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ. ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷ ಪಡುವ ಸಡಗರ. ಮನೆಯನ್ನು ಶುದ್ಧಿಗೊಳಿಸುವುದು, ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು, ಮೂರನೆಯ ದಿನ ಹೊಸ ಫಸಲನ್ನು ಉಂಡು ಸಂತೋಷಪಡಲು ಎಲ್ಲಾ ಸನ್ನದ್ಧತೆ ನಡೆಸುತ್ತಾರೆ. ಮನೆಯ ಮುಂದೆ ವಿವಿಧ ರೀತಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕಾರ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೂರ್ಯನು ಮಕರ ಸಂಕ್ರಾಂತಿಯಂದು ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಮಕರ ಸಂಕ್ರಾಂತಿಯೆಂದು ಹೆಸರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಈ ದೇಶಗಳಲ್ಲಿಯೂ ಇದನ್ನು ಹೆಚ್ಚಾಗಿ ಮಕರ ಸಂಕ್ರಾಂತಿಯೆಂದೇ ಆಚರಿಸುತ್ತಾರೆ. ಆ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ. ಕರ್ನಾಟಕದಲ್ಲಿ ಮುಖ್ಯವಾಗಿ ಎಳ್ಳು, ಬೆಲ್ಲ ಮುಂತಾದವುಗಳನ್ನು ಮಿಶ್ರ ಮಾಡಿ ಊರಿನಲ್ಲೆಲ್ಲಾ ಹಂಚುವುದು. ಇದರೊಂದಿಗೆ ಹೊಸ ಬೆಳೆ, ಕಬ್ಬು, ಎಲಚಿಕಾಯಿ ಮುಂತಾದವುಗಳನ್ನು ಸೇರಿಸಿ ಎಲ್ಲರಿಗೂ ನೀಡಿ ಸಂತೋಷಪಡುವುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಳ್ಳು ಬೆಲ್ಲವನ್ನು ಆಕರ್ಷಣೀಯವಾಗಿ ತಯಾರಿಸಿ ಹಂಚುವ ರೂಢಿ ಇದೀಗ ಎಲ್ಲೆಲ್ಲೂ ಹೆಚ್ಚು ಪ್ರಚಲಿತವಿದೆ. ದೂರದ ಊರಿನಲ್ಲಿರುವ ಬಂಧು ಮಿತ್ರರಿಗೆ ಅದನ್ನು ಅಂಚೆಯ ಮೂಲಕ ರವಾನಿಸುವುದು ಹಾಗೂ ಶುಭ ಸಂದೇಶಗಳನ್ನು ಕಳುಹಿಸುವುದು ಈಗ ರೂಢಿಯಲ್ಲಿ ಬಂದಿದೆ. ಅಂದು ಸಂಜೆ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಕೆ ಮಾಡುವುದು ಅನೂಚಾನವಾಗಿ ನಡೆದು ಬಂದಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಎಳ್ಳು ಬೆಲ್ಲವನ್ನು ಹಂಚುವ ಸಂಪ್ರದಾಯ ಬಹಳ ಮಹತ್ವ ಪಡೆದಿದೆ. ಬೇರೆ ದಿನಗಳಲ್ಲಿ ಎಳ್ಳನ್ನು ಬೇರೆಯವರಿಗೆ ಕೊಡುವುದಾಗಲೀ ಅವರಿಂದ ಪಡೆಯುವುದಾಗಲೀ ಶುಭಕರವಲ್ಲ. ಎಳ್ಳು ಧಾನ್ಯ ಏನಿದ್ದರೂ ಋಣಾನುಬಂಧದ ಸಂಕೇತವಾಗಿರುವುದರಿಂದ ಅದನ್ನು ನೆಂಟರಿಷ್ಟರೆಲ್ಲರಿಗೂ ಆ ದಿನ ಹಂಚುವುದು ಮುಖ್ಯವಾಗಿ ಬಾಂಧವ್ಯ ನಿರಂತರವಾಗಿರಲಿ ಎಂಬುದರ ಸಂಕೇತ. ಆದ್ದರಿಂದಲೇ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬುದನ್ನು ಆ ದಿನ ಕೇಳುತ್ತೇವೆ. ಮಹಾರಾಷ್ಟ್ರದಲ್ಲಿಯೂ ಇದು ರೂಢಿಯಲ್ಲಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಂಕ್ರಾಂತಿ ಮುಖ್ಯವಾಗಿ ಸುಗ್ಗಿಯ ಹಬ್ಬ. ಧವಸ, ಧಾನ್ಯ ಬೆಳೆಯಲು ಸಹಾಯಕವಾದ ರೈತನ ಸ್ನೇಹಿತ ದನಕರುಗಳಿಗೂ ಆ ದಿನ ರೈತ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ದನಕರುಗಳನ್ನು ವಿಶೇಷವಾಗಿ ಸಿಂಗರಿಸುತ್ತಾರೆ. ಕೊಂಬುಗಳನ್ನು ಶುಭ್ರಗೊಳಿಸಿ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಾರೆ. ಕಬ್ಬು, ಬೆಲ್ಲ, ಬಾಳೆಹಣ್ಣು, ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವೈಭವದ ಮೆರವಣಿಗೆಯಲ್ಲಿ ಅವುಗಳನ್ನು ಊರೆಲ್ಲಾ ತಿರುಗಾಡಿಸುತ್ತಾರೆ. ವರ್ಷವಿಡೀ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ಈಗ ದೊರೆಯುತ್ತದೆ. ಹೀಗೆ ಸಂಕ್ರಾಂತಿಯ ಸಂಭ್ರಮ ನಾಡಿನ ಎಲ್ಲಾ ಭಾಗಗಳಲ್ಲಿಯೂ ಕಂಡು ಬರುತ್ತದೆ.</font><br/><font  style='font-size:11pt; color:#000000'></font><br/>(- <font  style='font-size:11pt; color:#000000'>ಡಾ.|ವಿ.ಗೋಪಾಲಕೃಷ್</font><font style='font-size:11pt;'>ಣ)</font>]]></content:encoded>
      <pubDate>Sun, 03 Jun 2007 19:23:17 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[festivals]]></category>
      <authorname>ಇಳಯರಾಜ</authorname>
    </item>
  </channel>
</rss>
