<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಹೋಳಿ]]></title>
    <link>https://kannada.webdunia.com/holi</link>
    <description><![CDATA[ಹೋಳಿ ಹಬ್ಬದ ವಿಶೇಷ ಆಚರಣೆ ಬಗ್ಗೆ ತಿಳಿಯಿರಿ.]]></description>
    <copyright>Copyright webdunia.com</copyright>
    <lastBuildDate>Wed, 05 Aug 2026 10:58:53 +0530</lastBuildDate>
    <language>en-us</language>
    <image>
      <title>ಹೋಳಿ</title>
      <url>https://kannada.webdunia.com/holi</url>
      <link>https://kannada.webdunia.com/holi</link>
    </image>
    <atom:link href="https://kannada.webdunia.com/rss/holi-10908.rss" rel="self" type="application/rss+xml"/>
    <item>
      <title><![CDATA[ಕೇಳಿ... ! ಇದು ಕೆಟ್ಟದ್ದನ್ನು ಸುಟ್ಟುಬಿಡುವ ಹೋಳಿ]]></title>
      <link>https://kannada.webdunia.com/article/holi/ಕೇಳಿ-ಇದು-ಕೆಟ್ಟದ್ದನ್ನು-ಸುಟ್ಟುಬಿಡುವ-ಹೋಳಿ-109030600068_1.htm</link>
      <guid>https://kannada.webdunia.com/article/holi/ಕೇಳಿ-ಇದು-ಕೆಟ್ಟದ್ದನ್ನು-ಸುಟ್ಟುಬಿಡುವ-ಹೋಳಿ-109030600068_1.htm</guid>
      <media:thumbnail url="http:"/>
      <image>http:</image>
      <description><![CDATA[ಹೋಳಿ... ದಕ್ಷಿಣ ಭಾರತೀಯರಿಗೆ ಟಿವಿಯಲ್ಲಿ, ಸಿನಿಮಾದಲ್ಲಿ ನೋಡಿ ಗೊತ್ತು. ಆದರೆ ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆಗೊಳ್ಳುತ್ತಿರುವಂತೆಯೇ, ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ...]]></description>
      <content:encoded><![CDATA[<font  style='font-size:11pt; color:#0000FF'><b><i>ಅವಿನಾಶ್  <!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0903/06/images/img1090306068_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>WD</td></tr></table></td></tr></table></p><!--endImage--> </font><font style=' color:#000000;'></b></i>ಹೋಳಿ... ದಕ್ಷಿಣ ಭಾರತೀಯರಿಗೆ ಟಿವಿಯಲ್ಲಿ, ಸಿನಿಮಾದಲ್ಲಿ ನೋಡಿ ಗೊತ್ತು. ಆದರೆ ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆಗೊಳ್ಳುತ್ತಿರುವಂತೆಯೇ, ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ಅದೊಂದು ರೀತಿಯ ಫ್ಯಾಶನ್ ಆಗಿ ಈ ಫಾಲ್ಗುಣದ ಶುಕ್ಲ ಪಕ್ಷದ ಹುಣ್ಣಿಮೆಯಂದು ಬರುವ ಹೋಳಿ ಹಬ್ಬದ ಸುಳಿಗಾಳಿಯು ಜಾತಿ-ಮತಭೇದವಿಲ್ಲದೆ ತೆಂಕಣದಲ್ಲೂ ಬೀಸತೊಡಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಬೇರೆಯವರ ಮುಖಕ್ಕೆ ರಂಗು ಬಳಿಯುವುದು, ಬಣ್ಣದೋಕುಳಿ ಎರಚುವುದು ಇವುಗಳೆಲ್ಲಾ ಈ ಹೋಳಿ ಹಬ್ಬದ ಮೋಜಿನ ಕ್ಷಣಗಳು. ಮೋಜು ಮಾಡಲು, ಮನರಂಜನೆ ಪಡೆಯಲು ಕಾರಣ ಬೇಕೇ? ಹೀಗಾಗಿ ಹೋಳಿಯನ್ನು ಎಲ್ಲರೂ ಅಪ್ಪಿಕೊಂಡುಬಿಟ್ಟಿದ್ದಾರೆ, ಒಪ್ಪಿಕೊಂಡುಬಿಟ್ಟಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ರೀತಿಯ ಸಂಸ್ಕೃತಿ ಪ್ರಸರಣೆಯಲ್ಲಿ ಉತ್ತರ ಭಾರತದಿಂದ ವಲಸೆ ಬಂದವರ ಕೊಡುಗೆಯೂ ಸಾಕಷ್ಟಿದೆ ಎಂಬುದು ಅತಿಶಯೋಕ್ತಿಯಲ್ಲ. ಜೊತೆಗೆ ಟಿವಿ, ಸಿನಿಮಾಗಳು ಕೂಡ ಹೋಳಿಯನ್ನು ಮೋಜಿನ ಹಬ್ಬವಾಗಿ ಬಿಂಬಿಸಿ ಜನಮಾನಸದಲ್ಲಿ ಆಸೆಯ ಚಿಗುರೊಡೆಸಿದೆ. ತತ್ಪರಿಣಾಮವಾಗಿ ಹೋಳಿ ಹಬ್ಬದಾಚರಣೆ, ಪಿಚಕಾರಿ ಮೂಲಕ ರಂಗು ಎರಚಾಡುವಿಕೆ, ಕೈಮೈಗಳಿಗೆ ಬಣ್ಣ ಮೆತ್ತುವುದು... ಅಟ್ಟಾಡಿಸಿಕೊಂಡು ಹೋಗಿ ಬಣ್ಣ ಹಚ್ಚಿಯೇಬಿಡುವುದು... ಇವೆಲ್ಲವೂ ನಮ್ಮ ನಾಡಿನ ಪಟ್ಟಣ ಪ್ರದೇಶಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಕಾಮದಹನ: </font><font style=' color:#000000;'>ಇಷ್ಟೆಲ್ಲ ಮನರಂಜನೆ ನೀಡುವ ಹೋಳಿ ಹಬ್ಬದ ಹಿಂದೆ ಒಂದೆರಡು ಪೌರಾಣಿಕ ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಪುರಾಣದಲ್ಲಿ ಉಲ್ಲೇಖವಿರುವ ಕಾಮ ದಹನ. ತಾರಕಾಸುರನೆಂಬ ರಾಕ್ಷಸ ರಾಜನ ಉಪಟಳ ತಾಳದೆ, ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಆತನಿಂದಾಗಿ ಅನ್ಯಾಯ ಹೆಚ್ಚಾದಾಗ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಶಿವನು ಆ ಸಂದರ್ಭ ಭೋಗಸಮಾಧಿಯಲ್ಲಿದ್ದ ಕಾರಣ, ಪಾರ್ವತಿಯನ್ನು ಕೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ, ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಹೋಲಿಕಾ ದಹನ: </font><font style=' color:#000000;'>ಇನ್ನೊಂದು ಕಥೆ ನಾರದ ಪುರಾಣದಲ್ಲಿ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ಸಂಪ್ರದಾಯ ವೈವಿಧ್ಯ: </font><font style=' color:#000000;'>ರಂಗಿನಾಟ ಎಂದಾಗ, 'ಬೇಡ ಕೃಷ್ಣ ರಂಗಿನಾಟ, ಸೀರೆ ನೆನೆವುದು' ಎಂಬ ಹಾಡು ನೆನಪಿಗೆ ಬಾರದಿರಲು ಸಾಧ್ಯವೇ? ಗೋಪಿಕೆಯರೊಂದಿಗೆ ತುಂಟ ಕೃಷ್ಣನ ಚೆಲ್ಲಾಟಗಳು ಮನಃಪಟಲದಲ್ಲಿ ಸುಳಿಯದಿರುವುದು ಸಾಧ್ಯವೇ? ಹೌದು. ಅದಕ್ಕಾಗಿಯೇ ಇರಬೇಕು, ಗೋಪೀಲೋಲ ಮುರಳಿ ಕೃಷ್ಣ ತನ್ನ ಪುಟ್ಟ ಪುಟ್ಟ ಪಾದಗಳಿಂದ ಚುಟುಪುಟು ಅಂತ ಓಡಾಡಿದ್ದ ಮಥುರಾ ಮತ್ತು ಬೃಂದಾವನಗಳಲ್ಲಿನ ಹೋಳಿ ಹಬ್ಬವು ಜಗತ್ಪ್ರಸಿದ್ಧವಾಗಿದೆ. ನವನೀತಚೋರ ಶ್ರೀಕೃಷ್ಣನು ಗೋಪಿಕೆಯರಿಗೆ ಪಿಚಕಾರಿ ಮೂಲಕ ಓಕುಳಿ ಹಾರಿಸುತ್ತಾ, ರಂಗು ರಂಗಾಗಿಸುತ್ತಿದ್ದ ಮತ್ತು ಬೇಕೆಂದೇ ಆತನ ರಂಗಿನೆರಚಾಟಕ್ಕೆ ತುತ್ತಾಗಲು ಹವಣಿಸುತ್ತಿದ್ದ ಗೋಪಿಕೆಯರ ದೃಶ್ಯಗಳು ಕಣ್ಮುಂದೆ ಸುಳಿಯುತ್ತವೆ. ಮಧ್ಯೆಯೇ, ಶ್ರೀಕೃಷ್ಣನ ಜನ್ಮಸ್ಥಾನ ನಂದಗಾಂವ್ ಮತ್ತು ರಾಧೆಯ ಊರಾಗಿರುವ ಬರ್ಸನಾಯ್ ಎಂಬಲ್ಲಿ ಗಂಡಂದಿರಿಗೆ ಕೋಲಿನಿಂದ ಹೊಡೆಯುವ ಒಂದು ಸಂಪ್ರದಾಯವೂ ಇದೆಯಂತೆ!</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕಾಮದಹನದ ಪ್ರತೀಕವಾಗಿ ಕಾಮ-ರತಿಯರನ್ನು ಐದು ದಿನಗಳ ಕಾಲ ಪ್ರತಿಷ್ಠಾಪಿಸಿ, ಹುಣ್ಣಿಮೆಯಂದು ದಹಿಸುವುದು ಸಂಪ್ರದಾಯ. ಮರುದಿನವೇ ಓಕುಳಿಯಾಟ. ಆದರೆ ಮತ್ತೆ ಕೆಲವು ಕಡೆಗಳಲ್ಲಿ ಹುಣ್ಣಿಮೆಯಂದೇ ಕಾಮ-ರತಿಯರನ್ನು ಪ್ರತಿಷ್ಠಾಪಿಸಿ, ಫಾಲ್ಗುಣ ಬಹುಳ ಚೌತಿಯಂದು ಸುಟ್ಟು, ಐದನೇ ದಿನ ರಂಗು ರಂಗಿನಾಟ ನಡೆಯುತ್ತದೆ. ಇದನ್ನು ರಂಗ ಪಂಚಮಿಯೆಂದೂ ಕರೆಯುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಬಾರಿಯ ಹೋಳಿ ಹಬ್ಬಕ್ಕೆ ಮತ್ತೊಂದು ವಿಶೇಷ ಅಂಟಿಕೊಂಡಿದೆ. ಈದ್ ಮಿಲಾದ್ ಹಬ್ಬವೂ ಅದೇ ದಿನ ಬರುತ್ತಿದೆ. ಆದರೆ ಚತುರ್ದಶಿ ಮತ್ತು ಹುಣ್ಣಿಮೆಯ ಸಂಯೋಗದಲ್ಲಿಯೇ ಈ ಬಾರಿ ಅದರ ಹಬ್ಬದ ತಿಥಿ ಕಾಣಿಸಿಕೊಂಡಿರುವುದರಿಂದ ಉದಯಕಾಲದಲ್ಲಿ ಚತುರ್ದಶಿ ಇರುತ್ತದೆ, ಬಳಿಕವಷ್ಟೇ ಪೂರ್ಣಿಮೆ ಬರುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಪಂಡಿತರ ಅನುಸಾರ, ಫಾಲ್ಗುಣ ಶುಕ್ಲ ಚತುರ್ದಶಿಯು ಈ ಬಾರಿ ಮಾರ್ಚ್ 10ರ ಬೆಳಿಗ್ಗೆ 10 ಗಂಟೆ ಆಸುಪಾಸಿನವರೆಗೆ ಇರುತ್ತದೆ, ಬಳಿಕ ಫಾಲ್ಗುಣ ಶುಕ್ಲ ಹುಣ್ಣಿಮೆ ಬರುತ್ತದೆ. ಈ ತಿಥಿಯು ಮಾರ್ಚ್ 11ರ ಬೆಳಿಗ್ಗೆ 8 ಗಂಟೆ ಸುಮಾರಿನ ವರೆಗೆ ಇರುತ್ತದೆ. ಇದು ಹೋಳಿ ಪೂಜಾವಿಧಿಗಳಿಗೆ ಪ್ರಶಸ್ತ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೋಳಿ ಸಂದರ್ಭ ಮೂಲತಃ ಅಕ್ಕಿಹಿಟ್ಟು ಮತ್ತು ಅರಿಶಿಣ ಮಿಶ್ರ ಮಾಡಿದ ಗುಲಾಲು, ಬಿದಿರಿನ ಪಿಚಕಾರಿ ಮೂಲಕ ಬಣ್ಣದ ಕೇಳಿ ನಡೆಯುತ್ತದೆ. ಈ ಬಣ್ಣ ಹಚ್ಚುವ ಆಟದ ಬಳಿಕ ಅಭ್ಯಂಜನ ಸ್ನಾನ ಮಾಡಿ ದೇವರನ್ನು ಅರ್ಚಿಸಿ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ.</font><br/><font  style='font-size:11pt; color:#0000FF'></font><br/><font  style='font-size:11pt; color:#0000FF'>ರಾಜಕೀಯ ರಂಗು: </font><font style=' color:#000000;'>ಜನರು ಧರ್ಮ ಭೇದ ಮರೆತು ಸಾಮರಸ್ಯದಿಂದ ಆಚರಿಸುತ್ತಿದ್ದ ಈ ಹಬ್ಬ ಇದೀಗ 'ಪಕ್ಷಭೇದ' ಮರೆತು ಆಚರಣೆಯಾಗತೊಡಗಿರುವುದು ಇತ್ತೀಚಿನ ವಿದ್ಯಮಾನ. ರಾಜಕೀಯ ಪಕ್ಷಗಳು ಕೂಡ ಈ ಹಬ್ಬಕ್ಕೆ ರಾಜಕೀಯ ರಂಗು ನೀಡುತ್ತಾ ಆಚರಣೆಯಲ್ಲಿ ತೊಡಗಿವೆ. ಸಾಮುದಾಯಿಕವಾಗಿ ಆಲೋಚಿಸಿದರೆ, ಜನನಾಯಕರು ಅನ್ನಿಸಿಕೊಂಡವರು ಜನರೊಂದಿಗೆ ಬೆರೆಯಲು ಇದು ಸತ್ಸಂಪ್ರದಾಯದ ವೇದಿಕೆ ಒದಗಿಸಿಕೊಡುತ್ತದೆಯಾದರೂ, ಇದರ ಹಿಂದೆ ಎಲ್ಲೋ ಸ್ವಾರ್ಥದ ವಾಸನೆ ಕಂಡುಬರದಿರುವುದಿಲ್ಲ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ದಿನಗಳಲ್ಲಿ ಒಂದಲ್ಲ, ನೂರೊಂದು ಹಿರಣ್ಯಕಶ್ಯಪುಗಳು ನಮ್ಮ ಸುತ್ತ ಮುತ್ತ ಇದ್ದಾರೆ. ನಾವು ಸಂವಿಧಾನ, ಕಾನೂನು, ರಾಷ್ಟ್ರಕ್ಕಿಂತ ಮಾತ್ರವಲ್ಲ ನಮ್ಮನ್ನು ಆರಿಸಿ ಕಳುಹಿಸಿದ ಜನರಿಂದಲೂ ನಾವೇ ಮೇಲೆ, ಎಲ್ಲರೂ ನಮಗೆ ಅಧೀನರಾಗಿರಬೇಕು ಎಂದುಕೊಳ್ಳುತ್ತಿರುವವರಿದ್ದಾರೆ. ಇವರೆಲ್ಲರೂ ಜನತೆಯ ಏಕತೆ, ಸದ್ಭಾವನೆ, ಪರಸ್ಪರ ವಿಶ್ವಾಸ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕಂಟಕರಾಗುತ್ತಿದ್ದಾರೆ. ತಂಗಿ ಹೋಲಿಕಾಳಂತಹ ಒಂದು ಮಾಧ್ಯಮದ ನೆರವಿನಿಂದ ಮುಗ್ಧರನ್ನು ಬಲಿತೆಗೆದುಕೊಳ್ಳುತ್ತಾ ಅಧಿಕಾರದಲ್ಲಿ ಮೆರೆಯುತ್ತಾರೆ. ಅಂಥ ಋಣಾತ್ಮಕ ಭಾವನೆಗಳ 'ಹೋಲಿಕಾ' ದಹನ ಮಾಡಬೇಕಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿಕಾ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಯಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.</font>]]></content:encoded>
      <pubDate>Fri, 06 Mar 2009 18:37:57 +0530</pubDate>
      <updatedDate>Tue, 15 Apr 2014 12:45:26 +0530</updatedDate>
      <category><![CDATA[Holi]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಎಲ್ಲೆಲ್ಲೂ ರಂಗು, ಇದು ಹೋಳಿಯ ಗುಂಗು]]></title>
      <link>https://kannada.webdunia.com/article/holi/ಎಲ್ಲೆಲ್ಲೂ-ರಂಗು-ಇದು-ಹೋಳಿಯ-ಗುಂಗು-109030600049_1.htm</link>
      <guid>https://kannada.webdunia.com/article/holi/ಎಲ್ಲೆಲ್ಲೂ-ರಂಗು-ಇದು-ಹೋಳಿಯ-ಗುಂಗು-109030600049_1.htm</guid>
      <media:thumbnail url="http:"/>
      <image>http:</image>
      <description><![CDATA[ಗುಲಾಬಿ, ಕೆಂಪು, ಹಸಿರು, ನೀಲಿ, ಹಳದಿ, ಕಂದು - ಎಲ್ಲೆಲ್ಲೂ ರಂಗು. ಹೌದು, ಇದು ಹೋಳಿ ಹಬ್ಬದ ಗುಂಗು. ಫಾಲ್ಗುಣ ಹುಣ್ಣಿಮೆಯ ವೇಳೆ ಆಚರಿಸುವ ಹಬ್ಬ ಹೋಳಿ. ಕೆಡುಕಿನ ವಿರುದ್ಧ ಒಳಿತಿನ ಗೆಲುವಿನ ಸಂಕೇತ ಈ ಹಬ್ಬ. ಈ ಹಬ್ಬಾಚರಣೆ ಸಾಮಾಜಿಕ ಸಂಬಂಧದ ಸೇತುವೆಯೂ ಹೌದು. ಮತ್ತು ಹೊಸ ಸಂಬಂಧಗಳನ್ನು ಅರಳಿಸುವ ...]]></description>
      <content:encoded><![CDATA[<font  style='font-size:11pt; color:#0000FF'><b>ಚಂದ್ರ   </font><font style='font-size:12pt; color:#000000;'></b></font><br/><!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0903/06/images/img1090306049_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಗುಲಾಬಿ, ಕೆಂಪು, ಹಸಿರು, ನೀಲಿ, ಹಳದಿ, ಕಂದು - ಎಲ್ಲೆಲ್ಲೂ ರಂಗು. ಹೌದು, ಇದು ಹೋಳಿ ಹಬ್ಬದ ಗುಂಗು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಫಾಲ್ಗುಣ ಹುಣ್ಣಿಮೆಯ ವೇಳೆ ಆಚರಿಸುವ ಹಬ್ಬ ಹೋಳಿ. ಕೆಡುಕಿನ ವಿರುದ್ಧ ಒಳಿತಿನ ಗೆಲುವಿನ ಸಂಕೇತ ಈ ಹಬ್ಬ. ಈ ಹಬ್ಬಾಚರಣೆ ಸಾಮಾಜಿಕ ಸಂಬಂಧದ ಸೇತುವೆಯೂ ಹೌದು. ಮತ್ತು ಹೊಸ ಸಂಬಂಧಗಳನ್ನು ಅರಳಿಸುವ ಹಬ್ಬವೂ ಆಗಿದೆ. ಜನರು ಮೇಲುಕೀಳು, ವಯಸ್ಸಿನ ಅಂತರ, ಜಾತಿಮತ (ಪ್ರಸಕ್ತ ಕಾಲಾವಸ್ಥೆಯಲ್ಲಿ ಪಕ್ಷಭೇದ) ಮರೆತು ಹೋಳಿ ಆಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೋಳಿ ಉತ್ಸವಾಗ್ನಿ(ಕಾಮದಹನ)ಯ ಮೂಲಕ ಹಬ್ಬಾಚರಣೆ ಆರಂಭವಾಗುತ್ತಿದೆ. ಮರುದಿನ ಜನರು ಪರಸ್ಪರ ಮುಖ ಕೆನ್ನೆಗಳಿಗೆ ಬಣ್ಣಗಳನ್ನು ಬಳಿಯುತ್ತಾ ಹೋಲಿಯ ರಂಗಿನಾಟ ಆಚರಿಸುತ್ತಾರೆ. ಪರಿಚಿತರು ಅಪರಿಚಿತರೆನ್ನದೆ ರಂಗುಬಳಿಯುವ ವೇಳೆ "ತಪ್ಪು ತಿಳಿಯಬೇಡಿ. ಹೋಳಿ" ಅನ್ನುತ್ತಾ ಬಣ್ಣ ಹಚ್ಚುವ ಪರಿಪಾಠವಿದೆ. ಉತ್ತರಭಾರತ, ಮಹಾರಾಷ್ಟ್ರಗಳಲ್ಲಿ ಈ ಹಬ್ಬದ ಆಚರಣೆ ಹೆಚ್ಚು. ಈ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೋಳಿಯ ರಂಗು ಕಮ್ಮಿ ಎನ್ನಬಹುದು. ಆದರೂ ಬಣ್ಣದಾಟ, ರಂಗಿನಾಟದ ಆಚರಣೆ ನಮ್ಮಲ್ಲೂ ಇದೆ. ಯುವಕ ಯುವತಿಯರು, ಮಕ್ಕಳು ಹೋಳಿ ಆಡುತ್ತಾ ಸಂಭ್ರಮಪಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪರಸ್ಪರು ಬಣ್ಣದ ಪುಡಿಗಳನ್ನು ಮುಖಕ್ಕೆ ಪೂಸುವ ಮೂಲಕ, ಅಥವಾ ಬಣ್ಣದ ಹುಡಿಯನ್ನು ನೀರಿನಲ್ಲಿ ಕದಡಿ ಈ ಬಣ್ಣದ ನೀರನ್ನು ಪಿಚಕಾರಿಗಳಲ್ಲಿ ಎರಚುತ್ತಾ, ಹಾಡುತ್ತಾ ನಲಿಯುವುದು ಹೋಳಿಯ ಸಂಭ್ರಮ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಿಶಿರದ ಅಂತ್ಯ ಮತ್ತು ವಸಂತಕಾಲದ ಅರಳುವಿಕೆಯ ಕಾಲದಲ್ಲಿ ಈ ಹಬ್ಬ ಆಗಮಿಸುತ್ತದೆ. ಬಣ್ಣಗಳ ಖರೀದಿ, ಅವುಗಳೊಂದಿಗೆ ಆಟ ಹಬ್ಬದ ಉತ್ಕರ್ಷ. ಬಣ್ಣಗಳನ್ನು ಖರೀದಿಸಿ ಮನೆಗೆ ತರುವ ಮೂಲಕ ಮನೆಗೆ ಹರ್ಷೋಲ್ಲಾಸ, ಆನಂದ, ಸಂತಸವನ್ನು ಮನೆ-ಮನ ಬದುಕಿಗೆ ತರಲಾಗುತ್ತದೆ ಎಂಬುದು ಈ ಬಣ್ಣದ ಹಬ್ಬದ ಸಂಕೇತ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪುಟ್ಟಮಕ್ಕಳು ಈ ಹಬ್ಬದ ಇಂಚಿಂಚನ್ನು ಸಂಭ್ರಮೋಲ್ಲಾಸದಿಂದ ಆಚರಿಸುತ್ತಾ ಅನಂದಿಸುತ್ತಾರೆ. ಅಪ್ಪ, ಅಮ್ಮ ಸಹೋದರ ಸಹೋದರಿಯರಿಗೆ ಬಣ್ಣ ಮೆತ್ತಲು ತಾಮುಂದು ನಾಮುಂದು ಎಂಬುದು ಅವರು ಉತ್ಸಾಹ. ಬಳಿಕ ನೆರೆಹೊರೆಯವರು, ಸಂಬಂಧಿಗಳಿಗೂ ಬಣ್ಣ ಎರಚಲು ತೆರಳಿ ಓರಗೆಯವರೊಂದಿಗೆ ಬಣ್ಣದಾಟವಾಡುತ್ತಾ ನಲಿಯುವುದನ್ನು ನೋಡುವುದು ಕಣ್ಣಿಗೂ ಮನಸ್ಸಿಗೂ ಅಂದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಾರುಕಟ್ಟೆಯಲ್ಲಿ ಬೇಕಾದ ಬಣ್ಣಗಳು ಸಿಗುತ್ತಿದ್ದರೂ, ಕೆಲವು ಕಟ್ಟಾ ಆಚರಣೆಗಾರರು ಮನೆಯಲ್ಲೇ ಬಣ್ಣವನ್ನು ತಯಾರಿಸುತ್ತಾರೆ. 'ಟೆಸು' ಮತ್ತು 'ಪಲಾಸ್' ಎಂಬ ಹೂವುಗಳಿಂದ ಬಣ್ಣದ ಪುಡಿ ತಯಾರಿಸಲಾಗುತ್ತದೆ. ಸುವಾಸನೆಬೀರುವ ಈ ಪುಡಿಯಲ್ಲಿ ಮನೆಯಲ್ಲಿ ತಯಾರಿತ ಎಂಬ ಅಕ್ಕರಾಸ್ಥೆ ಮಿಳಿತವಾಗಿದ್ದು ಹಬ್ಬದಾಟ ಇನ್ನಷ್ಟು ಕಂಪು - ಇಂಪು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಂಪ್ರದಾಯವಾದಿ ಆಚರಣೆಗಾರರು ಪುಟ್ಟ ಕ್ರಿಸ್ಟಲ್ ಅಥವಾ ದಪ್ಪ ಕಾಗದ ಪುಡಿಗಳಿಗೆ ಗುಲಾಲ್ ಮಿಶ್ರಮಾಡುವ ಮೂಲಕವೂ ಬಣ್ಣವನ್ನು ತಯಾರಿಸುತ್ತಾರೆ. ಕೆಲವು ತುಂಟರು ಸಿಲ್ವರ್ ಮತ್ತು ಗೋಲ್ಡ್ ಪೇಂಟ್‌ ಬಳಿಯುತ್ತಾರೆ. ಅದೇನೇ ಇದ್ದರೂ ಹೋಲಿಯಾಟದ ಅಂತ್ಯದಲ್ಲಿ ಯಾರೂ ತಮ್ಮ ಮೂಲ ಬಣ್ಣದಲ್ಲಿ ಇರುವುದಿಲ್ಲ. ಮತ್ತು ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಾ, ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಸಂತೋಷ ಅನುಭವಿಸುತ್ತಾರೆ. ಹಬ್ಬಾಚರಣೆಯ ವೇಳೆ ಸಾಮಾನ್ಯವಾಗಿ ತೊಡುವ ಶ್ವೇತ ವಸ್ತ್ರಗಳು ರಂಗುರಂಗಿನ ರಂಗೀಲಾ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಹೋಳಿ ಆಚರಣೆವೇಳೆ ಎಲ್ಲರೂ ಮಕ್ಕಳಾಗುತ್ತಾರೆ. ದುಃಖ ದುಮ್ಮಾನ ಬೇಸರ ಒತ್ತಡಗಳನ್ನೆಲ್ಲ ಮರೆತು ಎಲ್ಲರೂ ಮಕ್ಕಳಾಗುವ ಹಬ್ಬವಿದು. ಯುವಕರಿಗಂತೂ ತಮ್ಮ ಅದಮ್ಯ ಉತ್ಸಾಹದ ಪ್ರದರ್ಶನಕ್ಕೆ ಇದಕ್ಕಿಂತ ಬೇರೆ ಅವಕಾಶ ಬೇಕೇ? ಮಾನವ ಪಿರಮಿಡ್‌ಗಳನ್ನು ನಿರ್ಮಿಸಿ ಅತಿ ಎತ್ತರದಲ್ಲಿ ಕಟ್ಟಿರುವ ಮಜ್ಜಿಗೆ ಮಡಿಕೆಯನ್ನು ಒಡೆಯುತ್ತಾರೆ. ತಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುತ್ತಾರೆ, ಕುಣಿಯುತ್ತಾರೆ. ನಲಿಯುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹೋಳಿ ಆಚರಣೆಗೆ ಯಾವುದೇ ಎಲ್ಲೆಇಲ್ಲ. ಸಂತಸ ಆಚರಣೆ ತಮ್ಮ ಹಕ್ಕು ಎಂಬಂತೆ ಪ್ರತಿಯೊಬ್ಬರೂ ಆಚರಿಸುತ್ತಾರೆ. ಹಾಡು, ಕುಣಿತ, ಬಣ್ಣದ ಮೋಜು, ಮೋಜು, ಮೋಜು. ಹೋಳಿಯ ಕಾಲದಲ್ಲಿ ಜೀವನವೇ ಅತ್ಯಂತ ವರ್ಣಮಯ, ಬಣ್ಣಮಯ.</font>]]></content:encoded>
      <pubDate>Fri, 06 Mar 2009 17:21:21 +0530</pubDate>
      <updatedDate>Tue, 15 Apr 2014 12:45:26 +0530</updatedDate>
      <category><![CDATA[Holi]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಹೋಳಿ...ಹೋಳಿ...ಬಣ್ಣದೋಕುಳಿ...]]></title>
      <link>https://kannada.webdunia.com/article/holi/ಹೋಳಿ-ಹೋಳಿ-ಬಣ್ಣದೋಕುಳಿ-109030600031_1.htm</link>
      <guid>https://kannada.webdunia.com/article/holi/ಹೋಳಿ-ಹೋಳಿ-ಬಣ್ಣದೋಕುಳಿ-109030600031_1.htm</guid>
      <media:thumbnail url="http:"/>
      <image>http:</image>
      <description><![CDATA[ಹಿಂದೂಗಳ ಹಬ್ಬಗಳಲ್ಲಿ ಒಂದಾಗಿರುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹಬ್ಬವಾಗಿದೆ. ಪ್ರತಿಯೊಂದು ಹಬ್ಬಕ್ಕೂ ಪೌರಾಣಿಕ ಹಿನ್ನೆಲೆ ಇದೆ. ಆ ರೀತಿಯಲ್ಲಿ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವೆ ಹೆಣೆದುಕೊಂಡಿರುವ ...]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0903/06/images/img1090306031_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಹಿಂದೂಗಳ ಹಬ್ಬಗಳಲ್ಲಿ ಒಂದಾಗಿರುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹಬ್ಬವಾಗಿದೆ. ಪ್ರತಿಯೊಂದು ಹಬ್ಬಕ್ಕೂ ಪೌರಾಣಿಕ ಹಿನ್ನೆಲೆ ಇದೆ. ಆ ರೀತಿಯಲ್ಲಿ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವೆ ಹೆಣೆದುಕೊಂಡಿರುವ ಕಥೆಯಾಗಿದ್ದು, ಇದು ಶೈವ-ವೈಷ್ಣವ ಹೊಯ್ದಾಟದ ತಿರುಳನ್ನು ಹೊಂದಿರುವಂಥದ್ದು. ಆ ಕಾರಣಕ್ಕಾಗಿ ಹೋಳಿ ಪ್ರಮುಖವಾಗಿ ಉತ್ತರ ಭಾರತದಲ್ಲಿ ಅದ್ದೂರಿಯಾಗಿ ಆಚರಿಸುವಂತೆ ದಕ್ಷಿಣದಲ್ಲಿ ಅದರ ಅಬ್ಬರ ಕಡಿಮೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಅದರಲ್ಲೂ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೋಳಿ ಮೀನುಗಾರ (ಖಾರ್ವಿ) ಹಾಗೂ ಬುಡಕಟ್ಟಿನ ಕುಡುಬಿ ಜನಾಂಗಕ್ಕೆ ಮಾತ್ರ ಸೀಮಿತವಾಗಿದೆ. ಅದನ್ನು ಹೊರತುಪಡಿಸಿದರೆ ಬಣ್ಣದೋಕುಳಿ ಎರಚುವಿಕೆ ಹೆಚ್ಚಿನ ಶಾಲಾ-ಕಾಲೇಜುಗಳಲ್ಲಿ ಮಹತ್ವ ಪಡೆದಿದೆ. ಹಾಗಂತ ಧಾರ್ಮಿಕ ಹಿನ್ನೆಲೆಯ ಆಚರಣೆ ಅದಲ್ಲ, ಅಲ್ಲಿರುವುದು ಹೋಳಿ ಹೆಸರಿನ ಸಂಭ್ರಮ, ಕೀಟಲೆ ಮಾತ್ರ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ದಕ್ಷಿಣ ಕನ್ನಡ ಹಾಗೂ ಉಡುಪಿ, ಕುಂದಾಪುರ ಪ್ರದೇಶಗಳಲ್ಲಿ ಖಾರ್ವಿ ಜನಾಂಗದವರು ಹೋಳಿ ದಿನಾಚರಣೆಯಂದು ತಮ್ಮ ಸಾಂಪ್ರದಾಯಿಕ ಹಾಡನ್ನು ಹಾಡುವ ಮೂಲಕ ಅದ್ದೂರಿಯಾಗಿ ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಮೀನುಗಾರಿಕೆಗೆ ರಜೆ ಸಾರಲಾಗಿರುತ್ತದೆ. ಎಲ್ಲೆಡೆಯಿಂದ ಬಂಧು-ಬಳಗ ಆಗಮಿಸುತ್ತಾರೆ. ಹೋಳಿಯ ಎರಡನೇ ದಿನದಂದು ಕೈಯಲ್ಲಿ ಬಣ್ಣವನ್ನು ಹಿಡಿದು ಸಿಕ್ಕ-ಸಿಕ್ಕವರಿಗೆ ಎರಚುವ ಮೂಲಕ ಸಂಭ್ರಮಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಹೋಳಿ...ಹೋಳಿ...: </b>ಖಾರ್ವಿ ಜನಾಂಗದಂತೆ ಕುಡುಬಿ ಜಾತಿಯವರು ಕೂಡ ವಿಶಿಷ್ಟ ಜಾನಪದ ಹಾಡು ಹಾಗೂ ಅವರ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟುಕೊಂಡು ನರ್ತನದ ಮೂಲಕ ಆಚರಿಸುವ ಹೋಳಿ ತುಂಬಾ ವಿಭಿನ್ನವಾದದ್ದು. ಉಡುಪಿ ತಾಲೂಕಿನ ಸೂರಾಲು ಅರಮನೆಯಲ್ಲಿ ಹೋಳಿಯ ದಿನದಂದು ನೂರಾರು ಕುಡುಬಿ ಜನಾಂಗದವರು ಡಮರು ನಾದದ ಹಾಗೂ ಜಾನಪದ ಹಾಡಿನೊಂದಿಗೆ ಕುಣಿಯುತ್ತಾ ಜನಮನವನ್ನು ರಂಜಿಸುವುದನ್ನು ಅಲ್ಲಿ ಕಾಣಬಹುದಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಡೊಳ್ಳು ಕುಣಿತ: </b>ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ಬೀರೇಶ್ವರ ದೇವರನ್ನು ಆರಾಧಿಸುವುದು ಡೊಳ್ಳು ಕುಣಿತ ವಿಶಿಷ್ಟವಾದದ್ದು. ಮೂಲತಃ ಶೈವಾರಾಧಕರಾದ ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿಯುವುದು ಆಕರ್ಷಕ ಜನಪದ ನರ್ತನವಾಗಿದೆ. 12ಮಂದಿಯ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ನಡೆಯುತ್ತದೆ.  ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶವಾಗಿದೆ. ಈ ಸಂದರ್ಭದಲ್ಲಿ ಹಾಲುಮಾತಾ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇನ್ನುಳಿದಂತೆ ಬೀದರ್ ,ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಮುಂಬೈ, ಹೈದರಾಬಾದ್‌ಗಳಲ್ಲೂ ಹೋಳಿಯನ್ನು ಹಿಂದೂ-ಮುಸ್ಲಿಮ್ ಎನ್ನುವ ಬೇಧವಿಲ್ಲದೆ ಆಚರಿಸುತ್ತಾರೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಬಣ್ಣದೋಕುಳಿ ಬಗ್ಗೆ ಎಚ್ಚರ !</b></font><br/><font  style='font-size:11pt; color:#000000'>ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಆಚರಿಸಲ್ಪಡುವ ಹೋಳಿಯ ಬಣ್ಣದೋಕುಳಿ ಎರಚುವಿಕೆ ಇಂದು ಕೇವಲ ಸಂಭ್ರಮವಾಗಿ ಉಳಿದಿಲ್ಲ, ಅದರ ಹಿಂದೆ ವಿಕೃತ ಮನಸ್ಸುಗಳು ಕೂಡ ಸೇರಿಕೊಂಡಿರುವ ಪರಿಣಾಮ ಅಪಾಯವೂ ಹೆಚ್ಚಿದೆ. ಬಣ್ಣಕ್ಕೆ ವಿವಿಧ ರಾಸಾಯನಿಕ ಸೇರಿಸುವುದು ಇಲ್ಲವೇ ದುರುದ್ದೇಶದಿಂದ ಆಸಿಡ್‌ನಂತಹ ದ್ರವ್ಯ ಸೇರಿಸಿ ಮುಖಕ್ಕೆ ಎರಚಿದ ಘಟನೆ ಸಾಕಷ್ಟು ಬಾರಿ ವರದಿಯಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆ ನಿಟ್ಟಿನಲ್ಲಿ ಜಾತ್ಯತೀತವಾಗಿ ನಡೆಯುವ ಬಣ್ಣದೋಕುಳಿಯ ನಡುವೆ ರಕ್ತದೋಕುಳಿ ಹರಿಯದಂತೆ ಎಚ್ಚರ ವಹಿಸಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ಮೋಜಿಗಾಗಿ ಮುಖಕ್ಕೆ ಬಣ್ಣ, ಸುನಾರಿಯಂತಹ ಪುಡಿ,ಪುಡಿಗಳನ್ನು ಹಚ್ಚಲಾಗುತ್ತದೆ. ಆದರೂ ವಿಕೃತ ಮನಸ್ಸಿನ ಅಪಾಯವನ್ನು ಅರಿಯುವ ಎಚ್ಚರವೂ ಅಗತ್ಯ.</font>]]></content:encoded>
      <pubDate>Fri, 06 Mar 2009 16:08:57 +0530</pubDate>
      <updatedDate>Tue, 15 Apr 2014 12:45:26 +0530</updatedDate>
      <category><![CDATA[Holi]]></category>
      <authorname>ಇಳಯರಾಜ</authorname>
    </item>
  </channel>
</rss>
