<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಇಸ್ಲಾಂ ಧರ್ಮದ ಕುರಿತು]]></title>
    <link>https://kannada.webdunia.com/about-islam</link>
    <description><![CDATA[ಇಸ್ಲಾಂ ಧರ್ಮದ ಕುರಿತು]]></description>
    <copyright>Copyright webdunia.com</copyright>
    <lastBuildDate>Thu, 18 Jun 2026 14:00:55 +0530</lastBuildDate>
    <language>en-us</language>
    <image>
      <title>ಇಸ್ಲಾಂ ಧರ್ಮದ ಕುರಿತು</title>
      <url>https://kannada.webdunia.com/about-islam</url>
      <link>https://kannada.webdunia.com/about-islam</link>
    </image>
    <atom:link href="https://kannada.webdunia.com/rss/about-islam-10911.rss" rel="self" type="application/rss+xml"/>
    <item>
      <title><![CDATA[ಆತ್ಮಶುದ್ಧಿಯ ಪ್ರತೀಕವಿದು ಈದ್ ಉಲ್ ಫಿತ್ರ್]]></title>
      <link>https://kannada.webdunia.com/article/about-islam/ಆತ್ಮಶುದ್ಧಿಯ-ಪ್ರತೀಕವಿದು-ಈದ್-ಉಲ್-ಫಿತ್ರ್-110090900075_1.htm</link>
      <guid>https://kannada.webdunia.com/article/about-islam/ಆತ್ಮಶುದ್ಧಿಯ-ಪ್ರತೀಕವಿದು-ಈದ್-ಉಲ್-ಫಿತ್ರ್-110090900075_1.htm</guid>
      <media:thumbnail url="http:"/>
      <image>http:</image>
      <description><![CDATA[ಇಂದಿನ ಕ್ಷೋಭೆಭರಿತ ದಿನಗಳಲ್ಲಿ, ಕಿರಿದಾಗಿಬಿಟ್ಟಿರುವ ಮನಸ್ಸುಗಳ ನಡುವೆ, ಶಂಕೆಯ ಕಾರ್ಮೋಡ ಹರಡಿರುವ ಎದೆಗೂಡುಗಳ ಮಧ್ಯೆ, ಮನುಕುಲದ ಏಳಿಗೆಗೆ ಇರುವ ಏಕೈಕ ಮಾರ್ಗ ಸರ್ವ ಧರ್ಮ ಸಮಾನ ಭಾವನೆ. ಪರಧರ್ಮ ಸಹಿಷ್ಣುತೆ ನಮ್ಮ ದೇಶದ ಅತಿದೊಡ್ಡ ಗುಣ. ಪರಧರ್ಮೀಯರೂ ನಮ್ಮ ಬಂಧುಗಳು ಅಂತ ತಿಳಿದುಕೊಂಡು, ಅವರೂ ನಮ್ಮ ...]]></description>
      <content:encoded><![CDATA[<!--Image--><p class="wdp_articleLImg"><p><img src='/kn/articles/1009/09/images/img1100909075_1_1.jpg' alt='Hindu-Muslim'  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> <font  style='font-size:11pt; color:#0000FF'><i>ಅವಿನಾಶ್ ಬಿ. </font><font style=' color:#000000;'></i></font><br/><font  style='font-size:11pt; color:#000000'>ಮನುಷ್ಯನೊಳಗೆ ಹುದುಗಿರುವ, ಮಾನವ ಸಹಜವಾದ ಪರನಿಂದನೆಯಂತಹಾ ಕೆಟ್ಟ ಗುಣಗಳನ್ನು ತೊರೆದು, ದಾನ ಧರ್ಮಗಳಲ್ಲಿ ತೊಡಗಿಕೊಂಡು ಸೌಹಾರ್ದತೆ, ಉತ್ತಮ ಸಮಾಜದ ನಿರ್ಮಾಣಕ್ಕೆ ಪೂರಕವಾಗುವಲ್ಲಿ ಈ ವ್ರತಗಳು ಮಹತ್ವದ ಪಾತ್ರ ವಹಿಸುತ್ತವೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ರಮ್ಜಾನ್ ಎಂದು ನಾವೆಲ್ಲ ಕರೆಯುವ ರಮದಾನ್ ಉಪವಾಸ ವ್ರತಾಚರಣೆಯ ಒಂದು ತಿಂಗಳು ಮುಕ್ತಾಯಗೊಳ್ಳುವ ಸಂಕೇತವಾಗಿ ಆಚರಿಸುವ ಹಬ್ಬ ಈದುಲ್-ಫಿತ್ರ್. ರಮ್ಜಾನ್ ಪದದ ವ್ಯುತ್ಪತ್ತಿಯಾಗಿದ್ದು ಅರೆಬಿಕ್ ಪದ 'ರಮಿದ್' ಅಥವಾ 'ರಮಜ್'ನಿಂದ. ಇದರರ್ಥ ನೆಲ ಕಾದು ಸುಡುವಂತಹಾ ತೀಕ್ಷ್ಣ ತಾಪಮಾನ ಎಂದು (ಮರಳುಗಾಡಿನಲ್ಲಿ ಕಂಡುಬರುವ). ಬದುಕಿನ ದೈನಂದಿನ ಜಂಜಾಟದ ಸುಡು ಬೇಗೆಯನ್ನು ತಣಿಸಲು ಈ ಉಪವಾಸ ವ್ರತ ನೆರವಾಗುತ್ತದೆ ಎಂಬುದು ನಂಬಿಕೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಮಿಕ್ ಕ್ಯಾಲೆಂಡರಿನ 9ನೇ ಮಾಸ ರಮದಾನ್ ಅಥವಾ ರಮಜಾನ್, ರಂಜಾನ್, ರಮ್ಜಾನ್. ನನ್ನ ಒಬ್ಬ ಮುಸಲ್ಮಾನ ಮಿತ್ರ ಹೇಳುವಂತೆ ಇದನ್ನು ರಮ್ಜಾನ್ ಅಂತಲೇ ಬರೆದರೆ ಹೆಚ್ಚು ಸೂಕ್ತವಂತೆ. ರಮ್ಜಾನ್ ಮಾಸದಲ್ಲೇ ಜನರಿಗೆ ಮಾರ್ಗದರ್ಶನ ಮಾಡಲು ಮತ್ತು ಜನರನ್ನು ಮೋಕ್ಷಮುಖಿಗಳಾಗಿಸಲು ಸ್ವರ್ಗದಿಂದ ಕುರಾನ್ ಎಂಬ ಪವಿತ್ರ ಗ್ರಂಥವು ಇಳಿದು ಬಂತೆಂಬುದು ಮುಸಲ್ಮಾನ ಬಾಂಧವರ ನಂಬಿಕೆ. ಇದೇ ಕಾರಣಕ್ಕೆ ರಮ್ಜಾನ್ ಮಾಸದಲ್ಲಿ ಕುರಾನ್ ಗ್ರಂಥಕ್ಕೆ ಹೆಚ್ಚಿನ ಮಾನ್ಯತೆ, ಗೌರವ. ಅದೇ ರೀತಿಯಾಗಿ, ಪ್ರವಾದಿಯವರಿಗೆ ದೇವದೂತರ ಮೂಲಕ ಕುರಾನ್ ಬೋಧನೆಯಾಗಿದ್ದು ಕೂಡ ಇದೇ ತಿಂಗಳಲ್ಲಿ ಎಂಬ ಪ್ರತೀತಿಯೂ ಇದೆ.</font><br/><font  style='font-size:12pt; color:#000000'></font><br/><!--Image--><p class="wdp_articleRImg"><p><img src='/kn/articles/1009/09/images/img1100909075_1_2.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>ND</p></p><!--endImage--> <font  style='font-size:11pt; color:#000000'>ನೈಜ ಮುಸಲ್ಮಾನರು ಪರಿಶುದ್ಧ ಮನದಿಂದ ಅಲ್ಲಾಹುವಿಗೆ ಪರಿಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡು ಪುನೀತರಾಗುವ ಅತ್ಯಂತ ಪರಿಣಾಮಕಾರಿ ವಿಧಾನ ಈ ರಮ್ಜಾನ್ ವ್ರತ. ಇಸ್ಲಾಂನ ಐದು ತತ್ವ ಅಥವಾ ಆಧಾರ ಸ್ತಂಭಗಳು ಎಂದು ಕರೆಯಲಾಗುವವುಗಳಲ್ಲಿ ಸೌಮ್ ಅಥವಾ ಉಪವಾಸ ಕೂಡ ಒಂದು. ಉಪವಾಸ ಮಾಡುವುದು ಎಲ್ಲ ಧರ್ಮಗಳಲ್ಲಿಯೂ ಇದ್ದದ್ದೇ. ಇದು ಆರೋಗ್ಯಕ್ಕೆ ಪೂರಕ ಎಂಬುದು ಒಂದು ಮಾತಾದರೆ, ತಿಂದುಂಡು ಸುಖವಾಗಿ ಜೀವಿಸುತ್ತಿರುವವರಿಗೆ, ಮೂರು ಹೊತ್ತು ಉಣಲು ಸಾಧ್ಯವಿಲ್ಲದ ಬಡ ಬಂಧುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಇರುವ ಒಂದು ಅವಕಾಶವೂ ಹೌದು ಎಂಬುದು ತಾತ್ವಿಕ ಕಾರಣ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕುರಾನ್‌ನ ಒಂದು ವಚನ ಹೇಳುತ್ತದೆ: "... ನೀವು (ಜನರನ್ನು) ಕ್ಷಮಿಸಿರಿ ಮತ್ತು (ಅವರ ತಪ್ಪುಗಳನ್ನು) ಕಡೆಗಣಿಸಿರಿ. ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಅಪೇಕ್ಷಿಸುವುದಿಲ್ಲವೇ? ಅಲ್ಲಾಹನಂತೂ ಸದಾ ಕ್ಷಮಿಸುವವನು ಮತ್ತು ಕರುಣಾಮಯಿ". ದಯೆಯೇ ಧರ್ಮದ ಮೂಲ ಎಂಬ ಮಾತನ್ನೇ ಅಲ್ಲವೇ ಇದು ಪ್ರತಿಪಾದಿಸುವುದು?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಜಗತ್ತಿನ ಎಲ್ಲ ಧರ್ಮಗಳೂ ಶಾಂತಿ, ಸಹೋದರತೆ ಮತ್ತು ಭಾವೈಕ್ಯವನ್ನೇ ಬೋಧಿಸುತ್ತಿವೆ. ಹೀಗಾಗಿ ಯಾವ ಧರ್ಮವಾದರೇನು, ಅವರವರ ಧರ್ಮಾಚರಣೆ ಅವರವರ ಹಕ್ಕು. ಅದೇ ಕುರಾನ್‌ನಲ್ಲಿ ಒಂದು ವಾಕ್ಯವಿದೆ. "ಮಾನವರೆಲ್ಲರೂ ಒಂದೇ ಜನಾಂಗದವರಾಗಿದ್ದರು. ಕ್ರಮೇಣ ಅವರು ಭಿನ್ನತೆ ತೋರಿದರು". ಇದು ಭಾವೈಕ್ಯದ, ಮಾನವ ಕುಲವೊಂದೇ ಎಂಬುದರ ಸಂಕೇತ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕುರಾನ್ ದೇವವಾಣಿ. ದೇವದೂತರ ಮೂಲಕ ಮಹಮದ್ ಪೈಗಂಬರ್ ಅವರಿಗೆ ಇದು ಬೋಧಿಸಲ್ಪಟ್ಟಿತು. ಇದು ಮನುಕುಲದ ಮಾರ್ಗದರ್ಶಿ ಗ್ರಂಥವಾಗಿದ್ದು, ಪರರೊಂದಿಗೆ ಬದುಕುವ ರೀತಿ, ಧಾರ್ಮಿಕತೆ, ಆರ್ಥಿಕತೆ, ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ಬಡಬಗ್ಗರ ಬಗ್ಗೆ ಕಾಳಜಿ, ತಂದೆ ತಾಯಿಯ ಬಗೆಗೆ ಗೌರವ, ಜೀವನದ ನೀತಿ ಮುಂತಾದವುಗಳನ್ನೆಲ್ಲವನ್ನೂ ಬೋಧಿಸುತ್ತದೆ. ಜೀವನದ ವಿಶ್ವಕೋಶವೂ ಹೌದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇಹ ಮತ್ತು ಆತ್ಮ (ಮನೋ) ಶುದ್ಧಿಯಿಂದ ಅಲ್ಲಾಹುವಿಗೆ ಹತ್ತಿರವಾಗಿ, ಮನೋನಿಗ್ರಹದ ಮೂಲಕ, ಪರಿಶುದ್ಧ ಮನಸ್ಸಿನಿಂದ ಪರಿಪೂರ್ಣ ವ್ಯಕ್ತಿಯಾಗುವುದು ಈ ವ್ರತ ಆಚರಣೆಯ ಹಿಂದಿರುವ ಮೂಲ ಉದ್ದೇಶ. ಸ್ವರ್ಗದ ಬಾಗಿಲು ತೆರೆದಿರುವ ಪವಿತ್ರ ಮಾಸವೂ ಇದಾಗಿದ್ದು, ಸತ್ಕಾರ್ಯ, ಸನ್ಮಾರ್ಗ, ಸನ್ನಡತೆ, ಸದ್ಧರ್ಮಪಾಲನೆಯು ಸದಾನಂದಕ್ಕೆ ಕಾರಣವೂ ಆಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸ್ವತಃ ಪ್ರವಾದಿಯವರೇ ದೊಡ್ಡ ಹೋರಾಟಗಾರರಾಗಿದ್ದರೂ, ಹಿಂಸೆಯನ್ನು ಅವರು ಒಪ್ಪಲಿಲ್ಲ. ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದರೂ, ಅವರ ಖಡ್ಗಕ್ಕೆ ಒಂದು ಹನಿ ರಕ್ತವೂ ಅಂಟಲಿಲ್ಲ ಎನ್ನುತ್ತದೆ ಕುರಾನ್. ಅಮಾಯಕರ ಒಂದು ಹನಿ ರಕ್ತವೂ ಚೆಲ್ಲಬಾರದು ಎಂಬುದು ಕುರ್ಆನ್ ಸ್ಪಷ್ಟೋಕ್ತಿ. ಅನ್ಯಾಯವಾಗಿ ಯಾರನ್ನೂ ಕೊಲ್ಲಬಾರದು ಎಂಬುದು ಅದರ ಆಗ್ರಹ. ಹೀಗಾಗಿ ಯಾವುದೇ ಧರ್ಮವು ಕೂಡ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂಬುದಂತೂ ಸುಸ್ಪಷ್ಟ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಂದಿನ ಕ್ಷೋಭೆಭರಿತ ದಿನಗಳಲ್ಲಿ, ಕಿರಿದಾಗಿಬಿಟ್ಟಿರುವ ಮನಸ್ಸುಗಳ ನಡುವೆ, ಶಂಕೆಯ ಕಾರ್ಮೋಡ ಹರಡಿರುವ ಎದೆಗೂಡುಗಳ ಮಧ್ಯೆ, ಮನುಕುಲದ ಏಳಿಗೆಗೆ ಇರುವ ಏಕೈಕ ಮಾರ್ಗ ಸರ್ವ ಧರ್ಮ ಸಮಾನ ಭಾವನೆ. ಪರಧರ್ಮ ಸಹಿಷ್ಣುತೆ ನಮ್ಮ ದೇಶದ ಅತಿದೊಡ್ಡ ಗುಣ. ಪರಧರ್ಮೀಯರೂ ನಮ್ಮ ಬಂಧುಗಳು ಅಂತ ತಿಳಿದುಕೊಂಡು, ಅವರೂ ನಮ್ಮ ಸಹೋದರರೆಂದು ತಿಳಿದುಕೊಂಡು ಶಾಂತಿ ಸೌಹಾರ್ದತೆಯಿಂದ ಬಾಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಇದೇ ಸಂದೇಶದೊಂದಿಗೆ ಓದುಗ ಬಾಂಧವರಿಗೆಲ್ಲರಿಗೂ ರಮ್ಜಾನ್ ಹಬ್ಬದ ಮತ್ತು ಶ್ರೀ ಗಣೇಶನ ಹಬ್ಬದ ಶುಭಾಶಯಗಳು.</font>]]></content:encoded>
      <pubDate>Thu, 09 Sep 2010 20:24:03 +0530</pubDate>
      <updatedDate>Tue, 15 Apr 2014 15:59:58 +0530</updatedDate>
      <category><![CDATA[About Islam]]></category>
      <authorname>ಅವಿನಾಶ್ ಬಿ.</authorname>
    </item>
    <item>
      <title><![CDATA[ಮುಸ್ಲಿಮರ ಪವಿತ್ರ ಹಜ್ ಯಾತ್ರೆ]]></title>
      <link>https://kannada.webdunia.com/article/about-islam/ಮುಸ್ಲಿಮರ-ಪವಿತ್ರ-ಹಜ್-ಯಾತ್ರೆ-107121900040_1.htm</link>
      <guid>https://kannada.webdunia.com/article/about-islam/ಮುಸ್ಲಿಮರ-ಪವಿತ್ರ-ಹಜ್-ಯಾತ್ರೆ-107121900040_1.htm</guid>
      <media:thumbnail url="http:"/>
      <image>http:</image>
      <description><![CDATA[ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಐದು ದಿನಗಳ ಕಾಲ ನಡೆಯುವ ಹಜ್ ಯಾತ್ರೆಯು ಮೂರನೇ ದಿನವನ್ನು ಮುಟ್ಟಿದೆ. ಮೆಕ್ಕಾದ  ಮೀನಾದಲ್ಲಿ ವಾರ್ಷಿಕ ಹಜ್ ಯಾತ್ರೆ ಸಲುವಾಗಿ ಸುಮಾರು 150 ರಾಷ್ಟ್ರಗಳಿಗೆ ಸೇರಿದ ಲಕ್ಷಾಂತರ ಜನರು]]></description>
      <content:encoded><![CDATA[<!--Image--><p><table cellspacing='0' cellpadding='0' border='0'  Align=Left><tr><td valign='top'><img src='/kn/articles/0712/19/images/img1071219040_1_1.jpg' Alt='ಮೆಕ್ಕಾಗೆ ಭೇಟಿ ನೀಡಿದ ಇರಾನ್ ಅಧ್ಯಕ್ಷ ಅಹ್ಮದಿ ನೆಜಾದ್' Border=0 HSPACE=4 VSPACE=4 class='imgArticle'></td></tr><tr> <td  class='imgSource'><table width='100%' cellpadding='0' cellspacing='0' border='0'><tr><td valign='top'>PTI</td><td width='8'></td></tr></table></td></tr></table></p><!--endImage--> <font  style='font-size:11pt; color:#000000'>ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಐದು ದಿನಗಳ ಕಾಲ ನಡೆಯುವ ಹಜ್ ಯಾತ್ರೆಯು ಮೂರನೇ ದಿನವನ್ನು ಮುಟ್ಟಿದೆ. ಮೆಕ್ಕಾದ  ಮೀನಾದಲ್ಲಿ ವಾರ್ಷಿಕ ಹಜ್ ಯಾತ್ರೆ ಸಲುವಾಗಿ ಸುಮಾರು 150 ರಾಷ್ಟ್ರಗಳಿಗೆ ಸೇರಿದ ಲಕ್ಷಾಂತರ ಜನರು ಸೇರಿದ್ದರು. ಜೀವಮಾನದಲ್ಲಿ  ಒಮ್ಮೆಯಾದರೂ ಮೆಕ್ಕಾ ಯಾತ್ರೆಗೆ ಹೋಗುವುದು ಮುಸ್ಲಿಮರ ಹೆಬ್ಬಯಕೆ. ಹಜ್ ಯಾತ್ರೆಯಲ್ಲಿ ಪ್ರಮುಖಭಾಗವಾದ ಮೀನಾದಿಂದ ಅರಾಫತ್‌ಗೆ  ಯಾತ್ರಿಗಳು ಪ್ರವೇಶ ಮಾಡಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಅಹರಾಮ್ ಎಂದು ಕರೆಯುವ ಎರಡು ತುಂಡು ಬಟ್ಟೆಗಳನ್ನು ತೊಟ್ಟ ಯಾತ್ರಿಗಳು ಪ್ರವಾದಿ ಮೊಹಮದ್  ಹಿಂದೊಮ್ಮೆ ಪ್ರಾರ್ಥನೆ ಮಾಡಿದ ಸ್ಥಳವಾದ ಮಸ್ಜೀದ್-ಎ-ನಮೀರಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅರಾಫತ್‌ನಲ್ಲಿ ಮುಸ್ಲಿಮರು ತಮ್ಮದೇ  ಭಾಷೆಯಲ್ಲಿ ತಮ್ಮ ಪಾಪಗಳಿಗೆ ಕ್ಷಮೆ ಕೋರಿ ಹೃದಯಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ಬಾರಿ ಹಜ್ ಯಾತ್ರೆಗೆ ಭೇಟಿ ಕೊಟ್ಟ  ಪ್ರಮುಖರಲ್ಲಿ ಇರಾನಿನ ಅಧ್ಯಕ್ಷ ಮೊಹಮದ್ ಅಹ್ಮದಿ ನೆಜಾದ್ ಕೂಡ ಸೇರಿದ್ದಾರೆ. ಆದಾಗ್ಯೂ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ  ಒಂದುಗೂಡುವಂತೆ ಕರೆ ನೀಡಲು  ನೂರಾರು ಮುಸ್ಲಿಮರು ಸೇರಿದ್ದ ಸಂಕ್ಷಿಪ್ತ ರಾಲಿಯಲ್ಲಿ ಅವರು ಭಾಗವಹಿಸಲಿಲ್ಲ. ಸುಮಾರು 3 ದಶಲಕ್ಷ  ಮುಸ್ಲಿಮರು ವಿಶ್ವಾದ್ಯಂತ ಈ ವರ್ಷದ ಹಜ್ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಮುಸ್ಲಿಮರು ಹೃದಯಪೂರ್ವಕ ಪ್ರಾರ್ಥನೆ ಸಲ್ಲಿಸಲು ಮೆಕ್ಕಾಗೆ ಪ್ರಯಾಣಿಸುವ ಹಜ್ ಯಾತ್ರೆ ಜಗತ್ತಿನಲ್ಲಿ ಪ್ರತಿವರ್ಷ ನಡೆಯುವ ಮಹಾನ್  ಯಾತ್ರೆ. ಪ್ರತಿಯೊಬ್ಬ ಸಂಪ್ರದಾಯವಾದಿ ಮುಸ್ಲಿಮರು ಹಜ್ ಯಾತ್ರೆಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕಾದ  ಕರ್ತವ್ಯವಾಗಿದೆ. ಮುಸ್ಲಿಂ ಜನರ ಒಗ್ಗಟ್ಟಿನ ಸಂಕೇತ ಮತ್ತು ಅಲ್ಲಾಗೆ ಅವರ ಅರ್ಪಣೆ ಹಜ್ ಯಾತ್ರೆಯಾಗಿದೆ. 2007ರ ಹಜ್ ಯಾತ್ರೆಯು  ಡಿಸೆಂಬರ್ 17ರಿಂದ ಪ್ರಾರಂಭವಾಗಿ 21ರವರೆಗೆ ನೆರವೇರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಹಜ್ ಆಚರಣೆ</b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಜ್ ಯಾತ್ರೆಯು ಪ್ರವಾದಿ ಮೊಹಮ್ಮದರ ಜೀವನಕ್ಕೆ ಸಂಬಂಧಿಸಿದೆ. ಆದರೆ ಮೆಕ್ಕಾ ಯಾತ್ರೆಯ ಆಚರಣೆ ಕ್ರೈಸ್ತಪೂರ್ವ 2000ರ ಅಬ್ರಹಾಂ  ಕಾಲದಲ್ಲಿತ್ತೆಂದು ಅನೇಕ ಮುಸ್ಲಿಮರ ನಂಬಿಕೆ. ಈ ಯಾತ್ರೆಗಾಗಿ ಮೆಕ್ಕಾದಲ್ಲಿ ಸೇರುವ ಸಾವಿರಾರು ಮುಸ್ಲಿಮರು ಅನೇಕ ತರದ ಆಚರಣೆಗಳಲ್ಲಿ  ಪಾಲ್ಗೊಳ್ಳುವರು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಪ್ರತಿಯೊಬ್ಬ ಯಾತ್ರಿಯು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಕಾಬಾದ ಸುತ್ತಬರುತ್ತಾರೆ. ಮೂಲೆಯಲ್ಲಿರುವ ಕಪ್ಪು ಕಲ್ಲಿಗೆ ಮುತ್ತಿಕ್ಕಿ  ಅಲ್ ಸಾಫಾ ಮತ್ತು ಅಲ್ ಮಾರ್ವಾ ಬೆಟ್ಟಗಳ ನಡುವೆ ಹಿಂದಕ್ಕೆ, ಮುಂದಕ್ಕೆ ಚಲಿಸುವರು. ಝಾಮ್‌ಜಾಮ್ ಕೊಳದ ಪವಿತ್ರ ನೀರನ್ನು ಕುಡಿದು  ಮೌಂಟ್ ಅರಾಫತ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಮುಜ್ಡಾಲಿಫಾಗೆ ಕಲ್ಲುಗಳನ್ನು ಸಂಗ್ರಹಿಸಲು ತೆರಳುತ್ತಾರೆ.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಸೈತಾನನಿಗೆ ಕಲ್ಲುವ  ತೂರುವ ಆಚರಣೆಯಲ್ಲಿ ಮಿನಾದ ಬೆಟ್ಟದಲ್ಲಿರುವ ಕಲ್ಲಿನ ಬಂಡೆಗೆ ಕಲ್ಲುಗಳನ್ನು ತೂರುವರು. ಬಳಿಕ ಯಾತ್ರಿಗಳು ಕೇಶಮುಂಡನ  ಮಾಡಿ, ಪ್ರಾಣಿ ಬಲಿ ನೀಡಿ ಈದ್ ಉಲ್ ಅದಾ ಹಬ್ಬವನ್ನು ಆಚರಿಸುವರು. 2007ರಲ್ಲಿ ಸುಮಾರು 20 ಲಕ್ಷ ಯಾತ್ರಿಗಳು ಮೆಕ್ಕಾ  ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.</font>]]></content:encoded>
      <pubDate>Fri, 21 Dec 2007 11:43:56 +0530</pubDate>
      <updatedDate>Tue, 15 Apr 2014 11:10:57 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಎಲ್ಲೆಡೆ ಸಡಗರದ ಈದುಲ್ ಜುಹಾ]]></title>
      <link>https://kannada.webdunia.com/article/about-islam/ಎಲ್ಲೆಡೆ-ಸಡಗರದ-ಈದುಲ್-ಜುಹಾ-107122100005_1.htm</link>
      <guid>https://kannada.webdunia.com/article/about-islam/ಎಲ್ಲೆಡೆ-ಸಡಗರದ-ಈದುಲ್-ಜುಹಾ-107122100005_1.htm</guid>
      <media:thumbnail url="http:"/>
      <image>http:</image>
      <description><![CDATA[ಮುಸ್ಲಿಂ ಧರ್ಮಾನುಯಾಯಿಗಳು ಶುಕ್ರವಾರದಂದು ತ್ಯಾಗ-ಬಲಿದಾನಗಳ ಸಂಕೇತವಾದ ಈದ್ ಉಲ್ ಜುಹಾ ಆಚರಿಸಿಕೊಳ್ಳುತ್ತಿದ್ದಾರೆ. ಮೆಕ್ಕಾದಲ್ಲಿನ ವಾರ್ಷಿಕ ಹಜ್ ಯಾತ್ರೆ ಗುರುವಾರ ಅಂತಿಮಗೊಂಡ ಬೆನ್ನಲ್ಲೇ, ಭಾರತದೆಲ್ಲೆಡೆ ಈದ್ ಮಿಲಾದ್ ಅನ್ನು ಇಂದು ಆಚರಿಸಲಾಗುತ್ತಿದೆ.]]></description>
      <content:encoded><![CDATA[<!--Image--><p><table style='margin: 3px 8px 0px 0px;' cellspacing='0' cellpadding='0' border='0' Align=Left><tr><td valign='top'><img src='/kn/articles/0712/21/images/img1071221005_1_1.jpg' Alt='' Border=0  HSPACE=4 VSPACE=4 class='imgArticle_New'></td></tr><tr><td class='imgSource'><table width='100%' cellpadding='0' cellspacing='0' border='0'><tr><td align='left'></td><td valign='top' align='right'>PTI</td></tr></table></td></tr></table></p><!--endImage--> <font  style='font-size:11pt; color:#000000'>ಮುಸ್ಲಿಂ ಧರ್ಮಾನುಯಾಯಿಗಳು ಶುಕ್ರವಾರದಂದು ತ್ಯಾಗ-ಬಲಿದಾನಗಳ ಸಂಕೇತವಾದ ಈದ್ ಉಲ್ ಜುಹಾ ಆಚರಿಸಿಕೊಳ್ಳುತ್ತಿದ್ದಾರೆ. ಮೆಕ್ಕಾದಲ್ಲಿನ ವಾರ್ಷಿಕ ಹಜ್ ಯಾತ್ರೆ ಗುರುವಾರ ಅಂತಿಮಗೊಂಡ ಬೆನ್ನಲ್ಲೇ, ಭಾರತದೆಲ್ಲೆಡೆ ಈದ್ ಮಿಲಾದ್ ಅನ್ನು ಇಂದು ಆಚರಿಸಲಾಗುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶುಕ್ರವಾರ ಬೆಳಿಗ್ಗೆ ದೇಶದ ವಿವಿಧ ಮಸೀದಿಗಳಿಗೆ ತೆರಳಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ, ಅಲ್ಲಾಹು ಹೆಸರಲ್ಲಿ ಪರಸ್ಪರ ಶುಭಾಯವನ್ನು ವಿನಿಮಯ ಮಾಡಿಕೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶುಭಹಾರೈಕೆ: ಈದ್ ಮಿಲಾದ್ ಅಂಗವಾಗಿ ದೇಶದಲ್ಲಿನ ಮುಸ್ಲಿಂ ಸಮುದಾಯದವರಿಗೆ ಶುಭ ಹಾರೈಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು, ಹಬ್ಬದ ಈ ಶುಭ ಸಂದರ್ಭದಲ್ಲಿ ದೇಶದ ಪ್ರಗತಿಗೆ ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಸೇವೆ-ತ್ಯಾಗ ,ಬಲಿದಾನದ ಪ್ರತೀಕವಾಗಿರುವ ಈದ್ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ದೇಶದ ಪ್ರಗತಿಗೆ ಶ್ರಮಿಸಬೇಕಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಹಜ್‌‌ಯಾತ್ರೆಗೆ ತೆರೆ: ಈ ಬಾರಿ ಪವಿತ್ರ ಹಜ್ ಯಾತ್ರೆಯಲ್ಲಿ ಭಾರತ ಸೇರಿದಂತೆ ವಿವಿಧೆಡೆಯಿಂದ ಸುಮಾರು ಎರಡು ದಶಲಕ್ಷ ಮುಸ್ಲಿಮರು ಆಗಮಿಸಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಗುರುವಾರದಂದು ವಾರ್ಷಿಕ ಹಜ್ ಯಾತ್ರೆಯ ಅಂತಿಮ ದಿನದಂದು ಸೌದಿಯ ಪವಿತ್ರ ನಗರ ಮೀನಾದಲ್ಲಿ ಸೈತಾನನಿಗೆ ಕಲ್ಲು ಹೊಡೆಯುವ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಐದು ದಿನಗಳ ಯಾತ್ರೆಗೆ ತೆರೆ ಬಿದ್ದಿತ್ತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದಿಂದ ಅಂದಾಜು 1.5 ಲಕ್ಷ ಮಂದಿ ಮುಸ್ಲಿಮರು ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವುದಾಗಿ ಮೀನಾದಲ್ಲಿನ ಭಾರತೀಯ ವಕ್ತಾರರು ತಿಳಿಸಿದ್ದಾರೆ.</font>]]></content:encoded>
      <pubDate>Fri, 21 Dec 2007 11:20:35 +0530</pubDate>
      <updatedDate>Tue, 15 Apr 2014 11:10:57 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಸದಕ್-ಎ-ಫಿತ್ರ್‌ ಪೂರ್ತಿಗೊಳಿಸಿ]]></title>
      <link>https://kannada.webdunia.com/article/about-islam/ಸದಕ್-ಎ-ಫಿತ್ರ್‌-ಪೂರ್ತಿಗೊಳಿಸಿ-107101300012_1.htm</link>
      <guid>https://kannada.webdunia.com/article/about-islam/ಸದಕ್-ಎ-ಫಿತ್ರ್‌-ಪೂರ್ತಿಗೊಳಿಸಿ-107101300012_1.htm</guid>
      <media:thumbnail url="http:"/>
      <image>http:</image>
      <description><![CDATA[ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.]]></description>
      <content:encoded><![CDATA[<font  style='font-size:11pt; color:#0000FF'>ಮೊಹಮ್ಮದ್ ಇಬ್ರಾಹಿಂ ಖುರೇಶಿ </font><font style=' color:#000000;'></font><br/><font  style='font-size:11pt; color:#000000'>ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ರೋಜಾ (ಉಪವಾಸ)ದ ಸಂದರ್ಭದಲ್ಲಿ ಮನುಷ್ಯರಿಂದ ಸಹಜವಾಗಿ ಕೆಲವು ತಪ್ಪುಗಳಾಗುತ್ತವೆ. ನಾಲಿಗೆ ಮತ್ತು ಕಣ್ಣುಗಳಿಂದ ತಪ್ಪುಗಳಾಗಬಹುದು. ಹಜರತ್ ಅಬ್ದುಲ್ಲಾ ಬಿನ್ ಉಮರ್ ರಾಜಿ ಅವರು ಸಂದೇಶವನ್ನು ನೀಡಿ, ಅಲ್ಲಾಹ್‌ನ ಪ್ರತಿನಿಧಿಗಳು ಸದಕ್-ಎ-ಫಿತ್ರ್ ( ಅಂದಾಜು 1700 ಗ್ರಾಂ) ಖರ್ಜೂರ ಸೇರಿದಂತೆ ಫಲಹಾರಗಳನ್ನು ನೀಡುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯವಾಗಿದೆ. ದಾನ ಮಾಡುವವರು ಸ್ವತಂತ್ರರಾಗಿರಲಿ ಅಥವಾ ಗುಲಾಮರಾಗಿರಲಿ, ಮಹಿಳೆಯರಾಗಿರಲಿ ಪುರುಷರಾಗಿರಲಿ ದಾನ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಬಡವರಿಗೆ ದಾನವನ್ನು ನೀಡುವುದರಿಂದ ಮನುಷ್ಯ ಅಪರಾಧ ಹಾಗೂ ಹೊಲಸಿನಿಂದ ದೂರವಾಗಿ ಪವಿತ್ರವಾಗುತ್ತಾನೆ. </font><br/><font  style='font-size:11pt; color:#0000FF'></font><br/><font  style='font-size:11pt; color:#0000FF'><b>ಸದಕ್- ಎ- ಫಿತ್ರ್ </font><font style=' color:#000000;'></b></font><br/><font  style='font-size:11pt; color:#000000'>ರಂಜಾನ್ ಉಪವಾಸದ ನಂತರ ದಾನವನ್ನು ಕೊಡುವುದು ಉಚಿತವಾಗಿದೆ. ಫಕೀರ್ ಹಾಗೂ ಅಸಹಾಯಕರಿಗೆ ಮತ್ತು ಅವಲಂಬಿತ ಬಡವರಿಗೆ ದಾನವನ್ನು ನೀಡುವುದು ಉತ್ತಮ. ಹಬ್ಬದಂದು ಚಂದ್ರನನ್ನು ಕಂಡಕೂಡಲೇ ಫಿತ್ರ್ (ದಾನ) ಕೊಡುವುದು ಅಧಿಕೃತವಾಗುತ್ತದೆ. ಹಬ್ಬದ ನಮಾಜ್ ಮಾಡುವುದಕ್ಕಿಂತ ಮೊದಲು ಫಿತ್ರ್ ದಾನವನ್ನು ನೀಡಬೇಕು. ಕೆಲ ಕಾರಣಗಳಿಂದಾಗಿ  ನಮಾಜ್‌‌ಗಿಂತ ಮೊದಲು ಕೊಡಲಾಗದಿದ್ದಲ್ಲಿ ನಮಾಜ್ ನಂತರವೂ ದಾನ ಮಾಡಿದರೆ ತಪ್ಪಲ್ಲ. ಆದರೆ ನಮಾಜ್‌ಗಿಂತ ಮೊದಲು ಫಿತ್ರ್( ದಾನ) ಕೊಡಲು ಪ್ರಯತ್ನಿಸಬೇಕು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಫಿತ್ರ್(ದಾನ)ದಲ್ಲಿ ಎಲ್ಲ ರೀತಿಯ ಅಡುಗೆ ಸಾಮಾನುಗಳನ್ನು ನೀಡಲಾಗುತ್ತದೆ. ಗೋಧಿ, ಅಕ್ಕಿ, ಬೇಳೆ, ಖರ್ಜೂರ ಇತ್ಯಾದಿಗಳಿಂದ ಫಿತ್ರ್‌(ದಾನ)ವನ್ನು ಪೂರ್ತಿಗೊಳಿಸಲಾಗುತ್ತದೆ. ನಗದು ಹಣವನ್ನು ಫಿತ್ರ್ ರೂಪದಲ್ಲಿ ಕೊಡಬಹುದಾಗಿದೆ. ಉಲ್ಮಾ-ಎ-ದಿನ್‌ನೇ ಪ್ರಕಾರ ಫಿತ್ರ್(ದಾನ) 1700 ಗ್ರಾಂ ತೂಕದ ದವಸ ಧಾನ್ಯಗಳನ್ನು ನೀಡಿದಲ್ಲಿ ಫಿತ್ರ್‌ವನ್ನು ಪೂರ್ಣವಾದಂತಾಗುತ್ತದೆ.</font>]]></content:encoded>
      <pubDate>Mon, 15 Oct 2007 16:58:55 +0530</pubDate>
      <updatedDate>Tue, 15 Apr 2014 02:01:37 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಇಸ್ಲಾಂ ಧರ್ಮದ ವೈಶಿಷ್ಠ್ಯಗಳು]]></title>
      <link>https://kannada.webdunia.com/article/about-islam/ಇಸ್ಲಾಂ-ಧರ್ಮದ-ವೈಶಿಷ್ಠ್ಯಗಳು-107052500015_1.htm</link>
      <guid>https://kannada.webdunia.com/article/about-islam/ಇಸ್ಲಾಂ-ಧರ್ಮದ-ವೈಶಿಷ್ಠ್ಯಗಳು-107052500015_1.htm</guid>
      <media:thumbnail url="http:"/>
      <image>http:</image>
      <description><![CDATA[ಪ್ರವಾದಿ ಮುಹ್ಮದ್(570-632) ಕ್ರಿಸ್ತಶಕ  610ರಲ್ಲಿ ಈ ಧರ್ಮವನ್ನು ಹುಟ್ಟು ಹಾಕಿದರು. ಅವರು ಬೋಧಿಸಿರುವ ಪ್ರವಚನಗಳಾದ ಖುರಾನ್ಅನ್ನು ಮುಸ್ಲಿಮರ ಪವಿತ್ರಗ್ರಂಥವೆಂದು ಪರಿಗಣಿಸಲಾಗಿದೆ.]]></description>
      <content:encoded><![CDATA[<font  style='font-size:11pt; color:#000000'>ಪ್ರವಾದಿ ಮುಹ್ಮದ್(570-632) ಕ್ರಿಸ್ತಶಕ  610ರಲ್ಲಿ ಈ ಧರ್ಮವನ್ನು ಹುಟ್ಟು ಹಾಕಿದರು. ಅವರು ಬೋಧಿಸಿರುವ ಪ್ರವಚನಗಳಾದ ಖುರಾನ್ಅನ್ನು ಮುಸ್ಲಿಮರ ಪವಿತ್ರಗ್ರಂಥವೆಂದು ಪರಿಗಣಿಸಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊರಾನ್‌ಅನ್ನು ಮುಹ್ಮದ್ ಅವರು ಬೋಧಿಸಿದ್ದರೂ, ಇಸ್ಲಾಂ ಧರ್ಮ ಪ್ರವಾದಿಯವರು ಭೂಮಿಗೆ ಬರುವ ಮುನ್ನವೆ, ಆರಂಭವಾಗಿತ್ತು ಎಂದು ಹೇಳಲಾಗಿದೆ. ಕೊರಾನ್ ಅನ್ನು ದೇವರು ಗೇಬ್ರಿಯಲ್ ಮೂಲಕ ಪ್ರವಾದಿಯವರಿಗೆ ಬೋಧಿಸಿದ್ದಾರೆ ಎಂದು ಕೊರಾನ್ ಹೇಳುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು</font><br/><font  style='font-size:11pt; color:#000000'>ಓರ್ವ ಮುಸ್ಲಿಂ, ಈ ಐದು ಪ್ರಮುಖ ವಿಧಾನಗಳನ್ನು ಅನುಸರಿಸುವ ಮೂಲಕ ತನ್ನನ್ನು ತಾನು ಅಲ್ಲಾನಿಗೆ ಸಮರ್ಪಿಸಿಕೊಳ್ಳುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಹದ್, ಸಲಾತ್, ಝಕತ್, ರಮದಾನ್(ಸವುಮ್) ಹಾಗೂ ಹಜ್ ಇವುಗಳು ಇಸ್ಲಾಂ ಧರ್ಮದ ಅನುಯಾಯಿಗಳು ಅನುಸರಿಸಬೇಕಿರುವ ಐದು ಅವಶ್ಯಕ ಅಂಶಗಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಹದ್ ಅಂದರೆ ಏಕದೇವರ ಪ್ರತಿಪಾದನೆ. ದೇವರು ಒಬ್ಬನೆ ಹಾಗೂ ಅವನೇ ಅಲ್ಲಾ ಮತ್ತು ಮುಹ್ಮದ್ ಅವರ ಪ್ರವಾದಿ ಎಂಬುದಾಗಿ ಇಸ್ಲಾಂ ಧರ್ಮ ಹೇಳುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಲತ್ ಅಂದರೆ, ಪ್ರಾರ್ಥನೆಯ ದೈಹಿಕ ಕ್ರಿಯೆ. ದಿನಕ್ಕೆ ಐದು ಬಾರಿ ಮುಸ್ಲಿಮರು ಮೆಕ್ಕಾದತ್ತ ಮುಖಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಸುಕಿನಲ್ಲಿ, ಮಧ್ಯಾಹ್ನ, ಅಪರಾಹ್ನ, ಸೂರ್ಯಾಸ್ತ ಹಾಗೂ ಮುಸ್ಸಂಜೆಯ ವೇಳೆಗೆ  ಇಸ್ಲಾಂ ಧರ್ಮದ ಅನುಯಾಯಿಗಳು ನಮಾಜ್ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಝಕತ್ ಅಂದರೆ ದಾನ. ಮುಸ್ಲಿಂ ಧರ್ಮದ ಪ್ರಕಾರ ತಾವೇನು ಹೊಂದಿದ್ದೇವೆಯೋ ಅದರ ಶೇ. ಎರಡೂವರೆ ಭಾಗವನ್ನು ಉಳ್ಳವರು ಇಲ್ಲದವರಿಗೆ ದಾನ ಮಾಡಬೇಕು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಕ್ಯಾಲೆಂಡರಿನ ರಮದಾನ್ ಪವಿತ್ರ ತಿಂಗಳಿನಲ್ಲಿ ಆರೋಗ್ಯವಂತ ಮುಸ್ಲಿಮರು ತಿಂಗಳು ಪೂರ್ಣ ನಸುಕಿನಿಂದ ಸೂರ್ಯಾಸ್ತದ ತನಕ ಉಪವಾಸ ಆಚರಿಸುವುದನ್ನು ಸವುಮ್ ಎಂದು ಕರೆಯಲಾಗುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ವೇಳೆ ಊಟ, ತಿಂಡಿ, ಪಾನೀಯ, ಧೂಮಪಾನ ಹಾಗೂ ಲೈಂಗಿಕ ಚಟುವಟಿಕೆಗಳಿಂದ ದೂರ ಉಳಿಯಬೇಕು. ಸ್ವಯಂ ಶಿಸ್ತಿನ ಅಳವಡಿಕೆ ಹಾಗೂ ದೇವರ ಮೇಲಿನ ಅವಲಂಬನೆ ಹಾಗೂ ಹಸಿದವರ ಮೇಲಿನ ಅನುಕಂಪಕ ಪವಿತ್ರ ತಿಂಗಳಿನ ಉಪವಾಸದ ಮೂಲಮರ್ಮ ಎಂಬುದಾಗಿ ಧರ್ಮ ಹೇಳುತ್ತದೆ. </font>]]></content:encoded>
      <pubDate>Sun, 03 Jun 2007 19:12:28 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮೊಹರಂ ಹಬ್ಬ ಆಚರಿಸುವುದು ಏಕೆ?]]></title>
      <link>https://kannada.webdunia.com/article/about-islam/ಮೊಹರಂ-ಹಬ್ಬ-ಆಚರಿಸುವುದು-ಏಕೆ-107052500014_1.htm</link>
      <guid>https://kannada.webdunia.com/article/about-islam/ಮೊಹರಂ-ಹಬ್ಬ-ಆಚರಿಸುವುದು-ಏಕೆ-107052500014_1.htm</guid>
      <media:thumbnail url="http:"/>
      <image>http:</image>
      <description><![CDATA[ಮೊಹರಂ ದಿನಾಚರಣೆಯು ಇಸ್ಲಾಂ ಧರ್ಮಕ್ಕಾಗಿ ಪ್ರಾಣ ನೀಡಿದವರನ್ನು ನೆನೆಯುವ ಆಚರಣೆ. ಇಸ್ಲಾಂ ಮತದಲ್ಲಿ ನಂಬಿಕೆಯುಳ್ಳವರು ಆಚರಿಸುವ ದಿನಾಚರಣೆಗಳಲ್ಲಿ ಇದೊಂದು ಮುಖ್ಯವಾದ ದಿನಾಚರಣೆ.]]></description>
      <content:encoded><![CDATA[<font  style='font-size:11pt; color:#000000'>ಮೊಹರಂ ದಿನಾಚರಣೆಯು ಇಸ್ಲಾಂ ಧರ್ಮಕ್ಕಾಗಿ ಪ್ರಾಣ ನೀಡಿದವರನ್ನು ನೆನೆಯುವ ಆಚರಣೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಮತದಲ್ಲಿ ನಂಬಿಕೆಯುಳ್ಳವರು ಆಚರಿಸುವ ದಿನಾಚರಣೆಗಳಲ್ಲಿ ಇದೊಂದು ಮುಖ್ಯವಾದ ದಿನಾಚರಣೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ದಿನಾಚರಣೆಗಾಗಿ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಮುಂತಾದ ಎಲ್ಲ ಸಾರ್ವಜನಿಕ ಸೇವೆಗೆ ರಜಾ ದಿನಗಳನ್ನಾಗಿ ಘೋಷಿಸಲಾಗುತ್ತಿದೆ.ಇದರ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಲ್ಲವೇ.</font>]]></content:encoded>
      <pubDate>Sun, 03 Jun 2007 19:12:21 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪ್ರವಾದಿಗೆ ತೊಂದರೆ ನೀಡಿದ ವಿರೋಧಿಗಳು]]></title>
      <link>https://kannada.webdunia.com/article/about-islam/ಪ್ರವಾದಿಗೆ-ತೊಂದರೆ-ನೀಡಿದ-ವಿರೋಧಿಗಳು-107052500013_1.htm</link>
      <guid>https://kannada.webdunia.com/article/about-islam/ಪ್ರವಾದಿಗೆ-ತೊಂದರೆ-ನೀಡಿದ-ವಿರೋಧಿಗಳು-107052500013_1.htm</guid>
      <media:thumbnail url="http:"/>
      <image>http:</image>
      <description><![CDATA[ಏಕತೆಗಾಗಿ ಪ್ರಜೆಗಳನ್ನು ಕರೆ ತಂದ ಮಾ ನಬಿ (ಸಲ್)ಅವರಿಗೆ ಹಾಗೂ ಇಸ್ಲಾಂ ಮತವನ್ನು ಸ್ವೀಕರಿಸಿದ್ದ ಮುಸಲ್ಮಾನರಿಗೆ ಮಕ್ಕಾದ ಕಾಫಿರರು ನಾನಾ ಬಗೆಯಲ್ಲಿ ಹೇಳಲಾರದಷ್ಟು ತೊಂದರೆಗಳನ್ನು ಕೊಡುತ್ತಿದ್ದರು]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/25/images/img1070525013_1_1.jpg' Alt='Crecent' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>WD</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಏಕತೆಗಾಗಿ ಪ್ರಜೆಗಳನ್ನು ಕರೆ ತಂದ ಮಾ ನಬಿ (ಸಲ್)ಅವರಿಗೆ ಹಾಗೂ ಇಸ್ಲಾಂ ಮತವನ್ನು ಸ್ವೀಕರಿಸಿದ್ದ ಮುಸಲ್ಮಾನರಿಗೆ ಮಕ್ಕಾದ ಕಾಫಿರರು ನಾನಾ ಬಗೆಯಲ್ಲಿ ಹೇಳಲಾರದಷ್ಟು ತೊಂದರೆಗಳನ್ನು ಕೊಡುತ್ತಿದ್ದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮುಖ್ಯವಾಗಿ ಬಡ ಮುಸ್ಲಿಮ್‌ರಿಗೆ ಹಸಿವಿನಿಂದ ಬಾಯಾರಿಕೆಯಿಂದ ನರಳುವಂತೆ ಮಾಡಿದರು. ಮತ್ತೆ ಕೆಲವರಿಗೆ ಉಕ್ಕಿನ ಅಂಗಿಯನ್ನು ಧರಿಸುವುಂತೆ ಹೇಳಿ ಕೋಲುಗಳಿಂದ ಬಾರಿಸುವುದು, ಬಿಸಿಲಿನಲ್ಲಿ ನಿಲ್ಲಿಸಿ ಚಾಟಿ ಏಟು ಕೊಡುವುದು ಮುಂತಾದ ಹಿಂಸೆಗಳನ್ನು ಕೊಡುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಬಿ (ಸಲ್) ಅವರಿಗೆ ಸಹಾಯಕವಾಗಿ ಅಬೂ ತಾಲೀಬ್ ಮತ್ತು ಖತೀಜಾ(ರಲಿ) ಅವರು ರಕ್ಷಣೆ ನೀಡುತ್ತಿದ್ದುದರಿಂದ ಸ್ವಲ್ಪ ಮಟ್ಟಿಗೆ ಕಾಫಿರ್‌ರಿಗೆ ಹೆದರಿಕೆಯಿದ್ದಿತಾದರೂ, ಒಂಟಿಯಾಗಿ ಓಡಾಡುವಾಗ ಅವರು ನಡೆದಾಡುವ ದಾರಿಯಲ್ಲಿ ಸೆಗಣಿಯನ್ನು ಹಾಕುವುದು ಮುಂತಾದ ಹಿಂಸೆಯನ್ನು ಕೊಡುತ್ತಿದ್ದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಒಮ್ಮೆ ಅನೇಕ ಮಂದಿ ಕಾಫಿರ್‌ರು ನಬಿ(ಸಲ್) ಅವರ ಮೇಲೆ ಎರಗಿದರು.ಅವರಲ್ಲೊಬ್ಬನು ಕುತ್ತಿಗೆಗೆ ಒಂದು ಬಟ್ಟೆಯನ್ನು ಸುತ್ತಿ ಎಳೆದಾಡಿದನು. ಆಗ ನಬಿಯವರಿಗೆ ಇನ್ನೇನು ಪ್ರಜ್ಞಾಶೂನ್ಯವಾಗುವು ಸ್ಥಿತಿ ಒದಗಿ ಬಂತು. ಆಗ ಅಬು ಬಕ್ಕರ್  ಸಿದ್ದಿಕಿ(ರಲಿ) ಅದನ್ನು ತಡೆಯಲು ಮುನ್ನುಗ್ಗಿದರು. ಆಗ ಕಾಫಿರ್‌ರು ನಬಿ(ಸಲ್) ಅವರನ್ನು ಬಿಟ್ಟು ಸಿದ್ದಕಿ ಅವರನ್ನು ಹಿಡಿದು ಹೊಡೆಯಲು ಪ್ರಾರಂಭಿಸಿದರು. ಇದರಿಂದಾಗಿ ಸಿದ್ದಕಿ ಅವರಿಗೆ ತಲೆಯಲ್ಲಿ ಒಂದು ದೊಡ್ಡ ಗಾಯವೇ ಆಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೊಮ್ಮೆ ನಬಿ(ಸಲ್) ಕಫಾದಲ್ಲಿ ಪ್ರಾರ್ಥನೆಯಲ್ಲಿದ್ದಾಗ ಅಬೂ ಜಹ್ಲಾ ಕೆಲವರನ್ನು ಅಲ್ಲಿಗೆ ಕರೆದುಕೊಂಡು ಬಂದು ಅಲ್ಲಿ ಕುಳ್ಳಿರಿಸಿಕೊಂಡಿದ್ದ. ಪಕ್ಕದಲ್ಲಿ ಒಂದು ಒಂಟೆಯ ಕರಳು ಬಿದ್ದಿತ್ತು ಅಬೂ ಜಹ್ಲಾ ತನ್ನ ಜನರನ್ನು ಕರೆದು ಅದನ್ನು ತೆಗೆದು ಮಹಮ್ಮದನ ಮೇಲೆ ಹಾಕುವಂತೆ ತಿಳಿಸಿದ. ಅವನು ಹೇಳಿದ್ದನ್ನು ಹಾಗೇಯೇ ನಬಿಯವರ ಮೇಲೆಸೆದು ಅದನ್ನು  ಅವರ ಕುತ್ತಿಗೆಗೆ ಹಾಕಿದ. ಅವರು  ಮೇಲಕ್ಕೇಳಲಾರದೆ ಸ್ವಲ್ಪ ಸಮಯ ಹಾಗೇಯೇ ಕುಳಿತಿರಬೇಕಾಯಿತು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಇದನ್ನು ಕಂಡು ಶತ್ರುಗಳೆಲ್ಲರು ನಕ್ಕು ನಲಿದು ಸಂತೋಷಗೊಂಡರು.ಇಬ್ನೂಮಸ್ ಉದ್(ರಲಿ) ಹೇಳಿದರು. ಅಲ್ಲಿ ನಾನು ಇದ್ದೆ. ಭಯಗೊಂಡು ಏನನ್ನು ಮಾಡಲಾಗದೇ ಸುಮ್ಮನಿದ್ದೆ, ಇದರ ವಿಚಾರವನ್ನು  ಫಾತಿಮಾ(ರಲಿ) ಅವರೊಂದಿಗೆ ಒಬ್ಬರು ಹೇಳಿದರು. ಅವರು ಅಲ್ಲಿಗೆ ಬಂದು ತಂದೆಯ ಕತ್ತಿನಲ್ಲಿದ್ದ ಒಂಟೆಯ ಕರುಳನ್ನು ತೆಗೆದೆಸೆದರು, ಕಾಫಿರರನ್ನು ಓಡಿಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ನಬಿ(ಸಲ್) ಅವರು ತಮಗೆ ಎಷ್ಟೋ ತೊಂದರೆಗಳಾದರೂ ಬಹಳ ತಾಳ್ಮೆಯಿಂದಲೇ ಇರುತ್ತಿದ್ದರು. ಅಲ್ಲದೇ ಅವರಿಗಾಗಿ ಒಳ್ಳೆಯದನ್ನು ಬಯಸುತ್ತಿದ್ದರು. ದೇವರೆ! ಅವರಿಗೆ ನ್ಯಾಯಾ ಮಾರ್ಗವನ್ನು ತೋರಿಸಿಕೊಡುವಂತಾಗು ಎಂದು ಆಶೀರ್ವಾದ ಮಾಡುತ್ತಿದ್ದರು. ಆದರೆ ಈ ಬಾರಿ ಕಾಫಿರ್‌ರು ಹೀಗೆ ಹೀನಾಯವಾಗಿ ನಡೆದುಕೊಂಡ ಕಾರಣದಿಂದ ನಬಿ(ಸಲ್) ಅವರು "ಅಲ್ಲಾಹ್ ವೇ! ಈ ಖುರೈಷಿಗಳಿಗೆ ನೀನೆ ಸರಿಯಾದ ದಂಡನೆಯನ್ನು ಕೊಡಬೇಕು"ಎಂದು ಮೂರು ಬಾರಿ  ಪ್ರಾರ್ಥನೆ ಮಾಡಿಕೊಂಡರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಡಾ.ವಿ. ಗೋಪಾಲಕೃಷ್ಣ</font>]]></content:encoded>
      <pubDate>Sun, 03 Jun 2007 19:12:16 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಾತೆ ಖತೀಜಾವಿನ ಮರಣ]]></title>
      <link>https://kannada.webdunia.com/article/about-islam/ಮಾತೆ-ಖತೀಜಾವಿನ-ಮರಣ-107052500012_1.htm</link>
      <guid>https://kannada.webdunia.com/article/about-islam/ಮಾತೆ-ಖತೀಜಾವಿನ-ಮರಣ-107052500012_1.htm</guid>
      <media:thumbnail url="http:"/>
      <image>http:</image>
      <description><![CDATA[ನಬಿ(ಸಲ್) ಅವರಿಗೆ ಪ್ರವಾದಿ ಪದವಿ ನೀಡಿದ  ಹತ್ತನೆಯ ವರ್ಷದಲ್ಲಿ ಅಬೂತಾಲಿಬ್ ಮರಣವನ್ನಪ್ಪಿದ. ಈ ಮಹಾನ್ ದುಃಖ ಅನುಭವಿಸುತ್ತಿರುವಾಗಲೇ  ರಮ್ಜಾನ್  ಮೂರನೇ ದಿನ ಮಾತೆ ಖತೀಜಾ(ರಲಿ) ಇಹಲೋಕವನ್ನು ತ್ಯಜಿಸಿದರು.]]></description>
      <content:encoded><![CDATA[<font  style='font-size:11pt; color:#000000'>ನಬಿ(ಸಲ್) ಅವರಿಗೆ ಪ್ರವಾದಿ ಪದವಿ ನೀಡಿದ  ಹತ್ತನೆಯ ವರ್ಷದಲ್ಲಿ ಅಬೂತಾಲಿಬ್ ಮರಣವನ್ನಪ್ಪಿದ. ಈ ಮಹಾನ್ ದುಃಖ ಅನುಭವಿಸುತ್ತಿರುವಾಗಲೇ  ರಮ್ಜಾನ್  ಮೂರನೇ ದಿನ ಮಾತೆ ಖತೀಜಾ(ರಲಿ) ಇಹಲೋಕವನ್ನು ತ್ಯಜಿಸಿದರು.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಆಗ ಅವರಿಗೆ ಅರುವತ್ತೈದು ವರ್ಷ ವಯಸ್ಸಾಗಿತ್ತು. ಅವರ ದೇಹವನ್ನು ಹಜಾನ್ ಎಂಬ ಸ್ಥಳದಲ್ಲಿ ಸಂಸ್ಕಾರ ಮಾಡಲಾಯಿತು. ಅವರ ಸಮಾಧಿಯ ಬಳಿಯೇ ತು ಆ ಮಾಡಿದರು. ನಬಿ(ಸಲ್) ಅವರು ಆಕೆಯೊಂದಿಗೆ ಇಪ್ಪತ್ತೈದು ವರ್ಷಗಳು ಜೀವನ ನಡೆಸಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಾತೆಯ ನಿಧನದಿಂದ ಪ್ರವಾದಿ ತುಂಬಾ ದುಃಖಗೊಂಡರು. ಇದು ಮತ್ತಷ್ಟು ಹೆಚ್ಚಾದುದರಿಂದ ಮನೆಯಿಂದ ಹೊರಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಈ ಕಾರಣದಿಂದ ಆ ವರ್ಷಕ್ಕೆ  'ಆಮುಲ್‌ಹುಜ್ನ್' ಎಂದರೆ ಕಳವಳದ ವರ್ಷ, ದುಃಖಕರವಾದ ವರ್ಷವೆಂದು ಹೆಸರು ನೀಡಲಾಯಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಾತೆ ಖತೀಜಾ ಬದುಕಿದ್ದಾಗ ಆಕೆಯ ಬಗೆಗೆ ಖುರೇಷಿಗಳಲ್ಲಿ ಹೆದರಿಕೆಯಿತ್ತು. ಮರೆಯಲ್ಲಿಯೇ ಇದ್ದು ನಬಿ(ಸಲ್) ಅವರಿಗೆ ಕಿರುಕುಳ ನೀಡುತ್ತಿದ್ದರು. ಆಕೆಯ ಮರಣಾನಂತರ ಅವರಿಗೆ ಅಂತಹ ಭಯ ಹೊರಟುಹೋಯಿತು. ನಿರ್ಭಯವಾದರು.ನಬಿ(ಸಲ್) ಅವರಿಗೆ ಹಲವಾರು ತೊಂದರೆಗಳನ್ನು ಕೊಡಲು ಪ್ರಾರಂಭಿಸಿದರು. </font><br/> <font  style='font-size:11pt; color:#000000'></font><br/><font  style='font-size:11pt; color:#000000'>ಉದಾಹರಣೆಗೆ, ಒಂದು ದಿನ ನಬಿ(ಸಲ್) ಅವರು ಖರೈಷಿಗಳು ವಾಸವಿದ್ದ ಸ್ಥಳದ ಸಮೀಪ ಹೋಗುತ್ತಿದ್ದರು. ಅವರ ಮೇಲೆ ಒಬ್ಬ ದುಷ್ಟನನ್ನು ದೌರ್ಜನ್ಯಕ್ಕಾಗಿ ಬಿಟ್ಟರು. ಅವನು ಪ್ರವಾದಿಯವರ ಮೇಲೆ ಮಣ್ಣು ಸುರಿದರು. ಅದೇ ಸ್ಥಿತಿಯಲ್ಲಿಯೇ ಅವರು ಬೇರೆ ದಾರಿ ಕಾಣದೆ ಮನೆಗೆ ಹಿಂತಿರುಗಿದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಬಿಯವರನ್ನು ಇಂತಹ ಸ್ಥಿತಿಯಲ್ಲಿ ನೋಡಿದ ಫಾತಿಮಾ ನಾಚ್ಚಿಯಾರ್ ಓಡಿಬಂದು ತಲೆ ಮೇಲಿದ್ದ ಮಣ್ಣು, ದೂಳು ಎಲ್ಲವನ್ನು ಸ್ವಚ್ಛ ಮಾಡಿದರು. ಆಗ ""ಮಗಳೇ ಅಬುತಾಲಿಕ್ ಜೀವಿಸಿದ್ದ ಕಾಲದಲ್ಲಿ ಖುರೈಷಿಗಳು ನನಗೆ ಹಿಂಸೆ ಕೊಡಲು ಹಿಂದೆಮುಂದೆ ನೋಡುತ್ತಿದ್ದರು. ನನಗೆ ರಕ್ಷಣೆ ನೀಡಿದರು. ಅಲ್ಲಾಹ್ ನಿನ್ನ ತಂದೆಗೆ ಸಹಾಯ ಮಾಡುತ್ತಾನೆ. ""ಎಂದು ಹೇಳಿದರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಖತೀಜಾ(ರಲಿ) ದಿವಂಗತರಾದಾಗ ಫಾತಿಮಾ(ರಲಿ) ಅವರಿಗೆ ಸುಮಾರು ಹದಿನೈದು ವರ್ಷ ವಯಸ್ಸಾಗಿರಬಹುದು. ಖತೀಜಾ(ರಲಿ) ಅವರ ನಿಧನಾನಂತರ ಕಾಫಿರರ ಕಿರುಕುಳ ತಾಳಲಾರದಷ್ಟು ಹೆಚ್ಚಾಗಿ ನಡೆಯಲು ಪ್ರಾರಂಭವಾಯಿತು. ಈ ಕಾರಣದಿಂದ ಮಕ್ಕಾವನ್ನು ಬಿಟ್ಟು ಕಾಯಿಫ ನಗರಗಳಿಗೆ ಮತ್ತು ಇತರ ಪ್ರದೇಶಗಳಿಗೆ ತೆರಳಬೇಕಾದ ಪ್ರಸಂಗ ಒದಗಿ ಬಂತು. ಆದರೇನು! ಹೋದೆಡೆಯಲ್ಲೆಲ್ಲಾ ತೊಂದರೆಗಳು ನೆರಳಿನಂತೆ ಹಿಂಬಾಲಿಸುತ್ತಲೇ ಇದ್ದವು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮತ್ತೆ ಮಕ್ಕಾಗೆ ಬಂದುಬಿಟ್ಟರು.! ಹಲರತ್ ಖತೀಜಾ(ರಲಿ) ಗತಿಸಿದ ಅದೇ ವರ್ಷ ಷವ್ವಾಲ್ ತಿಂಗಳಿನಲ್ಲಿ ಹಲರತ್ ಅಬೂಬಕ್ಕರ್ ಸಿದ್ದಿಕ್(ರಲಿ) ಅವರ ಮಗಳು ಹಲರತ್ ಆಯಿಷಾ(ರಲಿ) ಅವರನ್ನು ಮದುವೆಯಾದರು. ಆಗ ಹಲರತ್ ಆಯಿಷಾ(ರಲಿ) ಅವರ ವಯಸ್ಸು ಆರು. ಅವರೊಂದಿಗೆ ಮನೆ ತುಂಬಿಕೊಳ್ಳಲಿಲ್ಲ. ಹಲರತ್ ಸವ್‌ದಾ(ರಲಿ) ಅವರನ್ನು ವಿವಾಹವಾಗಿ ಮನೆ ತುಂಬಿಸಿಕೊಂಡರು. ಸವ್‌ದಾ(ರಲಿ) ಒಬ್ಬ ವಿಧವೆಯಾಗಿದ್ದರು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಡಾ. ವಿ.ಗೋಪಾಲಕೃಷ್ಣ</font>]]></content:encoded>
      <pubDate>Sun, 03 Jun 2007 19:11:58 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮೊಹರಂ ದಿನ-ಮೆರವಣಿಗೆಗಳು]]></title>
      <link>https://kannada.webdunia.com/article/about-islam/ಮೊಹರಂ-ದಿನ-ಮೆರವಣಿಗೆಗಳು-107052500011_1.htm</link>
      <guid>https://kannada.webdunia.com/article/about-islam/ಮೊಹರಂ-ದಿನ-ಮೆರವಣಿಗೆಗಳು-107052500011_1.htm</guid>
      <media:thumbnail url="http:"/>
      <image>http:</image>
      <description><![CDATA[ಈಗಿನ ಇರಾಕ್ ನಾಡಿನಲ್ಲಿದೆ ಕರ್ಬಲಾ ಎಂಬ ಸ್ಥಳ.ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್)ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ  ತಮ್ಮ ಪ್ರಾಣಗಳನ್ನೇ ತೆತ್ತರು.ಈ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/25/images/img1070525011_1_1.jpg' Alt='Picture' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಈಗಿನ ಇರಾಕ್ ನಾಡಿನಲ್ಲಿದೆ ಕರ್ಬಲಾ ಎಂಬ ಸ್ಥಳ.ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್)ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ  ತಮ್ಮ ಪ್ರಾಣಗಳನ್ನೇ ತೆತ್ತರು.ಈ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಮಾಮ್ ಮತ್ತು ಅವರ ಕುಟುಂಬದವರನ್ನು ನೆನಪಿಸಿಕೊಳ್ಳುವ ಸಲುವಾಗಿ ಉರೂರುಗಳಲ್ಲಿ ಮೆರವಣಿಗೆಯಲ್ಲಿ ಜನರು ತೆರಳುತ್ತಾರೆ.ಇಮಾಮ್ ಅವರು ತೋೌರಿಸಿದ ಮಾನವೀಯತೆಗಾಗಿ ಅವರಿಗೆ ಗೌರವ ತೋರಿಸುವ ರೀತಿಯಲ್ಲಿ ಈ ದಿನಾಚರಣೆಯನ್ನು ನಡೆಸಲಾಗುತ್ತದೆ. ಮೊಹರಂ ಹಬ್ಬದಲ್ಲಿ ಅತಿ ಮುಖ್ಯವಾದ ವಿಚಾರ ಇದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತಮ್ಮ ಜೀವಿತವನ್ನು ಇಸ್ಲಾಂ ಧರ್ಮದ ಕಟ್ಟಪಾಡುಗಳಿಗಾಗಿ ಅವರು ಮೀಸಲಾಗಿಟ್ಟರು. ಷಿಯಾ ಪಂಗಡಕ್ಕೆ ಸೇರಿದ ಮುಸ್ಲಿಮ್‌ರು ಕಜಿಯಾಸ್ ಎಂಬ ಕಾಗದಗಳನ್ನು  ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂತಹ ಆಯುಧಗಳನ್ನು ಮೆರವಣಿಗೆಯಲ್ಲಿ  ಕೈಯಲ್ಲಿ ಹಿಡಿದಿರುತ್ತಾರೆ.</font><br/>  <font  style='font-size:11pt; color:#000000'></font><br/><font  style='font-size:11pt; color:#000000'>ಮೆರವಣಿಗೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮಲ್ಲೇ ಪರಸ್ಪರ ಹಲಗೆಗಳಿಂದ ಹೊಡೆದುಕೊಳ್ಳುತ್ತಾರೆ. ಮತ್ತು ಚೂಪಾದ ಸಣ್ಣ ಆಯುಧಗಳಿಂದ ತಮ್ಮನ್ನು ತಾವೇ ತಿವಿದುಕೊಳ್ಳುವುದು ಮುಂತಾದ ಹಿಂಸಾತ್ಮಕ ಕ್ರಿಯೇಗಳನ್ನು ಪ್ರದರ್ಶಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಭಾರತದ ಮಟ್ಟಿಗೆ ಹೇಳುವುದಾದರೆ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಈ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಾರೆ.ತಮಿಳುನಾಡು , ಕರ್ನಾಟಕ ,ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಈ ದಿನಾಚರಣೆಯನ್ನು ಮುಸ್ಲಿಮ್‌ರೊಂದಿಗೆ ಹಿಂದೂಗಳು ಸಹ ಭಾಗವಹಿಸುತ್ತಾರೆ. ವೇಷ ಭೂಷಣಗಳನ್ನು ಹಾಕಿ ನಲಿದಾಡುವವರು ಹಿಂದೂಗಳೇ ಆಗಿರುತ್ತಾರೆ.</font><br/><font  style='font-size:11pt; color:#000000'></font><br/> <font  style='font-size:11pt; color:#000000'>ಹುಲಿವೇಷ, ಕರಡಿ ವೇಷ, ಗಂಡಸರು ಹೆಂಗಸಿನ ವೇಷ ಧರಿಸಿ ಕುಣಿದಾಡುವುದು ಮುಂತಾದ ಅನೇಕ ಮನರಂಜನಾ ಕಾರ್ಯಕ್ರಮಗಳು ಮೆರವಣಿಗೆಯ ಭಾಗವಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣ ನೀಡಿದವರ ಸಂಕೇತವಾಗಿ ಕೆಲವು ಲೋಹದ ರೂಪಗಳನ್ನು ಹಲಗೆಯಾಕಾರದಲ್ಲಿ  ಸಿದ್ದಪಡಿಸಿ ಅವುಗಳನ್ನು ಆರಾಧನೆ ಮಾಡುತ್ತಾರೆ.ಕೊನೆಯ ದಿನ ಅವುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಆನಂತರ ಬಟ್ಟೆಗಳಲ್ಲಿ  ಭಧ್ರವಾಗಿ ಸುತ್ತಿ ಮೂರನೇ ವರ್ಷದ ಆರಾಧನೆಗಾಗಿ ರಕ್ಷಿಸಿಡುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಡಾ. ವಿ. ಗೋಪಾಲಕೃಷ್ಣ</font>]]></content:encoded>
      <pubDate>Sun, 03 Jun 2007 19:11:45 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಇಸ್ಲಾಂ ಧರ್ಮ- ಪ್ರವಾದಿಯ ಆವಿರ್ಭಾವ]]></title>
      <link>https://kannada.webdunia.com/article/about-islam/ಇಸ್ಲಾಂ-ಧರ್ಮ-ಪ್ರವಾದಿಯ-ಆವಿರ್ಭಾವ-107052400037_1.htm</link>
      <guid>https://kannada.webdunia.com/article/about-islam/ಇಸ್ಲಾಂ-ಧರ್ಮ-ಪ್ರವಾದಿಯ-ಆವಿರ್ಭಾವ-107052400037_1.htm</guid>
      <media:thumbnail url="http:"/>
      <image>http:</image>
      <description><![CDATA[ವಿಶ್ವದ ಅತಿ ಮುಖ್ಯ ಧರ್ಮಗಳಲ್ಲಿ ಇಸ್ಲಾಂ ಧರ್ಮವೂ ಒಂದು.ಇಸ್ಲಾಂ ಪದಕ್ಕೆ ವಿಧೇಯನಾಗು,ಭಗವಂತನ ಇಚ್ಛೆಗೆ ಅನುಗುಣವಾಗಿ ಆತ್ಮ ಸಮರ್ಪಣೆ ಮಾಡು ಮುಂತಾಗಿ ಅರ್ಥವಿದೆ.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524037_1_1.jpg' Alt='Masjid' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ವಿಶ್ವದ ಅತಿ ಮುಖ್ಯ ಧರ್ಮಗಳಲ್ಲಿ ಇಸ್ಲಾಂ ಧರ್ಮವೂ ಒಂದು.ಇಸ್ಲಾಂ ಪದಕ್ಕೆ ವಿಧೇಯನಾಗು,ಭಗವಂತನ ಇಚ್ಛೆಗೆ ಅನುಗುಣವಾಗಿ ಆತ್ಮ ಸಮರ್ಪಣೆ ಮಾಡು ಮುಂತಾಗಿ ಅರ್ಥವಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಧರ್ಮದ ಮುಖ್ಯ ಸಂದೇಶವೆಂದರೆ ಅಲ್ಲಾಹ್  ಒಬ್ಬನೇ ಎಂದರೆ ಭಗವಂತ ಒಬ್ಬನು ಮಾತ್ರ. ಅವನೇ ಈ ವಿಶ್ವದ ಸೃಷ್ಟಾರ; ಅವನೇ ರಕ್ಷಕನೂ ಆಗಿದ್ದಾನೆ. ಏಕ ದೈವತ್ವ ಇಸ್ಲಾಂ ಧರ್ಮದ ಮೂಲ ಮಂತ್ರ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಹಮದ್ ನಬಿ ಈ ಧರ್ಮದ ಮುಖ್ಯ ಪ್ರಬೋದಕ. ವಿವಿಧ ಪ್ರಬೋದಕರ ಸಂದೇಶವನ್ನು ಒಳಗೊಂಡಿರುವ ಪವಿತ್ರ ಗ್ರಂಥ ಖುರಾನ್. ಮಹಮದ್ ನಬಿ ಈ ಧರ್ಮದ ಸ್ಥಾಪಕನಲ್ಲ  ಅವನು ಪ್ರಬೋದಕರಲ್ಲಿ ಕೊನೆಯವನು. ಇಸ್ಲಾಂ ಮತದ ಪೂರ್ಣ ರೂಪವನ್ನು ಹೊರಗೆಡವಿದವನು ಮಹಮದ್ ನಬಿ ಎಂದು ನಂಬಲಾಗಿದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಹಮದ್ ನಬಿ ಚಿಕ್ಕ ವಯಸ್ಸಿನಲ್ಲಿಯೇ ಅನಾಥನಾದ. ಜೀಬ್ರಿಯೇಲ್ ಎಂಬ ಪ್ರವಾದಿಯೊಬ್ಬನು ದಿವ್ಯ ಸಂದೇಶ ನೀಡಿ 'ನೀನು ಭಗವಂತನ ಸಂದೇಶವಾಹಕನಾಗು' ಎಂದನು. ಅಂದು ಪ್ರಾರಂಭವಾದ ನಬಿಯ ಬೋಧನೆ ಸತತವಾಗಿ ಜನರ ಮನಸ್ಸನ್ನು ಆಕರ್ಷಿಸಿತು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮಹಮದ್ ನಬಿಯ ಜನ್ಮ ಮಕ್ಕಾದಲ್ಲಿ. ತಂದೆಯ ನಿಧನಾನಂತರ ಜನಿಸಿದ ಆತನನ್ನು ದಾಸಿಯೊಬ್ಬಳು ಸಾಕಿದಳು.ಆರನೆಯ ವಯಸ್ಸಿನಲ್ಲಿ ತಾಯಿಯು, ಎಂಟನೆಯ ವಯಸ್ಸಿನಲ್ಲಿ ಅಜ್ಜನೂ ತೀರಿಕೊಂಡರು.ತನ್ನ 25ನೇ ವಯಸ್ಸಿನಲ್ಲಿ ಮದುವೆಯಾದ. ಮಕ್ಕಾದ ಸಮೀಪದಲ್ಲಿ ಒಂದು ಗುಹೆಯಲ್ಲಿ ಸದಾ ಧ್ಯಾನ ನಿರತನಾಗಿರುತ್ತಿದ್ದ.  ಇಂತಹ ಸಂದರ್ಭದಲ್ಲಿ ಜೇಬ್ರಿಯೇಲ್ ಎಂಬ ಸಂದೇಶವಾಹಕ 'ನೀನು ಭಗವಂತನ ಸಂದೇಶವಾಹಕ'  ಎಂದು ಆದೇಶ ನೀಡಿದ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಆತನ ವಿಚಾರಧಾರೆಗಳು ಮೆಕ್ಕಾದ ಅನೇಕ ಶ್ರೀಮಂತರಿಗೆ ಹಿಡಿಸಲಿಲ್ಲ. ಸೋದರ ಮಾವ ಮತ್ತು ಹೆಂಡತಿ ಖತೀಜ ಇವರ ಮರಣಾನಂತರ ಮತ್ತಷ್ಟು ವಿರೋಧವೇರ್ಪಟ್ಟು ರಹಸ್ಯವಾಗಿ ಮದೀನಾಕ್ಕೆ ತೆರಳಿದ. ಈ ಪಲಾಯನ ಘಟನೆ ನಡೆದದ್ದು ಕ್ರಿ.ಶ.622ರಲ್ಲಿ. ಈಘಟನೆಯ ಆಧಾರದಿಂದ ಹಿಜರಿ ಶಕೆ ಅಂದಿನಿಂದ ಪ್ರಾರಂಭವಾಯಿತು. ಕೊಲೆಯ ಸಂಚಿನಿಂದ ಮಹಮದ್ ನಬಿ ಪಾರಾಗಿದ್ದ ಸಂಕೇತವಾಗಿ ಜಗತ್ತಿನ ಮುಸ್ಲಿಮರೆಲ್ಲರೂ ಈ ಕಾಲಮಾನವನ್ನು ಪರಿಗಣಿಸಿದ್ದಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ದೇವದೂತನಾದ ಜೇಬ್ರಿಲ್ ದೇವರು ಆಗ್ಗಿಂದಾಗ್ಗೆ ಜನರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದು ಅವೆಲ್ಲವೂ ಮಾರ್ಗದರ್ಶಕವಾಗಿದ್ದುದರಿಂದ ಜನರೆಲ್ಲಾ ಸಂಪೂರ್ಣವಾಗಿ ನಂಬಿದ್ದರು. ಹೀಗೆ ಸಂದೇಶಗಳನ್ನು ಪ್ರಚಾರ ಮಾಡಿದವರಲ್ಲಿ ಮಹಮದ್ ನಬಿ ಕೊನೆಯ ಪ್ರವಾದಿ. ಇಸ್ಲಾಂ ಮತವನ್ನು ಸಂಪೂರ್ಣವಾಗಿ ಪ್ರಚಾರ ಮಾಡಿದನೆಂಬ ನಂಬಿಕೆಯಿಂದ ಆ ಧರ್ಮದಲ್ಲಿ ಮಹಮದ್ ನಬಿಗೆ ಸರ್ವಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಖುರಾನ್ ಮುಸ್ಲಿಮರಿಗೆ ಪವಿತ್ರ ಗ್ರಂಥ. ಅದರಲ್ಲಿ ಹೇಳಿರುವುದೆಲ್ಲವೂ ದೈವವಾಣಿಯೆಂದು ಇಸ್ಲಾಂ ಧರ್ಮ ಹೇಳುತ್ತದೆ. ಅವೆಲ್ಲವೂ ಸಾಕ್ಷಾತ್ ದೇವರು ಹಜರತ್ ಮಹಮದ್‌ರ ಬಾಯಿಂದ ಹೇಳಿಸಲಾಗಿದೆ ಎಂಬ ನಂಬಿಕೆ. ಖುರಾನ್‌ನಲ್ಲಿ 'ಲಾ ಇಕರಾಹ್ ಫಿದ್ದೀನ' ಎಂದರೆ ಮತ ವಿಷಯದಲ್ಲಿ ಒತ್ತಾಯ ಮಾಡಬಾರದು.(ಅನ್ಯ ಮತದವರ ದ್ವೇಷ ಸಲ್ಲದು) ಎಂದು ಹೇಳಲಾಗಿದೆ. ಆದರೆ 'ಅಲ್ಲಾಹ' ನನ್ನು ನಿರಾಕಾರನೆಂದು ಅವರು ಹೇಳುವುದಿಲ್ಲ,ನಂಬುವುದೂ ಇಲ್ಲ. </font><br/><font  style='font-size:11pt; color:#000000'></font><br/>'<font  style='font-size:11pt; color:#000000'>ಅಲ್ಲಾಹ' ಸರ್ವೋತ್ತಮ  ದೇವರೆಂದು ನಂಬುವ ಇಸ್ಲಾಂ ಧರ್ಮ ಭಗವಂತನಿಗೆ ಗುಣವನ್ನು ಅನುಕರಿಸಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.'ರಬ್ಜ್' ಎಂದಾಗ ಪಾಲಕ ಹಾಗೂ ಪೋಷಕ ಸರ್ವೇಶ್ವರನನ್ನು ಕುರಿತು,ಭಗವಂತನನ್ನು ಕರುಣಾಮಯಿ ಮತ್ತು ದಯಾಮಯಿ ಎಂದು ಕೋರಿಕೆ ಸಲ್ಲಿಸುವಾಗ 'ರಹಮಾನ್,ರಹೀಮ' ಎಂದು ಕರೆಯುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪರಮ ಪಾವನನೂ ಪವಿತ್ರನೂ ಆದ ಭಗವಂತನನ್ನು'ಖುದ್ದೂಸ್' ಎನ್ನುತ್ತಾರೆ. ಸೃಷ್ಟಿಕರ್ತನಾದ ಅಲ್ಲಾಹನನ್ನು 'ಖಾಲಿಸ್' ಎಂದು ಸಂಭೋದಿಸುತ್ತಾರೆ.ಜ್ಞಾನಿಯಾದ ಭಗವಂತನ ಹೆಸರನ್ನು 'ಆಲಿಮ್' ಎನ್ನುತ್ತಾರೆ.ಯಾವುದೇ ಹೆಸರಿನಿಂದ ಕರೆದರೂ ಸರ್ವಾಂತರ್ಯಾಮಿಯಾದ ಭಗವಂತನಿಗೆ ಅದು ಅನ್ವಯಿಸುತ್ತದೆ.</font><br/><font  style='font-size:11pt; color:#000000'></font><br/>(<font  style='font-size:11pt; color:#000000'>ಡ</font><font style='font-size:11pt;'>ಾ||</font><font style='font-size:11pt;'>ವಿ ಗೋಪಾಲಕೃಷ್ಣ)</font>]]></content:encoded>
      <pubDate>Sun, 03 Jun 2007 19:04:38 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮೊಹರಂ ಹಬ್ಬ ಆಚರಿಸುವುದು ಏಕೆ?]]></title>
      <link>https://kannada.webdunia.com/article/about-islam/ಮೊಹರಂ-ಹಬ್ಬ-ಆಚರಿಸುವುದು-ಏಕೆ-107052400036_1.htm</link>
      <guid>https://kannada.webdunia.com/article/about-islam/ಮೊಹರಂ-ಹಬ್ಬ-ಆಚರಿಸುವುದು-ಏಕೆ-107052400036_1.htm</guid>
      <media:thumbnail url="http:"/>
      <image>http:</image>
      <description><![CDATA[ಮೊಹರಂ ದಿನಾಚರಣೆಯು ಇಸ್ಲಾಂ ಧರ್ಮಕ್ಕಾಗಿ ಪ್ರಾಣ ನೀಡಿದವರನ್ನು ನೆನೆಯುವ ಆಚರಣೆ. ಇಸ್ಲಾಂ ಮತದಲ್ಲಿ ನಂಬಿಕೆಯುಳ್ಳವರು ಆಚರಿಸುವ ದಿನಾಚರಣೆಗಳಲ್ಲಿ ಇದೊಂದು ಮುಖ್ಯವಾದ ದಿನಾಚರಣೆ.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/24/images/img1070524036_1_1.jpg' Alt='picture' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಈ ದಿನಾಚರಣೆಗಾಗಿ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಮುಂತಾದ ಎಲ್ಲ ಸಾರ್ವಜನಿಕ ಸೇವೆಗೆ ರಜಾ ದಿನಗಳನ್ನಾಗಿ ಘೋಷಿಸಲಾಗುತ್ತಿದೆ.ಇದರ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಲ್ಲವೇ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮೊಹರಂ ದಿನಾಚರಣೆಯಲ್ಲಿ ಮುಖ್ಯವಾಗಿ ಮೆರವಣಿಗೆಗಳು ನಡೆಯುತ್ತವೆ ಅದು ಏಕೆ?</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈಗಿನ ಇರಾಕ್ ನಾಡಿನಲ್ಲಿದೆ ಕರ್ಬಲಾ ಎಂಬ ಸ್ಥಳ.ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್)ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ  ತಮ್ಮ ಪ್ರಾಣಗಳನ್ನೇ ತೆತ್ತರು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಈ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.ಇಮಾಮ್ ಮತ್ತು ಅವರ ಕುಟುಂಬದವರನ್ನು ನೆನಪಿಸಿಕೊಳ್ಳುವ ಸಲುವಾಗಿ ಉರೂರುಗಳಲ್ಲಿ ಮೆರವಣಿಗೆಯಲ್ಲಿ ಜನರು ತೆರಳುತ್ತಾರೆ.ಇಮಾಮ್ ಅವರು ತೋರಿಸಿದ ಮಾನವೀಯತೆಗಾಗಿ ಅವರಿಗೆ ಗೌರವ ತೋರಿಸುವ ರೀತಿಯಲ್ಲಿ ಈ ದಿನಾಚರಣೆಯನ್ನು ನಡೆಸಲಾಗುತ್ತದೆ. ಮೊಹರಂ ಹಬ್ಬದಲ್ಲಿ ಅತಿ ಮುಖ್ಯವಾದ ವಿಚಾರ ಇದು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ತಮ್ಮ ಜೀವಿತವನ್ನು ಇಸ್ಲಾಂ ಧರ್ಮದ ಕಟ್ಟಪಾಡುಗಳಿಗಾಗಿ ಅವರು ಮೀಸಲಾಗಿಟ್ಟರು. ಷಿಯಾ ಪಂಗಡಕ್ಕೆ ಸೇರಿದ ಮುಸ್ಲಿಮ್‌ರು ಕಜಿಯಾಸ್ ಎಂಬ ಕಾಗದಗಳನ್ನು  ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂತಹ ಆಯುಧಗಳನ್ನು ಮೆರವಣಿಗೆಯಲ್ಲಿ  ಕೈಯಲ್ಲಿ ಹಿಡಿದಿರುತ್ತಾರೆ.</font>]]></content:encoded>
      <pubDate>Sun, 03 Jun 2007 19:04:08 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು]]></title>
      <link>https://kannada.webdunia.com/article/about-islam/ಇಸ್ಲಾಂ-ಧರ್ಮದ-ಐದು-ಆಧಾರ-ಸ್ತಂಭಗಳು-107052200013_1.htm</link>
      <guid>https://kannada.webdunia.com/article/about-islam/ಇಸ್ಲಾಂ-ಧರ್ಮದ-ಐದು-ಆಧಾರ-ಸ್ತಂಭಗಳು-107052200013_1.htm</guid>
      <media:thumbnail url="http:"/>
      <image>http:</image>
      <description><![CDATA[ಓರ್ವ ಮುಸ್ಲಿಂ, ಈ ಐದು ಪ್ರಮುಖ ವಿಧಾನಗಳನ್ನು ಅನುಸರಿಸುವ ಮೂಲಕ ತನ್ನನ್ನು ತಾನು ಅಲ್ಲಾನಿಗೆ ಸಮರ್ಪಿಸಿಕೊಳ್ಳುತ್ತಾನೆ.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/22/images/img1070522013_1_1.jpg' Alt='PICTURE' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಇಸ್ಲಾಂ ಧರ್ಮದ ಐದು ಪ್ರಮುಖ ಆಚಾರ ವಿಧಾನಗಳನ್ನು ಖುರಾನ್‌ ಬೋಧಿಸುತ್ತದೆ. ಓರ್ವ ಮುಸ್ಲಿಂ, ಈ ಐದು ಪ್ರಮುಖ ವಿಧಾನಗಳನ್ನು ಅನುಸರಿಸುವ ಮೂಲಕ ತನ್ನನ್ನು ತಾನು ಅಲ್ಲಾಹ್‌ಗೆ ಸಮರ್ಪಿಸಿಕೊಳ್ಳುತ್ತಾನೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಹದ್, ಸಲಾತ್, ಝಕತ್, ರಮದಾನ್(ಸವುಮ್) ಹಾಗೂ ಹಜ್ ಇವುಗಳು ಇಸ್ಲಾಂ ಧರ್ಮದ ಅನುಯಾಯಿಗಳು ಅನುಸರಿಸಬೇಕಿರುವ ಐದು ಅವಶ್ಯಕ ಅಂಶಗಳು.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಶಹದ್ ಅಂದರೆ ಏಕದೇವರ ಪ್ರತಿಪಾದನೆ. ದೇವರು ಒಬ್ಬನೆ ಹಾಗೂ ಅವನೇ ಅಲ್ಲಾ ಮತ್ತು ಮುಹ್ಮದ್ ಅವರ ಪ್ರವಾದಿ ಎಂಬುದಾಗಿ ಇಸ್ಲಾಂ ಧರ್ಮ ಹೇಳುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಸಲತ್ ಅಂದರೆ, ಪ್ರಾರ್ಥನೆಯ ದೈಹಿಕ ಕ್ರಿಯೆ. ದಿನಕ್ಕೆ ಐದು ಬಾರಿ ಮುಸ್ಲಿಮರು ಮೆಕ್ಕಾದತ್ತ ಮುಖಮಾಡಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಸುಕಿನಲ್ಲಿ, ಮಧ್ಯಾಹ್ನ, ಅಪರಾಹ್ನ, ಸೂರ್ಯಾಸ್ತ ಹಾಗೂ ಮುಸ್ಸಂಜೆಯ ವೇಳೆಗೆ  ಇಸ್ಲಾಂ ಧರ್ಮದ ಅನುಯಾಯಿಗಳು ನಮಾಜ್ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಝಕತ್ ಅಂದರೆ ದಾನ. ಮುಸ್ಲಿಂ ಧರ್ಮದ ಪ್ರಕಾರ ತಾವೇನು ಹೊಂದಿದ್ದೇವೆಯೋ ಅದರ ಶೇ. ಎರಡೂವರೆ ಭಾಗವನ್ನು ಉಳ್ಳವರು ಇಲ್ಲದವರಿಗೆ ದಾನ ಮಾಡಬೇಕು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಕ್ಯಾಲೆಂಡರಿನ ರಮದಾನ್ ಪವಿತ್ರ ತಿಂಗಳಿನಲ್ಲಿ ಆರೋಗ್ಯವಂತ ಮುಸ್ಲಿಮರು ತಿಂಗಳು ಪೂರ್ಣ ನಸುಕಿನಿಂದ ಸೂರ್ಯಾಸ್ತದ ತನಕ ಉಪವಾಸ ಆಚರಿಸುವುದನ್ನು ಸವುಮ್ ಎಂದು ಕರೆಯಲಾಗುತ್ತದೆ. ಈ ವೇಳೆ ಊಟ, ತಿಂಡಿ, ಪಾನೀಯ, ಧೂಮಪಾನ ಹಾಗೂ ಲೈಂಗಿಕ ಚಟುವಟಿಕೆಗಳಿಂದ ದೂರ ಉಳಿಯಬೇಕು. ಸ್ವಯಂ ಶಿಸ್ತಿನ ಅಳವಡಿಕೆ ಹಾಗೂ ದೇವರ ಮೇಲಿನ ಅವಲಂಬನೆ ಹಾಗೂ ಹಸಿದವರ ಮೇಲಿನ ಅನುಕಂಪಕ ಪವಿತ್ರ ತಿಂಗಳಿನ ಉಪವಾಸದ ಮೂಲಮರ್ಮ ಎಂಬುದಾಗಿ ಧರ್ಮ ಹೇಳುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಧರ್ಮದ ಐದು ಪವಿತ್ರ ಆಚರಣೆಗಳಲ್ಲಿ ಹಜ್ ಯಾತ್ರೆ ಐದನೆಯ ಆಧಾರ ಸ್ತಂಭವಾಗಿದೆ. ಮುಸ್ಲಿಮರು ಜೀವಮಾನದಲ್ಲಿ ಒಮ್ಮೆಯಾದರೂ ಇಸ್ಲಾಂ ಕ್ಯಾಲೆಂಡರಿನ 12ನೆ ತಿಂಗಳಲ್ಲಿ ಮೆಕ್ಕಾ ಪ್ರವಾಸ ಮಾಡುವುದು ಶ್ರೇಷ್ಠವಾಗಿದ್ದು ಇದು ಶರಣಾಗತಿಯ ಅಂತಿಮ ಕ್ರಿಯೆ ಎಂದು ಧರ್ಮ ಹೇಳುತ್ತದೆ.  ಹಜ್ ಯಾತ್ರೆಯು ವಿಶ್ವಾದ್ಯಂತದ ಅನೇಕ ರಾಷ್ಟ್ರಗಳ ಮುಸ್ಲಿಮರನ್ನು ಒಟ್ಟು ಸೇರಿಸುತ್ತದೆ. ಎಲ್ಲ ಪಂಥಗಳಿಗೂ ಅತೀತವಾದ ಸ್ವಾಮಿಭಕ್ತಿಯ ಪ್ರದರ್ಶನ ಹಜ್‌ ಯಾತ್ರೆಯಲ್ಲಾಗುತ್ತದೆ.</font>]]></content:encoded>
      <pubDate>Sun, 03 Jun 2007 18:49:33 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಇಸ್ಲಾಂ- ಹುಟ್ಟು, ನಂಬಿಕೆಗಳು]]></title>
      <link>https://kannada.webdunia.com/article/about-islam/ಇಸ್ಲಾಂ-ಹುಟ್ಟು-ನಂಬಿಕೆಗಳು-107052200012_1.htm</link>
      <guid>https://kannada.webdunia.com/article/about-islam/ಇಸ್ಲಾಂ-ಹುಟ್ಟು-ನಂಬಿಕೆಗಳು-107052200012_1.htm</guid>
      <media:thumbnail url="http:"/>
      <image>http:</image>
      <description><![CDATA[ಪ್ರವಾದಿ ಮುಹ್ಮದ್ ಇಸ್ಲಾಂ ಧರ್ಮದ ಪ್ರತಿಪಾದಕರು. ಏಳನೆ ಶತಮಾನದ ಈ ರಾಜಕೀಯ ಹಾಗೂ ಧಾರ್ಮಿಕ ಗುರುವಿನ ಬೋಧನೆಯನ್ನು ಇಸ್ಲಾಂ ಧರ್ಮದ ಅನುಯಾಯಿಗಳು ಪಾಲಿಸುತ್ತಾರೆ.]]></description>
      <content:encoded><![CDATA[<!--Image--><table cellspacing='0' cellpadding='0' border='0'  Align=Left><tr><td align='left'><img src='/kn/articles/0705/22/images/img1070522012_1_1.jpg' Alt='picture' Border=0 class='imgArticle'></td></tr><tr> <td><table width='100%' cellpadding='0' cellspacing='0' border='0'><tr><td class='imgSource'>PTI</td><td width='8'></td></tr></table></td></tr></table><!--endImage--> <font  style='font-size:11pt; color:#000000'>ಪ್ರವಾದಿ ಮುಹ್ಮದ್ ಇಸ್ಲಾಂ ಧರ್ಮದ ಪ್ರತಿಪಾದಕರು. ಏಳನೆ ಶತಮಾನದ ಈ ರಾಜಕೀಯ ಹಾಗೂ ಧಾರ್ಮಿಕ ಗುರುವಿನ ಬೋಧನೆಯನ್ನು ಇಸ್ಲಾಂ ಧರ್ಮದ ಅನುಯಾಯಿಗಳು ಪಾಲಿಸುತ್ತಾರೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇದು ಪ್ರಮುಖ ಧರ್ಮಗಳ ಸಾಲಿನಲ್ಲಿ ಕಿರಿಯ ಧರ್ಮವೆಂದು ಕರೆಸಿಕೊಂಡಿದ್ದರೂ, ವಿಶ್ವದಲ್ಲಿ ಎರಡನೆ ಅತಿದೊಡ್ಡ ಧರ್ಮವಾಗಿ ಮೂಡಿ ಬಂದಿದೆ. ವಿಶ್ವಾದ್ಯಂತ ಸರಿಸುಮಾರು 1.4 ಶತಕೋಟಿ ಮಂದಿ ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದು, ಇವರನ್ನು ಮುಸ್ಲಿಮರೆಂದು ಕರೆಯಲಾಗುತ್ತದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಇಸ್ಲಾಂ ಅಂದರೆ, ಸಮರ್ಪಣೆ ಎಂದರ್ಥ. ಮುಸ್ಲಿಂ ಅಂದರೆ,  ತನ್ನನ್ನು ತಾನು ಸಂಪೂರ್ಣವಾಗಿ ಅಲ್ಲಾನಿಗೆ ಸಮರ್ಪಿಸಿಕೊಂಡವನೆಂಬ ಅರ್ಥ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಪ್ರವಾದಿ ಮುಹ್ಮದ್(570-632) ಕ್ರಿಸ್ತಶಕ  610ರಲ್ಲಿ ಈ ಧರ್ಮವನ್ನು ಹುಟ್ಟು ಹಾಕಿದರು. ಅವರು ಬೋಧಿಸಿರುವ ಪ್ರವಚನಗಳಾದ ಕೊರಾನ್ಅನ್ನು ಮುಸ್ಲಿಮರ ಪವಿತ್ರಗ್ರಂಥವೆಂದು ಪರಿಗಣಿಸಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೊರಾನ್‌ಅನ್ನು ಮುಹ್ಮದ್ ಅವರು ಬೋಧಿಸಿದ್ದರೂ, ಇಸ್ಲಾಂ ಧರ್ಮ ಪ್ರವಾದಿಯವರು ಭೂಮಿಗೆ ಬರುವ ಮುನ್ನವೆ, ಆರಂಭವಾಗಿತ್ತು ಎಂದು ಹೇಳಲಾಗಿದೆ. ಕೊರಾನ್ ಅನ್ನು ದೇವರು ಗೇಬ್ರಿಯಲ್ ಮೂಲಕ ಪ್ರವಾದಿಯವರಿಗೆ ಬೋಧಿಸಿದ್ದಾರೆ ಎಂದು ಕೊರಾನ್ ಹೇಳುತ್ತದೆ.</font>]]></content:encoded>
      <pubDate>Sun, 03 Jun 2007 18:49:17 +0530</pubDate>
      <updatedDate>Mon, 14 Apr 2014 22:22:10 +0530</updatedDate>
      <category><![CDATA[About Islam]]></category>
      <authorname>ಇಳಯರಾಜ</authorname>
    </item>
  </channel>
</rss>
