<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ಧಾರ್ಮಿಕ ಯಾತ್ರೆ]]></title>
    <link>https://kannada.webdunia.com/religious-journey</link>
    <description><![CDATA[Religious Journey in Kannada, New Videos and Story of various Religious Destinations of India every week on Monday and many more in kannada at Webdunia kannada DharmikaYatre]]></description>
    <copyright>Copyright webdunia.com</copyright>
    <lastBuildDate>Wed, 17 Jun 2026 09:00:10 +0530</lastBuildDate>
    <language>en-us</language>
    <image>
      <title>ಧಾರ್ಮಿಕ ಯಾತ್ರೆ</title>
      <url>https://kannada.webdunia.com/religious-journey</url>
      <link>https://kannada.webdunia.com/religious-journey</link>
    </image>
    <atom:link href="https://kannada.webdunia.com/rss/religious-journey-1091701.rss" rel="self" type="application/rss+xml"/>
    <item>
      <title><![CDATA[ಟಿಟಿಡಿ: ಶ್ರೀವಾರಿ ಆಲಯದಲ್ಲಿ ಇಂದು ಮಹಾ ಕುಂಭಾಭಿಷೇಕ]]></title>
      <link>https://kannada.webdunia.com/article/religious-journey/ttd-maha-kumbhabhisheka-on-march-13-at-shriwari-temple-119031300031_1.html</link>
      <guid>https://kannada.webdunia.com/article/religious-journey/ttd-maha-kumbhabhisheka-on-march-13-at-shriwari-temple-119031300031_1.html</guid>
      <media:thumbnail url="https://nonprod-media.webdunia.com/public_html/_media/kn/img/hp/religion/2014-04/21/thumb/1_1/1398066327-2795.jpg"/>
      <image>https://nonprod-media.webdunia.com/public_html/_media/kn/img/hp/religion/2014-04/21/thumb/1_1/1398066327-2795.jpg</image>
      <description><![CDATA[ಜ್ಯುಬಿಲಿಹಿಲ್ಸ್ ಟಿಟಿಡಿ ಹೊಸದಾಗಿ ನಿರ್ಮಿಸಿದ ಶ್ರೀವೆಂಕಟೇಶ್ವರಸ್ವಾಮಿ ಆಲಯ ಪ್ರತಿಷ್ಠಾಪನ ಮಹೋತ್ಸವವು ಇಂದು ನಡೆಯಲಿದೆ. ಈ ಸಂದರ್ಭದಲ್ಲಿ ಆಲಯದಲ್ಲಿ ಮಹಾಕುಂಭಾಭಿಷೇಕವನ್ನು ನೆರವೇರಿಸುತ್ತಿದ್ದಾರೆ. ಮೀನ ಲಗ್ನದಲ್ಲಿ ಈ ಮಹಾಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.]]></description>
      <content:encoded><![CDATA[<p>
	ಜ್ಯುಬಿಲಿಹಿಲ್ಸ್ ಟಿಟಿಡಿ ಹೊಸದಾಗಿ ನಿರ್ಮಿಸಿದ ಶ್ರೀವೆಂಕಟೇಶ್ವರಸ್ವಾಮಿ ಆಲಯ ಪ್ರತಿಷ್ಠಾಪನ ಮಹೋತ್ಸವವು ಇಂದು ನಡೆಯಲಿದೆ. ಈ ಸಂದರ್ಭದಲ್ಲಿ ಆಲಯದಲ್ಲಿ ಮಹಾಕುಂಭಾಭಿಷೇಕವನ್ನು ನೆರವೇರಿಸುತ್ತಿದ್ದಾರೆ. ಮೀನ ಲಗ್ನದಲ್ಲಿ ಈ ಮಹಾಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.<br />
	<p style="float: left;width:100%;text-align:center;">
		<img align="center" alt="" class="imgCont" src="http://media.webdunia.com/_media/kn/img/hp/religion/2014-04/21/full/1398066327-2795.jpg" style="border: 1px solid rgb(221, 221, 221); margin-right: 0px; z-index: 0; width: 650px; height: 477px;" title="" /></p>
	<br />
	<br />
	ಈ ಸಮಯದಲ್ಲಿ ಉತ್ಸವ ವಿಗ್ರಹಗಳಿಗೆ ಅಂಕುರಾರ್ಪಣೆ ಮಾಡುತ್ತಾರೆ. ಸಾಯಂಕಾಲ 6ರಿಂದ 9 ಗಂಟೆಯ ತನಕ ಆಚಾರ್ಯ ಋತ್ವಿಕವರ್ಣ, ಮೃತ್ಸಂಗ್ರಹಣ, ಅಂಕುರಾರ್ಪಣೆ, ವೇದಾರಂಭ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ. ಮಾರ್ಚ್ 9 ರಂದು ಬೆಳಿಗ್ಗೆ ಯೋಗಶಾಲ ವಾಸ್ತು, ಪಂಚಗಮ್ಯ ಪ್ರಸನ್ನ, ರಕ್ಷಾಬಂಧನ, ಅಕಲ್ಮಷ ಪ್ರಾಯಶ್ಚಿತ ಹೋಮ, ಅಕ್ಷಿನ್ಮೋಚನ, ಭೀಮಶುದ್ಧಿ, ಪಂಚಗವ್ಯಾಧಿವಾಸ, ಸಾಯಂಕಾಲ ಅಗ್ನಿಪ್ರತಿಷ್ಠ, ಕುಂಭಾವಾಹನ, ಕುಂಭಾರಾಧನೆ, ಹೋಮಗಳು, ಪೂರ್ಣಾಹುತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.</p>
<p>
	 </p>
<p>
	ಮಾರ್ಚ್ 10 ರಂದು ಬೆಳಿಗ್ಗೆ 9 ರಿಂದ 12 ಗಂಟೆಯ ತನಕ ಹೋಮಂ, ಕ್ಷೀರಾಧಿವಾಸ, ಪೂರ್ಣಾಹುತಿ, ಸಾಯಂಕಾಲ 6 ರಿಂದ 8ಗಂಟೆಯ ತನಕ ಹೋಮ, ಪೂರ್ಣಾಹುತಿ ನಿರ್ವಹಿಸಿದ್ದಾರೆ. ಮಾರ್ಚ್ 11 ಬೆಳಿಗ್ಗೆ ಹೋಮ, ಜಲಧಿವಾಸ, ಪೂರ್ಣಾಹುತಿ, 12 ರಿಂದ 2 ಗಂಟೆಯ ತನಕ ಬಿಂಬಸ್ಥಾಪನೆ, 6ರಿಂದ 8ಗಂಟೆಯ ತನಕ ಹೋಮ, ಪೂರ್ಣಾಹುತಿ ನೆರವೇರಿಸಲಾಗಿದೆ.</p>
<p>
	 </p>
<p>
	ತದನಂತರ ಬ್ರಹ್ಮಘೋಷ, ವೇದಶಾತ್ತುಮುರ, ಧ್ವಜಾರೋಹಣ, ಅರ್ಚಕ ಬಹುಮಾನ, ನಿತ್ಯ ಮಂತ್ರಪಠಣೆಗಳನ್ನು ಮಾಡುತ್ತಾರೆ. ಆನಂತರ ಸಾಯಂಕಾಲ 4 ಗಂಟೆಯ ತನಕ ಸರ್ವದರ್ಶನಕ್ಕಾಗಿ ಭಕ್ತರಿಗೆ ಅನುಮತಿ ನೀಡಲಾಗುತ್ತದೆ. ಅದೇ ದಿನ ಸಾಯಂಕಾಲದ ತನಕ ಶ್ರೀನಿವಾಸ ಕಲ್ಯಾಣ, ಉತ್ಸವಮೂರ್ತಿಗಳ ಮೆರವಣಿಗೆ, ಧ್ವಜಾರೋಹಣ, ನಿತ್ಯಮಂತ್ರೋಪಠಣೆ, ಸರ್ವದರ್ಶನ ಏಕಾಂತ ಸೇವೆ ಜರಗುತ್ತದೆ.</p>
<p>
	 </p>
<p>
	ಹೈದರಾಬಾದ್ ಟಿಟಿಡಿ ನಿರ್ಮಿಸಿದ ಎರಡನೇ ಆಲಯವಿದು. ಜ್ಯೂಬ್ಲಿಹಿಲ್ಸ್ ರೋಡ್ ಸಂ.92ರಲ್ಲಿ ರೂ. 28 ಕೋಟಿ ವೆಚ್ಚದಲ್ಲಿ 2016 ಆಗಸ್ಟ್ 10 ರಂದು ಈ ಆಲಯ ನಿರ್ಮಾಣಕ್ಕೆ ಶ್ರೀಕಾರ ಮಾಡಲಾಗಿತ್ತು. ಸುಮಾರು ಮೂರುವರೆ ಎಕರೆ ಜಮೀನಿನಲ್ಲಿ ಸುಮಾರು ರೂ.17 ಕೋಟಿ ಟಿಟಿಡಿ ನಿಧಿಯಲ್ಲಿ ಶ್ರೀವಾರಿ ಆಲಯವನ್ನು ನಿರ್ಮಾಣ ಮಾಡಿದ್ದಾರೆ. ಉಳಿದ 6 ಕೋಟಿಯಲ್ಲಿ ಹೆದ್ದಾರಿಗಳು, ಪಾರ್ಕಿಂಗ್, ಅರ್ಚಕರ ನಿವಾಸಗಳು, ಇತರ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. </p>]]></content:encoded>
      <pubDate>Wed, 13 Mar 2019 13:49:00 +0530</pubDate>
      <updatedDate>Wed, 13 Mar 2019 13:51:01 +0530</updatedDate>
      <category><![CDATA[Religious Journey]]></category>
      <authorname>rajesh patil</authorname>
    </item>
    <item>
      <title><![CDATA[ಕೋತಿಗೆ ತಿಥಿ ಮಾಡಿ ಊರಿಗೆ ಊಟ ಹಾಕಿಸಿದ್ರು]]></title>
      <link>https://kannada.webdunia.com/article/religious-journey/vilagers-give-respect-to-dead-monkey-118052400029_1.html</link>
      <guid>https://kannada.webdunia.com/article/religious-journey/vilagers-give-respect-to-dead-monkey-118052400029_1.html</guid>
      <media:thumbnail url="https://nonprod-media.webdunia.com/public_html/_media/kn/img/article/2018-05/24/thumb/1_1/1527166255-2538.jpg"/>
      <image>https://nonprod-media.webdunia.com/public_html/_media/kn/img/article/2018-05/24/thumb/1_1/1527166255-2538.jpg</image>
      <description><![CDATA[ಆನೇಕಲ್:  ಮನುಷ್ಯ ಸತ್ತರೆ ತಿಥಿ ಮಾಡುವುದು ಸಹಜ ...ಜೊತೆಗೆ ಸೂತಕ ಕಳೆದುಕೊಳ್ಳಲು ತಿಥಿ ಮಾಡುವುದು ಹಿಂದೂ ಸಂಪ್ರದಾಯ !? ಅದರೆ ಈ ಊರಿನ ಜನ ಮಾತ್ರ ಕೋತಿ ಸತ್ತ ಕಾರಣಕ್ಕೆ  ಅರ್ಚಕರನ್ನು ಕರೆಸಿ ಶಾಸ್ತ್ರೀ ಆಪ್ತವಾಗಿ ಮಣ್ಣು ಮಾಡಿದ್ದು ವಿಶೇಷ.]]></description>
      <content:encoded><![CDATA[<p>
	<strong>ಮನುಷ್ಯ ಸತ್ತರೆ ತಿಥಿ ಮಾಡುವುದು ಸಹಜ ...ಜೊತೆಗೆ ಸೂತಕ ಕಳೆದುಕೊಳ್ಳಲು ತಿಥಿ ಮಾಡುವುದು ಹಿಂದೂ ಸಂಪ್ರದಾಯ !? ಅದರೆ ಈ ಊರಿನ ಜನ ಮಾತ್ರ ಕೋತಿ ಸತ್ತ ಕಾರಣಕ್ಕೆ  ಅರ್ಚಕರನ್ನು ಕರೆಸಿ ಶಾಸ್ತ್ರೀ ಆಪ್ತವಾಗಿ ಮಣ್ಣು ಮಾಡಿದ್ದು ವಿಶೇಷ. </strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" src="http://media.webdunia.com/_media/kn/img/article/2018-05/24/full/1527166255-2538.jpg" style="border: 1px solid rgb(221, 221, 221); margin-right: 0px; z-index: 0; width: 650px; height: 867px;" title="" /></p>
	</p>
</p>
<p>
	ಅದು ಮಾತ್ರವಲ್ಲದೇ  ಕೋತಿ ಸತ್ತ ಹನ್ನೊಂದು ದಿನಕ್ಕೆ ತಿಥಿ ಮಾಡಿ ಊರಿನ ಗ್ರಾಮಸ್ಥರಿಗೆಲ್ಲ ಅಡುಗೆ ಮಾಡಿಸಿ  ಊಟವನ್ನು ಹಾಕಿದರು ಇಂತಹ ಅಪರೂಪದ ದೃಶ್ಯ ಕಂಡಿಬಂದಿರುವುದು ಎಲ್ಲಿ .!? ಅಂತೀರಾ .ಈ ಸ್ಟೋರಿ ನೋಡಿ... ಒಂದು ಕಡೆ ಪೂಜೆ ಮಾಡುತ್ತಿರುವ ಭಕ್ತಾಧಿಗಳು, ಮತ್ತೊಂದು ಕಡೆ ಊಟ ಮಾಡಿತ್ತಿರುವ ಜನರು. </p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" src="http://media.webdunia.com/_media/kn/img/article/2018-05/24/full/1527166312-875.jpg" style="border: 1px solid rgb(221, 221, 221); margin-right: 0px; z-index: 0; width: 650px; height: 488px;" title="" /></p>
	</p>
</p>
<p>
	ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಆನೇಕಲ್ ನ ಹೊರವಲಯ ಕುವೆಂಪು ನಗರದಲ್ಲಿ .. ಹೌದು ಕಳೆದ ಮೂರು ವರ್ಷಗಳಿಂದ ಈ ಗ್ರಾಮದಲ್ಲಿ ವಾಸವಾಗಿದ್ದ ಕೋತಿಯೊಂದು  ಎಲ್ಲಾರಿಗೂ  ಅಚ್ಚು ಮೆಚ್ಚಿನ ಕೋತಿಯಾಗಿತ್ತು. ಅಲ್ಲದೇ ಈ ಕೋತಿಗೆ ನಾಯಿ  ಜೊತೆಗೆ ಸ್ನೇಹವಿತ್ತು ಆದರೆ ವಿಧಿಯಾಟ ಕಳೆದ 11 ದಿನಗಳ ಹಿಂದೆ  ಬೇರೆ ಊರಿನ ನಾಯಿಗಳ ಗುಂಪೊಂದು ಕೋತಿಯನ್ನು  ಕಚ್ಚಿ  ತೀವ್ರವಾಗಿ ಗಾಯಗೊಳಿಸಿತ್ತು ಅಂದೆ ಆ ಕೋತಿಯು  ಸಾವಿಗೀಡಾಗಿತ್ತು. </p>
<p>
	 </p>
<p>
	ಇದರಿಂದ  ಇಲ್ಲಿನ ಜನ ತಮ್ಮ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡ  ರೀತಿಯಲ್ಲಿ ಕೋತಿಗೆ ಮನಷ್ಯನ ಶವ ಸಂಸ್ಕಾರದ ರೀತಿಯಲ್ಲಿಯೇ ಕೋತಿಗೂ ಸಹ ಅದೆ ರೀತಿಯ ವಿಧಿವಿಧಾನಗಳನ್ನು ಮಾಡಬೇಕು ಎಂದು ಊರಿನ‌ ಗ್ರಾಮಸ್ಥರು ನಿರ್ಧರಿಸಿ  ಅಂತಿಮ‌ಸಂಸ್ಕಾರ ಮಾಡಿದರು. ಇನ್ನು ಕೋತಿ ಊರಿನ ಮನೆ ಮಗನಾಗಿ ಬೆಳೆದಿತ್ತು ಮನೆಯಲ್ಲಿ ಮಗುವನ್ನು ಹೇಗೆ ನೋಡ್ತರೇ ಆ ರೀತಿ ನೋಡಿಕೊಂಡಿದರು ..ಇನ್ನು ಹೊರಗಿನಿಂದ ಬಂದ ಜನರಿಗೆ ಅಚ್ಚರಿ ಮುಡಿಸಿತ್ತು ಈ ಕೋತಿ.</p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" src="http://media.webdunia.com/_media/kn/img/article/2018-05/24/full/1527166287-3607.jpg" style="border: 1px solid rgb(221, 221, 221); margin-right: 0px; z-index: 0; width: 650px; height: 488px;" title="" /></p>
	</p>
</p>
<p>
	 ಒಟ್ನಲ್ಲಿ ಮನುಷ್ಯನನ್ನ ಮನುಷ್ಯ ನಾಗಿ ನೋಡದೆ  ಇರುವ  ಸಮಾಜದಲ್ಲಿ ಮನುಷ್ಯ ರೀತಿಯಲ್ಲಿದ್ದ ಪ್ರಾಣಿಗೆ  ಈ ಊರಿನ ಜನ ಗೌರವ ನೀಡಿದ್ದು ವಿಶೇಷ ಇದು ಮನುಕುಲಕ್ಕೆ ಒಂದು ಮಾದರಿ‌ ಸಂಗತಿ ಅದರೆ ಕೋತಿಯನ್ನು ಕಳೆದುಕೊಂಡ ಗ್ರಾಮಸ್ಥರು ತಮ್ಮ ಮನೆಯ ಕುಟುಂಬದ ಸದಸ್ಯನನ್ನು ಕಳೆದುಕೊಂಡತ್ತ ರೀತಿಯಲ್ಲಿ ಕಣ್ಣೀರಿಡುತ್ತಿದ್ದರೆ ಇನ್ನು ತನ್ನ ಒಳ್ಳೆಯ ಗೆಳೆಯನನ್ನು ಕಳೆದು ಕೊಂಡ ನಾಯಿ ಗ್ರಾಮದಲ್ಲಿ ಒಂಟಿಯಾಗಿ ಓಡಾಡುತ್ತಿದೆ. </p>]]></content:encoded>
      <pubDate>Thu, 24 May 2018 18:18:00 +0530</pubDate>
      <updatedDate>Thu, 24 May 2018 18:22:06 +0530</updatedDate>
      <category><![CDATA[Religious Journey]]></category>
      <authorname>jagadish</authorname>
    </item>
    <item>
      <title><![CDATA[ಮದುರೈ ಮೀನಾಕ್ಷಿ ಬ್ರಿಟೀಷ್ ಕಲೆಕ್ಟರ್‌ಗೆ ಕಾಣಿಸಿಕೊಂಡಿದ್ದು!]]></title>
      <link>https://kannada.webdunia.com/article/religious-journey/madurai-meenakshi-comes-in-british-collector-dream-118020200053_1.html</link>
      <guid>https://kannada.webdunia.com/article/religious-journey/madurai-meenakshi-comes-in-british-collector-dream-118020200053_1.html</guid>
      <media:thumbnail url="https://nonprod-media.webdunia.com/public_html/_media/kn/img/article/2018-02/02/thumb/1_1/1517580486-501.jpg"/>
      <image>https://nonprod-media.webdunia.com/public_html/_media/kn/img/article/2018-02/02/thumb/1_1/1517580486-501.jpg</image>
      <description><![CDATA[ಇದೊಂದು ನೈಜ ಕಥೆ. 1812 ರಿಂದ 1828 ರಲ್ಲಿ ಪ್ರಸ್ತುತ ತಮಿಳುನಾಡಿನ ಮದುರೈಗೆ ಕಲೆಕ್ಟರ್ ಆಗಿ ರೋಸ್ ಪೀಟರ್ ಎಂಬ ಬ್ರಿಟೀಷ್ ಕಲೆಕ್ಟರ್ ನೇಮಕಗೊಂಡಿದ್ದರು. ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ ಸಹ ಹಿಂದೂ ಧರ್ಮಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದರು ಮತ್ತು ಸ್ಥಳೀಯ ಪದ್ಧತಿಗಳಿಗೆ ...]]></description>
      <content:encoded><![CDATA[<p>
	<strong>ಇದೊಂದು ನೈಜ ಕಥೆ. 1812 ರಿಂದ 1828 ರಲ್ಲಿ ಪ್ರಸ್ತುತ ತಮಿಳುನಾಡಿನ ಮದುರೈಗೆ ಕಲೆಕ್ಟರ್ ಆಗಿ ರೋಸ್ ಪೀಟರ್ ಎಂಬ ಬ್ರಿಟೀಷ್ ಕಲೆಕ್ಟರ್ ನೇಮಕಗೊಂಡಿದ್ದರು. ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ ಸಹ ಹಿಂದೂ ಧರ್ಮಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದರು ಮತ್ತು ಸ್ಥಳೀಯ ಪದ್ಧತಿಗಳಿಗೆ ಹೆಚ್ಚು ಗೌರವ ಸೂಚಿಸುತ್ತಿದ್ದರು.</strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" src="http://media.webdunia.com/_media/kn/img/article/2018-02/02/full/1517580486-501.jpg" style="border: 1px solid rgb(221, 221, 221); margin-right: 0px; z-index: 0; width: 650px; height: 713px;" title="" /></p>
	</p>
</p>
<p>
	ರೋಸ್ ಪೀಟರ್ ಅವರು ಎಲ್ಲಾ ಧರ್ಮದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು ಎಂದು ಹೇಳುತ್ತಾರೆ. ಅವರ ಈ ನಡವಳಿಕೆಯಿಂದಾಗಿ ಅವರ ಹೆಸರು ಹೆಚ್ಚು ಪ್ರಚಲಿತವಾಯಿತು.</p>
<p>
	 </p>
<p>
	ತಮಿಳುನಾಡಿನ ಪ್ರಸಿದ್ಧ ಮೀನಾಕ್ಷಿ ಅಮ್ಮನ ದೇವಸ್ಥಾನವು ಪೀಟರ್ ಅವರ ಮನೆ ಹಾಗೂ ಕಚೇರಿಯ ನಡುವೆ ಇತ್ತು. ಈ ಕಾರಣದಿಂದಾಗಿ ಅವರು ದಿನವೂ ತಮ್ಮ ಕಚೇರಿಗೆ ಹೋಗುವಾಗ ಮೀನಾಕ್ಷಿ ಅಮ್ಮನ ದೇವಸ್ಥಾನದ ಮೂಲಕ ಹಾದು ಹೋಗಬೇಕಾಗಿತ್ತು, ಅವರು ದಿನವೂ ಕುದುರೆಯ ಮೇಲೆ ಹೋಗುತ್ತಿದ್ದರು, ಮೀನಾಕ್ಷಿ ಅಮ್ಮನ ದೇವಸ್ಥಾನ ಬಂದಾಗ, ಅವರು ಕುದುರೆಯಿಂದ ಕೆಳಗಿಳಿದು, ತಮ್ಮ ಹ್ಯಾಟ್ ಮತ್ತು ಶೂಗಳನ್ನು ತೆಗೆದು ತಮ್ಮ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಅವರು ಮೀನಾಕ್ಷಿ ಅಮ್ಮನಿಗೆ ತಮ್ಮ ಗೌರವವನ್ನು ಸೂಚಿಸುತ್ತಿದ್ದರು.</p>
<p>
	 </p>
<p>
	ಒಂದು ದಿನ ಮದುರೈ ನಗರದಲ್ಲಿ ಹೆಚ್ಚು ಮಳೆ ಪ್ರಾರಂಭವಾಯಿತು. ಕಲೆಕ್ಟರ್ ಅವರು ತಮ್ಮ ಮನೆಯಲ್ಲಿ ಮಲಗಿದ್ದರು, ಆಕಸ್ಮಿಕವಾಗಿ ಅವರಿಗೆ ಕಾಲಂದಿಗೆಯ ಶಬ್ದದಿಂದ ಎಚ್ಚವಾಯಿತು, ಅವರು ತಮ್ಮ ಹಾಸಿಗೆಯಿಂದ ಎದ್ದು ಶಬ್ದ ಎಲ್ಲಿನಿಂದ ಬರುತ್ತಿದೆ ಎಂದು ನೋಡಿದರು. ಅವರ ಕಣ್ಣಿಗೆ ಒಬ್ಬ ಆಭರಣಗಳನ್ನು ಧರಿಸಿರುವ ಹುಡುಗಿ ಕಾಣಿಸಿತು ಮತ್ತು ಇವರನ್ನು &#39;ಪೀಟರ್ ಹೊರಗೆ ಬಾ&#39; ಎಂದು ಕರೆಯುತ್ತಿರುವುದು ಕೇಳಿಸಿತು. ಅದನ್ನು ಕೇಳಿಸಿಕೊಂಡು ಅವರು ಮನೆಯಿಂದ ತಕ್ಷಣವೇ ಹೊರಬಂದು ಆ ಓಡುತ್ತಿದ್ದ ಹುಡುಗಿಯನ್ನು ಮಳೆಯಲ್ಲಿಯೇ ಹಿಂಬಾಲಿಸಿದರು. ನಂತರ ತಕ್ಷಣವೇ ಅವರ ಮನೆಯು ಕೆಲವೇ ಕ್ಷಣಗಳಲ್ಲಿ ಕುಸಿದು ಬಿತ್ತು. ನಂತರ ಅವರು ಹಿಂತಿರುಗಿ ನೋಡಿದರೆ ಆ ಹುಡುಗಿ ಓಡುತ್ತಿರುವಂತೆ ಮಾಯವಾದಳು. ಆ ವೇಳೆಯಲ್ಲಿ ಪೀಟರ್ ಅವರು ಆ ಹುಡುಗಿ ಕಾಲಿನಲ್ಲಿ ಅಂದಿಗೆಯೊಂದಿಗೆ ಬರಿಗಾಲಿನಲ್ಲಿ ಯಾವುದೇ ಪಾದುಕೆಗಳಿಲ್ಲದೆಯೇ ಓಡುತ್ತಿರುವುದನ್ನು ಗಮನಿಸಿದರು. ಅವರು ಸಾಕ್ಷಾತ್ ಮೀನಾಕ್ಷಿ ಅಮ್ಮನೇ ತಮ್ಮ ಪ್ರಾಣವನ್ನು ಉಳಿಸಿದಳು ಎಂದು ಅರಿತುಕೊಂಡರು ಮತ್ತು ನಂಬಿದರು.</p>
<p>
	 </p>
<p>
	ಕೆಲವು ದಿನಗಳ ನಂತರ ಮೀನಾಕ್ಷಿ ಅಮ್ಮನಿಗೆ ದೇವಸ್ಥಾನದಲ್ಲಿ ಇಲ್ಲದ ಯಾವುದಾದರೂ ಕಾಣಿಕೆಯನ್ನು ನೀಡಬೇಕೆಂದು ಬಯಸಿದರು. ಇದರ ಕುರಿತು ತಿಳಿದುಕೊಳ್ಳಲು ಅವರು ದೇವಸ್ಥಾನದ ಅರ್ಚಕರ ಬಳಿ ಚರ್ಚಿಸಿ ಒಂದು ಜೊತೆ ಬಂಗಾರದ ಪಾದುಕೆಗಳನ್ನು ಮಾಡಿಸಿಕೊಡುವುದಾಗಿ ಒಪ್ಪಿಕೊಂಡರು. ಇವರು ಮಾಡಿಸಿಕೊಟ್ಟಂತಹ ಪಾದುಕೆಗಳು 412 ಮಾಣಿಕ್ಯ ಕಲ್ಲುಗಳು ಮತ್ತು 80 ವಜ್ರಗಳನ್ನು ಹೊಂದಿದೆ ಮತ್ತು ಅವರ ಹೆಸರು &#39;ಪೀಟರ್&#39; ಎಂದು ಪಾದುಕೆಗಳ ಕೆಳಭಾಗದಲ್ಲಿ ಕೆತ್ತಲಾಗಿದೆ. ಈಗಲೂ ಸಹ ಆ ಪಾದುಕೆಗಳನ್ನು &#39;ಪೀಟರ್ ಪಾದುಕಂ&#39; ಎಂದು ಕರೆಯಲಾಗುತ್ತದೆ.</p>
<p>
	 </p>
<p>
	ಆ ಪಾದುಕೆಗಳನ್ನು ಈಗಲೂ ಸಹ ದೇವಸ್ಥಾನದಲ್ಲಿ ಕಾಪಾಡಲಾಗಿದೆ ಮತ್ತು ಪ್ರತಿ ವರ್ಷ &#39;ಚಿತ್ರಾ ಉತ್ಸವ&#39; ಸಮಯದಲ್ಲಿ, ಈ ಪಾದುಕೆಗಳನ್ನು ಉತ್ಸವ ಮೂರ್ತಿ ಮೀನಾಕ್ಷಿ ಈ ಪಾದುಕೆಗಳನ್ನು ತೊಡುತ್ತಾಳೆ. ಇದೊಂದು ನೈಜ ಸಂಗತಿಯಾಗಿದೆ ಎಂದು ಹೇಳಲಾಗುತ್ತದೆ.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http:// http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html  ">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ. </p>]]></content:encoded>
      <pubDate>Fri, 02 Feb 2018 19:35:00 +0530</pubDate>
      <updatedDate>Fri, 02 Feb 2018 19:38:42 +0530</updatedDate>
      <category><![CDATA[Religious Journey]]></category>
      <authorname>Girish</authorname>
    </item>
    <item>
      <title><![CDATA[ಇವತ್ತು ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ]]></title>
      <link>https://kannada.webdunia.com/article/religious-journey/tirupathi-timmappa-temple-door-will-close-today-117080700022_1.html</link>
      <guid>https://kannada.webdunia.com/article/religious-journey/tirupathi-timmappa-temple-door-will-close-today-117080700022_1.html</guid>
      <media:thumbnail url="https://nonprod-media.webdunia.com/public_html/_media/kn/img/article/2017-06/20/thumb/1_1/1497952243-022.jpg"/>
      <image>https://nonprod-media.webdunia.com/public_html/_media/kn/img/article/2017-06/20/thumb/1_1/1497952243-022.jpg</image>
      <description><![CDATA[ಇವತ್ತು ರಾತ್ರಿ ಖಂಡಗ್ರಾಸ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಸಿದ್ಧ ದೇಗುಲಗಳಿಗೆ ಬೀಗ ಹಾಕಲಾಗುತ್ತದೆ. ಮಂಡ್ಯದ ಚೆಲುವರಾಯಸ್ವಾಮಿ ದೇಗುಲ ಸಹ ಸಂಜೆ ಮುಚ್ಚಲಾಗುತ್ತೆ. ಇತ್ತ, ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಸಹ ಗ್ರಹಣಕ್ಕೆ 6 ಗಂಟೆ ಮುಂಚೆ ಬೀಗ ಜಡಿಯಲಾಗುತ್ತೆ.ತಾಜಾ ಸುದ್ದಿಗಳನ್ನು ಓದಲು ...]]></description>
      <content:encoded><![CDATA[<strong>ಇವತ್ತು ರಾತ್ರಿ ಖಂಡಗ್ರಾಸ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಸಿದ್ಧ ದೇಗುಲಗಳಿಗೆ ಬೀಗ ಹಾಕಲಾಗುತ್ತದೆ. ಮಂಡ್ಯದ ಚೆಲುವರಾಯಸ್ವಾಮಿ ದೇಗುಲ ಸಹ ಸಂಜೆ ಮುಚ್ಚಲಾಗುತ್ತೆ. ಇತ್ತ, ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಸಹ ಗ್ರಹಣಕ್ಕೆ 6 ಗಂಟೆ ಮುಂಚೆ ಬೀಗ ಜಡಿಯಲಾಗುತ್ತೆ.</strong><br />
<p style="float: left;">
	<img align="" alt="" class="imgCont" height="340" src="http://media.webdunia.com/_media/kn/img/article/2017-06/20/full/1497952243-022.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="636" /></p>
<br />
ರಾತ್ರಿ 10.52ಕ್ಕೆ ಗ್ರಹಣ ಆರಂಭವಾಗಲಿದ್ದು, ಇದಕ್ಕೂ 6 ಗಂಟೆ ಮುಂಚೆ ಸಂಜೆ 4.30ಕ್ಕೆ ದೇಗುಲದ ದರ್ಶನ ಸ್ಥಗಿತಗೊಳಿಸಿ, ದೇಗುಲದ ಬಾಗಿಲು ಮುಚ್ಚಲಾಗುವುದು ಎಂದು ಟಿಟಿಡಿ ತಿಳಿಸಿದೆ. ಕಲ್ಯಾಣೋತ್ಸವ ಬ್ರಹ್ಮೋತ್ಸವ ೆಲ್ಲ ಕಾರ್ಯಕ್ರಮಗಳನ್ನ ಸ್ಥಗಿತಗೊಳಿಸಲಾಗಿದೆ.<br />
<br />
ರಾತ್ರಿ 12.48ರ ಸುಮಾರಿಗೆ ಗ್ರಹಣ ಮೋಕ್ಷಕಾಲವಾಗಿದ್ದು, ಗ್ರಹಣ ಮುಗಿದ ಬಳಿಕ ದೇಗುಲದಲ್ಲಿ ಕಬೆಳಗಿನ ಜಾವ ಕೆಲ ಧಾರ್ಮಿಕ ಕಾರ್ಯಗಳನ್ನ ನೆರವೇರಿಸಿ ನಾಳೆ ಮಧ್ಯಾಹ್ನ 2 ಗಂಟೆಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ.<br />
<br />
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ<br />
<br />
 <br />]]></content:encoded>
      <pubDate>Mon, 07 Aug 2017 14:04:00 +0530</pubDate>
      <updatedDate>Mon, 07 Aug 2017 14:24:05 +0530</updatedDate>
      <category><![CDATA[Religious Journey]]></category>
      <authorname>venu</authorname>
    </item>
    <item>
      <title><![CDATA[ಪದ್ಮನಾಭನಗರದಲ್ಲಿ ನಾಳೆ 'ಅಭಯಾಕ್ಷರ - ಹಾಲುಹಬ್ಬ']]></title>
      <link>https://kannada.webdunia.com/article/religious-journey/tomorrow-in-padmanabhanagar-abhakshar-halu-habba-117071400040_1.html</link>
      <guid>https://kannada.webdunia.com/article/religious-journey/tomorrow-in-padmanabhanagar-abhakshar-halu-habba-117071400040_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/03/thumb/1_1/1441260755-7386.jpg"/>
      <image>https://nonprod-media.webdunia.com/public_html/_media/kn/img/article/2015-09/03/thumb/1_1/1441260755-7386.jpg</image>
      <description><![CDATA[ಬೆಂಗಳೂರು: ಗೋವು ಪ್ರೀತಿಯಿಂದ ಕೊಡುವ ಹಾಲನ್ನು ಕುಡಿದು ಸಂಭ್ರಮಿಸಿ, ಭಾರತೀಯ ಗೋವಂಶದ ಮಹತ್ವವನ್ನು ಸಾರುವ 'ಅಭಯಾಕ್ಷರ - ಹಾಲುಹಬ್ಬ' ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರಮಠದ ಕಾಮದುಘಾ ವಿಭಾಗದಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದ್ದು, ನಾಳೆ (15/07/2017)  ...]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/kn/img/article/2015-09/03/full/1441260755-7386.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></p>
	ಗೋವು ಪ್ರೀತಿಯಿಂದ ಕೊಡುವ ಹಾಲನ್ನು ಕುಡಿದು ಸಂಭ್ರಮಿಸಿ, ಭಾರತೀಯ ಗೋವಂಶದ ಮಹತ್ವವನ್ನು ಸಾರುವ &#39;ಅಭಯಾಕ್ಷರ - ಹಾಲುಹಬ್ಬ&#39; ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರಮಠದ ಕಾಮದುಘಾ ವಿಭಾಗದಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದ್ದು, ನಾಳೆ (15/07/2017)  ಪದ್ಮನಾಭನಗರದ ಅಟಲ್ ಬಿಹಾರಿ ಪಾಜಪೇಯಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.00 ಯಿಂದ ನಡೆಯಲಿದೆ. </p>
<p>
	 </p>
<p>
	ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ  ಪದ್ಮನಾಭನಗರ ಶಾಸಕರಾದ ಆರ್ ಅಶೋಕ್ ಉಪಸ್ಥಿತರಿರಲಿದ್ದಾರೆ. ಎ.ಪಿ.ಎಸ್ ಕಾಲಿಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ಆ ಭಾಗದ ಎಲ್ಲಾ ಕಾರ್ಪೊರೇಟರ್ ಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪೂರಕವಾಗಿ ನಡೆಯುವ &#39;ಅಭಯಾಕ್ಷರ&#39; ಅಭಿಯಾನಕ್ಕೆ ಈಗಾಗಲೆ ವಿವಿಧ ಕ್ಷೇತ್ರಗಳ ಗಣ್ಯರು ಸಹಿ ಮಾಡಿ ಬೆಂಬಲ ಸೂಚಿಸಿದ್ದು, ಸಭೆಯಲ್ಲಿ ಭಾಗವಹಿಸಿ ಗೋವಿನ ಕುರಿತಾದ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲಿದ್ದಾರೆ.</p>
<p>
	 </p>
<p>
	ಹಾಲಿತ್ತ ಗೋಮಾತೆಗೆ ಕೃತಜ್ಞತೆ ಅರ್ಪಿಸುವ ಈ ಕಾರ್ಯಕ್ರಮದಲ್ಲಿ, ಗೋಪೂಜೆ, ಗೋಆರತಿ, ಗೋಗ್ರಾಸ ಸಮರ್ಪಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗೋವಿನ ಮಹಿಮೆಯನ್ನು ಅನಾವರನಗೊಳಿಸುವ ಯಕ್ಷಗಾನ ಪ್ರದರ್ಶಿತವಾಗಲಿದೆ. ಗೋವಿನ ಹಾಲನ್ನು ಕರೆಯುವುದರ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲ್ಲಿದ್ದು, ಗೋಮಾಂಸ ಭಕ್ಷಣೆಯಿಂದ ಆಗುವ ಅನಾಹುತಗಳ ಕುರಿತು ವಿಡಿಯೋ ಪ್ರದರ್ಶನ ಇರಲಿದ್ದು, ದೇಶೀ ಗೋವಿನ ಹಾಲಿನಿಂದ ವಿವಿಧ ಖಾದ್ಯಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ನಡೆಯಲಿದೆ. ಗವ್ಯವನ್ನು ಬಳಸಿ ತಯಾರಿಸಿದ ವಿವಿಧ ಸಿದ್ಧ ಗೃಹೋಪಯೋಗಿ ವಸ್ತುಗಳು ಹಾಗೂ ಔಷಧಗಳ ಮಾರಾಟ ಇರಲಿದೆ.</p>
<p>
	 </p>
<p>
	ಕಾರ್ಯಕ್ರಮದ ಆರಂಭಕ್ಕೂ ಮುನ್ನ ಬನಶಂಕರಿ ಬಿಡಿಎ ಬಳಿಯಿಂದ &#39;ಅಭಯಾಕ್ಷರ ರಥಯಾತ್ರೆ&#39; ನಡೆಯಲಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಗೋಕಿಂಕರರಾಗಿ ಸೇವೆಸಲ್ಲಿಸಲು ಇಚ್ಚಿಸುವ ಗೋಪ್ರೇಮಿಗಳಿಗೆ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು &#39;ಗೋದೀಕ್ಷೆ&#39; ನೀಡಲಿದ್ದಾರೆ.</p>
<p>
	 </p>
<p>
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http:// http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ. </p>]]></content:encoded>
      <pubDate>Fri, 14 Jul 2017 19:20:00 +0530</pubDate>
      <updatedDate>Fri, 14 Jul 2017 19:36:01 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಅಕ್ಷಯ ತೃತೀಯ ಎಂದರೇನು..? ಇಂದೇ ಬಂಗಾರ ಖರೀದಿಸುವುದೇಕೆ..?]]></title>
      <link>https://kannada.webdunia.com/article/religious-journey/what-si-the-speciality-of-akshyay-trithiya-day-117042800024_1.html</link>
      <guid>https://kannada.webdunia.com/article/religious-journey/what-si-the-speciality-of-akshyay-trithiya-day-117042800024_1.html</guid>
      <media:thumbnail url="https://nonprod-media.webdunia.com/public_html/_media/kn/img/article/2017-04/28/thumb/1_1/1493378041-6602.jpg"/>
      <image>https://nonprod-media.webdunia.com/public_html/_media/kn/img/article/2017-04/28/thumb/1_1/1493378041-6602.jpg</image>
      <description><![CDATA[ಅಕ್ಷಯ ತೃತೀಯ ಪ್ರಿವರ್ಷ ಈ ದಿನ ಹೆಂಗಳೆಯರ ಬಂಗಾರ ಖರಿದಿ ಭರಾಟೆ ಜೋರಾಗುತ್ತದೆ. ಸಾಮಾನ್ಯ ದಿನಗಳಿಗಿಂತ 10-20 ಪಟ್ಟು ಬಂಗಾರ ಖರೀದಿಯಾಗುತ್ತದೆ. ಇಂದಿನ ಶುಭದಿನ ಒಂದು ಗ್ರಾಂ ಬಂಗಾರ ಖರೀದಿಸಿದರೂ ಸಾಕು ಎನ್ನುವ ಜನರಿದ್ದಾರೆ. ಹಾಗಾದರೆ ಈ ದಿನದ ವಿಶೇಷತೆ ಏನು.. ಈ ದಿನಂದು ಬಂಗಾರ ಖರೀದಿಗೆ ಯಾಕಿಷ್ಟು ...]]></description>
      <content:encoded><![CDATA[ಅಕ್ಷಯ ತೃತೀಯ ಪ್ರಿವರ್ಷ ಈ ದಿನ ಹೆಂಗಳೆಯರ ಬಂಗಾರ ಖರಿದಿ ಭರಾಟೆ ಜೋರಾಗುತ್ತದೆ. ಸಾಮಾನ್ಯ ದಿನಗಳಿಗಿಂತ 10-20 ಪಟ್ಟು ಬಂಗಾರ ಖರೀದಿಯಾಗುತ್ತದೆ. ಇಂದಿನ ಶುಭದಿನ ಒಂದು ಗ್ರಾಂ ಬಂಗಾರ ಖರೀದಿಸಿದರೂ ಸಾಕು ಎನ್ನುವ ಜನರಿದ್ದಾರೆ. ಹಾಗಾದರೆ ಈ ದಿನದ ವಿಶೇಷತೆ ಏನು.. ಈ ದಿನಂದು ಬಂಗಾರ ಖರೀದಿಗೆ ಯಾಕಿಷ್ಟು ಮಹತ್ವ..? ಇಲ್ಲಿದೆ ಕೆಲ ಉಪಯುಕ್ತ ಮಾಹಿತಿ.<br />
 
<p style="float: left;clear: both;">
	<p style="position:relative;display: inline-block;color: #fff;">
		<img align="" alt="" class="imgCont" height="205" src="http://media.webdunia.com/_media/kn/img/article/2017-04/28/full/1493378041-6602.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="353" /></p>
</p>
<br />
ವೈಶಾಖ ಶುಕ್ಲ  ತೃತೀಯ ತಿಥಿಯೆ, ಅಕ್ಷಯ ತೃತೀಯ, ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ಮೂರುವರೆ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಅರ್ಧ ದಿವಸ ಶುಭಕಾರ್ಯಗಳಿಗೆ ಪಂಚಾಂಗ ಶುದ್ದಿ ನೋಡುವ ಅವಶ್ಯಕತೆ ಇರುವುದಿಲ್ಲ.<br />
<br />
ಈ ದಿವಸ ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ. ಈ ಶುಭ ದಿವಸದಂದು ವಿಷ್ಣು ಮತ್ತು ಲಕ್ಷ್ಮೀ, ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ<a href="http://kannada.webdunia.com/search?cx=015955889424990834868:lsmnk3ba8z8&cof=FORID:9&ie=UTF-8&sa=search&siteurl=http://kannada.webdunia.com&q=%E0%B2%85%E0%B2%95%E0%B3%8D%E0%B2%B7%E0%B2%AF+%E0%B2%A4%E0%B3%83%E0%B2%A4%E0%B3%80%E0%B2%AF" target="_blank">ಅಕ್ಷಯ ತೃತೀಯ </a>ದಿವಸ. ಈ ದಿವಸ ಕೃತ ಯುಗದ ಪ್ರಾರಂಭ ದಿನ. ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಹಾಗೂ 12ನೇ ಶತಮಾನದಲ್ಲಿ ಮಹಾ ಪುರುಷ ಬಸವೇಶ್ವರವರು ಜನಿಸಿದ್ದು, ಈ ದಿವಸದಂದು. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಈ ದಿವಸ ವಿಷ್ಣುವಿನ ಪೂಜೆಗೆ ಮೊದಲ ಆದ್ಯತೆಯಿದೆ.<br />
<br />
ಈ ಅಕ್ಷಯ ತೃತೀಯ ದಿವಸ ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಛ ಪ್ರಮಾಣ ತಲುಪಿ ಉಚ್ಚರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ರವಿ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ, ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ದಿವಸವಾಗಿದೆ.<br />
<br />
ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು, ಅಕ್ಷಯ ತೃತೀಯ ದಿವಸವೇ ಆಗಿದೆ. ಹಾಗೂ ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದಿದ್ದು, ಅಕ್ಷಯ ತೃತೀಯದಂದು, ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ಅಕ್ಷಯ ತೃತೀಯ ದಿನದಂದು. ಶ್ರೀಕೃಷ್ಣನು ಕುಚೇಲನನ್ನು ಸತ್ಕರಿಸಿದ ಶ್ರೇಷ್ಠದಿನ.<br />
<br />
ವೇದವ್ಯಾಸರು ಗಣಪತಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಹಾಭಾರತ ಬರೆಯಿಸಲು ಪ್ರಾರಂಭಿಸಿದ್ದು ಅಕ್ಷಯ ತೃತೀಯ ದಿನದಂದು.<br />
<br />
ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ.<br />
<br />
ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗು ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿ ಅನುಷ್ಠಾನ ಮಾಡಿದರೆ ಇಡೀವರ್ಷ ಉತ್ತಮ ಫಲ ದೊರೆಯುತ್ತದೆ. <br />
<br />
ಈ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಹಾಗೂ ಸಮೃದ್ದಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣ ಫಲ ದೊರೆಯಬೇಕೆಂಬ ಸದ್ಬಾವನೆಯಿಂದಲೇ ಆ ಕುರಿತು ಖರೀದಿ ಹೂಡಿಕೆಗಳು ಭರದಿಂದ ನಡೆಯುತ್ತವೆ.<br />
<br />
ಈ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳನ್ನು ಪ್ರಾರಂಭಿಸಬಹುದು ಹಾಗೂ ಚಿನ್ನ, ಬೆಳ್ಳಿ ಆಭರಣ, ಭೂಮಿ ಖರೀದಿಸಬಹುದು ಹಾಗೂ ವಿವಾಹ, ಗೃಹಪ್ರವೇಶ ಮತ್ತು ಇತರೆ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ.<br />
<br />
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ<br />
<br />
 <br />]]></content:encoded>
      <pubDate>Fri, 28 Apr 2017 16:37:00 +0530</pubDate>
      <updatedDate>Fri, 28 Apr 2017 16:44:10 +0530</updatedDate>
      <category><![CDATA[Religious Journey]]></category>
      <authorname>venu</authorname>
    </item>
    <item>
      <title><![CDATA[ದಿನನಿತ್ಯ ದೈವಾರಾಧನೆ ಮಾಡುವ ಪೂಜಾ ಮಂದಿರ ಹೇಗಿರಬೇಕು..?]]></title>
      <link>https://kannada.webdunia.com/article/religious-journey/hindu-home-pooja-room-tips-117041800024_1.html</link>
      <guid>https://kannada.webdunia.com/article/religious-journey/hindu-home-pooja-room-tips-117041800024_1.html</guid>
      <media:thumbnail url="https://nonprod-media.webdunia.com/public_html/_media/kn/img/article/2017-04/18/thumb/1_1/1492514094-2609.jpg"/>
      <image>https://nonprod-media.webdunia.com/public_html/_media/kn/img/article/2017-04/18/thumb/1_1/1492514094-2609.jpg</image>
      <description><![CDATA[ಪೂಜಾ ಮಂದಿರ ಹಿಂದೂಗಳ ಮನೆಯ ಹೃದಯ ಭಾಗ. ಪ್ರತಿ ನಿತ್ಯ ದೈವಾರಾಧನೆ ಮಾಡುವ ಈ ಸ್ಥಳ ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟವಾದದ್ದು. ಹೀಗಾಗಿ, ಈ ಪೂಜಾ ಮಂದಿರದ ಪಾವಿತ್ರ್ಯತೆ ಮತ್ತು ಧನಾತ್ಮಕ ಅಂಶಗಳನ್ನ ಕಾಯ್ದುಕೊಳ್ಳಲು ಅತ್ಯಂತ ಹೆಚ್ಚಿನ ಗಮನ ಹರಿಸಲಾಗುತ್ತೆ.. ಹಾಗಾದರೆ, ಪೂಜಾ ಮಂದಿರ ಹೇಗಿರಬೇಕು..? ...]]></description>
      <content:encoded><![CDATA[<strong>ಪೂಜಾ ಮಂದಿರ ಹಿಂದೂಗಳ ಮನೆಯ ಹೃದಯ ಭಾಗ. ಪ್ರತಿ ನಿತ್ಯ ದೈವಾರಾಧನೆ ಮಾಡುವ ಈ ಸ್ಥಳ ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟವಾದದ್ದು. ಹೀಗಾಗಿ, ಈ ಪೂಜಾ ಮಂದಿರದ ಪಾವಿತ್ರ್ಯತೆ ಮತ್ತು ಧನಾತ್ಮಕ ಅಂಶಗಳನ್ನ ಕಾಯ್ದುಕೊಳ್ಳಲು ಅತ್ಯಂತ ಹೆಚ್ಚಿನ ಗಮನ ಹರಿಸಲಾಗುತ್ತೆ.. ಹಾಗಾದರೆ, ಪೂಜಾ ಮಂದಿರ ಹೇಗಿರಬೇಕು..? ಎಂಬುದರ ಉಪಯುಕ್ತ ಟಿಪ್ಸ್ ಇಲ್ಲಿವೆ.</strong><br />
<br />
<p style="float: left;clear: both;">
	<p style="position:relative;display: inline-block;color: #fff;">
		<img align="" alt="" class="imgCont" height="450" src="http://media.webdunia.com/_media/kn/img/article/2017-04/18/full/1492516827-2788.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="337" /></p>
</p>
  <br />
1.    ದೇವರ ಮನೆಯಲ್ಲಿರುವ ದೇವರ ವಿಗ್ರಹಗಳನ್ನ ಪಕ್ಕ ಪಕ್ಕದಲ್ಲಿ ಇಡಬೇಡಿ. ಕನಿಷ್ಠ ಪಕ್ಷ ಒಂದು ಇಂಚಿನಷ್ಟು ಅಂತರವಿರಲಿ.<br />
<br />
2.  ಒಂದೇ ದೇವರ ವಿಗ್ರಹಗಳು ಒಂದಕ್ಕಿಂತ ಹೆಚ್ಚಿದ್ದರೆ ಎದುರು ಬದುರಾಗಿ ಇಡಬೇಡಿ. ಇದು ಮನೆಯಲ್ಲಿ ಸಮಸ್ಯೆ ಸೃಷ್ಟಿಮಾಡುತ್ತೆ.  <br />
<br />
3.  ಮೆಟ್ಟಿಲಿನ ಕೆಳಗೆ ಅಥವಾ ಕತ್ತಲು ಆವರಿಸಿರುವ ಜಾಗದಲ್ಲಿ ಪೂಜಾ ಮಂದಿರ ನಿರ್ಮಿಸುವುದು ಶೂಭದಾಯಕವಲ್ಲ. ಇದರಿಂದ ನಿಮ್ಮ ಪ್ರಾರ್ಥನೆ ಫಲಪ್ರದವಾಗುವುದಿಲ್ಲ.<br />
<br />
4.  ದಕ್ಷಿಣ ಮತ್ತು ಪಶ್ಚಿಮ ಭಾಗಕ್ಕೆ ಪೂಜಾಗೃಹ ನಿರ್ಮಿಸುವುದು ಸೂಕ್ತವಲ್ಲ. ಪೂರ್ವ ಮತ್ತು ಉತ್ತರಕ್ಕೆ ಪೂಜಾ ಗೃಹ ನಿರ್ಮಾಣ ಶ್ರೇಷ್ಠವಾದದ್ದು. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರಲಿದೆ.<br />
<br />
5.   ಮಲಗುವಾಗ ನಿಮ್ಮ ಕಾಲನ್ನ ಪೂಜಾ ಮಂದಿರದ ಕಡೆ ಹಾಕಬೇಡಿ<br />
<br />
6.  ಪೂಜಾ ಮಂದಿರದ ಛಾವಣಿ ಮನೆಗೆ ಛಾವಣಿ ನಡುವಿನ ಜಾಗದಲ್ಲಿ ಕತ್ತಲು ಆವರಿಸದಂತೆ ನೋಡಿಕೊಳ್ಳಿ. <br />]]></content:encoded>
      <pubDate>Tue, 18 Apr 2017 16:39:00 +0530</pubDate>
      <updatedDate>Tue, 18 Apr 2017 17:30:32 +0530</updatedDate>
      <category><![CDATA[Religious Journey]]></category>
      <authorname>venu</authorname>
    </item>
    <item>
      <title><![CDATA[ಗವಿಗಂಧಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ]]></title>
      <link>https://kannada.webdunia.com/article/karnataka-news/sun-s-rays-passes-over-shiva-linga-at-gavi-gangadhareshwara-117011400002_1.html</link>
      <guid>https://kannada.webdunia.com/article/karnataka-news/sun-s-rays-passes-over-shiva-linga-at-gavi-gangadhareshwara-117011400002_1.html</guid>
      <media:thumbnail url="https://nonprod-media.webdunia.com/public_html/_media/kn/img/article/2017-01/14/thumb/1_1/1484364017-8457.jpg"/>
      <image>https://nonprod-media.webdunia.com/public_html/_media/kn/img/article/2017-01/14/thumb/1_1/1484364017-8457.jpg</image>
      <description><![CDATA[ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸಿ ಹಾಗುಹೋಗುವ ಕೌತುಕ ನಡೆಯಲಿದ್ದು, ಇದನ್ನು ಕಣ್ತುಂಬಿಸಿಕೊಳ್ಳಲು ಭಕ್ತಗಣ ಕಾತುರದಿಂದ ಕಾಯುತ್ತಿದೆ.]]></description>
      <content:encoded><![CDATA[<p>
	<strong>ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸಿ ಹಾಗುಹೋಗುವ ಕೌತುಕ ನಡೆಯಲಿದ್ದು, ಇದನ್ನು ಕಣ್ತುಂಬಿಸಿಕೊಳ್ಳಲು ಭಕ್ತಗಣ ಕಾತುರದಿಂದ ಕಾಯುತ್ತಿದೆ.</strong></p>
<p>
	<br />
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="377" src="http://media.webdunia.com/_media/kn/img/article/2017-01/14/full/1484364017-8457.jpg" style="border: 1px solid #DDD; margin-right: 0px; float: none; z-index: 0;" title="" width="503" /></p>
	</p>
</p>
<p>
	ಮಕರ ಸಂಕ್ರಾಂತಿ ಹಬ್ಬದ ದಿನ ಸೂರ್ಯ ತನ್ನ ಪಥ ಬದಲಿಸುತ್ತಾನೆ.  ಪ್ರತಿವರ್ಷ ಈ ವಿಶೇಷ ದಿನದಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಹಾದು ಹೋಗುತ್ತವೆ.</p>
<p>
	 </p>
<p>
	ಹೀಗಾಗಿ ಇಂದು ಮುಂಜಾನೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೇವಸ್ಥಾನ ಗವಿಯಲ್ಲಿರುವುದರಿಂದ ಏಕಕಾಲಕ್ಕೆ ಕೇವಲ 20 ರಿಂದ 25 ಜನ ಮಾತ್ರ ದೇವರ ದರ್ಶನ ಪಡೆಯ ಬಹುದು. ಹೀಗಾಗಿ ಸೂರ್ಯ ರಶ್ಮಿ ಗಂಗಾಧರನನ್ನು ಸ್ಪರ್ಶಿಸುವ ದೃಶ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ದೇವಸ್ಥಾನದ ದ ಹೊರಗೆ ಎಲ್‌‌ಸಿಡಿ ಮಾನಿಟರ್ ಅಳವಡಿಸಲಾಗಿದೆ.</p>
<p>
	 </p>
<p>
	ಇಂದು ಸಂಜೆ 5.40ಕ್ಕೆ ಸೂರ್ಯ ರಶ್ಮಿ ಲಿಂಗದವನ್ನು ಸ್ಪರ್ಶಿಸಿ ಹಾಗುಹೋಗಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. </p>
<p>
	<br />
	<span style="margin: 0px; padding: 0px; border: 0px; color: rgb(51, 51, 51); font-family: Tunga; font-size: 14px;">ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ </span><a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html" style="margin: 0px; padding: 0px; border: 0px; color: rgb(2, 78, 130); text-decoration: none; cursor: pointer; font-family: Tunga; font-size: 14px;">ಮೊಬೈಲ್ ಆ್ಯಪ್</a><span style="margin: 0px; padding: 0px; border: 0px; color: rgb(51, 51, 51); font-family: Tunga; font-size: 14px;"> ಡೌನ್‍ಲೋಡ್ ಮಾಡಿಕೊಳ್ಳಿ</span></p>]]></content:encoded>
      <pubDate>Sat, 14 Jan 2017 08:45:00 +0530</pubDate>
      <updatedDate>Sat, 14 Jan 2017 08:51:48 +0530</updatedDate>
      <category><![CDATA[karnataka news]]></category>
      <authorname>Jaya</authorname>
    </item>
    <item>
      <title><![CDATA[ಬಂತು ಬಂತು 'ದೀಪಾವಳಿ' ಬಂತು...]]></title>
      <link>https://kannada.webdunia.com/article/religious-journey/deepavali-festival-is-festival-of-lights-116092900027_1.html</link>
      <guid>https://kannada.webdunia.com/article/religious-journey/deepavali-festival-is-festival-of-lights-116092900027_1.html</guid>
      <media:thumbnail url="https://nonprod-media.webdunia.com/public_html/_media/kn/img/hp/home-page/2014-10/22/thumb/1_1/1413960177-2918.jpg"/>
      <image>https://nonprod-media.webdunia.com/public_html/_media/kn/img/hp/home-page/2014-10/22/thumb/1_1/1413960177-2918.jpg</image>
      <description><![CDATA[ನಾವು ಖುಷಿ ಪಡುವಂತಹ ಮತ್ತೊಂದು ಶುಭ ದಿನ ದೀಪಾವಳಿ. ನಮ್ಮ ನಾಡಿನಲ್ಲಿ ಹತ್ತು ಹಲವಾರು ಪ್ರಸಿದ್ಧ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ಪ್ರಮುಖ ಹಬ್ಬಗಳಲ್ಲೊಂದು ದೀಪಾವಳಿ ಹಬ್ಬ. ದೀಪಾವಳಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ.]]></description>
      <content:encoded><![CDATA[<p>
	<strong>ನಾವು ಖುಷಿ ಪಡುವಂತಹ ಮತ್ತೊಂದು ಶುಭ ದಿನ ದೀಪಾವಳಿ. ನಮ್ಮ ನಾಡಿನಲ್ಲಿ ಹತ್ತು ಹಲವಾರು ಪ್ರಸಿದ್ಧ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ಪ್ರಮುಖ ಹಬ್ಬಗಳಲ್ಲೊಂದು ದೀಪಾವಳಿ ಹಬ್ಬ. ದೀಪಾವಳಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. </strong></p>
<p>
	<p style="float: left;width:100%;text-align:center;">
		<img align="center" alt="" class="imgCont" height="200" src="http://media.webdunia.com/_media/kn/img/hp/home-page/2014-10/22/full/1413960177-2918.jpg" style="border: 1px solid #DDD; margin-right: 0px; float: none; z-index: 0;" title="ದೀಪಾವಳಿ" width="600" /></p>
	<br />
	 </p>
<p>
	ಇದು ಬೆಳಕಿನ ಹಬ್ಬ. ಈ &#39;ಬೆಳಕಿನ ಹಬ್ಬ&#39;ವು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುತ್ತದೆ ಎನ್ನುವುದು ಜನರ ನಂಬಿಕೆ. ಬೆಳಕಿನ ಹಬ್ಬವನ್ನು ಭಾರತದಲ್ಲಿ ಮ‌ೂರು ದಿವಸಗಳ ಕಾಲ ಆಚರಿಸುತ್ತಾರೆ. &#39;ದೀಪಾವಳಿ&#39; ಬಂತು ಎಂದರೆ ಸಾಕು ಮಕ್ಕಳೆಲ್ಲರೂ ಸಂತೋಷದಿಂದ ನಲಿಯುತ್ತಾರೆ ಯಾಕೆಂದರೆ ಪಟಾಕಿ ಸಿಡಿಸುವ ಹಂಬಲ! </p>
<p>
	 </p>
<p>
	ಹಿಂದೂ ಧರ್ಮದ ಹಲವು ಪುರಾಣ ಕಥೆಗಳಿಗೂ ದೀಪಾವಳಿ ಹಬ್ಬಕ್ಕೂ ಸಂಬಂಧವಿದೆ. ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಿ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಬರುವ ಸಮಯವೆಂದೂ, ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿವಸವೆಂದೂ ಆಚರಿಸುತ್ತಾರೆ. </p>
<p>
	 </p>
<p>
	ಆದರೆ ನಮ್ಮ ತುಳುನಾಡಿನ ಜನರು ದೀಪಾವಳಿಯನ್ನು ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಂದು ಆಚರಿಸುತ್ತಾರೆ. ತುಳುನಾಡಿನಲ್ಲಿ ದೀಪಾವಳಿಯಂದು ಬಲಿಯನ್ನು ಕರೆಯುವ ಸಂಪ್ರದಾಯವುಂಟು, ಬಲಿ ಕಂಭವನ್ನು ಹಾಕಿ ಅದಕ್ಕೆ ದೀಪಹಚ್ಚಿ &#39;ಬಲಿಯೇಂದ್ರ&#39; ಕರೆದು ಅದರ ನಂತರ ಅವಲಕ್ಕಿಯನ್ನು ಪ್ರಸಾದವೆಂದು ಊರಿನವರಿಗೆ ಹಂಚಿ ಪಟಾಕಿ ಸಿಡಿಸುತ್ತಾರೆ.</p>
<p>
	 </p>
<p>
	ದೀಪಾವಳಿಯ ದಿವಸ ಎಲ್ಲರ ಮನೆ ಮನದಲ್ಲಿ ಸಂತೋಷ ತುಳುಕುತ್ತದೆ. ಎಲ್ಲರೂ ಹೊಸ ಉಡುಪುಗಳನ್ನು ಧರಿಸುತ್ತಾರೆ. ಗಂಡಸರೆಲ್ಲರೂ ಪಟಾಕಿ ಸಿಡಿಸುವ ಸಂಭ್ರಮದಲ್ಲಿದ್ದರೆ ಹೆಂಗಸರಿಗೆ ದೀಪ ಬೆಳಗುವ ಸಂಭ್ರಮ. ಅಂದು ಊರಿಗೆ ಊರೇ ದೀಪಾಲಂಕಾರದಿಂದ ಮನಮೋಹಕವಾಗಿ ಕಂಗೊಳಿಸುತ್ತಿರುತ್ತದೆ.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http:// http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 13:49:00 +0530</pubDate>
      <updatedDate>Thu, 29 Sep 2016 13:51:56 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ದೀಪಾವಳಿ ಹಬ್ಬದ ಕತ್ತಲೆಯಿಂದ ಬೆಳಕಿನೆಡೆಗೆ...]]></title>
      <link>https://kannada.webdunia.com/article/religious-journey/deepavali-festival-of-lights-116092900023_1.html</link>
      <guid>https://kannada.webdunia.com/article/religious-journey/deepavali-festival-of-lights-116092900023_1.html</guid>
      <media:thumbnail url="https://nonprod-media.webdunia.com/public_html/_media/kn/img/hp/home-page/2014-10/22/thumb/1_1/1413960177-2918.jpg"/>
      <image>https://nonprod-media.webdunia.com/public_html/_media/kn/img/hp/home-page/2014-10/22/thumb/1_1/1413960177-2918.jpg</image>
      <description><![CDATA[ದೀಪಾವಳಿ ಹಬ್ಬವು ಹಿಂದೂ ಧರ್ಮದವರಿಗೆ ದೀಪಗಳ ಹಬ್ಬ. ಉತ್ತರ ಭಾರತದವರಿಗೆ ಇದು ಹೊಸ ವರ್ಷದ ಆರಂಭ. ದೀಪಾವಳಿ ಹಬ್ಬವು ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಇದರ ಹಿಂದೆ ಹಲವು ಪೌರಾಣಿಕ ಕಥೆಗಳು ಇವೆ. ದೀಪಾವಳಿಯಲ್ಲಿ ಉತ್ತರ ಭಾರತದಲ್ಲಿ ಲಕ್ಷ್ಮಿ ಪೂಜೆಯು ಪ್ರಮುಖವಾಗಿದೆ.]]></description>
      <content:encoded><![CDATA[<p>
	<strong>ದೀಪಾವಳಿ ಹಬ್ಬವು ಹಿಂದೂ ಧರ್ಮದವರಿಗೆ ದೀಪಗಳ ಹಬ್ಬ. ಉತ್ತರ ಭಾರತದವರಿಗೆ ಇದು ಹೊಸ ವರ್ಷದ ಆರಂಭ. ದೀಪಾವಳಿ ಹಬ್ಬವು ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಇದರ ಹಿಂದೆ ಹಲವು ಪೌರಾಣಿಕ ಕಥೆಗಳು ಇವೆ. ದೀಪಾವಳಿಯಲ್ಲಿ ಉತ್ತರ ಭಾರತದಲ್ಲಿ ಲಕ್ಷ್ಮಿ ಪೂಜೆಯು ಪ್ರಮುಖವಾಗಿದೆ.</strong></p>
<p>
	<p style="float: left;width:100%;text-align:center;">
		<img align="center" alt="" class="imgCont" height="200" src="http://media.webdunia.com/_media/kn/img/hp/home-page/2014-10/22/full/1413960177-2918.jpg" style="border: 1px solid #DDD; margin-right: 0px; float: none; z-index: 0;" title="ದೀಪಾವಳಿ" width="600" /></p>
	<br />
	 </p>
<p>
	ಹಿಂದೂ ಧರ್ಮದ ಜನರು ದೀಪಾವಳಿ ಹಬ್ಬವನ್ನು ಪ್ರಪಂಚದ ಎಲ್ಲಡೆ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ. ಹೊಸ ಬಟ್ಟೆಗಳನ್ನು ತೊಟ್ಟು ಸಿಹಿತಿಂಡಿಗಳನ್ನು ಹಂಚಿ ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬದಲ್ಲಿ ಮಕ್ಕಳು ಮಗ್ನವಾಗುತ್ತಾರೆ.</p>
<p>
	 </p>
<p>
	ದೀಪಾವಳಿಯ ಹೊಸ್ತಿಲಲ್ಲಿ ನಿಂತು ನಮ್ಮ ದೇಶದಲ್ಲಿನ ಸ್ಥಿತಿಗತಿಯನ್ನು ಗಮನಿಸಿದಾಗ ಅತ್ಯಂತ ನೋವಿನ ಸಂಗತಿಗಳೇ ಕಾಣುತ್ತವೆ. ಇತ್ತೀಚಿಗೆ ದೇಶದೆಲ್ಲಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಅನೇಕ ಮಂದಿ ಜೀವ ಕಳೆದುಕೊಂಡರು. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜನರು ಭಯಭೀತಿಗೊಳಗಾಗಿದ್ದಾರೆ. ಭಯೋತ್ಪಾದನೆಗೆ ಪ್ರೇರೆಪಿಸುವಂತಹ ಇಂತಹ ಅನೇಕ ಸಂಘಟನೆಗಳ ನಿರ್ಮ‌ೂಲನೆಯಾಗಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಭಾಗದ ಜನರು ಜಾತಿ, ಮತ ಭೇದವಿಲ್ಲದೆ ಕಾರ್ಯಪ್ರವೃತ್ತರಾಗಬೇಕಿದೆ. ಇಂತಹ ದುಷ್ಕೃತ್ಯಗಳನ್ನು ನಡೆಸುವವರ ಮನದ ಕತ್ತಲನ್ನು ಓಡಿಸುವವರು ಯಾರು?</p>
<p>
	 </p>
<p>
	ಅಭಿವೃದ್ಧಿಯ ಪಥದಲ್ಲಿರುವ ಭಾರತವು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯ ಬೆಳಕು ಕಾಣಬೇಕಿದೆ. ಇದಲ್ಲದೆ ಅನೇಕ ಜನರು ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದಾರೆ. ಇಂತಹ ಜನರು ಪರಿಹಾರಕ್ಕಾಗಿ ಎತ್ತ ನೋಡಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಇಂತಹವರ ಮನದಲ್ಲೂ ಬೆಳಕಿನ, ಭರವಸೆಯ ಹಬ್ಬ ಮೂಡಿಸಬೇಕಿದೆ.</p>
<p>
	 </p>
<p>
	ದೇಶದಲ್ಲಿ ಶಾಂತಿ, ಮತ, ಸೌಹಾರ್ದತೆಯನ್ನುಂಟು ಮಾಡಲು ಇಂತಹ ಹಬ್ಬಗಳಿಗೆ ಸಾಧ್ಯವಾಗಲಿ. ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾರುವ ದೀಪಾವಳಿ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಮೂಡಿಸಲಿ.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 13:19:00 +0530</pubDate>
      <updatedDate>Thu, 29 Sep 2016 13:23:13 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ದಸರಾ ಮೈಸೂರು ಶಾಪಿಂಗ್ ಫೆಸ್ಟಿವಲ್; ಕಾದಿವೆ ಬಂಪರ್ ಬಹುಮಾನ]]></title>
      <link>https://kannada.webdunia.com/article/religious-journey/dussehra-mysore-shopping-festival-116092900021_1.html</link>
      <guid>https://kannada.webdunia.com/article/religious-journey/dussehra-mysore-shopping-festival-116092900021_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475135216-9556.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475135216-9556.jpg</image>
      <description><![CDATA[ದಸರಾ ಪ್ರಚಾರಾರ್ಥವಾಗಿ ಮತ್ತು ಮತ್ತು ನಗರದ ಆರ್ಥಿಕತೆ ಹೆಚ್ಚಿಸಲು ದುಬೈ ಶಾಪಿಂಗ್ ಫೆಸ್ಟಿವಲ್ ಮಾದರಿಯಲ್ಲಿ ಮೀಡಿಯಾಟ್ರಿ ಸಂಸ್ಥೆ 'ಮೈಸೂರು ಶಾಪಿಂಗ್ ಫೆಸ್ಟಿವಲ್' ನಡೆಸಲು ಮುಂದಾಗಿದೆ. ದಸರಾದಿಂದ ಆರಂಭವಾಗಿ ದೀಪಾವಳಿಯವರೆಗೆ ಈ ಮಾರಾಟದ ಉತ್ಸವ ನಡೆಯಲಿದೆ.]]></description>
      <content:encoded><![CDATA[<p>
	<strong>ದಸರಾ ಪ್ರಚಾರಾರ್ಥವಾಗಿ ಮತ್ತು ಮತ್ತು ನಗರದ ಆರ್ಥಿಕತೆ ಹೆಚ್ಚಿಸಲು ದುಬೈ ಶಾಪಿಂಗ್ ಫೆಸ್ಟಿವಲ್ ಮಾದರಿಯಲ್ಲಿ ಮೀಡಿಯಾಟ್ರಿ ಸಂಸ್ಥೆ &#39;ಮೈಸೂರು ಶಾಪಿಂಗ್ ಫೆಸ್ಟಿವಲ್&#39; ನಡೆಸಲು ಮುಂದಾಗಿದೆ. ದಸರಾದಿಂದ ಆರಂಭವಾಗಿ ದೀಪಾವಳಿಯವರೆಗೆ ಈ ಮಾರಾಟದ ಉತ್ಸವ ನಡೆಯಲಿದೆ.</strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="332" src="http://media.webdunia.com/_media/kn/img/article/2016-09/29/full/1475135216-9556.jpg" style="border: 1px solid #DDD; margin-right: 0px; float: none; z-index: 0;" title="mysore" width="525" /></p>
	</p>
</p>
<p>
	ಸಂಘಟಕ ಸಂಸ್ಥೆ ಮೀಡಿಯಾಟ್ರಿ ಪ್ರಕಾರ, ಉತ್ಸವವನ್ನು ನಗರದಾದ್ಯಂತ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದ್ದು ವ್ಯಾಪಾರ ಕೇಂದ್ರ ಪ್ರದೇಶಗಳಲ್ಲಿ 1,000ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಸೆಪ್ಟೆಂಬರ್ 24 ರಿಂದ ನವೆಂಬರ್ 5ರ ವರೆಗೆ ನಡೆಯುವ ಈ 43 ದಿನಗಳ ಉತ್ಸವವನ್ನು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿನ ಮಹೇಶ್ ಶರ್ಮಾ ಸೆಪ್ಟೆಂಬರ್ 25ರಂದು ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ನಟ ಕಿಚ್ಚಾ ಸುದೀಪ್ ಈ ಉತ್ಸವದ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. </p>
<p>
	 </p>
<p>
	"ಮೈಸೂರು ಶಾಪಿಂಗ್ ಫೆಸ್ಟಿವಲ್ ವ್ಯಾಪಕ ಸಂಗ್ರಹಗಳನ್ನು ಹೊಂದಿರುವುದರ ಜತೆಗೆ ರಿಯಾಯಿತಿ, ಗಂಟೆಯ, ದೈನಂದಿನ ,ನಾಲ್ಕು- ಸಾಪ್ತಾಹಿಕ ಮತ್ತು ಒಂದು ಬಂಪರ್ ಲಕ್ಕಿ ಲಾಟರಿಯಂತ ಇತರ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಸದಸ್ಯ ಅಂಗಡಿಗಳು ಸಾಮಾನ್ಯ ಅಂಗಡಿಗಳಲ್ಲಿ 500 ರೂ ಸಾಮಾನು ಖರೀದಿ ಮತ್ತು ಬೆಳ್ಳಿ, ಚಿನ್ನ ಮತ್ತು ವಜ್ರ ಐಟಂಗಳ ಖರೀದಿಯಲ್ಲಿ ಕನಿಷ್ಠ 5,000ರೂಪಾಯಿಯನ್ನು ವ್ಯಯಿಸಿದ ಗ್ರಾಹಕರಿಗೆ ಕೂಪನ್‌ಗಳನ್ನು ನೀಡಲಿವೆ. ಬಂಪರ್ ಬಹುಮಾನ ಒಂದು ಮರ್ಸಿಡಿಸ್ ಬೆಂಝ್ ಕಾರು. ಗಂಟೆಯ ಅದೃಷ್ಟ ಲಾಟರಿಗೆ ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಗೆಲ್ಲುವ ಅವಕಾಶವಿದೆ. ದೈನಂದಿನ ಡ್ರಾನಲ್ಲಿ ಚಿನ್ನದ ನಾಣ್ಯ, ಮಂಗಳವಾರಕ್ಕೆ ಸೈಕಲ್, ಗುರುವಾರಕ್ಕೆ ದ್ವಿಚಕ್ರವಾಹನ, ಶುಕ್ರವಾರಕ್ಕೆ ದುಬೈ ಪ್ರವಾಸ ಮತ್ತು ಶನಿವಾರದ ಲಕ್ಕಿ ಡಿಪ್ ಆಗಿ ಕಾರ್‌ನ್ನು ಗೆಲ್ಲುವ ಅವಕಾಶವಿದೆ", ಎಂದು ಮೀಡಿಯಾಟ್ರಿ ಸಂಸ್ಥೆಯ ಬಿ ಎಸ್ ಪ್ರಶಾಂತ್  ಹೇಳಿದ್ದಾರೆ. </p>
<p>
	 </p>
<p>
	ರಾಜ್ಯ ಪ್ರವಾಸೋದ್ಯಮ ಇಲಾಖೆ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ಹೋಟೆಲ್ ಓನರ್ಸ್ ಅಸೋಸಿಯೇಷನ್ ಮತ್ತು ಮೈಸೂರು ಜ್ಯುವೆಲರ್ಸ್ ಅಸೋಸಿಯೇಷನ್ ಈ ಉತ್ಸವಕ್ಕೆ ಬೆಂಬಲ ನೀಡಿದ್ದಾರೆ.  </p>
<p>
	 </p>
<p>
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ</p>]]></content:encoded>
      <pubDate>Thu, 29 Sep 2016 13:15:00 +0530</pubDate>
      <updatedDate>Thu, 29 Sep 2016 13:17:35 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ದಸರಾ ವಿಶೇಷ: ಮಂಜಿನ ಮಡಿಕೇರಿಯಲ್ಲಿ ದಸರಾ ಬೆಳಗು]]></title>
      <link>https://kannada.webdunia.com/article/religious-journey/madikeri-dussehra-special-116092900020_1.html</link>
      <guid>https://kannada.webdunia.com/article/religious-journey/madikeri-dussehra-special-116092900020_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475134806-4621.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475134806-4621.jpg</image>
      <description><![CDATA[ದಸರಾವನ್ನು ಮೈಸೂರು ಸ್ವಾಗತಿಸಿದರೆ... ಮಡಿಕೇರಿ ಬೀಳ್ಕೊಡುತ್ತದೆ... ಈ ಮಾತು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ.]]></description>
      <content:encoded><![CDATA[<p>
	<strong>ದಸರಾವನ್ನು ಮೈಸೂರು ಸ್ವಾಗತಿಸಿದರೆ... ಮಡಿಕೇರಿ ಬೀಳ್ಕೊಡುತ್ತದೆ... ಈ ಮಾತು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. </strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="373" src="http://media.webdunia.com/_media/kn/img/article/2016-09/29/full/1475134806-4621.jpg" style="border: 1px solid #DDD; margin-right: 0px; float: none; z-index: 0;" title="madikeri" width="630" /></p>
	</p>
</p>
<p>
	ಮಡಿಕೇರಿ ದಸರಾ ಎಂದರೆ ಅಲ್ಲಿ ಅಧಿಕಾರಿಗಳ ದರ್ಬಾರ್ ಇಲ್ಲ. ಸರ್ಕಾರದ ಹಸ್ತಕ್ಷೇಪವಿಲ್ಲ. ಜಾತಿ, ಧರ್ಮಗಳ ಹಂಗುಗಳಿಲ್ಲದೆ ಜನರೇ ಜನರಿಗೋಸ್ಕರ ಆಚರಿಸುವ ಜನೋತ್ಸವವಾಗಿದೆ. ಹಾಗಾಗಿ ಇತರೆಡೆ ಆಚರಿಸಲ್ಪಡುವ ದಸರಾಕ್ಕಿಂತ ಮಡಿಕೇರಿ ದಸರಾ ವಿಭಿನ್ನ ಹಾಗೂ ವಿಶಿಷ್ಟವಾಗಿ ಕಂಗೊಳಿಸುತ್ತದೆ.</p>
<p>
	 </p>
<p>
	ಮಡಿಕೇರಿ ದಸರಾ ಹಿಂದಿನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಈ ದಸರಾ ಉತ್ಸವವನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಮಡಿಕೇರಿ ದಸರಾ ಭಾವೈಕ್ಯತೆಯನ್ನು ಸಾರುವ ಉತ್ಸವವಾಗಿದೆ.</p>
<p>
	 </p>
<p>
	ದೊಡ್ಡ ಇತಿಹಾಸವೇ ಇದೆ...</p>
<p>
	 </p>
<p>
	ಮಡಿಕೇರಿಯಲ್ಲಿ ದಸರಾ ಆಚರಣೆ ಇಂದು ನಿನ್ನೆಯದಲ್ಲ ಇದಕ್ಕೆ ಗತ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ. 1781 ರಿಂದ 1809ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯರ್ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರಂತೆ.</p>
<p>
	 </p>
<p>
	ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃ ಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳ ಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ಆ ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು.</p>
<p>
	 </p>
<p>
	ವಿಜಯದಶಮಿಯಂದು ಎಲ್ಲೆಡೆ ದೇವಾಲಯಗಳಲ್ಲಿ ಭಜನೆ, ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಉತ್ಸವಗಳು ನಡೆಯುತ್ತಿದ್ದವು. ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಮೆರವಣಿಗೆ ಆರಂಭವಾಗುತ್ತಿತ್ತು. </p>
<p>
	 </p>
<p>
	ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ - ಹೀಗೆ ಎರಡು ಆನೆಗಳು ಮುನ್ನಡೆದರೆ, ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.</p>
<p>
	 </p>
<p>
	ಆದರೆ ಮಹಾರಾಜರ ಈ ನವರಾತ್ರಿ ಉತ್ಸವ ಹೆಚ್ಚು ದಿನ ನಡೆಯಲಿಲ್ಲ. 1834ರಲ್ಲಿ ಕೊಡಗನ್ನಾಳುತ್ತಿದ್ದ ಚಿಕ್ಕವೀರರಾಜನನ್ನು ಬ್ರಿಟಿಷರು ಸೆರೆಹಿಡಿದರು. ಆ ನಂತರ ನವರಾತ್ರಿ ಉತ್ಸವ ಸಾರ್ವಜನಿಕ ಉತ್ಸವವಾಗಿ ಬದಲಾಯಿತು. ನಂತರ ಮಡಿಕೇರಿಯಲ್ಲಿದ್ದ ಭಜನಾಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರೆಸಿದವು. ಅಲ್ಲದೆ, ಮಡಿಕೇರಿಯ ಕೋಟೆಯನ್ನು ಕಾಯುವ ಕೋಟೆ ಮಾರಿಯಮ್ಮ, ನಗರವನ್ನು ಕಾಯುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು ಕಾಪಾಡುವ ದಂಡಿನ ಮಾರಿಯಮ್ಮ, ಆರೋಗ್ಯ ಹಾಗೂ ಐಶ್ವರ್ಯವನ್ನು ದಯಪಾಲಿಸುವ ಶ್ರೀ ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕು ಶಕ್ತಿದೇವತೆಗಳನ್ನು ಪೂಜಿಸುವ ಮೂಲಕ ತೇರನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವ ಆಚರಣೆ ರೂಢಿಗೆ ಬಂತು.</p>
<p>
	 </p>
<p>
	ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ ಬೀಳುತ್ತಿತ್ತು.</p>
<p>
	 </p>
<p>
	ಮುಂದುವರಿದ ಸಂಪ್ರದಾಯ </p>
<p>
	 </p>
<p>
	ಹಾಗೆ ನೋಡಿದರೆ ಹಾಲೇರಿ ವಂಶಸ್ಥರ ಕಾಲದಿಂದ ಆರಂಭಗೊಂಡ ಮಡಿಕೇರಿ ದಸರಾ ನಂತರದ ಕಾಲದಲ್ಲಿ ನಿಲ್ಲದೆ ಮುಂದುವರೆಯುತ್ತಾ ಬಂದಿರುವುದು ಇತಿಹಾಸವೇ ಎನ್ನಬೇಕು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಗ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ಎಲ್ಲಾ ರೀತಿಯ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ನಿಲ್ಲಲಿಲ್ಲವಂತೆ. ಮುಂದೆ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿಯೂ ಕರಗವನ್ನು ಹೊರಡಿಸುವುದು ನಿಲ್ಲಲಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಮಡಿಕೇರಿ ದಸರಾ ಅಭಿವೃದ್ದಿಯತ್ತ ಸಾಗತೊಡಗಿತು.</p>
<p>
	 </p>
<p>
	ಮೊದಲಿದ್ದ ನಾಲ್ಕು ಮಂಟಪಗಳ ಜೊತೆಗೆ ಇನ್ನು ಕೆಲವು ದೇವಾಲಯಗಳು ಕೂಡ ಮಂಟಪವನ್ನು ಹೊರಡಿಸುವುದರ ಮೂಲಕ ದಸರಾ ಮೆರವಣಿಗೆಗೆ ಕಳೆಕಟ್ಟತೊಡಗಿದವು. 1958ರಲ್ಲಿ ರಾಜಸ್ಥಾನದಿಂದ ಬಂದು ಮಡಿಕೇರಿಯ ನೆಲೆಸಿದ್ದ ಭೀಮಸಿಂಗ್ ಅವರು ಬಾಣೆಮೊಟ್ಟೆಯ ರಘುರಾಮ ಮಂಟಪವನ್ನು ಮೆರವಣಿಗೆಗೆ ಸೇರ್ಪಡೆ ಮಾಡಿದರು. ಆಗ ಮೆರವಣಿಗೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಮಂಟಪದೊಂದಿಗೆ ಪೇಟೆ ಶ್ರೀ ರಾಮಮಂದಿರ, ದೇಚೂರಿನ ರಾಮಮಂದಿರ, ಚಿಕ್ಕಪೇಟೆಯ ಬಾಲಕ ರಾಮಮಂದಿರದ ಮಂಟಪಗಳು ಸಾಗುತ್ತಿದ್ದವು. ಮೊದಲು ಇದ್ದ ನಾಲ್ಕು ಮಂಟಪಗಳು ನಂತರದ ವರ್ಷದಲ್ಲಿ ಐದು, ಏಳು, ಒಂಭತ್ತು ಆಯಿತು. ಬಳಿಕ ಹನ್ನೊಂದಕ್ಕೆ ಏರಿತಾದರೂ ದಸರಾ ಸಮಿತಿ ಮಂಟಪದ ಸಂಖ್ಯೆಯನ್ನು ಹತ್ತಕ್ಕೆ ಸೀಮಿತಗೊಳಿಸಿದೆ.</p>
<p>
	 </p>
<p>
	ಜನೋತ್ಸವವಾಗಿದ್ದು ಯಾವಾಗ...</p>
<p>
	 </p>
<p>
	 </p>
<p>
	ಅವತ್ತು ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನೂ ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್.ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸಿ, ಭಜನಾ ಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.</p>
<p>
	 </p>
<p>
	ಆ ದಿನಗಳಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ದಿಷ್ಟ ಸಮಯದಲ್ಲಿ ಹಾದು ಹೋಗುವಂತೆಯೂ, ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಗೆ ಬಂತು. ಇದರೊಂದಿಗೆ ಮಂಟಪಗಳ ಮೆರವಣಿಗೆಯಲ್ಲಿ ಒಂದು ಧಾರ್ಮಿಕ ಶಿಸ್ತನ್ನು ಕಾಲೇಜು ರಸ್ತೆಯ ರಾಮಮಂದಿರವು ರೂಪಿಸಿತು.</p>
<p>
	 </p>
<p>
	ಅದೇನೆಂದರೆ, ವಿಜಯದಶಮಿ ದಿನದಂದು ನಡೆಯುವ ಮೆರವಣಿಗೆಯಲ್ಲಿ ಪೇಟೆ ಶ್ರೀರಾಮ ಮಂದಿರದ ಮಂಟಪ ಮಂಗಳವಾದ್ಯ ಹಾಗೂ ಕಳಶದೊಂದಿಗೆ ಬಾರದ ಹೊರತು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಕರಗ ಹೊರಡುವಂತಿಲ್ಲ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಕರಗಗಳಾಗಲೀ, ಮಂಟಪಗಳಾಗಲೀ ಮೆರವಣಿಗೆಯಲ್ಲಿ ಬರುವಂತಿಲ್ಲ. ಎಲ್ಲಾ ಕರಗಗಳು ಹಾಗೂ ಮಂಟಪಗಳು ಶ್ರೀದಂಡಿನ ಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರವೇ ಬನ್ನಿ ಕಡಿಯಲು ಮೆರವಣಿಗೆಯಲ್ಲಿ ಸಾಗಬೇಕು. ಹಾಗಾಗಿ ಅಂದು ಪೇಟೆಯ ಶ್ರೀರಾಮಮಂದಿರದಿಂದ ಕಳಶ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಶ್ರಿ ಚೌಟಿ ಮಾರಿಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಕರಗ ಪೂಜೆಯನ್ನು ಸ್ವೀಕರಿಸಿ, ಬಳಿಕ ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯಕ್ಕೆ ಹೋಗಿ ಅಲ್ಲಿಯೂ ಪೂಜೆಯನ್ನು ಸ್ವೀಕರಿಸಿ ಅಲ್ಲಿಂದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಆಗಮಿಸುತ್ತದೆ. ಅದೇ ಸಮಯಕ್ಕೆ ಕೋಟೆ ಮಾರಿಯಮ್ಮ ದೇವಾಲಯದ ಕರಗ ಕೂಡ ಅಲ್ಲಿಗೆ ಬರುತ್ತದೆ. ಬಳಿಕ ಪೇಟೆ ರಾಮಮಂದಿರದ ಕಳಶ ಪೂಜೆ ನಡೆದು ಮೆರವಣಿಗೆ ಸಾಗುತ್ತದೆ.</p>
<p>
	 </p>
<p>
	ಇಂದು ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀಕೋಟೆಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ಹಾಗೂ ಶ್ರೀ ಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.</p>
<p>
	 </p>
<p>
	ವಿಜೃಂಭಿಸತೊಡಗಿದೆ ಉತ್ಸವ </p>
<p>
	 </p>
<p>
	ಹಿಂದೆ ಕೇವಲ ಐದೋ ಹತ್ತೋ ಸಾವಿರ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿದ್ದ ಮಂಟಪಗಳು ಇಂದು ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಜಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆಯಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ. ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿ ಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ದಸರಾ ಸಮಿತಿಯು ಮಡಿಕೇರಿ ದಸರಾಕ್ಕೆ ಮೆರುಗು ನೀಡುವ ಉದ್ದೇಶದಿಂದ ಮೈಸೂರು ದಸರಾ ಮಾದರಿಯಲ್ಲಿ ಒಂಬತ್ತು ದಿನಗಳ ಕಾಲ ಕ್ರೀಡಾಕೂಟ, ಕವಿಗೋಷ್ಠಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.</p>
<p>
	 </p>
<p>
	ಮೈಸೂರು ದಸರಾವನ್ನು ವೀಕ್ಷಿಸಿದ ಬಳಿಕ ಪ್ರವಾಹೋಪಾದಿಯಲ್ಲಿ ಜನ ಮಡಿಕೇರಿ ದಸರಾವನ್ನು ವೀಕ್ಷಿಸಲು ಬರುವುದರಿಂದ ಮೈಸೂರಿನಿಂದ ಮಡಿಕೇರಿಗೆ ಅಂದು ವಿಶೇಷ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಒಮ್ಮೆ ಮಡಿಕೇರಿಯ ಮಂಜಿನಲ್ಲಿ ಮಿಂದೆದ್ದು ದಸರಾ ವೀಕ್ಷಿಸಿ ಹೋದವರು ಆ ಸುಂದರ ಕ್ಷಣವನ್ನು ಎಂದೆಂದಿಗೂ ಮರೆಯಲಾರರು. ಹಾಗಾಗಿಯೇ ಮಡಿಕೇರಿ ದಸರಾದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ ಎಂದರೆ ತಪ್ಪಾಗಲಾರದು.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 13:08:00 +0530</pubDate>
      <updatedDate>Thu, 29 Sep 2016 13:11:04 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಮಹಾನವಮಿ ಮತ್ತು ಕುಮಾರಿ ಪೂಜೆ]]></title>
      <link>https://kannada.webdunia.com/article/religious-journey/mahanavami-and-kumari-pooja-programmes-116092900018_1.html</link>
      <guid>https://kannada.webdunia.com/article/religious-journey/mahanavami-and-kumari-pooja-programmes-116092900018_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475134472-7216.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475134472-7216.jpg</image>
      <description><![CDATA[ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಕುಮಾರಿಯರನ್ನು ದೇವಿ ಸ್ವರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಲ್ಲದೇ ಈ ಪೂಜೆ ಅಪೂರ್ಣವಾಗುತ್ತದೆ ಎಂದು ಕಥೆಗಳು ಹೇಳುತ್ತವೆ. ಕುಮಾರಿಯರ ಮಹಾನವಮಿ ಪೂಜೆಯಿಂದ ಮಾತ್ರ ಸಾಧನೆ ಸಿದ್ದಿಸುತ್ತದೆ.]]></description>
      <content:encoded><![CDATA[<p>
	<strong>ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಕುಮಾರಿಯರನ್ನು ದೇವಿ ಸ್ವರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಲ್ಲದೇ ಈ ಪೂಜೆ ಅಪೂರ್ಣವಾಗುತ್ತದೆ ಎಂದು ಕಥೆಗಳು ಹೇಳುತ್ತವೆ. ಕುಮಾರಿಯರ ಮಹಾನವಮಿ ಪೂಜೆಯಿಂದ ಮಾತ್ರ ಸಾಧನೆ ಸಿದ್ದಿಸುತ್ತದೆ. </strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="677" src="http://media.webdunia.com/_media/kn/img/article/2016-09/29/full/1475134472-7216.jpg" style="border: 1px solid #DDD; margin-right: 0px; float: none; z-index: 0;" title="mahanavami" width="960" /></p>
	</p>
</p>
<p>
	ಎರಡು ವರ್ಷದ ವಯಸ್ಸಿನ ಬಾಲಕಿಯರಿಗೆ ಕುಮಾರಿ, ಎರಡು ವರ್ಷಕ್ಕಿಂತ ಹೆಚ್ಚು ಮೂರು ವರ್ಷದೊಳಗಿನ ಬಾಲಕಿಯರನ್ನು ತ್ರಿಮೂರ್ತಿ, ಮೂರು ವರ್ಷಕ್ಕಿಂತ ಹೆಚ್ಚು ನಾಲ್ಕು ವರ್ಷದೊಳಗಿನ ಬಾಲಕಿಯರನ್ನು ಕಲ್ಯಾಣಿ, ನಾಲ್ಕು ವರ್ಷಕ್ಕಿಂತ ಹೆಚ್ಚು ಐದು ವರ್ಷದೊಳಗಿನ ಬಾಲಕಿಯರನ್ನು ರೋಹಿಣಿ, ಐದು ವರ್ಷಕ್ಕಿಂತ ಹೆಚ್ಚು ಆರು ವರ್ಷದೊಳಗಿನ ಬಾಲಕಿಯರನ್ನು ಕಾಲಿಕಾ, ಆರು ವರ್ಷಕ್ಕಿಂತ ಹೆಚ್ಚು ಏಳು ವರ್ಷದೊಳಗಿನ ಬಾಲಕಿಯರನ್ನು ಚಂಡಿಕಾ, ಏಳು ವರ್ಷಕ್ಕಿಂತ ಹೆಚ್ಚು ಎಂಟು ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರನ್ನು ಶಾಂಭವಿ, ಎಂಟು ವರ್ಷಕ್ಕಿಂತ ಹೆಚ್ಚು ಒಂಬತ್ತು ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರನ್ನು ದುರ್ಗಾ, ಒಂಬತ್ತು ವರ್ಷಕ್ಕಿಂತ ಹೆಚ್ಚು ಹತ್ತು ವರ್ಷದೊಳಗಿನ ಬಾಲಕಿಯರನ್ನು ಸುಭದ್ರಾ ಎಂದು ಅರ್ಚಿಸಲಾಗುತ್ತದೆ.</p>
<p>
	 </p>
<p>
	ಈ ವಯಸ್ಸಿನ ಬಾಲಕಿಯರನ್ನು ಅಹ್ವಾನಿಸಿ ಪಾದವನ್ನು ತೊಳೆದು ಪವಿತ್ರ ಸ್ಥಾನದಲ್ಲಿ ಕೂಡಿಸಿ, ಕುಮಾರಿಯ ಸಮ್ಮುಖದಲ್ಲಿ ತಮ್ಮ ಬೇಡಿಕೆಗಳನ್ನು ಉಚ್ಚರಿಸಬೇಕು. ತಮ್ಮ ಯೋಗ್ಯತೆಯ ಅನ್ವಯ ವಸ್ತ್ರ, ಅಲಂಕಾರ, ಪುಷ್ಪ, ಮಾಲೆ, ತೈಲ, ಚಂದನ, ಕುಂಕುಮ, ಕಾಡಿಗೆ, ಇವುಗಳನ್ನು ದೇವಿಯ ರೂಪದ ಕುಮಾರಿಗೆ ಅರ್ಪಣೆ ಮಾಡಬೇಕು. ನಂತರ ಕುಮಾರಿಗೆ ಸಂತೋಷದಿಂದ ಮೃಷ್ಟಾನ್ನ ಭೋಜನವನ್ನು ಬಡಿಸಬೇಕು.</p>
<p>
	 </p>
<p>
	ಕುಮಾರಿಯ ಭೋಜನ ಪೂರ್ಣವಾದ ನಂತರ ಕೈ ಬಾಯಿಗಳನ್ನು ತೊಳೆದು, ಕುಮಾರಿಗೆ ಫಲ ಆಹಾರಗಳನ್ನು ನೀಡಿ ಗೌರವಿಸಿ ಮನೆಯ ಮುಂಬಾಗಿಲಿನವರೆಗೆ ಬೀಳ್ಕೊಡಬೇಕಾಗುತ್ತದೆ. ಕುಮಾರಿಯ ಊಟವಾಗುವವರೆಗೂ ಧೂಪ ಅಥವಾ ದೀಪವನ್ನು ಹಚ್ಚಬೇಕು. ಉಟದ ಸಾಮಾನುಗಳನ್ನು ಸ್ವತಃ ತಂದು ಮೃಷ್ಟಾನ್ನವನ್ನು ಬಡಿಸಬೇಕಾಗುತ್ತದೆ. ಕುಮಾರಿಯ ಊಟದ ನಂತರ ಎಂಜಲು ತೆಗೆಯಬೇಕು. ಕುಮಾರಿಯ ಭೋಜನ ಒಂದು ಮಹಾಪೂಜೆಯಾಗಿದೆ.</p>
<p>
	 </p>
<p>
	ಮನದಲ್ಲಿ ಕುಮಾರಿಯ ಪೂಜೆಯ ಮಹತ್ವ ತಿಳಿದವರು ಮಾತ್ರ ಈ ಪೂಜೆಗೆ ಸಿದ್ಧರಾಗಬೇಕು. ಉದ್ವೇಗ, ಕೋಪಗಳನ್ನು ತ್ಯಜಿಸಬೇಕಾಗುವುದು. ಕುಮಾರಿಯ ಪೂಜೆಯಲ್ಲಿ ಪಾದವನ್ನು ಹೇಗೆ ತೊಳೆಯಬೇಕು, ಎಂಜಲು ಪಾತ್ರೆಯನ್ನು ಹೇಗೆ ತೆಗೆಯಬೇಕು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ದೇವಿಯ ಪೂಜೆಯಂದು ತಿಳಿದು ಕುಮಾರಿಯ ಪೂಜೆ ಮಾಡಿದರೆ ದೇವಿಯ ಪೂಜೆ ಪೂರ್ಣವಾಗುತ್ತದೆ.<br />
	 </p>
<p>
	<strong>ಡಾ.ರಾಮಕೃಷ್ಣ ಡಿ. ತಿವಾರಿ</strong><br />
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http:// http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 13:03:00 +0530</pubDate>
      <updatedDate>Thu, 29 Sep 2016 13:10:26 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಬನ್ನಿ, ನಾಡ ಹಬ್ಬದೊಳಗೆ ನೆಮ್ಮದಿಯನರಸೋಣ..]]></title>
      <link>https://kannada.webdunia.com/article/religious-journey/nadahabba-special-programmes-116092900017_1.html</link>
      <guid>https://kannada.webdunia.com/article/religious-journey/nadahabba-special-programmes-116092900017_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475134280-7596.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475134280-7596.jpg</image>
      <description><![CDATA[ನೆಮ್ಮದಿ ಬೇಕೆನ್ನಿಸಿದರೆ ನೀವು ಮೈಸೂರನ್ನು ಅರಸಲೇಬೇಕು. ಹಳೆಯ ಸೊಗಡಿನ ತಾಳಕ್ಕೆ ನೀವು ಮನಸೋಲಲೇ ಬೇಕು. ಪಾರಂಪರಿಕ ಸೌಧಗಳು, ಅರಮನೆಯ ವೈಭೋಗದ ಕುರುಹುಗಳು, ಭವ್ಯ ಪ್ರಾಕಾರ ಮಂದಿರ, ಮಂಟಪಗಳು, ಹಸಿರುಡುಗೆಯಲ್ಲಿ ಮಿಂದ ಉದ್ಯಾನಗಳು ಒಂದೇ ಎರಡೇ ಮನಗಳ ಸೂರೆಗೊಳ್ಳುವುದಕ್ಕೆ, ಮುದುಡಿದ ಮನಗಳಿಗೆ ಚೇತನ ಕೊಟ್ಟು ...]]></description>
      <content:encoded><![CDATA[<p>
	<strong>ನೆಮ್ಮದಿ ಬೇಕೆನ್ನಿಸಿದರೆ ನೀವು ಮೈಸೂರನ್ನು ಅರಸಲೇಬೇಕು. ಹಳೆಯ ಸೊಗಡಿನ ತಾಳಕ್ಕೆ ನೀವು ಮನಸೋಲಲೇ ಬೇಕು. ಪಾರಂಪರಿಕ ಸೌಧಗಳು, ಅರಮನೆಯ ವೈಭೋಗದ ಕುರುಹುಗಳು, ಭವ್ಯ ಪ್ರಾಕಾರ ಮಂದಿರ, ಮಂಟಪಗಳು, ಹಸಿರುಡುಗೆಯಲ್ಲಿ ಮಿಂದ ಉದ್ಯಾನಗಳು ಒಂದೇ ಎರಡೇ ಮನಗಳ ಸೂರೆಗೊಳ್ಳುವುದಕ್ಕೆ, ಮುದುಡಿದ ಮನಗಳಿಗೆ ಚೇತನ ಕೊಟ್ಟು ಒಂದು ಮಾಡುವುದಕ್ಕೆ!</strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="279" src="http://media.webdunia.com/_media/kn/img/article/2016-09/29/full/1475134280-7596.jpg" style="border: 1px solid #DDD; margin-right: 0px; float: none; z-index: 0;" title="nadahabba" width="425" /></p>
	</p>
</p>
<p>
	ಅರಮನೆಯ ಮುಂದಿನ ವಿಶಾಲ ರಹದಾರಿಯಲ್ಲಿ ಹಳೆಯ ಕುರುಹುಗಳಲ್ಲೊಂದಾದ ಟಾಂಗಾಗಳನ್ನೇರಿ ಸವಾರಿ ಹೊರಟರೆ ಆಹಾ ಏನು ಮಜಾ.. ಅನುಭವಿಸಿಯೇ ತೀರಬೇಕು. ಮೈಸೂರಲ್ಲಿ ವಿಶೇಷವಾದ ಮುಂಬಯಿಯ ವಿಕ್ಟೋರಿಯಾ ಟಾಂಗಾ ಹಾಗೂ ಮೈಸೂರು ಮಹಾರಾಜರ ಕಾಲದ ಷಾ ಪಸಂದ್ ಟಾಂಗಾಗಳಿವೆ. ಈಗಲೂ ಮೈಸೂರ ಮೂಲೆ ಮೂಲೆಗಳಲ್ಲಿ ತಡಕಾಡಿದರೆ ಅಲ್ಲೊಂದು ಇಲ್ಲೊಂದು ಟಾಂಗಾಗಳಲ್ಲಿ ಆ ದಿನಗಳನ್ನು ನೆನಪಿಗೆ ತರುವಂತಹ ಟಾಂಗಾಗಳಿದ್ದು ಅವುಗಳಲ್ಲಿ ದೀಪಗಳಿವೆ. ದಸರಾ ದಿನಗಳಲ್ಲಿ ಮೈಸೂರು ಸುತ್ತಲು ಟಾಂಗಾಗಳಿಗೆ ಎಲ್ಲಿಲ್ಲದ ಬೇಡಿಕೆ. </p>
<p>
	 </p>
<p>
	 </p>
<p>
	ದಸರೆಯ ಈ ದಿನಗಳಲ್ಲಿ ಮೈಸೂರಲ್ಲಿ ನೋಡಲೇನಿದೆ ಅಂತ ಹುಬ್ಬೇರಿಸಬೇಡಿ. ನೋಡುತ್ತಾ ಹೋದರೆ ದಿನಗಳೇ ಸಾಲದು. ಚಾಮುಂಡಿ ಬೆಟ್ಟದ ಬುಡದಲ್ಲಿನ ನಂದಿ, ಮೇಲಿರುವ ಮಹಿಷಾಸುರನಿಂದ ಹಿಡಿದು ಅರಮನೆ, ವಸ್ತು ಪ್ರದರ್ಶನ ಕ್ರೀಡಾಂಗಣ, ಲಲಿತಮಹಲ್ ಪ್ಯಾಲೇಸ್ ಹೀಗೆ ಹತ್ತು ಹಲವಾರು. </p>
<p>
	 </p>
<p>
	ಬಾಂಬೆ ಟಿಫಾನಿಸ್, ಇಂದ್ರ ಭವನ್, ರಾಘವೇಂದ್ರ ಭವನ್, ಬಾಂಬೆ ಪರಾಸ್‌ನಂತಹ ಹಳೆಯ ಹೋಟೆಲ್‌ಗಳು ರಾಜರ ಕಾಲದಿಂದಲೂ ಇದ್ದು, ಇಂದಿಗೂ ತನ್ನ ರುಚಿಗೆ, ಅಚ್ಚುಕಟ್ಟುತನಕ್ಕೆ ಜನಪ್ರಿಯವಾಗಿದೆ. ಇನ್ನು ಮೇಯೋ ಹಾಲ್, ಕ್ಲಾಕ್ ಟವರ್, ಜಗನ್ಮೋಹನ ಪ್ಯಾಲೇಸ್, ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರ, ವೀಣೆ ಶೇಷಣ್ಣನವರ ಗಾನಭಾರತೀ ಹೀಗೆ ಹತ್ತು ಹಲವಾರು ಹಳೆಯ ಕಟ್ಟಡಗಳು ಕಣ್ಮನ ಸೆಳೆಯುತ್ತವೆ.</p>
<p>
	 </p>
<p>
	 </p>
<p>
	ಮೈಸೂರು ಅರಮನೆಯನ್ನು ಇಂಡೋಸಾರ್ಸನಿಕ್ ಶೈಲಿಯಲ್ಲಿ 1897ರಲ್ಲಿ ನಿರ್ಮಿಸಲಾರಂಭಿಸಿ 1912ರಲ್ಲಿ ಪೂರ್ಣಗೊಳಿಸಲಾಯಿತು. ಅಂಬಾವಿಲಾಸ (ಖಾಸಗಿ ದರ್ಬಾರು ನಡೆಯುವ ಸ್ಥಳ), ದಸರಾ ಮೆರವಣಿಗೆಯ ಬೃಹತ್ ತೈಲವರ್ಣದ ಚಿತ್ರಣ, ಕಲ್ಯಾಣ ಮಂಟಪದ ಕೊಠಡಿಗಳನ್ನು ಅರಮನೆ ಒಳಗೊಂಡಿದೆ. ದಸರಾ ಅವಧಿಯಲ್ಲಿ ಮಾತ್ರ ಅರಮನೆಯಲ್ಲಿ ಚಿನ್ನದ ಸಿಂಹಾಸನ ನೋಡಲು ಅವಕಾಶವಿದೆ. ರಾತ್ರಿ ವೇಳೆ ಅರಮನೆಯು 96 ಸಾವಿರ ಬಲ್ಬುಗಳಿಂದ ಬೆಳಗುತ್ತದೆ. </p>
<p>
	 </p>
<p>
	ಇನ್ನು ಚಾಮರಾಜೇಂದ್ರ ಮೃಗಾಲಯ 250 ಎಕೆರೆ ಸ್ಥಳಾವಕಾಶದಲ್ಲಿದೆ. ಇದನ್ನು ರಾಷ್ಟ್ರದ ಪ್ರಥಮ ಮೃಗಾಲಯವೆಂದೂ ಕರೆಯುತ್ತಾರೆ. </p>
<p>
	 </p>
<p>
	ಜಗನ್ಮೋಹನ ಅರಮನೆ 1900ರಲ್ಲಿ ಕಟ್ಟಿದ್ದಾದರೂ ಇಂದಿಗೂ ಮನಮೋಹಕವಾಗಿದೆ. ಇದನ್ನು ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕಲಾ ಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. 1954ರಲ್ಲಿ ಅಧಿಕೃತವಾಗಿ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಇಲ್ಲಿ ರಾಜ ಮನೆತನದವರ ವರ್ಣಚಿತ್ರಗಳು, ರಾಜಾ ರವಿವರ್ಮ ಮತ್ತು ಭಾರತೀಯ ಮತ್ತು ಪಾಶ್ಚಾತ್ಯ ವರ್ಣಚಿತ್ರಗಳನ್ನು ನೋಡಬಹುದಾಗಿದೆ. </p>
<p>
	 </p>
<p>
	ಚಾಮುಂಡಿ ಬೆಟ್ಟ ನೆಲ ಮಟ್ಟದಿಂದ 3,489 ಅಡಿ ಎತ್ತರದಲ್ಲಿದ್ದು 1000 ಮೆಟ್ಟಿಲುಗಳನ್ನು ಹೊಂದಿದೆ. ರಾಜ ಮನೆತನದವರ ಆರಾಧ್ಯದೇವಿಯಾದ ಚಾಮುಂಡೇಶ್ವರಿಯ ಬೃಹತ್ ದೇವಾಲಯವು ಬೆಟ್ಟದ ಮೇಲಿದ್ದು ದ್ರಾವಿಡ ಶೈಲಿಯಲ್ಲಿದೆ. </p>
<p>
	 </p>
<p>
	ಕೆ.ಆರ್.ಎಸ್.ನ ಬೃಂದಾವನ ಮೈಸೂರಿನಿಂದ 15 ಕಿ.ಮಿ. ದೂರದಲ್ಲಿದೆ. ಕೃಷ್ಣ ರಾಜ ಸಾಗರ (ಕೆಆರ್ಎಸ್) ರೂವಾರಿ ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಈ ಪ್ರಾಂತ್ಯಕ್ಕೆ ಅತಿ ದೊಡ್ಡದು. ಈ ಅಣೆಕಟ್ಟೆ 2621 ಮೀಟರಿಷ್ಟು ಉದ್ದ ಮತ್ತು 39 ಮೀಟರಿಷ್ಟು ಎತ್ತರವಿದೆ. ಜಲಾಶಯವು ಸುಮಾರು 130 ಚದರ ಅಡಿ ಕಿ.ಮೀ.ನಷ್ಟು ಪ್ರದೇಶದಲ್ಲಿದೆ. ಜಲಾಶಯದ ಸುತ್ತಲಿರುವ ಉದ್ಯಾನವನ, ಪುಟಿದೇಳುವ ಸಂಗೀತ ಕಾರಂಜಿ, ದೀಪಾಲಂಕಾರದಿಂದ ಅತ್ಯಾಕರ್ಷಕವಾಗಿದೆ. </p>
<p>
	 </p>
<p>
	ಮೈಸೂರು ಎಷ್ಟು ಸುಂದರವೋ ಅಷ್ಟೇ ಸುಂದರವಾದ ಸ್ಥಳಗಳು ಅದರ ಸುತ್ತಮುತ್ತಲಿವೆ. ಅವುಗಳಲ್ಲಿ ಪ್ರಮುಖವಾಗಿ ಶ್ರೀರಂಗಪಟ್ಟಣ, ರಂಗನತಿಟ್ಟು, ನಂಜನಗೂಡನ್ನು ಹೆಸರಿಸಬಹುದು.</p>
<p>
	 </p>
<p>
	ಮೈಸೂರು ಮಲ್ಲಿಗೆ, ಅದರ ಗಂಧ ಎಲ್ಲೆಎಲ್ಲೆಗೆ </p>
<p>
	ಮೈಸೂರು ಮಲ್ಲಿಗೆಯ ತವರೂರು. ಘಮ್ಮೆನುವ ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ ಎಲ್ಲೆ ಎಲ್ಲೆಗೆ ಹರಡಿ ಪರಿಮಳ ಬೀರುತ್ತವೆ. ಮೊಗ್ಗಿನ ಮಾಲೆಯ ಮುಡಿದು ದಸರೆಯ ಸವಾರಿ ನೋಡಲೆಂದು ಹೊರಡುವ ಹೆಂಗಳೆಯರು ಮೈಸೂರ ಚಂದಕ್ಕೊಂದು ಗರಿಮೆಯಾದರೆ ಮಲ್ಲಿಗೆಯ ರಾಶಿ ರಾಶಿಯನ್ನು ದಸರೆಯ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಕಾಣಬಹುದು.</p>
<p>
	 </p>
<p>
	ಬಹುಶಃ ಮೈಸೂರ ಮಲ್ಲಿಗೆಯ ಪರಿಮಳಕ್ಕೆ ಸೋತೇ ಪ್ರೇಮ ಕವಿ ಕೆ.ಎಸ್. ನರಸಿಂಹ ಸ್ವಾಮಿ ತಮ್ಮ ಮೈಸೂರು ಮಲ್ಲಿಗೆ ಕವನ ಸಂಕಲನದಲ್ಲಿ "ಹೂವು ಬೇಕೇ ಎಂದು ಮುಂಬಾಗಿಲಿಗೆ ಬಂದು ಕೇಳಿದಳು, ನಗು ನಗುತ ಹೂವಿನವಳು. ಬುಟ್ಟಿಯಲಿ ನೂರಾರು ಮಲ್ಲಿಗೆ ದಂಡೆಗಳು ನಗುವ ಚೆಲ್ಲಿದುವೆನ್ನ ಮುಖವ ಕಂಡು" ಎಂದು ಬರೆದಿದ್ದಾರೆ. ಮೈಸೂರು ಪ್ರವಾಸಿಗರ ಸ್ವರ್ಗವಷ್ಟೇ ಅಲ್ಲ ಮಲ್ಲಿಗೆಯ ಸೋಪಾನ ಎಂಬುದು ಇಂದಿಗೂ ಮನೆ ಮಾತು. </p>
<p>
	 </p>
<p>
	ದಸರೆಯ ಮುಡಿಗೆ ಮಲ್ಲಿಗೆಯೇ ಬೇಕು. ದಸರೆಯ ದಿನಗಳಲ್ಲಿ ದೇಗುಲಗಳು ಮಲ್ಲಿಗೆಯ ಮಾಲೆಗಳಿಂದ, ಮಲ್ಲಿಗೆಯ ದಂಡೆಗಳಿಂದ ವಿಜೃಂಭಿಸುತ್ತವೆ. ಮಲ್ಲಿಗೆ ಇಂದಿಗೂ ಮೈಸೂರು ನಗರದ ಸುತ್ತ ಮುತ್ತ ಯಥೇಚ್ಛವಾಗಿ ಬೆಳೆಯುವ ಹೂವು. ಮುಂಚೆಲ್ಲಾ ಮೈಸೂರ ಅಂಗಣದ ತುಂಬೆಲ್ಲಾ ಮಲ್ಲಿಗೆಯ ತೋಟಗಳಿದ್ದವು, ಬೀರುವ ಕಂಪಿನಿಂದಾಗಿ ಮುದುಡಿದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ಅದಕ್ಕಿತ್ತು ಆದರೆ ಐಟಿ - ಬಿಟಿಗಳ ಕಂಪು, ಪಾರ್ಥೇನಿಯಂಗಳ ಕಮರು ಹರಡುತ್ತಿದ್ದಂತೆ ಮೈಸೂರಿನಲ್ಲಿ ಇಂದು ಅಷ್ಟೇನೂ ಮಲ್ಲಿಗೆಯ ಭರಾಟೆಯಿಲ್ಲ. ಆದರೆ ಅದರ ಕಂಪು ಇನ್ನೂ ಮಾಸಿಲ್ಲ.</p>
<p>
	 </p>
<p>
	ದಸರೆಯ ಈ ದಿನಗಳಲ್ಲಿ ಮಲ್ಲಿಗೆ ಅಲ್ಲಲ್ಲಿ ಕಂಡರೂ ನೈಜ ಮೈಸೂರು ದುಂಡು ಮಲ್ಲಿಗೆ ಕಾಣಸಿಗುವುದು ವಿರಳ. ಆದರೆ ಮಲ್ಲಿಗೆಯ ಬೀಡಾದ ಮೈಸೂರಲ್ಲೀಗ ತಮಿಳು ಮಲ್ಲಿಗೆಯ ಪರಿಮಳ. ಮೈಸೂರು ಮಲ್ಲಿಗೆ ಹೆಚ್ಚಾಗಿ ಕಾಣಸಿಗುವುದು ಎಚ್.ಡಿ.ಕೋಟೆ, ಹುಣಸೂರು, ನಂಜನಗೂಡಿನ ಆಸುಪಾಸಿನಲ್ಲಿ ಮಾತ್ರ.</p>
<p>
	 </p>
<p>
	ಮೈಸೂರನ್ನು ದೇವಿಯ ತವರೂರೆಂದೇ ಕರೆಯುತ್ತಾರೆ. ದೇವಿಯನ್ನು ಸಂತೃಪ್ತಿಗೊಳಿಸಲು ಮಲ್ಲಿಗೆ ಹೂವಿನ ಪೂಜೆ ಮಾಡಬೇಕೆನ್ನುತ್ತದೆ ನಮ್ಮ ಪುರಾಣಗಳು. ಬಹುಶಃ ಅದಕ್ಕೇ ಇರಬೇಕು ಇಲ್ಲಿ ಇಷ್ಟೊಂದು ಮಲ್ಲಿಗೆ ಹೂವಿನ ರಾಶಿಗಳು, ಮಲ್ಲಿಗೆ ದಂಡೆಗಳು! ವಿಸ್ಮಯ ತರುವ ವಿಚಾರವೆಂದರೆ ಮೈಸೂರು ಒಂದರಲ್ಲೇ ಪ್ರತಿ ದಿನ ಸರಾಸರಿ ಎರಡು ಸಾವಿರ ಕೆ.ಜಿ. ಮಲ್ಲಿಗೆ ಹೂವು ಖರ್ಚಾಗುತ್ತದಂತೆ. ಸಾಧಾರಣವಾಗಿ ಮಲ್ಲಿಗೆಯ ಇಳುವರಿ ಇರುವುದೇ ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ. ದಸರೆ ಬರುವುದೂ ಸಾಧಾರಣವಾಗಿ ಅಕ್ಟೋಬರ್ ತಿಂಗಳಲ್ಲೇ! ಹಾಗಾಗೇ ಮೈಸೂರು ದಸರೆಯಲ್ಲಿ ಮಲ್ಲಿಗೆಯದೇ ಸಡಗರ.</p>
<p>
	 </p>
<p>
	ಮಲ್ಲಯುದ್ಧದ ಸೊಗಡುಳ್ಳ ದಸರೆ ಕ್ರೀಡಾಕೂಟ </p>
<p>
	 </p>
<p>
	ಮೈಸೂರ ದಸರೆಯೆಂದರೆ ಅದೊಂದು ಬಗೆಯ ರೋಮಾಂಚನ. ಮೈನವಿರೇಳುವ ದಸರೆಯ ಹತ್ತು ದಿನದ ಹಬ್ಬದ ಸಾಲಿನ ಹಿಂದೆ ಸಾಂಪ್ರದಾಯಿಕ ಆಚರಣೆಗಳ ಹೂರಣಗಳೇ ಇವೆ. ಅಂದಿನ ಆಳರಸರ ಸಾಂಪ್ರದಾಯಿಕತೆಯ ಹಳೆಯ ದಿನಗಳು ನಿಮ್ಮೆದುರು ತೆರೆದಿಡುತ್ತವೆ. ದಸರೆಯ ಉತ್ಸವದಲ್ಲಿ ಅರಮನೆ ದರ್ಬಾರು, ಚಾಮುಂಡೀ ಪೂಜೆಯೆಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆ ಹಾಗೂ ವಿಶೇಷತೆಯನ್ನು ಹೊಂದಿರುವ ದಸರಾ ಕ್ರೀಡಾ ಕೂಟ, ಆಸಕ್ತರ ಪಾಲಿನ ಸ್ವರ್ಗವೇ ಆಗಿದೆ. ಮಹಾರಾಜರ ಪರಂಪರೆ ಕಳೆಗುಂದಿದಂತೆ ಇಂದಿನ ದಿನದ ದಸರೆ ಕೇವಲ ಸಾಂಕೇತಿಕ ಸಂಭ್ರಮಕ್ಕಷ್ಟೇ ಮೀಸಲಾಗಿದೆ. ಢೀ ಢೀ ಎನ್ನುತ್ತಾ, ಪಟ್ಟುಗಳನ್ನು ಹಾಕುತ್ತಾ ಒಬ್ಬರನ್ನೊಬ್ಬರು ಮೇಲಕ್ಕೆತ್ತಿ ಬೆನ್ನು ತಾಗಿಸುವ ಗುರಿಯಲ್ಲಿ ಶಕ್ತಿ ಪ್ರದರ್ಶನ ನೀಡುವ ಆ ಮಲ್ಲಯುದ್ಧದ ಕುಸ್ತಿಯ ಕ್ಷಣಗಳನ್ನು ಕಾಣಬೇಕೆಂದರೆ ಮೈಸೂರು ದಸರೆಗೆ ಬರಬೇಕು. </p>
<p>
	 </p>
<p>
	ದಸರಾ ಕ್ರೀಡೆಯ ಆನಂದ ಕ್ಷಣಗಳು ಆರಂಭವಾಗುವುದೇ ಜಿಲ್ಲಾ ಮಟ್ಟದ ಕ್ರೀಢಾ ಸ್ಪರ್ಧೆಗಳಿಂದ. ಮಹಾರಾಜರ ಅಂದಿನ ದಿನಗಳಲ್ಲಿ ಯಾವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ದೇಶ, ವಿದೇಶಗಳಿಂದ ಪೈಲ್ವಾನರು ಬರುತ್ತಿದ್ದರೋ, ಯಾವ ಗರಡಿ ಮನೆಗಳು ವಿಜೃಂಭಿಸುತ್ತಿದ್ದವೋ ಅವ್ಯಾವುವೂ ಇಂದಿಲ್ಲ. ಯುವಜನ ಕ್ರೀಡಾ ಇಲಾಖೆಯ ನೆರೆವಿಗೆ ಗರಬಡಿದಂತಿರುವ ಗರಡಿ ಮನೆಗಳಿಗೆ ಈ ದಿನಗಳಲ್ಲಿ ಕಾಯಕಲ್ಪ ಬರುತ್ತದೆ. ಇಲಾಖಾ ಆದೇಶದನುಸಾರ ಜಿಮ್ನ್ಯಾಸ್ಟಿಕ್ ಕೇಂದ್ರಗಳು, ಗರಡಿ ಮನೆಗಳು, ಬಾಡಿ ಬಿಲ್ಡಿಂಗ್ ಸಂಸ್ಥೆಗಳು ತಮ್ಮ ಪಟುಗಳನ್ನು ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ದಸರೆಗಾಗಿಯೇ ರೂಪಿತವಾದ ಅರ್ಧ ಮ್ಯಾರಥಾನ್ ಕ್ರೀಡಾ ಮನೋಭಾವವನ್ನು ಸ್ಥಳೀಯರಲ್ಲಿ ಹೆಚ್ಚಿಸಲು ಅಷ್ಟೇನು ಯಶಸ್ವಿಯಾಗದಿದ್ದರೂ ಸಹ ಹಳೆಯ ಪರಂಪರೆಗಳ ಉಳಿವಿಗಾಗಿ ಒಂದು ಹೆಜ್ಜೆಯನ್ನೇ ಇಟ್ಟಿದೆ. </p>
<p>
	 </p>
<p>
	ಮೈಸೂರು ದಸರೆಯ ಕ್ರೀಡಾಕೂಟದಲ್ಲಿ ಮೂಲಸೌಲಭ್ಯಗಳ ಕೊರತೆ ಕಂಡರೂ ಭಾಗವಹಿಸುವವರ ಆಸಕ್ತಿಗೇನೂ ಕಡಿಮೆ ಇಲ್ಲ. ನೂತನ ದಾಖಲೆಗಳ ಬರವಿದ್ದರೂ ಸಹ ಹೊಸ ಪ್ರತಿಭೆಗಳ ಹುಡುಕಾಟಕ್ಕೊಂದು ತಳಹದಿಯಾಗಿದೆ. ದಶಕದ ಹಿಂದೆಯೇ ಚಾಮುಂಡಿ ಕ್ರೀಡಾಂಗಣವನ್ನು ನಗರದ ಕ್ರೀಡಾ ಮುಕುಟ ಮಣಿಯಾಗಿ ತಲೆ ಎತ್ತಿ ನಿಲ್ಲುವಂತೆ ಅಭಿವೃದ್ದಿ ಪಡಿಸಲಾಗಿದೆ. ಆದರೆ ಇಂದಿನ ಹೊಸ ಕ್ರೀಡೆಗಳ ಆಕರ್ಷಣೆಗಳಿಂದ ಹಳೆಯ ಕ್ರೀಡೆಗಳ ಪ್ರಾಮುಖ್ಯತೆ ದಿನಗಳೆದಂತೆ ಕುಂದುತ್ತಿರುವುದು ಶೋಚನಿಯ ಸಂಗತಿಯಾಗಿದೆ. </p>
<p>
	 </p>
<p>
	ಸದ್ಯಕ್ಕೆ ಮೈಸೂರು ದಸರಾ ಜಂಗೀ ಕುಸ್ತಿಗಷ್ಟೇ ಸೀಮಿತವಾಗಿದೆ. ಅದರ ವ್ಯಾಪ್ತಿ ಇಂದಿನ ದಿನಗಳಿಗನುಗುಣವಾಗಿ ಮತ್ತಷ್ಟು ಹೆಚ್ಚಬೇಕಿದೆ. ಈಜುಗೊಳದಂತಹ ಮುಂದಿನ ಯೋಜನೆಗಳು ಬರೀ ಕಾಗದದಲ್ಲೇ ಉಳಿದಿದ್ದು ಕಾರ್ಯ ರೂಪಕ್ಕೆ ಬರಬೇಕಾದ ಅವಶ್ಯಕತೆ ಹೆಚ್ಚಿದೆ. ದಸರಾ ಕ್ರೀಡಾಕೂಟವು ಗ್ರಾಮೀಣ ಪ್ರತಿಭಾನ್ವಿತರಿಗೆ ತೆರೆದ ಕನ್ನಡಿಯಾಗಬೇಕು ಎಂಬುದೇ ಕ್ರೀಡಾಸಕ್ತರ ಅಂಬೋಣ. ಸಾಂಕೇತಿಕ ನಡೆಯುವ ಕ್ರೀಡಾ ಉತ್ಸವ ಮಹತ್ತರವಾಗಿ ಹೊರಹೊಮ್ಮಬೇಕೆಂಬುದೇ ದಸರಾ ಪ್ರಿಯರ, ದಸರಾ ನೋಡುಗರ ಹೆಬ್ಬಯಕೆ.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 13:00:00 +0530</pubDate>
      <updatedDate>Thu, 29 Sep 2016 13:02:27 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಏನೂಂದ್ರೆ, ನಿಮ್ಮನೇಲಿ ಗೊಂಬೆಗಳ್ನ ಕೂರಿಸಿದ್ರಾ?]]></title>
      <link>https://kannada.webdunia.com/article/religious-journey/dussehra-festival-special-programmes-116092900016_1.html</link>
      <guid>https://kannada.webdunia.com/article/religious-journey/dussehra-festival-special-programmes-116092900016_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475133461-865.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475133461-865.jpg</image>
      <description><![CDATA[ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚೆಲುವಿನ ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ.]]></description>
      <content:encoded><![CDATA[<p>
	<strong>ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚೆಲುವಿನ ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳ ಷೋಕೇಸಿನಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಮೈದಳೆಯುತ್ತವೆ. ಪುಟಿದೆದ್ದ ಚಿನ್ನದಂತೆ ಚಿಣ್ಣರ ಕಣ್ಗಳ ಕನಸಿನ ಕೂಸಾಗಿ ಉಪ್ಪರಿಗೆ ಏರಿ ಮಾಯಾಲೋಕವನ್ನೇ ಸೃಷ್ಟಿ ಮಾಡುತ್ತವೆ.</strong></p>
<p>
	<p style="float: left;width:100%;text-align:center;">
		<img align="center" alt="" class="imgCont" height="483" src="http://media.webdunia.com/_media/kn/img/article/2016-09/29/full/1475133461-865.jpg" style="border: 1px solid #DDD; margin-right: 0px; float: none; z-index: 0;" title="dusherra" width="525" /></p>
</p>
<p>
	ಈ ಲೋಕದಲ್ಲಿ ಬೊಂಬೆಗಳಿಗ್ಯಾವ ಭೇದವಿಲ್ಲ. ಕಿನ್ನರ ಲೋಕದ ಗಂಧರ್ವರಂತೆ ಕ್ರಿಕೆಟಿಗರಿಂದ ಹಿಡಿದು ದೇವ, ದಾನವರ ಜೊತೆಗೆ ರಾಷ್ಟ್ರದ ಹಿರಿಯ ಚೇತನಗಳು, ನೇತಾರರೂ ಸಹ ಇಲ್ಲಿ ಕಾಣಸಿಗುತ್ತಾರೆ. ಗೊಂಬೆಗಳಿಗೆ ಅಲಂಕರಿಸುವುದ ನೋಡುವ ಪರಿಯೇ ವಿಶಿಷ್ಟ. ಅವರವರ ಕಲಾತ್ಮಕ ಭಾವನೆಗಳು ಅಲಂಕಾರದ ಸಾಧನಗಳಾಗಿ, ಕನಸಿನ ಪುತ್ಥಳಿಗಳಾಗಿ ನೋಡುಗರ ಕಣ್ಮನ ಸೆಳೆಯುತ್ತವೆ. ಬೊಂಬೆಗಳನ್ನು ಅಲಂಕರಿಸುವ ಪರಿಪಾಠ ವಿಜಯನಗರದರಸರ ಕಾಲದಿಂದಲೂ ಬಂದಿದೆ. ಸನಾತನ ಸಂಪ್ರದಾಯವನ್ನು ಸವಿಯ ಬೇಕೆನ್ನಿಸಿದರೆ ನೀವು ಮೈಸೂರಿಗೆ ಬರಲೇ ಬೇಕು. ಇಲ್ಲಿನ ಬೀದಿ ಬೀದಿಗಳೂ, ಮನೆ ಮನೆಗಳೂ ಬೊಂಬೆಗಳ ಸಾಲಂಕೃತ. ಮೈಸೂರಲ್ಲಿ ನವರಾತ್ರಿ ಹಬ್ಬದಲ್ಲಿ ಸಿಂಗರಿಸಲಿಕ್ಕೆಂದೇ ಗೊಂಬೆಗಳನ್ನು ತಯಾರಿಸುತ್ತಾರೆ. ಪಕ್ಕದ ಪ್ರಾಂತ್ಯಗಳಾದ ಶ್ರೀರಂಗಪಟ್ಟಣ, ಚೆನ್ನಪಟ್ಟಣ, ರಾಮನಗರಂನಿಂದ ತಯಾರಿಸಿ ತಂದ ಸಾವಿರಾರು ಬೊಂಬೆಗಳು ಈ ದಿನಗಳಲ್ಲಿ ಇಲ್ಲಿ ಮಾರಾಟವಾಗುತ್ತವೆ. </p>
<p>
	 </p>
<p>
	ಒಂದು ಮದುಮಗನಂತೆ ಸಿಂಗರಿಸಿಕೊಂಡ ಗಂಡು ಬೊಂಬೆಯ ಬದಿಯಲ್ಲಿ ಮದುಮಗಳಂತೆ ಸಿಂಗರಿಸಿದ ಹೆಣ್ಣಿನ ಬೊಂಬೆಯನ್ನು ಇರಿಸಿ ಪಟ್ಟಕ್ಕೇರಿಸುತ್ತಾರೆ. ಪಟ್ಟಕ್ಕೆ ಕೂತ ಬೊಂಬೆಯ ಸುತ್ತಣ ಕಿನ್ನರ ಲೋಕವೇ ಸೃಷ್ಟಿಯಾಗುತ್ತದೆ. ಬೊಂಬೆಗಳಿಗೆ ಮತ್ತೂ ಮೆರುಗು ಕೊಡುವಂತೆ ಹಸಿರ ಲೋಕ, ಬಣ್ಣದ ಬೆಳಕಿನ ಲೋಕ, ಪುಟಿದೇಳುವ ನೀರ ಕಾರಂಜಿಯ ಲೋಕವೇ ಸೃಷ್ಟಿಯಾಗುತ್ತದೆ. ಮಂಗಳ ಸೂಚಕವಾಗಿ ಪಟ್ಟದ ಬೊಂಬೆಗಳ ಮುಂದೆ ಕಲಶವನ್ನು ಸ್ಥಾಪಿಸಿ ಹೂವು, ಪತ್ರೆಗಳೇರಿಸಿ ದೈವತ್ವದ ಭಾವನೆಯನ್ನು ಕಾಣುತ್ತಾರೆ. ಸಿಂಗರಿಸಿದ ಬೊಂಬೆಗಳಿಗೆ ಬೊಂಬೆ ಬಾಗಿನ ಮಾಡಿ, ಬೊಂಬೆಗಳ ಮುಂದಿರಿಸಿ ಬೊಂಬೆ ನೋಡಲು ಬರುವ ಚಿಣ್ಣರ ಪುಟ್ಟ ಕೈಗಳ ತುಂಬಾ ಬೊಂಬೆ ಬಾಗಿನದ ತಿಂಡಿಗಳನ್ನಿರಿಸಿ ಸಂತೋಷ ಪಡುತ್ತಾರೆ. ಬೊಂಬೆಗಳ ಹಬ್ಬ ಎಂದರೆ ಚಿಣ್ಣರ ಹಬ್ಬ ಎಂದೇ ರೂಢಿ.</p>
<p>
	 </p>
<p>
	ಆಳರಸರ ಕಾಲದಲ್ಲಿ ದಂತ, ಶ್ರೀಗಂಧ, ಹಿತ್ತಾಳೆ, ಬೆಳ್ಳಿ, ಕಂಚಿನ ಬೊಂಬೆಗಳಿದ್ದರೆ ಕಾಲಕ್ರಮೇಣ ಇಂದು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರೀಸ್, ಪ್ಲಾಸ್ಟಿಕ್, ಪಿಂಗಾಣಿ, ಪೇಪರ್ ಪೇಸ್ಟಿನ ಬೊಂಬೆಗಳು ಕಾಣಬರುತ್ತವೆ. ಅಂದಿನ ಬೊಂಬೆಗಳು ಸಂಸ್ಕೃತಿಯ ಪ್ರತೀಕವಾಗಿದ್ದರೆ ಇಂದಿನ ಬೊಂಬೆಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ.</p>
<p>
	 </p>
<p>
	ಆ ದಿನಗಳಲ್ಲಿ ಬೊಂಬೆಗಳು ಒಂದು ಚರಿತ್ರೆಯನ್ನೇ ಹೇಳುತ್ತಿದ್ದವು ಆದರೆ ಈಗಿನ ದಿನಗಳಲ್ಲಿ ಅದೊಂದು ಸಾಂಪ್ರದಾಯಿಕ ಉತ್ಸವವಾಗಿದ್ದು ವೈವಿಧ್ಯಕ್ಕೆ, ಬಾಹ್ಯಾಡಂಬರಕ್ಕೇ ಹೆಚ್ಚಿನ ಒತ್ತು. ಬೊಂಬೆಗಳೋತ್ಸವದಲ್ಲಿ ವರ್ತಮಾನದ ಕಾಯಕಗಳನ್ನು ಪ್ರತಿಬಿಂಬಿಸುವುದಕ್ಕೇ ಮೊದಲ ಆದ್ಯತೆ. ಮೈಸೂರಲ್ಲಿ ಸುಮಾರು ನಲವತ್ತು, ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬೊಂಬೆ ಕೂಡಿಸುವ ಪರಿಪಾಠ ಇಟ್ಟುಕೊಂಡಿರುವ ಹತ್ತಾರು ಮನೆಗಳನ್ನು ಹಳೇ ಮೈಸೂರು ಪ್ರಾಂತ್ಯದಲ್ಲಿ ನೋಡಬಹುದು. ಉದಾಹರಣೆಗೆ ಅಗ್ರಹಾರದ ಗಾಯತ್ರಿ ಶಂಕರ್‌ರವರು. ಮಹಾಭಾರತ, ರಾಮಾಯಣ, ಮಹಿಷಾಸುರ ಮರ್ದಿನಿ, ಭಾಗವತ ಹೀಗೆ ಹತ್ತು ಹಲವಾರು ಸನ್ನಿವೇಶಗಳು, ಕಥಾನಕಗಳು ಪಟ್ಟದ ಬೊಂಬೆಗಳ ಜೊತೆ ಕಲೆಯಲ್ಲೇ ಅರಳಿ ಬೊಂಬೆಗಳಾಗಿ ನಿಂತಾಗ ನೋಡುವುದೇ ಆನಂದ.</p>
<p>
	 </p>
<p>
	ಆಧುನಿಕ ಜಂಜಾಟದಲ್ಲಿ ಬೊಂಬೆಗಳು ತಮ್ಮ ಸ್ಥಾನ ಕಳೆದುಕೊಳ್ಳುತ್ತಿವೆ. ಬದಲಾದ ಪರಿಸ್ಥಿತಿಗನುಗುಣವಾಗಿ ಬೊಂಬೆಗಳ ಬೆಲೆಗಳೂ ಗಗನಕ್ಕೇರುತ್ತಿದೆ. ಕೊಳ್ಳುಗರು ಕಡಿಮೆಯಾದಂತೆ ಗೊಂಬೆಗಳ ತಯಾರಕರು ಚಿಂತಾಕ್ರಾಂತರಾಗುತ್ತಿದ್ದಾರೆ. ಮಾಡಿದ ಬೊಂಬೆಗಳ ಮಾರಾಟ ಮಾಡಲು ದಸರೆ ಆಸರೆಯಾದೀತೆ ಎಂದು ಆಗಸದತ್ತ ಕೈ ಚೆಲ್ಲಿ ಕೂತಿದ್ದಾನೆ.</p>
<p>
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 12:55:00 +0530</pubDate>
      <updatedDate>Thu, 29 Sep 2016 12:58:36 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ನೋಡ ಬನ್ನಿ ನಮ್ಮೂರಾ ಮೈಸೂರು ದಸರಾ.. ಅದೇನು ಅಂದ ಅದೇನು ಚಂದಾ...]]></title>
      <link>https://kannada.webdunia.com/article/religious-journey/visit-world-famous-mysore-dussehra-116092900015_1.html</link>
      <guid>https://kannada.webdunia.com/article/religious-journey/visit-world-famous-mysore-dussehra-116092900015_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475133810-7444.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475133810-7444.jpg</image>
      <description><![CDATA[ದಸರಾ ಎಂದಾಕ್ಷಣ ವಿದ್ಯುತ್ ಅಲಂಕೃತ ಭವ್ಯ ಅರಮನೆ.... ಮಹಾರಾಜರ ಖಾಸಗಿ ದರ್ಬಾರ್.... ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ.... ಪಂಜಿನ ಕವಾಯತು.... ಹೀಗೆ ಒಂದೇ ಎರಡೇ... ಗತಕಾಲದ ರಾಜವೈಭವ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ.]]></description>
      <content:encoded><![CDATA[<p>
	<strong>ದಸರಾ ಎಂದಾಕ್ಷಣ ವಿದ್ಯುತ್ ಅಲಂಕೃತ ಭವ್ಯ ಅರಮನೆ.... ಮಹಾರಾಜರ ಖಾಸಗಿ ದರ್ಬಾರ್.... ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ.... ಪಂಜಿನ ಕವಾಯತು.... ಹೀಗೆ ಒಂದೇ ಎರಡೇ... ಗತಕಾಲದ ರಾಜವೈಭವ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ.</strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="319" src="http://media.webdunia.com/_media/kn/img/article/2016-09/29/full/1475133810-7444.jpg" style="border: 1px solid #DDD; margin-right: 0px; float: none; z-index: 0;" title="mysore" width="525" /></p>
	</p>
</p>
<p>
	<strong>ಇತಿಹಾಸವೇ ಇದೆ </strong></p>
<p>
	<br />
	ಮೈಸೂರಿನ ದಸರಾ ಇತರೆಡೆಯಲ್ಲಿ ಆಚರಿಸುವ ದಸರಾಕ್ಕಿಂತ ವಿಭಿನ್ನ, ವಿಶಿಷ್ಟ ಹೀಗಾಗಿ ವಿಶ್ವವಿಖ್ಯಾತಿ ಗಳಿಸಿದೆ. ಹಾಗೆ ನೋಡಿದರೆ ಮೈಸೂರು ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತ ಇತಿಹಾಸವೇ ಇದೆ.</p>
<p>
	 </p>
<p>
	ದಸರಾ ಅರ್ಥಾತ್ ವಿಜಯದಶಮಿ - ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದ ಸಂಕೇತವೂ ಹೌದು. ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ.</p>
<p>
	 </p>
<p>
	ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದ್ದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆದಿದ್ದು ಇತಿಹಾಸ.</p>
<p>
	 </p>
<p>
	ವೈಶಿಷ್ಟ್ಯವಿದು ಆಚರಣೆ </p>
<p>
	ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ, ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ.</p>
<p>
	 </p>
<p>
	ಮನರಂಜನಾ ಕಲೆಗಳ ಉತ್ಸವ </p>
<p>
	ಆದರೆ ಈ ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿವೆಯಲ್ಲ, ಅವು ದಸರಾಕ್ಕೆ ಮೆರುಗು ನೀಡುತ್ತವೆ.</p>
<p>
	ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.<br />
	 </p>
<p>
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http:// http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 12:51:00 +0530</pubDate>
      <updatedDate>Thu, 29 Sep 2016 12:54:10 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ]]></title>
      <link>https://kannada.webdunia.com/article/religious-journey/dussehra-festival-of-energy-116092900013_1.html</link>
      <guid>https://kannada.webdunia.com/article/religious-journey/dussehra-festival-of-energy-116092900013_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-09/29/thumb/1_1/1475133461-865.jpg"/>
      <image>https://nonprod-media.webdunia.com/public_html/_media/kn/img/article/2016-09/29/thumb/1_1/1475133461-865.jpg</image>
      <description><![CDATA[ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ಪಡೆಯುತ್ತದೆ. ಶಕ್ತಿಯ ಆರಾಧನೆಯ ಈ ಒಂಬತ್ತು ದಿನಗಳು ಮಹತ್ವಪೂರ್ಣವಾಗಿವೆ.]]></description>
      <content:encoded><![CDATA[<p>
	<strong>ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ಪಡೆಯುತ್ತದೆ. ಶಕ್ತಿಯ ಆರಾಧನೆಯ ಈ ಒಂಬತ್ತು ದಿನಗಳು ಮಹತ್ವಪೂರ್ಣವಾಗಿವೆ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿತವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಈ ಹಬ್ಬವನ್ನು ನವರಾತ್ರಿ ಎಂದು ಕರೆಯುತ್ತಾರೆ.</strong></p>
<p>
	 </p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="483" src="http://media.webdunia.com/_media/kn/img/article/2016-09/29/full/1475133461-865.jpg" style="border: 1px solid #DDD; margin-right: 0px; float: none; z-index: 0;" title="dusherra" width="525" /></p>
	</p>
</p>
<p>
	 </p>
<p>
	 </p>
<p>
	 </p>
<p>
	ನವರಾತ್ರಿ ಎಂದರೆ ಮಹಾಶಕ್ತಿಯ ಆರಾಧನೆಯ ಹಬ್ಬ. ನವರಾತ್ರಿಯಲ್ಲಿ ಮಾತೆ ದುರ್ಗೆಯ ಒಂಬತ್ತು ರೂಪಗಳ ಪೂಜೆಯನ್ನು ನೆರವೇರಿಸಲಾಗುತ್ತದೆ. ದೇವಿ ಮಾತಾ ದುರ್ಗೆಯ ಈ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.</p>
<p>
	 </p>
<p>
	ಭಾರತದಾದ್ಯಂತ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಗುಜರಾತಿನಲ್ಲಿ ನವರಾತ್ರಿಯ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಲದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ. ಪಂಜಾಬ್ ರಾಜ್ಯದಲ್ಲಿ ಕೂಡಾ ಉಪವಾಸ ಮತ್ತು ಜಾಗರಣೆ ಹಾಗೂ ದೇವಿಯ ಪೂಜೆಯನ್ನು ನೆರವೇರಿಸುತ್ತಾರೆ.</p>
<p>
	 </p>
<p>
	ಈ ಒಂಬತ್ತು ದಿನಗಳಲ್ಲಿ ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ನೀಡುವುದಲ್ಲದೇ ಅವರಿಗೆ ದಕ್ಷಿಣೆಯನ್ನು ಕೊಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ಮಾಡುವ ನಿಯಮಗಳು ದೇಶದ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತದೆ.</p>
<p>
	 </p>
<p>
	ಭಾರತದಲ್ಲಿ ಪ್ರತಿಯೊಂದು ಹಬ್ಬದ ಹಿಂದೆ ಒಂದು ಸಂದೇಶವಿರುತ್ತದೆ. ನವರಾತ್ರಿಯಲ್ಲೂ ಕೂಡಾ ಒಂದು ಸಂದೇಶವಿದೆ. ನಮ್ಮ ಸಮಾಜಕ್ಕೆ ಈ ಸಂದೇಶದ ಅಗತ್ಯವಿದೆ. ನವರಾತ್ರಿಯಲ್ಲಿ ಕುಮಾರಿಯರ ಪೂಜೆ ಮಾಡುವುದಲ್ಲದೇ ಅವರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸುವಂತೆ ಸಂದೇಶವನ್ನು ನೀಡುತ್ತದೆ.</p>
<p>
	 </p>
<p>
	ನವರಾತ್ರಿಯ ಹಬ್ಬದ ಸಂದರ್ಭದಲ್ಲಿ ಮಹಿಳೆ ತನ್ನ ಶಕ್ತಿಯನ್ನು ಗುರುತಿಸಿಕೊಂಡು ಅನ್ಯಾಯ ಮತ್ತು ಅನೀತಿಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುವಂತೆ ದುರ್ಗೆಯಲ್ಲಿ ಪ್ರಾರ್ಥಿಸಬೇಕು. ದುರ್ಗಾ ಮಾತೆಯಂತೆ ನಮ್ಮ ಅಸ್ತಿತ್ವವನ್ನು ಬಲಗೊಳಿಸಿ, ಮನಸ್ಸಿನಲ್ಲಿ ಪ್ರೀತಿ ಮತ್ತು ಕರುಣೆಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ನವರಾತ್ರಿ ಪೂಜೆ ಮಾಡುವುದು ಸಾರ್ಥಕವಾಗುತ್ತದೆ.<br />
	 </p>
<p>
	<strong>ನೂಪುರ್ ದೀಕ್ಷಿತ್</strong><br />
	<br />
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>]]></content:encoded>
      <pubDate>Thu, 29 Sep 2016 12:46:00 +0530</pubDate>
      <updatedDate>Thu, 29 Sep 2016 12:49:44 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಮೈಸೂರು ದಸರಾ ಉತ್ಸವ : ನಿಮಗೆ ಗೊತ್ತಿರುವ ಮತ್ತು ಗೊತ್ತಿರದ ಸಂಗತಿಗಳು]]></title>
      <link>https://kannada.webdunia.com/article/religious-journey/mysore-dussehra-special-yod-dont-know-these-things-116092900012_1.html</link>
      <guid>https://kannada.webdunia.com/article/religious-journey/mysore-dussehra-special-yod-dont-know-these-things-116092900012_1.html</guid>
      <media:thumbnail url="https://nonprod-media.webdunia.com/public_html/_media/kn/img/hp/religion-festivals/2014-04/21/thumb/1_1/1398082111-4296.jpg"/>
      <image>https://nonprod-media.webdunia.com/public_html/_media/kn/img/hp/religion-festivals/2014-04/21/thumb/1_1/1398082111-4296.jpg</image>
      <description><![CDATA[ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗಾ ಮಾತೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ.]]></description>
      <content:encoded><![CDATA[<p>
	<strong>1. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗಾ ಮಾತೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. </strong></p>
<p>
	<br />
	<p style="float: left;width:100%;text-align:center;">
		<img align="center" alt="festival" class="imgCont" height="350" src="http://media.webdunia.com/_media/kn/img/hp/religion-festivals/2014-04/21/full/1398082111-4296.jpg" style="border: 1px solid #DDD; margin-right: 0px; float: none; z-index: 0;" title="" width="525" /></p>
	<br />
	 </p>
<p>
	<strong>2. ಲಂಕಾದುಷ್ಟ ರಾವಣನ ಮೇಲೆ ಶ್ರೀ ರಾಮನು ಯುದ್ಧ ಮಾಡಿ ಅಂತಿಮವಾಗಿ ಜಯವನ್ನು ಸಾಧಿಸುತ್ತಾನೆ. ಹೀಗಾಗಿ ದುರ್ಗಾಮಾತೆಯ ಕೃಪೆಯಿಂದಲೇ ಶ್ರೀ ರಾಮನು ಜಯ ಸಾಧಿಸಿದ್ದಾನೆ ಎಂಬುದರ ಸಂಕೇತವಾಗಿ ಉತ್ತರ ಭಾರತದಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಒಂಭತ್ತು ದಿನಗಳ ಕಾಲ ನವರಾತ್ರಿಯನ್ನು ಆಚರಿಸಿ ಕೊನೆಯ ದಿನ ವಿಜಯದ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.</strong></p>
<p>
	 </p>
<p>
	<strong>3 . ವಿಜಯನಗರ ಸಂಸ್ಥಾನದಲ್ಲಿಯೂ ಕೂಡ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ನಂತರದಲ್ಲಿ ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಈ ದಸರಾ ಉತ್ಸವ ಮನೆ ಮನೆಗಳಲ್ಲೂ ಪ್ರಚಲಿತವಾಯಿತು. ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.</strong></p>
<p>
	 </p>
<p>
	<strong>4. ಮೈಸೂರು ದಸರಾ ಸಮಯದಲ್ಲಿ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು. ಹಳೆಯ ಮೈಸೂರು ಪ್ರಾಂತ್ಯದ ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಪಟ್ಟದ ಗೊಂಬೆಗಳನ್ನು ನೀಡುತ್ತಾರೆ.</strong></p>
<p>
	 </p>
<p>
	<strong>5. ವಿಜಯದಶಮಿ ದಿನದಂದು ಲಲಿತಾದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ ಮಾಡಲಾಗುತ್ತದೆ. ಜೊತೆಗೆ ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿಯಾಗಿದೆ.</strong><br />
	<br />
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ <a href="http:// http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‍ಲೋಡ್ ಮಾಡಿಕೊಳ್ಳಿ </p>
<p>
	 </p>]]></content:encoded>
      <pubDate>Thu, 29 Sep 2016 12:40:00 +0530</pubDate>
      <updatedDate>Thu, 29 Sep 2016 12:43:32 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಜನ್ಮಾಷ್ಟಮಿ : ಕೃಷ್ಣ ಪ್ರೀತಿಯ ಐದು ವಿಶೇಷಗಳು]]></title>
      <link>https://kannada.webdunia.com/article/religious-journey/janmashtami-special-five-things-krishna-loved-116082400037_1.html</link>
      <guid>https://kannada.webdunia.com/article/religious-journey/janmashtami-special-five-things-krishna-loved-116082400037_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-08/24/thumb/1_1/1472032305-7989.jpg"/>
      <image>https://nonprod-media.webdunia.com/public_html/_media/kn/img/article/2016-08/24/thumb/1_1/1472032305-7989.jpg</image>
      <description><![CDATA[ಎಲ್ಲರ ಹೃದಯದಲ್ಲೂ ವಿಶೇಷ ಸ್ಥಾನ ಪಡೆದಿರುವ ಕೃಷ್ಣನದು ಪರಿಪೂರ್ಣ ಬದುಕನ್ನು ಹೇಗೆ ಸವಿಯುವುದೆಂದು ಸಂಪೂರ್ಣ ಮಾನವ ಕುಲಕ್ಕೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ. ಎಲ್ಲರ ಮನಸ್ಸಲ್ಲೂ ಸ್ಪೂರ್ತಿಯನ್ನು ಉಕ್ಕಿಸಬಲ್ಲ ಮಾನವರೂಪದಲ್ಲಿ ಬಂದ ದೈವ ಗೋವಿಂದನ ಜನ್ಮದಿನವನ್ನು ಈ ಬಾರಿ, ಗುರುವಾರ ಆಗಸ್ಟ್ 25 ರಂದು ...]]></description>
      <content:encoded><![CDATA[<p>
	<strong>ಎಲ್ಲರ ಹೃದಯದಲ್ಲೂ ವಿಶೇಷ ಸ್ಥಾನ ಪಡೆದಿರುವ ಕೃಷ್ಣನದು ಪರಿಪೂರ್ಣ ಬದುಕನ್ನು ಹೇಗೆ ಸವಿಯುವುದೆಂದು ಸಂಪೂರ್ಣ ಮಾನವ ಕುಲಕ್ಕೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ. ಎಲ್ಲರ ಮನಸ್ಸಲ್ಲೂ ಸ್ಪೂರ್ತಿಯನ್ನು ಉಕ್ಕಿಸಬಲ್ಲ ಮಾನವರೂಪದಲ್ಲಿ ಬಂದ ದೈವ ಗೋವಿಂದನ ಜನ್ಮದಿನವನ್ನು ಈ ಬಾರಿ, ಗುರುವಾರ ಆಗಸ್ಟ್ 25 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. </strong></p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" src="http://media.webdunia.com/_media/kn/img/article/2016-08/24/full/1472032305-7989.jpg" style="border: 1px solid rgb(221, 221, 221); margin-right: 0px; z-index: 0; width: 500px; height: 375px;" title="" /></p>
	</p>
	<br />
	 </p>
<p>
	ಆತನ ವ್ಯಕ್ತಿತ್ವ ಉತ್ಸಾಹ , ಪ್ರಶಾಂತತೆ, ಸದಾಚಾರ ಮತ್ತು ಎಲ್ಲಾ ದೈವತ್ವದ ಮೇಲ್ಮಟ್ಟವನ್ನು ಪ್ರತಿಬಿಂಬಿಸುತ್ತದೆ. ವಿಷ್ಣುವಿನ ಒಂದು ಅವತಾರವಾಗಿ ಭೂಮಿಯ ಮೇಲೆ ಜನಿಸಿದ ಕೃಷ್ಣನಲ್ಲಿ ದೈವಿಕ ಶಕ್ತಿ ಅಮೋಘವಾಗಿದ್ದರೂ ಒಬ್ಬ ಸಾಮಾನ್ಯ ಮನುಷ್ಯನ ರೀತಿಯಲ್ಲಾತ ಬದುಕಿದ.</p>
<p>
	 </p>
<p>
	ಹಿಂದೂ ಧರ್ಮದ ಪ್ರತಿ ದೇವತೆಗಳು ವಿಶಿಷ್ಟ ರೂಪ ಮತ್ತು ದಿವ್ಯ ಪ್ರಭೆಯನ್ನು ಹೊಂದಿರುತ್ತಾರೆ.  ಕೃಷ್ಣನ ವಿಷಯಕ್ಕೆ ಬಂದರೂ ಸಹ ಆ ವಿಭಿನ್ನತೆಯನ್ನು ಕಾಣುತ್ತೇವೆ. ದಿವ್ಯ ಪ್ರೇಮಕ್ಕೆ ಅನ್ವರ್ಥಕ ಎನ್ನಿಸಿಕೊಂಡ ಗೋಪಾಲನ ಜಯಂತಿಯಂದು ಆತನಿಗೆ ಬಹಳ ಪ್ರಿಯವಾದ, ಆತನನ್ನು ಸಂಕೇತಿಸುವ ವಿಷಯಗಳ ಬಗ್ಗೆ  ಅವಲೋಕಿಸೋಣ.</p>
<p>
	 </p>
<p>
	<strong>ನವಿಲು ಗರಿ</strong>: ತಲೆಯಲ್ಲಿ ನವಿಲುಗರಿಯನ್ನು ಸಿಕ್ಕಿಸಿಕೊಂಡಿರದ ಕೃಷ್ಣನನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾದ ಮಾತೇ. ಆತ ಸದಾ ನವಿಲುಗರಿಯೊಂದಿಗೆ ಕಾಣಿಸಿಕೊಳ್ಳುತ್ತಾನೆ.</p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" src="http://media.webdunia.com/_media/kn/img/article/2016-08/24/full/1472032365-8839.jpg" style="border: 1px solid rgb(221, 221, 221); margin-right: 0px; z-index: 0; width: 500px; height: 286px;" title="" /></p>
	</p>
</p>
<p>
	<br />
	<br />
	<strong>ಹಳದಿ ಧೋತಿ</strong>: ಹಳದಿ ಬಣ್ಣದ ಧೋತಿ ಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು . ಹಳದಿ ಧೋತಿ ಆತನ ಸಂಕೇತಗಳಲ್ಲೊಂದು.</p>
<p>
	<p style="float: left;width:100%;text-align:center;">
		<img align="center" alt="" class="imgCont" src="http://media.webdunia.com/_media/kn/img/article/2016-08/24/full/1472032263-7346.jpg" style="border: 1px solid rgb(221, 221, 221); margin-right: 0px; z-index: 0; width: 500px; height: 286px;" title="" /></p>
</p>
<p>
	<strong>ಕೊಳಲು</strong>: ಕೊಳಲಿಲ್ಲದೇ ಕೃಷ್ಣ ಅಪೂರ್ಣ. ಮುರಳಿ ಮನೋಹರ, ಮುರಳಿ ಲೋಲ, ಮುರಳೀಧರ ಎಂದು ಕರೆಸಿಕೊಳ್ಳುವ ಕೃಷ್ಣನಿಗೆ ಸಂಗೀತ ಉಪಕರಣ ಕೊಳಲನ್ನು ನುಡಿಸುವುದೆಂದರೆ ಅತಿಯಾದ ಪ್ರೀತಿ. ಆತನ ಕೊಳಲುಗಾನಕ್ಕೆ ಪ್ರಾಣಿಗಳು, ಸಸ್ಯಗಳು ಭಾವಪರವಶವಾಗುತ್ತಿದ್ದವು ಎನ್ನಲಾಗುತ್ತಿದೆ. <br />
	<p style="float: left;clear: both;">
		<p style="position: relative; display: inline-block; color: rgb(255, 255, 255);">
			<img align="" alt="" class="imgCont" src="http://media.webdunia.com/_media/kn/img/article/2016-08/24/full/1472032588-0451.jpg" style="border: 1px solid rgb(221, 221, 221); margin-right: 10px; padding: 1px; float: left; z-index: 0; width: 600px; height: 286px;" title="" /></p>
	</p>
	`<br />
	<strong>ಮೊಸರು</strong>: ನವನೀತ (ಮೊಸರು) ಚೋರ ಎಂದು ಕರೆಸಿಕೊಳ್ಳುವ ಕೃಷ್ಣ ಬಾಲ್ಯದಲ್ಲಿ ಮೊಸರನ್ನು ಕದಿಯುತ್ತಿದ್ದ. ಅದು ಆತನಿಗೆ ಬಹಳ ಇಷ್ಟದ ತಿನಿಸು. ಶ್ವೇತ ಮೊಸರು ಬಿಳಿ ಬಣ್ಣದಂತಹ ಶುದ್ಧ ಹೃದಯದ ಸಂಕೇತ. ಚಿತ್ತಚೋರ ಎನ್ನಿಸಿಕೊಂರುವ ಕೃಷ್ಣ ಜನರ ಮನಸ್ಸನ್ನು ಕದ್ದು ಅಲ್ಲಿಯೇ ಆಶ್ರಯವನ್ನು ಮಾಡಿಕೊಳ್ಳುತ್ತಾನೆ.</p>
<p>
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="400" src="http://media.webdunia.com/_media/kn/img/article/2016-08/24/full/1472032517-0289.jpg" style="border: 1px solid #DDD; margin-right: 0px; float: none; z-index: 0;" title="" width="700" /></p>
	</p>
</p>
<p>
	 </p>
<p>
	 </p>
<p>
	<strong>ದನಕರು</strong>: ಗೋವು, ಕರುವಿನ ಮೇಲಿನ ಕೃಷ್ಣನ ಪ್ರೇಮ ಎಲ್ಲರಿಗೂ ತಿಳಿದದ್ದೇ. ಆತನ ಗೋ ಪ್ರೀತಿ ದಯಾಳು ಸ್ವಭಾವದ ಪ್ರತೀಕ.<br />
	<p style="float: left;width:100%;text-align:center;">
		<p style="position:relative;display: inline-block;color: #fff;">
			<img align="center" alt="" class="imgCont" height="392" src="http://media.webdunia.com/_media/kn/img/article/2016-08/24/full/1472032756-3269.jpg" style="border: 1px solid #DDD; margin-right: 0px; float: none; z-index: 0;" title="" width="600" /><br />
			<br />
			<br style="color: rgb(51, 51, 51); font-family: Tunga; font-size: 14px; line-height: 20px;" />
			<span style="margin: 0px; padding: 0px; border: 0px; color: rgb(51, 51, 51); font-family: Tunga; font-size: 14px; line-height: 20px;">ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ </span><a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html" style="margin: 0px; padding: 0px; border: 0px; color: rgb(2, 78, 130); text-decoration: none; cursor: pointer; font-family: Tunga; font-size: 14px; line-height: 20px;">ಮೊಬೈಲ್ ಆ್ಯಪ್</a><span style="margin: 0px; padding: 0px; border: 0px; color: rgb(51, 51, 51); font-family: Tunga; font-size: 14px; line-height: 20px;"> ಡೌನ್‍ಲೋಡ್ ಮಾಡಿಕೊಳ್ಳಿ.</span></p>
	</p>
	<br />
	 </p>
<br />]]></content:encoded>
      <pubDate>Wed, 24 Aug 2016 15:12:00 +0530</pubDate>
      <updatedDate>Thu, 25 Aug 2016 11:13:49 +0530</updatedDate>
      <category><![CDATA[Religious Journey]]></category>
      <authorname>Jaya</authorname>
    </item>
    <item>
      <title><![CDATA[ವಜ್ರ ವೈಢೂರ್ಯಗಳಿಂದ ತುಂಬಿ ತುಳುಕುತ್ತಿದ್ದ ಹಂಪಿ ಸಾಮ್ರಾಜ್ಯ]]></title>
      <link>https://kannada.webdunia.com/article/religious-journey/karnataka-tourism-hampi-attracts-tourists-forever-116071500035_1.html</link>
      <guid>https://kannada.webdunia.com/article/religious-journey/karnataka-tourism-hampi-attracts-tourists-forever-116071500035_1.html</guid>
      <media:thumbnail url="https://nonprod-media.webdunia.com/public_html/_media/kn/img/article/2014-05/10/thumb/1_1/1399723870-3657.jpg"/>
      <image>https://nonprod-media.webdunia.com/public_html/_media/kn/img/article/2014-05/10/thumb/1_1/1399723870-3657.jpg</image>
      <description><![CDATA[ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ. ಗುರು ವಿದ್ಯಾರಣ್ಯರ ನಿರ್ದೇಶನದ ಮೇರೆಗೆ ಹರಿಹರ ಮತ್ತು ಬುಕ್ಕ ಕ್ರಿ.ಶ.1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು. ಹಂಪೆ ಅದರ ...]]></description>
      <content:encoded><![CDATA[<p>
	<p>
		ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ. ಗುರು ವಿದ್ಯಾರಣ್ಯರ ನಿರ್ದೇಶನದ ಮೇರೆಗೆ ಹರಿಹರ ಮತ್ತು ಬುಕ್ಕ ಕ್ರಿ.ಶ.1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು. ಹಂಪೆ ಅದರ ರಾಜಧಾನಿಯಾಗಿತ್ತು. ವಿರೂಪಾಕ್ಷ ಅವರ ಆರಾಧ್ಯ ದೈವ.</p>
	<p>
		<p style="float: left;width:100%;text-align:center;">
			<img align="center" alt="" class="imgCont" height="339" src="http://media.webdunia.com/_media/kn/img/article/2016-07/15/full/1468585799-8803.jpg" style="border: 1px solid #DDD; margin-right: 0px; float: none; z-index: 0;" title="hampi" width="510" /></p>
	</p>
	<p>
		ಯುನೆಸ್ಕೊ ಹಂಪೆಯನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿ ಅದರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಹಂಪೆ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸುಮಾರು 26 ಚದರ ಕಿ.ಮೀ.ವಿಸ್ತಾರಕ್ಕೆ ವಿಸ್ತರಿಸಿಕೊಂಡಿರುವ ಹಂಪೆಯ ಅವಶೇಷಗಳನ್ನು ವೀಕ್ಷಿಸಲು ಎರಡು ದಿನಗಳು ಬೇಕು. </p>
	<p>
		 </p>
	<p>
		ವಿರೂಪಾಕ್ಷ ದೇವಾಲಯ: ಹಂಪೆಯ ಪ್ರಸಿದ್ಧ ದೇವಾಲಯವಾಗಿರುವ ಇದನ್ನು ಪಂಪಾವತಿ ದೇವಾಲಯ ಎಂದೂ ಕರೆಯುವ ವಾಡಿಕೆ ಇದೆ. ವಿರೂಪಾಕ್ಷ ವಿಜಯನಗರ ಅರಸರ ಕುಲದೈವ. ಮೂಲಗುಡಿ ಹೊಯ್ಸಳ ಬಲ್ಲಾಳನ ಕಾಲದಲ್ಲಿ 11ನೇ ಶತಮಾನದಲ್ಲಿ ರಚನೆಯಾಯಿತು. 16ನೇ ಶತಮಾನದ ವೇಳೆಗೆ ಇದಕ್ಕೆ ಅನೇಕ ಭಾಗಗಳು ಸೇರ್ಪಡೆಯಾದವು.</p>
	<p>
		<p style="float: left;">
			<img align="" alt="" class="imgCont" height="200" src="http://media.webdunia.com/_media/kn/img/article/2014-08/21/full/1408608911-7444.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="600" /></p>
	</p>
	<p>
		ವಿರೂಪಾಕ್ಷ ದೇವಾಲಯದ ಮುಂಭಾಗ 732 ಮೀ.ಉದ್ದ ಹಾಗೂ 28ಮೀ.ಅಗಲದ ಹಂಪೆ ಬಜಾರ್ ಇದೆ. ಇದು ವಿಜಯನಗರದ ಅತಿ ದೊಡ್ಡ ಬಜಾರ್. ಇಲ್ಲಿ ಮುತ್ತು ರತ್ನ ವಜ್ರವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಕೃಷ್ಣದೇವರಾಯನ ಕಾಲದಲ್ಲಿ ಹಂಪೆಗೆ ಭೇಟಿ ನೀಡಿದ ಪೋರ್ಚುಗೀಸ್ ಪ್ರವಾಸಿಗ ಡೊಮಿಂಗೋ ಪೇಯಿಸ್ ದಾಖಲಿಸಿದ್ದಾನೆ. ಈಗಲೂ ಇಲ್ಲಿ ಅಂಗಡಿ ಸಾಲುಗಳಿವೆ. ಹಂಪೆ ಬಜಾರ್‌ನ ಪೂರ್ವ ತುದಿಯಲ್ಲಿ ವಿರೂಪಾಕ್ಷ ಗುಡಿಯ ಕಡೆಗೆ ಮುಖಮಾಡಿ ಮಲಗಿರುವ ಬೃಹತ್ ನಂದಿ ವಿಗ್ರಹ ಇದೆ.</p>
	<p>
		 </p>
	<p>
		ಕೋದಂಡರಾಮ ದೇವಾಲಯ:ಹಂಪೆ ಬಜಾರ್‌ನ ಪೂರ್ವ ತುದಿಯ ಉತ್ತರಕ್ಕೆ ನೈಸರ್ಗಿಕ ಬಂಡೆಯಲ್ಲಿ ಕೆತ್ತಿಸಲಾದ ರಾಮ, ಸೀತೆ ಲಕ್ಷ್ಮಣರ 15 ಅಡಿ ಎತ್ತರದ ವಿಗ್ರಹಗಳು ವಿಸ್ಮಯವನ್ನುಂಟು ಮಾಡುತ್ತವೆ. ಕೋದಂಡರಾಮ ದೇವಾಲಯದ ಸಮೀಪದಲ್ಲೇ ಯಂತ್ರೋದ್ಧಾರಕ ಆಂಜನೇಯ ಗುಡಿ ಕೂಡ ಇದೆ.</p>
	<p>
		 </p>
	<p>
		ಅಚ್ಯುತರಾಯ ದೇವಸ್ಥಾನ: ಕೋದಂಡರಾಮಯ್ಯ ದೇವಾಲಯದಿಂದ ಮೆಟ್ಟಿಲು ಮಾರ್ಗವಾಗಿ ಸ್ವಲ್ಪ ದೂರ ಪೂರ್ವಕ್ಕೆ ಹೋಗಿ ದಕ್ಷಿಣಕ್ಕೆ ತಿರುಗಿದರೆ ಅಚ್ಯುತರಾಯ ದೇವಸ್ಥಾನ ಇದೆ. ಇದಕ್ಕೆ ಎರಡು ಪ್ರಾಕಾರ ಗೋಡೆಗಳು. ದೇವಾಲಯದ ಎದುರಿನ ಅಂಗಡಿ ಸಾಲುಗಳನ್ನು ಸೂಳೆ ಬಜಾರ್ ಅಥವಾ ರಾಜನರ್ತಕಿಯರ ಬೀದಿ ಎಂದು ಕರೆಯುತ್ತಾರೆ.</p>
	<p>
		<p style="float: left;width:100%;text-align:center;">
			<img align="center" alt="" class="imgCont" height="415" src="http://media.webdunia.com/_media/kn/img/article/2014-05/10/full/1399723898-3219.jpg" style="border: 1px solid #DDD; margin-right: 0px; float: none; z-index: 0;" title="" width="640" /></p>
	</p>
	<p>
		ವಿಜಯವಿಠಲ ದೇವಾಲಯ: ಹಂಪೆಯ ಅತ್ಯುತ್ತಮ ಕಟ್ಟಡಗಳಲ್ಲೊಂದು. ಪ್ರೌಢ ದೇವರಾಯನ ಕಾಲದಲ್ಲಿ ಪ್ರಾರಂಭಗೊಂಡ ಈ ದೇವಾಲಯದ ಕಾಮಗಾರಿ ಕೃಷ್ಣದೇವರಾಯ, ಅಚ್ಯುತರಾಯ ಮತ್ತು ಸದಾವಶಿವ ನಗರ ಕಾಲದಲ್ಲೂ ಮುಂದುವರಿಯಿತು. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದರಿಂದ ದೇವಾಲಯದ ಕಾಮಗಾರಿ ಸ್ಥಗಿತಗೊಂಡು ಕೆಲವು ಭಾಗಗಳು ಅಪೂರ್ಣವಾಗಿ ಉಳಿದಿದೆ.</p>
	<p>
		 </p>
	<p>
		ಹಜಾರರಾಮ ದೇವಾಲಯ: ಇದು ಕೋಟೆಯೊಳಗೆ, ರಾಜನ ದರ್ಬಾರ್ ಸಭಾಂಗಣದಿಂದ ಉತ್ತರಕ್ಕಿದೆ. ಹಂಪೆಯಲ್ಲಿ ಅಳಿದುಳಿದಿರುವ ಐದು ಪ್ರಮುಖ ದೇವಾಲಯಗಳಲ್ಲೊಂದು. ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತದ ದೃಶ್ಯಗಳು ಹಾಗೂ ವೈಷ್ಣವ ದೇವತೆಗಳ ಶಿಲ್ಪಗಳು ಕಂಡು ಬರುತ್ತವೆ.</p>
	<p>
		<p style="float: left;width:100%;text-align:center;">
			<img align="center" alt="" class="imgCont" height="415" src="http://media.webdunia.com/_media/kn/img/article/2014-05/10/full/1399723918-9413.jpg" style="border: 1px solid #DDD; margin-right: 0px; float: none; z-index: 0;" title="" width="640" /></p>
	</p>
	<p>
		ರಾಣಿಯರ ಸ್ನಾನ ಗೃಹ: ಚಂದ್ರಶೇಖರ ದೇವಸ್ಥಾನದಿಂದ ಪಶ್ಚಿಮಕ್ಕೆ ರಸ್ತೆ ಬದಿಯಲ್ಲಿದ್ದ ಹುಲ್ಲು ಹಾಸಿನ ಮಧ್ಯೆ ಕಾಣುವ ಚೌಕಾಕಾರದ ಕಟ್ಟಡವನ್ನು ರಾಣಿಯರ ಸ್ನಾನಗೃಹ ಎಂದು ಕರೆಯುತ್ತಾರೆ. ಕಟ್ಟಡದ ಸುತ್ತಲೂ ಕಂದಕವಿದ್ದು, ಮಧ್ಯೆ 15ಕಿ.ಮೀ. ಸುತ್ತಳತೆ ಹಾಗೂ 1.8ಮೀ. ಆಳದ ಕೊಳ ಇದೆ. ರಾಣಿಯರ ಸ್ನಾನಗೃಹದಿಂದ ಪಶ್ಚಿಮಕ್ಕೆ ಒಂದು ಫರ್ಲಾಂಗ್ ದೂರದಲ್ಲಿರುವ ರಸ್ತೆಯ ಎಡಕ್ಕೆ ಕಿರಿದಾದ ಇಬ್ಬದಿಗಳಲ್ಲೂ ಕಲ್ಲಿನ ತಟ್ಟೆಗಳನ್ನು ಜೋಡಿಸಲಾಗಿದೆ. </p>
	<p>
		 </p>
	<p>
		ಹೀಗೆ ಹಂಪೆಯಲ್ಲಿ ಅರಮನೆ ಆವರಣ, ದಣ್ಣಾಯಕನ ಆವರಣ, ರಾಣಿಯರ ಅಂತಃಪುರ ಆನೆಲಾಯ,ನೆಲಮಾಳಿಗೆ ದೇವಾಲಯ, ಬಾಲಕೃಷ್ಣ ದೇವಾಲಯ, ವಿಜಯವಿಠಲ ದೇವಾಲಯಗಳನ್ನು ನೋಡಬಹುದಾಗಿದೆ.</p>
	<p>
		 </p>
	<p>
		ತಲುಪುವ ಮಾರ್ಗ: ಹಂಪೆಗೆ ಬೆಂಗಳೂರಿನಿಂದ 325ಕಿ.ಮೀ., ಹೊಸಪೇಟೆಯಿಂದ ಹಂಪೆಗೆ 13ಕಿ.ಮೀ. ದೂರ. ಇಲ್ಲಿಂದ ಸಾಕಷ್ಟು ಬಸ್‌ಗಳು ಓಡಾಡುತ್ತವೆ. ಇಲ್ಲಿ ಉಳಿದುಕೊಳ್ಳಲು ಪ್ರವಾಸೋದ್ಯಮ ಹೋಟೆಲ್ ಇದೆ.</p>
</p>
<p>
	<br />
	<p>
		 </p>
	<p>
		ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ <a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html">ಮೊಬೈಲ್ ಆ್ಯಪ್</a> ಡೌನ್‌ಲೋಡ್ ಮಾಡಿಕೊಳ್ಳಿ.</p>
</p>]]></content:encoded>
      <pubDate>Fri, 15 Jul 2016 17:51:00 +0530</pubDate>
      <updatedDate>Fri, 15 Jul 2016 18:01:39 +0530</updatedDate>
      <category><![CDATA[Religious Journey]]></category>
      <authorname>Rajesh patil</authorname>
    </item>
    <item>
      <title><![CDATA[ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆಯೇ?]]></title>
      <link>https://kannada.webdunia.com/article/religious-journey/india-becoming-religious-intolarant-nation-116062100075_1.html</link>
      <guid>https://kannada.webdunia.com/article/religious-journey/india-becoming-religious-intolarant-nation-116062100075_1.html</guid>
      <media:thumbnail url="https://nonprod-media.webdunia.com/public_html/_media/kn/img/article/2016-06/21/thumb/1_1/1466520364-8437.jpg"/>
      <image>https://nonprod-media.webdunia.com/public_html/_media/kn/img/article/2016-06/21/thumb/1_1/1466520364-8437.jpg</image>
      <description><![CDATA[ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವುದು ಅಮೆರಿಕಾದಲ್ಲಿ ಇತ್ತೀಚೆಗೆ ಚರ್ಚೆಯ ವಸ್ತುವಾಗಿತ್ತು. ಭಾರತವು ಬಹು ಧರ್ಮಗಳ ದೇಶವಾಗಿದ್ದು ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಶ್ರೇಷ್ಟ ಧರ್ಮವೆಂದು ಭಾವಿಸುತ್ತಾರೆ. ಹಿಂದೂ ಧರ್ಮದಷ್ಟು ಶ್ರೇಷ್ಟ ಧರ್ಮವಿಲ್ಲವೆಂದು ಹಿಂದೂಗಳು ಭಾವಿಸುತ್ತಾರೆ. ...]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/kn/img/article/2016-06/21/full/1466520364-8437.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></p>
	ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವುದು ಅಮೆರಿಕಾದಲ್ಲಿ ಇತ್ತೀಚೆಗೆ ಚರ್ಚೆಯ ವಸ್ತುವಾಗಿತ್ತು. ಭಾರತವು ಬಹು ಧರ್ಮಗಳ ದೇಶವಾಗಿದ್ದು ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಶ್ರೇಷ್ಟ ಧರ್ಮವೆಂದು ಭಾವಿಸುತ್ತಾರೆ. ಹಿಂದೂ ಧರ್ಮದಷ್ಟು ಶ್ರೇಷ್ಟ ಧರ್ಮವಿಲ್ಲವೆಂದು ಹಿಂದೂಗಳು ಭಾವಿಸುತ್ತಾರೆ. ಮುಸ್ಲಿಮರು ತಮ್ಮ ಧರ್ಮವೇ ಶ್ರೇಷ್ಟವೆಂದು ಕಾಯಾ, ವಾಚಾ ಮನಸಾ ಅವರ ದೇವರನ್ನು ಪ್ರಾರ್ಥಿಸುತ್ತಾರೆ.<br />
	<br />
	 ಕ್ರೈಸ್ತರು ಕೂಡ ಏಸುಕ್ರಿಸ್ತನ ಪ್ರಾರ್ಥನೆ ಮಾಡುತ್ತಾರೆ. ಆದರೆ ಅವರವರ ಧಾರ್ಮಿಕ ಆಚರಣೆಗೆ ಯಾರೂ ಅಡ್ಡಿ, ಆತಂಕಗಳನ್ನು ಉಂಟುಮಾಡದೇ ನಿರಾತಂಕವಾಗಿ ಇರುವುದೇ ಧಾರ್ಮಿಕ ಸಹಿಷ್ಣುತೆ. ಆದರೆ ಒಂದು ಧರ್ಮದವರು ಮತಾಂತರ ಪ್ರಕ್ರಿಯೆಯಲ್ಲಿ ನಿರತರಾದ ಸಂದರ್ಭದಲ್ಲಿ ಬೇರೆ ಧರ್ಮಗಳಿಗೆ ಅಸಹನೀಯವೆನಿಸುತ್ತದೆ.<br />
	<br />
	ಅಂತಹ ಸಂದರ್ಭಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತದೆ. ತಮ್ಮ ಧರ್ಮನಿಷ್ಠೆಗೆ ಧಕ್ಕೆ ಬರುತ್ತದೆಂದು ಭಾವಿಸಿದಾಗ ಇತರೆ ಧರ್ಮಗಳ ಪೂಜಾಮಂದಿರಗಳನ್ನು ಹಾಳುಮಾಡುವ, ಧಾರ್ಮಿಕ ನಿಂದನೆ ಮಾಡುವ ಕ್ರಿಯೆಗಳು ಜರುಗುತ್ತವೆ. ಒಂದು ಧರ್ಮದ ಯುವತಿಯ ಮೇಲೆ ಇನ್ನೊಂದು ಧರ್ಮದ ಯುವಕ ಲೈಂಗಿಕ ದೌರ್ಜನ್ಯ ನಡೆಸಿದಾಗ ಇದನ್ನು ಧಾರ್ಮಿಕ ನಿಂದನೆಯಂತೆ ಜನರು ಪರಿಗಣಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತದೆ. <br />
	 </p>
<p>
	ಸರ್ವೋ ಧರ್ಮ ಸದ್ಗತಿ ಭವ, ಸರ್ವೋ ಜನ ಸುಖಿನೋಭವಂತು ಎಂಬ ನುಡಿಯನ್ನು ಜನರು ಆಚರಿಸಿದರೆ ಧಾರ್ಮಿಕ ಅಸಹಿಷ್ಣುತೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. <br />
	<br />
	<span style="color: rgb(51, 51, 51); font-family: Tunga; font-size: 14px; line-height: 20px;">ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ </span><a href="http://kannada.webdunia.com/article/current-affairs/to-read-webdunia-latest-news-download-mobile-apps-116033100043_1.html" style="margin: 0px; padding: 0px; border: 0px; color: rgb(2, 78, 130); text-decoration: none; cursor: pointer; font-family: Tunga; font-size: 14px; line-height: 20px;">ಮೊಬೈಲ್ ಆ್ಯಪ್</a><span style="color: rgb(51, 51, 51); font-family: Tunga; font-size: 14px; line-height: 20px;"> ಡೌನ್‌ಲೋಡ್ ಮಾಡಿಕೊಳ್ಳಿ</span></p>]]></content:encoded>
      <pubDate>Tue, 21 Jun 2016 20:07:00 +0530</pubDate>
      <updatedDate>Tue, 21 Jun 2016 20:17:03 +0530</updatedDate>
      <category><![CDATA[Religious Journey]]></category>
      <authorname>guna</authorname>
    </item>
    <item>
      <title><![CDATA[ಶಿರಡಿ ಸಾಯಿ ಬಾಬಾ]]></title>
      <link>https://kannada.webdunia.com/article/religious-journey/shiradi-sai-baba-114050900013_1.html</link>
      <guid>https://kannada.webdunia.com/article/religious-journey/shiradi-sai-baba-114050900013_1.html</guid>
      <media:thumbnail url="https://nonprod-media.webdunia.com/public_html/_media/kn/img/article/2014-05/09/thumb/1_1/1399617082-6612.jpg"/>
      <image>https://nonprod-media.webdunia.com/public_html/_media/kn/img/article/2014-05/09/thumb/1_1/1399617082-6612.jpg</image>
      <description><![CDATA[ಶಿರಡಿ ಸಾಯಿ ಬಾಬಾ]]></description>
      <content:encoded><![CDATA[<p style="text-align: center;">
	ಶಿರಡಿ ಸಾಯಿ ಬಾಬಾ<br />
	<br />
	<p style="float: left;width:100%;text-align:center;">
		<img align="center" alt="" class="imgCont" height="429" src="http://media.webdunia.com/_media/kn/img/article/2014-05/09/full/1399617082-6612.jpg" style="border: 1px solid #DDD; margin-right: 0px; float: none; z-index: 0;" title="" width="640" /><br />
		<br />
		<br />
		<p style="float: left;width:100%;text-align:center;">
			<img align="center" alt="" class="imgCont" height="480" src="http://media.webdunia.com/_media/kn/img/article/2014-05/09/full/1399617110-0812.JPG" style="border: 1px solid #DDD; margin-right: 0px; float: none; z-index: 0;" title="" width="618" /><br />
			<br />
			<p style="float: left;width:100%;text-align:center;">
				<img align="center" alt="" class="imgCont" height="421" src="http://media.webdunia.com/_media/kn/img/article/2014-05/09/full/1399617132-6539.jpg" style="border: 1px solid #DDD; margin-right: 0px; float: none; z-index: 0;" title="" width="640" /></p>
		</p>
		<br />
		<br />
		<br />
		 </p>
</p>
<br />]]></content:encoded>
      <pubDate>Fri, 09 May 2014 11:59:00 +0530</pubDate>
      <updatedDate>Fri, 09 May 2014 12:02:19 +0530</updatedDate>
      <category><![CDATA[Religious Journey]]></category>
      <authorname>Arunkumar</authorname>
    </item>
  </channel>
</rss>
