ನೋಡಯ್ಯಾ ಈ ಕೆಲಸಕ್ಕಾಗಿ ಜವಾಬ್ದಾರಿಯುತ ಕೆಲಸದವರು ಬೇಕು. ನೀನಗೆ ಅಷ್ಟೊಂದು ಜವಾಬ್ದಾರಿ ಇದೆಯೇ ಎಂಬುದು ತಿಳಿಯದಾಗಿದೆ ಎಂದರು ಸಂತಾನ ಮಾಲಕ.
ಈ ವಿಷಯದಲ್ಲಿ ಸಂದೇಹವೇಕೆ ಸಾರ್, ಯಾರನ್ನೂ ಬೇಕಾದರೂ ಕೇಳಿ ನನ್ನ ಜವಾಬ್ದಾರಿ ಕುರಿತು ಹೇಳುತ್ತಾರೆ. ಹಿಂದೆ ನಾನಿದ್ದ ಕಾರ್ಖಾನೇಲಿ ಏನೇ ಅನಾಹುತ ಸಂಭವಿಸಿದರೂ ನನ್ನನ್ನ ಜವಾಬ್ದಾರನನ್ನಾಗಿ ಮಾಡಲಾಗುತ್ತಿತ್ತು ಎಂದ ಸಂತಾ.
|