ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಯುಸಿ ಪರೀಕ್ಷೆಯಲ್ಲಿ ಜೇನಿನ ಕಾಟ!!
ಯಲಹಂಕದ ರೇವಾ ಕಾಲೇಜಿನ ಬಳಿಯಲ್ಲಿ ಪಿಯುಸಿ ಚಿತ್ರದ ಚಿತ್ರೀಕರಣ ನಡೆಯುವಾಗ ಚಿತ್ರತಂಡದ ಮೇಲೆ ಜೇನುಹುಳುಗಳು ದಾಳಿಯಿಟ್ಟ ಸುದ್ದಿ ವರದಿಯಾಗಿದೆ.

ಚಿತ್ರದ ನಾಯಕ ಚೇತನ್ ಚಂದ್ರ, ನಾಯಕಿಯರಾದ ಹರ್ಷಿಕಾ ಪೂಣಚ್ಚ, ಕರಿಷ್ಮಾ ಅಭಿನಯಿಸುತ್ತಿದ್ದ ಹಾಡಿನ ಸನ್ನಿವೇಶದ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು ಜೇನು ಕಡಿತಕ್ಕೊಳಗಾದ ಸುಮಾರು 20 ಮಂದಿ ಆಸ್ಪತ್ರೆ ಸೇರಬೇಕಾಗಿ ಬಂತು ಎಂದು ಚಿತ್ರತಂಡ ತಿಳಿಸಿದೆ.

ಯಶಸ್ವಿ ಚಿತ್ರ ಎ.ಕೆ.47 ಗಾಗಿ ಕಥೆ ಬರೆದಿದ್ದ ಎಸ್ಆರ್ ಬ್ರದರ್ಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕವಿರಾಜ್ ಹಾಡುಗಳನ್ನು ಬರೆದಿದ್ದಾರಂತೆ. ಹದಿ ಹರೆಯದವರ ಭಾವನೆಗಳ ಸುತ್ತ ಹೆಣೆದಿರುವ ಈ ಕಥಾನಕ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆಕರ್ಷಿಸುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.

ವಿಶ್ವಾಸ ನಿಜವಾಗಲಿ. ಪಿಯುಸಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಲಿ!!
ಮತ್ತಷ್ಟು
ಮುನಿಯಾ ಮುನಿಸಿಕೊಂಡನಯ್ಯಾ..!!
ಶಿವಾನಿ ಮತ್ತೊಂದು ಚೆಲುವಿನ ಚಿತ್ತಾರವಾಗುವುದೇ?
ಮಗಳು ಹೊರಟಳು ದಾರಿಬಿಡಿ
ಎನ್.ಎಂ.ಸುರೇಶ್ ಚಿತ್ರದಲ್ಲಿ ಶಿವಣ್ಣ
ಉದ್ಯಮವನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಪಿರಮಿಡ್
ಗೋಲ್ಡನ್ ಸ್ಟಾರ್ ಇನ್ನುಮುಂದೆ ಪ್ರಣಯರಾಜ...!!