ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೈತ್ರದ ಚಂದ್ರಮದಲ್ಲೂ ಅಮೂಲ್ಯಾಗೊಂದು ಪಾತ್ರ
ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ನಾಯಕಿ ಪಾತ್ರದಲ್ಲಿ ತೋರಿಸಲಾಗಿದೆ ಎಂಬು ವಿವಾದ ಹುಟ್ಟುಹಾಕಿದ್ದ ಚೆಲುವಿನ ಚಿತ್ತಾರ ಗೊತ್ತಲ್ಲ. ಈ ಚಿತ್ರದ ಮೂಲಕ ಹೆಸರು-ಹಣ ಎರಡನ್ನೂ ಸಂಪಾದಿಸಿದ್ದು ನಿರ್ದೇಶಕ ಎಸ್.ನಾರಾಯಣ್. ನಾಯಕ ಗಣೇಶ್‌ರಿಗೂ ಮೆಚ್ಚುಗೆಯ ಸುರಿಮಳೆಯಾದರೆ, ನಾಯಕಿ ಅಮೂಲ್ಯಾರನ್ನು ಪ್ರಸಿದ್ಧಿ ಹಾಗೂ ವಿವಾದಗಳ ಕೇಂದ್ರಬಿಂದುವನ್ನಾಗಿಸಿದ್ದೂ ಈ ಚಿತ್ರವೇ.

ಇವರಿಬ್ಬರ ಕಾಂಬಿನೇಷನ್ನಲ್ಲಿ ಚೈತ್ರದ ಚಂದ್ರಮ ಎಂಬ ಹೊಸ ಚಿತ್ರ ಪ್ರಾರಂಭವಾಗಲಿದೆ. ಇದಕ್ಕೂ ಮುಂಚೆ ಅಮೂಲ್ಯಾಗೆ ಹಲವು ಆಫರ್ಗಳು ಬಂದಿದ್ದರೂ ಶಾಲಾ ಪರೀಕ್ಷೆಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಅವರು ಒಪ್ಪಿರಲಿಲ್ಲ. ಈಗ ಒಂಬತ್ತನೇ ತರಗತಿಯ ಪರೀಕ್ಷೆಗಳು ಮುಗಿದಿದ್ದು ಏಪ್ರಿಲ್-ಮೇ ತಿಂಗಳಲ್ಲಿ ಶಾಲೆಗೆ ರಜವಿರುವುದರಿಂದ ಎಸ್.ನಾರಾಯಣ್‌ಗೆ ಕಾಲ್‌ಶೀಟ್ ಸಿಕ್ಕಿದೆಯಂತೆ.

ಎಂದಿನಂತೆ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ನಿರ್ದೇಶನದ ಜೊತೆಗೆ ಸಂಗೀತವನ್ನೂ ನೀಡಲಿದ್ದಾರಂತೆ ನಾರಾಯಣ್. ಈ ಕಾರಣಕ್ಕಗಿಯೇ ಅವರು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರಂತೆ. ಕುನಾಲ್ ಗಾಂಜಾವಾಲಾ ಮತ್ತು ಶ್ರೇಯಾ ಘೋಷಾಲ್‌ರಿಂದ ಹಾಡುಗಳನ್ನು ಹಾಡಿಸಬೇಕೆಂದು ಅವರ ಇರಾದೆಯಾಗಿರುವುದರಿಂದ ಈ ಕ್ರಮ ಎನ್ನುತ್ತಿವೆ ನಾರಾಯಣ್ ಆಪ್ತ ವಲಯಗಳು.

ಚೈತ್ರದ ಚಂದ್ರಮ ಮತ್ತೊಂದು ಚೆಲುವಿನ ಚಿತ್ತಾರವಾಗುವುದೋ ಅಥವಾ ಚೈತ್ರದ ಪ್ರೇಮಾಂಜಲಿಯಾಗುವುದೋ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು
ಏಪ್ರಿಲ್‌ನಲ್ಲಿ ತೆರೆಗೇರಲಿದ್ದಾನಂತೆ ಕೆಂಪ
ವಂಶಿಗಾಗಿ ಪುನೀತ್-ಪ್ರಕಾಶ್ ಮಿಲನ
ಯುವಜನತೆಗಾಗಿ ತಯಾರುತ್ತಿದೆ ಯುವ
ಬಿಡುಗಡೆಯಂಚಿಗೆ ಬಂದು ನಿಂತ ಸ್ವತಂತ್ರಪಾಳ್ಯ
ಫೈನಲಿಗೆ ತಲುಪುವ ಪುಟಾಣಿ ಯಾವುದು?
ಕೊಬ್ರಿ ಮಂಜು ಖಾದಿ ಹಾಕ್ತಾರಂತೆ!