ವಿಷ್ಣುವರ್ಧನ್ ಹಾಗೂ ನಾಗಾಭರಣ ಜೋಡಿ ಮತ್ತೆ ಒಂದಾದ ನಮ್ಮೆಜಮಾನ್ರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿಕ್ಕಮಗಳೂರಿನ ಸುಂದರ ಹಸಿರಿನ ನಡುವೆ ನಮ್ಮೆಜಮಾನ್ರು ತಂಡ ಬೀಡು ಬಿಟ್ಟಿದೆ.
ನಾಗಾಭರಣ ವಿಷ್ಣುಗಾಗಿ ಒಂದು ವಿಶಿಷ್ಟ ಕಥೆಯನ್ನು ಸಿದ್ಧಪಡಿಸಿದ್ದಾರೆ. ಚಿತ್ರ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮುಗಿಸಿ ಈಗ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿಕ್ಕಮಗಳೂರಿನಿಂದ ಚಿತ್ರ ತಂಡ ಕುಲುಮನಾಲಿಗೆ ಹೋಗಿ ಅಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಅಲ್ಲಿಂದ ಪುನ: ಬೆಂಗಳೂರಿಗೆ ಬರಲಿದೆ.
ಚಿತ್ರದಲ್ಲಿ ಗಜದ ಲಲನೆ ನವ್ಯಾ ನಾಯರ್ ಹಾಗೂ ಲಕ್ಷ್ಮೀ ಗೋಪಾಲಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಲಕ್ಷ್ಮೀ ಗೋಪಾಲಸ್ವಾಮಿ ಈ ಹಿಂದೆ ವಿಷ್ಣು ಅವರೊಂದಿಗೆ ವಿಷ್ಣುಸೇನೆ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ರಮೇಶ್ ಭಟ್, ವಿಜಯರಾಘವೇಂದ್ರ ನಟಿಸುತ್ತಿದ್ದಾರೆ.
|