ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಭಾಷಣೆಯಲ್ಲಿ ಹರಿಪ್ರಿಯಾ  Search similar articles
MOKSHA
'ಮನಸುಗಳ ಮಾತು ಮಧುರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಈ ಬಾಲೆ ಆ ಚಿತ್ರದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಾಕೋ ವಿಫಲವಾದಳು. ಆದರೆ ಈಕೆಗೆ ಅವಕಾಶಗಳಿಗೇನೂ ಕೊರತೆಯಾಗಿಲ್ಲ. ಎರಡು ವಾರಗಳ ಹಿಂದೆ ಈಕೆಯ 'ವಸಂತಕಾಲ' ಚಿತ್ರ ತೆರೆಕಂಡಿದೆ. ಈ ಚಿತ್ರಕ್ಕೂ ಪ್ರೇಕ್ಷಕರು ಹಿಂದೆ ಮುಂದೆ ನೋಡಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ನಡುವೆಯೇ ಈ ಬೆಡಗಿ ಒಂದು ಕನ್ನಡ ಹಾಗೂ ಒಂದು ತಮಿಳು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕನ್ನಡ ಚಿತ್ರ ಈ ಸಂಭಾಷಣೆಯ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ತಮಿಳು ಚಿತ್ರಕ್ಕಾಗಿ ಈಕೆ ತಮಿಳು ಮಾತನಾಡಲು ಕಲಿತಿದ್ದಾರಂತೆ. ಈಕೆಗೆ ಎಕ್ಸ್ಪೋಸ್ ಮಾಡಲು ಇಷ್ಟವಿಲ್ಲ ಎನ್ನುವ ಈ ನಟಿಮಣಿ ಅದಕ್ಕಾಗಿ ನಿರ್ದೇಶಕರಲ್ಲಿ ಮುಂಚೆಯೇ ಚಿತ್ರದಲ್ಲಿ ಯಾವ ತರಹದ ಕಾಸ್ಟ್ಯೂಮ್ ಬಳಕೆಯಾಗುತ್ತದೆ ಎಂದು ಕೇಳುತ್ತಾರಂತೆ. ಒಂದು ವೇಳೆ ಕಥೆ ಚೆನ್ನಾಗಿದ್ದು, ಅದಕ್ಕೆ ತೀರಾ ಅಗತ್ಯವಾಗಿ ಎಕ್ಸ್ಪೋಸ್ ಬೇಕೆಂದರೆ ಮಾಡಲು ಸಿದ್ಧ ಎನ್ನುತ್ತಾರೆ ಈ ನಟಿ.

ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಸಿಕ್ಕಿದರೆ ಉತ್ತಮ ನಟಿಯಾಗಿ ಬೆಳೆಯಬಹುದು ಎಂಬುದು ಹರಿಪ್ರಿಯಾರ ಆಸೆ. ಸಿಗಲಿ ಎಂದು ಹಾರೈಸೊಣ.
ಮತ್ತಷ್ಟು
ಮೆರವಣಿಗೆಗೆ ಸಿದ್ಧಗೊಂಡಿರುವ ಅಂಬಾರಿ
ಚಿತ್ರಮಂಡಳಿಯ ಸಮಸ್ಯೆಗಳಿಗೆ ಜಯಮಾಲಾ ಪರಿಹಾರವಾಗುವರೇ?
ಹಾಡಿನ ಗೊಂದಲ
ಗಾಂಧಿ ನಗರದ 'ಸ್ಟಾರ್' ಆದ ಗಣೇಶ್
ಕಲ್ಪನಾ ಹೌಸ್‌ನ ಕೊಲೆಯ ಸುತ್ತ
ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳುವ ಪಿಯುಸಿ