ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ಗಾಯಕರಿಗೆ ಅವಕಾಶ  Search similar articles
MOKSHA
ಕನ್ನಡ ಗಾಯಕರಿಗೆ ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕನ್ನಡ ಗಾಯಕ-ಗಾಯಕಿಯರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೆ ಹೊಸ ಸುದ್ದಿಯೊಂದು ಬಂದಿದೆ.

ಸಂಗೀತ ನಿರ್ದೇಶಕ ಹರಿಕಷ್ಣ ಅವರು ದರ್ಶನ್ ನಾಯಕರಾಗಿರುವ ಅರ್ಜುನ್ ಚಿತ್ರಕ್ಕೆ ಕನ್ನಡದ ಗಾಯಕಿಯರಾದ ಶಮಿತಾ ಮಲ್ನಾಡ್ ಹಾಗೂ ಚೈತ್ರಾರನ್ನು ಚೆನ್ನೈಗೆ ಕರೆಸಿಕೊಂಡು ಹಾಡಿಸಲಿದ್ದಾರೆ. ಕನ್ನಡ ಪ್ರತಿಭೆಗಳಿಗೆ ಆದ್ಯತೆ ನೀಡುವುದಾಗಿ ಈ ಮೊದಲೇ ಹೇಳಿದ್ದ ಹರಿ, ಈಗ ಮಾತು ಉಳಿಸಿಕೊಂಡಿದ್ದಾರೆ.

ಇದರಿಂದ ತಮಗೆ ದಕ್ಕಿದ ಈ ಮೊದಲ ಅನುಭವದಿಂದ ಶಮಿತಾ ಹಾಗೂ ಚೈತ್ರ ತುಂಬ ಖುಷಿಯಾಗಿದ್ದಾರಂತೆ. ಕನ್ನಡದ ಗಾಯಕರು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಹರಿಕೃಷ್ಣರಂತ ಕೆಲ ಸಂಗೀತ ನಿರ್ದೇಶಕರು ತಮ್ಮ ಕನ್ನಡ ಪ್ರೀತಿ ಸದ್ದಿಲ್ಲದೆ ತೋರಿಸುತ್ತಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಹೊಸ ಬೆಳವಣಿಗೆಯಾಗಿದೆ.
ಮತ್ತಷ್ಟು
ವಿಷ್ಣುವಿನ ನಮ್‌ಯಜಮಾನ್ರು
ಗಂಭೀರ ಹುಡುಗಿ ಶುಭಾ ಪೂಂಜಾ
ಸಂಭಾಷಣೆಯಲ್ಲಿ ಹರಿಪ್ರಿಯಾ
ಮೆರವಣಿಗೆಗೆ ಸಿದ್ಧಗೊಂಡಿರುವ ಅಂಬಾರಿ
ಚಿತ್ರಮಂಡಳಿಯ ಸಮಸ್ಯೆಗಳಿಗೆ ಜಯಮಾಲಾ ಪರಿಹಾರವಾಗುವರೇ?
ಹಾಡಿನ ಗೊಂದಲ