ಸುದೀಪ್ ಕಳ್ಳ - ಪೊಲೀಸ್ ಆಟ

ತಮ್ಮ ಕಾರ್ಯಕ್ಷೇತ್ರದಲ್ಲಿ ಬುದ್ದಿವಂತ ಎನಿಸಿಕೊಂಡ ವ್ಯಕ್ತಿಯನ್ನು ಆತನ ಮೇಲಾಧಿಕಾರಿ ಗಮನಿಸುತ್ತಾನೆ. ಪೊಲೀಸ್ ಅಧಿಕಾರಿ ಕೂಡಾ ಆರಕ್ಷಕ ದಳದಲ್ಲಿ ನಿಷ್ಠೆಗೆ ಹೆಸರಾದವರು. ಮೈಸೂರು ರಸ್ತೆಯ ಪೊಲೀಸ್ ಮೈದಾನ ಅಂದು ಪೇದೆ ಹಾಗೂ ಅಧಿಕಾರಿಗಳಿಂದ ತುಂಬಿ ಹೋಗಿತ್ತು.ಅಲ್ಲಿಗೆ ಆಗಮಿಸಿದ ಮೇಲಾಧಿಕಾರಿ ದೇವರಾಜ್ ಮದಕರಿಗೆ ಕೆಲವು ಸಲಹೆಗಳನ್ನು ನೀಡುವ ಸನ್ನಿವೇಶವನ್ನು ವೀರಮದಕರಿ ಚಿತ್ರಕ್ಕಾಗಿ ಚಿತ್ರೀಕರಿಸಲಾಯಿತು. ಚಿತ್ರದಲ್ಲಿ ಸುದೀಪ್ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಕೂಡಾ ತಾವೇ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುದೀಪ್ ಕಳ್ಳ ಹಾಗೂ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ದಿನೇಶ್ ಗಾಂಧಿ ಈ ಚಿತ್ರವನ್ನು ನಿರ್ಮಿಸಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿದೆ. ಸುದೀಪ್ ಅವರ ನಿರ್ದೇಶನದ ಮೂರನೇ ಚಿತ್ರ ಕೂಡಾ ರೀಮೇಕ್. ಚಿತ್ರಕ್ಕೆ ಕ್ಷೀರವಾಣಿ ಅವರ ಸಂಗೀತವಿದೆ.