ಮತ್ತೊಬ್ಬ ಬಾಲಿವುಡ್ ಬೆಡಗಿ ಕನ್ನಡಕ್ಕೆ ಬರುತ್ತಿದ್ದಾಳೆ. ಬಾಲಿವುಡ್ ಬೆಡಗಿ ಸೆಲಿನಾ ಜೇಟ್ಲಿಯನ್ನು ಕನ್ನಡಕ್ಕೆ ಆಮದು ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.
ಆದರೆ ಈ ಬಗ್ಗೆ ಜೇಟ್ಲಿ ಕಡೆಯಿಂದ ಇನ್ನು ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಆದರೆ ಆವಾಗಲೇ ಚಿತ್ರ ಮೂಹೂರ್ತ ಕಂಡಿದೆ. ಚಿತ್ರದ ಸಂಭಾವ್ಯ ನಾಯಕ ಉಪೇಂದ್ರ. ಇತ್ತೀಚೆಗೆ ನಡೆದ ಮುಹೂರ್ತ ನಡೆಸಿದವರು, ಉಪೇಂದ್ರ ಮಕ್ಕಳಾದ ಆಯುಷ್ ಮತ್ತು ಚಾವ್ಲಾ.
ಚಿತ್ರಕ್ಕೆ ಉಪೇಂದ್ರ ಅವರದೇ ಕತೆ, ಚಿತ್ರಕತೆ, ಸಂಭಾಷಣೆ ನೀಡುತ್ತಿದ್ದಾರೆ. ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ತೆಲುಗಿನ ಸಂಪತ್ ನಂದಿ ವಹಿಸಿಕೊಂಡಿದ್ದಾರೆ. ಕೆ. ಸಾಗರ್ ಮತ್ತು ಕೆ.ವಿ. ರೆಡ್ಡಿ ನಿರ್ಮಾಪಕರು. ಜೆಕೆ. ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರ ನಿರ್ಮಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.