ಇತ್ತೀಚೆಗಷ್ಟೇ ಉಪೇಂದ್ರ ನಿರ್ದೇಶಿಸಲಿರುವ ಚಿತ್ರದಲ್ಲಿ ಬಾಲಿವುಡ್ನ ಸೆಲಿನಾ ಜೇಟ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದು ಇದೀಗ ಬಹುತೇಕ ಖಚಿತವಾಗಿದೆ. ಚಿತ್ರಕ್ಕೆ ತಮಸೋಮ ಜ್ಯೋತಿರ್ಗಮಯ ಎಂದು ನಾಮಕರಣ ಮಾಡಿದ್ದಾರೆ.
ಸೆಲಿನಾ ಉದ್ಯಮಕ್ಕೆ ಬಂದು ಸಾಕಷ್ಟು ವರ್ಷಗಳಾಗಿದ್ದರೂ ಕನ್ನಡಕ್ಕೆ ಬಂದಿರಲಿಲ್ಲ. ಬಹುಶಃ ಸೆಲಿನಾ ಬಿಜಿಯಾಗಿದ್ದರಿಂದ ಇತ್ತ ತಲೆ ಹಾಕಿರಲಿಲ್ಲ. ಇದೀಗ ಸಾಕಷ್ಟು ಪರಭಾಷಾ ನಾಯಕಿಯರು ಉಪೇಂದ್ರ ಅವರ ಚಿತ್ರದಲ್ಲಿ ನಟಿಸಿ ಹೋಗಿರುವುದರಿಂದ ಇವರನ್ನು ಕನ್ನಡಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ.
ತಂತ್ರಜ್ಞರ ಆಯ್ಕೆ ಇನ್ನು ಪೂರ್ಣಗೊಂಡಿಲ್ಲ. ಚಿತ್ರವನ್ನು ತೆಲುಗಿನ ಸಂಪತ್ ನಂದಿ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ಕೊನೆ ವಾರದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ.