ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕರಿ ಚಿರತೆ ಬರುತ್ತಿದೆ ದಾರಿ ಬಿಡಿ ! (Vijay | Kari Chirathe | Sharmila Mandre | Madesh)
ಸುದ್ದಿ/ಗಾಸಿಪ್
Feedback Print Bookmark and Share
 
Vijay
MOKSHENDRA
ಚಿತ್ರಗಳಲ್ಲಿ ಪ್ರಾಣಿಗಳನ್ನು ಬಳಸುವುದನ್ನು ನಿಷೇಧಿಸಿ ವರುಷವೇ ಕಳೆಯಿತು. ಗಂಧದ ಗುಡಿಯಂತಹ ಐತಿಹಾಸಿಕ ಚಿತ್ರಗಳ ಯಶಸ್ಸಿಗೆ ಪ್ರಾಣಿಗಳ ಕರಾಮತ್ತೂ ಕಾರಣವಾಗಿದೆ ಎಂದರೆ ತಪ್ಪಲ್ಲ. ಇನ್ನೇನಿದ್ದರೂ ಪ್ರಾಣಿಗಳನ್ನು ಬಳಸುವಂತಿಲ್ಲ ಬಿಡಿ. ಆದರೆ ಇತ್ತೀಚಿನ ಚಿತ್ರಗಳಿಗೆ ಪ್ರಾಣಿಗಳ ಹೆಸರನ್ನೂ ಇಡುವ ಸಾಹಸಕ್ಕೆ ಕೆಲ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ.

ಈ ಹಿಂದೆಯೇ ದರ್ಶನ್ ಅವರ ಗಜ ಹೆಸರಿನ ಚಿತ್ರ ಬಹುತೇಕ ಯಶಸ್ಸು ಕಂಡಿತು. ಅದೇ ಯಶಸ್ಸು ನಿರ್ಮಾಪಕರಾದ ಮಾದೇಶ್ ಅವರಿಗೆ ಈ ಚಿತ್ರವನ್ನು ನಿರ್ಮಿಸಲು ಉತ್ತೇಜನ ನೀಡಿದೆ. ತಮ್ಮ ಮೊದಲ ಚಿತ್ರ ಪ್ರಾಣಿಯೊಂದರ ಹೆಸರಿನಿಂದಾಗಿ ಖ್ಯಾತಿ ಪಡೆದಿದ್ದು, ಇದೇ ಉದ್ದೇಶದಿಂದ ಕರಿಚಿರತೆ ಎಂಬ ಹೆಸರಿಟ್ಟಿದ್ದಾರೆ.

ವಿಜಯ್ ತನ್ನ ತಾಕತ್ ಪ್ರದರ್ಶಿಸಿ ಇದೀಗ ಕರಿ ಚಿರತೆಯಾಗಿ ಗರ್ಜಿಸಲು ತಯಾರಿ ನಡೆಸುತ್ತಿದ್ದಾರೆ. ಹೆಸರಿಗೂ ಆ ಚಿತ್ರದಲ್ಲಿನ ನಟನಿಗೂ ಏನಾದರು ಸಂಬಂಧವಿದೆಯೇ ಚಿತ್ರ ಬಿಡುಗಡೆಗೊಂಡ ಬಳಿಕವೇ ಹೇಳಬೇಕು.

ಕಟ್ಟು ಮಸ್ತಾದ ವಿಜಯ್ ದೇಹವನ್ನು ಗಮನದಲ್ಲಿರಿಸಿಕೊಂಡು ಈ ಚಿತ್ರವನ್ನು ನಿರ್ಮಾಪಕರು ನಿರ್ಮಿಸುತ್ತಿದ್ದಾರೆ ಎಂಬ ಗುಮಾನಿಯೂ ಇದೆ. ಶರ್ಮಿಳಾ ಮಾಂಡ್ರೆ ಈ ಚಿತ್ರದ ನಾಯಕಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಜಯ್, ಕರಿ ಚಿರತೆ, ಶರ್ಮಿಳಾ ಮಾಂಡ್ರೆ, ಮಾದೇಶ್