ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇದೊಂಥರಾ ಹೊಸ ಸುದ್ದಿ... ಗವೀಪುರದ್ದು! (Gavipura | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ಇದೀಗ ಎಲ್ಲೆಲ್ಲೂ ಗವಿಪುರದ್ದೇ ಸುದ್ದಿ. ಹೊಸಬರೆಲ್ಲಾ ಸೇರಿಕೊಂಡು ಇಲ್ಲಿ ಸುದ್ದಿಯಾಗುತ್ತಿದ್ದಾರೆ. ಅರೆ ಇದೇನು ಗವಿಪುರದಲ್ಲಿ ಏಕೆ ಸುದ್ದಿ ಅಂದುಕೊಂಡರಾ? ಹೌದು ಸ್ವಾಮಿ ಇದು ಹೊಸ ಚಿತ್ರದ ಟೈಟಲ್. ಹೊಸಬರ ತಂಡವೊಂದು ಚಿತ್ರವನ್ನು ಸಿದ್ಧಪಡಿಸುತ್ತಿದೆ. ಚಿತ್ರದ ಚಿತ್ರೀಕರಣದ ಬಹುತೇಕ ಭಾಗ ಹೆಸರಿಗೆ ತಕ್ಕಂತೆ ಬೆಂಗಳೂರಿನ ಗವಿಪುರದಲ್ಲೇ ನಡೆಯಲಿದೆ. ಜಯನಗರದ ಶಿವಶಕ್ತಿ ಗಣಪತಿಯ ಆಶೀರ್ವಾದದೊಂದಿಗೆ ಚಿತ್ರದ ಮುಹೂರ್ತ ನೆರವೇರಿದೆ. ಅಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭಿಸಲಾಗಿದೆ.

ಸೂರಜ್ ಸಾಸನೂರು ಚಿತ್ರದ ನಾಯಕ. ಈತ ವಿಜಾಪುರದ ಹುಡುಗ. ಧಾರವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಚಿತ್ರದ ನಾಯಕಿ ಸೌಜನ್ಯಾ. ಈಕೆ ಉತ್ತರ ಕರ್ನಾಟಕದ ರಾಣೆ ಬೆನ್ನೂರಿನವಳಾದರೂ, ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ಎಲ್ಲರನ್ನೂ ಸೆಳೆಯುವ ಫೋಟೊಜನಿಕ್ ಫೇಸ್ ಇವರದ್ದಂತೆ.

ಚಿತ್ರವನ್ನು ಕೃಷ್ಣಬಾಬು ನಿರ್ದೇಶಿಸುತ್ತಿದ್ದಾರೆ. ಇವರಿಗೆ ಇದು ಚೊಚ್ಚಲ ಚಿತ್ರ. ಬಹಳ ಇಷ್ಟಪಟ್ಟು ಇವರೊಂದು ಪ್ರೇಮಕಥೆಯನ್ನು ಹೆಣೆದಿದ್ದಾರೆ. ಚಿತ್ರ ಕೇವಲ ಪ್ರೀತಿಗೆ ಮಾತ್ರ ಸೀಮಿತವಲ್ಲ. ಅದನ್ನು ಉಳಿಸಿಕೊಳ್ಳಲು ಹೋರಾಡುವ ಕೆಲಸವೂ ನಾಯಕಿಗೆ ಇದೆಯಂತೆ. ಆದ್ದರಿಂದ ಶೇ.25ರಷ್ಟು ಆಕ್ಷನ್ ಕೂಡಾ ಇದೆಯಂತೆ. ಜೆ.ಜೆ. ಕೃಷ್ಣ ಕ್ಯಾಮರಾಮನ್. ವಿದೇಶದಲ್ಲಿ ಹಾಡಿನ ಶೂಟಿಂಗ್ ನಡೆಯಲಿದೆಯಂತೆ. ಚಿತ್ರದ ಮುಹೂರ್ತ ಮುಗಿದು ಶೂಟಿಂಗ್ ಆರಂಭವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗವೀಪುರ, ಕನ್ನಡ ಸಿನಿಮಾ, ಸೌಜನ್ಯಾ, ಸೂರಜ್