ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂದಿ ಗ್ರಾಮದಲ್ಲಿ 'ವಿಷ್ಣು' ಅವತಾರ (Vishnu | Abhijith | Poonam | Thriller Manju)
ಶ್ರೀಮತಿ ಸಿ.ಎನ್. ರೋಹಿಣಿ ಅಭಿಜಿತ್ ಅವರು ನಿರ್ಮಿಸುತ್ತಿರುವ 'ವಿಷ್ಣು' ಚಿತ್ರಕ್ಕಾಗಿ ಎಂ.ಎನ್. ಕೃಪಾಕರ್ ಅವರು ಬರೆದ ಗೀತೆಯ ಚಿತ್ರೀಕರಣ ನಂದಿ ಗ್ರಾಮದಲ್ಲಿ ನಡೆಯಿತು.

ಅಭಿಜಿತ್, ಪೂನಂ, ಸತ್ಯಪ್ರಕಾಶ್, ಗೀತಾ, ಶರತ್ ಲೋಹಿತಾಶ್ವ ಹಾಗೂ ನೂರಕ್ಕೂ ಅಧಿಕ ಕಲಾವಿದರು ಗೀತೆಯೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ದ್ವಿಪಾತ್ರದಲ್ಲಿ ನಟಿಸುತ್ತಿರುವ ಅಭಿಜಿತ್ ಈ ಚಿತ್ರದ ನಿರ್ದೇಶಕ ಕೂಡಾ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಸಂಗೀತ ನಿರ್ದೇಶನವಿದೆ.

ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಗೋವರ್ಧನ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಮಚಂದ್ರುಡು ಸಂಭಾಷಣೆ ಬರೆದಿದ್ದಾರೆ. ಅಭಿಜಿತ್, ಪೂನಂ, ಸತ್ಯಪ್ರಕಾಶ್, ಗೀತಾ, ಶರತ್ ಲೋಹಿತಾಶ್ವ, ಆಶೀಷ್ ವಿದ್ಯಾರ್ಥಿ, ಬುಲೆಟ್ ಪ್ರಕಾಶ್, ರವಿಶಂಕರ್ (ಪಯಣ), ಮನೋಜ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಇವನ್ನೂ ಓದಿ