ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರೀಕರಣ ಶುರುವಾದರೂ ರವಿಚಂದ್ರನ್ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿಲ್ಲ! (Ravi Chandran | Parama Shiva | Anaji Nagaraj | Hamsalekha)
PR
ರವಿಚಂದ್ರನ್‌ ಅಭಿನಯದ 'ಯುದ್ಧಕಾಂಡ' ಚಿತ್ರದಲ್ಲಿ ಸಂಗೀತಬ್ರಹ್ಮ ಹಂಸಲೇಖಾ ಒಂದು ಸುಂದರ ಗೀತೆಯನ್ನು ಬರೆದಿದ್ದಾರೆ. 'ಸೋಲೇ ಇಲ್ಲಾ ನಿನ್ನಾ ಹಾಡು ಹಾಡುವಾಗ....' ಎಂಬ ಈ ಹಾಡಿನಲ್ಲಿ 'ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು...' ಎಂಬುದೊಂದು ಸಾಲುಬರುತ್ತದೆ. ಬದುಕಿನಲ್ಲಿ ಬರುವ ಸುಖದ-ಕಷ್ಟದ ಕ್ಷಣಗಳಿಗೆ ಅವರು ನೀಡಿದ ಉಪಮೆಯಿದು. ರವಿಚಂದ್ರನ್‌ರವರಿಗೆ ಇದು ಸದ್ಯಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಮಲ್ಲ' ಚಿತ್ರದ ನಂತರ ರವಿಚಂದ್ರನ್‌ರವರ ಚಿತ್ರಗಳಾವುವೂ 'ಓಹೋ' ಎಂಬಂತೆ ಯಶಸ್ಸು ದಾಖಲಿಸಿದ ನಿದರ್ಶನಗಳಿಲ್ಲ. 'ನೀಲಕಂಠ', 'ಹೂ', 'ಮಲ್ಲಿಕಾರ್ಜುನ', 'ಯುಗಾದಿ', 'ಟಾಟಾ ಬಿರ್ಲಾ' ಹೀಗೆ ಸರಣಿಯಲ್ಲಿ ಬಂದ ಅವರ ಚಿತ್ರಗಳು ಕೇವಲ ಪಟ್ಟಿಗೆ ಸೇರಿದ ಹೆಸರುಗಳಾಗಿಬಿಟ್ಟವಷ್ಟೇ. ಇಷ್ಟಾಗಿಯೂ ಅವರ ಉತ್ಸಾಹ ಕುಂದಿಲ್ಲವೆಂಬುದಕ್ಕೆ ಇತ್ತೀಚೆಗಷ್ಟೇ ಸೆಟ್ಟೇರಿದ ಅವರ 'ಪರಮಶಿವ' ಚಿತ್ರವೇ ಸಾಕ್ಷಿ.

ಅಣಜಿ ನಾಗರಾಜ್‌ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಮಹೇಶ್‌ಬಾಬು. ಯಶಸ್‌ ಈ ಚಿತ್ರದಲ್ಲಿ ರವಿಚಂದ್ರನ್‌ರವರ ಸೋದರನ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ವಾಸ್ತವವಾಗಿ ರವಿಚಂದ್ರನ್‌ ಚಿತ್ರಗಳು ಸೆಟ್ಟೇರುವಾಗಲೇ ನಾಯಕಿ ಯಾರೆಂದು ಪ್ರಚಾರವಾಗಿರುತ್ತದೆ. ಆದರೆ ಫಾರ್‌-ಎ-ಚೇಂಜ್‌ ಇಲ್ಲಿನ್ನೂ ನಾಯಕಿಯ ಆಯ್ಕೆಯಾಗಿಲ್ಲ.

ಈಗಾಗಲೇ ಐದು ದಿನಗಳ ಚಿತ್ರೀಕರಣವನ್ನು ನಡೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಕಥೆಯ ವಿವರಗಳು ಇನ್ನೂ ಲಭ್ಯವಾಗಿಲ್ಲ. ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆಂದು ತಿಳಿದುಬಂದಿದೆ. ಚಿತ್ರನಿರ್ಮಾಣದ ಗುಂಗಿನಲ್ಲಿ ತಮ್ಮ ಮ‌ೂಲ ಕಸುಬುಗಾರಿಕೆಯಾದ ಛಾಯಾಗ್ರಹಣದಿಂದ ಹಿಂದೆ ಸರಿದಿದ್ದ ಅಣಜಿ ನಾಗರಾಜ್‌ ಈ ಚಿತ್ರಕ್ಕೆ ಸ್ವತಃ ತಾವೇ ಛಾಯಾಗ್ರಾಹಕರಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.

'ಪರಮಶಿವ' ಚಿತ್ರವಾದರೂ ಕ್ರೇಜಿಸ್ಟಾರ್‌ಗೆ ಯಶಸ್ಸನ್ನು ತಂದುಕೊಡಲಿ ಎಂದು ಹಾರೈಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ