ಮುಖ್ಯ ಪುಟ » ವಿವಿಧ » ಸ್ವಾತಂತ್ರ್ಯ ವಿಶೇಷ (Independence Day)
1947, ಆಗಸ್ಟ್ 15 ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ದಿನ. ದಬ್ಬಾಳಿಕೆಯಿಂದ ಆಳಿದ ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ ದಿನ. ಅಂದು ಸ್ವಾತಂತ್ರ್ಯ ಗಳಿಸಲು ನೆತ್ತರು ಹರಿಸಿದವರು ಎಷ್ಟೋ ಜನ. ತ್ಯಾಗ, ಬಲಿದಾನ ಮಾಡಿದವರು ಎಷ್ಟೋ ಜನ.
  ಮುಂದೆ ಓದಿ
 
ವಿಶ್ವಕ್ಕೆ ಮಹಾನ್‌ಮಹಾನ್ ಕೊಡುಗೆ ನೀಡಿರುವ ಭರತಖಂಡ ಸರ್ವಸ್ವತಂತ್ರವಾಗಿ ಆರು ದಶಗಳೇ ಸಂದಿವೆ. ಆದರೆ ಈ ಗಣತಂತ್ರವೆಂಬ ಸ್ವತಂತ್ರ ರಾಷ್ಟ್ರದಲ್ಲಿ ನಾವು ನಿಜವಾಗಿಯೂ ಸ್ವತಂತ್ರವಾಗಿದ್ದೆವೆಯೇ ಎಂಬ ಪ್ರಶ್ನೆ ಏಳುತ್ತಿದೆ. ಒಂದು ಕಾಲದಲ್ಲಿ ಅನುಮಾನದಿಂದಲೂ ನಿರ್ಲಕ್ಷದಿಂದಲೂ ನಮ್ಮನ್ನು ಕಾಣುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯಗಳಿಂದು ನಮ್ಮ ಪ್ರಗತಿಯನ್ನು ಬೆರಗಿನಿಂದ ನೋಡುತ್ತಿವೆ. ಇದಕ್ಕೆ ನಾವು ಹೆಮ್ಮೆಪಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಷ್ಟು ಸುದೀರ್ಘ ಅವಧಿಗೆ ಹೋಲಿಸಿದರೆ ಅಪಾರವಾದ ಸಂಪನ್ಮೂಲವನ್ನು ಹೊಂದಿರುವ...
 
ಭಾರತ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ, ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಸೇರಿದಂತೆ ಪ್ರಗತಿಶೀಲ ರಾಷ್ಟ್ರಗಳೇ ಭಾರತದತ್ತ ಅಚ್ಚರಿಯ ದೃಷ್ಟಿ ನೆಟ್ಟಿವೆ. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಹೆದರಿಸುತ್ತಿದ್ದ ದೊಡ್ಡಣ್ಣ ಆರ್ಥಿಕ ಹೊಡೆತದಿಂದ ಕಂಗಾಲಾಗಿ, ಉಳಿದ ವಿದೇಶಿ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಗರಬಡಿದಂತೆ ಕೂತಿದ್ದರೆ, ಭಾರತ ಮಾತ್ರ ಏನೇ ಬಂದರು ಎದುರಿಸುತ್ತೇವೆ ಎಂಬ ದಿಟ್ಟತನದ ವರ್ತನೆ ತೋರಿತ್ತು.
ಮಡಿವಂತ ರಾಷ್ಟ್ರದಲ್ಲಿ ಸ್ವಾತಂತ್ರ್ಯದ ವಿಭಿನ್ನ ಮುಖ
ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ಈ ಸ್ವಾತಂತ್ರ್ಯೋತ್ಸವಕ್ಕೂ ವ್ಯತ್ಯಾಸವಿದೆ. ಏಕೆಂದರೆ ಈ ವರ್ಷ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಮೂಲೆಗುಂಪಾಗಿದ್ದ, ತುಚ್ಛವಾಗಿ ಪರಿಗಣಿಸಲ್ಪಟ್ಟಿದ್ದ ಪಂಗಡವೊಂದಕ್ಕೆ ವಿಶೇಷ ಸ್ವಾತಂತ್ರ್ಯ ದೊರಕಿದೆ. ಹೌದು, ನಾನು ಮಾತನಾಡುತ್ತಿರುವುದು ಸಲಿಂಗಕಾಮಿಗಳ ಬಗ್ಗೆ. ಭಾರತದಲ್ಲಿನ ಸಲಿಂಗಿಗಳು ಇಷ್ಟು ಕಾಲ ತಮ್ಮ ಉತ್ತಮ, ಸಮಾನವಾದ ಗೌರವಯುತ ಬದುಕಿಗಾಗಿ ಮಾಡಿದ ಹೋರಾಟಕ್ಕೆ ಅಂತಿಮವಾಗಿ ನ್ಯಾಯ ದೊರಕಿದೆ.
ಮುಂದಿನ ವರ್ಷದ ಸ್ವಾತಂತ್ರ್ಯ ಭರವಸೆ ನನಗಿಲ್ಲ..!
ಹೀಗೆ ಕೂತರೆ ಹಲವಾರು ಯೋಚನೆಗಳು ತಲೆ ತಿನ್ನುತ್ತವೆ. ಹಲವರು ಹೆಂಡತಿ ಬಂದ ಮೇಲೆ ನೆಟ್ಟಗಾಗಿದ್ದನ್ನು, ಇನ್ನು ಕೆಲವರು ಸೊಟ್ಟಗಾಗಿದ್ದನ್ನು ನೋಡಿದ್ದೇನೆ. ನನಗದರಲ್ಲಿ ಯಾವುದು ಕಾದಿದೆ ಅಂತ ಹಲವು ಬಾರಿ ಯೋಚಿಸಿದ್ದಿದೆ. ಇದನ್ನು ಆತಂಕಗಳು ಎಂದು ಬೇಕಾದರೂ ಕರೆಯಿರಿ. ಹತ್ತಿರದ ಗೆಳೆಯ ರಾಜೇಶ್‌ನನ್ನು ನೋಡಿದ ಮೇಲಂತೂ ಮದುವೆಯಾದ ಮೇಲೆ ಜೀವನದ ರೀತಿ-ನೀತಿಗಳು ಬದಲಾಗುತ್ತವೆ ಎಂಬುದನ್ನು...
ಮಹಾತ್ಮ ಗಾಂಧೀಜಿಗಿಲ್ಲಿ ನಿತ್ಯವೂ ಆರತಿ-ಅರ್ಚನೆ 
ದೇವರನ್ನು ನೋಡಿದವರಿಲ್ಲ. ಅವನು ಹೇಗಿರುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಕಲ್ಪನಾರೂಪ ನೀಡಿಕೊಂಡ ಮಾನವ, ಆ ಕಾಣದ ದೇವರ ಪ್ರತಿಮೆ ಮಾಡಿ ಭಕ್ತಿಯನ್ನು ತೋರ್ಪಡಿಸಿ ಭಯಾತಂಕಗಳನ್ನು ಹೋಗಲಾಡಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದಷ್ಟು ಉದಾರವಾಗಿ ಯೋಚಿಸಿದರೆ, ಪ್ರತಿಯೊಬ್ಬ ಮಾನವ ಜೀವಿಯೂ ದೈವಾಂಶಸಂಭೂತ. ಇದು ಬಹುತೇಕ ಎಲ್ಲ ಧರ್ಮಗಳ ತಿರುಳು ಕೂಡ ಹೌದು.
ನಂಗೂ ಸ್ವಾತಂತ್ರ್ಯ ಸಿಕ್ತು, ನಾನೂ ಭ್ರಷ್ಟಾಚಾರಿಯಾದೆ!
ಅರ್ಧ ಶತಮಾನದ ಹಿಂದೆ... ನಮ್ಮಜ್ಜ, ತಾತಂದಿರ ಕಾಲವದು. 1947ರಲ್ಲಿ ಭಾರತಕ್ಕೆ ಸಾತಂತ್ರ್ಯ ಸಿಕ್ಕಾಗ ನಮ್ಮಜ್ಜಂದಿರಿಗೂ ಸ್ವಾತಂತ್ರ್ಯ ಸಿಕ್ತು. ಅದು ವಂಶ ಪಾರಂಪರ್ಯವಾಗಿ ಹರಿದು ಸ್ವಾತಂತ್ರ್ಯ ಅನ್ನೋ ಆಜನ್ಮ ಸಿದ್ದ ಹಕ್ಕು ನನ್ನ ಪಾಲಿಗಾಯಿತು. ಹೌದು, ಜನ್ಮ ಪೂರ್ವತಃವಾಗಿಯೇ ನನಗೆ ಈ ಹಕ್ಕು ಲಭಿಸಿತ್ತು. ಅಂತೂ ನಾನು ಬೆಳೆದು, ಭಾರತದ ಬಡ 'ಮತದಾರ'ನ ವಯಸ್ಸೂ ಆಯಿತು. ಆಗೊಂದು ಮನಸ್ಸೂ ಆಯಿತು.