ಮುಖ್ಯ ಪುಟ > ವಿವಿಧ > ಸ್ವಾತಂತ್ರ್ಯ ವಿಶೇಷ > ಲೇಖನ > ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
ಭಾರತ ಎದುರಿಗಿದ್ದ ಮತ್ತೊಂದು ಬೃಹತ್ ಸವಾಲು ವಿವಿಧ ಭಾಷೆ, ಸಂಸ್ಕೃತಿ, ಜಾತಿ, ಧರ್ಮವನ್ನು ಹೊಂದಿರುವ ಜನರನ್ನು ಒಂದೇ ರಾಷ್ಟ್ರ ಎಂಬ ಸೂರಿನಡಿಗೆ ತರುವುದು. ಈ ನಿಟ್ಟಿನಲ್ಲಿ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿದ್ದವು. ಕಾರಣ ಆವರೆಗೆ ವಿವಿಧ ಜಾತಿ, ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಭೂ ಖಂಡವನ್ನು ಒಟ್ಟಾಗಿಸಿ ಒಂದು ರಾಷ್ಟ್ರವನ್ನಾಗಿ ರಚಿಸಿದ ಉದಾಹರಣೆ ಇರಲಿಲ್ಲ. ಇಂಗ್ಲೆಂಡ್ ಆಗಲಿ, ಫ್ರಾನ್ಸ್ ಆಗಲಿ, ಪೊಲೆಂಡ್ ಆಗಲಿ ಎಲ್ಲವೂ ಒಂದು ಭಾಷೆ, ಸಂಸ್ಕೃತಿ, ಜಾತಿ ಆಧಾರದಲ್ಲಿ ತಮ್ಮ ರಾಷ್ಟ್ರವನ್ನು ಕಟ್ಟಿದ್ದವು. ಆದರೆ ಭಾರತದಲ್ಲಿ ಉತ್ತರದಿಂದ ಹಿಡಿದು ದಕ್ಷಿಣದವರೆಗೆ ನಾನಾ ರೀತಿಯ ಭಾಷೆ, ಸಂಸ್ಕೃತಿ, ಜಾತಿ, ಧರ್ಮಗಳ ಜನರು ನೆಲೆಸುತ್ತಾರೆ. ಇವರನ್ನು ಒಟ್ಟುಗೂಡಿಸಿ ಒಂದೇ ರಾಷ್ಟ್ರದಡಿ ತರುವುದು ಭಾರತದ ಎದುರಿಗಿನ ಅತಿ ದೊಡ್ಡ ಸವಾಲಾಗಿತ್ತು. ಆದರೆ ಭಾರತ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿತು. ಆಗ ಭಾರತದ ಅಖಂಡತೆಯನ್ನು ಅನುಮಾನ ದೃಷ್ಠಿಯಿಂದ ನೋಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತದ ವಿವಿಧತೆಯಲ್ಲಿನ ಏಕತೆಯನ್ನು ಬೆರಗು ಕಣ್ಣಿನಿಂದ ಹಾಗೂ ಗೌರವಯುತವಾಗಿ ಕಾಣುತ್ತಿವೆ.
  ಆಗ ಭಾರತದ ಅಖಂಡತೆಯನ್ನು ಅನುಮಾನ ದೃಷ್ಠಿಯಿಂದ ನೋಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತ ವಿವಿಧತೆಯಲ್ಲಿನ ಏಕತೆಯನ್ನು ಬೆರಗು ಕಣ್ಣಿನಿಂದ ಹಾಗೂ ಗೌರವಯುತವಾಗಿ ಕಾಣುತ್ತಿವೆ.      

ಈ ಬೃಹತ್ ಸವಾಲುಗಳ ಯಶಸ್ವಿ ನಿಭಾವಣೆಗೆ ಭಾರತದ ಸದೃಢ ಪ್ರಜಾಪ್ರಭುತ್ವ ಪ್ರಮುಖ ಕಾರಣವಾಗಿದೆ. ಆಗಿನ ರಾಷ್ಟ್ರ ನಾಯಕರ ದೂರದೃಷ್ಟಿ, ದೇಶಾಭಿಮಾನ ಮತ್ತು ಬುದ್ಧಿವಂತಿಕೆ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಮೊದಲ ಭಾರಿಗೆ ದೇಶ ಸಾರ್ವತ್ರಿಕ ಚುನಾವಣೆಗೆ ಹೋಗುವ ವೇಳೆ ಎಲ್ಲರೂ ಅನುಮಾನ ವ್ಯಕ್ತಪಡಿಸಿದ್ದರು. ಕಾರಣ ಅಸಂಖ್ಯಾತ ಅನಕ್ಷರಸ್ಥ, ವಿವಿಧ ಜಾತಿ ಧರ್ಮದ ಜನರನ್ನು ಹೊಂದಿರುವ ರಾಷ್ಟ್ರವೊಂದು ಚುನಾವಣೆ ನಡೆಸುವುದು ಅದೇ ಮೊದಲಾಗಿತ್ತು. ಆದರೆ ಭಾರತ ಅದನ್ನು ಯಶಸ್ವಿಯಾಗಿ ಪೂರೈಸಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಮೂಕವಿಸ್ಮಿತವನ್ನಾಗಿಸಿತು. ಭಾರತ ಈವರೆಗೆ ಒಟ್ಟು 14 ಸಾರ್ವತ್ರಿಕ ಚುನಾವಣೆಯನ್ನು ನಡೆಸಿದ್ದರೆ, ಅಸಂಖ್ಯಾತ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತದ್ವಿರುದ್ಧವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತದಾರರ ಸಂಖ್ಯೆಯೂ ಪ್ರತಿ ಬಾರಿಯೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಪ್ರಜಾಪ್ರಭುತ್ವ ಮೇಲಿನ ಭಾರತ ಜನರ ನಂಬಿಕೆ, ವಿಶ್ವಾಸ ಮತ್ತು ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆಗಳ ಭದ್ರ ಬುನಾದಿ.

1980ರಿಂದೀಚೆಗೆ ಸರಕಾರ ಅಳವಡಿಸಿದ ಉದ್ದಿಮೆ, ಮಾರುಕಟ್ಟೆ ಸ್ನೇಹಿ ಆರ್ಥಿಕ ನೀತಿಯ ಫಲವಾಗಿ ಭಾರತ ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಶರವೇಗದ ಬೆಳವಣಿಗೆ ಕಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಭಾರತವನ್ನು ಬೆರಗಿನಿಂದ ಕಾಣುತ್ತಿವೆ. ಭಾರತ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬೆಳೆದು ಬಂದ ರೀತಿ ಅನುಕರಣೀಯ. ನಮ್ಮ ದೇಶೀಯ ಉದ್ಯಮಿಗಳು ಶ್ರೀಮಂತ ರಾಷ್ಟ್ರಗಳಲ್ಲಿನ ಬೃಹತ್ ಕಂಪೆನಿಗಳನ್ನು ಖರೀದಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಈ ಬೆಳವಣಿಗೆಗಳು ಭಾರತದಲ್ಲಿ ಸುಮಾರು 200 ದಶಲಕ್ಷ ಮಧ್ಯಮ ವರ್ಗದವರನ್ನು ಸೃಷ್ಟಿಸಿದ್ದು, ಅವರಲ್ಲಿ ವಿಶ್ವಾಸ ತುಂಬಿ ತುಳುಕುವಂತೆ ಮಾಡಿದೆ. ವಿಶ್ವ ಆರ್ಥಿಕತೆಯನ್ನು ಏರುಪೇರು ಮಾಡುವಷ್ಟರ ಮಟ್ಟಿಗೆ ಭಾರತದ ಆರ್ಥಿಕತೆ ಬೆಳೆದು ನಿಂತಿದೆ. ಈ ಹಿಂದೆ ಭಾರತದತ್ತ ಆತಂಕದ ನೋಟವನ್ನು ಹರಿಸುತ್ತಿದ್ದ ವಿದೇಶಿ ರಾಷ್ಟ್ರಗಳು ಈಗ ಧೈರ್ಯದಿಂದ, ವಿಶ್ವಾಸದಿಂದ ನೋಡುತ್ತಿವೆ.

ಇದರ ಅರ್ಥ ಭಾರತದಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ಭಾರತ ಅನೇಕ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿದೆ. ಭಾರತದಲ್ಲಿ ಇನ್ನೂ ಸುಮಾರು 300 ದಶಲಕ್ಷ ಜನರು ಬಡತನ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ನಕ್ಸಲ್‌ವಾದ, ಭಯೋತ್ಪಾದನೆಗಳು ಅಖಂಡ ಭಾರತಕ್ಕೆ ಸವಾಲು ಒಡ್ಡುತ್ತಿವೆ. ಇದರ ಜತೆಗೆ ದೇಶದ ಭ್ರಷ್ಟ ರಾಜಕಾರಣಿಗಳು ಪ್ರಜಾಪ್ರಭುತ್ವ ಆಡಳಿತ ಯಂತ್ರದಲ್ಲಿದ್ದಕೊಂಡೇ ರಾಷ್ಟ್ರವನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಆದರೂ ಭಾರತ ಮುನ್ನುಗ್ಗುತ್ತಿದೆ. ಇದಕ್ಕೆ ಕಾರಣ ಭಾರತದ ಸದೃಢ ಪ್ರಜಾಪ್ರಭುತ್ವ. ಭಾರತ ಉಳಿಯಲಿದೆಯೇ? ಎಂಬ ಪ್ರಶ್ನೆ ಇಂದು ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆಯೇ? ಎಂಬುದಾಗಿ ಪರಿವರ್ತಿತವಾಗಿದೆ.
<< 1 | 2 
ಮತ್ತಷ್ಟು
ವಿಡಂಬನೆ: ನಂಗೂ ಸ್ವಾತಂತ್ರ್ಯ ಸಿಕ್ತು, ನಾನೂ ಭ್ರಷ್ಟಾಚಾರಿಯಾದೆ!
ನಗುತ್ತಲೇ ನೇಣಿಗೆ ಕೊರಳೊಡ್ಡಿದನೇ ಖುದೀರಾಮ್?
ಗ್ರಾಮೀಣ ವಿದ್ಯುತ್‌ಗೆ 'ಗಾಂಧಿ ಚರಕ'ದ ನೆರವು
ಸ್ವೇಚ್ಛಾಚಾರವೇ ಸ್ವಾತಂತ್ರ್ಯವೇ...?
ಕಥೆ: ಆ ಪ್ಲಾಸ್ಟಿಕ್ ಧ್ವಜದ ಗುಂಗಲ್ಲಿ...
ಸ್ವಾತಂತ್ರ್ಯ ಹೋರಾಟದ ಕ್ರಾಂತಿಪುರುಷ ಉದಾಮ್‌ಸಿಂಗ್