ಮುಖ್ಯ ಪುಟ  ವಿವಿಧ > ಪುಟಾಣಿ ವಿಭಾಗ > ಕಥೆಗಳು
 
ಪುತುಲ್ ಮತ್ತು ಢಾಲ್ಫಿನ್‌ಗಳು
ಮಕ್ಕಳ ಕಥೆ:ಪುಸ್ತಕ ವಿಮರ್ಷೆ
AvinashWD
ಬಂಗಾಳದಲ್ಲಿ ಗಂಗಾನದಿಯ ತೀರದಲ್ಲಿ ಧಾಬ್ರಿ ಎಂಬ ಪುಟ್ಟ ಹಳ್ಳಯೊಂದಿತ್ತು. ಈ ಹಳ್ಳಿಯಲ್ಲಿ ಅನೇಕ ಮೀನುಗಾರರ ಗುಡಿಸಲುಗಳಿದ್ದು, ಪುತುಲ್ ಎಂಬ ಹುಡುಗಿಯು ಒಂದು ಗುಡಿಸಲಿನಲ್ಲಿ ತನ್ನ ಅಪ್ಪ ಅಮ್ಮನೊಂದಿಗೆ ವಾಸಿಸುತ್ತಿದ್ದಳು.

ಇಲ್ಲಿರುವ ಗುಡಿಸಲುಗಳು ನದಿಗೆ ಎಷ್ಟು ಹತ್ತಿರವಾಗಿತ್ತೆಂದರೆ ಅಲ್ಲಿ ಹಚ್ಚಿದ್ದ ದೀಪಗಳ ಬೆಳಕು ಹರಿಯುವ ನೀರಿನ ಮೇಲೆ ಹೊಳೆವ ಹಳದಿ ಎಳೆಗಳಂತೆ ತೋರುತ್ತಿದ್ದವು.ಗಂಗಾನದಿಯು ಇಲ್ಲಿನ ಜನರಿಗೆ ಒಡನಾಡಿ, ಶತ್ರು ಎರಡೂ ಆಗಿತ್ತು.

ಈ ನದಿಯು ಇಲ್ಲಿನ ಜನರಿಗೆ ಮಾರಲಿಕ್ಕೆ ಮತ್ತು ತಿನ್ನಲಿಕ್ಕೆ ಮೀನನ್ನು ಕೊಡುತ್ತಿತ್ತು ಆದರೆ ಮಳೆಗಾಲದಲ್ಲಿ ಕೆಲವೊಮ್ಮೆ ರಾಕ್ಷಸರೂಪ ತಾಳುತ್ತಿತ್ತು.ಒಂದು ಮಳೆಗಾಲದಲ್ಲಿ ಉಂಟಾದ ತೀವ್ರ ಮಳೆಯಿಂದಾಗಿ ಗಂಗಾನದಿ ಉಕ್ಕಿ ಹರಿದು ಗುಡಿಸಲುಗಳ ಬಾಗಿಲವರೆಗೂ ಬಂದಿತ್ತು.

ಈ ನೀರಿನೊಂದಿಗೆ ಎರಡು ಪುಟ್ಟ ಡಾಲ್ಫಿನ್ನುಗಳು ಆಡುತ್ತಾ ಆಡುತ್ತಾ ಪುತುಲ್‌ನ ಮನೆಯ ಬಾಗಿಲಿಗೇ ಬಂದುಬಿಟ್ಟವು. ಡಾಲ್ಫಿನ್ನುಗಳನ್ನು ಹಿಡಿದು ಮಾರಿದರೆ ತುಂಬಾ ಹಣ ಸಿಗಬಹುದೆಂದು ಅವಳ ಅಮ್ಮ ಅದನ್ನು ಓಡಿಸಬೇಡ ಎಂದು ಪುತುಲ್‌ಗೆ ಹೇಳಿದ್ದಳು. ಆದರೆ ಪುತುಲ್‌ಗೆ ಆ ಮುದ್ದುಮರಿಗಳನ್ನು ಸಾಯಿಸುವುದು ಇಷ್ಟವಿರಲಿಲ್ಲ.

ಅದಕ್ಕಾಗಿ ತಾನೂ ಈಜುತ್ತಾ ಅವುಗಳನ್ನು ನದಿಯೆಡೆಗೆ ಕರೆದೊಯ್ದಳು ಆದರೆ ಉಕ್ಕು ನದಿಯ ಶಕ್ತಿಯುತ ಅಲೆಗಳು ಅವಳನ್ನನು ನದಿಮದ್ಯಕ್ಕೆ ಎಳೆದೊಯ್ದಾಗ ಈ ಎರಡು ಪುಟ್ಟ ಡಾಲ್ಫಿನ್ನುಗಳು ಅವಳು ಸಿಕ್ಕಿಹಾಕಿಕೊಂಡಿದ್ದ ಸುಳಿಯಿಂದ ಬಿಡಿಸಿದವು.

ಪುಟ್ಟ ಡಾಲ್ಫಿನ್ ಮರಿಗಳನ್ನು ಕೊಲ್ಲಲು ಇಷ್ಟವಿಲ್ಲದ ಪುತುಲ್ ಅವುಗಳನ್ನು ಓಡಿಸಲು ನಡೆಸುವ ಪ್ರಯತ್ನ ಮತ್ತು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಪುತುಲ್‌ನನ್ನು ಡಾಲ್ಫಿನ್ನುಗಳು ರಕ್ಷಿಸುವ ರೀತಿಯನ್ನು ಲೇಖಕ ಮರಿಯಮ್ ಕರೀಮ್ ಅಹ್ಲಾವತ್ ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ. ಇದರೊಂದಿಗೆ ಉಪಕಾರ ಸ್ಮರಣೆಯ ಮಹತ್ವವನ್ನು ಈ ಕಥೆಯ ಮೂಲಕ ಮಕ್ಕಳಿಗೆ ತಿಳಿಸಿದ್ದಾರೆ.

ಪ್ರೊಯಿತಿ ರಾಯ್ ಅವರು ಈ ಕಥೆಯಲ್ಲಿ ಜಾನಪದ ಶೈಲಿಯ ಚಿತ್ರಗಳನ್ನು ಅತ್ಯಂತ ಆಕರ್ಷಕವಾಗಿ ಚಿತ್ರಿಸಿದ್ದಾರೆ.

ಪುಸ್ತಕ: ಪುತುಲ್ ಮತ್ತು ಡಾಲ್ಫಿನ್ನುಗಳು

ಪ್ರಕಾಶಕರು: ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18

ಲೇಖಕರು: ಮರಿಯಮ್ ಕರೀಮ್- ಅಹ್ಲಾವತ್

ಚಿತ್ರ: ಪ್ರೊಯಿತಿ ರಾಯ್

ಅನುವಾದ: ಬಾಗೇಶ್ರೀ

ಬೆಲೆ: 120 ರೂಪಾಯಿಗಳು
ಮತ್ತಷ್ಟು
ಓಡಿ ಹೋದ ಮೆಣಸಿನಕಾಳು
ಏನು ಮಾಡಲಿ
ಅವನೀತ್ ಆಂಟಿಯ ಮೊಬೈಲ್ ಫೋನ್
ಏಂಜೆಲಾ
ರಾಜನ ಹೊಸ ಬಟ್ಟೆ
ಏಳು ಆಡು ಮರಿ ಮತ್ತು ಕಪಟ ನರಿ