ಹರಿದಾಸ ಸಾಹಿತ್ಯ ರಚನೆಕಾರರಲ್ಲಿ ಹೆಳವನಕಟ್ಟೆ ಗಿರಿಯಮ್ಮ (ಸು 1750) ಮೊದಲನೆ ಕವಿಯಿತ್ರಿಯೆಂದು ಹೆಸರು ಪಡೆದಿದ್ದಾಳೆ. ಕರ್ನಾಟಕದ ಎಲ್ಲೆಡೆಯೂ ಪ್ರಸಿದ್ದಿ ಪಡೆದ ಈಕೆ ರಚಿಸಿರುವ ಕಿರ್ತನೆಗಳು ಭಕ್ತಿ ಭಾವಕ್ಕೆ ಹೆಸರು ಪಡೆದಿವೆ. ಹರಿದಾಸ ಸಾಹಿತ್ಯದಲ್ಲಿ ಈಕೆಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ.
ಗಿರಿಯಮ್ಮನ ತಂದೆ ತಾಯಿ ಭೀಷ್ಮಪ್ಪ ಜೋಯಿಸ್ ಮತ್ತು ತುಂಗಮ್ಮ ಭಾಗವತ್ ಸಂಪ್ರದಾಯಕ್ಕೆ ಸೇರಿದ ನಿಷ್ಟಾವಂತರು.ಏಕೈಕ ಪುತ್ರಿಯಾಗಿ ಜನಿಸಿದ ಗಿರಿಯಮ್ಮ ಭಗವಂತನ ಅನುಗ್ರಹದವಳು ಎಂದು ನಂಬಿಕೆ.ಚಿಕ್ಕಂದಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಗಿರಿಯಮ್ಮ ಚಿಕ್ಕಪ್ಪನ ಪೋಷಣೆಯಲ್ಲಿ ಬೆಳೆದಳು.
ಮದುವೆಯ ವಯಸ್ಸಾಗುತ್ತಿದ್ದಂತೆ ಮಲೆಬೆನ್ನೂರಿನ (ದಾವಣಗೆರೆ ಜಿಲ್ಲೆ) ತಿಪ್ಪರಸ ಎಂಬುವರೊಂದಿಗೆ ವಿವಾಹ ನಡೆಯಿತು. ಆದರೆ ವೈವಾಹಿಕ ಜೀವನ ಆಕೆಗೆ ಹಿಡಿಸಲಿಲ್ಲ. ಭಗವಂತನ ಸೇವೆಗಾಗಿ ತಾನೆಂದು ನಿರ್ಧರಿಸಿ ಇದರಿಂದ ಪತಿಗೆ ಅನ್ಯಾಯವಾಗಬಾರದು ಎಂದು ತಾನೆ ಶ್ರದ್ದೆವಹಿಸಿ ಬೇರೊಂದು ವಧುವನ್ನು ನೋಡಿ ಆತನಿಗೆ ಮದುವೆ ಮಾಡಿದಳು. ಅನಂತರ ಸದಾ ಭಗವಂತನ ಚಿಂತನೆಯಲ್ಲಿ ನಿರತಳಾದಳು.
ಗಿರಿಯಮ್ಮನ ಕೊಡುಗೆ ಹರಿದಾಸ ಸಾಹಿತ್ಯಕ್ಕೆ ಅಪಾರ ಚಂದ್ರಹಾಸ ಕಥೆ, ಸೀತಾ ಕಲ್ಯಾಣ, ಉದ್ದಾಳಕನ ಕಥೆ ಆಕೆ ರಚಿಸಿರುವ ಖಂಡ ಕಾವ್ಯಗಳು. ಜೆಮಿನಿ ಭಾರತ ಕರ್ತೃ ಲಕ್ಷ್ಮೀಶನ ಶೈಲಿ ಅವಳ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಗಿರಿಯಮ್ಮನ ಕೃತಿಗಳು ಹೆಚ್ಚಾಗಿ ಪ್ರಚಾರವಾಗಿರುವುದು ಆಕೆಯ ಹಾಡುಗಳಲ್ಲಿ, ನಾಡಿನದ್ಯಾಂತ ಗಿರಿಯಮ್ಮ ರಚಿಸಿರುವ ಶಂಕರ ಗಂಡನ ಹಾಡು, ಬ್ರಹ್ಮ ಕೊರವಂಜಿ, ಕೃಷ್ಣ ಕೊರವಂಜಿ, ಲವಕುಶ ಕಾಳಗ, ಬಹಳ ಅಚ್ಚುಮೆಚ್ಚವಾಗಿವೆ.
|