ಮುಖ್ಯ ಪುಟ  ವಿವಿಧ  ಸಾಹಿತ್ಯ  ಕವನ
 
ಶೋಧ
webdunia
ಸೃಷ್ಟಿಯ ಮೂಲ
ಅರಿಯ ಬಯಸಿ
ಸುತ್ತೆಲ್ಲ ಸುಳಿದು
ಜೀವನದ ತಳಕ್ಕೆ

ಇಳಿದು ಪರಡಿದೆ
ಅನಾಥ ಪ್ರಜ್ಞೆ
ತಲೆಯೆತ್ತಿ ಬೆದರಿಸಿದಾಗ
ಅಳಬೇಕು ಅನಿಸಿತು.

ನದೀ ಮೂಲ
ಋಷಿ ಮೂಲ
ಇನ್ನೂ ಏನೇನೊ ಮೂಲ
ಹುಡುಕಬಾರದಂತೆ

ಆದರೂ ಅಮವಾಸ್ಯೆಯ
ರಾತ್ರಿ ಕಪ್ಪು ಕತ್ತಲೆ
ಬೆಳಕ ಹುಡುಕುವ
ನನ್ನ ಯತ್ನ ವಿಫಲವಾದಾಗ
ಸೋತೆ ಅನಿಸಿತು.

- ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ
ಮತ್ತಷ್ಟು
ಬೇವು ಬೆಲ್ಲ - ಭಾಗ 2
ಬೇವು ಬೆಲ್ಲ - ಭಾಗ 1
ಜಾತಿ
ಏಕತೆ
ಶ್ರೀಬಸವೇಶ್ವರರ ವಚನಗಳು
ಒಂದೆ ಕುಲ ಒಂದೆ ನೆಲ