ಮುಖ್ಯ ಪುಟ > ವಿವಿಧ > ಸಾಹಿತ್ಯ > ಕಥೆಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆದರಿದ ಹರಿಣಿ
ಹಂಝ ಮಲಾರ್

'ಹಲೋ ಗುಡ್ ಮಾರ್ನಿಂಗ್, ಸರ್ವಾಣಿ ಡೈಲಿ' ಹಾಗಂತ ದಿನಾ ಬೆಳಿಗ್ಗೆ ಎಂಟರಿಂದ ಸಂಜೆ ಆರರವರೆಗೆ ಐಶ್ವರ್ಯ ರಿಸೀವರ್ ಕೈಗೆತ್ತಿಕೊಂಡೊಡನೆ ಹೇಳುತ್ತಾಳೆ. ದಿನಕ್ಕೆ ಕಡಿಮೆ ಎಂದರೂ ಐನೂರಕ್ಕೂ ಅಧಿಕ ಪೋನ್ ಕರೆಗಳನ್ನು ಸ್ವೀಕರಿಸುವ ಆಕೆ, ಎಡಿಟಿಂಗ್, ಪ್ರಿಂಟಿಂಗ್, ಸರ್ಕ್ಯುಲೇಶನ್, ಎಡ್ವರ್ಟೈಸ್‌ಮೆಂಟ್ ಹೀಗೆ ವಿವಿಧ ಸೆಕ್ಷನ್‌ಗಳಿಗೆ ಕನೆಕ್ಷನ್ ಕೊಡುತ್ತಾಳೆ. ಒಮ್ಮೊಮ್ಮೆ ಮಧ್ಯಾಹ್ನ 12 ಗಂಟೆ ದಾಟಿದ್ದರೂ ಕೂಡ ಗುಡ್ ಮಾರ್ನಿಂಗ್ ಅಂತಲೇ ಹೇಳುತ್ತಾಳೆ ಎಂದನ್ನುತ್ತಾ ಕೆಲವರು ಚೇಷ್ಠೆಯಾಡುತ್ತಾರೆ. 'ಓ ಸ್ವಾರಿ' ಅನ್ನುತ್ತಾ ಐಶ್ವರ್ಯಾ ವಾಸ್ತವಕ್ಕಿಳಿಯುತ್ತಾಳೆ.

ಐಶ್ವರ್ಯ ಚಂದದ ಹುಡುಗಿ. ವಯಸ್ಸು ಇನ್ನೂ ಇಪ್ಪತ್ತೊಂದು ಪೂರ್ತಿಯಾಗಿಲ್ಲ. ಬಿ.ಎ. ಮುಗಿಸಿದೊಡನೆ ಪತ್ರಿಕೆಯೊಂದರಲ್ಲಿ ಬಂದ ಜಾಹಿರಾತು ನೋಡಿ ಅರ್ಜಿ ಗುಜರಾಯಿಸಿದ್ದಳು. ಮೊದಲ ಇಂಟರ್‌ವ್ಯೂನಲ್ಲೇ ಗೆದ್ದುಕೊಂಡಿದ್ದಳು. ಅದಕ್ಕೆ ಅವಳ ಚಂದವೇ ಕಾರಣ ಅಂತ ಅವಳಿಗೂ ಗೊತ್ತಿತ್ತು. ಅವಳಿಗೆ ಕೆಲಸ ಸಿಕ್ಕಿದಾಗ, "ಐಶ್ವರ್ಯ, ನಿನಗೆ ಡಿಗ್ರಿ ಮುಗಿದೊಡನೆ ಖಂಡಿತ ಕೆಲಸ ಸಿಗುತ್ತದೆ. ಒಂದೋ ಯಾವುದಾದರೂ ಶಾಪ್‌ನ ಸೇಲ್ಸ್‌ಕೌಂಟರ್‌ನಲ್ಲಿ ಕೆಲಸ ಸಿಕ್ಕೀತು. ಇಲ್ಲದಿದ್ದರೆ ಪ್ರೈವೇಟ್ ಶೋ ರೂಮ್ ಅಥವಾ ಕಂಪೆನಿಗಳಲ್ಲಿ ರಿಸೆಪ್ಶನ್ ಕೆಲಸ ಸಿಕ್ಕೀತು" ಅಂತ ಗೆಳತಿಯರು ಹೇಳುತ್ತಿದ್ದುದು ನೆನಪಾಗಿತ್ತು.

ಐಶ್ವರ್ಯ ಜಿಲ್ಲೆಯ ಪ್ರಭಾವಿ ದೈನಿಕದಲ್ಲಿ ರಿಸೆಪ್ಶನಿಸ್ಟ್ ಆಗಿದ್ದಾಳೆ. ಕಳೆದ ತಿಂಗಳಿನಿಂದ ಅವಳು ಅಲ್ಲಿ ಕೆಲಸ ಮಾಡುತ್ತಿದ್ದಾಳೆ. ದಿನಕ್ಕೆ ನೂರಾರು ತರದ ಪೋನ್ ಕರೆಗಳು ಬರುತ್ತಿತ್ತು. ಆ ಪತ್ರಿಕೆ ಪ್ರಭಾವಿ ಪತ್ರಿಕೆಯಾದ ಕಾರಣ ಕೆಲವು ಬೆದರಿಕೆ ಕರೆಗಳೂ ಬರುತ್ತಿತ್ತು. ಮತ್ತೆ ಸಂಪಾದಕರನ್ನು ಅಭಿನಂದಿಸಿ ಕೆಲವು ಫೋನ್ ಬರುತ್ತಿತ್ತು. ಕೆಲವರು 'ಸಂಪಾದಕರಿಗೆ ಲೈನ್ ಕೊಡಿ' ಎಂದು ಹೇಳುತ್ತಾರೆ. 'ತಾವು ಯಾರು' ಎಂದು ಐಶ್ವರ್ಯ ಕೇಳಬೇಕು. ಬೆದರಿಕೆ ಕರೆ ಅಲ್ಲ ಅಂತ ತಿಳಿದ ನಂತರ ಅವಳು ಸಂಪಾದಕರಿಗೆ ಲೈನ್ ಕನೆಕ್ಟ್ ಮಾಡುತ್ತಾಳೆ.

ಕೆಲವರಿಗಂತೂ ಬೆದರಿಕೆ ಮಾತುಗಳನ್ನು ಯಾರಲ್ಲಿ ಹೇಳಬೇಕು ಎಂಬ ಪ್ರಜ್ಞೆಯೂ ಇರುವುದಿಲ್ಲ. ರಿಸೀವರ್ ತೆಗೆದು ಯಾರು 'ಹಲೋ' ಅನ್ನುತ್ತಾರೋ ಅವರಲ್ಲೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಐಶ್ವರ್ಯಳಿಗೆ ಮೊದಮೊದಲು ಇದು ಕಿರಿಕಿರಿಯಾಗಿತ್ತು. ಕೆಲಸ ಬಿಡಲಾ ಎಂದು ಯೋಚಿಸಿದ್ದಳು. ಆದರೆ ಯಾಕೋ ಆಕೆಗೆ ಕೆಲಸ ಬಿಡಲು ಮನಸ್ಸಾಗಲಿಲ್ಲ. ಎಷ್ಟೋ ಮಂದಿ ಕೆಲಸ ಇಲ್ಲದೆ ಅಲೆದಾಡುತ್ತಾರೆ. ದಿನಾ ಸಂದರ್ಶನ ಎದುರಿಸಿ ಹತಾಶರಾಗುತ್ತಾರೆ. ಎಷ್ಚು ಅನುಭವ ಇದೆ ಎಂದು ಅಸಂಬದ್ಧವಾಗಿ ಪ್ರಶ್ನಿಸುತ್ತಾರೆ. ತನ್ನಲ್ಲಿ ಅನುಭವ ಎಷ್ಟೂಂತ ಕೇಳಲಿಲ್ಲ. ಹಾಗಾಗಿ ಎಷ್ಟೇ ಕಷ್ಟ ಬಂದರೂ ಇಲ್ಲಿ ದುಡಿಯಬೇಕು. ಈ ಪತ್ರಿಕೆ ಕೇವಲ ಪತ್ರಿಕೆಯಲ್ಲ. ಇದು ಜಿಲ್ಲೆಯ ಜನರ ಜೀವನಾಡಿ. ಜಿಲ್ಲೆಯ ಯಾವುದೇ ಮೂಲೆಯ ಜನರು ತಮ್ಮ ಸಮಸ್ಯೆಯನ್ನು ಹೊತ್ತುಕೊಂಡು ಪತ್ರಿಕಾ ಕಚೇರಿಗೆ ಬರುತ್ತಾರೆ. ಇಲ್ಲವೇ ಅಂಚೆ ಮೂಲಕವೋ, ಪೋನ್ ಮೂಲಕವೋ ತಿಳಿಸುತ್ತಾರೆ. ಸಂಪಾದಕರ ದಿನನಿತ್ಯದ ಕಾಲಂ ಇಲ್ಲದಿದ್ದರೆ ಸಂಪಾದಕರು ಊರಲ್ಲಿ ಇಲ್ಲವಾ? ಎಂದು ಕೇಳುವವರಿಗೂ ಕೊರತೆ ಇರಲಿಲ್ಲ. ದಿನ ನಿತ್ಯ ನೂರಾರು ಅಭಿನಂದನೆಗಳ ಕರೆ, ಬೆದರಿಕೆಗಳ ಕರೆ ಅವಳಿಗೆ ಈಗ ಎಡಿಟ್ ಆಗಿದೆ. ಹೌದು, ಈ ಪತ್ರಿಕೆಯಲ್ಲಿ ದುಡಿಯುವುದೆಂದರೆ ಚಿಲ್ಲರೆಯ ವಿಷಯವಲ್ಲ. ಇದೊಂದು ಚಾಲೆಂಜ್‌ನ ಬದುಕು ಅಂತ ಆಗಾಗ ಹೇಳುತ್ತಾ ಸಮಾಧಾನ ತಂದುಕೊಳ್ಳುತ್ತಾಳೆ. ಪ್ರತೀ ದಿನ ಜನ ಆ ಪತ್ರಿಕೆಯಲ್ಲಿ ತಾಜಾ ಸುದ್ದಿಗಾಗಿ ಕಾತರದಿಂದ ಇರುವುದನ್ನು ಅವಳು ಗಮನಿಸಿದ್ದಾಳೆ. ಕೆಲವರು ಸ್ಕೂಪ್ ನ್ಯೂಸ್‌ಗಳನ್ನು ವರದಿಗಾರರಲ್ಲಿ ಹೇಳಲು ಆಗಾಗ ಫೋನ್ ಮಾಡುತ್ತಿರುವುದೂ ಉಂಟು. ಕೆಲವರ ಫೋನ್ ಕರೆಗಳ ಧ್ವನಿಗಳನ್ನು ಐಶ್ವರ್ಯ ಗುರುತಿಸುತ್ತಾಳೆ. ಯಾರಿಗೆ ಬೇಕೋ ಅವರಿಗೆ ಸಂಪರ್ಕ ಕೊಟ್ಟುಬಿಡುತ್ತಾಳೆ. ಮತ್ತೆ ಕೆಲವರ ಪರಿಚಯ ಕೇಳುತ್ತಾಳೆ. "ದಿನಕ್ಕೆ ಐನೂರು ಫೋನ್ ಕರೆಗಳಿಗೆ 'ಹಲೋ' ಎನ್ನುತ್ತಾ ಅವರ ಎಲ್ಲಾ ಹೇಳಿಕೆಗಳನ್ನು ಕೇಳುವ ನಿನ್ನ ಮನಸ್ಥಿತಿ ಹೇಗಾಗಿರಬೇಡ?" ಹಾಗಂತ ಕಥೆಗಾರ ಮಿತ್ರ ಕೇಳಿದಾಗ ಆಕೆ ತುಟಿ ಅಂಚಿನಲ್ಲೇ ನಗುತ್ತಾಳೆ.
1 | 2 | 3  >>  
ಮತ್ತಷ್ಟು
ಕಥೆ: ನಾಗಮುರಿಗೆ
ಗುರಿಯಿಲ್ಲದ ಮನಕೆ ದಾರಿ ತೋರುವ ಗುರು
ಜೀವನ ರೂಪಿಸುವ ಶಿಕ್ಷಕರನ್ನು ಮನಸಾ ಸ್ಮರಿಸೋಣ...
ಅಗೋಚರ...
ನೋ ಆಪ್ಷನ್....!!!
ನೋ ಆಪ್ಷನ್....!!!