ನಾಡ ಹಬ್ಬ ಮೈಸೂರು ದಸರಾದ ವಿಶೇಷ ಆಕರ್ಷಣೆ ಜಂಬೂ ಸವಾರಿ ವೈಭವದಿಮದ ನಡೆಯಿತು. ಚಿನ್ನದ ಅಂಬಾರಿಯನ್ನು ಹೊತ್ತ ಗಜರಾಜ ಬಲರಾಮ ಶಾಂತವಾಗಿಯೇ ಮೆರವಣಿಯಲ್ಲಿ ಹೆಜ್ಜೆ ಹಾಕುತ್ತಿದ್ದ. ಕೊಂಬು, ಕಹಳೆಯ ನಿನಾದ, ವೈಭವೋಪೇತ ವಾದ್ಯ ಸಂಗೀತ, ಅರಮನೆ ಸೈನಿಕರನ್ನು ನೆನಪಿಸುವ ವಾದ್ಯ ಸಂಗೀತ, ಈ ಬಾರಿಯ ವಿಶೇಷವಾಗಿತ್ತು.
ಈ ಬಾರಿ ಮೆರವಣಿಗೆಯಲ್ಲಿ 26 ಸ್ತಬ್ಧ ಚಿತ್ರಗಳಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು. ಈ ಸ್ತಬ್ಧ ಚಿತ್ರಗಳು ಮೆರವಣಿಗೆಯ ವೈಭವಕ್ಕೆ ಹೆಚ್ಚಿನ ಕಳೆ ನೀಡಿತು. ನಾಡಿನ ವಿವಿಧೆಡೆಗಳಿಂದ ಕರೆಸಿಕೊಂಡಿರುವ 60ಕ್ಕೂ ಹೆಚ್ಚು ಕಲಾವಿದರ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಲಿವೆ. ಇವುಗಳಲ್ಲಿ ಡೊಲ್ಳು ಕುಣಿತ, ಕಂಸಾಳೆ, ಸುಗ್ಗಿ ಕುಣಿತಗಳು ಪ್ರಮುಖ ಆಕರ್ಷಣೆಯಾಗಿದ್ದವು. |