ಅವರ ಹಿಂದಿ ಅಥವಾ ಇಂಗ್ಲಿಷ್ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದವರು ನಾನು ಮತ್ತು ಸಿದ್ಧವನ ಹಳ್ಳಿಕೃಷ್ಣ ಶರ್ಮಾ.
ಕೇಂದ್ರದಲ್ಲಿ ನೀವೂ ಮಂತ್ರಿಗಳಾಗಬಹುದಿತ್ತಲ್ಲ ?
ಖಂಡಿತಾ ಆಗಬಹುದಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇಂದ್ರದಲ್ಲಿ ಮೊದಲ ಮಂತ್ರಿ ಮಂಡಲ ರಚನೆಯಾಗುವಾಗ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ನನಗೆ ಟೆಲಿಗ್ರಾಮ್ ಕಳುಹಿಸಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ನಮ್ಮಂಥವರು ನಾಯಕರು ಎನ್ನಿಸಿಕೊಂಡಿದ್ದು, ನಿಮ್ಮಂಥಹ ಸ್ವಾತಂತ್ರ್ಯ ಹೋರಾಟಗಾರರಿಂದ. ಆದ್ದರಿಂದ ತಮ್ಮನ್ನು ಕೇಂದ್ರ ಅಥವಾ ರಾಜ್ಯದ ಸಚಿವರನ್ನಾಗಿ ನೇಮಿಸಲು ನಾವು ಇಚ್ಛಿಸಿದ್ದೇವೆ. ದಯವಿಟ್ಟು ದೆಹಲಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆ ಹೀಗಿತ್ತು-ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವೇದ ಪ್ರಚಾರದಲ್ಲೇ ಜೀವನ ತೆತ್ತಿದ್ದೇನೆ. ಮುಂದೆಯೂ ನನಗೆ ಅದೇ ಉಸಿರು. ನನಗೆ ಮಂತ್ರಿಗಿರಿ ಬೇಡ ಎಂದು ತಿರಸ್ಕರಿಸಿದ್ದೆ.
60ರ ಸ್ವಾತಂತ್ರ್ಯ ಸಂಭ್ರಮವನ್ನು ಯಾವ ರೀತಿ ಅರ್ಥಪೂರ್ಣವಾಗಿ ಆಚರಿಸುತ್ತೀರಿ ?
ಮನೆಯಲ್ಲೇ ಧ್ವಜಾರೋಹಣ ಮಾಡುತ್ತೇನೆ. ಒಂದಷ್ಟು ಸ್ನೇಹಿತ ವರ್ಗ ಮನೆಗೆ ಅಂದು ಆಗಮಿಸುತ್ತಾರೆ. ಅಖಂಡ ರಾಷ್ಟ್ರದ ಪರಿಕಲ್ಪನೆ, ಒಂದೇ ಬಾವುಟ ಕುರಿತಂತೆ ಭಾಷಣ ಮಾಡಲಿದ್ದೇನೆ. ನಾನು ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ನಡೆಸಿದ 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ.
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾಡ ಜನತೆಗೆ ನಿಮ್ಮ ಸಂದೇಶವೇನು ?
ಯಾರಾದರೂ ನಿನ್ನನ್ನು ನೀನು ಯಾರು ಎಂದು ಕೇಳಿದಲ್ಲಿ, ನಾನು ಮಾನವ ಎಂದು ಹೇಳಬೇಕು. ಹಿಂದು, ಮುಸ್ಲಿಂ, ಕ್ರೈಸ್ತ ಆ ಜಾತಿ- ಈ ಜಾತಿ ಎಂದು ಜಾತಿಗಾಗಿ ಹೋರಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮನುಷ್ಯ ಎಂದರೆ ಸಾಕು.
|