ಯುಪಿಎ ಸರಕಾರದ ಐದನೆ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಬಾರತೀಯ ರೈಲ್ವೆ 68,778 ಕೋಟಿ ರೂಗಳ ಲಾಭಗಳಿಸಿದ್ದು. ಈ ಐದು ವರ್ಷಗಳ ಅವಧಿಯಲ್ಲಿ ಸರಕಾರಕ್ಕೆ ಡಿವಿಡೆಂಡ್ ರೂಪದಲ್ಲಿ 15 ಸಾವಿರ ಕೋಟಿ ರೂ ಪಾವತಿ ಮಾಡಿದೆ. 2007-08ರ ಹಣಕಾಸು ವರ್ಷದಲ್ಲಿ ರೈಲ್ವೆಯ ಲಾಭಾಂಶ 25 ಸಾವಿರ ಕೋಟಿ ರೂಗೆ ಏರಿದೆ.
ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಮಂಡಿಸಿದ ರೈಲ್ವೆ ಬಜೆಟ್ಟಿನ ಕೆಲ ಪ್ರಮುಖ ಅಂಶಗಳು ಈ ಕೆಳಗಿನಂತೆ ಇದೆ. *ಮಿಗತೆ ಹಣ 25.000 ಸಾವಿರ ಕೋಟಿ ರೂ *ಅಧಿ ಸರಕು ಸಾಗಣೆಯಿಂದ ಗಳಿಸಿದ ಮೊತ್ತ 20,000 ಸಾವಿರ ಕೋಟಿ ರೂ *ಬಾಕಿ ಇರುವ ರೈಲ್ವೆ ನಿಧಿ 2,000 ಕೋಟಿ ರೂ *11. ಸಾವಿರ ಕೋಟಿ ರೂಗಳಿಂದ 33 ಸಾವಿರ ಕೋಟಿ ರೂಗಳಿಗೆ ರೈಲ್ವೆ ಯೋಜನಾ ವೆಚ್ಚದಲ್ಲಿ ಹೆಚ್ಚಳ *ನೂತನ ರೈಲ್ವೆ ಯೋಜನೆಗಳಿಗೆ 49.250 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ಸರಕು ಸಾಗಾಣಿಕೆ *790 ಟನ್ ಪೆಲೋಡ್ ಗುರಿ ತಲುಪಲಾಗಿದೆ.
*ವ್ಯಾಗನ್ ಸರಕು ಸಾಗಾಣಿಕಾ ಸೇವೆಯ ಮೂಲಕ 233 ಕೋಟಿ ರೂ ಲಾಭ.
*3000 ಹೊಸ ಸರಕು ಸಾಗಾಣಿಕಾ ಬೋಗಿಗಳು
*ಶಿಪ್ಪಿಂಗ್ ಮತ್ತು ರಸ್ತೆ ಸಾರಿಗೆ ಕಂಪನಿಗಳು ವಿಶೇಷ ಸರಕು ಸಾಗಾಣಿಕೆ ರೈಲು ಓಡಿಸುವುದಕ್ಕೆ ಒಪ್ಪಿಗೆ ನೀಡಿವೆ. *ಸರಕು ಸಾಗಾಣಿಕೆಯಲ್ಲಿ ಶೇ 10ರಷ್ಟು ವೃದ್ದಿ 200809ರ ಹಣಕಾಸು ಬಜೆಟ್ನಲ್ಲಿ ಸರಕು ಸಾಗಾಣಿಕೆ ಆದಾಯದ ಗುರಿ 44 ಸಾವಿರ ಕೋಟಿ ರೂ ನಿಗದಿ. *ವಿಶೇಷ ಸರಕು ಸಾಗಾಣಿಕೆಯಲ್ಲಿ ಶೇ 160ರಷ್ಟು ಹೆಚ್ಚಳ ಗುರಿ ನಿಗದಿ 2008-09ರ ಯೋಜನೆಗಳು * ಮುಂಬರುವ ಎರಡು ವರ್ಷಗಳಲ್ಲಿ ರೈಲುಗಳ ಆನ್ಲೈನ್ ನಿಯಂತ್ರಣ ವ್ಯವಸ್ಥೆ * ರಾಜಧಾನಿ ಮತ್ತು ಶತಾಬ್ಧಿ ಏಕ್ಸಪ್ರೆಸ್ ರೈಲುಗಳಿಗೆ ಎಲ್ಎಚ್ಬಿ ಬೋಗಿಗಳು * 2010ರ ನಂತರ ಎಲ್ಲ ರೈಲು ಬೋಗಿಗಳು ಸ್ಟೇನ್ ಲೆಸ್ ಸ್ಟೀಲ್ ಉಪಯೋಗಿಸಿ ನಿರ್ಮಾಣ ಮಾಡಲಾಗುವುದು. * ದೇಶದ ಅತಿ ದೊಡ್ಡ 50 ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಮೆಟ್ಟಿಲುಗಳ ಸೌಲಭ್ಯ. ಸೌಕರ್ಯಗಳು * ಹೊಸ ಕಾಲ್ ಸೆಂಟರ್ಗಳ ಅಳವಡಿಕೆ. * ಎ ಮತ್ತು ಬಿ ವರ್ಗದ ರೈಲು ನಿಲ್ದಾಣಗಳಲ್ಲಿ ಎಲ್ಇಡಿ ಡಿಸ್ಪ್ಲೆ ವ್ಯವಸ್ಥೆ. * ಮಾರ್ಚ್ 09ರೊಳಗೆ ಮೇಲ್, ಏಕ್ಸ್ಪ್ರೆಸ್ ರೈಲುಗಳಲ್ಲಿ ಮುಂಬರುವ ರೈಲು ನಿಲ್ದಾಣದ ಮಾಹಿತಿಯನ್ನು ನೀಡುವ ವ್ಯವಸ್ಥೆ ಅಳವಡಿಸಲಾಗುವುದು. ಮುಂಬೈ ಲೋಕಲ್ ರೈಲುಗಳಿಗೆ ಜಾರಿಗೆ ತರಲಾಗಿದ್ದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ದೇಶದ ಇತರ ರೈಲ್ವೆ ವಲಯಗಳಲ್ಲಿ ಜಾರಿಗೆ ತರಲಾಗುವುದು.
|