ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ ಅವರು ಮಂಡಿಸುತ್ತಿರುವ ಮುಂದಿನ ಸಾಲಿನ ಆಯ-ವ್ಯಯ ಪಟ್ಟಿಯಲ್ಲಿ ಜನತೆಯನ್ನು ಒಲಿಸಿಕೊಳ್ಳುವ ಲಕ್ಷಣಗಳು ರಾಚುತ್ತಿದ್ದು ಕೆಲವು ಅಂಶಗಳು ಇಲ್ಲಿವೆ.
*ರಾಷ್ತ್ರೀಯ ಕೃಷಿ ವಿಕಾಸ ಯೋಜನೆಗೆ 2,80,000 ಕೋಟಿ
* ರಾಜೀವ್ ಗಾಂಧಿ ಕುಡಿಯುವ ನೀರಿಗೆ ನಿಧಿಯಲ್ಲಿ ಹೆಚ್ಚಳ
*ಎನ್ಆರ್ಇಜಿ ಯೋಜನೆ 596 ಜೆಲ್ಲೆಗಳಿಗೆ ವಿಸ್ತರಣೆ
*ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,350 ಕೋಟಿ ರೂಪಾಯಿ
*ಅಲ್ಪ ಸಂಖ್ಯಾತ ಜಿಲ್ಲೆಗಳಿಗೆ 540 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆ
*ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್ ನಿಧಿಯಲ್ಲಿ ಶೇ15 ಹೆಚ್ಚಳ
*ಅಂಗನವಾಡಿ ಕಾರ್ಯಕರ್ತೆಯರ ಸಂಬಳ 1350ಕ್ಕೇರಿಕೆ, ಅಂತೆಯೇ ಸಹಾಯಕಿರ ವೇತನ ರೂ.750ಕ್ಕೆ
*ರಾಷ್ಚ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 9 ಕೋಟಿ
*ಐಸಿಡಿಎಸ್ ಅಲೊಕೇಶನ್ 6,300ಕೋಟಿಗೇರಿಕೆ
*ಕೇಂದ್ರ ಅರೆ ಸೇನಾ ಪಡೆಗಳಿಗೆ ಹೆಚ್ಚು ಅಲ್ಪಸಂಖ್ಯಾತರ ನೇಮಕ
*ಗಡಿಪ್ರದೇಶದ ಅಭಿವೃದ್ಧಿಗೆ 500 ಕೋಟಿ
*ಪೊಲೀಯೋ ನಿರ್ಮೂಲನೆಗೆ 1,042 ಕೋಟಿ
*ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 7,200 ಕೋಟಿ
|