ಸಾಲದ ಹೊರೆ ತಾಳಲಾರದ ರೈತರ ಆತ್ಮಹತ್ಯೆ ಪ್ರಕರಣಗಳು ಹುಟ್ಟಿಸಿರುವ ಧಾವಾಗ್ನಿಯನ್ನು ನಂದಿಸಲು ಯತ್ನಿಸಿರುವ ಸರಕಾರ ರೈತರಿಗೆ ಸಮಾಧಾನವವಾಗುವ ಅಂಶಗಳನ್ನು ತನ್ನ ಮುಂಗಡ ಪತ್ರದಲ್ಲಿ ಸೇರಿಸಿದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಂಪೂರ್ಣ ಸಾಲವನ್ನು ಈ ಬಜೆಟ್ನಲ್ಲಿ ಮನ್ನಾ ಮಾಡಲಾಗಿದೆ. ಬಜೆಟ್ನ ಕೆಲವು ಅಂಶಗಳು ಇಲ್ಲಿವೆ.
*ಸಣ್ಣ ಮತ್ತು ಮಧ್ಯಮ ರೈತರ ಎಲ್ಲಾ ಸಾಲಗಳ ಸಂಪೂರ್ಣ ಮನ್ನಾ
*ಎನ್ಆರ್ಎಟಿಎಂ ನಿಧಿ 12,050 ಕೋಟಿಗೇರಿಕೆ
*ತೋಟಗಾರಿಕಾ ಮಿಶನ್ಗೆ 1,100 ಕೋಟಿ
*ರಾಷ್ಟ್ರದಲ್ಲಿ 500 ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ
*ಎಐಪಿಬಿ ಅಡಿಯಲ್ಲಿ 20,000 ಕೋಟಿ ನಿರಾವರಿ ಯೋಜನೆಗಳು
*ಚಹ ಸಂಶೋಧನಾ ಸಂಘಟನೆಗೆ 20 ಕೋಟಿ ವಿಶೇಷ ಮಂಜೂರಾತಿ
*ಸೂಕ್ಷ್ಮ ನೀರಾವರಿ ಯೋಜನೆಗಳಿಗೆ 500 ಕೋಟಿ
*ಏಲಕ್ಕಿ ಮತ್ತು ಕಾಫಿ ಬೆಳೆಗಾರರಿಗೆ ಹೆಚ್ಚುವರಿ ನಿಧಿ
|