ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷಿಗೆ ಬಂಪರ್! ಶಿಕ್ಷಣಕ್ಕೆ ಆದ್ಯತೆ
ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ ಕೇಂದ್ರ ಸರಕಾರದ 2008-09ರ ಸಾಲಿನ ಮುಂಗಡ ಪತ್ರ ಮಂಡಿಸಿದ್ದು ಚುನಾವಣೆ ಕೇಂದ್ರೀಕೃತವಾಗಿರುವ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಮತ್ತು ಕೃಷಿಯತ್ತ ಆದ್ಯ ಗಮನ ಹರಿಸಿದ್ದು, ರೈತರ ಕೃಷಿಸಾಲದ ಸಂಪೂರ್ಣ ಮನ್ನಾ ಘೋಷಿಸಲಾಗಿದೆ.

ಸತತವಾಗಿ ಐದನೆ ಬಾರಿಗೆ ರಾಷ್ಟ್ರೀಯ ಬಜೆಟ್ ಮಂಡಿಸಲು ಅವಕಾಶ ನೀಡಿದ್ದಕ್ಕೆ ಯುಪಿಎ ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತಲೇ ತನ್ನ ಬಜೆಟ್ ಭಾಷಣ ಆರಂಭಿಸಿದ ಹಣಕಾಸು ಸಚಿವ ಚಿದಂಬರಂ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜತೆ ತಾವು ಹಂಚಿಕೊಂಡ ಅಪರೂಪದ ಗೌರವ ಎಂದು ಬಣ್ಣಿಸಿದರು.

ಆರ್ಥಿಕತೆಯು ಶೇ.8.7ರಷ್ಟು ಬೆಳವಣಿಗೆ ಸಾಧಿಸುವುದೆಂದು ನಿರೀಕ್ಷಿಸಿರುವುದಾಗಿ ಹಿಂದಿನ ದಿನ ತಾವು ಮಂಡಿಸಿದ ಆರ್ಥಿಕ ಸಮೀಕ್ಷೆಯನ್ನು ಉಲ್ಲೇಖಿಸುತ್ತಾ ಅವರು ತಿಳಿಸಿದರು. ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ನೀತಿಯ ತಳಹದಿಯಾಗಿದ್ದು, ಸಮಗ್ರ ಬೆಳವಣಿಗೆಗೆ ಇನ್ನೂ ಹೆಚ್ಚು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ವರ್ಷಶಿಕ್ಷಬಜೆಟ್‌ನಲ್ಲಿ 28,674ರಿಂದ 34,400 ಕೋಟಿ ೂ.ೇ.20ರಷ್ಟಏರಿಕೆಯನ್ನಪ್ರಕಟಿಸಿವಿತ್ತಸಚಿವರು, ರಾಷ್ಟ್ರಾದ್ಯಂಐಐಟಿ ಮತ್ತಐಐಎಂಗಳನ್ನಸ್ಥಾಪಿಸುವುದಾಗಿ ಹೇಳಿದರು. ಆಂಧ್ರಪ್ರದೇಶ, ಬಿಹಾಮತ್ತರಾಜಸ್ತಾನದಲ್ಲಿ ಮೂರಐಐಟಿಗಸ್ಥಾಪನೆಯನ್ನಚಿದಂಬರಪ್ರಕಟಿಸಿದರು. ರಾಷ್ಟ್ರೀಜ್ಞಾಕೇಂದ್ರಗಳನ್ನಸ್ಥಾಪಿಸುಪ್ರಸ್ತಾವನಮಾಡಿಅವರಮಾಹಿತಿ ತಂತ್ರಜ್ಞಾಕ್ಷೇತ್ರಕ್ಕೆ 100 ಕೋಟಿ ೂ.ಗಳನ್ನಮಂಜೂರಮಾಡಿದರು.

ಸರ್ಶಿಕ್ಷಅಭಿಯಾನಕ್ಕೆ 13,100 ಕೋಟಿ, ಮಧ್ಯಾಹ್ನಬಿಸಿಯೂಯೋಜನೆಗೆ 8000 ಕೋಟಿ, ಪ್ರೌಶಿಕ್ಷಯೋಜನೆಗೆ 4554 ಕೋಟಿಯನ್ನಅವರಪ್ರಕಟಿಸಿದರು. ಗ್ರಾಮೀಶಿಕ್ಷಣಕ್ಕಹೆಚ್ಚಒತ್ತುನೀಡಿಅವರು, ಹಿಂದುಳಿಬ್ಲಾಕ್‌ಗಳಲ್ಲಿ 410 ಹೆಚ್ಚುವರಿ ಕಸ್ತೂರಬಗಾಂಧಿ ವಿದ್ಯಾಲಯಗಸ್ಥಾಪನೆಯನ್ನಪ್ರಕಟಿಸಿದರು.

ಸೇವಾ ಮತ್ತು ಉತ್ಪಾದನಾ ವಲಯದಲ್ಲಿ ಅನುಕ್ರಮವಾಗಿ ಶೇ10.7 ಮತ್ತು ಶೇ9.4ರ ಅಭಿವೃದ್ಧಿಯನ್ನು ಆಯವ್ಯಯಪತ್ರದಲ್ಲಿ ನಿರೀಕ್ಷಿಸಲಾಗಿದೆ. ಸಾಮಾಜಿಕ ವಲಯದ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, ಯುಪಿಎ ಸರಕಾರ ಜನಪ್ರಿಯ ಯೋಜನೆಗಳ ಮೀಸಲು ನಿಧಿಗಳನ್ನು ಹೆಚ್ಚಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ8.7ರ ಅಭಿವೃದ್ಧಿಯನ್ನು ಬಿಂಬಿಸಲಾಗಿದೆ.

ಲೇವಾದೇವಿ ವ್ಯವಹಾರಸ್ಥರ ಬಿಗಿಮುಷ್ಠಿಯಿಂದ ಕೃಷಿಕರನ್ನು ಹೊರತರಲು ರೈತರಿಗೆ ಸಾಂಸ್ಥಿಕ ಸಾಲವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂದು ನುಡಿದರು.

ಯುಪಿಎ ಸರಕಾರದ ಕೊನೆಯ ಬಜೆಟ್ ಮಂಡಿಸಿದ ಚಿದಂಬರಂ, ಒಟ್ಟಾರೆ ಯೋಜನೆಯಲ್ಲಿ ಶೇ38ರ ಹೆಚ್ಚಳ ಘೋಷಿಸಿದರು. ರಾಷ್ಟ್ರದಲ್ಲಿ ಆತಂಕ ಮೂಡಿಸಿರುವ ಹಣದುಬ್ಬರವನ್ನು ತಡೆಯಲಾಗುವುದು ಎಂದು ನುಡಿದ ಹಣಕಾಸು ಸಚಿವರು ಆಹಾರೋತ್ಪನ್ನದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಾಗಿ ಹೇಳಿದರು.

ಕೃಷಿವಲಯದಲ್ಲಿ ಶೇ.4ರ ದರದ ಅಭಿವೃದ್ಧಿ ಸಾಧಿಸಲು ಕಾರ್ಯೋನ್ಮುಖವಾಗುವುದಾಗಿ ಭರವಸೆ ನೀಡಿದ ಚಿದು, ಒಟ್ಟಾರೆ ಆಹಾರ ಉತ್ಪನ್ನವು 219.32 ದಶಲಕ್ಷ ಟನ್ನುಗಳಾಗಲಿವೆ ಮತ್ತು ಅಕ್ಕಿ ಉತ್ಪನ್ನವು 94.08 ದಶಲಕ್ಷ ಟನ್‌ಗಳಾಗಲಿವೆ ಎಂದು ತಿಳಿಸಿದರು.
ಮತ್ತಷ್ಟು
ರೈತರ ಸಾಲ ಸಂಪೂರ್ಣ ಮನ್ನಾ
ರಾಷ್ಟ್ರೀಯ ಕೃಷಿವಿಕಾಸ ಯೋಜನೆಗೆ 2,80,000 ಕೋಟಿ
ವಿತ್ತ ಸಚಿವರಿಂದ ಆಯ-ವ್ಯಯ ಮಂಡನೆ ಆರಂಭ
ಸರ್ವರ ಓಲೈಕೆ ಬಜೆಟ್‌ಗೆ ಕ್ಷಣಗಣನೆ
ಸರದಿ ಸಾಲು ಇನ್ನು ಮೇಲಿಲ್ಲ: ಲಾಲು ಭರವಸೆ
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ