| | ಭಾರತ ದೇಶವು 2008ರಲ್ಲಿ ಚಂದ್ರಯಾನದಂತಹ ಮಹತ್ವದ ಸಾಧನೆಯನ್ನು ಕಂಡು ಚಪ್ಪಾಳೆ ಹೊಡೆದಿದೆ. ಅಂತೆಯೇ ಮುಂಬೈಯಲ್ಲಿ ಉಗ್ರರು ಕೆನೆದ ಭಯೋತ್ಪಾದನೆಯ ಹೇಷಾರವವನ್ನು ಕಂಡು ಕಣ್ಣೀರು ಸುರಿಸಿದೆ. ವೋಟಿಗಾಗಿ ನೋಟಿನ ಮೂಲಕ ಪ್ರಜಾಪ್ರಭುತ್ವದ ಅಣಕ, ಸರಣಿ ಬಾಂಬ್ ಸ್ಫೋಟಗಳ ಅನುರಣನ, ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪಗಳು ಪರಸ್ಪರ ಸ್ಫರ್ಧೆಗೆ ಒಡ್ಡಿಕೊಂಡಿವೆ. ಆಗಿ ಹೋದ ವರ್ಷದ ಒಳಿತು-ಕೆಡುಕುಗಳನ್ನು ತಕ್ಕಡಿಗೆ ಹಾಕಿ ನೋಡಿದರೆ ರಾಜತಾಂತ್ರಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಒಳಿತುಗಳಿಗಿಂತ ಕೆಡುಕುಗಳೇ ಹೆಚ್ಚು ತೂಗುತ್ತವೆ ಎಂಬುದು ವಿಷಾದನೀಯ. ಚಂದ್ರಲೋಕಕ್ಕೆ ಮಾನವರಹಿತ ಉಪಗ್ರಹ ಚಂದ್ರಯಾನ-1ರ ಉಡಾವಣೆ, ಏಕಕಾಲಕ್ಕೆ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ದೇಶೀಯ ಉಪಗ್ರಹವಾಹಕ ನೌಕೆ ಪಿಎಸ್ಎಲ್ವಿ ಒಯ್ದಿರುವುದು, ಅಣುವ್ಯಾಪಾರ ಒಕ್ಕೂಟದಲ್ಲಿ 30... |