ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ-09 > ಆಸ್ಕರ್ > ಇದುವರೆಗೆ ಐವರು ಭಾರತೀಯರಿಗೆ ಆಸ್ಕರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದುವರೆಗೆ ಐವರು ಭಾರತೀಯರಿಗೆ ಆಸ್ಕರ್
ಆಸ್ಕರ್ ಪ್ರಶಸ್ತಿಯ ವಾಸನೆ ಭಾರತಕ್ಕೆ ಹೊಸದೇನಲ್ಲ. 1982ರಲ್ಲೇ ಭಾರತೀಯರೊಬ್ಬರು ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಅದು ರಿಚರ್ಡ್ ಅಟೆನ್‌ಬರೋ ಅವರ 'ಗಾಂಧಿ' ಚಿತ್ರದ ವಸ್ತ್ರವಿನ್ಯಾಸಕ್ಕಾಗಿ. ಅದನ್ನು ಪಡೆದದ್ದು ಭಾನು ಅತೈಯಾ ಎಂಬ ವಸ್ತ್ರ ವಿನ್ಯಾಸಕಾರ.

ಆನಂತರ ಸತ್ಯಜಿತ್ ರಾಯ್ ಅವರು ಅವರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಆಸ್ಕರ್ ಗೌರವ ಪ್ರಶಸ್ತಿ ಲಭಿಸಿತ್ತು. ಇದು 1992ರಲ್ಲಿ.

ಇದೀಗ ಇನ್ನೂ ಮೂವರು ಭಾರತೀಯರು ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎ.ಆರ್.ರೆಹಮಾನ್‌ಗೆ ಸ್ಲಂ ಡಾಗ್ ಮಿಲಿಯನೇರ್‌ನಲ್ಲಿ ಮೂಲ ಸಂಗೀತ ಮತ್ತು 'ಜೈ ಹೋ' ಮೂಲ ಗೀತೆಗಾಗಿ ಅವಳಿ ಆಸ್ಕರ್.

ಅದೇ ಚಿತ್ರದ 'ಜೈ ಹೋ' ಗೀತೆಗಾಗಿ ರಹಮಾನ್ ಜೊತೆ ಆಸ್ಕರ್ ಹಂಚಿಕೊಂಡವರೆಂದರೆ ಗೀತೆ ರಚನೆಕಾರ ಗುಲ್ಜಾರ್.

ಕೊನೆಯದಾಗಿ, ಸ್ಲಂ ಡಾಗ್ ಚಿತ್ರದ ಅತ್ಯುತ್ತಮ ಸೌಂಡ್ ಮಿಕ್ಸಿಂಗ್‌ಗಾಗಿ ಕೇರಳದ ರೆಸೂಲ್ ಪೂಕುಟ್ಟಿ ಅವರಿಗೆ ಆಸ್ಕರ್ ಗರಿ.

ಆದರೆ, ಭಾರತೀಯರೇ ನಿರ್ಮಿಸಿ, ನಿರ್ದೇಶಿಸಿದ ಸಂಪೂರ್ಣ ಭಾರತೀಯ ಚಿತ್ರಕ್ಕೆ ಇದುವರೆಗೆ ಆಸ್ಕರ್ ಒಲಿದಿಲ್ಲ ಎಂಬುದು ಅಷ್ಚೇ ಕಟು ಸತ್ಯ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಪಿಂಕಿಯ ಮುಖದಲ್ಲಿ 'ಸ್ಮೈಲ್' ಅರಳಿಸಿದ ಆಸ್ಕರ್
ವಾರ್ನರ್ ತೆಕ್ಕೆಯಿಂದ ಫಾಕ್ಸ್ ಕೈಸೇರಿದ ಆಸ್ಕರ್ ಗೌರವ
ಸ್ಲಂ ಡಾಗ್ ಮಿಲಿಯನೇರ್ ವಿಶೇಷಗಳು
ರೆಹಮಾನ್, ಅನಿಲ್ ಕಪೂರ್ ವಿರುದ್ಧ ಮಾನನಷ್ಟ ಮೊಕದ್ದಮೆ
ಭಾರತದಲ್ಲಿ ಇತಿಹಾಸ ಬರೆದ ರೆಹೆಮಾನ್
ಭಾರತದ 'ಸ್ಲಮ್..'ನಿಂದ ಆಂಗ್ಲರ ಕಿಸೆ ಉಬ್ಬುತ್ತಿದೆ..!