ಮುಂಬೈ: ಮಾಧ್ಯಮಗಳು ತಪ್ಪುತಪ್ಪಾಗಿ ಮತ್ತು ಪಕ್ಷಪಾತಿತನದ ವರದಿಗಾರಿಕೆ ಮಾಡುತ್ತಿವೆ ಎಂದು ದೂರಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಮಾಧ್ಯಮಗಳೇನು ದೇವರಲ್ಲ ಎಂದು ಹೇಳಿದ್ದಾರೆ. ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಠಾಕ್ರೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು, ಸೇನಾಕಾರ್ಯಕರ್ತರು ಶುಕ್ರವಾರ ಮುಂಬೈ ಹಾಗೂ ಪುಣೆಯಲ್ಲಿ ಮಾಧ್ಯಮ ಕಚೇರಿಗಳ ಮೇಲೆ ನಡೆಸಿರುವ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳು ಶಿವಸೇನಾದ ಪ್ರತಿಷ್ಠೆಗೆ ಮಸಿಬಳಿಯುತ್ತಿದ್ದು, ಪ್ರತೀಕಾರದ ಕ್ರಮಕೈಗೊಳ್ಳುತ್ತಿವೆ ಎಂದು ಅವರು ದೂರಿದ್ದಾರೆ. ತನ್ನ ಹೇಳಿಕೆಗಳನ್ನು