ನವದೆಹಲಿ: ಅಹಾರ ಹಣದುಬ್ಬರಕ್ಕೆ ಸಂಬಂಧಿಸಿದಂತೆ ವಿಷಮ ಪರಿಸ್ಥಿತಿ ಅಂತ್ಯವಾಗಿದ್ದು, ಶೀಘ್ರದಲ್ಲಿ ದರಗಳು ಸ್ಥಿರತೆ ಕಾಣಲಿವೆ ಎಂದು ದರ ಏರಿಕೆಯಿಂದ ತತ್ತರಿಸಿದ ದೇಶದ ಜನತೆಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.ದೇಶದ ಅಹಾರ ಸರಬರಾಜು ವ್ಯವಸ್ಥೆಯ ಕುರಿತಂತೆ ಅಸಮಧಾನ ವ್ಯಕ್ತಪಡಿಸಿದ ಪ್ರಧಾನಿ, ವ್.ವ್ಯವಸ್ಥೆ ಅನುಪಯುಕ್ತವಾಗಿದ್ದು, ಸಂಪೂರ್ಣ ಬದಲಾವಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಿಸಿ ಸಾಮಾನ್ಯ ಜನತೆಗೆ ನೆಮ್ಮದಿ ನೀಡುವ ಉದ್ದೇಶದಿಂದ, ಆಯೋಜಿಸಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ...