ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ದಾಳಿ ಹಿಂದೆ ಪಾಕಿಸ್ತಾನ: ಸಲ್ಮಾನ್ ರಶ್ದೀ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿ ಹಿಂದೆ ಪಾಕಿಸ್ತಾನ: ಸಲ್ಮಾನ್ ರಶ್ದೀ
ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿರುವ ಭಾರತ ಮ‌ೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದೀ, ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಕಠಿಣ ಎಚ್ಚರಿಕೆ ನೀಡಬೇಕೆಂದು ಹೇಳಿದ್ದಾರೆ.

"ಅದು ಪಾಕಿಸ್ತಾನ ಕೃತ್ಯವೇ ಎಂಬ ಪ್ರಶ್ನೆಯೇ ಬರುವುದಿಲ್ಲ. ಇದನ್ನು ನೀವು ಯುದ್ಧವೆಂದೇ ಪರಿಗಣಿಸಬಹುದು. ಪಾಕಿಸ್ತಾನದ ಜತೆ ಪಾಶ್ಚಿಮಾತ್ಯ ದೇಶಗಳು ಕಠಿಣವಾಗಿ ವರ್ತಿಸಬೇಕಿದೆ. ಅದು ಒಂದು ಕಡೆಯಿಂದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಮತ್ತೊಂದು ಕಡೆ ಅವರಿಗೆ ಸಹಕಾರ ನೀಡುತ್ತಿದೆ" ಎಂದು ಸಲ್ಮಾನ್ ರಶ್ದೀ ಟೀಕಿಸಿದರು.

"ನಾನು ಹುಟ್ಟಿ ಬೆಳೆದ ನಗರದ ಮೇಲೆ ಉಗ್ರರ ಅಟ್ಟಹಾಸವನ್ನು ಗಮನಿಸುವಾಗ ನಿಜಕ್ಕೂ ದುಃಖವಾಗುತ್ತದೆ. ಲಂಡನ್, ನ್ಯೂಯಾರ್ಕ್ ಮತ್ತು ಮುಂಬೈ ನನ್ನ ಇಷ್ಟದ ನಗರಗಳು. ಉಗ್ರರ ದಾಳಿಯನ್ನು ಬ್ರಿಟನ್ ಕಠಿಣವಾಗಿ ಪರಿಗಣಿಸಬೇಕಿದ್ದು, ಪಾಕ್ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.

ತನ್ನ 'ಮಿಡ್‌ನೈಟ್ಸ್ ಚಿಲ್ಡ್ರನ್' ಪುಸ್ತಕ ಭಾರೀ ಜನಪ್ರಿಯತೆ ಗಳಿಸುತ್ತಿರುವಂತೆಯೇ ಮತ್ತೊಂದು ಪುಸ್ತಕ ಬರೆಯುತ್ತಿರುವುದಾಗಿ ರಶ್ದೀ ತಿಳಿಸಿದರು. "ಆದರೆ ಅದರ ವಸ್ತು ಭಯೋತ್ಪಾದನೆಯಲ್ಲಿ. ಅದು ಮಕ್ಕಳ ಪುಸ್ತಕ. ನನ್ನ ದೊಡ್ಡ ಮಗನಿಗೆ 11 ವರ್ಷವಾಗಿದ್ದಾಗ ಇದೇ ರೀತಿ ಮಕ್ಕಳ ಪುಸ್ತವೊಂದನ್ನು ಬರೆದಿದ್ದೆ. ಈಗ ಆತನಿಗೆ 29 ವರ್ಷ. ನನ್ನ ಮತ್ತೊಬ್ಬ ಮಗನಿಗೀಗ 11 ವರ್ಷ ಮತ್ತು ಆತನಿಗೂ ಪುಸ್ತಕ ಬೇಕಾಗಿದೆ. ಮೊದಲ 15 ಪುಟಗಳನ್ನು ಓದಿ ಹೇಳಿದಾಗ ಆತ ಇಷ್ಟಪಟ್ಟಿದ್ದಾನೆ" ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೊನೆಗೂ ಪ್ಯಾರಿಸ್‌ನಲ್ಲಿ ವಾಸ್ತವ್ಯ ಹೂಡಿದ ತಸ್ಲೀಮಾ
ಎಲ್‌ಟಿಟಿಇ ವಿರುದ್ಧ ದಾಳಿ ಮುಂದುವರಿಸಿದ ಲಂಕಾ
ಚೀನಾ: ರಾಸಾಯನಿಕ ಉತ್ಪನ್ನ ಕೇಂದ್ರದಲ್ಲಿ ಸ್ಫೋಟ-5ಬಲಿ
ಜ.7-8 ರಂದು ರೈಸ್ ಚೀನಾ ಭೇಟಿ
ಹಸೀನಾ ಸಂಪುಟದಲ್ಲಿ ಯುವ ಮುಖಗಳಿಗೆ ಆದ್ಯತೆ
ಇಸ್ರೇಲ್ ದಾಳಿಗೆ ಮುಸ್ಲಿಂ ರಾಷ್ಟ್ರಗಳ ವಿರೋಧ