ಮುಂಬೈ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ಗೆ ರಾಜತಾಂತ್ರಿಕ ನೆರವು ಒದಗಿಸುವುದಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.
ದೇಶದ ಕೀರ್ತಿಗೆ ಮಸಿ ಬಳಿದಿರುವ ಸೆರೆಸಿಕ್ಕ ಕಸಬ್ಗೆ ಯಾವುದೇ ರಾಜತಾಂತ್ರಿಕ ನೆರವು ನೀಡುವುದಿಲ್ಲ ಅದರಿಂದ ನಮಗೆ ಅವಮಾನ ಎಂದು ಪ್ರತಿಕ್ರಿಯಿಸಿದೆ.
ಕಸಬ್ ಅತ್ಯಂತ ಪೈಶಾಚಿಕ ಕೃತ್ಯ ಎಸಗಿದ್ದಾನೆಯೇ, ಆ ನಿಟ್ಟಿನಲ್ಲಿ ಆತನಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಡಾನ್ ಪತ್ರಿಕೆಗೆ ತಿಳಿಸಿದ್ದಾರೆ.
ಮುಂಬೈ ದಾಳಿಯ ಹಿಂದೆ ಪಾಕ್ ನೆಲದ ಉಗ್ರರ ಕೈವಾಡ ಮತ್ತು ಕಸಬ್ ಪಾಕ್ ಪ್ರಜೆ ಎಂದು ಒಪ್ಪಿಕೊಳ್ಳಲು ಬಹಳಷ್ಟು ನಾಟಕವಾಡಿದ ಪಾಕಿಸ್ತಾನ ಬುಧವಾರ ಕೊನೆಗೂ ಕಸಬ್ ನಮ್ಮ ದೇಶದ ಪ್ರಜೆ ಹೌದೆಂದು ಒಪ್ಪಿಕೊಂಡಿತ್ತು. |