ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ
ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ನವೆಂಬರ್ 26ರ ವಿಧ್ವಂಸಕಾರಿ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ದಟ್ಟವಾಗುತ್ತಿರುವ ನಡುವೆ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ಸಚಿವ ಪ್ರಣಬ್ ಈ ಹಿಂದೆ "ಸೇನಾಕಾರ್ಯಾಚರಣೆ ಪರಿಗಣನೆಯಲ್ಲಿ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ" ಎಂಬ ವಿಚಾರ ಟಿವಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವಂತೆ, ವಿದೇಶಾಂಗ ಸಚಿವಾಲಯದಿಂದ ಈ ಸ್ಪಷ್ಟನೆ ಹೊರಬಿದ್ದಿದೆ

ಭಾರತಕ್ಕೆ ಬೇಕಾಗಿರುವ ಕ್ರಿಮಿನಲ್‌ಗಳನ್ನು ಹಸ್ತಾಂತರಿಸುವಂತೆ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದ್ದು, ಇಸ್ಲಾಮಾಬಾದಿನ ಉತ್ತರಕ್ಕಾಗಿ ಕಾಯುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಪಾಕಿಸ್ತಾನ ಹೈಕಮಿಷನರ್ ಶಾಹಿದ್ ಮಲಿಕ್ ಅವರನ್ನು ಸೋಮವಾರ ಸಾಯಂಕಾಲ ಭೇಟಿಯಾಗಿರುವ ವೇಳೆಗೆ ಭಾರತವು ಈ ಪಟ್ಟಿಯನ್ನು ನೀಡಿದೆ.

ಪಾಕಿಸ್ತಾನದ ಹೈಕಮಿಷನರ್‌ಗೆ ಬುಲಾವ್ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಕಳೆದ ವಾರದ ದಾಳಿಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ಹಿಂದೆಯೂ ಇಂತಹ ಪಟ್ಟಿಗಳನ್ನು ಹಸ್ತಾಂತರಿಸಲಾಗಿದ್ದು, ಪ್ರಸ್ತುತ ಪರಿಷ್ಕೃತ ಪಟ್ಟಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಇದುವರೆಗೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆ ತೋರಿಲ್ಲ ಎಂದು ಪ್ರಣಬ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್‌ನನ್ನು ತಕ್ಷಣವೇ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ.

ಈ ವೇಳೆ ಭಾರತದ ಮೇಲೆ ನಡೆದಿರುವ ದಾಳಿಯ ವೇಳೆ ಅಮೆರಿಕದ ಪ್ರತಿಕ್ರಿಯೆಯನ್ನು ಪ್ರಣಬ್ ಶ್ಲಾಘಿಸಿದರು. ಅಮೆರಿಕದ ಹಾಲಿ ಅಧ್ಯಕ್ಷ ಬುಶ್ ಬಾಗೂ ಮುಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ವ್ಯಕ್ತಪಡಿಸಿರುವ ಐಕ್ಯಮತ್ಯದ ಕುರಿತೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾನು ರಾಜಕಾರಣಿಗಳ ವಿರೋಧಿಯಲ್ಲ: ಉನ್ನಿಕೃಷ್ಣನ್
ಜನದಟ್ಟಣೆಯ ವೇಳೆ ದಾಳಿ ನಡೆಸಬಯಸಿದ್ದ ಉಗ್ರರು
ಉನ್ನಿ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾರೆ: ಸಿಪಿಐ ನಾಯಕ
ವಿವಾದಬೇಡ- ಉನ್ನಿ: ಕ್ಷಮೆಯಾಚಿಸುವುದಿಲ್ಲ-ಸಿಎಂ
ಅಸ್ಸಾಂ ರೈಲು ಸ್ಫೋಟ: 3ಸಾವು, 30 ಮಂದಿಗೆ ಗಾಯ
ದಾವೂದ್‌ನನ್ನು ಒಪ್ಪಿಸಿ: ಪಾಕ್‌ಗೆ ಭಾರತ ತಾಕೀತು