ಮುಂಬೈದಾಳಿಕೋರ ಅಜ್ಮಲ್ ಅಮೀರ್ ಕಸಬ್ ಪರವಾಗಿ ವಾದಿಸುವುದು ಅಥವಾ ಬಿಡುವುದು ವಕೀಲರುಗಳಿಗೆ ಬಿಟ್ಟ ವಿಚಾರ ಎಂದು ಕಾಂಗ್ರೆಸ್ ಹೇಳಿದೆ.ಇದೊಂದು 'ಭಾವನಾತ್ಮಕ ವಿಚಾರ'. ಸಾರ್ವಜನಿಕ ಅಭಿಪ್ರಾಯವು ಉಗ್ರರ ವಿರುದ್ಧವಾಗಿದೆ. ಕಸಬ್ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೇ ಬೇಡವೇ ಎಂಬುದು ವಕೀಲರ ವೈಕ್ತಿಕ ಅಭಿಪ್ರಾಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರೆ ಜಯಂತಿ ನಟರಾಜನ್ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಕಸಬ್ ಪರ ವಕಾಲತ್ತಿಗೆ ಮುಂದಾದ ವಕೀಲರೊಬ್ಬರ ಕಚೇರಿಗೆ ಅಮರಾವತಿಯಲ್ಲಿ ದಾಳಿ ನಡೆಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಪಕ್ಷವು ಯಾವುದೇ ಹಿಂಸಾಚಾರವನ್ನು ಪ್ರತಿಭಟಿಸುತ್ತದೆ ಎಂದು ನುಡಿದರು. |