ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್ ತನ್ನ ಪ್ರಜೆ ಎಂಬುದನ್ನು ಒಪ್ಪಿಕೊಳ್ಳಲು ಪಾಕಿಸ್ತಾನವು ಪದೇಪದೇ ಜಾರಿಕೊಳ್ಳುವುದರಿಂದ ರೋಸಿ ಹೋಗಿರುವ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಇಸ್ಲಾಮಾಬಾದ್ ವಿರುದ್ಧ ಕಿಡಿಕಾರಿದ್ದಾರೆ.ಇಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಅಂಗವಾಗಿ ನಡೆದ ಪೂರ್ಣಾವಧಿ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು "ಉಗ್ರರಲ್ಲೊಬ್ಬ ನಮ್ಮ ವಶದಲ್ಲಿದ್ದಾನೆ. ಆತ ಸ್ಪಷ್ಟವಾಗಿ ತಾನೆಲ್ಲಿಂದ ಬಂದಿದ್ದೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಪಡೆದೆ ಮತ್ತು ತನ್ನ ಮಾರ್ಗದರ್ಶಕರು ಎಲ್ಲಿದ್ದಾರೆ ಎಂದು ಹೇಳಿದ್ದಾರನೆ ಎಂದು ನುಡಿದರು.ಇದರ ಹೊರತಾಗಿಯೂ ಇಸ್ಲಾಮಾಬಾದ್ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಪ್ರಣಬ್ ಹೇಳಿದರು.ಮುಂಬೈ ದಾಳಿಗೆ ಭಾರೀಯಾದ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಳಿಯ ಹಿಂದೆ ಬಾಹ್ಯ ಕೈ ಇರುವುದಕ್ಕೆ ಕ್ರೋಧ ವ್ಯಕ್ತವಾಗಿದ್ದರೆ, ಹಲವಾರು ಮಂದಿ ಪ್ರಾಣ ಕಳೆದುಕೊಂಡಿರುವುದಕ್ಕೆ ನೋವು ವ್ಯಕ್ತವಾಗಿದೆ ಎಂದು ಅವರು ಹೇಳಿದರು. |