ಮುಂಬೈ ದಾಳಿ ವೇಳೆ ಕಸಬ್ನನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಆತನ ಬಿಡುಗಡೆಗೆ ಉಗ್ರರು ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರಿಗೆ ಬೆದರಿಕೆ ಹಾಕಿದ್ದರು ಎಂಬ ಅಂಶ ಇದೀಗ ಬಯಲಾಗಿದೆ.
ಕಸಬ್ ಬಂಧನ ಆಗುತ್ತಿದ್ದಂತೆ ನಾರಿಮನ್ ಹೌಸ್ನಲ್ಲಿ ಉಗ್ರ ಇಮ್ರಾನ್, ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರಿಗೆ ಕರೆ ಮಾಡಿ, ನಿಮ್ಮ ಪ್ರಭಾವ ಬಳಸಿ ಕಸಬ್ನ ಬಿಡುಗಡೆ ಮಾಡಿಸಿ. ಇಲ್ಲದಿದ್ದರೆ ಒತ್ತೆಯಾಳಾಗಿರುವ ಎಲ್ಲಾ ಯೆಹೂದಿಗಳನ್ನು ಕೊಲ್ಲುವುದಾಗಿ ಎಚ್ಚರಿಸಿದ್ದ.
ಮತ್ತೊಂದು ದೂರವಾಣಿ ಕರೆಯಲ್ಲಿ, ಇಮ್ರಾನ್ ಮತ್ತೊಬ್ಬ ಉಗ್ರನಿಗೆ ಕರೆ ಮಾಡಿ, ತಾಜ್ ಹೋಟೆಲ್, ಒಬೇರಾಯ್, ಶಿವಾಜಿ ಟರ್ಮಿನಲ್ನಲ್ಲಿ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದ್ದಾನೆ.