ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಪ್ರತ್ಯೇಕ ರಾಜ್ಯ ಆಗ್ರಹಿಸಿ ರಾಜಘಾಟ್ನಲ್ಲಿ ಟಿಆರ್ಎಸ್ ಉಪವಾಸ (Telangana stir | Telangana Rashtra Samithi | K Chandrashekhar Rao | Rajghat)
ತೆಲಂಗಾಣ ಪ್ರತ್ಯೇಕ ರಾಜ್ಯ ಆಗ್ರಹಿಸಿ ರಾಜಘಾಟ್ನಲ್ಲಿ ಟಿಆರ್ಎಸ್ ಉಪವಾಸ
ನವದೆಹಲಿ, ಭಾನುವಾರ, 2 ಅಕ್ಟೋಬರ್ 2011( 16:04 IST )
ತೆಂಲಗಾಣ ಪ್ರತ್ಯೇಕ ರಾಜ್ಯ ರಚನೆ ಆಗ್ರಹಿಸಿ ತಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಭಾನುವಾರ ರಾಜಘಾಟ್ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಮಹಾತ್ಮಗಾಂಧಿ ಜಯಂತಿಯಂದೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಪ್ರತಿಭಟನೆ ಆರಂಭಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ತೆಲಂಗಾಣ ಪರ ಹೋರಾಟ ಜಂಟಿ ಕ್ರಿಯಾಸಮಿತಿ ಸದಸ್ಯರು ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಏತನ್ಮಧ್ಯೆ ತೆಲಂಗಾಣ ಕುರಿತಂತೆ ಶೀಘ್ರವೇ ಸರ್ವಪಕ್ಷ ಸಭೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ತೆಲಂಗಾಣದಲ್ಲಿ ನಡೆಯುತ್ತಿರುವ ಆಂದೋಲನವು ಜನಸಾಮಾನ್ಯರ ಬದುಕಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ಆಂದೋಲನವು 20ನೇ ದಿನಕ್ಕೆ ಕಾಲಿರಿಸಿದೆ.