ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನನುಭವಿ ಮುಖ್ಯಮಂತ್ರಿ: ದೇವೇಗೌಡ  Search similar articles
NRB
ರಸಗೊಬ್ಬರ ಕೊರತೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿರುವುದನ್ನು ನೋಡಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಧಿಕಾರ ನಿರ್ವಹಣೆಯಲ್ಲಿ ಅನುಭವ ಸಾಲದು ಎಂಬುದು ಸಾಬೀತಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸಗೊಬ್ಬರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ಜೆಡಿಎಸ್ ಪಕ್ಷಕ್ಕಿಲ್ಲ. ಅದರೆ ಸರಕಾರ ನಡೆದುಕೊಳ್ಳುತ್ತಿರುವ ನೀತಿ ನೋಡಿದರೆ, ಬೇಸರವಾಗುತ್ತದೆ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
NRB


ಗೊಬ್ಬರದಿಂದಾಗಿ ಆಗಿರುವ ಅಚಾತುರ್ಯದ ಕುರಿತು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದರೂ, ಇತ್ತ ಬಿಜೆಪಿ ಕಾರ್ಯಕರ್ತರು ರಸಗೊಬ್ಬರದ ಕೊರತೆ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಮುಖ್ಯಮಂತ್ರಿಯವರ ದ್ವಿಮುಖ ನೀತಿಯನ್ನು ತೋರುತ್ತದೆ ಎಂದು ನುಡಿದರು.

ಗೊಬ್ಬರ ಕೊರತೆ ನೀಗಿಸುವ ಕುರಿತು ಕೇಂದ್ರ ಕೃಷಿ ಸಚಿವರನ್ನೇ ಮುಖ್ಯಮಂತ್ರಿ ಭೇಟಿ ಮಾಡಿಲ್ಲ ಎಂದು ಆರೋಪಿಸಿದ ಅವರು, ಗುಜರಾತ್‌ನಲ್ಲಿ ದಾಸ್ತಾನಿರುವ ರಸಗೊಬ್ಬರ ತರಿಸಿಕೊಳ್ಳಲಿ ಎಂದು ಅವರು ಆಗ್ರಹಿಸಿದರು.
ಮತ್ತಷ್ಟು
ಸದನದಲ್ಲಿ ಮೊಳಗಿದ ಗೋಲಿಬಾರ್
ಪದ್ಮಪ್ರಿಯಾ ಪ್ರಕರಣ: ಅತುಲ್ ಬಂಧನ
ಅಜ್ಞಾತ ಸ್ಥಳದಲ್ಲಿ ಡೇರಾ ಸಚ್ಚಾ
ರಸಗೊಬ್ಬರ: ಕೇಂದ್ರ ಮೇಲೆ ಗೂಬೆ ಕೂರಿಸಿದ ಬಿಜೆಪಿ
ಡೇರಾ ಸಚ್ಚಾ ನಗರಕ್ಕೆ ಆಗಮನ
ಪ್ರಯಾಣದರ ಹೆಚ್ಚಳವಿಲ್ಲ: ಅಶೋಕ್